Published : Nov 17, 2025, 07:19 AM ISTUpdated : Nov 17, 2025, 10:29 PM IST

Karnataka News Live: ಸಿಎಂ ಸಿದ್ದರಾಮಯ್ಯ ಪತ್ನಿಗೆ ಐಸಿಯುವಿನಲ್ಲಿ ಚಿಕಿತ್ಸೆ, ಪುತ್ರ ಯತೀಂದ್ರ ಮಾಹಿತಿ

ಸಾರಾಂಶ

ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆ ಕುರಿತು ಎದ್ದಿರುವ ಸುದೀರ್ಘ ಅವಧಿಯ ಕುತೂಹಲಕ್ಕೆ ಸೋಮವಾರ ದೆಹಲಿಯಲ್ಲಿ ಕ್ಲೈಮಾಕ್ಸ್‌ ಬೀಳುವ ಸಾಧ್ಯತೆ ಇದೆ. ಸಂಪುಟ ಪುನಾರಚನೆಗೆ ಸಂಬಂಧಿಸಿ ಹೈಕಮಾಂಡ್‌ನಿಂದ ತಾತ್ವಿಕ ಒಪ್ಪಿಗೆ ಪಡೆದಿದ್ದಾರೆ ಎನ್ನಲಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಗ್ಗೆ ಚರ್ಚಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಮವಾರ ದೆಹಲಿಯಲ್ಲಿ ಭೇಟಿ ಮಾಡುವ ಸಾಧ್ಯತೆಯಿದೆ. ಈ ವೇಳೆ ಸಂಪುಟ ಪುನರಾಚನೆ ಕುರಿತು ಖರ್ಗೆ ಅವರ ನಿಲುವು ಸ್ಪಷ್ಟಗೊಳ್ಳುವ ಸಾಧ್ಯತೆಯಿದೆ.

siddaramaiah wife parvathi

10:29 PM (IST) Nov 17

ಸಿಎಂ ಸಿದ್ದರಾಮಯ್ಯ ಪತ್ನಿಗೆ ಐಸಿಯುವಿನಲ್ಲಿ ಚಿಕಿತ್ಸೆ, ಪುತ್ರ ಯತೀಂದ್ರ ಮಾಹಿತಿ

ಸಿಎಂ ಸಿದ್ದರಾಮಯ್ಯ ಪತ್ನಿಗೆ ಐಸಿಯುವಿನಲ್ಲಿ ಚಿಕಿತ್ಸೆ, ಪುತ್ರ ಯತೀಂದ್ರ ಮಾಹಿತಿ ನೀಡಿದ್ದಾರೆ. ಆರೋಗ್ಯ ಏರುಪೇರಾಗಿ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ತಾಯಿ ಆರೋಗ್ಯದ ಕುರಿತು ಪುತ್ರ ಯತೀಂದ್ರ ಸಿದ್ದರಾಮಯ್ಯ ವಿವರಣೆ ನೀಡಿದ್ದಾರೆ.

Read Full Story

09:55 PM (IST) Nov 17

ಸಾವಿರ ರು. ಬಲ್ಬು 11 ಸಾವಿರಕ್ಕೆ, 300 ಬಲ್ಬುಗಳಿಗೆ 33 ಲಕ್ಷ ..!

ನಗರ ಸೌಂದರ್ಯೀಕರಣಕ್ಕೆಂದು ಕೈಗೆತ್ತಿಕೊಂಡ, ಬೀದಿದೀಪಗಳ ಅಳವಡಿಕೆ ಹೆಸರಲ್ಲಿ ಕೋಟ್ಯಂತರ ರುಪಾಯಿಗಳ ಹಣ ಲೂಟಿ ಹೊಡೆಯಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. 1 ಕೋಟಿ ರು.ಗಳ ವೆಚ್ಚದ ಈ ಕಾಮಗಾರಿಯನ್ನು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತಕ್ಕೆ ವಹಿಸಲಾಗಿತ್ತು.

Read Full Story

09:37 PM (IST) Nov 17

ಸಿಎಂ ಸಿದ್ದರಾಮಯ್ಯ ಪತ್ನಿ ಆರೋಗ್ಯದಲ್ಲಿ ಏರುಪೇರು, ಶ್ವಾಸಕೋಶ ಸಮಸ್ಯೆಯಿಂದ ಆಸ್ಪತ್ರೆ ದಾಖಲು

ಸಿಎಂ ಸಿದ್ದರಾಮಯ್ಯ ಪತ್ನಿ ಆರೋಗ್ಯದಲ್ಲಿ ಏರುಪೇರು, ಶ್ವಾಸಕೋಶ ಸಮಸ್ಯೆಯಿಂದ ಆಸ್ಪತ್ರೆ ದಾಖಲು, ಇಂದು ಮಧ್ಯಾಹ್ನ ಅಸ್ವಸ್ಥಗೊಂಡ ಪಾರ್ವತಿ ಅವರನ್ನು ಅಪೋಲೋ ಆಸ್ಪತ್ರೆ ದಾಖಲಿಸಲಾಗಿದೆ.

Read Full Story

08:57 PM (IST) Nov 17

ದೆಹಲಿ ಅಂಗಳದಲ್ಲಿ ಸಂಪುಟ ಸರ್ಕಸ್ - ಸಿದ್ದು-ಖರ್ಗೆ ಸಭೆಯ ಅಂತ್ಯ, ಒಂದು ಗಂಟೆ ನಡೆದ ಸಭೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಯಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಸಂಪುಟ ವಿಸ್ತರಣೆ, ಖಾಲಿ ಸಚಿವ ಸ್ಥಾನಗಳ ಭರ್ತಿ ಮತ್ತು ನಾಯಕತ್ವದ ವಿಷಯಗಳು ಪ್ರಮುಖವಾಗಿ ಚರ್ಚೆಯಾಗಿದ್ದು, ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.
Read Full Story

07:50 PM (IST) Nov 17

ಬಿಗ್ ಬಾಸ್ ಗಿಲ್ಲಿ ನಟನ ವಿರುದ್ಧ ದೂರು ದಾಖಲು, ಮಹಿಳಾ ಆಯೋಗದಿಂದ ಬೆಂಗಳೂರು ಕಮಿಷನರ್‌ಗೆ ಪತ್ರ!

ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ. ಸಹ ಸ್ಪರ್ಧಿಯೊಬ್ಬರ ಉಡುಪನ್ನು ಬಾತ್‌ರೂಮ್‌ನಿಂದ ಹೊರಹಾಕಿದ ಆರೋಪದ ಮೇಲೆ ಕಲಾವಿದೆ ಕುಶಲ ದೂರು ನೀಡಿದ್ದು, ಆಯೋಗವು ಬೆಂಗಳೂರು ಪೊಲೀಸ್ ಕಮಿಷನರ್‌ಗೆ ತನಿಖೆಗೆ ಸೂಚಿಸಿದೆ. 

Read Full Story

07:26 PM (IST) Nov 17

ಸೌದಿ ಬಸ್‌ - ಟ್ಯಾಂಕರ್ ದುರಂತದಲ್ಲಿ ಕನ್ನಡಿಗನೂ ಸಾವು, ಮೃತ ಭಾರತೀಯರ ಸಂಖ್ಯೆ 45ಕ್ಕೆ ಏರಿಕೆ!

ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಉಮ್ರಾ ಯಾತ್ರೆಗೆ ತೆರಳಿದ್ದ ಹುಬ್ಬಳ್ಳಿಯ ಅಬ್ದುಲ್ ಗಣಿ ಶಿರಹಟ್ಟಿ ಎಂಬುವವರು ಮೃತಪಟ್ಟಿದ್ದಾರೆ. ಮೆಕ್ಕಾ-ಮದೀನಾ ಮಾರ್ಗದಲ್ಲಿ ನಡೆದ ಈ ದುರಂತದಲ್ಲಿ 45ಕ್ಕೂ ಹೆಚ್ಚು ಭಾರತೀಯರು ಸಾವನ್ನಪ್ಪಿದ್ದಾರೆ.

Read Full Story

06:57 PM (IST) Nov 17

'ನನಗೆ ಮಾತ್ರವಲ್ಲ ಇನ್ನೂ ಮೂವರಿಗೆ ಇದೇ ರೀತಿ ಮೋಸ ಮಾಡಿದ್ದಾಳೆ..' ಸ್ಯಾಂಡಲ್‌ವುಡ್‌ ನಟಿ ವಿರುದ್ಧ ಅರವಿಂದ್‌ ರೆಡ್ಡಿ ಹೊಸ ಬಾಂಬ್‌!

ಸ್ಯಾಂಡಲ್‌ವುಡ್ ನಟಿಯ ಕಿರುಕುಳ ಆರೋಪವನ್ನು ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ನಿರಾಕರಿಸಿದ್ದಾರೆ. ಇದು ಲೈಂಗಿಕ ಕಿರುಕುಳವಲ್ಲ ಎಂದ ಅವರು, ನಟಿ ತನಗೆ 3 ಕೋಟಿ ಹಾಗೂ ಇತರೆ ಮೂವರಿಗೆ ಮದುವೆ ಹೆಸರಲ್ಲಿ ವಂಚಿಸಿದ್ದಾಳೆ ಎಂದು ಆರೋಪಿಸಿದ್ದಾರೆ. 

Read Full Story

06:22 PM (IST) Nov 17

ಸೋದರ ಮಾವನ ಜೊತೆಗೆ ಸೇರಿ ಗಂಡನನ್ನು ಕೊಂದ ಪತ್ನಿ! ಆಕೆಗೆ ಗಂಡ ಮುಖ್ಯನಲ್ಲ ಮಾವನೂ ಅಲ್ಲ! ಕೊಂದಿದ್ಯಾಕೆ?

ಬೆಂಗಳೂರಿನ ಅಂದ್ರಹಳ್ಳಿಯಲ್ಲಿ ಆಸ್ತಿಗಾಗಿ ಪತ್ನಿಯೇ ತನ್ನ ಸೋದರ ಮಾವನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿದ್ದಾಳೆ. ಮನೆಯನ್ನು ತನ್ನ ಹೆಸರಿಗೆ ಬರೆಯಲು ಒಪ್ಪದ ಕಾರಣ, ಪತಿ ವೆಂಕಟೇಶ್ ಅವರನ್ನು ಮೇಲಿಂದ ತಳ್ಳಿ ಹತ್ಯೆ ಮಾಡಲಾಗಿದೆ.  

Read Full Story

06:12 PM (IST) Nov 17

ರಾಜೀನಾಮೆ ಕೊಡ್ತೀನಿ ಅಂತಾ ಕಾಂಗ್ರೆಸ್‌ಗೆ ಬ್ಲಾಕ್‌ಮೇಲ್‌ ಮಾಡೋದಿಲ್ಲ ಎಂದ ಡಿಕೆ ಶಿವಕುಮಾರ್‌

ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ವದಂತಿಗಳನ್ನು ತಳ್ಳಿಹಾಕಿದ್ದಾರೆ. ತಾವು ಪಕ್ಷದ 'ಶಿಸ್ತಿನ ಸಿಪಾಯಿ' ಎಂದು ಹೇಳಿಕೊಂಡಿರುವ ಅವರು, ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನರ್ರಚನೆಯ ಊಹಾಪೋಹಗಳ ನಡುವೆ ತಮ್ಮ ದೆಹಲಿ ಭೇಟಿಯ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ.

Read Full Story

05:58 PM (IST) Nov 17

Ind vs SA - ಟೈಮಿಂಗ್ಸ್‌ನಲ್ಲಿ ಬದಲಾವಣೆ, ಇಷ್ಟು ಗಂಟೆಯಿಂದ ಆರಂಭವಾಗತ್ತೇ ಎರಡನೇ ಟೆಸ್ಟ್ ಮ್ಯಾಚ್!

ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಮುಕ್ತಾಯವಾಗಿದ್ದು, ಇದೀಗ ಎರಡನೇ ಪಂದ್ಯ ಯಾವಾಗ ಆರಂಭವಾಗಲಿದೆ? ಟೈಮಿಂಗ್ಸ್‌ನಲ್ಲಿ ಏನೆಲ್ಲಾ ಬದಲಾವಣೆಗಳಾಗಲಿವೆ? ಎಲ್ಲಿ ನೇರಪ್ರಸಾರ ವೀಕ್ಷಿಸಬಹುದು ತಿಳಿಯೋಣ ಬನ್ನಿ.

 

Read Full Story

05:36 PM (IST) Nov 17

ಡೇಟಿಂಗ್ ಆ್ಯಪ್ ಪ್ರೀತಿ, ಮೊದಲ ಭೇಟಿಯಲ್ಲೇ ಲಾಡ್ಜ್, ಯುವತಿ ಕುಡಿಸಿದ ನೀರಿಂದ ಪ್ರಜ್ಞೆ ತಪ್ಪಿದ ಶ್ರೀಮಂತ ಯುವಕ ಬೆಳಗ್ಗೆ ಬಡವನಾದ!

ಬೆಂಗಳೂರಿನಲ್ಲಿ ಡೇಟಿಂಗ್ ಆ್ಯಪ್ ಮೂಲಕ ಯುವಕರನ್ನು ಪರಿಚಯಿಸಿಕೊಂಡು, ಮಂಪರು ಔಷಧ ನೀಡಿ ದೋಚುತ್ತಿದ್ದ ಜೋಡಿಯನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. ಸಾಲ ತೀರಿಸಲು ಕಳ್ಳತನಕ್ಕೆ ಇಳಿದಿದ್ದ ಕವಿಪ್ರಿಯಾ ಮತ್ತು ಆಕೆಯ ಬಾಯ್‌ಫ್ರೆಂಡ್ ಹರ್ಷವರ್ಧನ್, ಮೊದಲ ಪ್ರಯತ್ನದಲ್ಲೇ ಸಿಕ್ಕಿಬಿದ್ದಿದ್ದಾರೆ.
Read Full Story

05:36 PM (IST) Nov 17

ಕರ್ನಾಟಕದ ಅತ್ಯಂತ ದುಬಾರಿ ಡಿಜಿಟಲ್‌ ಅರೆಸ್ಟ್‌ - 32 ಕೋಟಿ ಕಳೆದುಕೊಂಡ ಬೆಂಗಳೂರಿನ ಟೆಕ್ಕಿ!

ಬೆಂಗಳೂರಿನ 57 ವರ್ಷದ ಮಹಿಳಾ ಟೆಕ್ಕಿಯೊಬ್ಬರು 'ಡಿಜಿಟಲ್ ಅರೆಸ್ಟ್' ಹಗರಣದಲ್ಲಿ ಸಿಲುಕಿ, ಆರು ತಿಂಗಳ ಅವಧಿಯಲ್ಲಿ ₹31.83 ಕೋಟಿ ಕಳೆದುಕೊಂಡಿದ್ದಾರೆ. ವಂಚಕರು, ಸ್ಕೈಪ್ ಮೂಲಕ ಅವರನ್ನು ಗೃಹಬಂಧನದಲ್ಲಿರಿಸಿ, ಬೆದರಿಸಿ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ.

Read Full Story

05:02 PM (IST) Nov 17

ಸುಧಿಗೆ Bigg Boss ಮನೆಯಲ್ಲಿ ಸಿಕ್ಕ ಸಂಭಾವನೆ ಎಷ್ಟು? 50 ಕೋಟಿ ಬಗ್ಗೆ ಮಾತನಾಡಿದ್ದೇಕೆ ಕಾಕ್ರೋಚ್​?

ಬಿಗ್ ಬಾಸ್‌ನಿಂದ ಹೊರಬಂದ ನಂತರ ಕಾಕ್ರೋಚ್ ಸುಧಿ ಅವರ ಜನಪ್ರಿಯತೆ ಹೆಚ್ಚಾಗಿದೆ. ತಮ್ಮ ಪತಿಯ ಶೀಘ್ರ ಎಲಿಮಿನೇಷನ್‌ಗೆ ಅಶ್ವಿನಿ ಮತ್ತು ಜಾಹ್ನವಿ ಕಾರಣ ಎಂದು ಅವರ ಪತ್ನಿ ಹೇಳಿದರೆ, 50 ಕೋಟಿ ಕೊಟ್ಟರೂ ಸಿಗದ ಬಿಗ್ ಬಾಸ್ ಮನೆಯ ಅನುಭವವೇ ತನಗೆ ಮುಖ್ಯ, ಸಂಭಾವನೆಯಲ್ಲ ಎಂದು ಸುಧಿ ಹೇಳಿದ್ದಾರೆ.
Read Full Story

04:27 PM (IST) Nov 17

ರವೀಂದ್ರ ಕಲಾಕ್ಷೇತ್ರದಲ್ಲಿ ಐತಿಹಾಸಿಕ ಮುಖ್ಯಮಂತ್ರಿ ನಾಟಕ ಮತ್ತು ಕೃತಿ ಬಿಡುಗಡೆ, ಉಚಿತ ಪಾಸ್‌!

ಕಲಾಗಂಗೋತ್ರಿ ತಂಡದ ಪ್ರಸಿದ್ಧ ರಾಜಕೀಯ ವ್ಯಂಗ್ಯ ನಾಟಕ ‘ಮುಖ್ಯಮಂತ್ರಿ’ ತನ್ನ 891ನೇ ಪ್ರದರ್ಶನಕ್ಕೆ ಸಜ್ಜಾಗಿದೆ. 45 ವರ್ಷಗಳಿಂದ ನಿರಂತರವಾಗಿ ಪ್ರದರ್ಶನಗೊಳ್ಳುತ್ತಿರುವ ಈ ನಾಟಕದ ವಿಶೇಷ ಪ್ರದರ್ಶನ ಮತ್ತು ಕೃತಿ ಬಿಡುಗಡೆ ಸಮಾರಂಭವು ನವೆಂಬರ್ 23, 2025 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
Read Full Story

03:33 PM (IST) Nov 17

ಕೆಲಸದಿಂದ ವಜಾಗೊಳಿಸುತ್ತಿರುವ ಟಿಸಿಎಸ್‌ಗೆ ಬಿಗ್‌ ಶಾಕ್ - ಉದ್ಯೋಗಿಗಳ ದೂರಿನನ್ವಯ ಕಾರ್ಮಿಕ ಇಲಾಖೆಯಿಂದ ಸಮನ್ಸ್

ಐಟಿ ನೌಕರರ ಸಂಘಟನೆ NITES ನೀಡಿದ ದೂರಿನ ಅನ್ವಯ, ಪುಣೆಯ ಕಾರ್ಮಿಕ ಆಯುಕ್ತರ ಕಚೇರಿಯು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ಗೆ (TCS) ಸಮನ್ಸ್ ಜಾರಿ ಮಾಡಿದೆ. ಕಾನೂನುಬಾಹಿರ ಉದ್ಯೋಗಿ ವಜಾ ಮತ್ತು ಅನ್ಯಾಯದ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Read Full Story

02:50 PM (IST) Nov 17

ನೀ ಹಿಂದೂನಾ? ಧರ್ಮ ಕೇಳಿ ಶಿವಮೊಗ್ಗ ನಿವಾಸಿ ಹರೀಶ್ ಮೇಲೆ ಮಾರಣಾಂತಿಕ ಹಲ್ಲೆ

ನೀ ಹಿಂದೂನಾ? ಧರ್ಮ ಕೇಳಿ ಶಿವಮೊಗ್ಗ ನಿವಾಸಿ ಹರೀಶ್ ಮೇಲೆ ಮಾರಣಾಂತಿಕ ಹಲ್ಲೆ, ಅನ್ಯ ಕೋಮಿನ ಯುವಕರಿಂದ ಹಲ್ಲೆ ನಡೆದಿದೆ.ಹರೀಶ್ ಮೇಲೆ ಹಲ್ಲೆ ನಡೆಸುತ್ತಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Read Full Story

02:34 PM (IST) Nov 17

ರಕ್ತದಲ್ಲೇ ಪತ್ರ ಬರೆದ Bigg Boss ಕಾಕ್ರೋಚ್​ ಸುಧಿ! ಎಲಿಮಿನೇಷನ್​ ಬೆನ್ನಲ್ಲೇ ಇದೆಂಥ ಸುದ್ದಿ?

ಬಿಗ್​ಬಾಸ್​ ಮನೆಯಿಂದ ಅಚ್ಚರಿಯಾಗಿ ಹೊರಬಂದಿರುವ ಸ್ಪರ್ಧಿ ಕಾಕ್ರೋಚ್ ಸುಧಿ, ಹಿಂದೆ ಜೈಲಿನಲ್ಲಿದ್ದಾಗ ತಮ್ಮ ಪತ್ನಿಗೆ ರಕ್ತದಲ್ಲಿ ಪತ್ರ ಬರೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ತಮ್ಮ ಪ್ರೀತಿಯನ್ನು ಸಾಬೀತುಪಡಿಸಲು ತುಟಿಗೆ ಹೊಡೆಸಿಕೊಂಡು ಬಂದ ರಕ್ತದಲ್ಲಿ ಪತ್ರ ಬರೆದಿದ್ದಾಗಿ   ಹೇಳಿಕೊಂಡಿದ್ದರು.

Read Full Story

02:27 PM (IST) Nov 17

ತುಮಕೂರಿಗೆ ಮೆಟ್ರೋ ವಿಸ್ತರಣೆ - ರಿಯಲ್‌ ಎಸ್ಟೇಟ್‌ಗೆ ಸಹಾಯ ಮಾಡೋಕೆ ಹೋದ್ರೆ ಇಂಥಾ ಯೋಚ್ನೆ ಬರುತ್ತೆ ಎಂದ ತೇಜಸ್ವಿ ಸೂರ್ಯ!

ಸಂಸದ ತೇಜಸ್ವಿ ಸೂರ್ಯ ಅವರು ನಮ್ಮ ಮೆಟ್ರೋವನ್ನು ತುಮಕೂರಿನವರೆಗೆ ವಿಸ್ತರಿಸುವ  ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ರಿಯಲ್ ಎಸ್ಟೇಟ್‌ಗೆ ಸಹಾಯ ಮಾಡುವ ಹುನ್ನಾರ ಎಂದಿರುವ ಅವರು, ಮೆಟ್ರೋ ಬದಲು ಕಡಿಮೆ ಖರ್ಚಿನ RRTS ಅಥವಾ ಸಬರ್ಬನ್ ರೈಲು ಯೋಜನೆ ಜಾರಿಗೊಳಿಸಲು ಸಲಹೆ ನೀಡಿದ್ದಾರೆ. 

Read Full Story

02:14 PM (IST) Nov 17

ಆಟವಾಡುತ್ತಾ ಕೋಣೆ ಬಾಗಿಲಿಗೆ ಒಳಗಿನಿಂದ ಬೋಲ್ಟ್ ಹಾಕಿದ ಮಗು - ಆಮೇಲೆ ತಾಯಿ ಮಾಡಿದ್ದೇನು?

toddler locked in kitchen: ಕೆಲ ಮಕ್ಕಳು ಮಾಡುವ ತುಂಟಾಟ ಪೋಷಕರನ್ನು ಧರ್ಮ ಸಂಕಟಕ್ಕೆ ಸಿಲುಕಿಸುತ್ತವೆ. ಕುಳಿತಲ್ಲಿ ಕೂರದ ಈ ಮಕ್ಕಳು ಏನಾದರೊಂದು ಎಡವಟ್ಟು ಮಾಡುತ್ತಲೇ ಇರುತ್ತವೆ. ಅದೇ ರೀತಿ ಪುಟ್ಟ ಮಗುವೊಂದು ಆಟವಾಡುತ್ತಾ ಅಡುಗೆ ಕೋಣೆಯೊಳಗೆ ಹೋಗಿ ಚಿಲಕ ಹಾಕಿಕೊಂಡಿದೆ. ಆಮೇಲೆ ತಾಯಿ ಮಾಡಿದ್ದೇನು?

Read Full Story

01:57 PM (IST) Nov 17

ಐಬೊಮ್ಮ ಪ್ರೆಸ್ ಮೀಟ್ - ಗೇಮ್ ಚೇಂಜರ್, OG ನಷ್ಟದ ಬಗ್ಗೆ ಚಿರಂಜೀವಿ, ರಾಜಮೌಳಿ ಹೇಳಿದ್ದೇನು?

ಐಬೊಮ್ಮ ನಿರ್ವಾಹಕ ಇಮ್ಮಡಿ ರವಿಯನ್ನು ಬಂಧಿಸಿದ ನಂತರ ವಿಸಿ ಸಜ್ಜನರ್ ಅವರು ಚಿತ್ರರಂಗದ ಗಣ್ಯರೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಚಿರಂಜೀವಿ, ರಾಜಮೌಳಿ, ನಾಗಾರ್ಜುನ, ದಿಲ್ ರಾಜು ಅವರೊಂದಿಗೆ ಮಾಧ್ಯಮಗೋಷ್ಠಿ ನಡೆಸಿದರು.

Read Full Story

01:51 PM (IST) Nov 17

ಅರ್ಧ ಸೆಂಚುರಿ ಮುಗಿಸಿದ Bigg Boss - ಗೆಲ್ಲೋರು ಯಾರು? ಮರಳಿ ಬರೋರು ಯಾರು? ವ್ಯಕ್ತಿತ್ವದ ಅಸಲಿ ಅಟ!

ಬಿಗ್​ಬಾಸ್​ 12ನೇ ಸೀಸನ್ 50 ದಿನಗಳನ್ನು ಪೂರೈಸಿದ್ದು, ಕಾಕ್ರೋಚ್ ಸುಧಿ ಸೇರಿದಂತೆ ಒಟ್ಟು 8 ಸ್ಪರ್ಧಿಗಳು ಮನೆಯಿಂದ ಹೊರಬಿದ್ದಿದ್ದಾರೆ. ಸದ್ಯ ಮನೆಯಲ್ಲಿ ಗಿಲ್ಲಿ ನಟ, ಕಾವ್ಯಾ ಶೈವ ಅವರ ಲವ್ ಸ್ಟೋರಿ, ಅಶ್ವಿನಿ ಮತ್ತು ಜಾಹ್ನವಿ ಅವರ ವಿವಾದಗಳು ವೀಕ್ಷಕರ ಗಮನ ಸೆಳೆಯುತ್ತಿದೆ. 

 

Read Full Story

01:36 PM (IST) Nov 17

ದಕ್ಷಿಣ ಆಫ್ರಿಕಾ ಎದುರು ಮೊದಲ ಟೆಸ್ಟ್ ಸೋಲುತ್ತಿದ್ದಂತೆ ತಲೆಕೆಳಗಾದ ಭಾರತದ WTC ಫೈನಲ್ ಲೆಕ್ಕಾಚಾರ!

ಬೆಂಗಳೂರು: ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟೆಸ್ಟ್ ಸೋಲುತ್ತಿದ್ದಂತೆಯೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿಯನ್ನು ಮತ್ತಷ್ಟು ದುರ್ಗಮ ಮಾಡಿಕೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರಲು ಭಾರತ ಏನು ಮಾಡಬೇಕು ನೋಡೋಣ ಬನ್ನಿ

Read Full Story

01:30 PM (IST) Nov 17

ಬಿಹಾರದಲ್ಲಿ ನ್ಯಾಯ ಸಮ್ಮತವಾಗಿ ಚುನಾವಣೆ ನಡೆದಿಲ್ಲ - ಸಚಿವ ರಾಮಲಿಂಗಾರೆಡ್ಡಿ

ಬಿಹಾರದಲ್ಲಿ ನ್ಯಾಯ ಸಮ್ಮತವಾಗಿ ವಿಧಾನಸಭಾ ಚುನಾವಣೆ ನಡೆದಿಲ್ಲ. ಕಾಂಗ್ರೆಸ್ ಮತದಾರರನ್ನು ಉದ್ದೇಶಪೂರ್ವಕವಾಗಿ ಡಿಲೀಟ್ ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಪಾದಿಸಿದ್ದಾರೆ.

Read Full Story

01:26 PM (IST) Nov 17

ಬೆಂಗಳೂರಿಗರೇ ಗಮನಿಸಿ, ನಾಳೆ ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್‌ ವ್ಯತ್ಯಯ

ಬೆಸ್ಕಾಂ ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ, ನವೆಂಬರ್ 18 ರಂದು ಬೆಂಗಳೂರಿನ ಆಡುಗೋಡಿ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

Read Full Story

01:03 PM (IST) Nov 17

ಗಂಭೀರ್ ಯುಗ - ಭಾರತ ಕ್ರಿಕೆಟ್‌ನ ಕರಾಳ ಅಧ್ಯಾಯ? ಟೀಂ ಇಂಡಿಯಾ ಇನ್ನೆಷ್ಟು ಸೋಲು ನೋಡಬೇಕೋ?

ಗೌತಮ್ ಗಂಭೀರ್ ಟೀಂ ಇಂಡಿಯಾದ ಹೆಡ್‌ಕೋಚ್ ಆದ ನಂತರ, ಭಾರತ ಕ್ರಿಕೆಟ್ ತಂಡವು ಹಲವು ಐತಿಹಾಸಿಕ ಸೋಲುಗಳನ್ನು ಕಂಡಿದೆ. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ವೈಟ್‌ವಾಶ್, 27 ವರ್ಷಗಳ ಬಳಿಕ ಲಂಕಾ ವಿರುದ್ಧ ಸರಣಿ ಸೋಲು ಪ್ರಮುಖ ಹಿನ್ನಡೆಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Read Full Story

12:58 PM (IST) Nov 17

ಚಿರಂಜೀವಿ - ಶ್ರೀದೇವಿ ಜಗಳದಿಂದ ಈ ಸಿನಿಮಾ ನಿಂತೇ ಹೋಯ್ತು.. ಅಷ್ಟಕ್ಕೂ ಇಬ್ಬರ ನಡುವೆ ಆಗಿದ್ದೇನು?

ಮೆಗಾಸ್ಟಾರ್ ಚಿರಂಜೀವಿ ಮತ್ತು ಅತಿಲೋಕ ಸುಂದರಿ ಶ್ರೀದೇವಿ ಜೋಡಿಗೆ ಎಷ್ಟೊಂದು ಕ್ರೇಜ್ ಇತ್ತು ಎಂಬುದು ಎಲ್ಲರಿಗೂ ಗೊತ್ತೇ ಇದೆ. ತೆರೆಯ ಮೇಲೆ ಹಿಟ್ ಜೋಡಿಯಾಗಿದ್ದ ಈ ಸ್ಟಾರ್‌ಗಳ ನಡುವೆ ಜಗಳವಾಗಿ ಒಂದು ಸಿನಿಮಾ ನಿಂತುಹೋಗಿತ್ತು ಎಂಬುದು ನಿಮಗೆ ಗೊತ್ತಾ?

Read Full Story

12:25 PM (IST) Nov 17

'ಕಾಂತಾರ ಚಾಪ್ಟರ್ 1' OTTಗೆ ಶಿಫ್ಟ್‌ ಆಗಿದ್ದೇ ರಿಷಬ್‌ ಶೆಟ್ಟಿ ಲುಕ್‌ ಚೇಂಜ್ - ಹೊಸ ಶಾರ್ಟ್‌ ಹೇರ್‌ಸ್ಟೈಲ್ ವೈರಲ್

ರಿಷಬ್‌ ಶೆಟ್ಟಿ ಲುಕ್‌ ಬದಲಾಗಿದೆ. ಸಿನಿಮಾದಲ್ಲಿನ ಬೆರ್ಮೆ ಪಾತ್ರಕ್ಕಾಗಿ ಅವರು ಬಿಟ್ಟಿದ್ದ ಉದ್ದ ಕೂದಲಿಗೆ ಕತ್ತರಿ ಬಿದ್ದಿದೆ. ಶಾರ್ಟ್‌ ಹೇರ್‌ಸ್ಟೈಲ್‌ನಲ್ಲಿ ನಟ, ಗಾಯಕ ಮೈಮ್‌ ರಾಮ್‌ದಾಸ್‌ ಜೊತೆಗಿರುವ ಫೋಟೋವನ್ನು ರಿಷಬ್‌ ಪೋಸ್ಟ್ ಮಾಡಿದ್ದಾರೆ.

Read Full Story

12:16 PM (IST) Nov 17

100 ಕೋಟಿಯೂ ಖರ್ಚಾಗದ ಕಸ ಗುಡಿಸುವ ಮಷಿನ್‌ಗೆ 613 ಕೋಟಿ ಖರ್ಚು, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ!

₹613 Cr Road Sweeper Scam BJP Alleges Mega Corruption in Karnataka Govt ಬೆಂಗಳೂರಿನ 46 ಮೆಕ್ಯಾನಿಕಲ್ ಸ್ವೀಪಿಂಗ್ ಮೆಷಿನ್‌ಗಳನ್ನು 613.25 ಕೋಟಿ ರೂ.ಗೆ ಬಾಡಿಗೆಗೆ ಪಡೆಯುವ ಪ್ರಸ್ತಾವನೆಯಲ್ಲಿ ಹಗರಣ ನಡೆದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. 

Read Full Story

12:11 PM (IST) Nov 17

BBK 12 - ರಕ್ಷಿತಾ ಶೆಟ್ಟಿ ಕನ್ನಡ ವಿರೋಧಿಯೇ? ವೈರಲ್ ಆಗ್ತಿದೆ ಬಿಗ್‌ ಮನೆ ಪುಟ್ಟಿಯ ವಿಡಿಯೋ

ಬಿಗ್‌ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿಯವರ ಹಳೆಯ ವ್ಲಾಗ್ ವಿಡಿಯೋವೊಂದು ವೈರಲ್ ಆಗಿದೆ. ಆಟೋ ಚಾಲಕನೊಂದಿಗೆ 'ನಮಗ್ಯಾಕೆ ಕನ್ನಡ' ಎಂದು ಪ್ರಶ್ನಿಸಿರುವ ಅವರ ಮಾತುಗಳು, ಅವರು ಕನ್ನಡ ವಿರೋಧಿಯೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. 

Read Full Story

12:08 PM (IST) Nov 17

Lakshmi Nivasa - ಜಯಂತ್ ಈಗ ಮಾಸ್ಕ್​ಮ್ಯಾನ್​! ಚಿನ್ನುಮರಿ ಕಥೆ ಫಿನಿಷ್​? ವಿಶ್ವನ ಪ್ರಾಣಕ್ಕೂ ಕಂಟಕ

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ, ಜಾಹ್ನವಿ ಬದುಕಿರುವ ಸತ್ಯ ತಿಳಿದ ಜಯಂತ್ ಆಕೆಯನ್ನು ಹುಡುಕಲು ಮಾಸ್ಕ್ ಧರಿಸಿ ಚಿತ್ರಮಂದಿರಕ್ಕೆ ಬರುತ್ತಾನೆ. ಅಲ್ಲಿ ಜಾಹ್ನವಿಯನ್ನು ನೋಡಿದಾಗ, ಈ ವಿಷಯ ವಿಶ್ವನಿಗೆ ತಿಳಿದು ಆತಂಕಗೊಳ್ಳುತ್ತಾನೆ.   ವಿಶ್ವನು ಜಾಹ್ನವಿಯನ್ನು ರಕ್ಷಿಸುತ್ತಾನಾ ಎಂಬುದು ಕಥೆಯ ರೋಚಕ ತಿರುವು.

Read Full Story

11:54 AM (IST) Nov 17

8 ವರ್ಷಗಳ ಬಳಿಕ ಮತ್ತೆ ಒಂದಾದ ಧ್ರುವ ಸರ್ಜಾ - ರಚಿತಾ ರಾಮ್‌.. ಏನಿದು ಹೊಸ ವಿಷ್ಯ?

2017ರಲ್ಲಿ ಬಂದ ‘ಭರ್ಜರಿ’ ಚಿತ್ರದ ನಂತರ ಮತ್ತೆ ಧ್ರುವ ಸರ್ಜಾ ಹಾಗೂ ರಚಿತಾ ರಾಮ್‌ ತೆರೆ ಮೇಲೆ ಜೋಡಿಯಾಗಿ ಕಾಣಿಸಿಕೊಳ್ಳುವುದಕ್ಕೆ ಹೊರಟಿದ್ದಾರೆ. ಈಗಿನ ಮಾಹಿತಿ ಪ್ರಕಾರ ಈ ಚಿತ್ರದ್ದು ಗ್ರಾಮೀಣ ಕಥೆಯಾಗಿದೆ.

Read Full Story

11:22 AM (IST) Nov 17

ಕಬ್ಬಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ - ಶ್ರೀರಾಮುಲು

ರೈತರ ಹೋರಾಟದ ಸಮಯದಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆಗ್ರಹಿಸಿದರು.

Read Full Story

10:49 AM (IST) Nov 17

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ - ಬೆಂಗಳೂರು-ತುಮಕೂರು ವಿಸ್ತರಣೆಗೆ ಗ್ರೀನ್ ಸಿಗ್ನಲ್

ಬೆಂಗಳೂರಿನ ಅವಿಭಾಜ್ಯ ಸಾರಿಗೆ ಸಂಸ್ಥೆಯಾಗಿರುವ ನಮ್ಮ ಮೆಟ್ರೋ ಮೊಟ್ಟ ಮೊದಲ ಸಲ ಅಂತರ ಜಿಲ್ಲೆ ಸಂಚಾರ ಆರಂಭಿಸುವ ಸುದ್ದಿ ಹೊರಬಿದ್ದಿದೆ. ಬೆಂಗಳೂರು ಟು ತುಮಕೂರಿಗೆ ಮೆಟ್ರೋ ವಿಸ್ತರಣೆಗೆ ಇದೀಗ ಗ್ರೀನ್ ಸಿಗ್ನಲ್ ಸಿಕ್ಕಿದೆ.

Read Full Story

10:28 AM (IST) Nov 17

ಎಸ್‌ ನಾರಾಯಣ್‌ ಅವರಿಂದ ಶಿಸ್ತು, ಸಮಯ ಪಾಲನೆ ಕಲಿತೆ - ನಟ ದುನಿಯಾ ವಿಜಯ್‌

ದುನಿಯಾ ವಿಜಯ್‌ ಹಾಗೂ ಶ್ರೇಯಸ್‌ ಮಂಜು ಕಾಂಬಿನೇಶನ್‌ನ ‘ಮಾರುತ’ ಸಿನಿಮಾ ಇದೇ ನವೆಂಬರ್‌ 21ಕ್ಕೆ ತೆರೆಗೆ ಬರುತ್ತಿದೆ. ಎಸ್‌ ನಾರಾಯಣ್‌ ನಿರ್ದೇಶಿಸಿ, ಕೆ ಮಂಜು ಹಾಗೂ ರಮೇಶ್‌ ಯಾದವ್‌ ಜಂಟಿಯಾಗಿ ನಿರ್ಮಿಸಿರುವ ಚಿತ್ರವಿದು.

Read Full Story

10:10 AM (IST) Nov 17

ಕಣ್ಣಲ್ಲಿ ಎಣ್ಣೆ ಹಾಕಿ ಕಾಯುತ್ತಿರೋ ಫ್ಯಾನ್ಸ್‌ಗೆ ಗುಡ್ ನ್ಯೂಸ್, ಅಂದಕಾಲತ್ತಿಲ್ ನಟಿ ರೇಖಾ ಪುನರಾಗಮನ?

ರೇಖಾ ಅವರಂತಹ ದಂತಕಥೆ ಮತ್ತೆ ಆನ್‌ಸ್ಕ್ರೀನ್ ಕಮ್‌ಬ್ಯಾಕ್ ಮಾಡಲು ಇಚ್ಛಿಸಿದ್ದಾರೆ ಎಂಬ ಸುದ್ದಿ ಅವರ ಅಭಿಮಾನಿಗಳಿಗೆ ದೊಡ್ಡ ಸಮಾಧಾನ ತಂದಿದೆ. ಮನೀಶ್ ಮಲ್ಹೋತ್ರಾ ಮತ್ತು ವಿಜಯ್ ವರ್ಮಾ ಅವರ ಈ ಹೇಳಿಕೆಗಳು ರೇಖಾ ಅವರ ಕಮ್‌ಬ್ಯಾಕ್‌ಗೆ ವೇದಿಕೆ ಸಿದ್ಧಪಡಿಸುತ್ತವೆಯೇ? ಕಾದು ನೋಡಬೇಕು.

Read Full Story

10:06 AM (IST) Nov 17

Bigg Boss Kannada 12 - ಅವರಿಬ್ಬರಿಂದಲೇ ಗಂಡನ ಆಟಕ್ಕೆ ಬ್ರೇಕ್ ಬಿದ್ದಿತ್ತು ಎಂದ ಕಾಕ್ರೋಚ್ ಸುಧಿ ಪತ್ನಿ

ಈ ವಾರ ಬಿಗ್‌ಬಾಸ್ ಮನೆಯಿಂದ ಕಾಕ್ರೋಚ್ ಸುಧಿ ಹೊರಬಂದಿದ್ದಾರೆ. ಅವರ ಪತ್ನಿಯ ಪ್ರಕಾರ, ಜಾನ್ವಿ ಮತ್ತು ಅಶ್ವಿನಿ ಗೌಡ ಅವರೊಂದಿಗಿನ ಒಡನಾಟವೇ ಸುಧಿಯವರ ಎಲಿಮಿನೇಷನ್‌ಗೆ ಕಾರಣವಾಯಿತು. ಸುಧಿ ಇನ್ನಷ್ಟು ಚೆನ್ನಾಗಿ ಆಡಬೇಕಿತ್ತು ಎಂದು ಅವರ ಪತ್ನಿ ಅಭಿಪ್ರಾಯಪಟ್ಟಿದ್ದಾರೆ.
Read Full Story

10:03 AM (IST) Nov 17

ವಾರಣಾಸಿ ಸಿನಿಮಾ ಬಂದ ಮೇಲೆ ಇಡೀ ಭಾರತ ನಮ್ಮ ಬಗ್ಗೆ ಹೆಮ್ಮೆ ಪಡುತ್ತದೆ - ಮಹೇಶ್‌ ಬಾಬು

ರಾಜಮೌಳಿ ಈ ಬಾರಿ ಶೀರ್ಷಿಕೆ ಮತ್ತು ಹೀರೋ ಫಸ್ಟ್‌ ಲುಕ್‌ ಟೀಸರನ್ನೇ ಜಗತ್ತು ತಿರುಗಿ ನೋಡುವಂತೆ ಬಿಡುಗಡೆ ಮಾಡಿ ಹೊಸ ದಾರಿಯನ್ನು ಹಾಕಿಕೊಟ್ಟಿದ್ದಾರೆ. ಅದರಲ್ಲೂ ತೆಲುಗು ಮಂದಿಯ ಸಿನಿಮಾ ಪ್ರೀತಿ ದೊಡ್ಡದು.

Read Full Story

09:52 AM (IST) Nov 17

ಐಪಿಎಲ್ ಮಿನಿ ಹರಾಜಿಗೆ ರಿಲೀಸ್ ಆದ ಟಾಪ್ 5 ಆಟಗಾರರು ಇವರೇ ನೋಡಿ! ಇವರ ಬೆಲೆ ಎಷ್ಟು ಗೊತ್ತಾ?

ಐಪಿಎಲ್ ಫ್ರಾಂಚೈಸಿಗಳು ತಮ್ಮ ರಿಟೇನ್ ಮತ್ತು ರಿಲೀಸ್ ಲಿಸ್ಟ್‌ಗಳನ್ನು ಪ್ರಕಟಿಸಿವೆ. ಮಿನಿ ಹರಾಜಿಗೆ ಇನ್ನು ಕೇವಲ ಒಂದು ತಿಂಗಳು ಬಾಕಿ ಇದೆ. ಈ ಸಮಯದಲ್ಲಿ ಹರಾಜಿಗೆ ಬಂದಿರುವ ಟಾಪ್ ಐದು ಆಟಗಾರರ ಬಗ್ಗೆ ಈಗ ನೋಡೋಣ ಬನ್ನಿ.

Read Full Story

09:51 AM (IST) Nov 17

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲೆಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಊರಟ್ಟಿನ ಸೇವೆ

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ ಎಂದು ಬಮೂಲ್ ನಿರ್ದೇಶಕ ಹರೀಶ್ ಕುಮಾರ್ ಹಾಗೂ ಕುಟುಂಬದವರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಊರಟ್ಟಿನ ಸೇವೆ ಸಲ್ಲಿಸಿದರು.

Read Full Story

09:38 AM (IST) Nov 17

ಮತ್ತೊಮ್ಮೆ ನೋ ಹ್ಯಾಂಡ್‌ಶೇಕ್‌ಗೆ ಸಾಕ್ಷಿಯಾದ ಭಾರತ-ಪಾಕ್ ಪಂದ್ಯ!

ಏಷ್ಯಾಕಪ್‌ ರೈಸಿಂಗ್‌ ಸ್ಟಾರ್ಸ್‌ ಟಿ20 ಟೂರ್ನಿಯಲ್ಲಿ ಭಾರತ ಎ ಮತ್ತು ಪಾಕಿಸ್ತಾನ ಶಾಹೀನ್ಸ್‌ ಆಟಗಾರರು ಹಸ್ತಲಾಘವ ನಿರಾಕರಿಸಿದರು. ಈ ಪಂದ್ಯದಲ್ಲಿ, ಪಾಕಿಸ್ತಾನ ಎ ತಂಡವು ಭಾರತ ಎ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು.
Read Full Story

More Trending News