ಹಾಸನ: ರಾಜಕೀಯ ಏಳುಬೀಳುಗಳ ನಡುವೆ ಮಂಕಾಗಿರುವ ಜೆಡಿಎಸ್ ಪುಟಿದೇಳಲು ರಣತಂತ್ರ ರೂಪಿಸುತ್ತಿದ್ದು, ಇದಕ್ಕಾಗಿ ತನ್ನ ತವರು ನೆಲದಿಂದಲೇ ಪ್ರಯತ್ನ ಶುರು ಮಾಡಿದೆ. ಇದರ ಮೊದಲ ಹಂತವಾಗಿ ಹಾಸನದಲ್ಲಿ ಶನಿವಾರ ಜೆಡಿಎಸ್ ಜನತಾ ಸಮಾವೇಶ ಹಮ್ಮಿಕೊಂಡಿದೆ.ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಎಂಎಲ್ಸಿ ಸೂರಜ್ ರೇವಣ್ಣ ಭಾಗವಹಿಸಲಿದ್ದಾರೆ
10:46 PM (IST) Jan 24
09:57 PM (IST) Jan 24
Sun Signಗೂ ಹಲವರ ವ್ಯಕ್ತಿತ್ವಕ್ಕೂ ನೇರಾ ನೇರಾ ಸಂಬಂಧವಿರುತ್ತೆ. ಕೆಲವರು ಲೀಡರ್ಸ್ ಆಗಿರುತ್ತಾರೆ. ಯಾರು ಆ ಹುದ್ದೆಯನ್ನು ಸಮರ್ಪಕವಾಗಿ ಮ್ಯಾನೇಜ್ ಮಾಡುತ್ತಾರೋ ಅವರು ಇವೇ ನಾಲ್ಕು ರಾಶಿಯವರು.
08:55 PM (IST) Jan 24
ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ತಮ್ಮ ಪ್ರೀತಿಗೆ 10 ವರ್ಷ ತುಂಬಿದ ಸಂಭ್ರಮವನ್ನು ಆಚರಿಸಿದ್ದಾರೆ. ಈ ವಿಶೇಷ ದಿನದಂದು ರಿಷಭ್, ತಮ್ಮ ಪ್ರೀತಿಯ ಪಯಣವನ್ನು 'ಬದುಕಿನ ಸುಂದರ ಅಚ್ಚರಿ' ಮತ್ತು 'ಅತ್ಯಂತ ಸುಂದರವಾದ ಚಿತ್ರಕಥೆ' ಎಂದು ಬಣ್ಣಿಸಿದ್ದಾರೆ.
08:50 PM (IST) Jan 24
ಲುಕ್ಕುಂಡಿ ಮಣ್ಣಿನಡಿ ಹುದುಗಿದೆಯಾ 1000 ದೇಗುಲ, ಹಿಂದೂ ದೇವಸ್ಥಾನ, ಜಿನ ದೇಗುಲ ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿರಗಳಿದ್ದ ಅತ್ಯಂತ ಸಮೃದ್ಧ ನಗರ ಲುಕ್ಕುಂಡಿ ಇದೀಗ ಮಣ್ಣಿನಡಿ ಹುದುಗಿ ಹೋಗಿದೆಯಾ? ಏನಿದರ ಇತಿಹಾಸ
08:16 PM (IST) Jan 24
ಮಹಿಳೆಯನ್ನು ಕಟ್ಟಿ ಹಾಕಿ ಮತ್ತೊಬ್ಬ ಮಹಿಳೆಯಿಂದ ಥಳಿತ, ದನ ಮೇಯುತ್ತಿದೆ ಎಂದು ಎಚ್ಚರಿಕೆ ಕೊಟ್ಟ ಮಹಿಳೆಯನ್ನೇ ಕಟ್ಟಿ ಹಾಕಿ ಥಳಿಸಿದ ಘಟನೆ ಇದು. ಘಟನೆ ಸಂಬಂಧ ಮೂವರು ವಿರುದ್ದ ಪ್ರಕರಣ ದಾಖಲಾಗಿದೆ.
07:46 PM (IST) Jan 24
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಸೇರಿದಂತೆ ರಾಜ್ಯದ ಎಲ್ಲಾ ಕೈದಿಗಳಿಗೆ ಜೈಲಿನ ಡಿಜಿಪಿ ಅಲೋಕ್ ಕುಮಾರ್ ಹೊಸ ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಈ ಆದೇಶದ ಪ್ರಕಾರ, ಕೈದಿಗಳಿಗೆ ಹೊರಗಿನಿಂದ ಸರಬರಾಜು ಮಾಡುವ ಆಹಾರ, ಬಟ್ಟೆ ಮತ್ತು ಇತರ ವಸ್ತುಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ.
07:31 PM (IST) Jan 24
ಬಿಗ್ ಬಾಸ್ ಗಿಲ್ಲಿಗೆ 2 ಮಿಲಿಯನ್ ಫಾಲೋವರ್ಸ್ ದಾಖಲೆ, ಬಿಗ್ ಬಾಸ್ 12ರ ಮೂಲಕ ಜನರ ಮನಸ್ಸು ಗೆದ್ದಿರುವ ಗಿಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಇದೀಗ ನಿವೇದಿತಾ ಗೌಡ ದಾಖಲೆ ಮುರಿಯಲು ಸಜ್ಜಾಗಿದ್ದಾರೆ.
07:13 PM (IST) Jan 24
ಸೂರ್ಯ ದೇವನ ಹುಟ್ಟು ಹಬ್ಬವನ್ನು ರಥಸಪ್ತಮಿ ಎಂದು ಆಚರಿಸಲಾಗುತ್ತದೆ. ಸೂರ್ಯ ಉತ್ತರ ದಿಕ್ಕಿಗೆ ಆರಂಭಿಸುವ ಪಯಣ (ಉತ್ತರಾಯಣ) ಹಾಗೂ ಚಳಿಗಾಲದ ಅಂತ್ಯದ ಸೂಚಕವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
06:51 PM (IST) Jan 24
ಹಾಸನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತಮ್ಮ ಅನಾರೋಗ್ಯದ ನಡುವೆಯೂ ಕುಟುಂಬದ ವಿರುದ್ಧದ ರಾಜಕೀಯ ಸಂಚುಗಳನ್ನು ಎದುರಿಸುವ ದೃಢ ಸಂಕಲ್ಪ ವ್ಯಕ್ತಪಡಿಸಿದರು. ರೇವಣ್ಣ ಬಂಧನವನ್ನು ನೆನೆದು ಭಾವುಕರಾದರು, ಜೆಡಿಎಸ್ ಈಗ ಎನ್ಡಿಎ ಮೈತ್ರಿಯ ಪ್ರಬಲ ಭಾಗವಾಗಿದೆ ಎಂದರು.
06:50 PM (IST) Jan 24
ಹಾವೆಂದರೆ ಮನುಷ್ಯನಿಗೆ ಎಲ್ಲಿಲದ ಭಯ, ಆತಂಕ. ಕನಸಲ್ಲಿ ಈ ಸರಿಸೃಪವನ್ನು ಕಂಡು ಬೆಚ್ಚಿ ಬೀಳಿ ಎಚ್ಚರವಾಗೋದಿದೆ. ಅಷ್ಟಕ್ಕೂ ಹಾವು ಶುಭ ಸೂಚಕವೋ, ಅಶುಭವೋ?
06:48 PM (IST) Jan 24
‘ಅಮೃತಧಾರೆ’ ಧಾರಾವಾಹಿಯ ಮಲ್ಲಿಯಿಂದ ಭಾರ್ಗವಿ ಎಲ್ಎಲ್ಬಿ ಆಗಿ ಜನಪ್ರಿಯರಾಗಿರುವ ನಟಿ ರಾಧಾ ಭಗವತಿ, ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ ವೇದಿಕೆಯಲ್ಲಿ ತಮ್ಮ ಹಿಂದಿನ ಬಡತನದ ದಿನಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಗಾಯಕಿಯಾಗಲು ಬಂದು ನಟಿಯಾಗಿ ಯಶಸ್ಸು ಕಂಡ ತಮ್ಮ ನೋವಿನ ಹಾದಿ ತಿಳಿಸಿದ್ದಾರೆ.
06:30 PM (IST) Jan 24
ಬಿಗ್ಬಾಸ್ ವಿನ್ನರ್ 'ಗಿಲ್ಲಿ ನಟ' ಇನ್ಸ್ಟಾಗ್ರಾಮ್ ಲೈವ್ನಲ್ಲಿ ಅಭಿಮಾನಿಗಳ ಪ್ರೀತಿಗೆ ಮೂಕರಾಗಿದ್ದಾರೆ. ತಮ್ಮ ಗೆಲುವನ್ನು ನಂಬಲಾಗುತ್ತಿಲ್ಲ ಎಂದಿರುವ ಅವರು, ಈ ಪ್ರೀತಿಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಹೆಚ್ಚಿದೆ ಎಂದು ಹೇಳಿಕೊಂಡಿದ್ದಾರೆ. ಇದೇ ವೇಳೆ ಒಂದು ಮನವಿ ಮಾಡಿಕೊಂಡಿದ್ದಾರೆ. ಏನದು?
06:13 PM (IST) Jan 24
ಪಿಎಸ್ಐ ನೇಮಕಾತಿ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯವು (ಇಡಿ) ಮಾಜಿ ಎಡಿಜಿಪಿ ಅಮೃತ್ ಪಾಲ್ ಮತ್ತು ಹೆಡ್ ಕಾನ್ಸ್ಟೇಬಲ್ ಶ್ರೀಧರ್ ಅವರಿಗೆ ಸೇರಿದ 1.53 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅಭ್ಯರ್ಥಿಗಳಿಂದ ಕೋಟ್ಯಂತರ ರೂಪಾಯಿ ಲಂಚ ಪಡೆದಿದ್ದರು.
06:05 PM (IST) Jan 24
ಬಿಗ್ಬಾಸ್ ಸೀಸನ್ 12 ಗೆದ್ದು ಐತಿಹಾಸಿಕ ದಾಖಲೆ ಬರೆದ ಗಿಲ್ಲಿ ನಟನಿಗೆ ರಾಜಕೀಯ ನಾಯಕರಿಂದಲೂ ಬೆಂಬಲ ವ್ಯಕ್ತವಾಗಿತ್ತು, ಇದು ಅವರ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆ ಹುಟ್ಟುಹಾಕಿತ್ತು. ಇದರ ಬಗ್ಗೆ ಮಾಧ್ಯಮದವರು ಕೇಳಿರೋ ಪ್ರಶ್ನೆಗೆ ಗಿಲ್ಲಿ ನಟ ಹೇಳಿದ್ದೇನು?
05:56 PM (IST) Jan 24
ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಗ್ರಾಹಕರಿಗೆ ಕೇವಲ 10 ರೂಪಾಯಿಗೆ ನಂದಿನಿ ಹಾಲು (160 ML) ಮತ್ತು ಮೊಸರಿನ (140 ML) ಸಣ್ಣ ಪ್ಯಾಕೆಟ್ಗಳನ್ನು ಪರಿಚಯಿಸಿದೆ. ಸಿಎಂ ಸಿದ್ದರಾಮಯ್ಯನವರಿಂದ ಲೋಕಾರ್ಪಣೆಗೊಂಡ ಈ ಉತ್ಪನ್ನಗಳು, ಬ್ಯಾಚುಲರ್ಗಳು, ಒಬ್ಬಂಟಿಗಳಿಗೆ ಹಣ ಉಳಿತಾಯಕ್ಕೆ ಸಹಕಾರಿಯಾಗಲಿವೆ.
05:03 PM (IST) Jan 24
04:12 PM (IST) Jan 24
04:02 PM (IST) Jan 24
03:38 PM (IST) Jan 24
King Cobra ಅಧ್ಯಯನಕ್ಕೆ ಜಗತ್ತಿನೆಲ್ಲೆಡೆಯಿಂದ ಉರಗ ಪ್ರಿಯರು, ವಿಜ್ಞಾನಿಗಳು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಗೆ ಬರುತ್ತಾರೆ. ಕೆಲವರು ಹೇಳುವ ಪ್ರಕಾರ ಮಿಲನದ ನಂತರ ಸಂಗಾತಿಯನ್ನೇ ಕಾಳಿಂಗ ಸರ್ಪ ಕೊಲ್ಲುತ್ತಂತೆ. ಎಷ್ಟು ಸತ್ಯವಿದು?
03:32 PM (IST) Jan 24
ಅಣ್ಣಯ್ಯ ಸೀರಿಯಲ್ನಲ್ಲಿ ಮನೆಯಿಂದ ಹೊರಬಿದ್ದ ಶಾರದಮ್ಮನಿಗೆ ಮಗ ಶಿವುವೇ ಆಸರೆಯಾಗುತ್ತಾನೆ. ಇದರ ನಡುವೆ ಅಣ್ಣಯ್ಯನ ಬಂಧನದ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
03:31 PM (IST) Jan 24
ಈ ಬಾರಿಯ ಗಣರಾಜ್ಯೋತ್ಸವ ಪರೇಡ್ನಿಂದ ಕರ್ನಾಟಕದ 'ಮಿಲೆಟ್ಸ್ ಟು ಮೈಕ್ರೋಚಿಪ್' ವಿಷಯಾಧಾರಿತ ಸ್ತಬ್ಧಚಿತ್ರವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಸಮಯದ ನಿರ್ಬಂಧ ಮತ್ತು ಇತರೆ ರಾಜ್ಯಗಳಿಗೆ ಅವಕಾಶ ನೀಡುವ ನೀತಿಯನ್ನು ಕಾರಣವಾಗಿ ನೀಡಲಾಗಿದ್ದು, ಈ ನಿರ್ಧಾರವು ರಾಜ್ಯದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
03:07 PM (IST) Jan 24
ಕಾಳಿಂಗ ಸರ್ಪವನ್ನು ಅತ್ಯಂತ ಅಪಾಯಕಾರಿ ಎಂದು ಭಾವಿಸಲಾಗಿದ್ದರೂ, ವಾಸ್ತವದಲ್ಲಿ ಭಾರತೀಯ ನಾಗರಹಾವು ಹೆಚ್ಚು ವಿಷಕಾರಿಯಾಗಿದೆ. ಈ ಲೇಖನವು ಈ ಎರಡು ಪ್ರಮುಖ ಹಾವುಗಳ ನಡುವಿನ ವ್ಯತ್ಯಾಸ, ಅವುಗಳ ವಿಷದ ಪ್ರಮಾಣ, ಕಚ್ಚುವಿಕೆಯ ವಿಧಾನದ ಕುರಿತು ವಿವರಿಸುತ್ತದೆ.
01:36 PM (IST) Jan 24
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ 7 ಹೆಡೆ ಹಾಗೂ ಹಣೆಯ ಮೇಲೆ ನಾಗಮಣಿಯಂತಹ ಕೆತ್ತನೆಯಿರುವ ನೂರಾರು ವರ್ಷಗಳಷ್ಟು ಹಳೆಯದಾದ ನಾಗಶಿಲೆ ಪತ್ತೆಯಾಗಿದೆ. ತಲೆಮಾರುಗಳಿಂದ ಪೂಜಿಸಲ್ಪಡುತ್ತಿರುವ ಈ ಶಿಲೆಯ ಐತಿಹಾಸಿಕ ರಹಸ್ಯವನ್ನು ತಿಳಿಯಲು ಪುರಾತತ್ವ ಇಲಾಖೆಯ ಸಂಶೋಧನೆಗಾಗಿ ಕಾಯಲಾಗುತ್ತಿದೆ.
01:32 PM (IST) Jan 24
12:43 PM (IST) Jan 24
12:40 PM (IST) Jan 24
12:19 PM (IST) Jan 24
ವಿಜಯಪುರ ಜಿಲ್ಲಾ ಪೊಲೀಸರು 48 ಸ್ವತ್ತಿನ ಪ್ರಕರಣಗಳನ್ನು ಭೇದಿಸಿ, 14 ಅಂತರರಾಜ್ಯ ಹಾಗೂ ಅಂತರ ಜಿಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಆರೋಪಿಗಳಿಂದ ಒಟ್ಟು ₹1.17 ಕೋಟಿ ಮೌಲ್ಯದ ಬಂಗಾರದ ಆಭರಣ, ನಗದು, ಕಾರು ಹಾಗೂ ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
11:59 AM (IST) Jan 24
ಅಂಕೋಲಾದಲ್ಲಿ, ಅವಧಿ ಮೀರಿದ ಮಾತ್ರೆ ನೀಡಿದ ಘಟನೆ ವಿಡಿಯೋ ವೈರಲ್ ಆದ ಕಾರಣ ಮನನೊಂದು ಫಾರ್ಮಾಸಿಸ್ಟ್ ರಾಜೀವ್ ಪಿಕಳೆ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಈ ದುರಂತಕ್ಕೆ ಕಾರಣವಾದ ವಿಡಿಯೋ ಹರಿಬಿಟ್ಟ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇದರಿಂದ ಸಾಮಾಜಿಕ ಜಾಲತಾಣಗಳ ದುರ್ಬಳಕೆ ಕರಾಳ ಮುಖ ಬಯಲಾಗಿದೆ.
11:26 AM (IST) Jan 24
11:13 AM (IST) Jan 24
ಹೊನ್ನಾಳಿ ಇಂದಿರಾ ಕ್ಯಾಂಟೀನ್ನಲ್ಲಿ ಗ್ರಾಹಕರಿಗೆ ಹಳಸಿದ ಸಾಂಬಾರ್ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ ಸಿಬ್ಬಂದಿ ದರ್ಪ ತೋರಿದ್ದು, ಗ್ರಾಹಕರು ಪುರಸಭೆಗೆ ದೂರು ನೀಡಿದ್ದಾರೆ. 2 ತಿಂಗಳ ಹಿಂದೆ ಉದ್ಘಾಟನೆಯಾದ ಕ್ಯಾಂಟೀನ್ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
10:07 AM (IST) Jan 24
09:23 AM (IST) Jan 24
ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ತಲಾ ಮೂವರು ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಬದಲು ತಲಾ ₹50 ಸಾವಿರ ನಗದು ಪುರಸ್ಕಾರ ನೀಡಲು ಸರ್ಕಾರ ನಿರ್ಧರಿಸಿದೆ
09:08 AM (IST) Jan 24
2016ರಲ್ಲಿ ನಡೆದ ದುರಂತದಿಂದಾಗಿ ಸ್ಥಗಿತಗೊಂಡಿದ್ದ ಈ ಪ್ರವಾಸಿ ಆಕರ್ಷಣೆಯು, ಇದೀಗ ಪೆಡೆಲ್ ಬೋಟ್, ಸ್ಪೀಡ್ ಬೋಟ್ ಸೇರಿದಂತೆ ವಿವಿಧ ದೋಣಿಗಳೊಂದಿಗೆ ಮತ್ತು ಕಡ್ಡಾಯ ಲೈಫ್ ಜಾಕೆಟ್ ಸುರಕ್ಷತಾ ಕ್ರಮಗಳೊಂದಿಗೆ ಮರುಕಳಿಸುತ್ತಿದೆ.
08:59 AM (IST) Jan 24
ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿಷೇಧಿಸಿದ್ದ ಸರ್ಕಾರದ ಕ್ರಮವನ್ನು ರದ್ದುಪಡಿಸಿರುವ ಹೈಕೋರ್ಟ್ ವಿಭಾಗೀಯ ಪೀಠ, ಬೈಕ್ಗಳನ್ನು ಸಾರಿಗೆ ವಾಹನಗಳಾಗಿ ಬಳಸಲು ಅನುಮತಿ ನೀಡಿದೆ. ಓಲಾ, ಉಬರ್ನಂತಹ ಅಗ್ರಿಗೇಟರ್ ಸಂಸ್ಥೆಗಳ ಮೇಲ್ಮನವಿಯನ್ನು ನ್ಯಾಯಾಲಯ ಮಾನ್ಯ ಮಾಡಿದೆ.
08:33 AM (IST) Jan 24
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿನಿಯ ಹಲವು ಹೊಸ ಉತ್ಪನ್ನಗಳನ್ನು ಲೋಕಾರ್ಪಣೆ ಮಾಡಿದರು. ಇವುಗಳಲ್ಲಿ ಹೆಚ್ಚು ಪ್ರೊಟೀನ್ಯುಕ್ತ ಹಾಲು (ಎನ್-ಪ್ರೊಮಿಲ್ಕ್), ಮೀಡಿಯಂ ಫ್ಯಾಟ್ ಪನೀರ್, ಹೈ ಅರೋಮಾ ತುಪ್ಪ ಮತ್ತು ಪ್ರೊಬಯೋಟಿಕ್ ಮೊಸರು ಸೇರಿವೆ.
08:19 AM (IST) Jan 24
08:06 AM (IST) Jan 24
08:04 AM (IST) Jan 24
ನೇಮಕಾತಿ ವಿಳಂಬದಿಂದ ವಯೋಮಿತಿ ಮೀರುವ ಆತಂಕದಲ್ಲಿದ್ದ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದಿದೆ. ಪ್ರವರ್ಗದ ಅಭ್ಯರ್ಥಿಗಳಿಗೆ ಸರ್ಕಾರಿ ಸಿವಿಲ್ ಹುದ್ದೆಗಳ ನೇಮಕಾತಿಗೆ ಗರಿಷ್ಠ ವಯೋಮಿತಿಯನ್ನು 5 ವರ್ಷ ಕಾಲ ಸಡಿಲಗೊಳಿಸಿ ಆದೇಶ ಹೊರಡಿಸಿದೆ. ಇದು ಲಕ್ಷಾಂತರ ಆಕಾಂಕ್ಷಿಗಳಿಗೆ ವರದಾನವಾಗಿದೆ.
07:29 AM (IST) Jan 24
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಭ್ರೂಣ ಲಿಂಗ ಪತ್ತೆ ಕುರಿತು ಮಾಹಿತಿ ನೀಡಿದವರಿಗೆ ನೀಡುವ ಬಹುಮಾನವನ್ನು ₹50 ಸಾವಿರದಿಂದ ₹1 ಲಕ್ಷಕ್ಕೆ ಏರಿಕೆ ಮಾಡಿರುವುದಾಗಿ ಘೋಷಿಸಿದ್ದಾರೆ. ರಾಜ್ಯದಲ್ಲಿನ ಲಿಂಗಾನುಪಾತದ ಅಸಮತೋಲನವನ್ನು ಸರಿಪಡಿಸಲು ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತಿದೆ ಎಂದರು.
06:51 AM (IST) Jan 24