LIVE NOW
Published : Jun 27, 2026, 07:01 AM ISTUpdated : Jun 27, 2026, 10:35 AM IST

Karnataka News Live: ಕರಾವಳಿ-ಮುಂಬೈ ಪ್ರಯಾಣಿಕರಿಗೆ ಸಿಹಿ ಸುದ್ದಿ, ಮಂಗಳೂರು-ಬಾಂದ್ರಾ ಟರ್ಮಿನಸ್ ಹೊಸ ರೈಲು ಸೇವೆ ಶೀಘ್ರ!

ಸಾರಾಂಶ

ಎರಡು ದಿನಗಳ ಭೇಟಿಗಾಗಿ ಉಪ ರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ಇಂದು ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ.ಕೆಂಪೇಗೌಡ 517ನೇ ದಿನಾಚರಣೆ ಯಲ್ಲಿ ಉಪ ರಾಷ್ಟ್ರಪತಿ ಭಾಗಿಯಾಗಲಿದ್ದಾರೆ. ಬಳಿಕ ರಾಜೀವ್ ಗಾಂಧಿ ಆರೋಗ್ಯ ವಿ ವಿ ಸಂಸ್ಥಾಪನ ದಿನಾಚರಣೆ ಯಲ್ಲಿ ಭಾಗಿಯಾಗಲಿದ್ದಾರೆ. ಗ್ಯಾಸ್ ಬೆಲೆ ಇಳಿಕೆಗೆ ಹೊಟೆಲ್ ಅಸೋಸಿಯೇಶನ್ ಸಂತಸ, ರಾಜ್ಯ ರಾಜಕೀಯದಲ್ಲಿನ ಮಹತ್ವದ ಬೆಳವಣಿಗೆ, ಕರ್ನಾಟಕ ಬಿಜೆಪಿಯ ಸಂಕಷ್ಟ ಸೇರಿದಂತೆ ಇಂದಿನ ಪ್ರತಿ ಕ್ಷಣದ ಲೈವ್ ಅಪ್‌ಡೇಟ್ ಸುದ್ದಿ ಇಲ್ಲಿದೆ.

KOnkan Railways

10:35 AM (IST) Jun 27

ಕರಾವಳಿ-ಮುಂಬೈ ಪ್ರಯಾಣಿಕರಿಗೆ ಸಿಹಿ ಸುದ್ದಿ, ಮಂಗಳೂರು-ಬಾಂದ್ರಾ ಟರ್ಮಿನಸ್ ಹೊಸ ರೈಲು ಸೇವೆ ಶೀಘ್ರ!

ಮಂಗಳೂರಿನಿಂದ ಬಾಂದ್ರಾ ಟರ್ಮಿನಸ್‌ಗೆ ಹೊಸ ರೈಲು ಸೇವೆ ಆರಂಭಿಸುವ ಪ್ರಸ್ತಾವನೆ ಸಕಾರಾತ್ಮಕ ಹಂತದಲ್ಲಿದೆ. ಪ್ರಸ್ತುತ ಮಂಗಳೂರಿನಲ್ಲಿ ಐದು ದಿನಗಳ ಕಾಲ ನಿಲ್ಲುವ ರಾಮೇಶ್ವರಂ ರೈಲಿನ ರೇಕ್ ಅನ್ನು ಈ ಸೇವೆಗೆ ಬಳಸಿಕೊಳ್ಳುವ ಯೋಜನೆ ಇದಾಗಿದ್ದು, ಕರಾವಳಿ ಭಾಗದ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ.
Read Full Story

10:34 AM (IST) Jun 27

Mumbai Rains - ₹1 ಲಕ್ಷ ಮನೆ ಬಾಡಿಗೆ ಕೊಟ್ಟು , 30ನೇ ಮಹಡಿಗೆ ಮೆಟ್ಟಿಲು ಹತ್ತುವ ಮುಂಬೈ ನಟನ ವಿಡಿಯೋ ವೈರಲ್, ಇದೇನಿದು ಗೋಳು?

ಮುಂಬೈನ ನಟನೊಬ್ಬ ಹಂಚಿಕೊಂಡ ವಿಡಿಯೋ ಭಾರೀ ವೈರಲ್ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ತಿಂಗಳು ಲಕ್ಷಾಂತರ ರೂಪಾಯಿ ಬಾಡಿಗೆ ಕಟ್ಟುವ ಐಷಾರಾಮಿ ಮನೆ ಅದು. ಆದರೆ ದಿನನಿತ್ಯ ಮೂವತ್ತು ಮಹಡಿ ಹತ್ತಿ ಇಳಿಯಬೇಕಾದ ಪರಿಸ್ಥಿತಿ. ಯಾಕೆ ಅಷ್ಟೊಂದು ಮಹಡಿ ಮೆಟ್ಟಿಲು ಹತ್ತಬೇಕು ಅಂತೀರಾ? ಲಿಫ್ಟ್ ಇದೆ ಆದರೆ..

Read Full Story

10:02 AM (IST) Jun 27

EV vs CNG - ಇವಿ ಮತ್ತು ಸಿಎನ್‌ಜಿ ಕಾರುಗಳಲ್ಲಿ ಯಾವುದು ಬೆಸ್ಟ್? ಯಾವುದು ಖರೀದಿಸಿದರೆ ಹೆಚ್ಚು ಲಾಭ?

Electric Car vs CNG Car : ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿದ್ದು, ಹೊಸ ಕಾರು ಖರೀದಿಸುವವರು ಎಲೆಕ್ಟ್ರಿಕ್ ವೆಹಿಕಲ್ (EV) ಅಥವಾ ಸಿಎನ್‌ಜಿ (CNG) ಕಾರುಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ದೀರ್ಘಾವಧಿಯಲ್ಲಿ ಯಾವುದು ಹೆಚ್ಚು ಲಾಭ ತಂದುಕೊಡುತ್ತದೆ? ಯಾವುದರ ನಿರ್ವಹಣಾ ವೆಚ್ಚ ಕಡಿಮೆ?

Read Full Story

09:54 AM (IST) Jun 27

ಇಂದು ಎಸ್‌.ಎಂ. ಕೃಷ್ಣ ರಸ್ತೆ ಉದ್ಘಾಟನೆ - ಬೆಂಗಳೂರಿನಲ್ಲಿ 60 ನಿಮಿಷದ ಪ್ರಯಾಣ ಇನ್ನು 15 ನಿಮಿಷಕ್ಕೆ

ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್‌ನಿಂದ ಮೈಸೂರು ರಸ್ತೆಯ ಚಲ್ಲಘಟ್ಟ ಮೆಟ್ರೋ ನಿಲ್ದಾಣವನ್ನು ಸಂಪರ್ಕಿಸುವ ಎಸ್‌.ಎಂ.ಕೃಷ್ಣ ದಶಪಥ ರಸ್ತೆ ಉದ್ಘಾಟನೆಗೊಳ್ಳಲಿದೆ. ಈ ನೂತನ ರಸ್ತೆಯು 60 ನಿಮಿಷಗಳ ಪ್ರಯಾಣದ ಅವಧಿಯನ್ನು ಕೇವಲ 15 ನಿಮಿಷಗಳಿಗೆ ಇಳಿಸಲಿದೆ. ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯ ಅಂಗವಾಗಿ ಈ ರಸ್ತೆಯನ್ನು ಉದ್ಘಾಟಿಸಲಾಗುತ್ತಿದೆ.
Read Full Story

09:06 AM (IST) Jun 27

Varuna Mitra Helpline ವರುಣ ಮಿತ್ರ ಸಹಾಯವಾಣಿಗೆ ರೈತರ ಕರೆಗಳು ಏಕೆ ಕಡಿಮೆಯಾದವು? ಕೆಎಸ್‌ಎನ್‌ಡಿಎಂಸಿ ನೀಡಿದ ಅಸಲಿ ಕಾರಣ ಏನು?

  • ವಿಶ್ವನಾಥ ಮಲೇಬೆನ್ನೂರು

ಮಳೆ ಕೊರತೆ, ಬರ, ಪ್ರವಾಹ ಸೇರಿದಂತೆ ನೈಸರ್ಗಿಕ ವಿಕೋಪದಂತಹ ಕೆಟ್ಟಸ್ಥಿತಿಯಲ್ಲಿ ರೈತರಿಗೆ, ಜನ ಸಾಮಾನ್ಯರಿಗೆ ಅಗತ್ಯ ಸಲಹೆ-ಸೂಚನೆ, ನೆರವು ನೀಡುತ್ತಿದ್ದ ‘ಕೆಎಸ್‌ಎನ್‌ಡಿಎಂಸಿ’ಯ ‘ವರುಣ ಮಿತ್ರ’ ಸಹಾಯವಾಣಿ ಕೇಂದ್ರದಲ್ಲಿ ಇದೀಗ ರೈತರ ಕರೆ ಸ್ವೀಕಾರ ಮಾಡುವವರೇ ಇಲ್ಲವಾಗಿದೆ

Read Full Story

08:35 AM (IST) Jun 27

ಸಂಸದರು, ಶಾಸಕರಿಗಾಗಿ ಹೈಪ್ರೊಫೈಲ್ ಕಾರ್ಯಾಗಾರ, ವಿಕ್ಷಿತ್ ಭಾರತ್‌ ನಿರ್ಮಾಣಕ್ಕೆ ಡಿಜಿಟಲ್ ಕೌಶಲ್ಯ

ಸಂಸದರು ಮತ್ತು ಶಾಸಕರಿಗಾಗಿ ನವದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನ ಗುಲ್ಮೊಹರ್ ಹಾಲ್‌ನಲ್ಲಿ ವಿಶೇಷ ಕಾರ್ಯಾಗಾರವನ್ನು ಆಯೋಜಿಸಿತ್ತು. ಲೋಕಸಭೆ, ರಾಜ್ಯಸಭೆ ಹಾಗೂ ದೇಶದ ವಿವಿಧ ರಾಜ್ಯಗಳ ವಿಧಾನಸಭೆಗಳ ಸುಮಾರು 70 ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

 

Read Full Story

08:28 AM (IST) Jun 27

''2028ರಲ್ಲಿ ನೀವು ಗೆದ್ರೆ ನಿಮ್ಮ ಮನೆ ವಾಚ್‌ಮ್ಯಾನ್ ಆಗ್ತೀನಿ..' - ಪ್ರದೀಪ್‌ ಈಶ್ವರ್‌ಗೆ ಜೆಡಿಎಸ್ ಶಾಸಕ ಸವಾಲ್‌!

 ಹೆಚ್.ಡಿ. ಕುಮಾರಸ್ವಾಮಿ ಕುಟುಂಬದ ವಿರುದ್ಧ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್‌ಗೆ, ಶಿಡ್ಲಘಟ್ಟ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್ ಬಹಿರಂಗ ಸವಾಲು. 2028ರ ಚುನಾವಣೆಯಲ್ಲಿ ನೀವು ಗೆದ್ದರೆ ನಾನು ನಿಮ್ಮ ಮನೆ ವಾಚ್‌ಮನ್ ಆಗುತ್ತೇನೆ, ಸೋತರೆ ನೀವು ಕುಮಾರಸ್ವಾಮಿ ಮನೆ ಸೆಕ್ಯೂರಿಟಿ ಆಗಬೇಕು ಎಂದು ಸವಾಿ.

Read Full Story

07:56 AM (IST) Jun 27

ಬೆಂಗಳೂರಲ್ಲಿ ಹೊಟೆಲ್‌ಗೆ ನುಗ್ಗಿ ಧಮ್ಕಿ, ಸಹಾಯಕ್ಕಾಗಿ ಕರೆ ಮಾಡಿದ ಮಾಲೀಕನ ಮೇಲೆ ಪೊಲೀಸ್ ಕೆಂಡಾಮಂಡಲ

ತಡ ರಾತ್ರಿ ಹೊಟೆಲ್ ಮುಚ್ಚಿದ ಬಳಿಕ ಊಟ ಕೊಟ್ಟಿಲ್ಲ ಎಂದು ಕಿಡಿಗೇಡಿಗಳು ಧಮ್ಕಿ ಹಾಕಿದ ಘಟನೆ ಬೆಂಗಳೂರಲ್ಲಿ ನಡೆದಿದೆ. ಸಹಾಯಕ್ಕಾಗಿ ಇನ್ಸ್‌ಪೆಕ್ಟರ್‌ಗೆ ಮಾಲೀಕ ಕರೆ ಮಾಡಿದರೆ, ಮಧ್ಯರಾತ್ರಿ ಕಾಲ್ ಮಾಡ್ತಿಯಾ ಕಾಮನ್ ಸೆನ್ಸ್ ಇಲ್ವಾ ಎಂದು ಕೆಂಡಾಮಲವಾದ ಘಟನೆ ನಡೆದಿದೆ.

Read Full Story

07:32 AM (IST) Jun 27

ಕೊಪ್ಪಳ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವು, ಹಲವರಿಗೆ ಗಾಯ

ಕೊಪ್ಪಳದ ರಾಷ್ಟ್ರೀಯ ಹೆದ್ದಾರಿ 63ರ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟರೆ, 6 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read Full Story

07:01 AM (IST) Jun 27

ಉಪ ರಾಷ್ಟ್ರಪತಿ ಆಗಮನದಿಂದ ಸಂಚಾರದಲ್ಲಿ ಕೆಲ ಬದಲಾವಣೆ

ಜೂನ್ 27 ರಿಂದ ಉಪ ರಾಷ್ಟ್ರಪತಿ ಕರ್ನಾಟಕ ಪ್ರವಾಸ ಮಾಡಲಿದ್ದಾರೆ. ಕೆಂಪೇಗೌಡ ಜಯಂತಿ, ಆರೋಗ್ಯ ವಿವಿ ಸಂಸ್ಥಾಪನ ದಿನಾಚರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇದರ ಪರಿಣಾಮ ಉಪರಾಷ್ಟ್ರಪತಿ ಕಾರ್ಯಕ್ರಮಗಳ ಸುತ್ತ ಮುತ್ತು ಟ್ರಾಫಿಕ್ ನಿರ್ಬಂಧಗಳು ಇರಲಿದೆ.


More Trending News