ಎರಡು ದಿನಗಳ ಭೇಟಿಗಾಗಿ ಉಪ ರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ಇಂದು ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ.ಕೆಂಪೇಗೌಡ 517ನೇ ದಿನಾಚರಣೆ ಯಲ್ಲಿ ಉಪ ರಾಷ್ಟ್ರಪತಿ ಭಾಗಿಯಾಗಲಿದ್ದಾರೆ. ಬಳಿಕ ರಾಜೀವ್ ಗಾಂಧಿ ಆರೋಗ್ಯ ವಿ ವಿ ಸಂಸ್ಥಾಪನ ದಿನಾಚರಣೆ ಯಲ್ಲಿ ಭಾಗಿಯಾಗಲಿದ್ದಾರೆ. ಗ್ಯಾಸ್ ಬೆಲೆ ಇಳಿಕೆಗೆ ಹೊಟೆಲ್ ಅಸೋಸಿಯೇಶನ್ ಸಂತಸ, ರಾಜ್ಯ ರಾಜಕೀಯದಲ್ಲಿನ ಮಹತ್ವದ ಬೆಳವಣಿಗೆ, ಕರ್ನಾಟಕ ಬಿಜೆಪಿಯ ಸಂಕಷ್ಟ ಸೇರಿದಂತೆ ಇಂದಿನ ಪ್ರತಿ ಕ್ಷಣದ ಲೈವ್ ಅಪ್ಡೇಟ್ ಸುದ್ದಿ ಇಲ್ಲಿದೆ.

06:46 PM (IST) Jun 27
Mother Promise: ಡಾಲಿ ಧನಂಜಯ ನಟಿಸಿ ನಿರ್ಮಿಸಿರುವ 'ಮದರ್ ಪ್ರಾಮಿಸ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸ್ನೇಹ, ಗ್ಯಾಂಗ್ವಾರ್, ತಾಯಿ-ಮಗನ ಭಾವನಾತ್ಮಕ ಕಥೆಯೊಂದಿಗೆ ಜುಲೈ 10ರಂದು ಸಿನಿಮಾ ಬಿಡುಗಡೆಯಾಗಲಿದೆ.
06:28 PM (IST) Jun 27
ಬೆಂಗಳೂರಿನ ಹೆಬ್ಬಾಳ ಜಂಕ್ಷನ್ನಲ್ಲಿನ ತೀವ್ರ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) 2.18 ಕಿ.ಮೀ ಉದ್ದದ ಕಿರು ಸುರಂಗ ರಸ್ತೆ ನಿರ್ಮಾಣ ಕಾರ್ಯವನ್ನು ಆರಂಭಿಸಿದೆ. ಈ ಯೋಜನೆಯ ಭಾಗವಾಗಿ ಪಶುವೈದ್ಯಕೀಯ ಕಾಲೇಜು ಆವರಣದಲ್ಲಿ ಮಣ್ಣು ಪರೀಕ್ಷೆ ಆರಂಭವಾಗಿದೆ,
06:12 PM (IST) Jun 27
ಶರಾವತಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದಾಗಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಕುಸಿದಿದೆ. ಈ ಹಿನ್ನೆಲೆಯಲ್ಲಿ, ಕೆಪಿಸಿಎಲ್ ಲಿಂಗನಮಕ್ಕಿ ಜಲವಿದ್ಯುತ್ ಕೇಂದ್ರದ ಒಂದು ಘಟಕದಲ್ಲಿ ವಿದ್ಯುತ್ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
06:12 PM (IST) Jun 27
Nagabandham ಸಿನಿಮಾದಲ್ಲಿ ಗರುಡ ರಾಮ್ 8 ಗಂಟೆ ಮೇಕಪ್ ಮಾಡಿಕೊಂಡು ನಟಿಸಿದ್ದಾರೆ. ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ನಿಗೂಢ ರಹಸ್ಯ ಆಧಾರಿತ ಈ ಪ್ಯಾನ್ ಇಂಡಿಯಾ ಸಿನಿಮಾ ಜುಲೈ 3ರಂದು ಬಿಡುಗಡೆಯಾಗಲಿದೆ.
05:57 PM (IST) Jun 27
05:47 PM (IST) Jun 27
Priya Anand Interview: 'ಬಲರಾಮನ ದಿನಗಳು' ಚಿತ್ರದ ಬಗ್ಗೆ, ವಿನೋದ್ ಪ್ರಭಾಕರ್ ಜೊತೆಗಿನ ಅನುಭವ, ಪುನೀತ್ ರಾಜ್ಕುಮಾರ್ ನೆನಪುಗಳು ಮತ್ತು ಕನ್ನಡ ಚಿತ್ರರಂಗದ ಕುರಿತು ಪ್ರಿಯಾ ಆನಂದ್ ವಿಶೇಷ ಸಂದರ್ಶನ.
05:45 PM (IST) Jun 27
05:32 PM (IST) Jun 27
05:14 PM (IST) Jun 27
Vinod Prabhakar: 'ಬಲರಾಮನ ದಿನಗಳು' ಚಿತ್ರಕ್ಕಾಗಿ ಪಾತ್ರವಾಗಿಯೇ ಬದುಕಿದ್ದೇನೆ. 'ಸ್ಕ್ರಿಪ್ಟ್ನೇ ಹೀರೋ', 13 ಕೋಟಿ ಬಜೆಟ್ ಸಿನಿಮಾ, 'ಮಾದೇವ' ಯಶಸ್ಸು ಮತ್ತು ನಿರ್ದೇಶನದ ಕನಸಿನ ಬಗ್ಗೆ ವಿನೋದ್ ಪ್ರಭಾಕರ್ ವಿಶೇಷ ಸಂದರ್ಶನ.
05:13 PM (IST) Jun 27
ಬೆಂಗಳೂರಿನ 'ಕೃಷ್ಣದೇವರಾಯ ಪಾಲಿಕೆ ಬಜಾರ್' ಎಂಬ ₹14 ಕೋಟಿ ವೆಚ್ಚದ ಹವಾನಿಯಂತ್ರಿತ ಭೂಗತ ಮಾರುಕಟ್ಟೆಯು ಉದ್ಘಾಟನೆಯಾಗಿ 23 ತಿಂಗಳು ಕಳೆದರೂ ಜನರಿಲ್ಲದೆ ಭಣಗುಡುತ್ತಿದೆ. ವ್ಯಾಪಾರಿಗಳ ನಿರಾಸಕ್ತಿಯಿಂದಾಗಿ ಸಾರ್ವಜನಿಕರ ಹಣ ಪೋಲಾಗಿರುವುದಕ್ಕೆ ಸಾಕ್ಷಿಯಾಗಿದೆ.
04:58 PM (IST) Jun 27
04:55 PM (IST) Jun 27
Simple Suni Interview: 'ಮೋಡ ಕವಿದ ವಾತಾವರಣ' ಚಿತ್ರದ ಕಥೆ ಹೇಗೆ ಹುಟ್ಟಿತು? ಶೀಲಂ ಹೀರೋ ಆದದ್ದು ಹೇಗೆ? ದಿಗಂತ್ ಜೊತೆ ಅಂಡರ್ವರ್ಡ್ ಸಿನಿಮಾ ಯೋಜನೆ ಏನು? ಸಿಂಪಲ್ ಸುನಿ ವಿಶೇಷ ಸಂದರ್ಶನ ಓದಿ.
04:42 PM (IST) Jun 27
Aditi AI Film: ಎಐ ತಂತ್ರಜ್ಞಾನ ಬಳಸಿ ಪಿ.ವಿ. ಪ್ರದೀಪ್ ಕುಮಾರ್ ನಿರ್ದೇಶಿಸಿರುವ ಕನ್ನಡ ಟೆಲಿಚಿತ್ರ 'ಅದಿತಿ' ಮಂಗಳೂರಿನಲ್ಲಿ ಬಿಡುಗಡೆಯಾಗಿದೆ. ಸಸ್ಪೆನ್ಸ್, ಆಕ್ಷನ್ ಮತ್ತು ಪ್ರೇಮಕಥೆಯೊಂದಿಗೆ ಹೊಸ ಪ್ರಯೋಗ.
04:24 PM (IST) Jun 27
ಬೆಂಗಳೂರಿನ ಜಿಗಣಿಯಲ್ಲಿ, ಪತಿ-ಮಕ್ಕಳನ್ನು ತೊರೆದು ಪ್ರಿಯಕರನೊಂದಿಗೆ ವಾಸಿಸುತ್ತಿದ್ದ ಅಕ್ಷತಾ ಎಂಬ ಮಹಿಳೆಯನ್ನು ಉಸಿರುಗಟ್ಟಿಸಿ ಕೊ* ಮಾಡಲಾಗಿದೆ. ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಕೊ* ಬಳಿಕ ಪ್ರಿಯಕರ ನಾನಾ ಸಾಹೇಬ್ ಪರಾರಿಯಾಗಿದ್ದಾನೆ. ಜಿಗಣಿ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.
04:21 PM (IST) Jun 27
Balaramana Dinagalu Review: 80ರ ದಶಕದ ಬೆಂಗಳೂರಿನ ಭೂಗತ ಜಗತ್ತು, ವಿನೋದ್ ಪ್ರಭಾಕರ್ ಅಭಿನಯ ಮತ್ತು ಕೆ.ಎಂ. ಚೈತನ್ಯ ನಿರ್ದೇಶನದ 'ಬಲರಾಮನ ದಿನಗಳು' ಸಿನಿಮಾ ಹೇಗಿದೆ? ಸಂಪೂರ್ಣ ಕನ್ನಡ ವಿಮರ್ಶೆ ಮತ್ತು ರೇಟಿಂಗ್ ಓದಿ.
04:17 PM (IST) Jun 27
Actor Kiccha Sudeep News: ಭಾರತದಲ್ಲಿ ಸಾಕಷ್ಟು ದಿಗ್ಗಜರು ಸ್ವಂತ ಕ್ಯಾರವಾನ್ ಹೊಂದಿರುತ್ತಾರೆ. ಅದರಲ್ಲಿ ಬಾತ್ರೂಮ್, ಬೆಡ್, ಕಿಚನ್ ಸೇರಿದಂತೆ ಕೆಲ ಸೌಲಭ್ಯಗಳು ಇರುತ್ತವೆ. ಈಗ ನಟ ಕಿಚ್ಚ ಸುದೀಪ್ ಅವರು ಕ್ಯಾರವಾನ್ ಖರೀದಿ ಮಾಡಿದ್ದಾರೆ.
04:05 PM (IST) Jun 27
Moda Kavida Vatavarana Review: ಮಳೆ, ಹಸಿರು ಬೆಟ್ಟಗಳು, ಕಾವ್ಯಾತ್ಮಕ ನಿರೂಪಣೆ ಮತ್ತು ಸಸ್ಪೆನ್ಸ್ ಕಥೆಯೊಂದಿಗೆ ಸಿಂಪಲ್ ಸುನಿ ನಿರ್ದೇಶನದ ಮೋಡ ಕವಿದ ವಾತಾವರಣ ಸಿನಿಮಾ ಹೇಗಿದೆ? ಸಂಪೂರ್ಣ ಕನ್ನಡ ವಿಮರ್ಶೆ ಹಾಗೂ ರೇಟಿಂಗ್ ಓದಿ.
03:50 PM (IST) Jun 27
03:43 PM (IST) Jun 27
03:12 PM (IST) Jun 27
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಡದಿ ಟೌನ್ಶಿಪ್ಗಾಗಿ ರೈತರ ಭೂಸ್ವಾಧೀನವನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಬಹಿರಂಗ ಚರ್ಚೆಗೆ ಸವಾಲು ಹಾಕಿ, ಅವರಿಗಾಗಿ ಖಾಲಿ ಕುರ್ಚಿ ಇಟ್ಟು ಕಾದರು. ರೈತರ ಭೂಮಿ ಉಳಿಸುವ ಹೋರಾಟವನ್ನು ಮುಂದುವರೆಸುವುದಾಗಿ ಅವರು ಭರವಸೆ.
02:56 PM (IST) Jun 27
02:44 PM (IST) Jun 27
ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಅವಹೇಳನ ಹೇಳಿಕೆ ಹಿನ್ನಲೆಯಲ್ಲಿ ಸೌಜನ್ಯ ಮಾವ ವಿಠಲ ಗೌಡಗೆ ಬಂಧನ ವಾರೆಂಟ್ ಜಾರಿಯಾಗಿದೆ.ಆದರೆ ವಿಠಲ ಗೌಡ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
02:28 PM (IST) Jun 27
Producer Ba Ma Harish Son Ullas Gowda Deat: ‘ಮೆಜೆಸ್ಟಿಕ್’ , ‘ಮಿ ಬಕ್ರಾ’, ‘ಮಾಗಡಿ’ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಬಾ ಮಾ ಹರೀಶ್ ಅವರ ಪುತ್ರ ಉಲ್ಲಾಸ್ ಗೌಡ ಅವರು ನಿಧನರಾಗಿದ್ದಾರೆ. ಚಿತ್ರರಂಗದಲ್ಲಿಯೂ ಆಕ್ಟಿವ್ ಆಗಿದ್ದ ಉಲ್ಲಾಸ್ ಗೌಡ ಅವರಿಗೆ 28 ವರ್ಷ ವಯಸ್ಸಾಗಿತ್ತು. ನಿಶ್ಚಿತಾರ್ಥ ಮಾಡಿಕೊಂಡಿದ್ದ ಉಲ್ಲಾಸ್ ಈಗ ಇಹಲೋಕ ತ್ಯಜಿಸಿದ್ದಾರೆ.
01:41 PM (IST) Jun 27
12:31 PM (IST) Jun 27
10:35 AM (IST) Jun 27
10:34 AM (IST) Jun 27
ಮುಂಬೈನ ನಟನೊಬ್ಬ ಹಂಚಿಕೊಂಡ ವಿಡಿಯೋ ಭಾರೀ ವೈರಲ್ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ತಿಂಗಳು ಲಕ್ಷಾಂತರ ರೂಪಾಯಿ ಬಾಡಿಗೆ ಕಟ್ಟುವ ಐಷಾರಾಮಿ ಮನೆ ಅದು. ಆದರೆ ದಿನನಿತ್ಯ ಮೂವತ್ತು ಮಹಡಿ ಹತ್ತಿ ಇಳಿಯಬೇಕಾದ ಪರಿಸ್ಥಿತಿ. ಯಾಕೆ ಅಷ್ಟೊಂದು ಮಹಡಿ ಮೆಟ್ಟಿಲು ಹತ್ತಬೇಕು ಅಂತೀರಾ? ಲಿಫ್ಟ್ ಇದೆ ಆದರೆ..
10:02 AM (IST) Jun 27
Electric Car vs CNG Car : ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿದ್ದು, ಹೊಸ ಕಾರು ಖರೀದಿಸುವವರು ಎಲೆಕ್ಟ್ರಿಕ್ ವೆಹಿಕಲ್ (EV) ಅಥವಾ ಸಿಎನ್ಜಿ (CNG) ಕಾರುಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ದೀರ್ಘಾವಧಿಯಲ್ಲಿ ಯಾವುದು ಹೆಚ್ಚು ಲಾಭ ತಂದುಕೊಡುತ್ತದೆ? ಯಾವುದರ ನಿರ್ವಹಣಾ ವೆಚ್ಚ ಕಡಿಮೆ?
09:54 AM (IST) Jun 27
09:06 AM (IST) Jun 27
ಮಳೆ ಕೊರತೆ, ಬರ, ಪ್ರವಾಹ ಸೇರಿದಂತೆ ನೈಸರ್ಗಿಕ ವಿಕೋಪದಂತಹ ಕೆಟ್ಟಸ್ಥಿತಿಯಲ್ಲಿ ರೈತರಿಗೆ, ಜನ ಸಾಮಾನ್ಯರಿಗೆ ಅಗತ್ಯ ಸಲಹೆ-ಸೂಚನೆ, ನೆರವು ನೀಡುತ್ತಿದ್ದ ‘ಕೆಎಸ್ಎನ್ಡಿಎಂಸಿ’ಯ ‘ವರುಣ ಮಿತ್ರ’ ಸಹಾಯವಾಣಿ ಕೇಂದ್ರದಲ್ಲಿ ಇದೀಗ ರೈತರ ಕರೆ ಸ್ವೀಕಾರ ಮಾಡುವವರೇ ಇಲ್ಲವಾಗಿದೆ
08:35 AM (IST) Jun 27
ಸಂಸದರು ಮತ್ತು ಶಾಸಕರಿಗಾಗಿ ನವದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್ನ ಗುಲ್ಮೊಹರ್ ಹಾಲ್ನಲ್ಲಿ ವಿಶೇಷ ಕಾರ್ಯಾಗಾರವನ್ನು ಆಯೋಜಿಸಿತ್ತು. ಲೋಕಸಭೆ, ರಾಜ್ಯಸಭೆ ಹಾಗೂ ದೇಶದ ವಿವಿಧ ರಾಜ್ಯಗಳ ವಿಧಾನಸಭೆಗಳ ಸುಮಾರು 70 ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.
08:28 AM (IST) Jun 27
ಹೆಚ್.ಡಿ. ಕುಮಾರಸ್ವಾಮಿ ಕುಟುಂಬದ ವಿರುದ್ಧ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ಗೆ, ಶಿಡ್ಲಘಟ್ಟ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್ ಬಹಿರಂಗ ಸವಾಲು. 2028ರ ಚುನಾವಣೆಯಲ್ಲಿ ನೀವು ಗೆದ್ದರೆ ನಾನು ನಿಮ್ಮ ಮನೆ ವಾಚ್ಮನ್ ಆಗುತ್ತೇನೆ, ಸೋತರೆ ನೀವು ಕುಮಾರಸ್ವಾಮಿ ಮನೆ ಸೆಕ್ಯೂರಿಟಿ ಆಗಬೇಕು ಎಂದು ಸವಾಿ.
07:56 AM (IST) Jun 27
ತಡ ರಾತ್ರಿ ಹೊಟೆಲ್ ಮುಚ್ಚಿದ ಬಳಿಕ ಊಟ ಕೊಟ್ಟಿಲ್ಲ ಎಂದು ಕಿಡಿಗೇಡಿಗಳು ಧಮ್ಕಿ ಹಾಕಿದ ಘಟನೆ ಬೆಂಗಳೂರಲ್ಲಿ ನಡೆದಿದೆ. ಸಹಾಯಕ್ಕಾಗಿ ಇನ್ಸ್ಪೆಕ್ಟರ್ಗೆ ಮಾಲೀಕ ಕರೆ ಮಾಡಿದರೆ, ಮಧ್ಯರಾತ್ರಿ ಕಾಲ್ ಮಾಡ್ತಿಯಾ ಕಾಮನ್ ಸೆನ್ಸ್ ಇಲ್ವಾ ಎಂದು ಕೆಂಡಾಮಲವಾದ ಘಟನೆ ನಡೆದಿದೆ.
07:32 AM (IST) Jun 27
ಕೊಪ್ಪಳದ ರಾಷ್ಟ್ರೀಯ ಹೆದ್ದಾರಿ 63ರ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟರೆ, 6 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
07:01 AM (IST) Jun 27
ಜೂನ್ 27 ರಿಂದ ಉಪ ರಾಷ್ಟ್ರಪತಿ ಕರ್ನಾಟಕ ಪ್ರವಾಸ ಮಾಡಲಿದ್ದಾರೆ. ಕೆಂಪೇಗೌಡ ಜಯಂತಿ, ಆರೋಗ್ಯ ವಿವಿ ಸಂಸ್ಥಾಪನ ದಿನಾಚರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇದರ ಪರಿಣಾಮ ಉಪರಾಷ್ಟ್ರಪತಿ ಕಾರ್ಯಕ್ರಮಗಳ ಸುತ್ತ ಮುತ್ತು ಟ್ರಾಫಿಕ್ ನಿರ್ಬಂಧಗಳು ಇರಲಿದೆ.