ಎರಡು ದಿನಗಳ ಭೇಟಿಗಾಗಿ ಉಪ ರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ಇಂದು ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ.ಕೆಂಪೇಗೌಡ 517ನೇ ದಿನಾಚರಣೆ ಯಲ್ಲಿ ಉಪ ರಾಷ್ಟ್ರಪತಿ ಭಾಗಿಯಾಗಲಿದ್ದಾರೆ. ಬಳಿಕ ರಾಜೀವ್ ಗಾಂಧಿ ಆರೋಗ್ಯ ವಿ ವಿ ಸಂಸ್ಥಾಪನ ದಿನಾಚರಣೆ ಯಲ್ಲಿ ಭಾಗಿಯಾಗಲಿದ್ದಾರೆ. ಗ್ಯಾಸ್ ಬೆಲೆ ಇಳಿಕೆಗೆ ಹೊಟೆಲ್ ಅಸೋಸಿಯೇಶನ್ ಸಂತಸ, ರಾಜ್ಯ ರಾಜಕೀಯದಲ್ಲಿನ ಮಹತ್ವದ ಬೆಳವಣಿಗೆ, ಕರ್ನಾಟಕ ಬಿಜೆಪಿಯ ಸಂಕಷ್ಟ ಸೇರಿದಂತೆ ಇಂದಿನ ಪ್ರತಿ ಕ್ಷಣದ ಲೈವ್ ಅಪ್ಡೇಟ್ ಸುದ್ದಿ ಇಲ್ಲಿದೆ.

10:35 AM (IST) Jun 27
10:34 AM (IST) Jun 27
ಮುಂಬೈನ ನಟನೊಬ್ಬ ಹಂಚಿಕೊಂಡ ವಿಡಿಯೋ ಭಾರೀ ವೈರಲ್ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ತಿಂಗಳು ಲಕ್ಷಾಂತರ ರೂಪಾಯಿ ಬಾಡಿಗೆ ಕಟ್ಟುವ ಐಷಾರಾಮಿ ಮನೆ ಅದು. ಆದರೆ ದಿನನಿತ್ಯ ಮೂವತ್ತು ಮಹಡಿ ಹತ್ತಿ ಇಳಿಯಬೇಕಾದ ಪರಿಸ್ಥಿತಿ. ಯಾಕೆ ಅಷ್ಟೊಂದು ಮಹಡಿ ಮೆಟ್ಟಿಲು ಹತ್ತಬೇಕು ಅಂತೀರಾ? ಲಿಫ್ಟ್ ಇದೆ ಆದರೆ..
10:02 AM (IST) Jun 27
Electric Car vs CNG Car : ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿದ್ದು, ಹೊಸ ಕಾರು ಖರೀದಿಸುವವರು ಎಲೆಕ್ಟ್ರಿಕ್ ವೆಹಿಕಲ್ (EV) ಅಥವಾ ಸಿಎನ್ಜಿ (CNG) ಕಾರುಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ದೀರ್ಘಾವಧಿಯಲ್ಲಿ ಯಾವುದು ಹೆಚ್ಚು ಲಾಭ ತಂದುಕೊಡುತ್ತದೆ? ಯಾವುದರ ನಿರ್ವಹಣಾ ವೆಚ್ಚ ಕಡಿಮೆ?
09:54 AM (IST) Jun 27
09:06 AM (IST) Jun 27
ಮಳೆ ಕೊರತೆ, ಬರ, ಪ್ರವಾಹ ಸೇರಿದಂತೆ ನೈಸರ್ಗಿಕ ವಿಕೋಪದಂತಹ ಕೆಟ್ಟಸ್ಥಿತಿಯಲ್ಲಿ ರೈತರಿಗೆ, ಜನ ಸಾಮಾನ್ಯರಿಗೆ ಅಗತ್ಯ ಸಲಹೆ-ಸೂಚನೆ, ನೆರವು ನೀಡುತ್ತಿದ್ದ ‘ಕೆಎಸ್ಎನ್ಡಿಎಂಸಿ’ಯ ‘ವರುಣ ಮಿತ್ರ’ ಸಹಾಯವಾಣಿ ಕೇಂದ್ರದಲ್ಲಿ ಇದೀಗ ರೈತರ ಕರೆ ಸ್ವೀಕಾರ ಮಾಡುವವರೇ ಇಲ್ಲವಾಗಿದೆ
08:35 AM (IST) Jun 27
ಸಂಸದರು ಮತ್ತು ಶಾಸಕರಿಗಾಗಿ ನವದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್ನ ಗುಲ್ಮೊಹರ್ ಹಾಲ್ನಲ್ಲಿ ವಿಶೇಷ ಕಾರ್ಯಾಗಾರವನ್ನು ಆಯೋಜಿಸಿತ್ತು. ಲೋಕಸಭೆ, ರಾಜ್ಯಸಭೆ ಹಾಗೂ ದೇಶದ ವಿವಿಧ ರಾಜ್ಯಗಳ ವಿಧಾನಸಭೆಗಳ ಸುಮಾರು 70 ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.
08:28 AM (IST) Jun 27
ಹೆಚ್.ಡಿ. ಕುಮಾರಸ್ವಾಮಿ ಕುಟುಂಬದ ವಿರುದ್ಧ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ಗೆ, ಶಿಡ್ಲಘಟ್ಟ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್ ಬಹಿರಂಗ ಸವಾಲು. 2028ರ ಚುನಾವಣೆಯಲ್ಲಿ ನೀವು ಗೆದ್ದರೆ ನಾನು ನಿಮ್ಮ ಮನೆ ವಾಚ್ಮನ್ ಆಗುತ್ತೇನೆ, ಸೋತರೆ ನೀವು ಕುಮಾರಸ್ವಾಮಿ ಮನೆ ಸೆಕ್ಯೂರಿಟಿ ಆಗಬೇಕು ಎಂದು ಸವಾಿ.
07:56 AM (IST) Jun 27
ತಡ ರಾತ್ರಿ ಹೊಟೆಲ್ ಮುಚ್ಚಿದ ಬಳಿಕ ಊಟ ಕೊಟ್ಟಿಲ್ಲ ಎಂದು ಕಿಡಿಗೇಡಿಗಳು ಧಮ್ಕಿ ಹಾಕಿದ ಘಟನೆ ಬೆಂಗಳೂರಲ್ಲಿ ನಡೆದಿದೆ. ಸಹಾಯಕ್ಕಾಗಿ ಇನ್ಸ್ಪೆಕ್ಟರ್ಗೆ ಮಾಲೀಕ ಕರೆ ಮಾಡಿದರೆ, ಮಧ್ಯರಾತ್ರಿ ಕಾಲ್ ಮಾಡ್ತಿಯಾ ಕಾಮನ್ ಸೆನ್ಸ್ ಇಲ್ವಾ ಎಂದು ಕೆಂಡಾಮಲವಾದ ಘಟನೆ ನಡೆದಿದೆ.
07:32 AM (IST) Jun 27
ಕೊಪ್ಪಳದ ರಾಷ್ಟ್ರೀಯ ಹೆದ್ದಾರಿ 63ರ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟರೆ, 6 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
07:01 AM (IST) Jun 27
ಜೂನ್ 27 ರಿಂದ ಉಪ ರಾಷ್ಟ್ರಪತಿ ಕರ್ನಾಟಕ ಪ್ರವಾಸ ಮಾಡಲಿದ್ದಾರೆ. ಕೆಂಪೇಗೌಡ ಜಯಂತಿ, ಆರೋಗ್ಯ ವಿವಿ ಸಂಸ್ಥಾಪನ ದಿನಾಚರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇದರ ಪರಿಣಾಮ ಉಪರಾಷ್ಟ್ರಪತಿ ಕಾರ್ಯಕ್ರಮಗಳ ಸುತ್ತ ಮುತ್ತು ಟ್ರಾಫಿಕ್ ನಿರ್ಬಂಧಗಳು ಇರಲಿದೆ.