Published : Apr 27, 2026, 05:10 AM ISTUpdated : Apr 27, 2026, 07:10 PM IST

Karnataka News Live: ರಸ್ತೆಗೆ ಮೊಳೆ ಎಸೆದೇ ಲಕ್ಷ ಲಕ್ಷ ದುಡೀತಾರೆ ಇವ್ರು! Nail Trap Mafia ಜಾಲಕ್ಕೆ ಹೈರಾಣಾದ ವಾಹನ ಸವಾರರು

ಸಾರಾಂಶ

ಹುಬ್ಬಳ್ಳಿ : ಕಳೆದ ವಾರವಷ್ಟೇ ಮೂರು ಗಂಟೆಗೂ ಅಧಿಕ ಕಾಲ ಆಗಸದಲ್ಲಿ ಸುತ್ತಾಡಿ ಆತಂಕ ಸೃಷ್ಟಿಸಿದ್ದ ಫ್ಲೈ-91 ವಿಮಾನ ಹುಬ್ಬಳ್ಳಿಯಲ್ಲಿ ಶನಿವಾರ ಮತ್ತೆ ಲ್ಯಾಂಡಿಂಗ್‌ ಸಮಸ್ಯೆ ಕಂಡುಬಂತು. 35 ನಿಮಿಷಕ್ಕೂ ಹೆಚ್ಚು ಅವಧಿ ಆಕಾಶದಲ್ಲೇ ಸುತ್ತಿ ಬಳಿಕ ಸುರಕ್ಷಿತವಾಗಿ ಕೆಳಕ್ಕಿಳಿಯಿತು.

10 ದಿನದಲ್ಲಿ ಇದು ಮೂರನೇಯ ಬಾರಿ ಈ ರೀತಿ ಆಗುತ್ತಿರುವುದು. ಫ್ಲೈ-91 ವಿಮಾನ ಸೇವೆ ಹಾಗೂ ಸೌಲಭ್ಯ ಬಗ್ಗೆಯೇ ಸಾರ್ವಜನಿಕ ವಲಯದಲ್ಲಿ ಈ ರೀತಿಯ ಘಟನೆಗಳು ಸಂಶಯವನ್ನು ಹುಟ್ಟು ಹಾಕುತ್ತಿವೆ.

ಐಸಿ 3401 ಫ್ಲೈಟ್‌ ಶನಿವಾರ ಮಧ್ಯಾಹ್ನ 3.13ಕ್ಕೆ ಹೈದರಾಬಾದ್‌ನಿಂದ ಹೊರಟಿತ್ತು. ಸಂಜೆ 4.30ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್‌ ಆಗಬೇಕಿತ್ತು. ಆದರೆ, ಹವಾಮಾನ ವೈಪರೀತ್ಯ ಉಂಟಾಗಿ ಬೆಳಗಾವಿ ಸೇರಿದಂತೆ ವಿವಿಧೆಡೆ ಆಗಸದಲ್ಲೇ ಸುತ್ತಾಡಿ, ಬಳಿಕ 5.09ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್‌ ಆಯಿತು.

ಈ ಬಗ್ಗೆ ಕೇಳಿದಾಗ ಫ್ಲೈ-91 ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕಪಲೇಶ ಅವರು, ಹವಾಮಾನ ವೈಪರೀತ್ಯದಿಂದಾಗಿ ಲ್ಯಾಂಡಿಂಗ್ 35 ನಿಮಿಷ ತಡವಾಯಿತು ಎಂದು ಹೇಳಿದರು. ಪದೇ ಪದೇ ಫ್ಲೈ-91ಗೆ ಲ್ಯಾಂಡಿಂಗ್‌ ಸಮಸ್ಯೆಯಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, ಕೆಲ ಪ್ರಯಾಣಿಕರು ವಿಮಾನದ ಸುರಕ್ಷತೆ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.

07:10 PM (IST) Apr 27

ರಸ್ತೆಗೆ ಮೊಳೆ ಎಸೆದೇ ಲಕ್ಷ ಲಕ್ಷ ದುಡೀತಾರೆ ಇವ್ರು! Nail Trap Mafia ಜಾಲಕ್ಕೆ ಹೈರಾಣಾದ ವಾಹನ ಸವಾರರು

ಬೆಂಗಳೂರಿನಲ್ಲಿ ರಸ್ತೆ ಮೇಲೆ ಮೊಳೆ ಎಸೆದು ವಾಹನಗಳ ಟೈಯರ್ ಪಂಕ್ಚರ್ ಮಾಡುವ ಮಾಫಿಯಾ ಸಕ್ರಿಯವಾಗಿದೆ. ಬಳಿಕ ಸಮೀಪದಲ್ಲೇ ಪಂಕ್ಚರ್ ಅಂಗಡಿ ಇಟ್ಟುಕೊಂಡು, ಸಂಕಷ್ಟಕ್ಕೆ ಸಿಲುಕಿದವರಿಂದಲೇ ಲಕ್ಷಗಟ್ಟಲೆ ಹಣ ದೋಚುತ್ತಿದ್ದಾರೆ. ಹೆಬ್ಬಾಳದಂತಹ ಪ್ರದೇಶಗಳಲ್ಲಿ ಇದು ಅವ್ಯಾಹತವಾಗಿದ್ದರೂ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಕ್ರಮ ಕೈಗೊಳ್ಳುವುದು ಕಷ್ಟಕರವಾಗಿದೆ.
Read Full Story

06:27 PM (IST) Apr 27

ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ದೇಶ ಸಾಲದಲ್ಲಿ ಮುಳುಗಿದೆ - ಸಚಿವ ಸಂತೋಷ್ ಲಾಡ್

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆಡಳಿತಾವಧಿಯಲ್ಲಿ ದೇಶ ಸಾಲದಲ್ಲಿ ಮುಳುಗಿದೆ. 1947ರಲ್ಲಿ ₹55 ಲಕ್ಷ ಕೋಟಿಯಷ್ಟಿದ್ದ ದೇಶದ ಸಾಲ ಇಂದು ₹225 ಲಕ್ಷ ಕೋಟಿಯಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

Read Full Story

05:40 PM (IST) Apr 27

ಅಂಬಾನಿ ಮನೇಲಿ ಮಂಗಳಾರತಿ ಎತ್ತಿದ ಬ್ಯಾಡ್‌ಗರ್ಲ್;‌ ಗೋವಿಗೆ ಆಹಾರ ಕೊಟ್ಟ Singer Rihanna

Rihanna: ಪಾಪ್ ತಾರೆ ರಿಹಾನಾ ಮುಂಬೈನಲ್ಲಿರುವ ಅಂಬಾನಿ ನಿವಾಸಕ್ಕೆ ಭೇಟಿ ನೀಡಿ, ವಿಶೇಷ ಔತಣದಲ್ಲಿ ಭಾಗಿಯಾಗಿದ್ದಾರೆ. ಇದೇ ವೇಳೆ, ರಿಲಯನ್ಸ್ ರೀಟೇಲ್‌ನ 'ಟೈರಾ' ಪ್ಲಾಟ್‌ಫಾರ್ಮ್ ಮತ್ತು ಸೆಫೊರಾ ಮೂಲಕ ಭಾರತದಲ್ಲಿ ತಮ್ಮ 'ಫೆಂಟಿ ಬ್ಯೂಟಿ' ಬ್ರ್ಯಾಂಡ್ ಅನ್ನು ಅಧಿಕೃತವಾಗಿ ಲಾಂಚ್ ಮಾಡಿದ್ದಾರೆ.

Read Full Story

05:24 PM (IST) Apr 27

ಮಹಿಳಾ ಜನಾಕ್ರೋಶ ಸಭೆಗೆ ಕರೆ - ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ

ನಾರಿಶಕ್ತಿ ವಂದನೆ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದನ್ನು ಖಂಡಿಸಿ ಮೇ 1ರಂದು ಮಹಿಳಾ ಜನಾಕ್ರೋಶ ಸಭೆ ಆಯೋಜಿಸಲಾಗುತ್ತಿದೆ. ಇದು ಮಹಿಳೆಯರ ಬಗ್ಗೆ ಕಾಂಗ್ರೆಸ್‌ ನೀತಿಯನ್ನು ಬಯಲು ಮಾಡುವ ಕಾರ್ಯಕ್ರಮ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

Read Full Story

05:20 PM (IST) Apr 27

'ದೇಶದಲ್ಲಿ ಅನ್ನ, ನೀರಿಗೆ ಹಾಹಾಕಾರ' ಕೋಡಿ ಶ್ರೀಗಳ ಎಚ್ಚರಿಕೆ - ದೇಶಕ್ಕೆ ಕಾದಿದೆಯೇ ಮಹಾ ಸಂಕಷ್ಟ?

ಮದ್ದೂರಿನಲ್ಲಿ ಕೋಡಿ ಮಠದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಹವಾಮಾನ ವೈಪರಿತ್ಯದಿಂದ ದೇಶಕ್ಕೆ ಅನ್ನ, ನೀರಿನ ಹಾಹಾಕಾರ ಎದುರಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆದರೆ, ಈ ಸಂಕಷ್ಟದಿಂದ ಕರ್ನಾಟಕಕ್ಕೆ ಯಾವುದೇ ದೊಡ್ಡ ಸಮಸ್ಯೆ ಉಲ್ಬಣವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Read Full Story

05:00 PM (IST) Apr 27

ಕೆಲಸ ಇದೆ ಎಂದು ಬೀಗಬೇಡ! ಬೃಹತ್‌ ಲಾಭವಿದ್ರೂ, ಉದ್ಯೋಗಿಗಳ ಹೊಟ್ಟೆಪಾಡು ಕಿತ್ತುಕೊಂಡ ದೈತ್ಯ ಕಂಪೆನಿ, ಬ್ಯಾಂಕ್!

ಜಾಗತಿಕ ಕಾರ್ಪೊರೇಟ್ ವಲಯದಲ್ಲಿ ಈಗ AI, 'ಡಿಜಿಟಲ್ ಹವಾ ಜೋರಾಗಿದೆ. ಒಂದು ಕಡೆ ಕಂಪನಿಗಳು ತಾಂತ್ರಿಕವಾಗಿ ಮುಂದುವರಿದು, ಸಂಬಳ ಕೊಡಬೇಕು ಎಂದು ಉದ್ಯೋಗಿಗಳ ವಜಾ ಮಾಡಲಾಗಿದೆ. ಮೆಟಾ, ಮೈಕ್ರೋಸಾಫ್ಟ್, ಒರಾಕಲ್‌ನಂತಹ ಟೆಕ್ ಕಂಪೆನಿಗಳು ಲೇಆಫ್‌ ಮಾಡುತ್ತಿವೆ. ಈಗ ಅಕ್ಸಿಸ್‌ ಬ್ಯಾಂಕ್‌ ಕೂಡ ಲೇಆಫ್‌ ಮಾಡಿದೆ.

 

Read Full Story

04:51 PM (IST) Apr 27

ಒಂದು ದಿನವೂ ರಜೆ ತೆಗೆದುಕೊಳ್ಳದೇ ಸದಾ ಕೆಲಸ ಮಾಡುತ್ತಿದ್ದ ಶ್ವೇತಾ - ಟೆಕ್ಕಿ ಸಾವಿನ ಬಗ್ಗೆ ಸಹೋದ್ಯೋಗಿ ಹೇಳಿದ್ದೇನು?

ಹಾಸನದ 25 ವರ್ಷದ ಸಾಫ್ಟ್‌ವೇರ್ ಉದ್ಯೋಗಿ ಶ್ವೇತಾ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ ವಿಚಾರ ಅನೇಕರನ್ನು ದಂಗಾಗುವಂತೆ ಮಾಡಿದೆ. ಕೆಲಸವನ್ನು ನಿರಂತರವಾಗಿ ಪ್ರೀತಿಸುತ್ತಿದ್ದ, ಶ್ವೇತಾ ತಲೆನೋವನ್ನು ನಿರ್ಲಕ್ಷಿಸಿದ್ದಳು ಎಂದು ಅವರ ಸಹೋದ್ಯೋಗಿ ಹೇಳಿದ್ದಾರೆ. 

Read Full Story

04:17 PM (IST) Apr 27

Amazon Now - ಮಂಗಳೂರು, ಮೈಸೂರಿಗೆ ಕಾಲಿಟ್ಟ ದೈತ್ಯ ಗಾತ್ರದ ಅಮೆಜಾನ್‌ ಕಂಪೆನಿ; 2800 ಕೋಟಿ ರೂ ಹೂಡಿಕೆ

Amazon Now 2800 Crore Rupees Investment: ಅಮೆಜಾನ್‌ ಕಂಪೆನಿಯು ಮಂಗಳೂರು, ಮೈಸೂರಿನತ್ತ ಕಾಲಿಟ್ಟಿದೆ. ಹೌದು, ಈ ಕಂಪೆನಿಯು ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲು ರೆಡಿಯಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

 

Read Full Story

03:38 PM (IST) Apr 27

ಹಾಸನ - ಕುಸಿದು ಬಿದ್ದು ಸಾಫ್ಟ್‌ವೇರ್ ಇಂಜಿನಿಯರ್ 25 ವರ್ಷದ ಶ್ವೇತಾ ಹಠಾತ್ ಸಾವು - ಆಘಾತದಲ್ಲಿ ಪೋಷಕರು

ಹಾಸನದಲ್ಲಿ 25 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಶ್ವೇತಾ ಹಠಾತ್ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಕುಸಿದು ಬಿದ್ದ ಅವರು, ಮೆದುಳಿನ ತೀವ್ರ ರಕ್ತಸ್ರಾವದಿಂದಾಗಿ ಕೋಮಾಗೆ ಜಾರಿ ಮೃತಪಟ್ಟಿದ್ದಾರೆ. ಅಂಗಾಂಗ ದಾನಕ್ಕೆ ಪೋಷಕರು ಮುಂದಾದರೂ ಅದು ಸಾಧ್ಯವಾಗಲಿಲ್ಲ.
Read Full Story

02:46 PM (IST) Apr 27

Mamata Banerjee - ಮೋದಿ ಚುರುಮುರಿ, ದೀದಿ ತರಕಾರಿ; ದುಡ್ಡು ಕೊಡಿ ಅಕ್ಕೋ ಎಂದ ವ್ಯಾಪಾರಿ! Video Viral

Mamata Banerjee Vegetable Shopping Video: ಪ್ರಧಾನಿ ಮೋದಿ ನರೇಂದ್ರ ಮೋದಿ ಅವರು ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದಾದ ಬಳಿಕ ಮಮತಾ ಬ್ಯಾನರ್ಜಿ ಅವರು ತರಕಾರಿ ತಗೊಂಡು ದುಡ್ಡು ಕೊಡದೆ ಬಂದಿದ್ದಾರೆ. ಈ ವಿಡಿಯೋ ಈಗ ವೈರಲ್‌ ಆಗ್ತಿದೆ.

 

Read Full Story

02:37 PM (IST) Apr 27

ಆನೇಕಲ್ - ಕೃಷಿ ಹೊಂಡಕ್ಕೆ ಬಿದ್ದು ತಾಯಿ ಮಗು ನಿಗೂಢ ಸಾವು

ಆನೇಕಲ್ ತಾಲೂಕಿನ ಲಕ್ಷ್ಮಿ ಸಾಗರ ಗ್ರಾಮದಲ್ಲಿ ತಾಯಿ ಲಾವಣ್ಯ ಮತ್ತು ಅವರ 8 ವರ್ಷದ ಮಗಳು ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ಸೂರ್ಯಸಿಟಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

01:43 PM (IST) Apr 27

ರಾಜ್ಯದಲ್ಲಿ ಕನ್ನಡ ಬಿಟ್ರೆ ಹೆಚ್ಚು ಮಾತನಾಡೋ ಭಾಷೆ ಯಾವುದು ಗೊತ್ತಾ? ಕುತೂಹಲದ ಅಂಕಿ ಅಂಶ ಬಯಲು

ಬೆಂಗಳೂರಿನಂತಹ ನಗರಗಳಲ್ಲಿ ಕನ್ನಡದ ಬಳಕೆ ಕಡಿಮೆಯಾಗುತ್ತಿರುವ ಬಗ್ಗೆ ಕಳವಳವಿದ್ದರೂ, ಕರ್ನಾಟಕದ 65% ಕ್ಕಿಂತ ಹೆಚ್ಚು ಜನರಿಗೆ ಕನ್ನಡವೇ ಪ್ರಾಥಮಿಕ ಭಾಷೆಯಾಗಿದೆ. ಈ ಲೇಖನವು ರಾಜ್ಯದಲ್ಲಿ ಅತಿ ಹೆಚ್ಚು ಮಾತನಾಡುವ ಕನ್ನಡದ ನಂತರ ಯಾವ್ಯಾವ ಭಾಷೆ ಇವೆ ಎನ್ನುವುದು ಕುತೂಹಲವನ್ನು ತಿಳಿಸುತ್ತದೆ.

Read Full Story

01:35 PM (IST) Apr 27

ಪಿಯುಸಿಯಲ್ಲೂ ಪ್ರಾಚಿ ಟಾಪರ್‌ - ಮುಖದ ಮೇಲಿನ ಕೂದಲಿನ ಕಾರಣಕ್ಕೆ ಟ್ರೋಲ್ ಮಾಡಿದವರಿಗೆ ಅಂಕಗಳ ಉತ್ತರ

10ನೇ ತರಗತಿಯಲ್ಲಿ ಟಾಪರ್ ಆಗಿದ್ದಕ್ಕೆ ತನ್ನ ಮುಖದ ಮೇಲಿನ ಕೂದಲಿನ ಕಾರಣಕ್ಕೆ ಟ್ರೋಲ್ ಆಗಿದ್ದ ಪ್ರಾಚಿ ನಿಗಮ್, ಇದೀಗ ಪಿಯುಸಿಯಲ್ಲೂ 91.2% ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಟ್ರೋಲ್‌ಗಳನ್ನು ಕಡೆಗಣಿಸಿ, ಅಧ್ಯಯನದತ್ತ ಗಮನಹರಿಸಿದ ಅವರ ಯಶೋಗಾಥೆ ಅನೇಕರಿಗೆ ಸ್ಫೂರ್ತಿಯಾಗಿದೆ.

Read Full Story

01:02 PM (IST) Apr 27

ಕೇವಲ 1.59 ತಾಸಲ್ಲಿ 42.195 ಕಿಲೋ ಮೀಟರ್ ಮ್ಯಾರಥಾನ್ ಓಡಿದ ಸಾವೆ! ಹೊಸ ವಿಶ್ವದಾಖಲೆ

ಕೀನ್ಯಾದ ಕ್ರೀಡಾಪಟು ಸಬಾಸ್ಟಿಯನ್‌ ಸಾವೆ ಲಂಡನ್‌ ಮ್ಯಾರಥಾನ್‌ನಲ್ಲಿ 1 ಗಂಟೆ 59 ನಿಮಿಷ, 30 ಸೆಕೆಂಡ್‌ಗಳಲ್ಲಿ ಓಟ ಪೂರ್ಣಗೊಳಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ 2 ಗಂಟೆಯೊಳಗೆ ಮ್ಯಾರಥಾನ್‌ ಪೂರ್ಣಗೊಳಿಸಿದ ಮೊದಲ ಅಥ್ಲೀಟ್‌ ಎನಿಸಿಕೊಂಡಿದ್ದಾರೆ. ಮಹಿಳಾ ವಿಭಾಗದಲ್ಲಿ ಎಥಿಯೋಪಿಯಾದ ಟಿಗ್ಸ್ಟ್ ಅಸ್ಸೆಫಾ ಚಾಂಪಿಯನ್‌ ಆಗಿದ್ದಾರೆ.
Read Full Story

12:51 PM (IST) Apr 27

Bengaluru Employee Termination - ಆಫೀಸ್‌ ನನ್ನ ಲೈಫ್ ಅನ್ಕೊಂಡೆ;‌ ಕೆಲಸದಿಂದಲೇ ತೆಗೆದ್ರು; ಬೆಂಗಳೂರು ಹುಡುಗಿ

Bengaluru Women Nidhi Job Terminate: ಇಂದು ಸಾಕಷ್ಟು ಜನರು ಕಾರ್ಪೋರೇಟ್‌ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಒಂದಿನ ತಕ್ಷಣ ಲೇಆಫ್‌ ಅಥವಾ ಟರ್ಮಿನೇಟ್‌ ಎಂದು ಹೇಳಿ ಕೆಲಸದಿಂದ ತೆಗೆದು ಹಾಕಲಾಗುವುದು. ಹೀಗೆ ಟರ್ಮಿನೇಟ್‌ ಆದ ಬೆಂಗಳೂರಿನ ಹುಡುಗಿಯೊಬ್ಬರು ಏನು ತಪ್ಪು ಮಾಡಿದೆ ಎಂದು ಹೇಳಿದ್ದಾರೆ.

 

Read Full Story

11:57 AM (IST) Apr 27

ಕನ್ನಡ ನಾಡಿನ ಮಕ್ಕಳು ಕನ್ನಡ ಪರೀಕ್ಷೇಲೇ ಫೇಲ್‌ ಕಳವಳಕಾರಿ

ಈ ಬಾರಿಯ SSLC ಪರೀಕ್ಷೆಯಲ್ಲಿ ಐತಿಹಾಸಿಕ ಫಲಿತಾಂಶ ಬಂದಿದ್ದರೂ, ಪ್ರಥಮ ಭಾಷೆ ಕನ್ನಡದಲ್ಲೇ ಸುಮಾರು 19 ಸಾವಿರ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇದು ಕನ್ನಡ ಬೋಧನಾ ಕ್ರಮ, ಭಾಷೆಯ ಭವಿಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ತಕ್ಷಣದ ಪರಾಮರ್ಶೆಯ ಅಗತ್ಯವನ್ನು ಒತ್ತಿಹೇಳುತ್ತದೆ.

Read Full Story

11:55 AM (IST) Apr 27

'ಮದುವೆ ಬೇಡ, ಮಗು ಬೇಕು ಅಂದ್ರೇನು ತಪ್ಪು?'.. ಕನ್ನಡತಿ ನಿತ್ಯಾ ಮೆನನ್ ಬೋಲ್ಡ್ ಮಾತಿಗೆ ಸಿಕ್ಕಾಪಟ್ಟೆ ಸಂಚಲನ!

ಸಿನಿಮಾದಲ್ಲಿ ಅಷ್ಟೇ ಅಲ್ಲದೆ ನಿಜ ಜೀವನದಲ್ಲೂ ನಿತ್ಯಾ ಮೆನನ್ ಒಬ್ಬ 'ಬೋಲ್ಡ್ ಅಂಡ್ ಬ್ಯೂಟಿಫುಲ್' ಲೇಡಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಬದುಕು ನಿಮ್ಮದು, ನಿರ್ಧಾರವೂ ನಿಮ್ಮದೇ ಎನ್ನುವ ನಿತ್ಯಾ ಮೆನನ್ ಅವರ ಈ ವೈಚಾರಿಕತೆಗೆ ನಿಮ್ಮ ಅಭಿಪ್ರಾಯವೇನು? ಭಿನ್ನ ಅಭಿಪ್ರಾಯಕ್ಕೂ ಬೆಲೆ ಇದೆ, ತಿಳಿಸಿ..

Read Full Story

09:44 AM (IST) Apr 27

ನಾಲ್ವರು ಸಾಗುತ್ತಿದ್ದ ಬೈಕ್‌ಗೆ ಟಿಪ್ಪರ್ ಡಿಕ್ಕಿ - ಇಬ್ಬರ ದಾರುಣ ಸಾವು, ಯುವತಿ ಕಾಲು ಕಟ್ - ಅಪಘಾತದ ರಭಸಕ್ಕೆ ಛಿದ್ರವಾದ ದೇಹಗಳು

 ಜಾತ್ರೆ ಮುಗಿಸಿ ವಾಪಸಾಗುತ್ತಿದ್ದ ವೇಳೆ ನಾಲ್ವರು ಸಂಚರಿಸುತ್ತಿದ್ದ ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾ  ಬಾಲಕಿ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Read Full Story

09:01 AM (IST) Apr 27

ಓಪನ್ ಕಿಚನ್‌ಗೆ ವಾಲ್ ಪ್ಯಾನೆಲ್ ಐಡಿಯಾ; ಇನ್ಮುಂದೆ ನಿಮ್ಮ ಅಡುಗೆಮನೆ ಇನ್ನಷ್ಟು ಸ್ಟೈಲಿಶ್

ಓಪನ್ ಕಿಚನ್‌ಗೆ ಸ್ಟೈಲಿಶ್ ಹಾಗೂ ಲಕ್ಸುರಿ ಲುಕ್ ಕೊಡಬೇಕಾ? ಹಾಗಿದ್ರೆ ವುಡನ್, ಮಾರ್ಬಲ್, 3D, ಗ್ಲಾಸ್ ಮತ್ತು ಜಿಯೋಮೆಟ್ರಿಕ್ ವಾಲ್ ಪ್ಯಾನೆಲ್ ಡಿಸೈನ್‌ಗಳನ್ನು ಟ್ರೈ ಮಾಡಿ. ಇವು ನಿಮ್ಮ ಕಿಚನ್ ಹಾಗೂ ಲಿವಿಂಗ್ ಏರಿಯಾವನ್ನು ಹೇಗೆ ಸುಂದರ ಮತ್ತು ಮಾಡರ್ನ್ ಆಗಿ ಮಾಡುತ್ತವೆ ಅಂತ ನೋಡಿ.
Read Full Story

08:49 AM (IST) Apr 27

ಎಂಆರ್‌ಪಿಎಲ್ 4ನೇ ತ್ರೈಮಾಸಿಕದಲ್ಲಿ 119 ಕೋಟಿ ರು. ನಿವ್ವಳ ಲಾಭಾಂಶ- ಕಳೆದ ವರ್ಷ 85 ಚಿಲ್ಲರೆ ಮಾರಾಟದ ಸ್ಟೇಷನ್‌ ಆರಂಭ

ಕೇಂದ್ರ ಸರ್ಕಾರಿ ಸ್ವಾಮ್ಯದ ಎಂಆರ್‌ಪಿಎಲ್ ಕಂಪನಿಯು ತನ್ನ 4ನೇ ತ್ರೈಮಾಸಿಕದಲ್ಲಿ ₹119 ಕೋಟಿ ನಿವ್ವಳ ಲಾಭವನ್ನು ಪ್ರಕಟಿಸಿದೆ. ವಾರ್ಷಿಕ ಲೆಕ್ಕಾಚಾರದಲ್ಲಿ, ನಿವ್ವಳ ಆದಾಯವು ₹1,931 ಕೋಟಿಗೆ ಏರಿಕೆಯಾಗಿದ್ದು, ಕಳೆದ ಹಣಕಾಸು ವರ್ಷದಲ್ಲಿ 85 ಹೊಸ ಚಿಲ್ಲರೆ ಮಾರಾಟ ಕೇಂದ್ರಗಳನ್ನು ಆರಂಭಿಸಲಾಗಿದೆ.
Read Full Story

08:38 AM (IST) Apr 27

ಹಣಕಾಸಿನ ಕಾರಣಕ್ಕೆ ತೂಗುದೀಪ ಕುಟುಂಬದ ಜತೆ ಸಂಬಂಧ ಕಳೆದುಕೊಂಡಿಲ್ಲ - ಧ್ರುವ ಸರ್ಜಾ

ಧ್ರುವ ಸರ್ಜಾ ಅವರು ತೂಗುದೀಪ ಕುಟುಂಬದೊಂದಿಗಿನ ಸಂಬಂಧದ ಬಿರುಕಿನ ವದಂತಿಗಳಿಗೆ ಪ್ರತಿಕ್ರಿಯಿಸಿದ್ದಾರೆ. ಹಣಕಾಸಿನ ವಿಚಾರಕ್ಕೆ ಸಂಬಂಧ ಹಾಳಾಗಿಲ್ಲ, ಇಂತಹ ಸುಳ್ಳು ಸುದ್ದಿಗಳಿಂದ ನೋವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕೆಲವು ವಿಷಯಗಳು ನ್ಯಾಯಾಲಯದಲ್ಲಿರುವುದರಿಂದ ಹೆಚ್ಚು ಮಾತನಾಡಲು ನಿರಾಕರಿಸಿದ್ದಾರೆ.

Read Full Story

08:24 AM (IST) Apr 27

ಶೃಂಗಾರ, ಗ್ಯಾಂಗ್‌ಸ್ಟರ್‌ ಕತೆಯನ್ನು ಮಹಿಳೆ ಹೇಗೆ ತೋರಿಸಬಹುದೆಂದು ಗೀತು ಅವರಿಂದ ಕಲಿತೆ - ಯಶ್‌

'ಟಾಕ್ಸಿಕ್‌' ಚಿತ್ರದ ನಿರ್ದೇಶಕಿ ಗೀತು ಮೋಹನ್‌ ದಾಸ್‌ ಅವರ ಬಗ್ಗೆ ನಟ ಯಶ್ ಮಾತನಾಡಿದ್ದಾರೆ. ಗ್ಯಾಂಗ್‌ಸ್ಟರ್ ಕತೆಯಲ್ಲಿ ಮಹಿಳಾ ನಿರ್ದೇಶಕಿಯೊಬ್ಬರು ಶೃಂಗಾರ, ಬಯಕೆ ಮತ್ತು ಬೋಲ್ಡ್ ದೃಶ್ಯಗಳನ್ನು ಕಟ್ಟಿಕೊಡುವ ರೀತಿ ವಿಭಿನ್ನವಾಗಿದ್ದು, ತಮಗೆ ಅಚ್ಚರಿ ತಂದಿದೆ ಎಂದು ಯಶ್‌ ಹೇಳಿದ್ದಾರೆ.
Read Full Story

08:10 AM (IST) Apr 27

SSLCಯಲ್ಲಿ ಜಸ್ಟ್‌ ಪಾಸ್‌, ಫೇಲ್‌ ಆದವರಿಗೆ ಉಂಟು ವಿವಿಧ ಕೋರ್ಸ್; ಧೃತಿಗೆಡುವ ಅಗತ್ಯವೇ ಇಲ್ಲ

SSLC ಫಲಿತಾಂಶದಲ್ಲಿ ಕಡಿಮೆ ಅಂಕ ಪಡೆದ ಅಥವಾ ಅನುತ್ತೀರ್ಣರಾದ ವಿದ್ಯಾರ್ಥಿಗಳು ಧೃತಿಗೆಡುವ ಅಗತ್ಯವಿಲ್ಲ. ಅವರಿಗಾಗಿ ಐಟಿಐ ಸೇರಿದಂತೆ ಹಲವಾರು ತರಬೇತಿ ಸಂಸ್ಥೆಗಳು ಉದ್ಯೋಗಾವಕಾಶದ ಬಾಗಿಲು ತೆರೆದಿವೆ. ಈ ಕೋರ್ಸ್‌ಗಳನ್ನು ಪೂರ್ಣಗೊಳಿಸಿ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಉತ್ತಮ ಭವಿಷ್ಯರೂಪಿಸಿಕೊಳ್ಳಬಹುದು.

Read Full Story

07:59 AM (IST) Apr 27

ಉನ್ನತ ಶಿಕ್ಷಣಕ್ಕಾಗಿ ಗಜೇಂದ್ರಗಡ, ರೋಣ ತಾಲೂಕಿನ ವಿದ್ಯಾರ್ಥಿಗಳ ಪರದಾಟ; ಪೋಷಕರಿಗೆ ಆರ್ಥಿಕ ಹೊರೆ

ಗಜೇಂದ್ರಗಡ ತಾಲೂಕಿನ ವಿದ್ಯಾರ್ಥಿಗಳು SSLCಯಲ್ಲಿ ಉತ್ತಮ ಅಂಕ ಗಳಿಸುತ್ತಿದ್ದರೂ, ಉನ್ನತ ವ್ಯಾಸಂಗಕ್ಕೆ ಸ್ಥಳೀಯವಾಗಿ ಉತ್ತಮ ಕಾಲೇಜುಗಳಿಲ್ಲ. ಈ ಕಾರಣದಿಂದ ಪ್ರವೀಣಕುಮಾರ ಸೊಬಗಿನರಂತಹ ಪ್ರತಿಭೆಗಳು ಬೇರೆ ಜಿಲ್ಲೆಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದ್ದು, ಇದು ಪಾಲಕರಿಗೆ ಆರ್ಥಿಕ ಹೊರೆಯಾಗಿದೆ.

Read Full Story

07:14 AM (IST) Apr 27

ಲಾಡ್ಜ್ ಮೇಲೆ ದಾಳಿ - ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಇಬ್ಬರ ಬಂಧನ, ಮಹಿಳೆಯ ರಕ್ಷಣೆ

ಬೆಳಗಾವಿಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಲಾಡ್ಜ್ ಮೇಲೆ ಪೊಲೀಸರು ದಾಳಿ ನಡೆಸಿ, ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಲಾಡ್ಜ್ ಮಾಲೀಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಓರ್ವ ಮಹಿಳೆಯನ್ನು ರಕ್ಷಿಸಲಾಗಿದ್ದು, ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Full Story

06:50 AM (IST) Apr 27

ರಿಪೋರ್ಟರ್ಸ್ ಡೈರಿ - ನಮ್ ಮಮ್ಮಿ ಸೋನಿಯಾ, ನಮ್ ಡ್ಯಾಡಿ ರಾಜೀವ್

ಡಿಜಿಪಿ ಕಚೇರಿಗೆ ಸಲ್ಲಿಕೆಯಾದ ವಿಚಿತ್ರ ದೂರುಗಳು, ಧೂಳು ಮುಚ್ಚಲು ಟ್ಯಾಂಕರ್ ಮಳೆ ಸುರಿಸಿದ ಪ್ರಸಂಗ, ಗ್ಯಾಸ್ ಸಮಸ್ಯೆಯಿಂದ ಅರ್ಧ ಇಡ್ಲಿ ನೀಡಿದ ಹೋಟೆಲ್ ಕಥೆ ಹಾಗೂ ಎಣ್ಣೆ ಏಟಿನಲ್ಲಿ ಮಾಜಿ ಸಚಿವರಿಗೆ ಬರುವ ಕರೆಗಳ ಕುರಿತಾದ ಸ್ವಾರಸ್ಯಕರ ಘಟನಾವಳಿಗಳ ಸಂಗ್ರಹವಿದು.
Read Full Story

06:40 AM (IST) Apr 27

ಡಾ.ರಾಜ್‌ಕುಮಾರ್ ಇದ್ದಿದ್ರೆ ಸರ್ಕಾರಿ ಭೂಮಿ ಬೇಡ ಅಂತಿದ್ರು - ನಟ ಚೇತನ್‌ ಕುಮಾರ್ ಅಹಿಂಸಾ

ಡಾ.ರಾಜ್‌ಕುಮಾರ್ ಸ್ಮಾರಕಕ್ಕೆ ಸರ್ಕಾರಿ ಭೂಮಿ ನೀಡಿದ್ದನ್ನು ಪ್ರಶ್ನಿಸಿ ನಟ ಚೇತನ್ ವಿವಾದ ಸೃಷ್ಟಿಸಿದ್ದಾರೆ. ಕನ್ನಡಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾದರೂ, ತಮ್ಮ ಹೇಳಿಕೆಗೆ ಬದ್ಧರಾಗಿದ್ದು, ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಸಮರ್ಥಿಸಿಕೊಂಡು ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.
Read Full Story

06:31 AM (IST) Apr 27

ರಾಜಕೀಯಕ್ಕಲ್ಲ, ಜನಜಾಗೃತಿಗಾಗಿ ಅಹಿಂದ ಸಂಘಟನೆ - ಸಚಿವ ಸತೀಶ್‌ ಜಾರಕಿಹೊಳಿ

ಹುಬ್ಬಳ್ಳಿಯಲ್ಲಿ ನಡೆದ ಅಹಿಂದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಸಚಿವ ಸತೀಶ್‌ ಜಾರಕಿಹೊಳಿ, ಅಹಿಂದ ಸಂಘಟನೆಯು ರಾಜಕೀಯ ಲಾಭಕ್ಕಾಗಿ ಅಲ್ಲ, ಜನಜಾಗೃತಿಗಾಗಿ ಎಂದರು. ಇದು ಅಹಿಂದ ವರ್ಗದ ಎರಡನೇ ಹಂತದ ಹೋರಾಟವಾಗಿದ್ದು, ತಮ್ಮದೇ ಸರ್ಕಾರದಲ್ಲಿರುವ ಕೆಲವರು ಭರವಸೆ ಈಡೇರಿಸಲು ಬಿಡುತ್ತಿಲ್ಲ ಎಂದು ಹೇಳಿದರು.

Read Full Story

06:05 AM (IST) Apr 27

ಇನ್ನೂ ಗಂಭೀರ ಸ್ಥಿತಿಯಲ್ಲೇ ಸಚಿವ ಡಿ.ಸುಧಾಕರ್‌ - ಆಸ್ಪತ್ರೆಗೆ ಡಿಕೆ ಭೇಟಿ, ವೈದ್ಯರ ಜತೆ ಚರ್ಚೆ

ಯೋಜನಾ ಸಚಿವ ಡಿ.ಸುಧಾಕರ್ ಅವರು ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಮುಂದುವರೆದಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದರು.
Read Full Story

05:59 AM (IST) Apr 27

ಪಂಚಮಸಾಲಿ ಪೀಠದ ಸಂಘರ್ಷ - ವಚನಾನಂದಶ್ರೀಗಳ ಉಚ್ಚಾಟಿಸಿದ್ದವರೇ ಉಚ್ಚಾಟನೆ! ಟ್ರಸ್ಟಿಗಳಿಗೆ ಶಾಕ್

ಅವ್ಯವಹಾರ, ಅಧರ್ಮ, ಅಪನಂಬಿಕೆಯ ಆರೋಪಗಳ ಹಿನ್ನೆಲೆಯಲ್ಲಿ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಮೂವರು ಟ್ರಸ್ಟಿಗಳನ್ನು ಟ್ರಸ್ಟ್‌ನಿಂದ ಉಚ್ಚಾಟಿಸಲಾಗಿದೆ. ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘವು ಈ ಕಠಿಣ ಕ್ರಮ ಕೈಗೊಂಡಿದ್ದು, ಸಂಘವೇ ಟ್ರಸ್ಟ್‌ಗಿಂತ ಸುಪ್ರೀಂ ಎಂದು ಪ್ರತಿಪಾದಿಸಿದೆ.

Read Full Story

05:52 AM (IST) Apr 27

ಶಿವಮೊಗ್ಗ ಜಿಲ್ಲೆಯಲ್ಲಿ ಅಪರೂಪ ಮಾಹಿತಿಯುಳ್ಳ ವಿಜಯನಗರ ಕಾಲದ ನಂದಿಗಂಬ ದಾನ ಶಾಸನ ಪತ್ತೆ

ಶಿವಮೊಗ್ಗದ ಹೊಸನಗರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ವಿಜಯನಗರ ಕಾಲದ ಸಂಗಮ ವಂಶಕ್ಕೆ ಸೇರಿದ ಅಪರೂಪದ ನಂದಿಗಂಬ ದಾನ ಶಾಸನ ಪತ್ತೆಯಾಗಿದೆ. ಕ್ರಿ.ಶ. 1424ರ ಈ ಶಾಸನವು, ಎರಡನೇ ದೇವರಾಯನು ಹಂಪಿಯ ವಿರೂಪಾಕ್ಷ ದೇವರಿಗೆ ಕಲ್ಲೂರು ನಾಡನ್ನು ದಾನವಾಗಿ ನೀಡಿದ ಐತಿಹಾಸಿಕ ವಿವರಗಳನ್ನು ಒಳಗೊಂಡಿದೆ.
Read Full Story

05:44 AM (IST) Apr 27

ಗೃಹಲಕ್ಷ್ಮಿ ಹಣದಿಂದ ಓದಿ ರಾಜ್ಯಕ್ಕೆ 2ನೇ ಸ್ಥಾನ ಪಡೆದ ಬಾಲಕಿಗೆ ಡಿಕೆಶಿ ಮೆಚ್ಚುಗೆ

ಮಾಧುರಿ ಆರ್., 'ಗೃಹಲಕ್ಷ್ಮಿ ಯೋಜನೆ'ಯ ಹಣದಿಂದ ಟ್ಯೂಷನ್ ಪಡೆದು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ಸಾಧನೆಯನ್ನು ಶ್ಲಾಘಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗ್ಯಾರಂಟಿ ಯೋಜನೆಗಳು ಜನರ ಬದುಕಿನಲ್ಲಿ ಬದಲಾವಣೆ ತರುತ್ತಿವೆ ಎಂದು ಹೇಳಿದ್ದಾರೆ.

Read Full Story

05:35 AM (IST) Apr 27

Mangaluru - ಪ್ರಯಾಣದ ವೇಳೆ ಹೆರಿಗೆ ನೋವು - ರೈಲಿನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲಿನಲ್ಲಿ ಪೊನ್ನಮ್ಮ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಬಿ.ಸಿ.ರೋಡ್ ರೈಲು ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿ, ವೈದ್ಯರ ಸಹಾಯದಿಂದ ಬೋಗಿಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 

Read Full Story

More Trending News