Published : Oct 26, 2025, 06:38 AM ISTUpdated : Oct 26, 2025, 10:41 PM IST

Karnataka News Live: ಪ್ರಚೋದನಕಾರಿ ಭಾಷಣ, ವಿಚಾರಣೆಗೆ ಹಾಜರಾಗಲು ಕಲ್ಕಡ್ಕ ಪ್ರಭಾಕರ ಭಟ್‌ಗೆ ನೋಟೀಸ್ ಜಾರಿ

ಸಾರಾಂಶ

ಮಂಡ್ಯ: ಮಳವಳ್ಳಿ ತಾಲೂಕಿನ ಬೊಪ್ಪೇಗೌಡನಪುರ (ಬಿಜಿಪುರ) ಹೋಬಳಿಯ ಕಗ್ಗಲೀಪುರ ಗ್ರಾಮದಲ್ಲಿ ರೈತರೊಬ್ಬರ ಹಳ್ಳಿಕಾರ್ ಎತ್ತುಗಳು ಬರೋಬರಿ 9.01 ಲಕ್ಷಕ್ಕೆ ಮಾರಾಟವಾಗಿ ಗಮನ ಸೆಳೆದಿದೆ. ಗ್ರಾಮದ ಯುವ ರೈತ ಮನು ಅವರು ನಾಗಮಂಗಲದ ಹೂವಿನಹಳ್ಳಿಯ ಜಿಪಂ ಮಾಜಿ ಸದಸ್ಯ ಚಂದ್ರಣ್ಣ ಅವರಿಗೆ 9.01 ಲಕ್ಷ ರು.ಗೆ ಒಂದು ಜೊತೆ ಹಳ್ಳಿಕಾರ್ ಎತ್ತುಗಳನ್ನು ಮಾರಾಟ ಮಾಡಿದ್ದಾರೆ.

ಮನು ಕಳೆದ ಐದು ತಿಂಗಳ ಹಿಂದೆ ಕನಕಪುರದ ಹಾರೋಹಳ್ಳಿ ತಾಲೂಕಿನ ಸೋಮನಹಳ್ಳಿ ಶ್ರೀನಿವಾಸ್ ಅವರಿಂದ 5.90 ಲಕ್ಷ ರು.ಗೆ ಖರೀದಿಸಿದ್ದರು. ಹಳ್ಳಿಕಾರ್ ರಾಸುಗಳ ಸಾಕಾಣಿಕೆಯನ್ನು ರೂಢಿಸಿಕೊಂಡಿದ್ದ ಮನು ಅವರು ಎತ್ತುಗಳನ್ನು ಹೂವಿನಹಳ್ಳಿ ಚಂದ್ರಣ್ಣರಿಗೆ 9.01 ಲಕ್ಷ ರು.ಗೆ ಮಾರಾಟ ಮಾಡಿದ್ದಾರೆ.

10:41 PM (IST) Oct 26

ಪ್ರಚೋದನಕಾರಿ ಭಾಷಣ, ವಿಚಾರಣೆಗೆ ಹಾಜರಾಗಲು ಕಲ್ಕಡ್ಕ ಪ್ರಭಾಕರ ಭಟ್‌ಗೆ ನೋಟೀಸ್ ಜಾರಿ

ಪ್ರಚೋದನಕಾರಿ ಭಾಷಣ, ವಿಚಾರಣೆಗೆ ಹಾಜರಾಗಲು ಕಲ್ಕಡ್ಕ ಪ್ರಭಾಕರ ಭಟ್‌ಗೆ ನೋಟೀಸ್ ಜಾರಿ ಮಾಡಲಾಗಿದೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಭಾಕರ್ ಭಟ್ ವಿರುದ್ಧ ದೂರು ದಾಖಲಾಗಿತ್ತು.  ಇದೀಗ ಪೊಲೀಸರು 31ಕ್ಕೆ ವಿಚಾರಣೆ ಹಾಜರಾಗಲು ಸೂಚಿಸಿದ್ದಾರೆ.

Read Full Story

09:59 PM (IST) Oct 26

ಕಿತ್ತೂರು ಉತ್ಸವದಲ್ಲಿ ಬಿಗ್‌ಬಾಸ್ ವಿನ್ನರ್ ಹನುಮಂತ್‌ಗೆ ಅವಮಾನ? ವಿಡಿಯೋ ವೈರಲ್

ಕಿತ್ತೂರು ಉತ್ಸವದಲ್ಲಿ ಗಾಯಕ ಹಾಗೂ ಬಿಗ್‌ಬಾಸ್ ವಿನ್ನರ್ ಹನುಮಂತ್ ಅವರಿಗೆ ಅವಮಾನವಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಸಂಬಂಧಿತ ವಿಡಿಯೋ ವೈರಲ್ ಆಗಿದೆ. ಸಮಯಾವಕಾಶ ಮೀರಿದರೂ ಹನುಮಂತ್ ಹಾಡಲು ಅವಕಾಶ ನೀಡಿದ್ದಕ್ಕೆ ಇಬ್ಬರು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

Read Full Story

09:55 PM (IST) Oct 26

ತಾವರೆಕೆರೆ ಬಳಿ 300 ಎಕರೆಯಲ್ಲಿ ಡೇಟಾ ಸೆಂಟರ್ ನಿರ್ಮಾಣ, ಮಹತ್ವದ ಹೆಜ್ಜೆ ಇಟ್ಟ ಕರ್ನಾಟಕ

ತಾವರೆಕೆರೆ ಬಳಿ 300 ಎಕರೆಯಲ್ಲಿ ಡೇಟಾ ಸೆಂಟರ್ ನಿರ್ಮಾಣ, ಮಹತ್ವದ ಹೆಜ್ಜೆ ಇಟ್ಟ ಕರ್ನಾಟಕ, ಹೊಸಕೋಟೆ -ಕೋಲಾರ ಕೈಗಾರಿಕಾ ವಲಯದಲ್ಲಿ ಈ ಡೇಟಾ ಪಾರ್ಕ್ ತಲೆ ಎತ್ತಲಿದೆ. ಇದಕ್ಕಾಗಿ 1,000 ಏಕರೆ ಪ್ರದೇಶ ಕೈವಶ ಮಾಡಲು ತಯಾರಿ ನಡೆದಿದೆ.

 

Read Full Story

09:34 PM (IST) Oct 26

ಆನೆ ಬೇಕು ಅಂತಾ ಬಂದಿದ್ದಲ್ಲ ದಾರಿ ತಪ್ಪಿ ಬಂದಿದ್ದು, ಆದ್ರೆ ಹೊಸೂರು ಜನ ದಾರಿ ಮಾಡಿಕೊಡಲೇ ಇಲ್ಲ

ಆನೆ ಬೇಕು ಅಂತಾ ಬಂದಿದ್ದಲ್ಲ ದಾರಿ ತಪ್ಪಿ ಬಂದಿದ್ದು, ಆದ್ರೆ ಹೊಸೂರು ಜನ ದಾರಿ ಮಾಡಿಕೊಡಲೇ ಇಲ್ಲ, ಆನೆ ಮರಿಯನ್ನು ಆಟ್ಟಾಡಿಸಿಕೊಂಡು ಹೋದ ಅತ್ಯಂತ ನೀಚ ಘಟನೆ ನಡೆದಿದೆ. ಸ್ಥಳೀಯರು ಇದಕ್ಕೆ ಸಾಥ್ ನೀಡುವುದು ಮತ್ತೊಂದು ದುರಂತ.

Read Full Story

08:54 PM (IST) Oct 26

ಕಾರವಾರದ ಗುಡ್ಡೆಹಳ್ಳಿಯಲ್ಲಿ ಪತ್ತೆಯಾದ ಪ್ರಪಂಚದ ಅತಿದೊಡ್ಡ ಪತಂಗ ಅಟ್ಲಾಸ್ ಮೋತ್‌!

ಕಾರವಾರ ತಾಲೂಕಿನ ಗುಡ್ಡೆಹಳ್ಳಿಯ ಅರಣ್ಯ ಪ್ರದೇಶದಲ್ಲಿ, ಪ್ರಪಂಚದ ಅತಿದೊಡ್ಡ ಪತಂಗವಾದ “ಅಟ್ಲಾಸ್ ಮೋತ್” ಪತ್ತೆಯಾಗಿದೆ. ಈ ಪತಂಗವು ತನ್ನ ದೈತ್ಯಾಕಾರ, ಬಾಯಿಯಿಲ್ಲದ ವಿಶಿಷ್ಟ ಜೀವನಕ್ರಮ ಮತ್ತು ಅಲ್ಪಾವಧಿಯ ಜೀವನಚಕ್ರದಿಂದಾಗಿ ರೋಚಕವಾಗಿದೆ. 

Read Full Story

08:51 PM (IST) Oct 26

ನೆಲಮಂಗಲ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಗುಂಡಿನ ದಾಳಿ, ಆಸ್ಪತ್ರೆ ದಾಖಲು

ನೆಲಮಂಗಲ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಗುಂಡಿನ ದಾಳಿ, ಆಸ್ಪತ್ರೆ ದಾಖಲು ಮಾಡಲಾಗಿದೆ. ಇಬ್ಬರು ಅಪರಿಚಿತರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗಾಯಗೊಂಡಿರುವ ಪಂಚಾಯಿತಿ ಸದಸ್ಯನಿಗೆ ಚಿಕಿತ್ಸೆ ಮುಂದುವರಿದೆ.

Read Full Story

08:11 PM (IST) Oct 26

ಬೆಳಗಾವಿ ಸಹಕಾರಿ ಸಂಘಗಳ ಚುನಾವಣೆಯಲ್ಲಿ ಜಾರಕಿಹೊಳಿ ಬ್ರದರ್ಸ್‌ಗೆ ಸೋಲು; ಖದರ್ ತೋರಿಸಿದ ಸವದಿ ಸಹೋದರರು!

ಬೆಳಗಾವಿ ಜಿಲ್ಲೆಯ ಅಥಣಿ ಮತ್ತು ಚಿಕ್ಕೋಡಿ ಸಹಕಾರಿ ಸಂಘಗಳ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಅಥಣಿ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ, ಶಾಸಕ ಲಕ್ಷ್ಮಣ ಸವದಿ ಬೆಂಬಲಿತ ಪ್ಯಾನೆಲ್ ಜಾರಕಿಹೊಳಿ ಸಹೋದರರ ಬೆಂಬಲಿತ ಪ್ಯಾನೆಲ್ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸಿದೆ.

Read Full Story

08:03 PM (IST) Oct 26

ತಿಲಕನಗರ ಮಹಿಳೆಯ ಕೊಲೆ ರಹಸ್ಯ ಬಯಲು, ಅನೈತಿಕ ಸಂಬಂಧವಿದ್ದ ಸುಬ್ರಹ್ಮಣಿ ಸೇರಿ ಇಬ್ಬರಿಂದ ಹತ್ಯೆ, ಆಟೋದಲ್ಲಿ ಹೆಣವಿಟ್ಟು ಪರಾರಿ

ಬೆಂಗಳೂರಿನ ತಿಲಕನಗರದಲ್ಲಿ ಸಲ್ಮಾ ಎಂಬ ಮಹಿಳೆಯ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಸಲ್ಮಾ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಇಬ್ಬರು, ಆಕೆ ಬೇರೊಬ್ಬರೊಂದಿಗೆ ಸಂಪರ್ಕದಲ್ಲಿದ್ದಾಳೆಂಬ ಅನುಮಾನದಿಂದ ಕೊಲೆ ಮಾಡಿ, ಶವವನ್ನು ಆಟೋದಲ್ಲಿ ಸಾಗಿಸಿರುವುದು ತನಿಖೆಯಿಂದ ದೃಢಪಟ್ಟಿದೆ. 

Read Full Story

07:31 PM (IST) Oct 26

BBK 12 - ಗಿಲ್ಲಿ ನಟನ ದಶಾವತಾರದಲ್ಲಿ 3 ಅವತಾರ ರಿಲೀಸ್ ಮಾಡಿದ ಸುದೀಪ್; ಆದ್ರೆ ಕಾವ್ಯಾಳ ಒಪ್ಪಿಗೆ ಕೇಳಿದ್ದೇಕೆ?

ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟ, ಕಾವ್ಯಾಳ ಮಾತಿನಂತೆ ಮೀಸೆ ತೆಗೆಸಿಕೊಂಡಿದ್ದಾರೆ. ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್, ಗಿಲ್ಲಿಯನ್ನು ಟ್ರೋಲ್ ಮಾಡಿದ ಫೋಟೋಗಳನ್ನು ತೋರಿಸಿ ತಮಾಷೆ ಮಾಡಿದ್ದಲ್ಲದೆ, ಸ್ವಂತ ನಿರ್ಧಾರ ತೆಗೆದುಕೊಳ್ಳುವಂತೆ ಪರೋಕ್ಷವಾಗಿ ಸಲಹೆ ನೀಡಿದ್ದಾರೆ.

Read Full Story

07:00 PM (IST) Oct 26

ರಾಜಣ್ಣ ಹೇಳಿರೋದು ನನಗೆ ಗೊತ್ತಿಲ್ಲ, ಪಕ್ಷದ ಆಂತರಿಕ ವಿಚಾರ ಸಾರ್ವಜನಿಕವಾಗಿ ಚರ್ಚಿಸುವಂತಿಲ್ಲ - ಸಚಿವ ಗುಂಡೂರಾವ್

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ, ಬೆಂಗಳೂರಿನ ಗಾಂಧಿನಗರದಲ್ಲಿ ಕಾಂಗ್ರೆಸ್ 'ವೋಟ್ ಚೋರಿ' ವಿರುದ್ಧ ಬೃಹತ್ ಸಹಿ ಸಂಗ್ರಹ ಅಭಿಯಾನ ನಡೆಸಿತು. ಈ ಅಭಿಯಾನದ ಮೂಲಕ ಮತದಾರರ ಹಕ್ಕುಗಳ ರಕ್ಷಣೆ ಮತ್ತು ಚುನಾವಣಾ ಅಕ್ರಮಗಳ ವಿರುದ್ಧ ಜಾಗೃತಿ ಮೂಡಿಸುವ ಗುರಿ ಹೊಂದಲಾಗಿದೆ. 

Read Full Story

06:44 PM (IST) Oct 26

ಆಗ್ರಾದ ತಾಜ್‌ಮಹಲ್ ನೋಡಲು ಬಂದವಳೇ ಸ್ಟಾರ್! ಲೋಕಲ್ ಬಾಯ್ಸ್ ಮಾಡಿದ ಕೆಲಸವೇನು ನೋಡಿ!

ತಾಜ್‌ಮಹಲ್ ನೋಡಲು ಆಗ್ರಾಕ್ಕೆ ಬಂದಿದ್ದ ಆಲಿಯಾ ಡೆನ್ನಿಂಗ್ ಎಂಬ ವಿದೇಶಿ ಯುವತಿ, ತಾನೇ ಒಂದು ಪ್ರವಾಸಿ ಆಕರ್ಷಣೆಯಾಗಿ ಬದಲಾದ ಅನುಭವವನ್ನು ಹಂಚಿಕೊಂಡಿದ್ದಾಳೆ. ಸ್ಥಳೀಯರು ಆಕೆಯೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Read Full Story

06:42 PM (IST) Oct 26

ಮಗಳ ಮೇಲೆ ಅತ್ಯಾ*ಚಾರ - ಸಲಿಂಗಿ ಸಂಗಾತಿಯ ಮರ್ಮಾಂಗಕ್ಕೆ ಇರಿದ ವ್ಯಕ್ತಿ

male partner: ತನ್ನ ಆರು ವರ್ಷದ ಮಗಳ ಮೇಲೆ ಬಲತ್ಕಾರಕ್ಕೆ ಯತ್ನಿಸಿದ ತನ್ನ ಸಲಿಂಗಿ ಸಂಗಾತಿಯ ಮರ್ಮಾಂಗಕ್ಕೆ ಇರಿದಂತಹ ಘಟನೆ ಉತ್ತರ ಪ್ರದೇಶದ ದಿಯೋರಿಯಾದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಆರು ವರ್ಷದ ಮಗಳ ಜೊತೆ ತನ್ನ ಸಲಿಂಗಿ ಸಂಗಾತಿ ಜೊತೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ.

Read Full Story

06:21 PM (IST) Oct 26

ಸೌದಿ ಜೈಲಿನಲ್ಲಿದ್ದ ಜಾಕೀರನನ್ನು ಭಾರತಕ್ಕೆ ಕರೆತಂದು ಮರುಜೀವ ನೀಡಿದ ಮಲೆಯಾಳಿ ನರ್ಸ್ ಮೋನಿಷಾ!

ಸೌದಿಯಲ್ಲಿ ಗುತ್ತಿಗೆ ಅವಧಿ ಮುಗಿದು ಜೈಲುಪಾಲಾಗಿ, ಪಾರ್ಶ್ವವಾಯುವಿಗೆ ತುತ್ತಾಗಿದ್ದ ಆಂಧ್ರಪ್ರದೇಶದ ವ್ಯಕ್ತಿಗೆ ಮಲಯಾಳಿ ನರ್ಸ್ ಮತ್ತು ಭಾರತೀಯ ರಾಯಭಾರ ಕಚೇರಿ ಸಹಾಯ ಮಾಡಿವೆ. ಮಾನವೀಯ ನೆಲೆಯಲ್ಲಿ, ನರ್ಸ್ ಮೋನಿಷಾ ಸದಾಶಿವಂ ಅವರು ರೋಗಿಯೊಂದಿಗೆ ಬಂದು ಕುಟುಂಬಕ್ಕೆ ಒಪ್ಪಿಸಿದ್ದಾರೆ.

Read Full Story

05:41 PM (IST) Oct 26

ಕಾಸರಗೋಡಿನಿಂದ ಕೇರಳಕ್ಕೆ ಕನ್ನಡಿಗರ ಎಚ್ಚರಿಕೆ ಕರೆಗಂಟೆ, ನ.1ರಂದು ಕಾಸರಗೋಡು ಡಿಸಿ ಕಚೇರಿ ಎದುರು ಕನ್ನಡಿಗರ ಧರಣಿ

ನ.1 ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ, ಕಾಸರಗೋಡಿನ ಕನ್ನಡಪರ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಿವೆ. ಈ ಸಂದರ್ಭದಲ್ಲಿ, ಮಲೆಯಾಳ ಭಾಷಾ ಹೇರಿಕೆ ವಿರೋಧ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ಸೇರಿದಂತೆ 18 ಪ್ರಮುಖ ಬೇಡಿಕೆಯನ್ನು ಕೇರಳ ಸಿಎಂಗೆ ಸಲ್ಲಿಸಲಾಗುವುದು.

Read Full Story

05:11 PM (IST) Oct 26

Bigg Boss - ಪಕ್ಕದಲ್ಲಿ ನೋಡಿದ್ರೂ ಕಾವ್ಯಾ ಇದ್ರು, ಎದುರಲ್ಲೂ ಅವ್ರೇ, ಏನ್ಮಾಡ್ಲಿ? ಸುದೀಪ್​ ಮುಂದೆ ಗಿಲ್ಲಿ ಫುಲ್​ ಕನ್​ಫ್ಯೂಷನ್​

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರ ಬಾಂಧವ್ಯ ಗಮನ ಸೆಳೆಯುತ್ತಿದೆ. ಕಾವ್ಯಾ ಮಾತಿಗೆ ಕ್ಲೀನ್ ಶೇವ್ ಮಾಡಿಸಿಕೊಂಡ ಗಿಲ್ಲಿಯನ್ನು, ದೀಪಾವಳಿ ದಿನ ಕಾವ್ಯಾಳನ್ನೇ ನೋಡುತ್ತಿದ್ದ ವಿಚಾರವಾಗಿ ಸುದೀಪ್ ತಮಾಷೆ ಮಾಡಿ ಕಾಲೆಳೆದಿದ್ದಾರೆ.  

Read Full Story

04:55 PM (IST) Oct 26

Bigg Boss ಮನೆಯ ಈ ಜಗಳವೇ ಈಗ ನಂಬರ್ 1 ಟ್ರೆಂಡಿಂಗ್! ಇಡೀ ಇಂಟರ್ನೆಟ್ ಸೌಂಡ್ ಮಾಡ್ತಿದೆ ಈ ಒಂದು ಸೀನ್!

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಜಗಳಗಳು, ಕಾಮಿಡಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಚಿಕ್ಕ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಇದನ್ನು ರೀಲ್ಸ್‌ ಮಾಡುತ್ತಿದ್ದಾರೆ, ಡ್ಯಾನ್ಸ್‌ ಮಾಡುತ್ತಿದ್ದಾರೆ.

Read Full Story

04:49 PM (IST) Oct 26

ಉತ್ತರ ಕನ್ನಡ - ಗೋವಾ ಆಳ ಸಮುದ್ರದಲ್ಲಿ ಸಂಪರ್ಕಕ್ಕೆ ಸಿಗದೆ ಮಿಸ್‌ ಆಗಿದ್ದ ಹಡಗು ಸಹಿತ 31 ಮೀನುಗಾರರ ರಕ್ಷಣೆ

ಆಳ ಸಮುದ್ರದಲ್ಲಿ ತಾಂತ್ರಿಕ ದೋಷದಿಂದ ತೂಫಾನಿಗೆ ಸಿಲುಕಿದ್ದ ಗೋವಾದ “ಐಎಫ್‌ಬಿ ಸಂತ ಆಂಟನಿ” ಬೋಟ್‌ನಲ್ಲಿದ್ದ 31 ಮೀನುಗಾರರನ್ನು ಭಾರತೀಯ ತಟ ರಕ್ಷಣಾ ಪಡೆ ಯಶಸ್ವಿಯಾಗಿ ರಕ್ಷಿಸಿದೆ.   ಮೀನುಗಾರರನ್ನು ರಕ್ಷಿಸಿದ ನಂತರ ಹಾನಿಗೊಳಗಾದ ಬೋಟ್‌ನ್ನು ಹೊನ್ನಾವರ ಬಂದರಿಗೆ ಎಳೆದು ತರಲಾಯಿತು.

Read Full Story

04:42 PM (IST) Oct 26

ಮೆಜೆಸ್ಟಿಕ್ ಹತ್ತಿರಕ್ಕೆ ಹೈಕೋರ್ಟ್ ಶಿಫ್ಟ್; ದೊಡ್ಡ ಜಾಗದಲ್ಲಿರುವ ರೇಸ್ ಕೋರ್ಸ್ ಹೊರವಲಯಕ್ಕೆ ಕಿಕ್ ಔಟ್!

ಹೈಕೋರ್ಟ್ ಸ್ಥಳಾಂತರಕ್ಕೆ ರೇಸ್ ಕೋರ್ಸ್ ಜಾಗ ಬಳಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಬ್ಬನ್ ಪಾರ್ಕ್ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಬ್ಬನ್ ಪಾರ್ಕ್ ಅಭಿವೃದ್ಧಿಗೆ 5 ಕೋಟಿ, ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ಘೋಷಿಸಿದರು.

Read Full Story

03:50 PM (IST) Oct 26

Naa Ninna Bidalaare ಸೀರಿಯಲ್​ ಬಿಡಲು ಕಾರಣ ಕೊಟ್ಟ ಮಾಯಾ! ತೆರೆಯ ಮೇಲೆ ಅಬ್ಬರದಿಂದ ಕಮ್​ಬ್ಯಾಕ್​

'ನಾ ನಿನ್ನ ಬಿಡಲಾರೆ' ಧಾರಾವಾಹಿಯ ಮಾಯಾ ಪಾತ್ರದಿಂದ ನಟಿ ರುಹಾನಿ ಶೆಟ್ಟಿ ಹೊರನಡೆದಿದ್ದು, ಅವರ ಸ್ಥಾನಕ್ಕೆ 'ಕೋಳಿ ರಮ್ಯಾ' ಖ್ಯಾತಿಯ ರಮ್ಯಾಶ್ರೀ ಬಾಲಕೃಷ್ಣ ಬಂದಿದ್ದಾರೆ. ಅಭಿಮಾನಿಗಳ ಬೇಸರಕ್ಕೆ ಪ್ರತಿಕ್ರಿಯಿಸಿರುವ ರುಹಾನಿ, ಶೀಘ್ರದಲ್ಲೇ ಅಬ್ಬರದೊಂದಿಗೆ ತೆರೆಗೆ ಮರಳುವ ಸೂಚನೆ ನೀಡಿದ್ದಾರೆ.
Read Full Story

03:42 PM (IST) Oct 26

ನಾನು ಪ್ರತಿ ತಿಂಗಳು ಒಂದು ಯುದ್ಧ ನಿಲ್ಲಿಸಿದ್ದೇನೆ, ಈಗ ಪಾಕ್-ಅಫ್ಘಾನ್ ಸಮಸ್ಯೆ ಶೀಘ್ರ ಬಗೆಹರಿಸುತ್ತೇನೆ - ಟ್ರಂಪ್

Donald Trump on Pakistan-Afghanistan conflict: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕಿಸ್ತಾನ- ಅಫ್ಘಾನಿಸ್ತಾನ  ಸಂಘರ್ಷ ಶೀಘ್ರದಲ್ಲೇ ಕೊನೆಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಮಲೇಷ್ಯಾದಲ್ಲಿ ಮಾತನಾಡಿದ ಅವರು, ತಮ್ಮ ಆಡಳಿತವು ಈಗಾಗಲೇ 8 ಯುದ್ಧ ನಿಲ್ಲಿಸಿದೆ ಎಂದು ಹೇಳಿಕೊಂಡಿದ್ದಾರೆ.

Read Full Story

03:26 PM (IST) Oct 26

ಟ್ರಯಲ್ ಕೋರ್ಟ್‌ನಲ್‌ಲಿ ವೃತ್ತಿ ಆರಂಭಿಸಿ - ಯುವ ವಕೀಲರಿಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಸಲಹೆ

ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಉಪಮುಖ್ಯಮಂತ್ರಿ ಗಳಾದ ಡಿ ಕೆ ಶಿವಕುಮಾರ್ ಅವರೊಂದಿಗೆ ಶನಿವಾರ ನ್ಯಾಯಮಿತ್ರ ಸಹಕಾರಿ ಸಂಘದ ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. "ಬೆಳ್ಳಿ‌ ಮಹೋತ್ಸವವು ಸ್ಥಿರತೆ, ಬಾಂಧವ್ಯ, ಬದ್ಧತೆ ಮತ್ತು ಸಾಧನೆಯ ಪ್ರತೀಕ" ಎಂದು ಹೇಳಿದರು

Read Full Story

03:11 PM (IST) Oct 26

ಬೆಂಗಳೂರು ಟೆಕ್ಕಿಗಳ ಡಬಲ್ ಲೈಫ್ - ಹಗಲು ಇಂಜಿನಿಯರ್‌ಗಳು ರಾತ್ರಿ..?

Bangalore techies driving cabs ಬೆಂಗಳೂರಿನಲ್ಲಿ ಅನೇಕ ಟೆಕ್ಕಿಗಳು ಹಗಲಿನ ಉದ್ಯೋಗದ ನಂತರ ರಾತ್ರಿಯಲ್ಲಿ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಒಂಟಿತನ ಮತ್ತು ಏಕತಾನತೆಯಿಂದ ಹೊರಬರಲು, ಹೊಸ ಜನರನ್ನು ಭೇಟಿಯಾಗಲು ಹಾಗೂ ಹೆಚ್ಚುವರಿ ಆದಾಯ ಗಳಿಸಲು ಅವರು ಈ ಮಾರ್ಗವನ್ನು ಕಂಡುಕೊಂಡಿದ್ದಾರೆ. 

Read Full Story

03:10 PM (IST) Oct 26

Amruthadhaare Serial - ಗೌತಮ್‌ ಬಂಡವಾಳ ಬಯಲು ಮಾಡ್ತಿರೋ ದತ್ತುಪುತ್ರಿ; ಆ ಟೆಸ್ಟ್‌ ಬೇಡ ಎಂದ ವೀಕ್ಷಕರು

Amruthadhaare Tv Serial Epiosde: ಆಕಾಶ್ - ಮಿಂಚು ಕೋಳಿ ಜಗಳ, ಗೌತಮ್ - ಭೂಮಿ ಒಂದಾಗೋಕೆ ನಾಂದಿ ಹಾಡ್ತಿದೆ! ಹೌದು, ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಹಾಗೂ ಭೂಮಿಕಾ ಒಂದಾಗುತ್ತಾರಾ? ಇಲ್ಲವಾ ಎಂಬ ಚಿಂತೆ ಶುರುವಾಗಿದೆ. ಹಾಗಾದರೆ ಮುಂದೆ ಏನಾಗುವುದು?

Read Full Story

02:43 PM (IST) Oct 26

ಕೊನೆಗೂ ಪ್ರೇಕ್ಷಕರ ಆಸೆ ಈಡೇರಿಸಿದ ಶ್ರಾವಣಿ ಸುಬ್ರಮಣ್ಯ; ಇದಕ್ಕೆ ಇಷ್ಟು ವರ್ಷ ಬೇಕಾಯ್ತಾ?

'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿಯಲ್ಲಿ, ಸುಬ್ಬು ಕಂಪನಿಯಲ್ಲಿ ಮದನ್ ಮಾಡಿದ ಕೋಟ್ಯಾಂತರ ರೂಪಾಯಿ ವಂಚನೆಯನ್ನು ವೀರೇಂದ್ರನ ಮುಂದೆ ಬಯಲು ಮಾಡುತ್ತಾನೆ. ಇದರಿಂದ ಕೋಪಗೊಂಡ ವೀರೇಂದ್ರ, ಮಗನನ್ನು ಸಮರ್ಥಿಸಿಕೊಳ್ಳಲು ಬಂದ ಅಕ್ಕ ವಿಜಯಾಂಬಿಕೆ ವಿರುದ್ಧವೇ ಗುಡುಗಿ ಎಲ್ಲರಿಗೂ ಆಘಾತ ನೀಡುತ್ತಾನೆ.
Read Full Story

02:32 PM (IST) Oct 26

ಬಲೂಚಿಸ್ತಾನ ಪ್ರತ್ಯೇಕ ದೇಶ ಎಂದು ಕರೆದಿದ್ದಕ್ಕೆ ಸಲ್ಮಾನ್ ಖಾನ್‌ರನ್ನ ಭಯೋತ್ಪಾದಕ ಎಂದು ಘೋಷಿಸಿದ ಪಾಕಿಸ್ತಾನ!

Salman Khan Balochistan controversy: ಸೌದಿ ಅರೇಬಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಸಲ್ಮಾನ್ ಖಾನ್, ಬಲೂಚಿಸ್ತಾನವನ್ನು ಪ್ರತ್ಯೇಕ ದೇಶ ಎಂದು ಉಲ್ಲೇಖಿಸಿದ್ದಾರೆ. ಈ ಹೇಳಿಕೆಯಿಂದ ಕೆರಳಿದ ಪಾಕಿಸ್ತಾನದ ಶಹಬಾಜ್ ಸರ್ಕಾರ, ಸಲ್ಮಾನ್ ಅವರನ್ನು ಭಯೋತ್ಪಾದಕ ಎಂದು ಘೋಷಿಸಿದೆ.

Read Full Story

02:26 PM (IST) Oct 26

ಚಳಿಗಾಲದ ವೇಳಾಪಟ್ಟಿ ಜಾರಿಗೊಳಿಸಿ ಮಂಗಳೂರು ಅಂತರಾಷ್ಟ್ರೀಯ ಏರ್‌ಪೋರ್ಟ್, ವಿದೇಶಗಳಿಗೂ ಸಾಪ್ತಾಹಿಕ ಸಂಚಾರ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅ. 26 ರಿಂದ ಜಾರಿಗೆ ಬರುವ ಚಳಿಗಾಲದ ಹೊಸ ವಿಮಾನಯಾನ ವೇಳಾಪಟ್ಟಿಯನ್ನು ಪ್ರಕಟಿಸಿದೆ.  ದೆಹಲಿಗೆ ಹೆಚ್ಚುವರಿ ದೈನಂದಿನ ವಿಮಾನ, ತಿರುವನಂತಪುರಂಗೆ ಹೊಸ ಸಂಚಾರ ಮತ್ತು ದಮಾಮ್, ದೋಹಾ, ಕುವೈತ್‌ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಸ್ಥಳಗಳಿಗೆ ವಿಮಾನ ಸೇರಿವೆ.

Read Full Story

02:20 PM (IST) Oct 26

ಸಿಡ್ನಿಯಲ್ಲಿ ಭಾರತೀಯರ ದೀಪಾವಳಿ ನೋಡಿ, ಬೆಂಕಿ ಬಿದ್ದಷ್ಟೇ ಉರಿದುಕೊಂಡು ಪೋಸ್ಟ್ ಹಾಕಿದ ವಿದೇಶಿ ಮಹಿಳೆ!

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾರತೀಯರ ದೀಪಾವಳಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಅಪಾಯಕಾರಿ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಇವರಿಗೆ ದೀಪಾವಳಿಗೆ ಸಾರ್ವತ್ರಿಕ ರಜೆ ಬೇಕಂತೆ ಇದೇನು ಭಾರತವೇ ಎಂದೂ ಪ್ರಶ್ನಿಸಿದ್ದಾರೆ. ಜೊತೆಗೆ, ದೀಪಾವಳಿಗೆ ಹಾಕುವ ಲೈಟಿಂಗ್ಸ್ ಕ್ರಿಸ್‌ಮಸ್‌ಗೆ ಏಕೆ ಹಾಕೊಲ್ಲ ಎಂದಿದ್ದಾರೆ.

Read Full Story

02:12 PM (IST) Oct 26

ಆನೇಕಲ್ ಬಳಿ ಭೀಕರ ದುರಂತ - ಕಂದಕಕ್ಕೆ ಉರುಳಿದ ಕಂಟೈನರ್, ಸ್ಥಳದಲ್ಲೇ ಇಬ್ಬರು ದುರ್ಮರಣ

ಆನೇಕಲ್ ತಾಲ್ಲೂಕಿನ ಉರಗನದೊಡ್ಡಿ ಬಳಿ ಇಳಿಜಾರು ರಸ್ತೆಯಲ್ಲಿ ಕಂಟೈನರ್ ಲಾರಿಯೊಂದು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದಿದೆ. ಈ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜಿಗಣಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Read Full Story

01:59 PM (IST) Oct 26

ಡಿಕೆಶಿಯ ಒಂದೇ ಮೀಂಟಿಂಗ್ ಗೆ ಹಾಡಿ ಹೊಗಳಿದ ಉದ್ಯಮಿ ಮೋಹನ್ ದಾಸ್ ಪೈ!

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳು ಇದೀಗ ಉದ್ಯಮಿಗಳ ಮೆಚ್ಚುಗೆಗೆ ಪಾತ್ರವಾಗಿವೆ. ಉದ್ಯಮಿ ಮೋಹನ್ ದಾಸ್ ಪೈ ಅವರಂತಹ ಪ್ರಮುಖರು, ಡಿಕೆಶಿ ಅವರ 'ನಾಗರಿಕರೊಂದಿಗೆ ನಡಿಗೆ' ಕಾರ್ಯಕ್ರಮವನ್ನು ಶ್ಲಾಘಿಸಿದ್ದಾರೆ.

Read Full Story

01:55 PM (IST) Oct 26

ದಾಂಡೇಲಿ - ಬೇಲಿ ದಾಟಿ ಸಾರ್ವಜನಿಕ ಪ್ರದೇಶಕ್ಕೆ ನುಗ್ಗಿದ ಬೃಹತ್ ಮೊಸಳೆ!

ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಹಳೇ ಪ್ರದೇಶದಲ್ಲಿ, ಕಾಳಿ ನದಿಯ ತೀರದಲ್ಲಿ ಅಳವಡಿಸಲಾಗಿದ್ದ ಸುರಕ್ಷತಾ ಬೇಲಿಯನ್ನು ಬೃಹತ್ ಮೊಸಳೆಯೊಂದು ದಾಟಿ ಬಂದಿದೆ. ಬಟ್ಟೆ ಒಗೆಯುವ ಸ್ಥಳದಲ್ಲಿ ಕೆಲಕಾಲ ವಿಶ್ರಾಂತಿ ಪಡೆದು ವಾಪಸ್ ನದಿಗೆ ತೆರಳಿದ ಈ ಘಟನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

Read Full Story

01:36 PM (IST) Oct 26

BBK 12 - ರಿಷಾ ಗೌಡ ನಡವಳಿಕೆ ಸರಿ ಇಲ್ಲ, ಬುದ್ಧಿಯೂ ಇಲ್ಲ- ತಲೆ ಮೇಲೆ ಹೊಡೆದಂತೆ ಮಾತಾಡಿದ ಜಾಹ್ನವಿ

Bigg Boss Kannada Season 12: ಕಿಚ್ಚ ಸುದೀಪ್‌ ಅವರು ಸಂಡೇ ವಿಥ್‌ ಸುದೀಪ ಎಪಿಸೋಡ್‌ನಲ್ಲಿ ಯಾರ ಮೇಲೆ ಏನು ಅಭಿಪ್ರಾಯ ಇದೆ ಎಂದು ತಲೆ ಮೇಲೆ ಹೊಡೆದಂತೆ ಹೇಳಿ ಎಂದಿದ್ದರು. ಅದರಂತೆ ಸ್ಪರ್ಧಿಗಳು ಪರಸ್ಪರ ಆರೋಪ ಮಾಡಿದ್ದಾರೆ. ಈ ಬಾರಿ ಮಹಿಳಾ ಮಣಿಗಳ ಮಧ್ಯೆ ಜಗಳ ಶುರುವಾಗಿದೆ.

 

Read Full Story

01:27 PM (IST) Oct 26

ಬೆಂಗಳೂರನ್ನು ಟ್ರೋಲ್ ಮಾಡಿದ ಉದ್ಯಮಿಗಳ ಮನೆಯಲ್ಲೇ ಡಿಕೆಶಿ ಮೀಟಿಂಗ್! ₹500 ಕೋಟಿ ವೆಚ್ಚದ ಪರಿಹಾರ!

ಬೆಂಗಳೂರಿನ ಮೂಲಭೂತ ಸೌಕರ್ಯ ಸಮಸ್ಯೆಗಳ ಕುರಿತು ಉದ್ಯಮಿಗಳ ಆಕ್ಷೇಪದ ನಂತರ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿರಣ್ ಮಜುಂದಾರ್ ಶಾ ಮತ್ತು ಮೋಹನ್‌ದಾಸ್ ಪೈ ಸೇರಿ ಪ್ರಮುಖರೊಂದಿಗೆ ಸಭೆ ನಡೆಸಿದರು.  ರಸ್ತೆ ಗುಂಡಿ, ಕಸ ವಿಲೇವಾರಿ, ಮತ್ತು ಸಂಚಾರ ದಟ್ಟಣೆ ನಿವಾರಣೆಗೆ ಕ್ರಿಯಾ ಯೋಜನೆ ರೂಪಿಸಲಾಯಿತು.

Read Full Story

01:25 PM (IST) Oct 26

ಹಸುಗಳಿರೋ ಜಾಗದಲ್ಲಿ ಭೂಕಂಪವಾದ್ರೆ ಏನಾಗುತ್ತೆ? ದುರ್ಗಾ ಪ್ರಶ್ನೆಗೆ ಉತ್ತರ ಏನು?

Naa Ninna Bidalaare serial: 'ನಾ ನಿನ್ನ ಬಿಡಲಾರೆ' ಸೀರಿಯಲ್ ಖ್ಯಾತಿಯ ರಿಷಿಕಾ, ಶೂಟಿಂಗ್ ಬಿಡುವಿನಲ್ಲಿ ಸಹ-ಕಲಾವಿದರಿಗೆ "ಹಸುಗಳಿರೋ ಜಾಗದಲ್ಲಿ ಭೂಕಂಪವಾದ್ರೆ ಏನಾಗುತ್ತೆ?" ಎಂದು ತಮಾಷೆಯ ಒಗಟು ಕೇಳಿದ್ದಾರೆ.. ಈ ತಮಾಷೆಯ ಕ್ಷಣದ ವಿಡಿಯೋ ವೈರಲ್ ಆಗಿದೆ.

Read Full Story

01:23 PM (IST) Oct 26

ಕೊಪ್ಪಳ - ಗಂಗಾವತಿ ಬಿಜೆಪಿ ಮುಖಂಡನ ಹತ್ಯೆ ಪ್ರಕರಣ - ಮಾಸ್ಟರ್ ಮೈಂಡ್ ರವಿ ಬಂಧನ

ಗಂಗಾವತಿಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕುರುಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಲೆ ನಡೆದ 19 ದಿನಗಳ ಬಳಿಕ ಪೊಲೀಸರು ಪ್ರಮುಖ ಸೂತ್ರಧಾರಿಗಳಾದ ರವಿ ಹಾಗೂ ಗೌಳಿ ಗಂಗಾಧರ ಅವರನ್ನು ಬಂಧಿಸಿದ್ದಾರೆ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ನಡೆದ ಈ ಕೊಲೆಗೆ ಸಂಚು ರೂಪಿಸಿದ್ದರು

Read Full Story

01:00 PM (IST) Oct 26

Bigg Boss ಮನೆಗೆ ಬರೋಕೂ ಮುನ್ನ ಮುಂಬೈನಲ್ಲಿ ಮನೆ ಖರೀದಿಸಿರೋ 24 ವರ್ಷದ ರಕ್ಷಿತಾ ಶೆಟ್ಟಿ; ಫೋಟೋಗಳಿವು

Bigg Boss Rakshita Shetty New Home: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಅವರು ಭಾಗವಹಿಸಿದ್ದು, ಅನೇಕರ ಫೇವರಿಟ್‌ ಆಗಿದ್ದಾರೆ. ರಕ್ಷಿತಾ ಶೆಟ್ಟಿ ಅವರು ಮುಂಬೈನಲ್ಲಿ ಸ್ವಂತ ಮನೆ ಹೊಂದಿದ್ದಾರೆ ಎಂದರೆ ನಂಬ್ತೀರಾ? ಇವರ ಹೊಸ ಮನೆಯ ಫೋಟೋಗಳಿವು!

 

Read Full Story

12:51 PM (IST) Oct 26

ಇಂದು ಮಾಲಾ ಹುಟ್ಟು ಹಬ್ಬ, ನಿನ್ನೆ BMTC ಬಸ್‌ಗೆ ಬಲಿ! ಸಂಭ್ರಮದ ಮನೆಯಲ್ಲೀಗ ಕಣ್ಣೀರು, ನೋವು!

Woman dies on her birthday: ಬೆಂಗಳೂರಿನ ವಿಜಯನಗರದಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿ ಹೊಡೆದು 58 ವರ್ಷದ ಮಾಲಾ ಎಂಬ ಮಹಿಳೆ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮರುದಿನವೇ ಅವರ ಹುಟ್ಟುಹಬ್ಬವಿದ್ದು, ಸಂಭ್ರಮಿಸಬೇಕಿದ್ದ ಕುಟುಂಬದಲ್ಲಿ ಇದೀಗ ಶೋಕ ಮಡುಗಟ್ಟಿದೆ.

Read Full Story

12:28 PM (IST) Oct 26

ಕೋಲಾರದಲ್ಲಿ RSS ಪಥಸಂಚಲನ; ಮಾಲೂರಿನ ಬೀದಿ ಬೀದಿಗಳಲ್ಲಿ ರಾರಾಜಿಸುತ್ತಿವೆ ಕೇಸರಿ ಧ್ವಜಗಳು!

ಆರ್‌ಎಸ್‌ಎಸ್ ತನ್ನ ಸಂಘ ಶತಾಬ್ದಿ ವರ್ಷದ ಪ್ರಯುಕ್ತ ಕೋಲಾರದ ಮಾಲೂರಿನಲ್ಲಿ ಬೃಹತ್ ಪಥಸಂಚಲನವನ್ನು ಆಯೋಜಿಸಿದೆ. 5 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸುವ ನಿರೀಕ್ಷೆಯಿದ್ದು, ಈ ಹಿನ್ನೆಲೆಯಲ್ಲಿ ಇಡೀ ನಗರವು ಕೇಸರಿಮಯವಾಗಿ ಮಾರ್ಪಟ್ಟಿದೆ ಮತ್ತು ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
Read Full Story

12:19 PM (IST) Oct 26

Lakshmi Nivasa ಸೈಕೋ ಜಯಂತ್​ನ ಕಟ್ಟಿ ಹಾಕಿ ಟಾರ್ಚರ್​ ಕೊಡ್ತಿದ್ದಾಳೆ ಈ ಸುಂದರಿ! ಯಾರಿವಳು?

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ, ಪತ್ನಿ ಜಾಹ್ನವಿ ಬದುಕಿರುವ ಸತ್ಯ ತಿಳಿದ ಜಯಂತ್ ಪ್ರತೀಕಾರಕ್ಕೆ ಸಿದ್ಧನಾಗಿದ್ದಾನೆ. ಆದರೆ, ಅನಿರೀಕ್ಷಿತವಾಗಿ ಕಾಣಿಸಿಕೊಂಡ ಸುಂದರಿಯೊಬ್ಬಳು ಜಯಂತ್‌ನನ್ನು ಕಟ್ಟಿಹಾಕಿ ಟಾರ್ಚರ್ ನೀಡುತ್ತಾಳೆ. ಯಾರೀಕೆ?

Read Full Story

12:03 PM (IST) Oct 26

ಮದುವೆಯಾದ ಮಹಿಳೆ ಹುಡುಕಿಕೊಂಡು ಬಂದ ಮಹಾರಾಷ್ಟ್ರ ಯುವಕನನ್ನು ಹೊಡೆದುಕೊಂದ ಬೀದರ್ ಮಂದಿ!

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಾಗನಪಲ್ಲಿಯಲ್ಲಿ, ಅಕ್ರಮ ಸಂಬಂಧದ ಶಂಕೆಯ ಮೇಲೆ ಮಹಾರಾಷ್ಟ್ರ ಮೂಲದ ಯುವಕನನ್ನು ಮಹಿಳೆಯ ಕುಟುಂಬಸ್ಥರು ಕೊಲೆ ಮಾಡಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
Read Full Story

11:55 AM (IST) Oct 26

ಕಲ್ಲಡ್ಕ ಪ್ರಭಾಕರ್ ಭಟ್ ಕಾನೂನಿಗಿಂತ ದೊಡ್ಡವರೇ? ಆರೆಸ್ಸೆಸ್ ದೇವರಿಗಿಂತಲೂ ದೊಡ್ಡದೇ? ಚಿತ್ತಾಪುರ ಪಥಸಂಚಲನ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಸಚಿವ ಪ್ರಿಯಾಂಕ್ ಖರ್ಗೆಯವರು ಆರೆಸ್ಸೆಸ್ ಪಥಸಂಚಲನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಎಚ್ಚರಿಕೆ ನೀಡಿದ್ದು, ಆರೆಸ್ಸೆಸ್‌ನ ದೇಣಿಗೆ ಮೂಲವನ್ನು ಬಹಿರಂಗಪಡಿಸುವಂತೆ ಸವಾಲು ಹಾಕಿದ್ದಾರೆ.
Read Full Story

More Trending News