MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಕೊನೆಗೂ ಪ್ರೇಕ್ಷಕರ ಆಸೆ ಈಡೇರಿಸಿದ ಶ್ರಾವಣಿ ಸುಬ್ರಮಣ್ಯ; ಇದಕ್ಕೆ ಇಷ್ಟು ವರ್ಷ ಬೇಕಾಯ್ತಾ?

ಕೊನೆಗೂ ಪ್ರೇಕ್ಷಕರ ಆಸೆ ಈಡೇರಿಸಿದ ಶ್ರಾವಣಿ ಸುಬ್ರಮಣ್ಯ; ಇದಕ್ಕೆ ಇಷ್ಟು ವರ್ಷ ಬೇಕಾಯ್ತಾ?

'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿಯಲ್ಲಿ, ಸುಬ್ಬು ಕಂಪನಿಯಲ್ಲಿ ಮದನ್ ಮಾಡಿದ ಕೋಟ್ಯಾಂತರ ರೂಪಾಯಿ ವಂಚನೆಯನ್ನು ವೀರೇಂದ್ರನ ಮುಂದೆ ಬಯಲು ಮಾಡುತ್ತಾನೆ. ಇದರಿಂದ ಕೋಪಗೊಂಡ ವೀರೇಂದ್ರ, ಮಗನನ್ನು ಸಮರ್ಥಿಸಿಕೊಳ್ಳಲು ಬಂದ ಅಕ್ಕ ವಿಜಯಾಂಬಿಕೆ ವಿರುದ್ಧವೇ ಗುಡುಗಿ ಎಲ್ಲರಿಗೂ ಆಘಾತ ನೀಡುತ್ತಾನೆ.

2 Min read
Mahmad Rafik
Published : Oct 26 2025, 02:43 PM IST
Share this Photo Gallery
  • FB
  • TW
  • Linkdin
  • Whatsapp
15
 ಶ್ರಾವಣಿ ಸುಬ್ರಮಣ್ಯ ಸೀರಿಯಲ್‌
Image Credit : Zee Kannada

ಶ್ರಾವಣಿ ಸುಬ್ರಮಣ್ಯ ಸೀರಿಯಲ್‌

ಸಮಯ ಬದಲಾದ್ರೂ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ನ ಕಟ್ಟಾ ಅಭಿಮಾನಿಗಳು ತಪ್ಪದೇ ಪ್ರತಿಯೊಂದು ಸಂಚಿಕೆಯನ್ನು ಮಿಸ್ ಮಾಡದೇ ನೋಡುತ್ತಿದ್ದಾರೆ. ಇಷ್ಟು ದಿನ ಕಾಯ್ತಿದ್ದ ದೃಶ್ಯದ ಪ್ರೋಮೋ ಬಿಡುಗಡೆಯಾಗಿದ್ದು, ಪ್ರೇಕ್ಷಕರು ಫುಲ್ ಖುಷಿಯಾಗಿದ್ದಾರೆ.

25
ಅಕ್ಕ ವಿಜಯಾಂಬಿಕೆ
Image Credit : Zee Kannada

ಅಕ್ಕ ವಿಜಯಾಂಬಿಕೆ

ವೀರೇಂದ್ರನಿಗೆ ಅಕ್ಕ ವಿಜಯಾಂಬಿಕೆ ಅಂದ್ರೆ ದೇವರು. ಅಕ್ಕ ಹೇಳಿದ್ದಕ್ಕೆ ತಲೆಯಾಡಿಸುವ ವೀರು ಅಕ್ಕನ ವಿರುದ್ಧವೇ ಗುಡುಗಿದ್ದಾನೆ. ಕಂಪನಿಯಲ್ಲಿ ಮದನ್ ಮಾಡಿದ ಕಳ್ಳಾಟವನ್ನು ಸುಬ್ಬು ಪತ್ತೆ ಮಾಡಿದ್ದಾನೆ. ತನ್ನ ಕಂಪನಿ ನಷ್ಟದಲ್ಲಿರೋದ್ದಕ್ಕೆ ಕಾರಣವಾಗಿರುವ ಮದನ್‌ಗೆ ವೀರು ಕ್ಲಾಸ್ ತೆಗೆದುಕೊಂಡಿದ್ದಾನೆ.

Related Articles

Related image1
Shravani Subramanya Serial: ಅಪ್ಪ ಕಟ್ಟಿದ ತಾಳಿ ಮಗಳು ಧರಿಸ್ಬೋದಾ? 'ಶ್ರಾವಣಿ-ಸುಬ್ರಹ್ಮಣ್ಯ' ನೋಡಿ ನೆಟ್ಟಿಗರು ಶಾಕ್​!
Related image2
ಮಗನಿಂದಲೇ ವಿಜಯಾಂಬಿಕೆಗೆ ಶಾಕ್ ಟ್ರೀಟ್ಮೆಂಟ್: ಬದುಕುಳಿದ ಸಾವಿತ್ರಿಗೆ ಸತ್ಯ ದರ್ಶನ ಆಗುತ್ತಾ?
35
ಸತ್ಯ ಹೇಳಿದ ಸುಬ್ಬು
Image Credit : Zee Kannada

ಸತ್ಯ ಹೇಳಿದ ಸುಬ್ಬು

ಕಂಪನಿ ನಷ್ಟದಲ್ಲಿದ್ದು, ಯಾವ ಲೆಕ್ಕವೂ ಟ್ಯಾಲಿ ಆಗುತ್ತಿಲ್ಲ. ನೀವೇನೋ ಮದನ್ ಅವರನ್ನು ಕಂಪನಿಯ ಸಿಇಓ ಮಾಡಿದ್ರಿ. ಮದನ್ ಅವರು ಟ್ಯಾಕ್ಸ್ ಸಹ ಕಟ್ಟಿಲ್ಲ. ಮೂರ್ನಾಲ್ಕು ನೋಟಿಸ್ ಬಂದಿದ್ರೂ ಅದನ್ನು ಚೆಕ್ ಮಾಡಿಲ್ಲ. ಇಲ್ಲಿರೋ ಲೆಕ್ಕಕ್ಕೂ ನಿಮಗೂ ನೀಡಿರುವ ಲೆಕ್ಕವೇ ಬೇರೆಯಾಗಿದೆ. 

ಒಂದರಿಂದ ಒಂದೂವರೆ ಕೋಟಿಯಷ್ಟು ನಷ್ಟವಾಗಿದ್ದು, ಕಂಪನಿ ಅಕೌಂಟ್‌ನಿಂದ ಲಕ್ಷ ಲಕ್ಷ ಹಣ ಡ್ರಾ ಆಗಿದೆ. ಕೆಲಸಗಾರರಿಗೂ ಸರಿಯಾದ ಸಂಬಳ ನೀಡಿಲ್ಲ. ಕಸ್ಟಮರ್ಸ್ ಮೇಲ್‌ ಗಳಿಗೂ ಪ್ರತಿಕ್ರಿಯೆ ನೀಡದ್ದಕ್ಕೆ ದೂರು ದಾಖಲಾಗಿದೆ ಎಂದು ಎಲ್ಲಾ ವಿಷಯವನ್ನು ವೀರೇಂದ್ರನಿಗೆ ಸುಬ್ಬು ತಿಳಿಸಿದ್ದಾನೆ.

45
ಮದನ್ ಮೇಲೆ ಪೈಲ್ ಎಸೆದ ವೀರು
Image Credit : Zee Kannada

ಮದನ್ ಮೇಲೆ ಪೈಲ್ ಎಸೆದ ವೀರು

ಸತ್ಯ ತಿಳಿಯುತ್ತಲೇ ಕೋಪಗೊಂಡ ವೀರೇಂದ್ರ, ಫೈಲ್ ತೆಗೆದುಕೊಂಡು ಮದನ್ ಮೇಲೆ ಎಸೆದಿದ್ದಾನೆ. ಏನಿದು ಎಲ್ಲಾ? ಯಾಕೆ ಹೀಗೆ ಮಾಡಿದೆ ಎಂದು ಪ್ರಶ್ನಿಸಿದ್ದಾನೆ. ಈ ವೇಳೆಗೆ ಮಗ ಮದನ್ ರಕ್ಷಣೆಗೆ ವಿಜಯಾಂಬಿಕಾ ದೌಡಾಯಿಸಿದ್ದಾಳೆ. ಕಂಪನಿ ನಷ್ಟದಲ್ಲಿದ್ದು, ಎಲ್ಲಾ ವಿಷಯ ಮಚ್ಚಿಟ್ಟು ನನಗೆ ಮೋಸ ಮಾಡಿದ್ದಾನೆ ಎಂದು ಅಕ್ಕ ವಿಜಯಾಂಬಿಕೆಗೆ ವೀರೇಂದ್ರ ಹೇಳಿದ್ದಾನೆ.

ಇದನ್ನೂ ಓದಿ: ಶ್ರಾವಣಿ ಸುಬ್ರಹ್ಮಣ್ಯ ಮಧ್ಯೆ ರೊಮ್ಯಾನ್ಸ್ ಶುರುವಾಯ್ತು … ವೀಕ್ಷಕರ ಎದೆಯಲ್ಲಿ ಕಚಗುಳಿ ಇಟ್ಟಂಗಾಯ್ತು

55
ಗುಡುಗಿದ ವೀರೇಂದ್ರ
Image Credit : Zee Kannada

ಗುಡುಗಿದ ವೀರೇಂದ್ರ

ಮದನ್ ಒಳ್ಳೆಯವನು, ಹಾಗೆಲ್ಲಾ ಮಾಡಲ್ಲ. ನಾವು ಕುಳಿತು ಮಾತನಾಡೋಣ. ಮದನ್ ನನ್ನ ರಕ್ತ. ಆತ ಎಂದಿಗೂ ನಿನಗೆ ಮೋಸ ಮಾಡಲ್ಲ. ನೀನು ಯಾರದ್ದೋ ಮಾತು ಕೇಳಿಕೊಂಡು ಮಾತನಾಡುತ್ತಿದ್ದೀಯಾ ಎಂದು ವಿಜಯಾಂಬಿಕಾ ಹೇಳುತ್ತಾಳೆ. ಇದರಿಂದ ಕೋಪಗೊಂಡ ವೀರು, ಅಕ್ಕಾ ಸುಮ್ನಿರು ಎಂದು ಗುಡುಗಿದ್ದಾನೆ. ತನ್ನ ವಿರುದ್ಧವೇ ಸೋದರ ವೀರು ಮಾತನಾಡಿದ್ದನ್ನು ಕೇಳಿ ವಿಜಯಾಂಬಿಕಾ ಶಾಕ್ ಆಗಿದ್ದಾಳೆ.\

ಇದನ್ನೂ ಓದಿ: ಈ ಶ್ರಾವಣಿ ಹಿಂಗ್ಯಾಕೆ? ಫಸ್ಟ್‌ನೈಟ್‌ನಲ್ಲಿ ಹೇಳಿದ್ದು ಮರೆತು ಹೋಯ್ತಾ? ಮಹಾ ರಸಿಕನಾದ ಸುಬ್ಬು

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಶ್ರಾವಣಿ ಸುಬ್ರಮಣ್ಯ
ಜೀ ಕನ್ನಡ
ಕನ್ನಡ ಧಾರಾವಾಹಿಗಳ ಟಿಆರ್‌ಪಿ
ಮನರಂಜನಾ ಸುದ್ದಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved