LIVE NOW
Published : Jul 29, 2026, 06:53 AM ISTUpdated : Jul 29, 2026, 10:40 AM IST

Karnataka News Live: ಲಾರಿ ಅಪಘಾತದಲ್ಲಿ ಬದುಕುಳಿದಿದ್ದ ಕನ್ನಡತಿ ಶಿಲ್ಪಾಗೆ ಕಾಮನ್‌ವೆಲ್ತ್ ಪದಕ!

ಸಾರಾಂಶ

ಮೈಸೂರು: ಮುಖ್ಯಮಂತ್ರಿಗಳ ನಡೆ ಮನೆಗೆ ಮಾರಿ ಊರಿಗೆ ಉಪಕಾರಿ ಎಂಬಾತಾಗಿದೆ. ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಬಿಟ್ಟಿದ್ದಲ್ಲದೆ, ನ್ಯಾಯಾಧಿಕರಣದ ಮುಂದೆ ಸರಿಯಾಗಿ ವಾದ ಮಂಡಿಸದೆ ಕಾವೇರಿ ಭಾಗದ ರೈತರಿಗೆ ವಿಷ ಹಾಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮಣ್ಣು ತಿನ್ನುವ ಕೆಲಸ ಮಾಡಿದೆ. ಕದ್ದು ಮುಚ್ಚಿ ಈಗಾಗಲೇ ಬಹಳಷ್ಟು ನೀರನ್ನು ತಮಿಳುನಾಡಿಗೆ ಹರಿಸಿದೆ. ಈಗ ನ್ಯಾಯಾಧಿಕರಣದ ಮುಂದೆ ಸರಿಯಾಗಿ ವಾದ ಮಂಡಿಸದೆ ರೈತರಿಗೆ ವಿಷ ಹಾಕಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಕದ್ದು ಮುಚ್ಚಿ ಯಾಕೆ ನೀರು ಬಿಟ್ಟರು. ನ್ಯಾಯಾಧಿಕರಣದ ಮುಂದೆ ಪ್ರಬಲವಾಗಿ ಏಕೆ ವಾದ ಮಂಡಿಸಲಿಲ್ಲ? ರಾಜ್ಯ ಸರ್ಕಾರಕ್ಕೆ ರೈತರು ಆಧ್ಯತೆಯಾಗಿ ಉಳಿದಿಲ್ಲ. 1 ತಿಂಗಳಿನಿಂದ ಬರಿ ಸಂಪುಟ ವಿಸ್ತರಿಸುವ ಕಸರತ್ತಿನಲ್ಲೇ ಇದ್ದಾರೆ ಎಂದು ಟೀಕಿಸಿದರು.

ದರ ನಿಗದಿ ಆಗುವವರೆಗೆ ಸಂಪುಟ ವಿಸ್ತರಣೆಯ ದಿನಾಂಕ ನಿಗದಿ ಆಗುವುದಿಲ್ಲ. ಇವರ ಈ ತಿಕ್ಕಾಟದಲ್ಲಿ ರಾಜ್ಯದ ಸಮಸ್ಯೆಗಳು ದೊಡ್ಡಾದಾಗುತ್ತಿದೆ. ಯಾರನ್ನೊ ಓಲೈಸಿಕೊಳ್ಳಲು ರಾಜ್ಯ ಸರ್ಕಾರ ಕರ್ನಾಟಕ ರೈತರನ್ನು ಬಲಿ ಕೊಡುತ್ತಿದೆ. ಬಿಜೆಪಿ ಯಾವಗಲೂ ರೈತರ ಪರವಾಗಿ ನಿಲ್ಲುತ್ತದೆ‌ ಎಂದರು.

10:40 AM (IST) Jul 29

ಲಾರಿ ಅಪಘಾತದಲ್ಲಿ ಬದುಕುಳಿದಿದ್ದ ಕನ್ನಡತಿ ಶಿಲ್ಪಾಗೆ ಕಾಮನ್‌ವೆಲ್ತ್ ಪದಕ!

ಬಾಲ್ಯದ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ಮೈಸೂರಿನ ಶಿಲ್ಪಾ ಕೆ. ಶೈಲಾ, ಎಲ್ಲಾ ಅಡೆತಡೆಗಳನ್ನು ಮೀರಿ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಶಿಕ್ಷಕಿ ವೃತ್ತಿ ತೊರೆದು ಕ್ರೀಡೆಯಲ್ಲಿ ತೊಡಗಿಸಿಕೊಂಡ ಇವರು, ಈ ಸಾಧನೆ ಮಾಡಿದ ಕರ್ನಾಟಕದ ಮೊದಲ ಪ್ಯಾರಾ ಅಥ್ಲೀಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Read Full Story

10:30 AM (IST) Jul 29

ನಮ್ಮ ಮೆಟ್ರೋ ಪಿಂಕ್ ಲೈನ್ ನ 4 ಪ್ರಮುಖ ನಿಲ್ದಾಣಗಳಲ್ಲಿ ಪಾರ್ಕಿಂಗ್ ಸೌಲಭ್ಯ, ಸೈಕಲ್ ಇದ್ರೆ ಉಚಿತ!

ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಲೈನ್ ಮಾರ್ಗದ ಮೊದಲ ಹಂತದ ಕಾರ್ಯಾಚರಣೆ ಶೀಘ್ರದಲ್ಲೇ ಆರಂಭವಾಗಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ, ಬಿಎಂಆರ್‌ಸಿಎಲ್ ತಾವರೆಕೆರೆ, ಐಐಎಂ-ಬಿ, ಹುಳಿಮಾವು, ಮತ್ತು ಕಾಳೇನ ಅಗ್ರಹಾರ ನಿಲ್ದಾಣಗಳಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸುತ್ತಿದೆ.
Read Full Story

09:40 AM (IST) Jul 29

ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ಸಿಬ್ಬಂದಿ ದೌರ್ಜನ್ಯ - ಕರ್ನಾಟಕದಲ್ಲಿ 4,884 ದೂರು ದಾಖಲು!

ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ಸಿಬ್ಬಂದಿಯ ದುರ್ವರ್ತನೆ, ದೈಹಿಕ ಹಲ್ಲೆ ಮತ್ತು ವಿಳಂಬ ನೀತಿಗೆ ಸಂಬಂಧಿಸಿದಂತೆ 4,884 ದೂರುಗಳು ದಾಖಲಾಗಿವೆ. ದೂರುಗಳ ಸಂಖ್ಯೆಯಲ್ಲಿ ದಕ್ಷಿಣ ಭಾರತದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ಕೇಂದ್ರ ಸರ್ಕಾರ ನಿಯಮ ಉಲ್ಲಂಘಿಸಿದ ಟೋಲ್ ಏಜೆನ್ಸಿಗಳಿಗೆ ₹5.53 ಕೋಟಿ ದಂಡ ವಿಧಿಸಿದೆ.
Read Full Story

09:01 AM (IST) Jul 29

ನಮ್ಮ ಮೆಟ್ರೋ ಸುರಕ್ಷತೆಗೆ ಆತಂಕ - 2012 ರಿಂದ 59 ಹಳಿ ಸಂಬಂಧಿತ ಘಟನೆಗಳು, ಪಿಎಸ್‌ಡಿ ಅಳವಡಿಕೆಗೆ ಹೆಚ್ಚಿದ ಒತ್ತಾಯ

ನಮ್ಮ ಮೆಟ್ರೋದಲ್ಲಿ 2012ರಿಂದ ಇಲ್ಲಿಯವರೆಗೆ ಆತ್ಮHತ್ಯೆ, ಆಕಸ್ಮಿಕ ಪತನ ಸೇರಿದಂತೆ ಒಟ್ಟು 59 ಹಳಿ ಸಂಬಂಧಿತ ಅಹಿತಕರ ಘಟನೆಗಳು ವರದಿಯಾಗಿವೆ. ಹೆಚ್ಚುತ್ತಿರುವ ದುರ್ಘಟನೆಗಳ ಹಿನ್ನೆಲೆಯಲ್ಲಿ, ಪ್ರಯಾಣಿಕರ ಸುರಕ್ಷತೆಗಾಗಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್‌ಗಳ (PSD) ಅಳವಡಿಕೆಗೆ ಬೇಡಿಕೆ ಹೆಚ್ಚಾಗಿದ್ದು, ಬಿಎಂಆರ್‌ಸಿಎಲ್ ಸದ್ಯಕ್ಕೆ ಪ್ರಮುಖ ನಿಲ್ದಾಣಗಳಲ್ಲಿ ಉಕ್ಕಿನ ಬ್ಯಾರಿಕೇಡ್‌ಗಳನ್ನು ಅಳವಡಿಸಿದೆ.

Read Full Story

08:40 AM (IST) Jul 29

Guru Purnima 2026 - 'ಗುರು’ ಭಾರತೀಯ ಸಂಸ್ಕೃತಿಯ ಜೀವನಾಡಿ; ನಿಜವಾದ ಗುರು ಯಾರು?

ಭಾರತೀಯ ಸಂಸ್ಕೃತಿಯಲ್ಲಿ ಗುರು ಅಜ್ಞಾನವನ್ನು ನಿವಾರಿಸಿ ಜ್ಞಾನದ ಬೆಳಕನ್ನು ನೀಡುವ ದಿವ್ಯಶಕ್ತಿಯಾಗಿದ್ದಾರೆ. ವೇದವ್ಯಾಸರಿಂದ ಆರಂಭವಾದ ಗುರುಪರಂಪರೆಯು ಇಂದಿನ ಆಧುನಿಕ ಯುಗದಲ್ಲೂ ಮಾಹಿತಿ ಮತ್ತು ಜ್ಞಾನದ ನಡುವಿನ ವ್ಯತ್ಯಾಸವನ್ನು ತಿಳಿಸಿ, ಬದುಕಿಗೆ ದಾರಿ ತೋರುತ್ತದೆ.

Read Full Story

08:18 AM (IST) Jul 29

'ಕಳ್ಳತನ ಮಾಡ್ಬೇಕಂತ ಮನ್ಸಿಗೆ ಅನಿಸ್ತು ಮಾಡಿದೆ' - ಯೂಟ್ಯೂಬ್‌ ನೋಡಿ 11 ಮೊಬೈಲ್‌, 9 ಲ್ಯಾಪ್‌ಟಾಪ್‌, 2 ಟ್ಯಾಬ್‌ ಕದ್ದಿದ್ದವ ಅರೆಸ್ಟ್!

ಯೂಟ್ಯೂಬ್‌(Youtube)ನಲ್ಲಿ ಕಳ್ಳತನ ಕೃತ್ಯಗಳ ವಿಡಿಯೋ ನೋಡಿ ಮೊಬೈಲ್ ಮಾರಾಟ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಬಿಸಿಎ ಪದವೀಧರನೊಬ್ಬನನ್ನು ಎಚ್ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

Read Full Story

08:18 AM (IST) Jul 29

ಕೂದಲು ಉದುರುವುದು, ದೋಸೆ, ಮುದ್ದೆ ಮಾಡಲು ಕೇಳುವುದು ದೌರ್ಜನ್ಯ ಹೇಗಾಗುತ್ತೆ? ಹೈಕೋರ್ಟ್‌

ಪತಿಯ ಮನೆಯವರಿಂದ ದೌರ್ಜನ್ಯವಾಗಿದೆ ಎಂದು ಸೊಸೆಯೊಬ್ಬರು ದೂರು ನೀಡಿದ್ದರು. ಪೌಷ್ಠಿಕಾಂಶಯುಕ್ತ ಆಹಾರ ನೀಡದ ಕಾರಣ ಕೂದಲು ಉದುರಿದೆ ಎಂಬುದು ಅವರ ಆರೋಪಗಳಲ್ಲಿ ಒಂದಾಗಿತ್ತು. ಈ ವಾದವನ್ನು ಆಲಿಸಿದ ಹೈಕೋರ್ಟ್, ಕೂದಲು ಉದುರುವುದು ಮತ್ತು ದೋಸೆ ಮಾಡಲು ಕೇಳುವುದು ಸೆಕ್ಷನ್ 498ಎ ಅಡಿಯಲ್ಲಿ ಕ್ರೌರ್ಯವಾಗುತ್ತದೆಯೇ ಎಂದು ಪ್ರಶ್ನಿಸಿ, ತೀರ್ಪು ಕಾಯ್ದಿರಿಸಿದೆ.
Read Full Story

08:08 AM (IST) Jul 29

ಧರ್ಮಸ್ಥಳ ಕೇಸ್‌ನಲ್ಲಿ ಜನಾರ್ದನ ರೆಡ್ಡಿಗೆ ಮತ್ತೊಂದು ಸಂಕಷ್ಟ; ನ್ಯಾಯಾಲಯದಿಂದ ಸಮನ್ಸ್

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಧರ್ಮಸ್ಥಳದ ಬಗ್ಗೆ ಆರೋಪ ಮಾಡಿದ ಹಿನ್ನೆಲೆಯಲ್ಲಿ ತಮಿಳುನಾಡು ಸಂಸದ ಶಶಿಕಾಂತ್ ಸೆಂಥಿಲ್ ದಾಖಲಿಸಿದ ಮಾನನಷ್ಟ ಮೊಕದ್ದಮೆ ಸಂಬಂಧ ನ್ಯಾಯಾಲಯವು ರೆಡ್ಡಿಗೆ ಸಮನ್ಸ್ ಜಾರಿ ಮಾಡಿದೆ. ರಾಜಕೀಯ ದ್ವೇಷದಿಂದ ರೆಡ್ಡಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Read Full Story

07:57 AM (IST) Jul 29

ಗ್ರಾಪಂಗೆ ಕಸದ ಉಡುಗೊರೆ; ಗ್ರಾಮಸ್ಥರ ವಿರುದ್ಧವೇ ದೂರು ದಾಖಲಿಸಲು ಸೂಚಿಸಿದ ಅಧಿಕಾರಿ

ಸ್ವಚ್ಛತಾ ನಿರ್ಲಕ್ಷ್ಯವನ್ನು ಖಂಡಿಸಿ ರಾಜೀವ್ ಗಾಂಧಿ ಬಡಾವಣೆಯ ನಿವಾಸಿಗಳು ಗ್ರಾಮ ಪಂಚಾಯಿತಿ ಕಚೇರಿ ಎದುರು ಚರಂಡಿಯ ಕಸವನ್ನು ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸದ ಕಾರಣ ಈ ರೀತಿಯ ಪ್ರತಿಭಟನೆ ನಡೆದಿದೆ.

Read Full Story

07:51 AM (IST) Jul 29

ಆಗಸ್ಟ್ ಮೊದಲ ದಿನವೇ ಮೈಸೂರಿಗೆ ಪ್ರಧಾನಿ ಮೋದಿ! ಸಮಯ, ಸ್ಥಳ, ವಿಶೇಷತೆ ಸಂಪೂರ್ಣ ವಿವರ ಇಲ್ಲಿದೆ

ಸ್ವಾಮಿ ವಿವೇಕಾನಂದರು ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಶ್ರೀರಾಮಕೃಷ್ಣ ಆಶ್ರಮವು ವಿವೇಕ ಸ್ಮಾರಕ ಹೆಸರಿನಲ್ಲಿ ನಿರ್ಮಿಸಿರುವ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆ.1ರಂದು ಉದ್ಘಾಟಿಸುವರು.

Read Full Story

07:43 AM (IST) Jul 29

ಧಾರವಾಡ-ಬೆಳಗಾವಿ ರೈಲು ಮಾರ್ಗ ಭೂಸ್ವಾಧೀನ ಕ್ಷಿಪ್ರಗತಿಯಲ್ಲಿ ಮುಗಿಸಲು, ಸಮಸ್ಯೆ ನಿವಾರಿಸಲು ಅಧಿಕಾರಿಗಳಿಗೆ ಸೂಚನೆ

ಧಾರವಾಡ-ಬೆಳಗಾವಿ ರೈಲು ಮಾರ್ಗ ಯೋಜನೆಯ ಭೂಸ್ವಾಧೀನ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲು ಸಚಿವ ಎಂ.ಬಿ. ಪಾಟೀಲ್‌ ಸೂಚಿಸಿದ್ದಾರೆ. ಮತ್ತೊಂದೆಡೆ, ಲೋಂಡಾ ಯಾರ್ಡ್‌ನಲ್ಲಿನ ನವೀಕರಣ ಕಾಮಗಾರಿಯಿಂದಾಗಿ ಅನಿರೀಕ್ಷಿತವಾಗಿ 12 ರೈಲುಗಳು ತಡವಾಗಿ ಸಂಚರಿಸಿದ್ದು, ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ.
Read Full Story

07:38 AM (IST) Jul 29

ತುಂಗಭದ್ರಾ ಎಥೆನಾಲ್ ಘಟಕ ನಮ್ಮೂರಿಗೆ ಬೇಡ, ಕೂಡಲೇ ಸ್ಥಗಿತಗೊಳಿಸಿ; ಗ್ರಾಮಸ್ಥರ ಬೇಡಿಕೆ

ಕಾರಟಗಿಯ ನಾಗನಕಲ್ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ತುಂಗಭದ್ರಾ ಎಥೆನಾಲ್ ಘಟಕವನ್ನು ಸ್ಥಗಿತಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಘಟಕದಿಂದ ಪರಿಸರ ಮಾಲಿನ್ಯ, ಆರೋಗ್ಯ ಸಮಸ್ಯೆಗಳು ಮತ್ತು ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುವ ಆತಂಕ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
Read Full Story

07:29 AM (IST) Jul 29

ಅಕ್ರಮ ಬಾಂಗ್ಲಾದೇಶಿಯರ ಮಾಹಿತಿ ನೀಡಿದವರ ವಿರುದ್ಧವೇ ದೂರು! ಪೊಲೀಸರ ನಡೆ, ಸರ್ಕಾರದ ಓಲೈಕೆ ವಿರುದ್ಧ ಹೈ ಗರಂ

ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಮಾಹಿತಿ ನೀಡಿದ ವೈದ್ಯರೊಬ್ಬರ ವಿರುದ್ಧವೇ, ವಲಸಿಗರ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ಕ್ರಮವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ಇದು ರಾಷ್ಟ್ರದ ಭದ್ರತೆಗೆ ಅಪಾಯಕಾರಿ ಎಂದಿದ್ದು, ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿದೆ.
Read Full Story

07:19 AM (IST) Jul 29

International Tiger Day - ವ್ಯಾಘ್ರನ ರಕ್ಷಣೆಯ ಅನಿವಾರ್ಯತೆ ಇಂದು ಹುಲಿ ಸಂರಕ್ಷಣಾ ದಿನ

ಪ್ರಶಾಂತ ಕೆ.ಪಿ. ಡೆಪ್ಯೂಟಿ ನ್ಯೂಸ್‌ ಎಡಿಟರ್‌, ಕನ್ನಡಪ್ರಭ

ಹುಲಿ ಸಂರಕ್ಷಣೆಯು ಪರಿಸರ ಸಮತೋಲನಕ್ಕೆ ಅತ್ಯಗತ್ಯವಾಗಿದೆ. ಭಾರತದಲ್ಲಿ ಯಶಸ್ವಿ ಸಂರಕ್ಷಣಾ ಕ್ರಮಗಳಿಂದ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದರೂ, ಅವುಗಳ ವಾಸಸ್ಥಾನವಾದ ಕಾಡುಗಳು ಕುಗ್ಗುತ್ತಿರುವುದು ಮಾನವ-ವನ್ಯಜೀವಿ ಸಂಘರ್ಷದಂತಹ ಹೊಸ ಸವಾಲುಗಳನ್ನು ಸೃಷ್ಟಿಸಿದೆ.

Read Full Story

More Trending News