LIVE NOW
Published : Jul 29, 2026, 06:53 AM ISTUpdated : Jul 29, 2026, 11:22 PM IST

Karnataka News Live: ಪಿವಿ ಸಿಂಧುಗೆ ವಿಶೇಷ ಉಡುಗೊರೆ ಕಳುಹಿಸಿ ಅಭಿನಂದಿಸಿದ ಕಿಚ್ಚ ಸುದೀಪ್‌!

ಸಾರಾಂಶ

ಮೈಸೂರು: ಮುಖ್ಯಮಂತ್ರಿಗಳ ನಡೆ ಮನೆಗೆ ಮಾರಿ ಊರಿಗೆ ಉಪಕಾರಿ ಎಂಬಾತಾಗಿದೆ. ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಬಿಟ್ಟಿದ್ದಲ್ಲದೆ, ನ್ಯಾಯಾಧಿಕರಣದ ಮುಂದೆ ಸರಿಯಾಗಿ ವಾದ ಮಂಡಿಸದೆ ಕಾವೇರಿ ಭಾಗದ ರೈತರಿಗೆ ವಿಷ ಹಾಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮಣ್ಣು ತಿನ್ನುವ ಕೆಲಸ ಮಾಡಿದೆ. ಕದ್ದು ಮುಚ್ಚಿ ಈಗಾಗಲೇ ಬಹಳಷ್ಟು ನೀರನ್ನು ತಮಿಳುನಾಡಿಗೆ ಹರಿಸಿದೆ. ಈಗ ನ್ಯಾಯಾಧಿಕರಣದ ಮುಂದೆ ಸರಿಯಾಗಿ ವಾದ ಮಂಡಿಸದೆ ರೈತರಿಗೆ ವಿಷ ಹಾಕಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಕದ್ದು ಮುಚ್ಚಿ ಯಾಕೆ ನೀರು ಬಿಟ್ಟರು. ನ್ಯಾಯಾಧಿಕರಣದ ಮುಂದೆ ಪ್ರಬಲವಾಗಿ ಏಕೆ ವಾದ ಮಂಡಿಸಲಿಲ್ಲ? ರಾಜ್ಯ ಸರ್ಕಾರಕ್ಕೆ ರೈತರು ಆಧ್ಯತೆಯಾಗಿ ಉಳಿದಿಲ್ಲ. 1 ತಿಂಗಳಿನಿಂದ ಬರಿ ಸಂಪುಟ ವಿಸ್ತರಿಸುವ ಕಸರತ್ತಿನಲ್ಲೇ ಇದ್ದಾರೆ ಎಂದು ಟೀಕಿಸಿದರು.

ದರ ನಿಗದಿ ಆಗುವವರೆಗೆ ಸಂಪುಟ ವಿಸ್ತರಣೆಯ ದಿನಾಂಕ ನಿಗದಿ ಆಗುವುದಿಲ್ಲ. ಇವರ ಈ ತಿಕ್ಕಾಟದಲ್ಲಿ ರಾಜ್ಯದ ಸಮಸ್ಯೆಗಳು ದೊಡ್ಡಾದಾಗುತ್ತಿದೆ. ಯಾರನ್ನೊ ಓಲೈಸಿಕೊಳ್ಳಲು ರಾಜ್ಯ ಸರ್ಕಾರ ಕರ್ನಾಟಕ ರೈತರನ್ನು ಬಲಿ ಕೊಡುತ್ತಿದೆ. ಬಿಜೆಪಿ ಯಾವಗಲೂ ರೈತರ ಪರವಾಗಿ ನಿಲ್ಲುತ್ತದೆ‌ ಎಂದರು.

11:22 PM (IST) Jul 29

ಪಿವಿ ಸಿಂಧುಗೆ ವಿಶೇಷ ಉಡುಗೊರೆ ಕಳುಹಿಸಿ ಅಭಿನಂದಿಸಿದ ಕಿಚ್ಚ ಸುದೀಪ್‌!

ಜಪಾನ್ ಓಪನ್ ಗೆದ್ದ ಭಾರತದ ಸ್ಟಾರ್ ಷಟ್ಲರ್‌ ಪಿವಿ ಸಿಂಧುಗೆ ನಟ ಕಿಚ್ಚ ಸುದೀಪ್‌ ವಿಶೇಷ ಉಡುಗೊರೆ ನೀಡಿ ಅಭಿನಂದಿಸಿದ್ದಾರೆ. ಸುದೀಪ್‌ ಕಳುಹಿಸಿದ ಉಡುಗೊರೆ ಹಾಗೂ ಕೈಬರಹದ ಪತ್ರದ ಫೋಟೋವನ್ನು ಸಿಂಧು ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಈ ಗೆಲುವು 19 ತಿಂಗಳ ಬಳಿಕ ಬಂದಿರುವುದು ವಿಶೇಷವಾಗಿದೆ.
Read Full Story

10:56 PM (IST) Jul 29

ಸಂಬಳ ಕೇವಲ 12 ಸಾವಿರ, ಬ್ಯಾಂಕ್‌ನಲ್ಲಿ ಲಕ್ಷ ಲಕ್ಷ ಹಣ! ಕ್ಲಾಸ್‌ರೂಮ್‌ನಿಂದಲೇ ಡ್ರಗ್ಸ್ ದಂಧೆ ನಡೆಸುತ್ತಿದ್ದ 3 ಲೇಡಿ ಟೀಚರ್ಸ್ ಅಂದರ್!

ಕೇರಳದ ಕೋಝಿಕ್ಕೋಡ್‌ನಲ್ಲಿ, ಕಡಿಮೆ ಸಂಬಳ ಪಡೆಯುತ್ತಿದ್ದ ಮೂವರು ಮಹಿಳಾ ಶಿಕ್ಷಕಿಯರು ಎಂಡಿಎಂಎ ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡು ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದುದು ಬೆಳಕಿಗೆ ಬಂದಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story

10:08 PM (IST) Jul 29

ಒಂದೇ ದೃಶ್ಯದಲ್ಲಿ ಸಿಂಹವನ್ನೇ ಮೌನಗೊಳಿಸಿದ ರಾವಣ - ಯಶ್ ಅಬ್ಬರದ ರಾಮಾಯಣ ಟ್ರೇಲರ್ ಲೀಕ್!

ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಅಬ್ಬರಿಸಲು ಕ್ಷಣಗಣನೆ ಶುರುವಾಗಿರುವಾಗಲೇ, ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಟ್ರೇಲರ್‌ ಅಧಿಕೃತ ಬಿಡುಗಡೆಯ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿದೆ.

Read Full Story

09:23 PM (IST) Jul 29

ಟಾಕ್ಸಿಕ್ ಕಥೆಯ ನಿಜವಾದ ಹೀರೋ ಯಾರು? ರಾಕಿಂಗ್ ಸ್ಟಾರ್ ಯಶ್ ಹೇಳಿದ ಉತ್ತರವೇ ಹೈಲೈಟ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್‌ವರ್ಲ್ಡ್ ಸಿನಿಮಾ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಬಗ್ಗೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚುತ್ತಿದೆ. ಟೀಸರ್ ಮೂಲಕ ಈಗಾಗಲೇ ವಿಭಿನ್ನ ಲೋಕ..

Read Full Story

09:02 PM (IST) Jul 29

Vaibhav Sooryavanshi - 3 ಪಂದ್ಯ, 2 ಫಿಫ್ಟಿ, 151 ರನ್! - ಜಿಂಬಾಬ್ವೆಯಲ್ಲಿ ಕೇವಲ 4 ದಿನದಲ್ಲಿ ವೈಭವ್ ಸೂರ್ಯವಂಶಿ ಗಳಿಸಿದ ಹಣವೆಷ್ಟು ಗೊತ್ತಾ?

ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ 151 ರನ್ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಈ ನಾಲ್ಕು ದಿನಗಳ ಪ್ರವಾಸದಲ್ಲಿ ಪಂದ್ಯ ಶುಲ್ಕ ಮತ್ತು ಬಹುಮಾನದ ಹಣ ಸೇರಿ ಅವರು ಒಟ್ಟಾರೆ ಸಂಪಾದಿಸಿದ್ದಾರೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ!

Read Full Story

08:18 PM (IST) Jul 29

'ಇಂತಹ ನಿರ್ದೇಶಕರನ್ನು ನಾನು ನೋಡಿಲ್ಲ' - ರಿಷಬ್ ಕೆಲಸದ ಶೈಲಿಗೆ ಫಿದಾ ಆದ ಹಿರಿಯ ನಟ ಜಯರಾಮ್

ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಈ ಯಶಸ್ಸಿನ ಹಿಂದೆ ಇರುವ ಪರಿಶ್ರಮ ಮತ್ತು ಸಿನಿಮಾ ಮೇಲಿನ ಸಮರ್ಪಣೆಯನ್ನು ಕಂಡಿರುವ ಹಿರಿಯ ನಟ ಜಯರಾಮ್ ಇದೀಗ ಅವರ ಕೆಲಸದ ಶೈಲಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

Read Full Story

08:04 PM (IST) Jul 29

Vaibhav Sooryavanshi - ಮತ್ತೊಂದು ಮೈಲಿಗಲ್ಲಿಗೆ ಸಾಕ್ಷಿಯಾದ ವೈಭವ್; ಟೀಮ್ ಇಂಡಿಯಾದ ಯುವ ಪ್ರತಿಭೆಗೆ ಉಪನಾಯಕನ ಪಟ್ಟ!

ಉಪನಾಯಕನಾಗಿ 15 ವರ್ಷದ ವೈಭವ್ ಸೂರ್ಯವಂಶಿ ಆಯ್ಕೆಯಾಗಿದ್ದಾರೆ. ಅಸಾಧಾರಣ ಬ್ಯಾಟಿಂಗ್ ಪ್ರದರ್ಶನ ಮತ್ತು ನಾಯಕತ್ವದ ಗುಣಗಳನ್ನು ಪರಿಗಣಿಸಿ ಆಯ್ಕೆ ಮಂಡಳಿ ಈ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಈ ಮೂಲಕ ದೇಶಿ ಕ್ರಿಕೆಟ್‌ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಈ ಜವಾಬ್ದಾರಿ ಪಡೆದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

Read Full Story

07:52 PM (IST) Jul 29

'ನಮ್ಮ ಬದುಕಿನ ಬೆಳಕು ಬಂದಳು' - ಮಗಳು ಹುಟ್ಟಿದ ಖುಷಿ ಹಂಚಿಕೊಂಡ 'ರತ್ನನ್‌ ಪ್ರಪಂಚ' ನಟಿ ರೆಬಾ

Reba Monica John Baby Girl: ʻರತ್ನನ್‌ ಪ್ರಪಂಚʼ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದ ನಟಿ ರೆಬಾ ಮೋನಿಕಾ ಜಾನ್. ತಮಿಳಿನಲ್ಲಿ ವಿಜಯ್ ಜೊತೆ ನಟಿಸಿದ್ದ ‘ಬಿಗಿಲ್’ ಚಿತ್ರದ ಪಾತ್ರ ಕೂಡ ರೆಬಾಗೆ ದೊಡ್ಡ ಹೆಸರು ತಂದುಕೊಟ್ಟಿತ್ತು.

Read Full Story

07:02 PM (IST) Jul 29

ಭವಿಷ್ಯದ ಜಗತ್ತಿನಲ್ಲಿ ಕಿಚ್ಚ ಸುದೀಪ್ ಆರ್ಭಟ - 'ಬಿಲ್ಲ ರಂಗ ಭಾಷಾ'ಗೆ ಕನಸಿನ ರಾಣಿ ಸಾಥ್?

Billa Ranga Baashaa First Blood: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿರುವ ಕಿಚ್ಚ ಸುದೀಪ್ ಅಭಿನಯದ 'ಬಿಲ್ಲ ರಂಗ ಭಾಷಾ - ಫಸ್ಟ್ ಬ್ಲಡ್' ಚಿತ್ರದ ಚಿತ್ರೀಕರಣ ಮತ್ತೆ ಭರ್ಜರಿಯಾಗಿ ಆರಂಭವಾಗಿದೆ.

Read Full Story

07:01 PM (IST) Jul 29

ವಿಜಯ್ ಸೂರ್ಯ-ವೈಷ್ಣವಿ ಗೌಡ 'ಜೋಡಿ'ಯಾಗಿ ಗೆದ್ದಿರೋದು ಹೌದು! ಆದ್ರೆ ಈಗ 'ಬೇರೆ-ಬೇರೆ' ಯಾಗಿ ಗೆಲ್ಲೋದು ಯಾರು?

ಸೀರಿಯಲ್ ಪ್ರಿಯರಲ್ಲಿ ಹುಟ್ಟಿರು ಕುತೂಹಲ ಎಂದರೆ, ಅದು ವೈಷ್ಣವಿ ಗೌಡ ನಟನೆಯ 'ಗೆಳತಿ ಗಾಯತ್ರಿ' ಗೆಲ್ಲುತ್ತೋ ಅಥವಾ ವಿಜಯ ಸೂರ್ಯ ನಟನೆಯ 'ಜಗದ್ದಾತ್ರಿ' ಸೀರಿಯಲ್ಲೋ ಎಂಬುದು. ಈ ಬಗ್ಗೆ ಹಲವರಲ್ಲಿ ಮಾತುಕತೆಯ ಹಂತವನ್ನೂ ಮೀರಿ ಡಿಬೇಟ್ ಶುರುವಾಗಿದೆ.

Read Full Story

06:42 PM (IST) Jul 29

Viral News - ಗಂಟಲಲ್ಲಿ ಸಿಲುಕಿದ ಮೊಟ್ಟೆ, ನಿಂತ ಹೃದಯಬಡಿತ - ಆದರೆ ಹುಡುಗನ ಜೀವ ಉಳಿದಿದ್ದೇ ರೋಚಕ!

ಕೊಚ್ಚಿಯ ರೆಸ್ಟೋರೆಂಟ್‌ನಲ್ಲಿ ಮೊಟ್ಟೆ ತಿನ್ನುವಾಗ ಯುವಕನೊಬ್ಬನ ಗಂಟಲಲ್ಲಿ ಸಿಲುಕಿ ಉಸಿರುಗಟ್ಟಿತು. ತಕ್ಷಣವೇ ಆತನ ಸ್ನೇಹಿತರು ಮತ್ತು ಸಿಬ್ಬಂದಿ ಸಮಯಪ್ರಜ್ಞೆ ಮೆರೆದು, ಪ್ರಾಣ ಉಳಿಸಿದ್ದಾರೆ. ಹೇಗೆ ಗೊತ್ತಾ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story

06:32 PM (IST) Jul 29

ಕಾಮಿಡಿ ಕಿಂಗ್ ಚಿಕ್ಕಣ್ಣ ಹಸೆಮಣೆ ಏರಲು ಸಜ್ಜು - ಮದುವೆ ಸ್ಥಳ ಎಲ್ಲಿ? ದಿನಾಂಕ ಯಾವಾಗ? ಇಲ್ಲಿದೆ ಮಾಹಿತಿ

ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಅವರ ಅಭಿಮಾನಿಗಳಿಗೆ ಕೊನೆಗೂ ಗುಡ್‌ನ್ಯೂಸ್ ಸಿಕ್ಕಿದೆ. ಹಲವು ದಿನಗಳಿಂದ ಕುತೂಹಲ ಮೂಡಿಸಿದ್ದ ಚಿಕ್ಕಣ್ಣ ಅವರ ವಿವಾಹ ದಿನಾಂಕ ಇದೀಗ ಅಂತಿಮವಾಗಿದೆ.

Read Full Story

06:02 PM (IST) Jul 29

'ಕಾಂತಾರ' ಸ್ಟಾರ್ ರಿಷಬ್ ಶೆಟ್ಟಿಗೆ ಮತ್ತೊಂದು ಗರಿ - ಮೆಲ್ಬೋರ್ನ್‌ನಲ್ಲಿ 'ಲೀಡರ್‌ಶಿಪ್ ಇನ್ ಸಿನಿಮಾ' ಪ್ರಶಸ್ತಿ!

ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ 2026ರ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್‌ನಲ್ಲಿ 'ಲೀಡರ್‌ಶಿಪ್ ಇನ್ ಸಿನಿಮಾ' ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಭಾರತೀಯ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿದ್ದಕ್ಕಾಗಿ ಈ ಗೌರವ ಸಂದಿದೆ.

Read Full Story

05:48 PM (IST) Jul 29

Team India - ರಿಟೈರ್ಮೆಂಟ್ ಚರ್ಚೆ ಬೆನ್ನಲ್ಲೇ ರೋಹಿತ್-ವಿರಾಟ್ ಅಚ್ಚರಿ ನಡೆ; ಆ ಹುಡುಗನ ಸ್ಥಾನಕ್ಕೆ ಎದುರಾಯ್ತು ಕುತ್ತು? ಕಾರಣವೇನು?

ನಿವೃತ್ತಿಯ ಚರ್ಚೆಯನ್ನು ಸಂಪೂರ್ಣವಾಗಿ ಪಕ್ಕಕ್ಕಿಟ್ಟಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (ರೋ-ಕೋ) ಜೋಡಿ, ಇದೀಗ ಏಕದಿನ ಕ್ರಿಕೆಟ್‌ನಲ್ಲಿ ಹೊಸ ಸಾಹಸಕ್ಕೆ ಕೈಹಾಕಿದೆ. ಈ ಹಿರಿಯ ಜೋಡಿಯ ಈ ಅಚ್ಚರಿಯ ನಡೆ ಈಗ 'ಆ ಹುಡುಗ'ನ ಸ್ಥಾನಕ್ಕೆ ಕುತ್ತು ತರುತ್ತಾ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story

05:38 PM (IST) Jul 29

ವಿಜಯ್ ಕೊನೆ ಸಿನಿಮಾದಲ್ಲಿ 6.3 ಅಡಿ ಎತ್ತರದ ಕನ್ನಡಿಗನ ಖದರ್ - ಕಾಲಿವುಡ್‌ನಲ್ಲಿ ವಜ್ರಾಂಗ್ ಶೆಟ್ಟಿ ಅಬ್ಬರ!

ಸ್ಯಾಂಡಲ್‌ವುಡ್‌ನಲ್ಲಿ ನಾಯಕನಾಗಿಯೂ, ಖಳನಾಯಕನಾಗಿಯೂ ತನ್ನದೇ ಛಾಪು ಮೂಡಿಸಿರುವ ನಟ ವಜ್ರಾಂಗ್ ಶೆಟ್ಟಿ ಈಗ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದ್ದಾರೆ. ಈ ಬಾರಿ ಅವರು ಕಾಲಿವುಡ್‌ಗೆ ಭರ್ಜರಿ ಎಂಟ್ರಿ..

Read Full Story

05:16 PM (IST) Jul 29

ICC ODI Rankings ಪ್ರಕಟ ಶುಭ್‌ಮನ್ ಗಿಲ್ ನಂ.1; ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಎಷ್ಟನೇ ಸ್ಥಾನ?

ದುಬೈ: ಐಸಿಸಿ ನೂತನ ಏಕದಿನ ರ್‍ಯಾಂಕಿಂಗ್‌ ಪ್ರಕಟಗೊಂಡಿದೆ. ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ. ಇನ್ನು ದಿಗ್ಗಜ ಕ್ರಿಕೆಟಿಗರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಎಷ್ಟನೇ ಸ್ಥಾನದಲ್ಲಿದ್ದಾರೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Read Full Story

05:13 PM (IST) Jul 29

ಸಚಿವ ಸಂಪುಟ ವಿಸ್ತರಣೆ ಸಭೆ ಮತ್ತೆ ಮುಂದೂಡಿಕೆ - ಹೈಕಮಾಂಡ್ ನಡೆಗೆ ಬೇಸತ್ತು ಊರಿನತ್ತ ಹೊರಟ ಆಕಾಂಕ್ಷಿಗಳು!

ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಂಪುಟ ವಿಸ್ತರಣೆ ಕುರಿತ ದೆಹಲಿ ಸಭೆ ಮತ್ತೆ ಮುಂದೂಡಲ್ಪಟ್ಟಿದೆ. ಹೈಕಮಾಂಡ್ ನಾಯಕರ ವಿಳಂಬ ಧೋರಣೆಯಿಂದಾಗಿ ರಾಜ್ಯ ನಾಯಕರು ಮತ್ತು ಸಚಿವ ಆಕಾಂಕ್ಷಿ ಶಾಸಕರಲ್ಲಿ ತೀವ್ರ ಅಸಮಾಧಾನ ಉಂಟಾಗಿದ್ದು, ಕೆಲವರು ದೆಹಲಿಯಿಂದ ವಾಪಸಾಗುತ್ತಿದ್ದಾರೆ. ಈ ರಾಜಕೀಯ ಹೈಡ್ರಾಮಾ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
Read Full Story

05:09 PM (IST) Jul 29

ಸಚಿವ ಸಂಪುಟ ಕಸರತ್ತಿನಲ್ಲಿ ನೀರಾವರಿ ಯೋಜನೆ ನಿರ್ಲಕ್ಷ - ಮಾಜಿ ಶಾಸಕ ಪರಣ್ಣ ಮುನವಳ್ಳಿ ಆರೋಪ

Farmers Agitation: ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಶಾಸಕರು ಸಚಿವ ಸಂಪುಟ ಕಸರತ್ತಿನಲ್ಲಿ ನೀರಾವರಿ ಯೋಜನೆಗಳನ್ನು ನಿರ್ಲಕ್ಷಿಸಿದ್ದಾರೆಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಆರೋಪಿಸಿದರು.

Read Full Story

04:59 PM (IST) Jul 29

ವಿಜಯನಗರ ಕಾಲುವೆಗೆ ನೀರು ಬಿಡುಗಡೆಗೆ ರೈತರ ಹೋರಾಟ - ಜುಲೈ 31ರಂದು ತುಂಗಭದ್ರಾ ಜಲಾಶಯಕ್ಕೆ ಮುತ್ತಿಗೆ

Tungabhadra Dam: ತುಂಗಭದ್ರಾ ಜಲಾಶಯದಿಂದ ವಿಜಯನಗರ ಎಡದಂಡೆ ಕಾಲುವೆಗೆ ನೀರು ಬಿಡಬೇಕೆಂದು ಒತ್ತಾಯಿಸಿ ಜುಲೈ 31 ರಂದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

Read Full Story

04:48 PM (IST) Jul 29

ಆಷಾಢದ ವಿರಹ ಮರೆಸಿದ ನವದಂಪತಿಗಳ ಜಾತ್ರೆ - ಚಾಮರಾಜನಗರದಲ್ಲಿ ಶ್ರೀ ಚಾಮರಾಜೇಶ್ವರ ರಥೋತ್ಸವದ ವೈಭವ!

Chamarajeshwara Rathotsava: ಆಷಾಢ ಮಾಸ, ಶೂನ್ಯ ಮಾಸವಾಗಿ ಶುಭ ಕಾರ್ಯಗಳಿಗೆ ನಿಷಿದ್ಧ. ಅದರೆ ಆ ನಗರದಲ್ಲಿ ಪ್ರತಿವರ್ಷ ಆಷಾಢ ಮಾಸದಲ್ಲೇ ಒಂದು ವಿಶಿಷ್ಟ ರಥೋತ್ಸವ ನಡೆಯುತ್ತೆ. ಅದು ಕೇವಲ ರಥೋತ್ಸವಲ್ಲ.

Read Full Story

04:40 PM (IST) Jul 29

NET-JRF ಸೇರಿ ಹಲವು ಪರೀಕ್ಷೆಗಳಲ್ಲಿ ಪಾಸ್‌;  ಪ್ರೊಫೆಸರ್ ಆಗಬೇಕಿದ್ದ ರೈತನ ಮಗಳು, PhD ಕನಸು ನನಸಾಗುವಷ್ಟರಲ್ಲೇ ಮುಗಿದುಹೋಯ್ತು ಬದುಕು!

ಬಡ ರೈತ ಕುಟುಂಬದ ಪ್ರತಿಭಾವಂತೆ ಜ್ಯೋತಿ, ಆ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡುವಾಗ ಅನುಮಾನಾಸ್ಪದವಾಗಿ ನಿಧನರಾಗಿದ್ದಾರೆ. ಸಾವಿನ ಸುತ್ತ ಸಾಲು-ಸಾಲು ಆರೋಪಗಳು ಹೊರಬೀಳುತ್ತಿದ್ದು, ಅವರ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ. ಈ ಕುರಿತು ಕಂಪ್ಲೀಟ್‌ ಸ್ಟೊರಿ ಇಲ್ಲಿದೆ.

Read Full Story

04:33 PM (IST) Jul 29

29 ವರ್ಷಗಳ ಬಳಿಕ ಬೆಂಗಳೂರಿನ HAL ವಿಮಾನ ನಿಲ್ದಾಣಕ್ಕೆ ಹೈಟೆಕ್ 'ILS' ಸ್ಪರ್ಶ; ವಾಣಿಜ್ಯ ವಿಮಾನ ಹಾರಾಟ ಚರ್ಚೆ ಮತ್ತೆ ಮುನ್ನಲೆಗೆ!

ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣವು 29 ವರ್ಷಗಳ ನಂತರ ತನ್ನ 'ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್' (ILS) ಅನ್ನು ಉನ್ನತೀಕರಿಸುತ್ತಿದೆ. ಇದೇ ಸಮಯದಲ್ಲಿ, ನಗರದ ಹೃದಯಭಾಗದಲ್ಲಿರುವ ಈ ನಿಲ್ದಾಣದಿಂದ ವಾಣಿಜ್ಯ ವಿಮಾನ ಸೇವೆಗಳನ್ನು ಪುನರಾರಂಭಿಸಬೇಕೆಂಬ ಒತ್ತಡ ಹೆಚ್ಚಾಗಿದೆ.

Read Full Story

04:30 PM (IST) Jul 29

ಮೊದಲ ಬಾರಿಗೆ ಮಗಳೊಂದಿಗೆ ತೆರೆ ಹಂಚಿಕೊಂಡ ಊರ್ವಶಿ - 'ಬುಲ್ಲಿ'ಯಲ್ಲಿ ತೇಜಲಕ್ಷ್ಮಿ ಎಂಟ್ರಿ

ಊರ್ವಶಿ ಅವರ ಮಗಳು ಇದೀಗ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಭುವನ್‌ ಪೊನ್ನಣ್ಣ ನಟನೆಯ ಹೊಸ ಸಿನಿಮಾ ‘ಬುಲ್ಲಿ’ಯಲ್ಲಿ ಊರ್ವಶಿ ಹಾಗೂ ಅವರ ಮಗಳು ತೇಜಲಕ್ಷ್ಮಿ ಜೊತೆಯಾಗಿ ತೆರೆ ಹಂಚಿಕೊಂಡಿದ್ದಾರೆ.

Read Full Story

04:11 PM (IST) Jul 29

ಹೀರೋ ಸೇರಿ ಎಲ್ಲರೂ ಅರ್ಧ ಸಂಭಾವನೆ ಹೂಡಿಕೆ ಮಾಡಬೇಕು - ನಿರ್ದೇಶಕ ಕಿರಣ್‌ ರಾಜ್‌ ಹೇಳಿದ್ದೇನು?

ಸಿನಿಮಾದಲ್ಲಿ ಹೆಚ್ಚು ಖರ್ಚಾಗುವುದು ಸಂಭಾವನೆ ವಿಚಾರದಲ್ಲಿ. ಹೀರೋ ಸೇರಿದಂತೆ ಎಲ್ಲರೂ ಸಂಭಾವನೆಯಲ್ಲಿ ಅರ್ಧ ತೆಗೆದುಕೊಂಡು ಉಳಿದರ್ಧವನ್ನು ಚಿತ್ರಕ್ಕೇ ಹೂಡಿಕೆ ಮಾಡಬೇಕು ಎಂದರು ನಿರ್ದೇಶಕ ಕಿರಣ್‌ ರಾಜ್‌.

Read Full Story

03:52 PM (IST) Jul 29

Supreme Court - ಮಾಜಿ ಪ್ರಧಾನಿಗೆ ಸಂಬಂಧಿಸಿದ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಸುಪ್ರೀಂನಿಂದ ಐತಿಹಾಸಿಕ ತೀರ್ಪು! ಬಯಲಾಯ್ತು ಆ ದೊಡ್ಡ ಸತ್ಯ!

ದೇಶಾದ್ಯಂತ ದೊಡ್ಡ ಮಟ್ಟದ ರಾಜಕೀಯ ಧ್ರುವೀಕರಣ ಹಾಗೂ ಸಂಚಲನ ಮೂಡಿಸಿದ್ದ ಕಲ್ಲಿದ್ದಲು ಗಣಿ ಹಂಚಿಕೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಸರ್ವೋಚ್ಚ ನ್ಯಾಯಾಲಯವು ಐತಿಹಾಸಿಕ ತೀರ್ಪೊಂದನ್ನು ನೀಡಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story

02:36 PM (IST) Jul 29

ಕೆಇಎ ಮಹತ್ವದ ಘೋಷಣೆ - ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾ ಸಮಯ ಬದಲು!

ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (CPC) ನೇಮಕಾತಿಯ ಲಿಖಿತ ಪರೀಕ್ಷೆಯ ಸಮಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಬದಲಾವಣೆ ಮಾಡಿದೆ. ಆಗಸ್ಟ್ 2ರಂದು ಮಧ್ಯಾಹ್ನ 2:30ಕ್ಕೆ ನಡೆಯಬೇಕಿದ್ದ ಪರೀಕ್ಷೆಯು, ಅಭ್ಯರ್ಥಿಗಳ ಅನುಕೂಲಕ್ಕಾಗಿ ಸಂಜೆ 4:00 ಗಂಟೆಗೆ ಆರಂಭವಾಗಲಿದೆ. ಬೆಳಗಿನ ಅವಧಿಯ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
Read Full Story

02:36 PM (IST) Jul 29

ಟೀಂ ಇಂಡಿಯಾಗೆ ಗುಡ್‌ಬೈ ಹೇಳಿದ 24 ಗಂಟೆಯಲ್ಲೇ ಗೌತಮ್ ಗಂಭೀರ್ ಆಪ್ತನ ಹೆಗಲೇರಿದ ಹೊಸ ಜವಾಬ್ದಾರಿ!

ಟೀಂ ಇಂಡಿಯಾದ ಸಹಾಯಕ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ ರಯಾನ್ ಟೆನ್ ಡೋಸ್ಕಾಟೆ, ಕೋಲ್ಕತಾ ನೈಟ್ ರೈಡರ್ಸ್ ಮಾಲೀಕತ್ವದ 'ನೈಟ್ ರೈಡರ್ಸ್ ಸ್ಪೋರ್ಟ್ಸ್' ಸಂಸ್ಥೆಯ ಜಾಗತಿಕ ಕ್ರಿಕೆಟ್ ತಂತ್ರಗಾರಿಕೆಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ಭಾರತ ತಂಡದಿಂದ ಹೊರನಡೆದ ಅವರು, ನೈಟ್ ರೈಡರ್ಸ್‌ನ ಜಾಗತಿಕ ಫ್ರಾಂಚೈಸಿಗಳಿಗೂ ಸಹಾಯಕ ಕೋಚ್ ಆಗಿ ಕೆಲಸ ಮಾಡಲಿದ್ದಾರೆ.
Read Full Story

02:33 PM (IST) Jul 29

ಐಪಿಎಲ್ ಮೌಲ್ಯ 2 ಲಕ್ಷ ಕೋಟಿಗೆ ಏರಿಕೆ, 10 ಫ್ರಾಂಚೈಸಿ ಪೈಕಿ ಆರ್‌ಸಿಬಿ ನಂ.1 ಬ್ರ್ಯಾಂಡ್ ವಾಲ್ಯೂ ತಂಡ

ವಿಶ್ವದ ಪ್ರತಿಷ್ಠಿತ ಕ್ರಿಕೆಟ್ ಲೀಗ್ ಐಪಿಎಲ್ ಬ್ರ್ಯಾಂಡ್ ವ್ಯಾಲ್ಯೂ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಿದೆ. ಸದ್ಯ 2 ಲಕ್ಷ ಕೋಟಿ ಗಡಿ ತಲುಪಿರುವ ಐಪಿಎಲ್ ವ್ಯಾಲ್ಯೂ ಹೊಸ ದಾಖಲೆ ಬರೆದಿದೆ. ಆರ್‌ಸಿಬಿ ಬ್ರ್ಯಾಂಡ್ ವ್ಯಾಲ್ಯೂ ಎಷ್ಟು?

Read Full Story

02:19 PM (IST) Jul 29

ನಿಮ್ಗೆ ಇಷ್ಟವಾದ ಹುಡ್ಗಿ ಮನೆ ಮುಂದೆ ಹೋಗಿ ಕಾಯಿರಿ, ಪರ್ವಾಗಿಲ್ಲ'.. ಹೀಗ್ 'ಮಾಸ್ ಮೆಸೇಜ್' ಕೊಟ್ಟಿದ್ದೇಕೆ ಅಲ್ಲು ಅರ್ಜುನ್?

ಸದ್ಯಕ್ಕೆ ಅಲ್ಲು ಅರ್ಜುನ್ 'ಪುಷ್ಪ 2: ದಿ ರೂಲ್' ಬಿಡುಗಡೆಯ ಸಿದ್ಧತೆಯಲ್ಲಿದ್ದಾರೆ. ಇದರ ಜೊತೆಗೆ ಅಟ್ಲೀ ನಿರ್ದೇಶನದ ‘ರಾಕಾ’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಲೋಕೇಶ್ ಕನಕರಾಜ್ ಜೊತೆಗಿನ ಬಹುನಿರೀಕ್ಷಿತ 'AA23' ಚಿತ್ರಕ್ಕೂ ತಯಾರಿ ನಡೆಸುತ್ತಿದ್ದಾರೆ.

Read Full Story

01:24 PM (IST) Jul 29

ರಾಜ್ಯದಲ್ಲಿ ಕಾವೇರಿ ಕಿಚ್ಚು - ಕರ್ನಾಟಕ ಬಂದ್‌ ಬಗ್ಗೆ ವಾಟಾಳ್ ನಾಗರಾಜ್ ಮಹತ್ವದ ಹೇಳಿಕೆ?

ತಮಿಳುನಾಡಿಗೆ ಪ್ರತಿನಿತ್ಯ 3500 ಕ್ಯುಸೆಕ್ ಕಾವೇರಿ ನೀರು ಹರಿಸುವ ಆದೇಶದ ವಿರುದ್ಧ ಬೆಂಗಳೂರು, ಮಂಡ್ಯದಲ್ಲಿ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸಭೆ ಕರೆದಿದ್ದು, ಚರ್ಚೆಯ ನಂತರ ಕರ್ನಾಟಕ ಬಂದ್ ದಿನಾಂಕ ನಿರ್ಧರಿಸುವುದಾಗಿ ಘೋಷಿಸಿದ್ದಾರೆ.
Read Full Story

12:52 PM (IST) Jul 29

Shocking - ವಿಜಯಲಕ್ಷ್ಮೀ ಮಾಡಿದ್ದ ಪೋಸ್ಟ್ ರಿಪೀಟ್ ಮಾಡಿದ್ದೇಕೆ ಧನ್ವೀರ್ ಗೌಡ, 'ಬೇರೆ ಏನೋ ಇದೆ ಇಲ್ಲಿ..' ಅಂತಿರೋ ನೆಟ್ಟಿಗರು!

'ದರ್ಶನ್ ಹೇಗಿದ್ದಾರೆ ಎಂಬ ಮಾಧ್ಯಮದ ಅನಿರೀಕ್ಷಿತ ಪ್ರಶ್ನೆಗೆ ಉತ್ತರಿಸಿರುವ ನಟ ಧನ್ವೀರ್ ಗೌಡ, 'ಪರವಾಗಿಲ್ಲ' ಎಂದಷ್ಟೇ ಹೇಳಿದ್ದಾರೆ. ಹಾಗಿದ್ರೆ ನಿಜವಾಗಿಯೂ ದರ್ಶನ್-ಧನ್ವೀರ್ ಮಧ್ಯೆ ಏನಾಗುತ್ತಿದೆ? ನಿನ್ನೆ ಧನ್ವೀರ್ ಗೌಡ ಜೊತೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಏಕೆ ಹೋಗಿಲ್ಲ. ಚರ್ಚೆ ಜೋರಾಗಿದೆ!

Read Full Story

12:12 PM (IST) Jul 29

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ ಕ್ಲೀನ್‌ಚಿಟ್ - ಹಾಗಾದ್ರೆ ತಪ್ಪಿತಸ್ಥರು ಯಾರು? 11 ಜನರ ಸಾವಿಗೆ ಕಾರಣ ಯಾರು? - ಸಾರಾ ಮಹೇಶ್ ಕಿಡಿ

ಕಾಲ್ತುಳಿತ ಪ್ರಕರಣದಲ್ಲಿ ಕ್ಲೀನ್‌ಚಿಟ್ ನೀಡಿರುವುದನ್ನು ಪ್ರಶ್ನಿಸಿರುವ ಸಾರಾ ಮಹೇಶ್, ಈ ದುರಂತಕ್ಕೆ ಯಾರು ಹೊಣೆ ಎಂದು ಸರ್ಕಾರಕ್ಕೆ ತರಾಟೆ.. ಅಲ್ಲದೆ, ಚಾಮುಂಡಿ ಬೆಟ್ಟದಲ್ಲಿ ವಿಐಪಿ ದರ್ಶನದ ಹಾವಳಿ ಹೆಚ್ಚಾಗಿದ್ದು, ಸಾಮಾನ್ಯ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲು ಮನವಿ

Read Full Story

11:52 AM (IST) Jul 29

ಬೆಂಗಳೂರು ಟೆಕ್ಕಿಯ ಅಮೆರಿಕದ ಕನಸು ಭಗ್ನ - ಉದ್ಯೋಗ ಸಿಗದೆ ತವರಿಗೆ ಮರಳಿದ ತಂತ್ರಜ್ಞನ ಕಣ್ಣೀರಿನ ಕಥೆ!

ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದ ಬೆಂಗಳೂರಿನ ಟೆಕ್ಕಿ ಮೋಹಿತ್ ಆರ್. ಗೌಡ, ಕಠಿಣ ಉದ್ಯೋಗ ಮಾರುಕಟ್ಟೆಯಿಂದಾಗಿ ಉದ್ಯೋಗ ಸಿಗದೆ ತಾಯ್ನಾಡಿಗೆ ಮರಳಬೇಕಾಯಿತು. ತಮ್ಮ ಈ ನೋವಿನ ಪಯಣ, ಆರ್ಥಿಕ ಸಂಕಷ್ಟ ಮತ್ತು ಮಾನಸಿಕ ಹೋರಾಟವನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದು, ಈ ಹಿನ್ನಡೆಯ ಹೊರತಾಗಿಯೂ ಬೆಂಗಳೂರಿನಲ್ಲಿ ಹೊಸ ವೃತ್ತಿಜೀವನ ಆರಂಭಿಸಲು ದೃಢಸಂಕಲ್ಪ ಮಾಡಿದ್ದಾರೆ.
Read Full Story

11:51 AM (IST) Jul 29

ಬ್ರಹ್ಮ ಮುಹೂರ್ತದಲ್ಲೇ 'ರಾಮಾಯಣ' ಟ್ರೇಲರ್‌ ರಿಲೀಸ್‌.. ಜಗತ್ತಿಗೇ ಗೊತ್ತಾಯ್ತು ಈ 'ಸುಮುಹೂರ್ತ'ದ ಮಹತ್ವ!

ರಾಮಾಯಣ ಚಿತ್ರದ ಟ್ರೇಲರ್ ಬಿಡುಗಡೆ ಬ್ರಹ್ಮ ಮುಹೂರ್ತದಲ್ಲಿ ಆಗಲಿದೆ. ಜುಲೈ 30ರಂದು ಬೆಳ್ಳಂಬೆಳಿಗ್ಗೆ ಬ್ರಹ್ಮ ಮಹೂರ್ತದಲ್ಲಿ ನಮ್ಮ ರಾಮಾಯಣದ ಟ್ರೇಲರ್ ಬಿಡುಗಡೆ ಆಗಲಿದೆ ಎಂದು ರಾಮಾಯಣ ಚಿತ್ರತಂಡ ಘೋಷಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಯಾಗಿದೆ. ಎಷ್ಟು ಗಂಟೆಗೆ? ಇಲ್ಲಿ ನೋಡಿ..

Read Full Story

10:40 AM (IST) Jul 29

ಲಾರಿ ಅಪಘಾತದಲ್ಲಿ ಬದುಕುಳಿದಿದ್ದ ಕನ್ನಡತಿ ಶಿಲ್ಪಾಗೆ ಕಾಮನ್‌ವೆಲ್ತ್ ಪದಕ!

ಬಾಲ್ಯದ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ಮೈಸೂರಿನ ಶಿಲ್ಪಾ ಕೆ. ಶೈಲಾ, ಎಲ್ಲಾ ಅಡೆತಡೆಗಳನ್ನು ಮೀರಿ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಶಿಕ್ಷಕಿ ವೃತ್ತಿ ತೊರೆದು ಕ್ರೀಡೆಯಲ್ಲಿ ತೊಡಗಿಸಿಕೊಂಡ ಇವರು, ಈ ಸಾಧನೆ ಮಾಡಿದ ಕರ್ನಾಟಕದ ಮೊದಲ ಪ್ಯಾರಾ ಅಥ್ಲೀಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Read Full Story

10:30 AM (IST) Jul 29

ನಮ್ಮ ಮೆಟ್ರೋ ಪಿಂಕ್ ಲೈನ್ ನ 4 ಪ್ರಮುಖ ನಿಲ್ದಾಣಗಳಲ್ಲಿ ಪಾರ್ಕಿಂಗ್ ಸೌಲಭ್ಯ, ಸೈಕಲ್ ಇದ್ರೆ ಉಚಿತ!

ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಲೈನ್ ಮಾರ್ಗದ ಮೊದಲ ಹಂತದ ಕಾರ್ಯಾಚರಣೆ ಶೀಘ್ರದಲ್ಲೇ ಆರಂಭವಾಗಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ, ಬಿಎಂಆರ್‌ಸಿಎಲ್ ತಾವರೆಕೆರೆ, ಐಐಎಂ-ಬಿ, ಹುಳಿಮಾವು, ಮತ್ತು ಕಾಳೇನ ಅಗ್ರಹಾರ ನಿಲ್ದಾಣಗಳಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸುತ್ತಿದೆ.
Read Full Story

09:40 AM (IST) Jul 29

ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ಸಿಬ್ಬಂದಿ ದೌರ್ಜನ್ಯ - ಕರ್ನಾಟಕದಲ್ಲಿ 4,884 ದೂರು ದಾಖಲು!

ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ಸಿಬ್ಬಂದಿಯ ದುರ್ವರ್ತನೆ, ದೈಹಿಕ ಹಲ್ಲೆ ಮತ್ತು ವಿಳಂಬ ನೀತಿಗೆ ಸಂಬಂಧಿಸಿದಂತೆ 4,884 ದೂರುಗಳು ದಾಖಲಾಗಿವೆ. ದೂರುಗಳ ಸಂಖ್ಯೆಯಲ್ಲಿ ದಕ್ಷಿಣ ಭಾರತದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ಕೇಂದ್ರ ಸರ್ಕಾರ ನಿಯಮ ಉಲ್ಲಂಘಿಸಿದ ಟೋಲ್ ಏಜೆನ್ಸಿಗಳಿಗೆ ₹5.53 ಕೋಟಿ ದಂಡ ವಿಧಿಸಿದೆ.
Read Full Story

09:01 AM (IST) Jul 29

ನಮ್ಮ ಮೆಟ್ರೋ ಸುರಕ್ಷತೆಗೆ ಆತಂಕ - 2012 ರಿಂದ 59 ಹಳಿ ಸಂಬಂಧಿತ ಘಟನೆಗಳು, ಪಿಎಸ್‌ಡಿ ಅಳವಡಿಕೆಗೆ ಹೆಚ್ಚಿದ ಒತ್ತಾಯ

ನಮ್ಮ ಮೆಟ್ರೋದಲ್ಲಿ 2012ರಿಂದ ಇಲ್ಲಿಯವರೆಗೆ ಆತ್ಮHತ್ಯೆ, ಆಕಸ್ಮಿಕ ಪತನ ಸೇರಿದಂತೆ ಒಟ್ಟು 59 ಹಳಿ ಸಂಬಂಧಿತ ಅಹಿತಕರ ಘಟನೆಗಳು ವರದಿಯಾಗಿವೆ. ಹೆಚ್ಚುತ್ತಿರುವ ದುರ್ಘಟನೆಗಳ ಹಿನ್ನೆಲೆಯಲ್ಲಿ, ಪ್ರಯಾಣಿಕರ ಸುರಕ್ಷತೆಗಾಗಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್‌ಗಳ (PSD) ಅಳವಡಿಕೆಗೆ ಬೇಡಿಕೆ ಹೆಚ್ಚಾಗಿದ್ದು, ಬಿಎಂಆರ್‌ಸಿಎಲ್ ಸದ್ಯಕ್ಕೆ ಪ್ರಮುಖ ನಿಲ್ದಾಣಗಳಲ್ಲಿ ಉಕ್ಕಿನ ಬ್ಯಾರಿಕೇಡ್‌ಗಳನ್ನು ಅಳವಡಿಸಿದೆ.

Read Full Story

08:40 AM (IST) Jul 29

Guru Purnima 2026 - 'ಗುರು’ ಭಾರತೀಯ ಸಂಸ್ಕೃತಿಯ ಜೀವನಾಡಿ; ನಿಜವಾದ ಗುರು ಯಾರು?

ಭಾರತೀಯ ಸಂಸ್ಕೃತಿಯಲ್ಲಿ ಗುರು ಅಜ್ಞಾನವನ್ನು ನಿವಾರಿಸಿ ಜ್ಞಾನದ ಬೆಳಕನ್ನು ನೀಡುವ ದಿವ್ಯಶಕ್ತಿಯಾಗಿದ್ದಾರೆ. ವೇದವ್ಯಾಸರಿಂದ ಆರಂಭವಾದ ಗುರುಪರಂಪರೆಯು ಇಂದಿನ ಆಧುನಿಕ ಯುಗದಲ್ಲೂ ಮಾಹಿತಿ ಮತ್ತು ಜ್ಞಾನದ ನಡುವಿನ ವ್ಯತ್ಯಾಸವನ್ನು ತಿಳಿಸಿ, ಬದುಕಿಗೆ ದಾರಿ ತೋರುತ್ತದೆ.

Read Full Story

08:18 AM (IST) Jul 29

'ಕಳ್ಳತನ ಮಾಡ್ಬೇಕಂತ ಮನ್ಸಿಗೆ ಅನಿಸ್ತು ಮಾಡಿದೆ' - ಯೂಟ್ಯೂಬ್‌ ನೋಡಿ 11 ಮೊಬೈಲ್‌, 9 ಲ್ಯಾಪ್‌ಟಾಪ್‌, 2 ಟ್ಯಾಬ್‌ ಕದ್ದಿದ್ದವ ಅರೆಸ್ಟ್!

ಯೂಟ್ಯೂಬ್‌(Youtube)ನಲ್ಲಿ ಕಳ್ಳತನ ಕೃತ್ಯಗಳ ವಿಡಿಯೋ ನೋಡಿ ಮೊಬೈಲ್ ಮಾರಾಟ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಬಿಸಿಎ ಪದವೀಧರನೊಬ್ಬನನ್ನು ಎಚ್ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

Read Full Story

More Trending News