Published : Jan 24, 2026, 04:51 AM ISTUpdated : Jan 24, 2026, 10:46 PM IST

Karnataka News Live: ಡಾಲಿ ಧನಂಜಯ ಬಿರಿಯಾನಿ ತಿನ್ನೋ ವಿಡಿಯೋ ವೈರಲ್‌ ಆಗ್ತಿರೋದೇಕೆ? ಮಾಂಸ ತಿಂದ್ರೆ ಏನ್‌ ತಪ್ಪು?

ಸಾರಾಂಶ

ಹಾಸನ: ರಾಜಕೀಯ ಏಳುಬೀಳುಗಳ ನಡುವೆ ಮಂಕಾಗಿರುವ ಜೆಡಿಎಸ್‌ ಪುಟಿದೇಳಲು ರಣತಂತ್ರ ರೂಪಿಸುತ್ತಿದ್ದು, ಇದಕ್ಕಾಗಿ ತನ್ನ ತವರು ನೆಲದಿಂದಲೇ ಪ್ರಯತ್ನ ಶುರು ಮಾಡಿದೆ. ಇದರ ಮೊದಲ ಹಂತವಾಗಿ ಹಾಸನದಲ್ಲಿ ಶನಿವಾರ ಜೆಡಿಎಸ್‌ ಜನತಾ ಸಮಾವೇಶ ಹಮ್ಮಿಕೊಂಡಿದೆ.ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಎಂಎಲ್‌ಸಿ ಸೂರಜ್ ರೇವಣ್ಣ ಭಾಗವಹಿಸಲಿದ್ದಾರೆ

 

10:46 PM (IST) Jan 24

ಡಾಲಿ ಧನಂಜಯ ಬಿರಿಯಾನಿ ತಿನ್ನೋ ವಿಡಿಯೋ ವೈರಲ್‌ ಆಗ್ತಿರೋದೇಕೆ? ಮಾಂಸ ತಿಂದ್ರೆ ಏನ್‌ ತಪ್ಪು?

ನಟ ಡಾಲಿ ಧನಂಜಯ್ ಅವರು ಬಿರಿಯಾನಿ ಸೇವಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಲಿಂಗಾಯತರಾಗಿ ಅವರು ಮಾಂಸಾಹಾರ ಸೇವಿಸಬಹುದೇ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ ಹುಟ್ಟಿಕೊಂಡಿದೆ. ಈ ಕುರಿತಾದ ಪರ-ವಿರೋಧ ಅಭಿಪ್ರಾಯಗಳು ಮತ್ತು ಸಿನಿಮಾ ಪತ್ರಕರ್ತರ ವಿಶ್ಲೇಷಣೆಯನ್ನು ಈ ಲೇಖನ ಒಳಗೊಂಡಿದೆ.
Read Full Story

09:57 PM (IST) Jan 24

ನಿಮ್ಮ ಮ್ಯಾನೇಜರ್‌ಗೆ ಒಳ್ಳೇ ಲೀಡರ್‌ಶಿಪ್ ಕ್ವಾಲಿಟಿ ಇದೆಯಂದ್ರೆ ಪಕ್ಕಾ ಈ ರಾಶಿಯವರು!

Sun Signಗೂ ಹಲವರ ವ್ಯಕ್ತಿತ್ವಕ್ಕೂ ನೇರಾ ನೇರಾ ಸಂಬಂಧವಿರುತ್ತೆ. ಕೆಲವರು ಲೀಡರ್ಸ್ ಆಗಿರುತ್ತಾರೆ. ಯಾರು ಆ ಹುದ್ದೆಯನ್ನು ಸಮರ್ಪಕವಾಗಿ ಮ್ಯಾನೇಜ್ ಮಾಡುತ್ತಾರೋ ಅವರು ಇವೇ ನಾಲ್ಕು ರಾಶಿಯವರು.

Read Full Story

08:55 PM (IST) Jan 24

ದಶಕದ ಪ್ರೀತಿಯನ್ನು ಸೈಲೆಂಟ್‌ ಆಗಿ ಸಂಭ್ರಮಿಸಿದ ರಿಷಭ್‌ ಶೆಟ್ಟಿ, 'ಇದೇ ಬದುಕಿನ ಅತಿದೊಡ್ಡ ಅಚ್ಚರಿ' ಎಂದ ಡಿವೈನ್‌ ಸ್ಟಾರ್‌!

ಡಿವೈನ್‌ ಸ್ಟಾರ್‌ ರಿಷಭ್‌ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ತಮ್ಮ ಪ್ರೀತಿಗೆ 10 ವರ್ಷ ತುಂಬಿದ ಸಂಭ್ರಮವನ್ನು ಆಚರಿಸಿದ್ದಾರೆ. ಈ ವಿಶೇಷ ದಿನದಂದು ರಿಷಭ್, ತಮ್ಮ ಪ್ರೀತಿಯ ಪಯಣವನ್ನು 'ಬದುಕಿನ ಸುಂದರ ಅಚ್ಚರಿ' ಮತ್ತು 'ಅತ್ಯಂತ ಸುಂದರವಾದ ಚಿತ್ರಕಥೆ' ಎಂದು ಬಣ್ಣಿಸಿದ್ದಾರೆ.

Read Full Story

08:50 PM (IST) Jan 24

ಲುಕ್ಕುಂಡಿ ಮಣ್ಣಿನಡಿ ಹುದುಗಿದೆಯಾ 1000 ದೇಗುಲ, ಇತಿಹಾಸ ತಜ್ಞೆ ಹನುಮಾಕ್ಷಿ ಸ್ಫೋಟಕ ಮಾಹಿತಿ

ಲುಕ್ಕುಂಡಿ ಮಣ್ಣಿನಡಿ ಹುದುಗಿದೆಯಾ 1000 ದೇಗುಲ, ಹಿಂದೂ ದೇವಸ್ಥಾನ, ಜಿನ ದೇಗುಲ ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿರಗಳಿದ್ದ ಅತ್ಯಂತ ಸಮೃದ್ಧ ನಗರ ಲುಕ್ಕುಂಡಿ ಇದೀಗ ಮಣ್ಣಿನಡಿ ಹುದುಗಿ ಹೋಗಿದೆಯಾ? ಏನಿದರ ಇತಿಹಾಸ

Read Full Story

08:16 PM (IST) Jan 24

ಮಹಿಳೆಯನ್ನು ಕಟ್ಟಿ ಹಾಕಿ ಮತ್ತೊಬ್ಬ ಮಹಿಳೆಯಿಂದ ಥಳಿತ, ಚಾಮರಾಜನಗರದಲ್ಲಿ ಅಮಾನುಷ ಘಟನೆ

ಮಹಿಳೆಯನ್ನು ಕಟ್ಟಿ ಹಾಕಿ ಮತ್ತೊಬ್ಬ ಮಹಿಳೆಯಿಂದ ಥಳಿತ, ದನ ಮೇಯುತ್ತಿದೆ ಎಂದು ಎಚ್ಚರಿಕೆ ಕೊಟ್ಟ ಮಹಿಳೆಯನ್ನೇ ಕಟ್ಟಿ ಹಾಕಿ ಥಳಿಸಿದ ಘಟನೆ ಇದು. ಘಟನೆ ಸಂಬಂಧ ಮೂವರು ವಿರುದ್ದ ಪ್ರಕರಣ ದಾಖಲಾಗಿದೆ.

Read Full Story

07:46 PM (IST) Jan 24

ಜೈಲು ಡಿಜಿಪಿ ಅಲೋಕ್‌ ಕುಮಾರ್‌ ಆದೇಶ ಕೇಳಿ ಕಿಲ್ಲಿಂಗ್‌ ಸ್ಟಾರ್‌ ದರ್ಶನ್‌ ಕೊತ ಕೊತ!

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್‌ ಸೇರಿದಂತೆ ರಾಜ್ಯದ ಎಲ್ಲಾ ಕೈದಿಗಳಿಗೆ ಜೈಲಿನ ಡಿಜಿಪಿ ಅಲೋಕ್‌ ಕುಮಾರ್‌ ಹೊಸ ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಈ ಆದೇಶದ ಪ್ರಕಾರ, ಕೈದಿಗಳಿಗೆ ಹೊರಗಿನಿಂದ ಸರಬರಾಜು ಮಾಡುವ ಆಹಾರ, ಬಟ್ಟೆ ಮತ್ತು ಇತರ ವಸ್ತುಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ.

Read Full Story

07:31 PM (IST) Jan 24

ಬಿಗ್ ಬಾಸ್ ಗಿಲ್ಲಿಗೆ 2 ಮಿಲಿಯನ್ ಫಾಲೋವರ್ಸ್ ದಾಖಲೆ, ನಿವೇದಿತಾಗೆ ಠಕ್ಕರ್ ಕೊಡ್ತನಾ ಚಾಂಪಿಯನ್?

ಬಿಗ್ ಬಾಸ್ ಗಿಲ್ಲಿಗೆ 2 ಮಿಲಿಯನ್ ಫಾಲೋವರ್ಸ್ ದಾಖಲೆ, ಬಿಗ್ ಬಾಸ್ 12ರ ಮೂಲಕ ಜನರ ಮನಸ್ಸು ಗೆದ್ದಿರುವ ಗಿಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಇದೀಗ ನಿವೇದಿತಾ ಗೌಡ ದಾಖಲೆ ಮುರಿಯಲು ಸಜ್ಜಾಗಿದ್ದಾರೆ.

Read Full Story

07:13 PM (IST) Jan 24

ಜನವರಿ 25 ರಥ ಸಪ್ತಮಿ, 2026 ಸೂರ್ಯ ವರ್ಷ, ವೀಕ್ ಇರೋರು ಹೀಗ್ ಮಾಡಿ ಪವರ್ ಹೆಚ್ಚಿಸಿಕೊಳ್ಳಿ

ಸೂರ್ಯ ದೇವನ ಹುಟ್ಟು ಹಬ್ಬವನ್ನು ರಥಸಪ್ತಮಿ ಎಂದು ಆಚರಿಸಲಾಗುತ್ತದೆ. ಸೂರ್ಯ ಉತ್ತರ ದಿಕ್ಕಿಗೆ ಆರಂಭಿಸುವ ಪಯಣ (ಉತ್ತರಾಯಣ) ಹಾಗೂ ಚಳಿಗಾಲದ ಅಂತ್ಯದ ಸೂಚಕವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.

Read Full Story

06:51 PM (IST) Jan 24

'ನನ್ನ ಕಿಡ್ನಿ ಫೇಲ್ ಆಗಿ 3 ದಿನಕ್ಕೊಮ್ಮೆ ಡಯಾಲಿಸಿಸ್ ಮಾಡಿಸ್ತೀನಿ, ಹೋರಾಟದ ಕಿಚ್ಚು ಆರಿಲ್ಲ'; ದೇವೇಗೌಡರ ಗುಡುಗು

ಹಾಸನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತಮ್ಮ ಅನಾರೋಗ್ಯದ ನಡುವೆಯೂ ಕುಟುಂಬದ ವಿರುದ್ಧದ ರಾಜಕೀಯ ಸಂಚುಗಳನ್ನು ಎದುರಿಸುವ ದೃಢ ಸಂಕಲ್ಪ ವ್ಯಕ್ತಪಡಿಸಿದರು. ರೇವಣ್ಣ ಬಂಧನವನ್ನು ನೆನೆದು ಭಾವುಕರಾದರು, ಜೆಡಿಎಸ್ ಈಗ ಎನ್‌ಡಿಎ ಮೈತ್ರಿಯ ಪ್ರಬಲ ಭಾಗವಾಗಿದೆ ಎಂದರು.

Read Full Story

06:50 PM (IST) Jan 24

ಕನಸಲ್ಲಿ ಹಾವು ಕಂಡ್ರೆ ಕೆಟ್ಟದ್ದೋ, ಒಳ್ಳೇದೋ? ದ್ವಂದ್ವವೋ, ಹೊಸತನದ ಸಂಕೇತವೋ?

ಹಾವೆಂದರೆ ಮನುಷ್ಯನಿಗೆ ಎಲ್ಲಿಲದ ಭಯ, ಆತಂಕ. ಕನಸಲ್ಲಿ ಈ ಸರಿಸೃಪವನ್ನು ಕಂಡು ಬೆಚ್ಚಿ ಬೀಳಿ ಎಚ್ಚರವಾಗೋದಿದೆ. ಅಷ್ಟಕ್ಕೂ ಹಾವು ಶುಭ ಸೂಚಕವೋ, ಅಶುಭವೋ?

 

Read Full Story

06:48 PM (IST) Jan 24

ದುಡ್ಡಿಲ್ಲದೇ ಹೂವು ಮಾರ್ತಿದ್ದೆ - ಬಡತನದ ದಿನ ನೆನೆದು ವೇದಿಕೆ ಮೇಲೆ ಬಿಕ್ಕಿಬಿಕ್ಕಿ ಅತ್ತ Bhargavi LLB

‘ಅಮೃತಧಾರೆ’ ಧಾರಾವಾಹಿಯ ಮಲ್ಲಿಯಿಂದ ಭಾರ್ಗವಿ ಎಲ್​ಎಲ್​ಬಿ ಆಗಿ ಜನಪ್ರಿಯರಾಗಿರುವ ನಟಿ ರಾಧಾ ಭಗವತಿ, ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ ವೇದಿಕೆಯಲ್ಲಿ ತಮ್ಮ ಹಿಂದಿನ ಬಡತನದ ದಿನಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಗಾಯಕಿಯಾಗಲು ಬಂದು ನಟಿಯಾಗಿ ಯಶಸ್ಸು ಕಂಡ ತಮ್ಮ ನೋವಿನ ಹಾದಿ ತಿಳಿಸಿದ್ದಾರೆ.

Read Full Story

06:30 PM (IST) Jan 24

ದಿಢೀರ್​ ಲೈವ್​ಗೆ ಬಂದ Gilli Nata - ಕನ್ನಡಿಯಲ್ಲಿ ಮುಖ ನೋಡಲು ಆಗ್ತಿಲ್ಲ ಎನ್ನುತ್ತಲೇ ಫ್ಯಾನ್ಸ್​ಗೆ ಮಾಡಿದ್ರು ಮನವಿ

ಬಿಗ್​ಬಾಸ್​ ವಿನ್ನರ್ 'ಗಿಲ್ಲಿ ನಟ' ಇನ್​ಸ್ಟಾಗ್ರಾಮ್​ ಲೈವ್​ನಲ್ಲಿ ಅಭಿಮಾನಿಗಳ ಪ್ರೀತಿಗೆ ಮೂಕರಾಗಿದ್ದಾರೆ. ತಮ್ಮ ಗೆಲುವನ್ನು ನಂಬಲಾಗುತ್ತಿಲ್ಲ ಎಂದಿರುವ ಅವರು, ಈ ಪ್ರೀತಿಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಹೆಚ್ಚಿದೆ ಎಂದು ಹೇಳಿಕೊಂಡಿದ್ದಾರೆ. ಇದೇ ವೇಳೆ ಒಂದು ಮನವಿ ಮಾಡಿಕೊಂಡಿದ್ದಾರೆ. ಏನದು?

Read Full Story

06:13 PM (IST) Jan 24

ಪಿಎಸ್ಐ ನೇಮಕಾತಿ ಹಗರಣ - ಎಡಿಜಿಪಿ ಅಮೃತ್ ಪಾಲ್ ಸೇರಿ ಇಬ್ಬರ ₹1.53 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ಪಿಎಸ್ಐ ನೇಮಕಾತಿ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯವು (ಇಡಿ) ಮಾಜಿ ಎಡಿಜಿಪಿ ಅಮೃತ್ ಪಾಲ್ ಮತ್ತು ಹೆಡ್ ಕಾನ್ಸ್‌ಟೇಬಲ್ ಶ್ರೀಧರ್ ಅವರಿಗೆ ಸೇರಿದ 1.53 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅಭ್ಯರ್ಥಿಗಳಿಂದ ಕೋಟ್ಯಂತರ ರೂಪಾಯಿ ಲಂಚ ಪಡೆದಿದ್ದರು.

Read Full Story

06:05 PM (IST) Jan 24

Bigg Boss ಗೆಲುವಿನ ಬೆನ್ನಲ್ಲೇ ಗಿಲ್ಲಿ ನಟ ರಾಜಕೀಯಕ್ಕೆ ಎಂಟ್ರಿ? ಯಾವ ಪಕ್ಷ? ಗುಟ್ಟು ರಟ್ಟು ಮಾಡಿದ ವಿನ್ನರ್​

ಬಿಗ್​ಬಾಸ್​ ಸೀಸನ್​ 12 ಗೆದ್ದು ಐತಿಹಾಸಿಕ ದಾಖಲೆ ಬರೆದ ಗಿಲ್ಲಿ ನಟನಿಗೆ ರಾಜಕೀಯ ನಾಯಕರಿಂದಲೂ ಬೆಂಬಲ ವ್ಯಕ್ತವಾಗಿತ್ತು, ಇದು ಅವರ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆ ಹುಟ್ಟುಹಾಕಿತ್ತು. ಇದರ ಬಗ್ಗೆ ಮಾಧ್ಯಮದವರು ಕೇಳಿರೋ ಪ್ರಶ್ನೆಗೆ ಗಿಲ್ಲಿ ನಟ ಹೇಳಿದ್ದೇನು? 

Read Full Story

05:56 PM (IST) Jan 24

ರಾಜ್ಯದ ಜನತೆಗೆ ಬಜೆಟ್ ಫ್ರೆಂಡ್ಲಿಯಾದ ನಂದಿನಿ - ಇನ್ಮುಂದೆ ಕೇವಲ ₹10ಕ್ಕೆ ಹಾಲು, ಮೊಸರು!

ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಗ್ರಾಹಕರಿಗೆ ಕೇವಲ 10 ರೂಪಾಯಿಗೆ ನಂದಿನಿ ಹಾಲು (160 ML) ಮತ್ತು ಮೊಸರಿನ (140 ML) ಸಣ್ಣ ಪ್ಯಾಕೆಟ್‌ಗಳನ್ನು ಪರಿಚಯಿಸಿದೆ. ಸಿಎಂ ಸಿದ್ದರಾಮಯ್ಯನವರಿಂದ ಲೋಕಾರ್ಪಣೆಗೊಂಡ ಈ ಉತ್ಪನ್ನಗಳು, ಬ್ಯಾಚುಲರ್‌ಗಳು, ಒಬ್ಬಂಟಿಗಳಿಗೆ ಹಣ ಉಳಿತಾಯಕ್ಕೆ ಸಹಕಾರಿಯಾಗಲಿವೆ.

Read Full Story

05:03 PM (IST) Jan 24

ಕಳೆದು ಹೋದ ಸಾಕು ನಾಯಿ ಹುಡುಕಲು ಹೋದ ಮಗ ರೈಲ್ವೆ ಟ್ರ್ಯಾಕ್ ಹೆಣವಾದ; ರೈಲು ಡಿಕ್ಕಿಯಾಗಿ 16ರ ಬಾಲಕ ಸಾವು!

ನೆಲಮಂಗಲದಲ್ಲಿ, ಕಾಣೆಯಾದ ತನ್ನ ಸಾಕು ನಾಯಿಯನ್ನು ಹುಡುಕಲು ಹೋಗಿದ್ದ 16 ವರ್ಷದ ಪಿಯುಸಿ ವಿದ್ಯಾರ್ಥಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ. ಯೋಗೇಂದ್ರ ಎಂಬ ಈ ಬಾಲಕ, ಭರವಸೆಯ ಕ್ರೀಡಾಪಟುವಾಗಿದ್ದು, ಈ ದುರ್ಘಟನೆಯು ಕುಟುಂಬ ಮತ್ತು ಸ್ನೇಹಿತರಲ್ಲಿ ತೀವ್ರ ಶೋಕವನ್ನುಂಟುಮಾಡಿದೆ.
Read Full Story

04:12 PM (IST) Jan 24

ಕೆಜಿಗಟ್ಟಲೆ ಚಿನ್ನದ ಹಾರ ಹಾಕಿದಾಗ್ಲೇ ಕೆಟ್ಟೋದ ಲಿಫ್ಟ್! ಸಿಕ್ಕಾಕ್ಕೊಂಡು ಪೇಚಿಗೆ ಸಿಲುಕಿದ ಗಿಲ್ಲಿ ನಟ - ಶಾಕಿಂಗ್ ವಿಡಿಯೋ

ಬಿಗ್​ಬಾಸ್​ ವಿನ್ನರ್ ಗಿಲ್ಲಿ ನಟನಿಗೆ ಉದ್ಯಮಿ ಶರವಣ ಅವರು ಚಿನ್ನದ ಮಳಿಗೆ ಉದ್ಘಾಟನೆ ವೇಳೆ ಕೆಜಿಗಟ್ಟಲೆ ತೂಕದ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ. ನಂತರ, ಈ ಹಾರ ಧರಿಸಿದ್ದ ಗಿಲ್ಲಿ ನಟ, ಅತಿಯಾದ ಜನಸಂದಣಿಯಿಂದಾಗಿ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದು, ಈ ಘಟನೆಯ ವಿಡಿಯೋ ವೈರಲ್ ಆಗಿದೆ.
Read Full Story

04:02 PM (IST) Jan 24

ಅಕ್ರಮ ಬಾಂಗ್ಲಾ ವಲಸಿಗರ ಮಾಹಿತಿ ನೀಡ್ತಿದ್ದ ವ್ಯಕ್ತಿಗೆ ಪೊಲೀಸರ ಕಿರುಕುಳ; ವಿಧಾನಸೌಧ ಮುಂದೆ ವಿಷ ಸೇವನೆ!

ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಮಾಹಿತಿ ನೀಡಿದ ಡಾ. ನಾಗೇಂದ್ರಪ್ಪ ಎಂಬುವವರು, ಪೊಲೀಸರಿಂದಲೇ ಕಿರುಕುಳ ಅನುಭವಿಸುತ್ತಿರುವುದಾಗಿ ಆರೋಪಿಸಿದ್ದಾರೆ. ಈ ಕಿರುಕುಳದಿಂದ ಬೇಸತ್ತು ಅವರು ವಿಧಾನಸೌಧದ ಮುಂಭಾಗ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Read Full Story

03:38 PM (IST) Jan 24

ಗಂಡು ಕಾಳಿಂಗ ಸರ್ಪ ಏಕಪತ್ನಿ ವ್ರತಸ್ಥನಾ? ಮಿಲನದ ನಂತರ ಸಂಗಾತಿಯನ್ನೇ ತಿನ್ನುತ್ತಾ?

King Cobra ಅಧ್ಯಯನಕ್ಕೆ ಜಗತ್ತಿನೆಲ್ಲೆಡೆಯಿಂದ ಉರಗ ಪ್ರಿಯರು, ವಿಜ್ಞಾನಿಗಳು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಗೆ ಬರುತ್ತಾರೆ. ಕೆಲವರು ಹೇಳುವ ಪ್ರಕಾರ ಮಿಲನದ ನಂತರ ಸಂಗಾತಿಯನ್ನೇ ಕಾಳಿಂಗ ಸರ್ಪ ಕೊಲ್ಲುತ್ತಂತೆ. ಎಷ್ಟು ಸತ್ಯವಿದು?

 

Read Full Story

03:32 PM (IST) Jan 24

Annayya Serial ಶಿವು ಅರೆಸ್ಟ್​ - ಪೊಲೀಸರು ಕರೆದೊಯ್ದ ವಿಡಿಯೋ ಕಂಡು ಫ್ಯಾನ್ಸ್​ ಶಾಕ್​- ಏನಾಯ್ತು?

ಅಣ್ಣಯ್ಯ ಸೀರಿಯಲ್​ನಲ್ಲಿ ಮನೆಯಿಂದ ಹೊರಬಿದ್ದ ಶಾರದಮ್ಮನಿಗೆ ಮಗ ಶಿವುವೇ ಆಸರೆಯಾಗುತ್ತಾನೆ. ಇದರ ನಡುವೆ ಅಣ್ಣಯ್ಯನ ಬಂಧನದ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಶಾಕ್​ ಆಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು? 

Read Full Story

03:31 PM (IST) Jan 24

ಗಣರಾಜ್ಯೋತ್ಸವ ಪರೇಡ್ - ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಣೆ! ಇಲ್ಲಿದೆ ನೋಡಿ ಅಸಲಿ ಕಾರಣ

ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಿಂದ ಕರ್ನಾಟಕದ 'ಮಿಲೆಟ್ಸ್ ಟು ಮೈಕ್ರೋಚಿಪ್' ವಿಷಯಾಧಾರಿತ ಸ್ತಬ್ಧಚಿತ್ರವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಸಮಯದ ನಿರ್ಬಂಧ ಮತ್ತು ಇತರೆ ರಾಜ್ಯಗಳಿಗೆ ಅವಕಾಶ ನೀಡುವ ನೀತಿಯನ್ನು ಕಾರಣವಾಗಿ ನೀಡಲಾಗಿದ್ದು, ಈ ನಿರ್ಧಾರವು ರಾಜ್ಯದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

Read Full Story

03:07 PM (IST) Jan 24

King Cobraವೇ ತುಂಬಾ ವಿಷಕಾರಿ ಸರ್ಪನಾ? ಕಚ್ಚಿದರೆ ಎಷ್ಟು ವಿಷ ಬಿಡುತ್ತೆ? ಏನಿದರ ವಿಶೇಷತೆ?

ಕಾಳಿಂಗ ಸರ್ಪವನ್ನು ಅತ್ಯಂತ ಅಪಾಯಕಾರಿ ಎಂದು ಭಾವಿಸಲಾಗಿದ್ದರೂ, ವಾಸ್ತವದಲ್ಲಿ ಭಾರತೀಯ ನಾಗರಹಾವು ಹೆಚ್ಚು ವಿಷಕಾರಿಯಾಗಿದೆ. ಈ ಲೇಖನವು ಈ ಎರಡು ಪ್ರಮುಖ ಹಾವುಗಳ ನಡುವಿನ ವ್ಯತ್ಯಾಸ, ಅವುಗಳ ವಿಷದ ಪ್ರಮಾಣ, ಕಚ್ಚುವಿಕೆಯ ವಿಧಾನದ ಕುರಿತು ವಿವರಿಸುತ್ತದೆ.

Read Full Story

01:36 PM (IST) Jan 24

ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ 7 ಹೆಡೆಯ ಘಟಸರ್ಪವೂ ಪತ್ತೆ; ಹಾವಿನ ತಲೆ ಮೇಲಿದೆ ವಿಶೇಷ ನಾಗಮಣಿ!

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ 7 ಹೆಡೆ ಹಾಗೂ ಹಣೆಯ ಮೇಲೆ ನಾಗಮಣಿಯಂತಹ ಕೆತ್ತನೆಯಿರುವ ನೂರಾರು ವರ್ಷಗಳಷ್ಟು ಹಳೆಯದಾದ ನಾಗಶಿಲೆ ಪತ್ತೆಯಾಗಿದೆ. ತಲೆಮಾರುಗಳಿಂದ ಪೂಜಿಸಲ್ಪಡುತ್ತಿರುವ ಈ ಶಿಲೆಯ ಐತಿಹಾಸಿಕ ರಹಸ್ಯವನ್ನು ತಿಳಿಯಲು ಪುರಾತತ್ವ ಇಲಾಖೆಯ ಸಂಶೋಧನೆಗಾಗಿ ಕಾಯಲಾಗುತ್ತಿದೆ.

Read Full Story

01:32 PM (IST) Jan 24

ಸಿಂಕ್ ಮೇಲೆ 5 ವಸ್ತುಗಳಿದ್ರೆ ಮಕ್ಕಳ ಆರೋಗ್ಯಕ್ಕೆ ಕುತ್ತು; ಇಡೀ ಮನೆಯೇ ರೋಗಾಣುಗಳು ಅಡ್ಡಾ ಆಗುತ್ತೆ

ಅಡುಗೆಮನೆಯ ಸಿಂಕ್ ತೇವಾಂಶದಿಂದ ಕೂಡಿರುವುದರಿಂದ ರೋಗಾಣುಗಳ ತಾಣವಾಗಬಹುದು. ಸಿಂಕ್ ಬಳಿ ಆಹಾರ ಪದಾರ್ಥಗಳು, ವಿದ್ಯುತ್ ಉಪಕರಣಗಳು, ಪಾತ್ರೆಗಳು ಮತ್ತು ಮರದ ವಸ್ತುಗಳನ್ನು ಇಡುವುದರಿಂದ ಆರೋಗ್ಯ ಸಮಸ್ಯೆಗಳು ಮತ್ತು ಅಪಘಾತಗಳು ಸಂಭವಿಸಬಹುದು.
Read Full Story

12:43 PM (IST) Jan 24

ಕರ್ನಾಟಕದಲ್ಲಿ ಸದ್ಯ ಇದೇ ಹೊಸ ಬ್ಯುಸಿನೆಸ್ ಟ್ರೆಂಡ್; ಈ ಮಾರ್ಕೆಟಿಂಗ್ ಬಗ್ಗೆನೇ ಊರೆಲ್ಲಾ ಮಾತುಕತೆ

ಸಣ್ಣ ವ್ಯಾಪಾರಗಳಿಗೆ ದುಬಾರಿ ಸೆಲೆಬ್ರಿಟಿ ಜಾಹೀರಾತುಗಳ ಬದಲಿಗೆ, ಹೈಪರ್‌ಲೋಕಲ್ ಬ್ರ್ಯಾಂಡ್ ಜಾಹೀರಾತು ಒಂದು ಉತ್ತಮ ಪರಿಹಾರವಾಗಿದೆ. ಈ ಮಾದರಿಯು ಸ್ಥಳೀಯ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್‌ಗಳನ್ನು ಬಳಸಿ ಕಡಿಮೆ ಖರ್ಚಿನಲ್ಲಿ ಹೆಚ್ಚು ನಂಬಿಕಸ್ಥ ಪ್ರಚಾರ ಮಾಡಲು ಸಹಾಯ ಮಾಡುತ್ತದೆ.
Read Full Story

12:40 PM (IST) Jan 24

ಕೆಲಸಕ್ಕೆ ರಜೆ ಹಾಕಿದ ಯುವತಿಗೆ ರೋಡಲ್ಲೇ ಬಟ್ಟೆ ಬಿಚ್ಚಿ ಹೊಡಿತೀನೆಂದ ಮಾಲೀಕ; ಆರೋಪಿ ಸೈಯದ್ ಪೊಲೀಸರ ವಶ!

ಕೆಂಗೇರಿಯಲ್ಲಿ, ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಯುವತಿ ರಜೆ ಹಾಕಿದ್ದಕ್ಕೆ ಸೈಬರ್ ಸೆಂಟರ್ ಮಾಲೀಕ ಸೈಯದ್ ಸಾರ್ವಜನಿಕವಾಗಿ ಅಶ್ಲೀಲ ಪದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾನೆ. ಸ್ಥಳೀಯರ ಮಧ್ಯಪ್ರವೇಶದಿಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
Read Full Story

12:19 PM (IST) Jan 24

Vijayapura - 48 ಕೇಸ್‌ಗಳ 14 ಆರೋಪಿಗಳ ಬಂಧನ; ₹1.17 ಕೋಟಿ ಮೌಲ್ಯದ ಬಂಗಾರ, ನಗದು, ಕಾರು, ಬೈಕ್‌ ವಶ

ವಿಜಯಪುರ ಜಿಲ್ಲಾ ಪೊಲೀಸರು 48 ಸ್ವತ್ತಿನ ಪ್ರಕರಣಗಳನ್ನು ಭೇದಿಸಿ, 14 ಅಂತರರಾಜ್ಯ ಹಾಗೂ ಅಂತರ ಜಿಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಆರೋಪಿಗಳಿಂದ ಒಟ್ಟು ₹1.17 ಕೋಟಿ ಮೌಲ್ಯದ ಬಂಗಾರದ ಆಭರಣ, ನಗದು, ಕಾರು ಹಾಗೂ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

Read Full Story

11:59 AM (IST) Jan 24

ಪ್ರಾಮಾಣಿಕ ಫಾರ್ಮಾಸಿಸ್ಟ್ ಜೀವ ತೆಗೆದ ವಿಡಿಯೋ; ಅವಧಿ ಮುಗಿದ ಔಷಧಿ ಕೊಟ್ಟರೆಂದು ವಿಡಿಯೋ ಹರಿಬಿಟ್ಟ ಮೂವರು ಅರೆಸ್ಟ್!

ಅಂಕೋಲಾದಲ್ಲಿ, ಅವಧಿ ಮೀರಿದ ಮಾತ್ರೆ ನೀಡಿದ ಘಟನೆ ವಿಡಿಯೋ ವೈರಲ್ ಆದ ಕಾರಣ ಮನನೊಂದು ಫಾರ್ಮಾಸಿಸ್ಟ್ ರಾಜೀವ್ ಪಿಕಳೆ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಈ ದುರಂತಕ್ಕೆ ಕಾರಣವಾದ ವಿಡಿಯೋ ಹರಿಬಿಟ್ಟ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇದರಿಂದ ಸಾಮಾಜಿಕ ಜಾಲತಾಣಗಳ ದುರ್ಬಳಕೆ ಕರಾಳ ಮುಖ ಬಯಲಾಗಿದೆ.

Read Full Story

11:26 AM (IST) Jan 24

Lakkundi excavation ಬಾವಿಯ ಗೋಡೆಗಳು ಹೇಳ್ತಿವೆ ಇತಿಹಾಸ; 12 ನೇ ಶತಮಾನದ ಶಿಲೆಗಳು ಪತ್ತೆ

ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನದ ನಡುವೆ, ಬಳಗಾನೂರು ಕುಟುಂಬಕ್ಕೆ ಸೇರಿದ ನೂರು ವರ್ಷ ಹಳೆಯ ಬಾವಿಯ ಗೋಡೆಯಲ್ಲಿ ಪ್ರಾಚೀನ ಶಿಲೆಗಳು ಪತ್ತೆಯಾಗಿವೆ. ದಾನ ಶಿಲೆ, ದ್ವಾರಪಾಲಕನ ಶಿಲೆ ಸೇರಿದಂತೆ ಹಲವು ಶಿಲಾಕೃತಿಗಳು ಪತ್ತೆಯಾಗಿದ್ದು, ಇದು ಊರಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
Read Full Story

11:13 AM (IST) Jan 24

ಬಡವರ ಹೊಟ್ಟೆಗ ಹಳಸಿದ ಆಹಾರ ಕೊಟ್ಟ ಇಂದಿರಾ ಕ್ಯಾಂಟೀನ್; ಇಡ್ಲಿಗೆ ಹಳಸಿದ ಸಾಂಬಾರ್ ಬಡಿಸಿದ ಸಿಬ್ಬಂದಿ!

ಹೊನ್ನಾಳಿ ಇಂದಿರಾ ಕ್ಯಾಂಟೀನ್‌ನಲ್ಲಿ ಗ್ರಾಹಕರಿಗೆ ಹಳಸಿದ ಸಾಂಬಾರ್ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ ಸಿಬ್ಬಂದಿ ದರ್ಪ ತೋರಿದ್ದು, ಗ್ರಾಹಕರು ಪುರಸಭೆಗೆ ದೂರು ನೀಡಿದ್ದಾರೆ. 2 ತಿಂಗಳ ಹಿಂದೆ ಉದ್ಘಾಟನೆಯಾದ ಕ್ಯಾಂಟೀನ್‌ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

10:07 AM (IST) Jan 24

ಬಳ್ಳಾರಿಯ ಮಾಡೆಲ್ ಹೌಸ್‌ಗೆ ಬೆಂಕಿ - ಆರು ಅಪ್ರಾಪ್ತರು ಸೇರಿದಂತೆ ಎಂಟು ಜನರು ಪೊಲೀಸರ ವಶಕ್ಕೆ

ಬಳ್ಳಾರಿಯ ಗಾಲಿ ಜನಾರ್ದನ ರೆಡ್ಡಿ ಅವರ ಮಾಡೆಲ್ ಹೌಸ್‌ಗೆ ಬೆಂಕಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಅಪ್ರಾಪ್ತರು ಸೇರಿದಂತೆ ಎಂಟು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೀಲ್ಸ್ ಮಾಡಲು ಬಂದಿದ್ದ ಯುವಕರಿಂದ ಆಕಸ್ಮಿಕವಾಗಿ ಈ ಕೃತ್ಯ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
Read Full Story

09:23 AM (IST) Jan 24

ರಾಜ್ಯದ ಸರ್ಕಾರಿ ಶಾಲೆಯ 785 SSLC ಟಾಪರ್‌ಗಳಿಗೆ ಸರ್ಕಾರದಿಂದ ಸಿಹಿಯಾದ ಅಚ್ಚರಿಯ ಘೋಷಣೆ!

ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ತಲಾ ಮೂವರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಬದಲು ತಲಾ ₹50 ಸಾವಿರ ನಗದು ಪುರಸ್ಕಾರ ನೀಡಲು ಸರ್ಕಾರ ನಿರ್ಧರಿಸಿದೆ

Read Full Story

09:08 AM (IST) Jan 24

Alamatti - ದುರಂತದಿಂದಾಗಿ 9 ವರ್ಷಗಳಿಂದ ಬಂದಾಗಿದ್ದಆಲಮಟ್ಟಿಯ ಬೋಟಿಂಗ್‌ಗೆ ಚಾಲನೆ

2016ರಲ್ಲಿ ನಡೆದ ದುರಂತದಿಂದಾಗಿ ಸ್ಥಗಿತಗೊಂಡಿದ್ದ ಈ ಪ್ರವಾಸಿ ಆಕರ್ಷಣೆಯು, ಇದೀಗ ಪೆಡೆಲ್ ಬೋಟ್, ಸ್ಪೀಡ್ ಬೋಟ್ ಸೇರಿದಂತೆ ವಿವಿಧ ದೋಣಿಗಳೊಂದಿಗೆ ಮತ್ತು ಕಡ್ಡಾಯ ಲೈಫ್ ಜಾಕೆಟ್ ಸುರಕ್ಷತಾ ಕ್ರಮಗಳೊಂದಿಗೆ ಮರುಕಳಿಸುತ್ತಿದೆ.

Read Full Story

08:59 AM (IST) Jan 24

Bike Taxi - ಇನ್ಮುಂದೆ ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿ ಅಧಿಕೃತ - ಹೈಕೋರ್ಟ್‌ನಿಂದ ಮಹತ್ವದ ಆದೇಶ

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿಷೇಧಿಸಿದ್ದ ಸರ್ಕಾರದ ಕ್ರಮವನ್ನು ರದ್ದುಪಡಿಸಿರುವ ಹೈಕೋರ್ಟ್ ವಿಭಾಗೀಯ ಪೀಠ, ಬೈಕ್‌ಗಳನ್ನು ಸಾರಿಗೆ ವಾಹನಗಳಾಗಿ ಬಳಸಲು ಅನುಮತಿ ನೀಡಿದೆ. ಓಲಾ, ಉಬರ್‌ನಂತಹ ಅಗ್ರಿಗೇಟರ್ ಸಂಸ್ಥೆಗಳ ಮೇಲ್ಮನವಿಯನ್ನು ನ್ಯಾಯಾಲಯ ಮಾನ್ಯ ಮಾಡಿದೆ.

Read Full Story

08:33 AM (IST) Jan 24

KMF ಗ್ರಾಹಕರಿಗೆ ಗುಡ್‌ ನ್ಯೂಸ್ - ಈಗ ಕೇವಲ 10 ರುಪಾಯಿಗೆ ನಂದಿನಿ ಹಸು ಹಾಲು ಲಭ್ಯ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿನಿಯ ಹಲವು ಹೊಸ ಉತ್ಪನ್ನಗಳನ್ನು ಲೋಕಾರ್ಪಣೆ ಮಾಡಿದರು. ಇವುಗಳಲ್ಲಿ ಹೆಚ್ಚು ಪ್ರೊಟೀನ್‌ಯುಕ್ತ ಹಾಲು (ಎನ್‌-ಪ್ರೊಮಿಲ್ಕ್), ಮೀಡಿಯಂ ಫ್ಯಾಟ್‌ ಪನೀರ್, ಹೈ ಅರೋಮಾ ತುಪ್ಪ ಮತ್ತು ಪ್ರೊಬಯೋಟಿಕ್‌ ಮೊಸರು ಸೇರಿವೆ.  

Read Full Story

08:19 AM (IST) Jan 24

ತುಂಗಭದ್ರಾ ಜಲಾಶಯ ಗೇಟ್ ಅಳವಡಿಕೆ - ₹10 ಕೋಟಿ ಅನುದಾನ ವಾಪಸ್ ಪಡೆದ ರಾಜ್ಯ ಸರ್ಕಾರ

ತುಂಗಭದ್ರಾ ಜಲಾಶಯದ 33 ಕ್ರಸ್ಟ್‌ಗೇಟ್‌ಗಳನ್ನು ಬದಲಿಸುವ ಕಾರ್ಯ ಪ್ರಗತಿಯಲ್ಲಿದ್ದು, ಈ ಯೋಜನೆಗೆ ರಾಜ್ಯ ಸರ್ಕಾರ ನೀಡಿದ್ದ ₹10 ಕೋಟಿ ಅನುದಾನವನ್ನು ಹಿಂಪಡೆದಿದೆ. ಅನುದಾನದ ಗೊಂದಲದ ನಡುವೆಯೂ, ಮೇ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
Read Full Story

08:06 AM (IST) Jan 24

ಗುಲಾಬಿ ಮಾರ್ಗದಲ್ಲಿ ಪ್ರಯೋಗಾರ್ಥ ಸಂಚಾರ; ಇಲ್ಲಿನ ನಿಲ್ದಾಣಗಳು ಯಾವುವು? ಯಾವಾಗ ಕಾರ್ಯಾರಂಭ?

ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಎತ್ತರಿಸಿದ ಮಾರ್ಗದಲ್ಲಿ ಪ್ರೊಟೊಟೈಪ್‌ ರೈಲಿನ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ವಿವಿಧ ಪರೀಕ್ಷೆಗಳ ನಂತರ, ಮೇ ತಿಂಗಳಲ್ಲಿ ವಾಣಿಜ್ಯ ಸಂಚಾರ ಆರಂಭಿಸುವ ಗುರಿ ಹೊಂದಲಾಗಿದ್ದು, ಈ ಮಾರ್ಗವು ಒಟ್ಟು 17 ನಿಲ್ದಾಣಗಳನ್ನು ಒಳಗೊಂಡಿದೆ.
Read Full Story

08:04 AM (IST) Jan 24

ಸಂಪಾದಕೀಯ - ನೇಮಕಾತಿಗೆ ವಯೋಮಿತಿ ಸಡಿಲಿಕೆ ಅತ್ಯಂತ ಸಕಾಲಿಕ

ನೇಮಕಾತಿ ವಿಳಂಬದಿಂದ ವಯೋಮಿತಿ ಮೀರುವ ಆತಂಕದಲ್ಲಿದ್ದ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದಿದೆ.  ಪ್ರವರ್ಗದ ಅಭ್ಯರ್ಥಿಗಳಿಗೆ ಸರ್ಕಾರಿ ಸಿವಿಲ್‌ ಹುದ್ದೆಗಳ ನೇಮಕಾತಿಗೆ ಗರಿಷ್ಠ ವಯೋಮಿತಿಯನ್ನು 5 ವರ್ಷ ಕಾಲ ಸಡಿಲಗೊಳಿಸಿ ಆದೇಶ ಹೊರಡಿಸಿದೆ. ಇದು ಲಕ್ಷಾಂತರ ಆಕಾಂಕ್ಷಿಗಳಿಗೆ ವರದಾನವಾಗಿದೆ.

Read Full Story

07:29 AM (IST) Jan 24

ಬ್ರೂಣಲಿಂಗ ಪತ್ತೆಕೋರರ ಮಾಹಿತಿ ಕೊಟ್ರೆ ₹1 ಲಕ್ಷ ಬಹುಮಾನ! ಮಹತ್ವದ ಘೋಷಣೆ

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಭ್ರೂಣ ಲಿಂಗ ಪತ್ತೆ ಕುರಿತು ಮಾಹಿತಿ ನೀಡಿದವರಿಗೆ ನೀಡುವ ಬಹುಮಾನವನ್ನು ₹50 ಸಾವಿರದಿಂದ ₹1 ಲಕ್ಷಕ್ಕೆ ಏರಿಕೆ ಮಾಡಿರುವುದಾಗಿ ಘೋಷಿಸಿದ್ದಾರೆ. ರಾಜ್ಯದಲ್ಲಿನ ಲಿಂಗಾನುಪಾತದ ಅಸಮತೋಲನವನ್ನು ಸರಿಪಡಿಸಲು ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತಿದೆ ಎಂದರು. 

Read Full Story

06:51 AM (IST) Jan 24

ಬೆಳ್ಳಂಬೆಳಗ್ಗೆ 510 ಶಾಲಾ ವಾಹನ ತಪಾಸಣೆ - 26 ಪಾನಮತ್ತ ಚಾಲಕರ ವಿರುದ್ಧ ಕೇಸ್‌!

ಬೆಂಗಳೂರಿನಲ್ಲಿ ಸಂಚಾರ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ, ಪಾನಮತ್ತರಾಗಿದ್ದ 26 ಖಾಸಗಿ ಶಾಲಾ ವಾಹನ ಚಾಲಕರು ಸಿಕ್ಕಿಬಿದ್ದಿದ್ದಾರೆ. ಅಲ್ಲದೆ, ಏಕಮುಖ ಸಂಚಾರ ನಿಯಮ ಉಲ್ಲಂಘಿಸಿದ 5,458 ಪ್ರಕರಣಗಳನ್ನು ದಾಖಲಿಸಿ, ಸಾರ್ವಜನಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗಿದೆ.
Read Full Story

More Trending News