LIVE NOW
Published : Feb 02, 2026, 06:45 AM ISTUpdated : Feb 02, 2026, 09:19 AM IST

Karnataka News Live: ಬೆಳಕಿನ ಕವಿತೆಯ ದೀಪ ಆರಿಸಿದ ಐಶ್ವರ್ಯಾ-ವರುಣ್ ರೊಮ್ಯಾಂಟಿಕ್ ಹಾಡಿನ ಮೇಕಿಂಗ್ ವಿಡಿಯೋ ವೈರಲ್

ಸಾರಾಂಶ

‘14ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ಬಂದಿದ್ದ ಪಾಲು ಶೇ.4.71. ಆದರೆ, 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಇನ್ನೂ ಕಮ್ಮಿ, ಅಂದರೆ, ಶೇ.3.64ರಷ್ಟು ಮಾತ್ರ ಬಂದಿದೆ. ಕನಿಷ್ಠ ಶೇ 4.71ರಷ್ಟಾದರೂ ಕೊಡಿ ಎಂದು ಒತ್ತಾಯ ಮಾಡಿದ್ದೆವು. 14ನೇ ಹಣಕಾಸು ಆಯೋಗಕ್ಕಿಂತ ಜಾಸ್ತಿ ಮಾಡಲು ಕೇಳಿದ್ದೆವು. ಆದರೆ, ಶೇ.4.131ರಷ್ಟು ಮಾತ್ರ ಕೊಡಲಾಗಿದೆ. ಇದು ರಾಜ್ಯಕ್ಕೆ ಮಾಡಿದ ದೊಡ್ಡ ಅನ್ಯಾಯ’ ಎಂದು ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

 

09:19 AM (IST) Feb 02

ಬೆಳಕಿನ ಕವಿತೆಯ ದೀಪ ಆರಿಸಿದ ಐಶ್ವರ್ಯಾ-ವರುಣ್ ರೊಮ್ಯಾಂಟಿಕ್ ಹಾಡಿನ ಮೇಕಿಂಗ್ ವಿಡಿಯೋ ವೈರಲ್

ಕಿರುತೆರೆ ನಟಿ ಐಶ್ವರ್ಯಾ ಸಿಂಧೋಗಿ ಮತ್ತು ನಟ ವರುಣ್ ಅವರ "ಬೆಳಕಿನ ಕವಿತೆ" ಹಾಡಿನ ರೊಮ್ಯಾಂಟಿಕ್ ರೀಲ್ಸ್ ವೈರಲ್ ಆಗಿದೆ. ಇದೀಗ, ಈ ರೀಲ್ಸ್‌ನ ಮೇಕಿಂಗ್ ವಿಡಿಯೋ ಮುನ್ನೆಲೆಗೆ ಬಂದಿದ್ದು, ತೆರೆಮೇಲಿನ ರೊಮ್ಯಾಂಟಿಕ್ ದೃಶ್ಯಗಳ ಚಿತ್ರೀಕರಣದ ಹಿಂದಿನ ಶ್ರಮ ಮತ್ತು ಕಸರತ್ತನ್ನು ತೋರಿಸುತ್ತದೆ.
Read Full Story

08:55 AM (IST) Feb 02

ರೈಲ್ವೆಗೆ ₹2.77 ಲಕ್ಷ ಕೋಟಿ ಅನುದಾನ - ದಾಖಲೆ ಪ್ರಮಾಣದ ಹಣ

ಪ್ರಸಕ್ತ ಬಜೆಟ್‌ನಲ್ಲಿ ರೈಲ್ವೆಗೆ ಭರ್ಜರಿ 2.77 ಲಕ್ಷ ಕೋಟಿ ರು. ಅನುದಾನ ನೀಡಲಾಗಿದೆ. ಇದು ರೈಲ್ವೆಗೆ ಇದುವರೆಗೆ ನೀಡಿದ ಗರಿಷ್ಠ ನೆರವಾಗಿದೆ. ಈ ಅನುದಾನವು ಹೊಸ ರೈಲ್ವೆ ಮಾರ್ಗ ನಿರ್ಮಾಣ, ಹೊಸ ರೈಲುಗಳ ಖರೀದಿ, ಹೊಸ ಕೋಚ್‌ ಖರೀದಿ ಮತ್ತು ಇನ್ನಿತರೆ ಕೆಲಸಗಳನ್ನು ಒಳಗೊಂಡಿದೆ.

Read Full Story

08:07 AM (IST) Feb 02

ತೆಂಗು, ಗೋಡಂಬಿ, ಶ್ರೀಗಂಧ ಕೃಷಿಗೆ ಕೇಂದ್ರ ಬಂಪರ್‌-ರೈತರ ಆದಾಯ ಹೆಚ್ಚಿಸಲು ಹಲವು ಕ್ರಮ

ದೇಶದ ಗ್ರಾಮೀಣ ವಲಯಗಳ ಆರ್ಥಿಕತೆ ಬಹುತೇಕ ಕೃಷಿ ಚಟುವಟಿಕೆಗಳಿಗೆ ಸೀಮಿತವಾಗಿದ್ದು, ಇದಕ್ಕೆ ಹೊಸ ರೂಪ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರ ಭಾಗವಾಗಿ ಗ್ರಾಮೀಣ ಆರ್ಥಿಕತೆಯ ವೈವಿಧ್ಯಗೊಳಿಸುವ ಮತ್ತು ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಕೆಲವು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ.

Read Full Story

08:04 AM (IST) Feb 02

ಅನಸೂಯ ಮೈಕ್ ಬಿಸಾಕಿ ಹೋದಳು, ರಶ್ಮಿ ಶಾಕಿಂಗ್ ಕಾಮೆಂಟ್ಸ್! ಹೋಗುವ ಮುನ್ನ ಬೇಡಿಕೊಂಡಿದ್ದೇಕೆ?

ಅನಸೂಯ ಜಬರ್ದಸ್ತ್ ಶೋ ಬಿಟ್ಟು ಬಹಳ ದಿನಗಳಾಗಿವೆ. ರಶ್ಮಿ, ಅನಸೂಯ ಬಗ್ಗೆ ಮಾತನಾಡುತ್ತಾ ಸಂಚಲನಕಾರಿ ಹೇಳಿಕೆ ನೀಡಿದ್ದಾರೆ. ಅನಸೂಯ ಮೈಕ್ ಬಿಸಾಕಿ ಹೊರಟುಹೋದಳು ಎಂದು ಕಾಮೆಂಟ್ ಮಾಡಿದ್ದಾರೆ. 

Read Full Story

07:46 AM (IST) Feb 02

Amruthadhaare - ಅಡುಗೆಮನೆಯಲ್ಲಿ ಗೌತಮ್-ಭೂಮಿಕಾ ರೊಮ್ಯಾನ್ಸ್ - ಡುಮ್ಮಾ ಸರ್ ಫುಲ್ ಸುಸ್ತು

ಸುಮಾರು ಐದು ವರ್ಷಗಳ ನಂತರ ಗೌತಮ್ ಮತ್ತು ಭೂಮಿಕಾ ಮತ್ತೆ ಒಂದಾಗಿದ್ದು, ಇಬ್ಬರ ನಡುವೆ ಪ್ರೀತಿ ಚಿಗುರಿದೆ. ಅಡುಗೆಮನೆಯಲ್ಲಿ ಶುರುವಾದ ಇವರ ರೊಮ್ಯಾಂಟಿಕ್ ಕ್ಷಣಗಳು, ಇವರಿಬ್ಬರು ಒಂದಾಗಿರುವುದನ್ನು ತಿಳಿದು ಆಘಾತಗೊಂಡಿರುವ ಜೈದೇವ್‌ನ ಮುಂದಿನ ನಡೆಯೇನು ಎಂಬುದರ ಕುರಿತು ಈ ಲೇಖನ ವಿವರಿಸುತ್ತದೆ.
Read Full Story

07:26 AM (IST) Feb 02

ಆಯುರ್ವೇದಕ್ಕೆ ಬಜೆಟ್‌ನಲ್ಲಿ ಬಂಪರ್‌ - 3 ಅಖಿಲ ಭಾರತ ಆಯುರ್ವೇದ ಸಂಸ್ಥೆಗಳ ಸ್ಥಾಪನೆ

ಈ ಬಾರಿ ಬಜೆಟ್‌ನಲ್ಲಿ ಆಯುರ್ವೇದಕ್ಕೆ ಅತಿ ಹೆಚ್ಚಿನ ಒತ್ತು ನೀಡಲಾಗಿದೆ. ಅಲೋಪತಿ ರೀತಿ ಆಯುರ್ವೇದಕ್ಕೂ ನಿರ್ಮಲಾ ಸೀತಾರಾಮನ್ ಅವರು ಪ್ರಾಮುಖ್ಯತೆ ನೀಡಿರುವುದಕ್ಕೆ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read Full Story

07:18 AM (IST) Feb 02

ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್‌ ಬಗ್ಗೆ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದೇನು?

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ನೇ ಸಾಲಿಗಾಗಿ ಮಂಡಿಸಿರುವ ಬಜೆಟ್ ಕುರಿತಂತೆ ಸಾಕಷ್ಟು ಪರ-ವಿರೋಧದ ಚರ್ಚೆಗಳು ವ್ಯಕ್ತವಾಗಿವೆ. ಇದೀಗ ರಾಜ್ಯಸಭಾ ಸಂಸದರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆಯವರು ಬಜೆಟ್‌ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

Read Full Story

07:05 AM (IST) Feb 02

ದುಬಾರಿ ಕ್ಯಾನ್ಸರ್ ಔಷಧಿಗಳಿನ್ನು ಕೊಂಚ ಅಗ್ಗ - ರೋಗಿಗಳಿಗೆ ರಿಲೀಫ್‌

17 ಕ್ಯಾನ್ಸರ್ ಔಷಧಗಳ ಮೇಲಿನ ಕನಿಷ್ಠ ಸೀಮಾ ಸುಂಕವನ್ನು ತೆಗೆದು ಹಾಕಿರುವುದಾಗಿ ಹಣಕಾಸು ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಇದರಿಂದಾಗಿ ಕ್ಯಾನ್ಸರ್‌ ಚಿಕಿತ್ಸೆಗಾಗಿ ವಿದೇಶಿ ಔಷಧಗಳ ಮೇಲೆ ಅವಲಂಬಿತರಾಗಿರುವ ರೋಗಿಗಳಿಗೆ ತುಸು ರಿಲೀಫ್‌ ಸಿಕ್ಕಿದೆ.

Read Full Story

More Trending News