‘14ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ಬಂದಿದ್ದ ಪಾಲು ಶೇ.4.71. ಆದರೆ, 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಇನ್ನೂ ಕಮ್ಮಿ, ಅಂದರೆ, ಶೇ.3.64ರಷ್ಟು ಮಾತ್ರ ಬಂದಿದೆ. ಕನಿಷ್ಠ ಶೇ 4.71ರಷ್ಟಾದರೂ ಕೊಡಿ ಎಂದು ಒತ್ತಾಯ ಮಾಡಿದ್ದೆವು. 14ನೇ ಹಣಕಾಸು ಆಯೋಗಕ್ಕಿಂತ ಜಾಸ್ತಿ ಮಾಡಲು ಕೇಳಿದ್ದೆವು. ಆದರೆ, ಶೇ.4.131ರಷ್ಟು ಮಾತ್ರ ಕೊಡಲಾಗಿದೆ. ಇದು ರಾಜ್ಯಕ್ಕೆ ಮಾಡಿದ ದೊಡ್ಡ ಅನ್ಯಾಯ’ ಎಂದು ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.
09:19 AM (IST) Feb 02
08:55 AM (IST) Feb 02
ಪ್ರಸಕ್ತ ಬಜೆಟ್ನಲ್ಲಿ ರೈಲ್ವೆಗೆ ಭರ್ಜರಿ 2.77 ಲಕ್ಷ ಕೋಟಿ ರು. ಅನುದಾನ ನೀಡಲಾಗಿದೆ. ಇದು ರೈಲ್ವೆಗೆ ಇದುವರೆಗೆ ನೀಡಿದ ಗರಿಷ್ಠ ನೆರವಾಗಿದೆ. ಈ ಅನುದಾನವು ಹೊಸ ರೈಲ್ವೆ ಮಾರ್ಗ ನಿರ್ಮಾಣ, ಹೊಸ ರೈಲುಗಳ ಖರೀದಿ, ಹೊಸ ಕೋಚ್ ಖರೀದಿ ಮತ್ತು ಇನ್ನಿತರೆ ಕೆಲಸಗಳನ್ನು ಒಳಗೊಂಡಿದೆ.
08:07 AM (IST) Feb 02
ದೇಶದ ಗ್ರಾಮೀಣ ವಲಯಗಳ ಆರ್ಥಿಕತೆ ಬಹುತೇಕ ಕೃಷಿ ಚಟುವಟಿಕೆಗಳಿಗೆ ಸೀಮಿತವಾಗಿದ್ದು, ಇದಕ್ಕೆ ಹೊಸ ರೂಪ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರ ಭಾಗವಾಗಿ ಗ್ರಾಮೀಣ ಆರ್ಥಿಕತೆಯ ವೈವಿಧ್ಯಗೊಳಿಸುವ ಮತ್ತು ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಬಜೆಟ್ನಲ್ಲಿ ಕೆಲವು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ.
08:04 AM (IST) Feb 02
ಅನಸೂಯ ಜಬರ್ದಸ್ತ್ ಶೋ ಬಿಟ್ಟು ಬಹಳ ದಿನಗಳಾಗಿವೆ. ರಶ್ಮಿ, ಅನಸೂಯ ಬಗ್ಗೆ ಮಾತನಾಡುತ್ತಾ ಸಂಚಲನಕಾರಿ ಹೇಳಿಕೆ ನೀಡಿದ್ದಾರೆ. ಅನಸೂಯ ಮೈಕ್ ಬಿಸಾಕಿ ಹೊರಟುಹೋದಳು ಎಂದು ಕಾಮೆಂಟ್ ಮಾಡಿದ್ದಾರೆ.
07:46 AM (IST) Feb 02
07:26 AM (IST) Feb 02
ಈ ಬಾರಿ ಬಜೆಟ್ನಲ್ಲಿ ಆಯುರ್ವೇದಕ್ಕೆ ಅತಿ ಹೆಚ್ಚಿನ ಒತ್ತು ನೀಡಲಾಗಿದೆ. ಅಲೋಪತಿ ರೀತಿ ಆಯುರ್ವೇದಕ್ಕೂ ನಿರ್ಮಲಾ ಸೀತಾರಾಮನ್ ಅವರು ಪ್ರಾಮುಖ್ಯತೆ ನೀಡಿರುವುದಕ್ಕೆ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
07:18 AM (IST) Feb 02
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ನೇ ಸಾಲಿಗಾಗಿ ಮಂಡಿಸಿರುವ ಬಜೆಟ್ ಕುರಿತಂತೆ ಸಾಕಷ್ಟು ಪರ-ವಿರೋಧದ ಚರ್ಚೆಗಳು ವ್ಯಕ್ತವಾಗಿವೆ. ಇದೀಗ ರಾಜ್ಯಸಭಾ ಸಂಸದರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆಯವರು ಬಜೆಟ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
07:05 AM (IST) Feb 02
17 ಕ್ಯಾನ್ಸರ್ ಔಷಧಗಳ ಮೇಲಿನ ಕನಿಷ್ಠ ಸೀಮಾ ಸುಂಕವನ್ನು ತೆಗೆದು ಹಾಕಿರುವುದಾಗಿ ಹಣಕಾಸು ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದರಿಂದಾಗಿ ಕ್ಯಾನ್ಸರ್ ಚಿಕಿತ್ಸೆಗಾಗಿ ವಿದೇಶಿ ಔಷಧಗಳ ಮೇಲೆ ಅವಲಂಬಿತರಾಗಿರುವ ರೋಗಿಗಳಿಗೆ ತುಸು ರಿಲೀಫ್ ಸಿಕ್ಕಿದೆ.