LIVE NOW
Published : Jan 25, 2026, 04:58 AM ISTUpdated : Jan 25, 2026, 11:25 PM IST

Karnataka News Live: ನಟಿಯರು ಬೆಳ್ಳಿತೆರೆಯ ಮಿಂಚಲು ಸೀಕ್ರೆಟ್ ಹೇಳಿದ ರಶ್ಮಿಕಾ ಮಂದಣ್ಣ.. ನೇರ ಮಾತು ಹೊಸ ವಿವಾದ ಹುಟ್ಟುಹಾಕುತ್ತಾ?

ಸಾರಾಂಶ

ಹಾಸನ: ‘ಸ್ವಲ್ಪ ಕಾಯಿರಿ, ನಮಗೂ ಕಾಲ ಬರುತ್ತೆ. ನಾವು ಯಾರೆಂದು ಈ ಸರ್ಕಾರಕ್ಕೆ ಮತ್ತೆ ತೋರಿಸುತ್ತೇವೆ. ಆ ನಂಬಿಕೆ ನನಗಿದೆ’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದ್ದಾರೆ. ಜೆಡಿಎಸ್‌ ಪಕ್ಷಕ್ಕೆ 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ನಗರದ ಹೊರವಲಯದಲ್ಲಿ ಶನಿವಾರ ನಡೆದ ಜೆಡಿಎಸ್‌ ಜನತಾ ಸಮಾವೇಶದಲ್ಲಿ ಮಾತನಾಡಿದ ದೇವೇಗೌಡ, ‘ರಾಜ್ಯದ ಕಾಂಗ್ರೆಸ್‌ ಸರ್ಕಾರ ಎಸ್‌ಐಟಿ (ವಿಶೇಷ ತನಿಖಾ ತಂಡ) ಮೂಲಕ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಹಿಂದೆ ನನ್ನ ಮನೆಯಲ್ಲಿ ನನ್ನ ಪುತ್ರ ಎಚ್.ಡಿ.ರೇವಣ್ಣ ಇದ್ದಾಗ ಎಸ್‌ಐಟಿ ಅಧಿಕಾರಿಗಳು ಬಂದು ಯಾವುದೋ ಕೇಸಿನ ಸಂಬಂಧ ರೇವಣ್ಣ ಅವರನ್ನು ಅರೆಸ್ಟ್‌ ಮಾಡುತ್ತಿದ್ದೇವೆ ಎಂದು ಹೇಳಿ ಅವರನ್ನು ಕರೆದೊಯ್ದರು. ಆಗ ನಾನೂ ಕೂಡ ಅಲ್ಲಿಯೇ ಇದ್ದೆ. ಈಗ ಅದೇ ಸರ್ಕಾರ ರೇವಣ್ಣ ಅವರನ್ನು ಬಂಧಿಸಿದ ಎಸ್‌ಐಟಿ ಅಧಿಕಾರಿಗಳಿಗೆ ಉಡುಗೊರೆ ರೂಪದಲ್ಲಿ ಲಕ್ಷಾಂತರ ರುಪಾಯಿಗಳನ್ನು ನೀಡಿದೆ’ ಎಂದು ಆರೋಪಿಸುತ್ತಾ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿಯೊಂದನ್ನು ಜನರ ಮುಂದಿಟ್ಟರು.

 

11:25 PM (IST) Jan 25

ನಟಿಯರು ಬೆಳ್ಳಿತೆರೆಯ ಮಿಂಚಲು ಸೀಕ್ರೆಟ್ ಹೇಳಿದ ರಶ್ಮಿಕಾ ಮಂದಣ್ಣ.. ನೇರ ಮಾತು ಹೊಸ ವಿವಾದ ಹುಟ್ಟುಹಾಕುತ್ತಾ?

ದಕ್ಷಿಣ ಭಾರತದಿಂದ ಬಾಲಿವುಡ್‌ವರೆಗೆ ತನ್ನ ನಟನಾ ಚಾತುರ್ಯದಿಂದಲೇ 'ನ್ಯಾಷನಲ್ ಕ್ರಶ್' ಆಗಿ ಹೊರಹೊಮ್ಮಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ, ಈಗ ಕೇವಲ 'ಬಬ್ಲಿ' ಪಾತ್ರಗಳಿಗೆ ಸೀಮಿತವಾಗದೆ ವಿಭಿನ್ನ ಹಾದಿ ತುಳಿಯುತ್ತಿದ್ದಾರೆ. ಇದೀಗ ರಶ್ಮಿಕಾ ಹೊಸ ಹೇಳಿಕೆ ಕೊಟ್ಟಿದ್ದಾರೆ. ಈ ಸ್ಟೋರಿ ನೋಡಿ..

Read Full Story

10:52 PM (IST) Jan 25

ಕೊಪ್ಪಳ - ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಭಾಷಣದ ವೇಳೆ ಕಲ್ಲೆಸೆತ ಹುಚ್ಚ, ತಪ್ಪಿದ ಅನಾಹುತ

ಕೊಪ್ಪಳ ಜಿಲ್ಲೆಯ ಬೆಣಕಲ್ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಅವರ ಮೇಲೆ ಕಲ್ಲೆಸೆಯಲಾಗಿದೆ. ಈ ಘಟನೆಯಿಂದ ಸಭೆಯಲ್ಲಿ ಆತಂಕ ಸೃಷ್ಟಿಯಾಗಿತ್ತು, ಆದರೆ ತನಿಖೆಯ ನಂತರ ಕಲ್ಲು ಎಸೆದ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ.
Read Full Story

10:30 PM (IST) Jan 25

ಯಾದಗಿರಿ ಪೊಲೀಸರ ಮೆಗಾ ಆಪರೇಷನ್ - 57 ಬೈಕ್‌ಗಳ ಸಮೇತ ಅಂತರರಾಜ್ಯ ಕಳ್ಳನ ಬಂಧನ!

ಯಾದಗಿರಿ ಪೊಲೀಸರು ಅಂತರರಾಜ್ಯ ಬೈಕ್ ಕಳ್ಳತನ ಜಾಲವನ್ನು ಭೇದಿಸಿದ್ದು, ಹುಣಸಗಿ ಮೂಲದ ಮಾನಪ್ಪ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯು ಶೋರೂಮ್ ಹೆಸರಲ್ಲಿ ಕದ್ದ ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದು, ಈತನಿಂದ 57 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Read Full Story

09:31 PM (IST) Jan 25

Republic day 2026 - ಮಾಣಿಕ್ ಷಾ ಮೈದಾನದ ಸುತ್ತಮುತ್ತ ಸಂಚಾರ ಮಾರ್ಪಾಡು, ಪಾರ್ಕಿಂಗ್ ನಿಷೇಧ!

ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 2026ರ ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಮೈದಾನದ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ಸಂಚಾರವನ್ನು ನಿರ್ಬಂಧ, ಪರ್ಯಾಯ ವ್ಯವಸ್ಥೆ

Read Full Story

09:07 PM (IST) Jan 25

ಮಸ್ಕಿಯಲ್ಲಿ ಬೀದಿನಾಯಿಗಳ ಅಟ್ಟಹಾಸ - ಒಂದೇ ದಿನ, ಇಬ್ಬರು ಮಕ್ಕಳು ಸೇರಿ 10 ಜನ ಆಸ್ಪತ್ರೆಗೆ ದಾಖಲು!

stray dog attack in Maski ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಬೀದಿನಾಯಿಗಳು ಒಂದೇ ದಿನದಲ್ಲಿ ಇಬ್ಬರು ಮಕ್ಕಳು ಸೇರಿದಂತೆ 10 ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿವೆ. ಈ ಘಟನೆಯಿಂದಾಗಿ ಸ್ಥಳೀಯರಲ್ಲಿ ಆತಂಕ ಮನೆಮಾಡಿದ್ದು, ಪುರಸಭೆಯ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Read Full Story

08:47 PM (IST) Jan 25

ಹುಟ್ಟೂರಲ್ಲಿ 'ರಾಮ' ಮಂದಿರ ಉದ್ಘಾಟಿಸಿದ ಡಿಕೆಶಿ - ಜಿಬಿಐಟಿ ಸಮರಕ್ಕೆ ಹೆಚ್‌ಡಿಕೆಗೆ ಓಪನ್ ಚಾಲೆಂಜ್ ನೀಡಿದ 'ಬಂಡೆ'!

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ಹುಟ್ಟೂರಾದ ದೊಡ್ಡ ಆಲಹಳ್ಳಿಯಲ್ಲಿ ಶ್ರೀರಾಮ ಮಂದಿರವನ್ನು ಉದ್ಘಾಟಿಸಿದರು. ಈ ವೇಳೆ ಭಾವುಕರಾಗಿ ಮಾತನಾಡಿದ ಅವರು, ಸಂಕಷ್ಟದ ಸಮಯದಲ್ಲಿ ಜೊತೆಗಿದ್ದ ಜನರೇ ನನ್ನ ಆಸ್ತಿ ಎಂದರಲ್ಲದೆ, ಜಿಬಿಐಟಿ ವಿಚಾರವಾಗಿ ಹೆಚ್.ಡಿ. ಕುಮಾರಸ್ವಾಮಿ ಅವರ ಸವಾಲು ಸ್ವೀಕರಿಸಿದರು.

Read Full Story

07:06 PM (IST) Jan 25

Padma Awards 2026 - ಶತಾವಧಾನಿ ಡಾ. ಆರ್ ಗಣೇಶರು ಇನ್ನು 'ಪದ್ಮಭೂಷಣ'

ಲೇಖಕರು ಶತಾವಧಾನಿ ಗಣೇಶರನ್ನು ಜ್ಞಾನದ ಬೆಳಕಿಗೆ ಹೋಲಿಸುತ್ತಾರೆ, ಅವರ ಮಾರ್ಗದರ್ಶನದಿಂದ ಭಾರತೀಯ ಪರಂಪರೆ ಮತ್ತು ಕಲೆಗಳ ಬಗ್ಗೆ ತಮ್ಮ ಅರಿವು ಸಮೃದ್ಧವಾಗಿದೆ ಎಂದು ಹೇಳುತ್ತಾರೆ. ಗಣೇಶರ ಪಾಂಡಿತ್ಯವ ಕಲ್ಪವೃಕ್ಷಕ್ಕೆ ಹೋಲಿಸುತ್ತಾ, ಅವರಿಗೆ ಸಂದ 'ಪದ್ಮಭೂಷಣ' ಪ್ರಶಸ್ತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

Read Full Story

05:56 PM (IST) Jan 25

ನಾನೂ ಕಾಂಪೌಂಡ್ ಮೇಲೆ ಕುಳಿತು ಗಲಾಟೆ ಮಾಡಿದವನೇ! ಗುಂಡ್ಲುಪೇಟೆಯಲ್ಲಿ ಕಾಲೇಜು ಜೀವನದ ತುಂಟಾಟ ನೆನೆದ ಬಿಎಲ್ ಸಂತೋಷ್

ಗುಂಡ್ಲುಪೇಟೆಯ ಶಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ತಮ್ಮ ವಿದ್ಯಾರ್ಥಿ ಜೀವನದ ನೆನಪುಗಳನ್ನು ಹಂಚಿಕೊಂಡರು.

Read Full Story

05:36 PM (IST) Jan 25

ಪೌರಾಯುಕ್ತೆಗೆ ಜೀವ ಬೆದರಿಕೆ ಪ್ರಕರಣ - ಹಾಸನ ಮಂಗಳೂರು ಸಮೀಪದಲ್ಲಿ ಕಾಂಗ್ರೆಸ್ ನಾಯಕ ರಾಜೀವ್ ಗೌಡ ಕಾರು ಪತ್ತೆ

ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನಿಗಾಗಿ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ. ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ನಂತರ ಪರಾರಿಯಾಗಿರುವ ಆರೋಪಿಯ ಕಾರು ಹಾಸನ-ಮಂಗಳೂರು ಮಾರ್ಗದ ಬಳಿ ಪತ್ತೆಯಾಗಿದೆ.  

Read Full Story

05:16 PM (IST) Jan 25

ಬಾಯ್ತುಂಬ ಅಕ್ಕಾ ಎನ್ನುವ ಬಾಯಿಂದ ಇಂಥ ಮಾತಾ? 'ಬಲತ್ಕಾರ ಸಣ್ಣ ಘಟನೆ' ಎಂದ ಸಂಸದ ಹಿಟ್ನಾಳ್ ವಿರುದ್ಧ ಬಿಜೆಪಿ ಎಂಎಲ್‌ಸಿ ವಾಗ್ದಾಳಿ

ವಿದೇಶಿ ಮಹಿಳೆ ಮೇಲಿನ ಅತ್ಯಾಚಾರವನ್ನು 'ಸಣ್ಣ ಘಟನೆ' ಎಂದು ಕರೆದ ಸಂಸದ ರಾಜಶೇಖರ್ ಹಿಟ್ನಾಳ್ ಅವರ ಹೇಳಿಕೆಗೆ ಬಿಜೆಪಿ ಎಂಎಲ್‌ಸಿ ಹೇಮಲತಾ ನಾಯಕ್ ತೀವ್ರ ಆಕ್ರೋಶ. ಇದು ಮಹಿಳಾ ಕುಲಕ್ಕೆ ಮಾಡಿದ ಅವಮಾನ, ಸಂಸದರು ತಕ್ಷಣ ಕ್ಷಮೆ ಕೇಳದಿದ್ದರೆ ಅವರ ಮನೆಗೆ ನುಗ್ಗಿ ಪ್ರತಿಭಟಿಸುವುದಾಗಿ ಎಚ್ಚರಿಕೆ

Read Full Story

05:10 PM (IST) Jan 25

ಕನ್ನಡ ಶಾಲೆಗಳಿಗೆ ಅನುದಾನ, ಕೆಪಿಎಸ್ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಬಗ್ಗೆ ಮಧು ಬಂಗಾರಪ್ಪರ ಮಹತ್ವದ ಘೋಷಣೆ

ಶಿವಮೊಗ್ಗದಲ್ಲಿ, ಸಚಿವ ಮಧು ಬಂಗಾರಪ್ಪ ಅವರು 1995ರಿಂದ ಅನುದಾನವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಕನ್ನಡ ಶಾಲೆಗಳಿಗೆ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಜೊತೆಗೆ, ಕೆಪಿಎಸ್ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಬಗ್ಗೆಯೂ ಅವರು ಘೋಷಿಸಿದ್ದಾರೆ.

Read Full Story

04:48 PM (IST) Jan 25

ರಾಜ್ಯ ರಾಜಕೀಯಕ್ಕೆ ರೀ HDK - ನನಗೆ ರಾಜಕೀಯ ಜನ್ಮ ನೀಡಿದ ನೆಲವೇ ನನ್ನ ಅಂತಿಮ ಆಯ್ಕೆ, ರಾಮನಗರದತ್ತ ಕುಮಾರಸ್ವಾಮಿ

ರಾಜಕೀಯದಿಂದ ದೂರ ಸರಿಯುವ ವದಂತಿಗಳಿಗೆ ತೆರೆ ಎಳೆದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ,  ರಾಮನಗರವೇ ತಮ್ಮ ಅಂತಿಮ ರಾಜಕೀಯ ನೆಲೆ ಎಂದಿರುವ ಅವರು, 2028ರಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Read Full Story

04:45 PM (IST) Jan 25

'ವಿದೇಶಿ ಮಹಿಳೆ ಮೇಲೆ ಬಲತ್ಕಾರ ಸಣ್ಣ ಘಟನೆ' ಹೇಳಿಕೆ ವಿವಾದ - ಅಂಜನಾದ್ರಿಗೆ ಲಿಂಕ್ ಮಾಡಿದ ಹಿಟ್ನಾಳ!

ಸಂಸದ ರಾಜಶೇಖರ್ ಹಿಟ್ನಾಳ್ ತಮ್ಮ 'ಅತ್ಯಾ೧ಚಾರ ಸಣ್ಣ ಕೊಲೆ' ಎಂಬ ವಿವಾದಾತ್ಮಕ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಹನುಮನ ಜನ್ಮಸ್ಥಳವಾದ ಅಂಜನಾದ್ರಿಯ ಪಾವಿತ್ರ್ಯತೆ ಕಾಪಾಡಲು ಈ ರೀತಿ ಹೇಳಿದ್ದಾಗಿ ಸ್ಪಷ್ಟನೆ ನೀಡಿದ್ದು, ಒಂದು ಘಟನೆಯನ್ನು ವೈಭವೀಕರಿಸಿದರೆ ಭಕ್ತರ ಮನಸ್ಸಿಗೆ ನೋವು ಆಗುತ್ತೆ ಎಂದರು.

Read Full Story

04:38 PM (IST) Jan 25

Amruthadhaare Serial - ಮಗನ ಜೊತೆ ಜಯದೇವ್‌ ಮನೆಗೆ ಬಂದ ಗೌತಮ್;‌ ರಣರೋಚಕ ಟ್ವಿಸ್ಟ್‌, ಮುಯ್ಯಿಗೆ ಮುಯ್ಯಿ!

Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಅಮ್ಮಮ್ಮ-ಮೊಮ್ಮಕ್ಕಳ ಸಮಾಗಮವಾಗಿದೆ. ಅಂದಹಾಗೆ ಕೇಡಿ ಜಯದೇವ್‌ಗೆ ಕೇಡುಗಾಲ ಶುರುವಾಗಿದೆ. ಹಾಗಾದರೆ ಏನಾಯ್ತು? ಜಯದೇವ್‌ ಕಥೆ ಏನಾಗಬಹುದು?

 

Read Full Story

04:12 PM (IST) Jan 25

Photos - ವಿದೇಶದಲ್ಲಿ‌ Anchor Anushree ಜನ್ಮದಿನ ಆಚರಿಸಿ, ವಿಶೇಷ ವಿಷಯ ಹಂಚಿಕೊಂಡ ಪತಿ ರೋಶನ್

Kannada Anchor Anushree: ನಿರೂಪಕಿ ಅನುಶ್ರೀ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮದುವೆ ಬಳಿಕ ಅವರಿಗೆ ಇದು ಮೊದಲ ಜನ್ಮದಿನದ ಸಂಭ್ರಮ. ವಿದೇಶದಲ್ಲಿ ಈ ಜೋಡಿ ಹುಟ್ಟುಹಬ್ಬವನ್ನು ಆಚರಿಸಿದೆ.

 

Read Full Story

04:07 PM (IST) Jan 25

ಚೋರ್ಲಾ ಘಾಟ್‌ನಲ್ಲಿ 400 ಕೋಟಿ ರೂ. ದರೋಡೆ, ಉದ್ಯಮಿ ಕಿಡ್ನಾಪ್, ಕರ್ನಾಟಕದ ದೇಗುಲವೊಂದಕ್ಕೆ ಲಿಂಕ್!

ಬೆಳಗಾವಿಯ ಚೋರ್ಲಾ ಘಾಟ್‌ನಲ್ಲಿ ನಡೆದ 400 ಕೋಟಿ ರೂ. ದರೋಡೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಗೋವಾದಿಂದ ಸಾಗಿಸುತ್ತಿದ್ದ ಕಂಟೇನರ್‌ಗಳನ್ನು ಅಪಹರಿಸಿ ಹಣ ದೋಚಲಾಗಿದ್ದು, ಪ್ರಸ್ತುತ ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದು, ಐವರನ್ನು ಬಂಧಿಸಲಾಗಿದೆ.

Read Full Story

03:48 PM (IST) Jan 25

ಒಳ್ಳೆಯದು ಮಾಡೋಕೆ ಹೋಗಿ ಕೇಸ್‌ ಹಾಕಿಸಿಕೊಂಡಿದ್ದ ಜೋಡಿ; 3 ವರ್ಷದ ಬಳಿಕ ಲವ್‌ ಮ್ಯಾರೇಜ್‌ ಒಪ್ಪಿದ ಪಾಲಕರು; Hassan Love story

tharesh and swathi love story: ಪ್ರೀತಿಸಿ, ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದ ಹಾಸನ ಮೂಲದ ಜೋಡಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಜನರಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಕೆಲಸದ ಬಗ್ಗೆ ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡು, ಕಂಪೆನಿಯಿಂದ ನೋಟೀಸ್‌ ಕೂಡ ಪಡೆದುಕೊಂಡರು. 

 

Read Full Story

02:19 PM (IST) Jan 25

ಭಾರತವನ್ನು ಬೆಂಗಳೂರು ಮುಖಾಂತರವೇ ಜಗತ್ತು ನೋಡುತ್ತಿದೆ, ದಾವೋಸ್ ಭೇಟಿ ಅನುಭವ ಬಿಚ್ಚಿಟ್ಟ ಡಿಕೆಶಿ

ಡಿಸಿಎಂ ಡಿಕೆಶಿ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಸಭೆಯಲ್ಲಿ ಭಾಗವಹಿಸಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ಭೇಟಿಯ ವೇಳೆ ಜಾಗತಿಕ ಹೂಡಿಕೆದಾರರು ವಿಶೇಷವಾಗಿ ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ತೋರಿದ ಆಸಕ್ತಿ, ರಾಜ್ಯದ ನಗರಾಭಿವೃದ್ಧಿಗೆ ದಾವೋಸ್‌ನಿಂದ ಕಲಿತ ಪಾಠಗಳ ಬಗ್ಗೆ ವಿವರಿಸಿದ್ದಾರೆ.

Read Full Story

02:12 PM (IST) Jan 25

ಗಿಲ್ಲಿ ನಟನ ಯಶಸ್ಸಿನ ಹಿಂದಿನ ಕಾಣದ ಕೈ ಯಾರದ್ದು? ನಾವು ಭಾಗ ಆಗೋದಿಲ್ಲ ಎಂದ Bigg Boss Kannada 12 Winner

Bigg Boss Kannada Season 12 Winner Gilli Nata: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋವನ್ನು ಗಿಲ್ಲಿ ನಟ ಗೆದ್ದಾಗಿದೆ, ಆದರೆ ಗಿಲ್ಲಿ ನಟ ಅವರು ಮೂರು ತಿಂಗಳು ಒಳಗಡೆ ಇದ್ದಾಗ, ಅವರ ಕುಟುಂಬ, ಸ್ನೇಹಿತರು ದೊಡ್ಡ ಶಕ್ತಿಯಾಗಿ ನಿಂತಿತ್ತು. ಈ ಬಗ್ಗೆ ಗಿಲ್ಲಿ ನಟ ಮಾತನಾಡಿದ್ದಾರೆ.

 

Read Full Story

02:06 PM (IST) Jan 25

Anchor Anushreeಗೆ ಹುಟ್ಟುಹಬ್ಬವಿಂದು - ವಿಶೇಷ ವಿಡಿಯೋದ ಮೂಲಕ ಗುಡ್​ನ್ಯೂಸ್​ ಕೊಟ್ಟ ವಾಹಿನಿ

ಖ್ಯಾತ ಆ್ಯಂಕರ್ ಅನುಶ್ರೀ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆಯಾದ ಬೆನ್ನಲ್ಲೇ ತಮ್ಮ 38ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೀಗ ಅಭಿಮಾನಿಗಳು ಅವರಿಂದ ಸಿಹಿ ಸುದ್ದಿಯನ್ನು ನಿರೀಕ್ಷಿಸುತ್ತಿದ್ದಾರೆ.

Read Full Story

01:48 PM (IST) Jan 25

ಪಾಟ್ನಾದ ನೀಟ್ ವಿದ್ಯಾರ್ಥಿನಿಯ ಉಡುಪಿನಲ್ಲಿ ವೀರ್ಯ ಪತ್ತೆ; ತನಿಖೆಯ ದಿಕ್ಕನ್ನೇ ಬದಲಾಯಿಸಿದ ಎಫ್‌ಎಸ್‌ಎಲ್ ವರದಿ

Patna NEET aspirant death case: ಇದರರ್ಥ ಈ ಪ್ರಕರಣವು ಕೇವಲ ಅನುಮಾನಾಸ್ಪದ ಸಾವು ಅಥವಾ ಆತ್ಮ*ಹ*ತ್ಯೆಯಾಗಿರದೆ, ಗಂಭೀರ ಅಪರಾಧ ಕೃತ್ಯವಾಗಿರಬಹುದು. ಪೊಲೀಸರು ಈಗ ಎದುರಿಸುತ್ತಿರುವ ದೊಡ್ಡ ಸವಾಲು ಎಂದರೆ ವಿದ್ಯಾರ್ಥಿನಿಯ ವಿರುದ್ಧ ಈ ಅಪರಾಧ ಎಸಗಿದ ಶಂಕಿತನನ್ನು ಗುರುತಿಸುವುದು.

Read Full Story

01:27 PM (IST) Jan 25

ಇಬ್ಬರಿಗೂ ಒಟ್ಟಿಗೇ ಮಗು ಹುಟ್ಟುತ್ತೆ - 'ಲಕ್ಷ್ಮೀ ನಿವಾಸ' ನಟಿ ಹಂಚಿಕೊಂಡ್ರು ಕುತೂಹಲದ ಪೋಸ್ಟ್​

'ಲಕ್ಷ್ಮೀ ನಿವಾಸ' ಸೀರಿಯಲ್‌ನ ನಟಿ ಮಾನಸಾ ಮನೋಹರ್ ಅವರು ತಾವು ಗರ್ಭಿಣಿ ಎಂದು ಘೋಷಿಸಿದ್ದಾರೆ. ವಿಶೇಷವೆಂದರೆ, ಅವರ ಅತ್ತಿಗೆಯೂ ಗರ್ಭಿಣಿಯಾಗಿದ್ದು, ಇಬ್ಬರೂ ಕೆಲವೇ ವಾರಗಳ ಅಂತರದಲ್ಲಿ ಮಗುವನ್ನು ಸ್ವಾಗತಿಸಲಿದ್ದಾರೆ. ಮಾನಸಾ ಅವರು ಮೇ ತಿಂಗಳಿನಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
Read Full Story

01:09 PM (IST) Jan 25

ಅಮ್ಮನಿಗೆ ನಾನು ಮನುಷ್ಯನಾದರೆ ಸಾಕು ಎಂಬ ಆಸೆ ಇತ್ತು ಎಷ್ಟೋ ವರ್ಷ ಅಮ್ಮನ ದುಡಿಮೆಯಲ್ಲೇ ಬದುಕಿದೆ - ರಾಜ್ ಬಿ ಶೆಟ್ಟಿ

ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ನಟ ರಾಜ್ ಬಿ ಶೆಟ್ಟಿ ತಮ್ಮ ತಾಯಿಯೊಂದಿಗೆ ಭಾಗವಹಿಸಿದ್ದರು. ಈ ವೇಳೆ, ತಮ್ಮ ಹಿಂದಿನ ದಿನಗಳ ಬಗ್ಗೆ ಭಾವುಕರಾಗಿ ಮಾತನಾಡಿದ ರಾಜ್, ತಾಯಿಯ ದುಡಿಮೆಯಲ್ಲೇ ಬದುಕಿದ್ದಾಗಿ ಹೇಳಿದ್ದಾರೆ. ಅವರ ಅಮ್ಮ ಏನು ಹೇಳಿದ್ದಾರೆ ನೋಡಿ..

Read Full Story

12:56 PM (IST) Jan 25

ಹೆಸರು ಬದಲಿಸಿಕೊಂಡ 'ಅಂತರಪಟ' ನಟಿ ತನ್ವಿ - ದಿಢೀರ್​ ಏಕೀ ನಿರ್ಧಾರ? ನಟಿ ಹೇಳಿದ್ದೇನು?

'ಅಂತರಪಟ' ಸೀರಿಯಲ್ ಮೂಲಕ ಖ್ಯಾತಿ ಪಡೆದ ನಟಿ ತನ್ವಿಯಾ ಬಾಲರಾಜ್ ತಮ್ಮ ಹೆಸರನ್ನು ರಾಧ್ಯಾ ರಾಜ್ ಎಂದು ಬದಲಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಹಂಚಿಕೊಂಡ ಅವರು, ವಿಶೇಷ ಕಾರಣಗಳಿಂದ ಈ ನಿರ್ಧಾರ ಕೈಗೊಂಡಿದ್ದು, ತಮ್ಮ ಹೊಸ ಪಯಣಕ್ಕೆ ಎಲ್ಲರ ಬೆಂಬಲ ಕೋರಿದ್ದಾರೆ.
Read Full Story

12:50 PM (IST) Jan 25

ಚಾಲುಕ್ಯರ 'ಬಂಗಾರದ ಟಂಕಸಾಲೆ'ಯಾಗಿದ್ದ Lakkundi; ಅಂದು ಜನರು ಹೇಳಿದಂತೆ ರಾಜರು ಬಚ್ಚಿಟ್ಟಿದ್ದ ನಿಧಿ ಸಿಗ್ತಿದ್ಯಾ?

Lakkundi News: ಲಕ್ಕುಂಡಿಯಲ್ಲಿ ನಿಧಿ ಸಿಗುತ್ತಲಿದೆ, ಇನ್ನೊಂದು ಕಡೆ ಉತ್ಖನನವೂ ಆಗುತ್ತಿದೆ. ಹಾಗಾದರೆ ಯಾವ ರಾಜರು ಈ ಸ್ಥಳವನ್ನು ಆಳಿದ್ದರು? ಇಲ್ಲಿ ನಿಧಿ ಹೂತಿಟ್ಟಿದ್ದು ಸತ್ಯವೇ? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Read Full Story

12:28 PM (IST) Jan 25

ಬಿಎಂಎಸ್ ಎಂಜಿನಿಯರಿಂಗ್‌ ಕಾಲೇಜಲ್ಲಿ ನಡೆದ ಗೋಲ್ಮಾಲ್‌, ಖಾಸಗಿ ಸಂಸ್ಥೆ ಟ್ರಸ್ಟಿಗಳ ₹19 ಕೋಟಿ ಆಸ್ತಿ ಜಪ್ತಿ

ಬೆಂಗಳೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ನಡೆದ ಸೀಟ್ ಬ್ಲಾಕಿಂಗ್ ಹಗರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ಚುರುಕುಗೊಳಿಸಿದೆ.   ಬಿಎಂಎಸ್ ಎಜುಕೇಷನಲ್ ಟ್ರಸ್ಟ್‌ಗೆ ಸೇರಿದ 19.46ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

Read Full Story

12:15 PM (IST) Jan 25

ಕಂಬಳದಲ್ಲಿ ದಾಖಲೆ ಬರೆದ ಶ್ರೀನಿವಾಸ್‌ ಗೌಡ ನಟನೆ, ರಾಜೇಂದ್ರ ಸಿಂಗ್‌ ಬಾಬು Veera Kambala Movie ರಿಲೀಸ್‌ ಯಾವಾಗ?

Veera Kambala Movie: ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನದ ವೀರಗಂಬಳ ಸಿನಿಮಾ ರಿಲೀಸ್‌ಗೆ ರೆಡಿಯಿದೆ. 800 ವರ್ಷಗಳ ಇತಿಹಾಸ ಹೊಂದಿರುವ ಈ ಕ್ರೀಡೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ.

 

Read Full Story

12:14 PM (IST) Jan 25

ಚಿನ್ನದ ಸರವನ್ನು ನಂಗೇ ಕೊಟ್ಟಿದ್ದು ಅಂದ್ಕೊಂಡುಬಿಟ್ಟಿದ್ದೆ, ಆದ್ರೆ ಆಗಿದ್ದೇ ಬೇರೆ - ಗಿಲ್ಲಿ ನಟನ ಬೇಸರ ನುಡಿ

ಚಿನ್ನದ ಉದ್ಯಮಿ ಶರವಣ ಅವರು ಗಿಲ್ಲಿ ನಟನಿಗೆ ಚಿನ್ನದ ಸರ ಹಾಕಿದ್ದು, ಅವರು ಕೋಟ್ಯಧಿಪತಿಯಾದರು ಎಂಬ ಸುದ್ದಿ ಹಬ್ಬಿತ್ತು. ಆದರೆ, ಆ ಸರ ಕೇವಲ ಜಾಹೀರಾತಿಗಾಗಿ ಹಾಕಿದ್ದು, ಅದನ್ನು ವಾಪಸ್ ಪಡೆಯಲಾಗಿದೆ ಎಂಬ ಸತ್ಯವನ್ನು ಗಿಲ್ಲಿ ನಟರೇ ಇದೀಗ ಬಹಿರಂಗಪಡಿಸಿದ್ದಾರೆ.
Read Full Story

12:02 PM (IST) Jan 25

ವಿಶ್ವದಲ್ಲೇ ಬೆಂಗಳೂರು ಟ್ರಾಫಿಕ್ ನಗರ - ದೇಶದಲ್ಲಿರೋರೆಲ್ಲಾ ಬೆಂಗಳೂರಿಗೆ ಬಂದು ನೆಲೆಸುತ್ತಿರೋದೇ ಕಾರಣ - ಸಚಿವ ಸೋಮಣ್ಣ

ಕೇಂದ್ರ ಸಚಿವ ವಿ.ಸೋಮಣ್ಣ ಅವರು ಬೆಂಗಳೂರಿನ ತೀವ್ರ ಟ್ರಾಫಿಕ್ ಸಮಸ್ಯೆಗೆ ನಗರದ ಉತ್ತಮ ವಾತಾವರಣ ಮತ್ತು ಐಟಿ-ಬಿಟಿ ಕಾರಿಡಾರ್‌ಗಳ ಆಕರ್ಷಣೆಯೇ ಮೂಲ ಕಾರಣ ಎಂದು ಹೇಳಿದ್ದಾರೆ.   ಸಬ್ ಅರ್ಬನ್ ರೈಲ್ವೆ ಯೋಜನೆಯಂತಹ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳುವುದೇ ಇದಕ್ಕೆ ಪರಿಹಾರ ಎಂದರು

Read Full Story

11:49 AM (IST) Jan 25

Alamatti ಪ್ರವಾಸಿಗರಿಗೆ ಸಿಹಿ ಸುದ್ದಿ - ಅಮ್ಯೂಸ್‌ಮೆಂಟ್‌ ವಾಟರ್ ಪಾರ್ಕ್ ಉದ್ಘಾಟನೆಗೆ ಮುಹೂರ್ತ

ಸಚಿವ ಶಿವಾನಂದ ಪಾಟೀಲರು ಆಲಮಟ್ಟಿಯ ಸಿಲ್ವರ್ ಲೇಕ್‌ನಲ್ಲಿ 10 ವರ್ಷಗಳಿಂದ ಸ್ಥಗಿತಗೊಂಡಿದ್ದ ದೋಣಿ ವಿಹಾರಕ್ಕೆ ಮರುಚಾಲನೆ ನೀಡಿದರು.  ಆಲಮಟ್ಟಿಯನ್ನು ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದಾರೆ.

Read Full Story

11:37 AM (IST) Jan 25

ತನ್ನ ಯಶಸ್ಸಿನ ಹಿಂದಿನ ರೂವಾರಿಯನ್ನು ಪರಿಚಯಿಸಿದ ಬಿಗ್ಬಾಸ್ ರಕ್ಷಿತಾ ಶೆಟ್ಟಿ

ಬಿಗ್‌ಬಾಸ್‌ ರನ್ನರ್ ಆಫ್‌ ಖ್ಯಾತಿಯ ಮಂಗಳೂರಿನ ರಕ್ಷಿತಾ ಶೆಟ್ಟಿ, ತಮ್ಮ ಯಶಸ್ಸಿನ ಹಿಂದಿರುವ ನಿಜವಾದ ರೂವಾರಿಯನ್ನು ಇದೇ ಮೊದಲ ಬಾರಿಗೆ ಪರಿಚಯಿಸಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ಗಾಗಿ ಶೇ.60ರಷ್ಟು ತೆರೆಮರೆಯಲ್ಲಿ ಕೆಲಸ ಮಾಡುವ ಅವರನ್ನು ರಕ್ಷಿತಾ ಪರಿಚಯಿಸಿದ್ದಾರೆ.

Read Full Story

11:26 AM (IST) Jan 25

Sri Raghavendra Mahathme TV Serial - ವೈಭವದಿಂದ ನೆರವೇರಿದ ವೆಂಕಟನಾಥ, ಸರಸ್ವತಿಯ ವಿವಾಹ ಮಹೋತ್ಸವ!

Sri Raghavendra Mahathme Kannada TV Serial: ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಯಲ್ಲಿ ವೆಂಕಟನಾಥ- ಸರಸ್ವತಿಯ ವಿವಾಹ ವೈಭವವು ಮಹಾಸಂಚಿಕೆಯ ರೂಪದಲ್ಲಿ ಪ್ರಸಾರಗೊಳ್ಳಲಿದೆ. ಹಾಗಾದರೆ ಯಾವಾಗ? 

 

Read Full Story

11:08 AM (IST) Jan 25

Anubandha Awards 2026 - ಈ ಬಾರಿ ಏನೆಲ್ಲ ವಿಶೇಷತೆಗಳಿವೆ? ಸುಷ್ಮಾ ರಾವ್‌ಗೆ ವಿಶೇಷ ಗೌರವ ಕೊಟ್ಟಿದ್ಯಾಕೆ?

'ಕಲರ್ಸ್‌ ಕನ್ನಡ' ವಾಹಿನಿಯು ತನ್ನ 12ನೇ ವರ್ಷದ 'ಅನುಬಂಧ ಅವಾರ್ಡ್ಸ್‌' ಸಂಭ್ರಮ ಶುರುವಾಗಿದೆ. ಸತತ ಮೂರು ದಿನಗಳ ಕಾಲ ಜನವರಿ 24, 25 ಮತ್ತು 26ರಂದು ಸಂಜೆ 7ಕ್ಕೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಬಾರಿಯ ಅವಾರ್ಡ್ಸ್‌ನಲ್ಲಿ ಏನೆಲ್ಲಾ ವಿಶೇಷತೆಗಳಿವೆ?

Read Full Story

10:41 AM (IST) Jan 25

5 ಗಂಟೆ ಮದುವೆ ಶಾಸ್ತ್ರ, ರಜಪೂತರ ಹುಡುಗ; ಡಿವೋರ್ಸ್‌ ಪಡೆದ 'ರಾಧಾ ರಮಣ ಧಾರಾವಾಹಿ' ನಟಿ ಅನುಷಾ ಹೆಗಡೆ

radha ramana serial anusha hegde divorce: ಕಲರ್ಸ್‌ ಕನ್ನಡ ವಾಹಿನಿಯ ‘ರಾಧಾ ರಮಣ’ ಧಾರಾವಾಹಿಯಲ್ಲಿ ದೀಪಿಕಾ ಪಾತ್ರದಲ್ಲಿ ನಟಿಸುತ್ತಿದ್ದ ಅನುಷಾ ಹೆಗಡೆ ಅವರ ಮೂರು ವರ್ಷದ ಮದುವೆ ಜೀವನ ಮುಗಿದಿದೆ. ಈ ಬಗ್ಗೆ ಅವರೇ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

 

Read Full Story

10:37 AM (IST) Jan 25

ಗಜೇಂದ್ರಗಢದಲ್ಲಿ ಕ್ವಿಂಟಾಲ್ ಶೇಂಗಾ 11 ಸಾವಿರಕ್ಕೂ ಅಧಿಕ ದರಕ್ಕೆ ಮಾರಾಟ - ರೈತರು ಖುಷ್

ಗಜೇಂದ್ರಗಡದಲ್ಲಿ ಬಡವರ ಬಾದಾಮಿ ಎಂದೇ ಖ್ಯಾತವಾದ ಶೇಂಗಾ ಬೆಲೆಯು ಕ್ವಿಂಟಲ್‌ಗೆ ₹11,000ದ ಗಡಿ ತಲುಪಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಈ ವರ್ಷ ಉತ್ತಮ ಮಳೆ ಹಾಗೂ ಉತ್ತಮ ಇಳುವರಿ ಬಂದಿದ್ದು, ಜೊತೆಗೆ ಮಾರುಕಟ್ಟೆಯಲ್ಲಿ ದಾಖಲೆಯ ಬೆಲೆ ಸಿಕ್ಕಿರುವುದು ರೈತರ ಸಂಕಷ್ಟವನ್ನು ದೂರಮಾಡಿದೆ.

Read Full Story

09:51 AM (IST) Jan 25

ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಬಲಪಡಿಸಲು ಸಿಬಿಎಸ್‌ಇ ಶಾಲೆಗಳಲ್ಲಿ ಇನ್ನು ಮುಂದೆ ಮಾನಸಿಕ ಆರೋಗ್ಯ ಸಮಾಲೋಚಕರ ನೇಮಕ!

ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಖಿನ್ನತೆ ಮತ್ತು ಮಾನಸಿಕ ಒತ್ತಡವನ್ನು ನಿವಾರಿಸುವ ಸಲುವಾಗಿ, ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ತನ್ನೆಲ್ಲಾ ಶಾಲೆಗಳಲ್ಲಿ ಆಪ್ತ ಸಮಾಲೋಚಕರ ನೇಮಕವನ್ನು ಕಡ್ಡಾಯಗೊಳಿಸಿದೆ.  

Read Full Story

09:03 AM (IST) Jan 25

ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ಸಮಯ ಬದಲಾವಣೆ!

ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯುವ ಹೊಸ ನಿಯಮದಂತೆ, ಶಾಲಾ ಶಿಕ್ಷಣ ಇಲಾಖೆಯು ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ-2 ಮತ್ತು 3ರ ಸಮಯವನ್ನು ಪರಿಷ್ಕರಿಸಿದೆ. ವಿದ್ಯಾರ್ಥಿಗಳ ಊಟದ ಸಮಯದ ಅನಾನುಕೂಲತೆ ತಪ್ಪಿಸಲು, ಪರೀಕ್ಷೆಯನ್ನು  10.30 ಗಂಟೆಗೆ ಆರಂಭಿಸಲು ನಿರ್ಧರಿಸಲಾಗಿದೆ.

Read Full Story

08:33 AM (IST) Jan 25

ಪಾಂಡವಪುರ - ತೊಣ್ಣೂರು ಕೆರೆಯಲ್ಲಿ ಮೀನು ಹಿಡಿಯಲು ಪರವಾನಿಗೆ ನೀಡುವಂತೆ ಮೀನುಗಾರರ ಒತ್ತಾಯ

ಪಾಂಡವಪುರದ ತೊಣ್ಣೂರು ಕೆರೆಯಲ್ಲಿ ಮೀನು ಹಿಡಿಯಲು ನೇರ ಪರವಾನಗಿ ನೀಡಬೇಕೆಂದು ಒತ್ತಾಯಿಸಿ, ಸುತ್ತಮುತ್ತಲಿನ ಗ್ರಾಮಗಳ ಮೀನುಗಾರರು ಪ್ರತಿಭಟನೆ ನಡೆಸಿದರು. ಸಹಕಾರ ಸಂಘಗಳ ಬದಲು ತಮಗೇ ನೇರವಾಗಿ ಲೈಸೆನ್ಸ್ ನೀಡುವಂತೆ ಆಗ್ರಹಿಸಿ, ಮೀನುಗಾರಿಕೆ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಿದರು.
Read Full Story

08:32 AM (IST) Jan 25

ಕಡಬ - ತಂದೆಗೆ ಚಾಕುವಿನಿಂದ ಇರಿದು ಬಳಿಕ ಗುಂಡಿಕ್ಕಿಕೊಂಡ ಬಾಲಕ - ಮಂಗಳೂರಿನಲ್ಲಿ ಓದುತ್ತಿದ್ದ ವಿದ್ಯಾರ್ಥಿ

ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ, ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಅಪ್ರಾಪ್ತ ವಿದ್ಯಾರ್ಥಿಯೊಬ್ಬ ತನ್ನ ತಂದೆಗೆ ಚಾಕುವಿನಿಂದ ಇರಿದು, ಬಳಿಕ ಮನೆಯಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ತಂದೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Read Full Story

07:41 AM (IST) Jan 25

2026ರ ಗಣರಾಜ್ಯೋತ್ಸವಕ್ಕೆ ಬೆಂಗಳೂರಿನ ಮಾಣೆಕ್‌ ಷಾ ಮೈದಾನ ಸಜ್ಜು; ಈ ಬಾರಿ ಏನು ಹೊಸತು?

ಬೆಂಗಳೂರಿನ ಮಾಣೆಕ್‌ ಶಾ ಪರೇಡ್‌ ಮೈದಾನದಲ್ಲಿ 77ನೇ ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. 10 ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ, 2 ಸಾವಿರಕ್ಕೂ ಹೆಚ್ಚು ಪೊಲೀಸರ ಭದ್ರತೆ ಜೊತೆಗೆ 30 ತುಕಡಿಗಳಿಂದ ಪಥ ಸಂಚಲನ ನಡೆಯಲಿದ್ದು, ಈ ಬಾರಿ ವಾಯುಸೇನೆಯ ಬೈಕ್‌ ಸಾಹಸ ಪ್ರದರ್ಶನ ಇರುವುದಿಲ್ಲ.
Read Full Story

More Trending News