Mar 16, 2025, 11:18 PM IST
Karnataka News Live 16th March : ಪ್ರಧಾನಿ ಮೋದಿ ಸಂದರ್ಶನಕ್ಕಾಗಿ ಲೆಕ್ಸ್ ಫ್ರಿಡ್ಮನ್ 45 ಗಂಟೆಗಳ ಕಾಲ ಉಪವಾಸ ಮಾಡಿದ್ದು ಏಕೆ? ಕಾರಣವೇನು?
ಬೆಂಗಳೂರು (ಮಾ.16): ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಸರ್ಕಾರದಿಂದ ಆಯೋಜನೆ ಮಾಡಲಾಗಿದ್ದ ರಾಜ್ಯಮಟ್ಟದ ಕೈವಾರ ತಾತಯ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಂದ ಪಿ.ಸಿ. ಮೋಹನ್ ಅವರು ಪ್ರಧಾನಿ ಮೋದಿಯನ್ನು ಹೊಗಳಿದ ಬೆನ್ನಲ್ಲಿಯೇ ಶಾಸಕ ಪ್ರದೀಪ್ ಈಶ್ವರ್ ಕೆಂಡಾಮಂಡಲ ಆಗಿದ್ದಾರೆ. ಇದರ ಬೆನ್ನಲ್ಲಿ ಇದು ನಿಮ್ಮಪ್ಪನ ಸರ್ಕಾರವಲ್ಲ, ಸಿದ್ದರಾಮಯ್ಯ ಸರ್ಕಾರ ಕಣೋ... ಇದು ಮೋದಿ ಆಡಳಿತ ಅಲ್ಲ, ಸಿದ್ದರಾಮಯ್ಯ ಸರ್ಕಾರನೇ ಎಂದು ಸವಾಲು ಹಾಕಿದ್ದ ಘಟನೆ ರಾಜಕೀಯ ತಿರುವು ಪಡೆದುಕೊಂಡಿದೆ. ಈ ಹೇಳಿಕೆ ರಾಜ್ಯದಲ್ಲಿ ಭಾರೀ ಚರ್ಚೆಗೆ ಬಂದಿದೆ.
11:18 PM
ಪ್ರಧಾನಿ ಮೋದಿ ಸಂದರ್ಶನಕ್ಕಾಗಿ ಲೆಕ್ಸ್ ಫ್ರಿಡ್ಮನ್ 45 ಗಂಟೆಗಳ ಕಾಲ ಉಪವಾಸ ಮಾಡಿದ್ದು ಏಕೆ? ಕಾರಣವೇನು?
ಲೆಕ್ಸ್ ಫ್ರಿಡ್ಮನ್ ಮೋದಿ ಸಂದರ್ಶನಕ್ಕೆ ಮೊದಲು 45 ಗಂಟೆಗಳ ಉಪವಾಸ ಮಾಡಿದರು, ಪಿಎಂ ಮೋದಿ ಉಪವಾಸದ ಬಗ್ಗೆ ಹೇಳಿದ್ದೇನು ತಿಳಿಯಿರಿ.
ಪೂರ್ತಿ ಓದಿ
10:45 PM
ಲಷ್ಕರ್ ಮುಖ್ಯಸ್ಥ 26/11 ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಹತ್ಯೆ; ಪಾಕಿಸ್ತಾನಿ ಪತ್ರಕರ್ತೆ ಮೋನಾ ಆಲಂ ಸ್ಫೋಟಕ ಹೇಳಿಕೆ!
ಜಮ್ಮು ಮತ್ತು ಕಾಶ್ಮೀರದಲ್ಲಿ ಮೋಸ್ಟ್ ವಾಂಟೆಡ್ ಲಷ್ಕರ್-ಎ-ತೊಯ್ಬಾ ಕಮಾಂಡರ್ ಅಬು ಕತಾಲ್ನನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ. ದಾಳಿಯ ವೇಳೆ ಹಫೀಜ್ ಸಯೀದ್ ಮೇಲೂ ಗುಂಡಿನ ದಾಳಿ ನಡೆದಿದೆ ಎಂದು ಪಾಕಿಸ್ತಾನಿ ಪತ್ರಕರ್ತೆ ಹೇಳಿದ್ದಾರೆ.
ಪೂರ್ತಿ ಓದಿ10:06 PM
PM Modi: ಪಾಕಿಸ್ತಾನಕ್ಕೆ ಮೋದಿ ಸ್ಟ್ರಾಂಗ್ ವಾರ್ನಿಂಗ್! ವಿಶ್ವಸಂಸ್ಥೆಯ ವರ್ತನೆ ಪ್ರಶ್ನಿಸಿದ ಪಿಎಂ!
PM Modi podcast with Lex Fridman: ಪಾಕಿಸ್ತಾನದ ಬಗ್ಗೆ ಪ್ರಧಾನಿ ಮೋದಿ ತೀಕ್ಷ್ಣವಾಗಿ ಮಾತನಾಡಿದ್ದಾರೆ. ಭಯೋತ್ಪಾದನೆ ಎಲ್ಲಿಂದ ಶುರುವಾಯ್ತು ಅನ್ನೋದು ಜಗತ್ತಿಗೆ ಗೊತ್ತಿದೆ, ಶಾಂತಿಗಾಗಿ ಪ್ರಯತ್ನಿಸಿದರೂ ಪಾಕಿಸ್ತಾನ ಬದಲಾಗಲಿಲ್ಲ ಎಂದಿದ್ದಾರೆ. ವಿಶ್ವಸಂಸ್ಥೆಯಂತಹ ಸಂಸ್ಥೆಗಳಲ್ಲಿ ಬದಲಾವಣೆಗಳ ಅಗತ್ಯತೆ ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.
ಪೂರ್ತಿ ಓದಿ9:03 PM
AC ಏಕೆ ಸ್ಫೋಟಗೊಳ್ಳುತ್ತವೆ? ಮನೆಯಲ್ಲಿ ಎಸಿ ಇರೋರು ಈ ವಿಷಯ ತಿಳಿಯಲೇಬೇಕು!
ಇತ್ತೀಚೆಗೆ ದೆಹಲಿಯಲ್ಲಿ ಎಸಿ ಸ್ಫೋಟಗೊಂಡು ಒಬ್ಬರು ಸಾವನ್ನಪ್ಪಿದರು.. ಇದರಿಂದ ಎಸಿಯಿಂದಲೂ ಅಪಾಯವಿದೆ ಎಂದು ತಿಳಿಯಿತು. ಹಾಗಾಗಿ, ಎಸಿಯನ್ನು ಸರಿಯಾಗಿ ಮೆಂಟೇನ್ ಬಹಳ ಮುಖ್ಯ. ಎಸಿಯಲ್ಲಿ ಯಾವ ಸಮಸ್ಯೆಗಳು ಬರುತ್ತವೆ? ಅವುಗಳನ್ನು ಹೇಗೆ ಸರಿಪಡಿಸುವುದು ಎಂದು ನೋಡೋಣ.
ಪೂರ್ತಿ ಓದಿ7:17 PM
ಬಟ್ಟೆ ಧರಿಸಿದ್ರೆ ನೋ ಎಂಟ್ರಿ: 'ಎಲ್ಲಾ ಬಿಚ್ಚಿ ಬನ್ನಿ ಪ್ಲೀಸ್' ಬೋರ್ಡ್- ಬೀಚ್ಗೆ ಬಂತು ಹೊಸ ರೂಲ್ಸ್! ಡಿಟೇಲ್ಸ್ ಇಲ್ಲಿದೆ...
ಬಟ್ಟೆ ಧರಿಸಿದ್ರೆ ಈ ಬೀಚ್ಗೆ ಪ್ರವೇಶ ಕೊಡಲ್ಲ. 'ಎಲ್ಲಾ ಬಿಚ್ಚಿ ಬನ್ನಿ ಪ್ಲೀಸ್' ಬೋರ್ಡ್ ನಿಮ್ಮನ್ನು ಸ್ವಾಗತಿಸುತ್ತದೆ. ಏನಿದು ಹೊಸ ರೂಲ್ಸ್? ಇದ್ಯಾವ ಬೀಚ್?
6:44 PM
ಹೃತಿಕ್ ರೋಷನ್ ಈ ಕನಸಿನ ಚಿತ್ರಕ್ಕೆ 700 ಕೋಟಿ ಬೇಕು, ಕೈ ಸುಟ್ಟುಕೊಳ್ಳೋ ಭಯದಲ್ಲಿ ನಿರ್ಮಾಪಕರು! ಯಾವುದು ಆ ಸಿನಿಮಾ?
Krish 4 ಚಿತ್ರದ ನಿರ್ಮಾಣದ ಅಡೆತಡೆಗಳು ಮುಂದುವರೆದಿವೆ. ಸಿದ್ಧಾರ್ಥ್ ಆನಂದ್ ನಿರ್ಮಾಣದಿಂದ ಹಿಂದೆ ಸರಿದಿದ್ದು, ಹೊಸ ನಿರ್ದೇಶಕರ ಹುಡುಕಾಟ ನಡೆಯುತ್ತಿದೆ. ಅಧಿಕ ಬಜೆಟ್ ಕಾರಣದಿಂದ ನಿರ್ಮಾಣ ಸಂಸ್ಥೆಗಳು ಹಿಂದೇಟು ಹಾಕುತ್ತಿವೆ.
ಪೂರ್ತಿ ಓದಿ5:56 PM
4 ಕೋಟಿ ರೂ ಬಜೆಟ್, ಒಂದೇ ದಿನದಲ್ಲಿ ದೋಚಿದ್ದು 9 ಕೋಟಿ! ಬಂಗಾರದ ಫಸಲು ಕೊಟ್ಟ ನಾನಿ ಸಿನಿಮಾ ಯಾವುದು?;
ಇಷ್ಟುದಿನಗಳ ಕಾಲ ನಟನಾಗಿ ಗೆದ್ದಿದ್ದ ನಟ ನಾನಿ ಅವರೀಗ ನಿರ್ಮಾಪಕರಾಗಿ ಕೂಡ ಗೆದ್ದಿದ್ದಾರೆ.
5:53 PM
ಸೌಹಾರ್ದತೆ ನೆಲೆಸಲು ಯಾವ ಹಂತಕ್ಕೂ ಹೋಗಲು ನಾನು ಸಿದ್ಧ: ಯು.ಟಿ. ಖಾದರ್
ವಕ್ಫ್ ತಿದ್ದುಪಡಿ ಮಸೂದೆ ಸಂವಿಧಾನಕ್ಕೆ ವಿರುದ್ಧವಾಗಿದ್ದರೆ ಒಪ್ಪಲು ಸಾಧ್ಯವಿಲ್ಲ ಎಂದು ಯು.ಟಿ. ಖಾದರ್ ಹೇಳಿದ್ದಾರೆ. ಕೋಮುವಾದಿಗಳನ್ನು ನಿರ್ಲಕ್ಷಿಸಬೇಕು, ಸೌಹಾರ್ದತೆ ನೆಲೆಸಲು ಯಾವ ಹಂತಕ್ಕೂ ನಾನು ಸಿದ್ಧ ಎಂದಿದ್ದಾರೆ.
ಪೂರ್ತಿ ಓದಿ5:28 PM
ಫೋನ್ ಪೇನಲ್ಲಿ ಬಂದ ಹಣ ಯಾರದು?; ಅಧಿಕಾರಿಗಳ ಮೈಚಳಿ ಬಿಡಿಸಿದ ಉಪ ಲೋಕಾಯುಕ್ತ ನ್ಯಾ. ಬಿ.ವೀರಪ್ಪ!
ಉಪ ಲೋಕಾಯುಕ್ತ ನ್ಯಾ. ಬಿ.ವೀರಪ್ಪ ನೇತೃತ್ವದಲ್ಲಿ ಹೊಸಪೇಟೆಯ ವಿವಿಧ ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಕೃಷಿ ಉತ್ಪನ್ನ ಮಾರುಕಟ್ಟೆ, ಆಸ್ಪತ್ರೆ, ನಗರಸಭೆ ಸೇರಿದಂತೆ ಹಲವು ಕಚೇರಿಗಳಲ್ಲಿನ ಅವ್ಯವಸ್ಥೆಗಳನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.
ಪೂರ್ತಿ ಓದಿ5:17 PM
ರಾಮಾಚಾರಿ ಧಾರಾವಾಹಿ ವೈಶಾಖ ಬಾವಿಗೆ ಬಿದ್ದಿದ್ದು ಸತ್ಯ; ಆದ್ರೂ ಅಲ್ಲಿದೆ ಗಿಮಿಕ್, ಪಕ್ಕಾ ಯಾಮಾರ್ತೀರಾ!
ʼರಾಮಾಚಾರಿʼ ಧಾರಾವಾಹಿಯಲ್ಲಿ ನೀರಿಗೆ ಬೀಳುವ ದೃಶ್ಯವನ್ನು ಹೇಗೆ ಸೆರೆ ಹಿಡಿಯಲಾಗಿದೆ? ಇದರ ಹಿಂದಿನ ಗಿಮಿಕ್ ಏನು ಎಂಬುದು ಕ್ಯಾಮರಾ ಹಿಂದೆ ಸೆರೆಯಾಗಿದೆ.
5:09 PM
'ನಿನ್ನ ತಲೆಯಲ್ಲಿ ಕೂದಲು ಇಲ್ಲ ಅಂತಾ ಪತಿಗೆ ಟಾರ್ಚರ್, ರೀಲ್ಸ್ ರಾಣಿ ಪತ್ನಿಯ ಶೋಕಿಗೆ ಗಂಡ ಬಲಿ!
ಚಾಮರಾಜನಗರದಲ್ಲಿ ರೀಲ್ಸ್ ಹುಚ್ಚಿನಿಂದ ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ಮಮತಾ ರೀಲ್ಸ್ ಗಾಗಿ ಶೋಕಿ ಜೀವನ ನಡೆಸುತ್ತಿದ್ದಳು ಮತ್ತು ಗಂಡನಿಗೆ ಕಿರುಕುಳ ನೀಡುತ್ತಿದ್ದಳು.
ಪೂರ್ತಿ ಓದಿ4:34 PM
91ಕ್ಕೆ ಅಲೌಟ್: ಕಿವೀಸ್ ಎದುರು ಹೀನಾಯ ಸೋಲು ಕಂಡ ಪಾಕಿಸ್ತಾನ!
ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಹೀನಾಯ ಸೋಲು ಕಂಡಿದೆ. ಕೇವಲ 91 ರನ್ಗಳಿಗೆ ಸರ್ವಪತನ ಕಂಡ ಪಾಕಿಸ್ತಾನ ತಂಡವು 9 ವಿಕೆಟ್ಗಳಿಂದ ಸೋಲೊಪ್ಪಿಕೊಂಡಿದೆ.
ಪೂರ್ತಿ ಓದಿ4:30 PM
ಆ ಮಹಾನುಭಾವ ಏನಂತ ನನಗೆ ಗೊತ್ತು, ಜಗತ್ತು ನೋಡಲಿ: ಪ್ರದೀಪ್ ಈಶ್ವರ್ಗೆ ಸಂಸದ ಸುಧಾಕರ್ ಟಾಂಗ್
ನೆಲಮಂಗಲದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂಸದ ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಪ್ರದೀಪ್ ಈಶ್ವರ್ ಅವರು ಎಲ್ಲಿ ಏನು ಮಾತನಾಡಬೇಕೆಂದು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.
ಪೂರ್ತಿ ಓದಿ3:39 PM
'ಸುಮ್ಮನೆ ಕೂರೋಕೆ ಆಗಲ್ಲ' ಬಿಸಿಸಿಐ ರೂಲ್ಸ್ ಬಗ್ಗೆ ಅಸಮಾಧಾನ ಹೊರಹಾಕಿದ ವಿರಾಟ್ ಕೊಹ್ಲಿ!
ವಿದೇಶಿ ಪ್ರವಾಸಗಳಲ್ಲಿ ಆಟಗಾರರ ಕುಟುಂಬದ ಮೇಲಿನ ಬಿಸಿಸಿಐ ನಿರ್ಬಂಧದ ಬಗ್ಗೆ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. ಕಷ್ಟದ ಸಮಯದಲ್ಲಿ ಕುಟುಂಬದ ಬೆಂಬಲದ ಮಹತ್ವವನ್ನು ಅವರು ಒತ್ತಿ ಹೇಳಿದ್ದಾರೆ.
ಪೂರ್ತಿ ಓದಿ3:13 PM
ಈ 3 ರಾಶಿಗೆ ಏಪ್ರಿಲ್ 7 ರ ಮೊದಲು ಅದೃಷ್ಟವೋ ಅದೃಷ್ಟ, ಬುಧ ವಕ್ರಿಯಿಂದ ಸಂಪತ್ತು, ಸಂತೋಷ
ಇತ್ತೀಚೆಗೆ ಗ್ರಹಗಳ ರಾಜಕುಮಾರ ಬುಧನು ಹಿಮ್ಮುಖವಾಗಿದ್ದಾನೆ. ಈ ಸಮಯದಲ್ಲಿ, ಬುಧ ಗ್ರಹವು ಹಿಮ್ಮುಖವಾಗಿ ಚಲಿಸುತ್ತಿದ್ದು, ಏಪ್ರಿಲ್ 7, 2025 ರವರೆಗೆ ಈ ಸ್ಥಿತಿಯಲ್ಲಿರುತ್ತದೆ.
3:03 PM
ಗಜಗರ್ಭವನ್ನೂ ಮೀರಿಸಿದ ಮಹಿಳೆ; ಗರ್ಭ ಧರಿಸಿ 3.5 ವರ್ಷಗಳ ಬಳಿಕ ಅಂತೂ ಹೆರಿಗೆಯಾಯ್ತು!
ಆನೆ ಹದಿನೆಂಟರಿಂದ ಇಪ್ಪತ್ತೆರಡು ತಿಂಗಳುಗಳ ಅವಧಿಯಷ್ಟು ಕಾಲ ಗರ್ಭ ಧರಿಸುವುದಂತೆ. ಆದರೆ ಇಲ್ಲೊಂದು ಧಾರಾವಾಹಿಯಲ್ಲಿ ಮೂರುವರೆ ವರ್ಷಗಳ ಕಾಲ ಪಾತ್ರಧಾರಿಯೋರ್ವರು ಗರ್ಭಿಣಿಯಾಗಿದ್ದಾಳೆ.
ಪೂರ್ತಿ ಓದಿ2:19 PM
ಅಂಬರೀಶ್ ನೆನಪಲ್ಲೇ ಮೊಮ್ಮಗನಿಗೆ ಹೆಸರಿಟ್ಟ ಸುಮಲತಾ; ಅಭಿಷೇಕ್, ಅವಿವಾ ಬಿದ್ದಪ್ಪ ಮಗನ ಹೆಸರಿನ ಅರ್ಥ ಏನು?
ಬೆಂಗಳೂರಿನಲ್ಲಿ ಅದ್ದೂರಿಯಾಗಿ ಅಭಿಷೇಕ್ ಅಂಬರೀಶ್, ಅವಿವಾ ಬಿದ್ದಪ್ಪ ಮಗನ ನಾಮಕರಣ ಶಾಸ್ತ್ರ ನಡೆದಿದೆ.
ಪೂರ್ತಿ ಓದಿ2:16 PM
ಕಾಂತಾರ ರಿಷಬ್ ಶೆಟ್ಟಿಯನ್ನು ಬೆಳೆಸಿದ ರಂಗಸೌರಭ ನಮ್ಮ ನಾಟಕ ಪ್ರೀತಿಯ ಕೂಸು: ಪ್ರಮೋದ್ ಶೆಟ್ಟಿ
25 ವರ್ಷಗಳನ್ನು ಪೂರೈಸಿದ ರಂಗಸೌರಭ ನಾಟಕ ತಂಡದ ಬೆಳ್ಳಿ ಹಬ್ಬದ ಸಂಭ್ರಮದ ಕಥೆ ಇದು. ರಿಷಬ್ ಶೆಟ್ಟಿಯವರಂತಹ ಕಲಾವಿದರನ್ನು ಬೆಳಕಿಗೆ ತಂದ ಈ ತಂಡ, ರಂಗಭೂಮಿಯ ಮಹತ್ವವನ್ನು ಸಾರುತ್ತದೆ.
ಪೂರ್ತಿ ಓದಿ1:58 PM
ಅತ್ತ ಸ್ವರಾ- ಇತ್ತ ಸೋನಾಕ್ಷಿ... ಬಣ್ಣರಹಿತ ಗಂಡಂದಿರು! ಟ್ರೋಲಿಗರ ಬಾಯಿ ಮುಚ್ಚಿಸಲು ಹೋಗಿ ಇದೇನಾಗೋಯ್ತು?
ಫಹಾದ್ ಅಹ್ಮದ್ ಅವರನ್ನು ಮದುವೆಯಾಗಿರುವ ನಟಿ ಸ್ವರಾ ಭಾಸ್ಕರ್ ಮತ್ತು ಜಹೀರ್ ಇಕ್ಬಾಲ್ ಅವರನ್ನು ಮದುವೆಯಾಗಿರುವ ಸೋನಾಕ್ಷಿ ಸಿನ್ಹಾ ಹೋಳಿ ಹಬ್ಬದ ಸಂದರ್ಭದಲ್ಲಿ ಟ್ರೋಲ್ಗೆ ಒಳಗಾಗಿದ್ದಾರೆ. ಆಗಿದ್ದೇನು?
1:48 PM
ಬೀದರ್: ಎರಡು ಪ್ರತ್ಯೇಕ ಘಟನೆಗಳಲ್ಲಿ ಈಜಲು ಹೋಗಿದ್ದ ಮೂವರು ಯುವಕರ ಸಾವು!
ಬೀದರ್ ಜಿಲ್ಲೆಯಲ್ಲಿ ಈಜಲು ಹೋದ ಇಬ್ಬರು ಸ್ನೇಹಿತರು ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮತ್ತೊಂದು ಘಟನೆಯಲ್ಲಿ, ಹುಲಸೂರಿನ ಯುವಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬೇಸಿಗೆಯಲ್ಲಿ ಈಜಲು ಹೋಗುವವರ ಸಂಖ್ಯೆ ಹೆಚ್ಚಾಗಿದ್ದು, ಪೋಷಕರು ಮಕ್ಕಳನ್ನು ಜಾಗ್ರತೆಯಿಂದ ನೋಡಿಕೊಳ್ಳಬೇಕು.
ಪೂರ್ತಿ ಓದಿ1:47 PM
ಶನಿ ಅಮಾವಾಸ್ಯೆ ಮೊದಲು ಚಂದ್ರನಿಂದ 3 ರಾಶಿಗೆ ಅದೃಷ್ಟ, ಶ್ರೀಮಂತಿಕೆ ಭಾಗ್ಯ
ಈ ಬಾರಿ ಶನಿ ಅಮವಾಸ್ಯೆಯ ಒಂದು ದಿನ ಮೊದಲು ಚಂದ್ರ ದೇವರು ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುತ್ತಾನೆ.
ಪೂರ್ತಿ ಓದಿ1:19 PM
ಅಭಿಷೇಕ್ ಅಂಬರೀಷ್ ಮಗನ ನಾಮಕರಣ ಶಾಸ್ತ್ರ, 'ಮದರ್ ಇಂಡಿಯಾ' ಮನೆ ಫಂಕ್ಷನ್ನಲ್ಲಿ ಜೋಡೆತ್ತು ನಾಪತ್ತೆ!
ಅಭಿಷೇಕ್ ಅಂಬರೀಷ್ ಮಗನ ನಾಮಕರಣ ಶಾಸ್ತ್ರಕ್ಕೆ ನಟ ದರ್ಶನ್ ಬರಬಹುದು, ಯಶ್ ಬರಬಹುದು ಎಂಬ ನಿರೀಕ್ಷೆ ಸಹಜವಾಗಿಯೇ ಹಲವರಲ್ಲಿ ಇತ್ತು. ಆದರೆ, ಬಹಳಷ್ಟು ಜನರಲ್ಲಿ ಈ ಬಗ್ಗೆ ಸಂದೇಹ ಕೂಡ ಇತ್ತು. ಏಕೆಂದರೆ, ನಟರಾದ ಯಶ್ ಹಾಗೂ ದರ್ಶನ್ ಇಬ್ಬರೂ..
ಪೂರ್ತಿ ಓದಿ1:14 PM
ಗುರುತ್ವಾಕರ್ಷಣೆಗೆ ಕಾಯುತ್ತಾ: ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್ ಆರೋಗ್ಯ ಮತ್ತು ಭೂಮಿಯಲ್ಲಿ ಚೇತರಿಕೆ
ಬಾಹ್ಯಾಕಾಶ ಪ್ರಯಾಣಗಳು ಬೆಲೆಕಟ್ಟಲಾಗದ ವೈಜ್ಞಾನಿಕ ಹೊಳಹುಗಳನ್ನು ನೀಡುತ್ತವಾದರೂ, ಭೂಮಿಗೆ ಮರಳಿದ ಬಳಿಕ, ಗಗನಯಾತ್ರಿಗಳಿಗೆ ಹೊಂದಿಕೊಳ್ಳಲು ಬಹಳಷ್ಟು ಸವಾಲುಗಳನ್ನೂ ಒಡ್ಡುತ್ತವೆ.
ಪೂರ್ತಿ ಓದಿ12:58 PM
ಮೀನ ರಾಶಿಯಲ್ಲಿ ಚತುರ್ಗ್ರಹಿ ಯೋಗ, ಈ 5 ರಾಶಿಗೆ ಲಾಟರಿ, ಕೋಟ್ಯಾಧಿಪತಿ ಯೋಗ
ಮೀನ ರಾಶಿಯಲ್ಲಿ ಸೂರ್ಯ, ಶುಕ್ರ, ಬುಧ ಮತ್ತು ರಾಹುವಿನ ಚತುರ್ಗ್ರಹಿ ಯೋಗವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ, ಆದರೆ 5 ರಾಶಿಚಕ್ರ ಚಿಹ್ನೆಗಳಿಗೆ ಹೆಚ್ಚಿನ ಲಾಭವಾಗುವ ಸಾಧ್ಯತೆಯಿದೆ.
12:28 PM
ಎಲ್ಲಾ ಸೀರಿಯಲ್ಗಳನ್ನು ಕುಟುಕುತ್ತಲೇ ರಮೇಶ್ ಅರವಿಂದ್ ʼಆಸೆ' ಬಗ್ಗೆ ಹೀಗೆಲ್ಲ ಹೇಳಿದ್ದೇಕೆ ಈ ಗೃಹಿಣಿ?
ಸೀರಿಯಲ್ ಎಂದಕೂಡಲೇ ಮೂಗು ಮುರಿಯುವವರು ಇದ್ದೇ ಇರುತ್ತಾರೆ. ಇಲ್ಲೋರ್ವ ಗೃಹಿಣಿ ಧಾರಾವಾಹಿಗಳ ಒನ್ಲೈನ್ ಸ್ಟೋರಿ ಬಿಚ್ಚಿಟ್ಟು ʼಆಸೆʼಯನ್ನು ಹೊಗಳಿದ್ದಾರೆ.
ಪೂರ್ತಿ ಓದಿ12:27 PM
ಈ ಮಹಿಳೆಗೆ ಬಂದ ಕಷ್ಟಗಳು ಇನ್ಯಾರಿಗೂ ಬರಲಾರವು..! ಜೈಲಿಗೋದ ಗಂಡ, 17 ಮೂಳೆ ಮುರಿತ, ಮಗು ಸಾವು!
ಈ ಮಹಿಳೆ ಗಂಡನಿಂದ ಬೆಟ್ಟದಿಂದ ತಳ್ಳಲ್ಪಟ್ಟರೂ 17 ಮೂಳೆ ಮುರಿದು, 100 ಪಿನ್ಗಳಿಂದ ಮೂಳೆ ಜಾಯಿಂಟ್ ಮಾಡಿದ್ದರೂ ಆಕೆ ಇನ್ನೂ ಬದುಕುಳಿದಿದ್ದಾರೆ. ಹೊಟ್ಟೆಯಲ್ಲಿದ್ದ ಮಗು ಸಾವು, ಗಂಡ ಜೈಲು ಪಾಲು, ಮತ್ತೊಂದು ಮಗುವಿಗೆ ಹಾರ್ಟ್ ಸಮಸ್ಯೆ... ಇತ್ಯಾದಿ ಕಷ್ಟಗಳ ಸಾಲು ಬೆಳೆಯುತ್ತಾ ಹೋಗುತ್ತದೆ..
ಪೂರ್ತಿ ಓದಿ12:06 PM
ಮಾರ್ಚ್ 29 ರಿಂದ 3 ರಾಶಿಗೆ ಅದೃಷ್ಟ, ಸೂರ್ಯ ಗ್ರಹಣದ ದಿನ ಶನಿ, ಶುಕ್ರ ಮತ್ತು ಬುಧ ಸಂಯೋಗ
ವರ್ಷದ ಮೊದಲ ಸೂರ್ಯಗ್ರಹಣ ಮಾರ್ಚ್ 29 ರಂದು ಸಂಭವಿಸಲಿದೆ. ಈ ದಿನ, ಶನಿಯು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ, ಶುಕ್ರ ಮತ್ತು ಬುಧರೊಂದಿಗೆ ಮೀನ ರಾಶಿಯಲ್ಲಿ 3 ಗ್ರಹಗಳ ಸಂಯೋಗವನ್ನು ರೂಪಿಸುತ್ತಾನೆ.
ಪೂರ್ತಿ ಓದಿ11:17 AM
ಟಿ20 ವಿಶ್ವಕಪ್ ಸೋತಾಗ ಬೆದರಿಕೆ ಕರೆಗಳು ಬರುತ್ತಿತ್ತು; ಅಚ್ಚರಿ ಮಾಹಿತಿ ಬಿಚ್ಚಿಟ್ಟ ಭಾರತದ ಸ್ಟಾರ್ ಕ್ರಿಕೆಟಿಗ!
ಸ್ಪಿನ್ನರ್ ವರುಣ್ ಚಕ್ರವರ್ತಿ 2021ರ ಟಿ20 ವಿಶ್ವಕಪ್ ಸೋಲಿನ ನಂತರದ ಕರಾಳ ದಿನಗಳನ್ನು ವಿವರಿಸಿದ್ದಾರೆ. ಬೆದರಿಕೆ ಕರೆಗಳು, ಹಿಂಬಾಲಿಸುವಿಕೆ ಮತ್ತು ಡಿಪ್ರೆಷನ್ಗೆ ಒಳಗಾದ ಬಗ್ಗೆ ಅವರು ಮಾತನಾಡಿದ್ದಾರೆ.
ಪೂರ್ತಿ ಓದಿ11:17 AM
ನಮ್ಮ ಮೆಟ್ರೋ ಹುದ್ದೆಯಲ್ಲಿ ಅನ್ಯಭಾಷಿಕರಿಗೆ ಪ್ರಾಶಸ್ತ್ಯ?: ತಮಿಳು, ಆಂಧ್ರದವರ ಸೆಳೆಯುವ ಹುನ್ನಾರ
ನಮ್ಮ ಮೆಟ್ರೋದಲ್ಲಿ ‘ಟ್ರೈನ್ ಆಪರೇಟರ್’ ಹುದ್ದೆಗೆ ಆಹ್ವಾನಿಸಿರುವ ಅರ್ಜಿಯಲ್ಲಿ ಕನ್ನಡಿಗರಿಗೆ ಪ್ರಾಶಸ್ತ್ಯ ನೀಡದೆ ಅನ್ಯ ಭಾಷಿಕರಿಗೆ ಉದ್ಯೋಗ ಪಡೆಯಲು ಅನುಕೂಲ ಕಲ್ಪಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಪೂರ್ತಿ ಓದಿ11:16 AM
ಈ ದಿನಾಂಕಗಳಲ್ಲಿ ಜನಿಸಿದ ಜನರ ಜೀವನದಲ್ಲಿ ಹಠಾತ್ ತೊಂದರೆ, ವಿವಾದದ ಸುಳಿಯಲ್ಲಿ ಒದ್ದಾಡುತ್ತಾರಂತೆ
ಸಂಖ್ಯಾಶಾಸ್ತ್ರದ ಸಹಾಯದಿಂದ, ಈ ದಿನಾಂಕಗಳಲ್ಲಿ ಜನಿಸಿದ ವ್ಯಕ್ತಿಯು ಜೀವನದಲ್ಲಿ ಹಠಾತ್ ತೊಂದರೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚಂತೆ.
10:54 AM
ಪಾಕಿಸ್ತಾನ ಸೇರಿ 41 ದೇಶಕ್ಕೆ ಅಮೆರಿಕ ವೀಸಾ ನಿರ್ಬಂಧ?
ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ತನ್ನ ಭದ್ರತೆ ದೃಷ್ಟಿಯಿಂದ ಪಾಕಿಸ್ತಾನ, ಭೂತಾನ್ ಸೇರಿ 41 ದೇಶಗಳಿಗೆ ನೀಡುವ ವೀಸಾ ಮೇಲೆ ಕೆಲವು ನಿರ್ಬಂಧ ಹೇರುವ ಸಾಧ್ಯತೆ ಇದೆ.
ಪೂರ್ತಿ ಓದಿ10:38 AM
ಮಾರ್ವಾಡಿಗಳು ಹೋಳಿ ಹಬ್ಬಕ್ಕೆ ಮಾಡಿಸಿದ್ದ ಊಟ ತಿಂದು ಹಾಸ್ಟೆಲ್ ವಿದ್ಯಾರ್ಥಿ ಸಾವು, 29 ಮಕ್ಕಳು ಅಸ್ವಸ್ಥ!
ಮಂಡ್ಯದ ವಸತಿ ಶಾಲೆಯಲ್ಲಿ ಫುಡ್ ಪಾಯ್ಸನ್ನಿಂದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಹೋಳಿ ಹಬ್ಬದ ಊಟ ಸೇವಿಸಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.
ಪೂರ್ತಿ ಓದಿ10:36 AM
ಈ 5 ರಾಶಿ ಜನರು ಅತ್ಯಂತ ಬಲಿಷ್ಠ ವ್ಯಕ್ತಿತ್ವವನ್ನು ಹೊಂದಿರುತ್ತಾರೆ, ಅವರು ಹುಟ್ಟಿನಿಂದಲೇ ನಾಯಕರು!
ಕೆಲವು ಜನರು ಬಾಲ್ಯದಿಂದಲೇ ತುಂಬಾ ಬಲವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅವರಿಗೆ ನಾಯಕರಾಗಲು ಬೇಕಾದ ಗುಣಗಳಿವೆ.
10:20 AM
ಇಂಗ್ಲೆಂಡ್ ಟೆಸ್ಟ್ಗೂ ರೋಹಿತ್ ಶರ್ಮಾ ಟೀಂ ಇಂಡಿಯಾ ನಾಯಕ?
ಚಾಂಪಿಯನ್ಸ್ ಟ್ರೋಫಿ ಗೆಲುವಿನಿಂದ ರೋಹಿತ್ ಶರ್ಮಾ ನಾಯಕತ್ವ ವಿಸ್ತರಣೆಯಾಗುವ ಸಾಧ್ಯತೆಯಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ರೋಹಿತ್ ಮುನ್ನಡೆಸುವ ಸಾಧ್ಯತೆಗಳಿವೆ. ರೋಹಿತ್ ಶರ್ಮಾ ನಿವೃತ್ತಿಯಾಗಲು ಕಾರಣಗಳೇ ಇಲ್ಲ ಎಂದು ಎಬಿ ಡಿ ವಿಲಿಯರ್ಸ್ ಹೇಳಿದ್ದಾರೆ.
ಪೂರ್ತಿ ಓದಿ10:17 AM
ಶೇ.5 ಅಥವಾ ಶೇ.18 ಜಿಎಸ್ಟಿ?: ಪಾಪ್ಕಾರ್ನ್ ಬಳಿಕ ಡೋನಟ್ಗೂ ಸುತ್ತಿತು ವಿವಾದ
ಪಾಪ್ಕಾರ್ನ್ ಬಳಿಕ ಇದೀಗ ಯುವಕರ ಜನಪ್ರಿಯ ತಿನಿಸಾದ ಡೋನಟ್ ವಿಚಾರದಲ್ಲೂ ಇದೀಗ ಜಿಎಸ್ಟಿ ಗೊಂದಲ ಸೃಷ್ಟಿಯಾಗಿದೆ. ಡೋನಟ್ ಮೇಲೆ ಶೇ.5ರಷ್ಟು ಜಿಎಸ್ಟಿ ವಿಧಿಸಬೇಕೇ ಅಥವಾ ಶೇ.18ರಷ್ಟು ತೆರಿಗೆ ಹೇರಬೇಕೇ ಎಂಬ ಗೊಂದಲ ಇದೀಗ ಬಾಂಬೆ ಕೋರ್ಟ್ ಮೆಟ್ಟಿಲೇರಿದೆ.
ಪೂರ್ತಿ ಓದಿ9:50 AM
ತೋರು ಬೆರಳು ಎತ್ತಿದರೆ ಭಯ, ಕಷ್ಟದಲ್ಲಿದ್ದವರಿಗೆ ನೆರವು: ವಿಶಿಷ್ಟ ಪರಿಹಾರ ಪರಿಚಯ
ಲೇವಾದೇವಿದಾರರ ಬೆದರಿಕೆ ಅಥವಾ ಸಮಾಜಘಾತುಕ ಶಕ್ತಿಗಳ ಭಯದಿಂದ ಮೌನವಾಗಿ ನಲುಗುತ್ತಿರುವವರಿಗೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಕರಮಲ ತಾಲೂಕಿನ ಪೋತ್ರೆ ನಿಲಜ್ ಗ್ರಾಮದ ಗ್ರಾಮಸಭೆಯು ವಿಶಿಷ್ಟ ಪರಿಹಾರವನ್ನು ಪರಿಚಯಿಸಿದೆ.
ಪೂರ್ತಿ ಓದಿ9:45 AM
ಈ 5 ರಾಶಿ ಜನರ ವ್ಯಕ್ತಿತ್ವವನ್ನು ಎಲ್ಲರೂ ಪ್ರೀತಿಸುತ್ತಾರೆ!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಚಕ್ರದ ಜನರು ಹೆಚ್ಚು ಆಕರ್ಷಕವಾಗಿರುತ್ತಾರೆ. ಎಲ್ಲರೂ ಇಷ್ಟಪಡುವ ವ್ಯಕ್ತಿತ್ವ ಹೊಂದಿರುತ್ತಾರೆ.
9:35 AM
ಮೈಕ್ರೋ ಫೈನಾನ್ಸ್ ಸಿಬ್ಬಂದಿ ಬೆಳಗ್ಗೆ 8ಕ್ಕೆ ಸಾಲ ವಸೂಲಿಗೆ ಬಂದರೆ ರಾತ್ರಿ 10ಕ್ಕೆ ವಾಪಸ್; ದಾಂಪತ್ಯದಲ್ಲಿ ಬಿರುಕು!
ಬೆಳಗಾವಿಯಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಮುಂದುವರೆದಿದ್ದು, ಸಾಲ ವಸೂಲಿಗಾಗಿ ಸಿಬ್ಬಂದಿ ಮನೆಗೆ ನುಗ್ಗಿ ಟಿಕಾಣಿ ಹೂಡುತ್ತಿದ್ದಾರೆ. ಇದರಿಂದ ಕೌಟುಂಬಿಕ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಜಿಲ್ಲಾಡಳಿತದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ9:31 AM
ಪ್ರಧಾನಿ ಮೋದಿ ಅವರ ಜೀವನದ ಕುರಿತು ಇಂದು 3 ಗಂಟೆ ಕುತೂಹಲಕಾರಿ ಪಾಡ್ ಕಾಸ್ಟ್
ಪ್ರಧಾನಿ ನರೇಂದ್ರ ಮೋದಿ ಅವರ ಜೀವನದ ಕುರಿತು ಕುತೂಹಲಕಾರಿ ಅಂಶಗಳುಳ್ಳ 3 ತಾಸಿನ ಪಾಡ್ಕಾಸ್ಟ್ ಭಾನುವಾರ ಸಂಜೆ 5.30ಕ್ಕೆ ಪ್ರಸಾರವಾಗಲಿದೆ. ಕೃತಕ ಬುದ್ಧಿಮತ್ತೆ ಸಂಶೋಧಕ ಹಾಗೂ ಖ್ಯಾತ ಪಾಡ್ಕಾಸ್ಟರ್ ಲೆಕ್ಸ್ ಫ್ರಿಡ್ಮನ್ ಅವರು ಮೋದಿ ಸಂದರ್ಶನ ನಡೆಸಿದ್ದಾರೆ.
ಪೂರ್ತಿ ಓದಿ9:28 AM
ಭಾರತ ಹಾಕಿ ವಿಶ್ವಕಪ್ ಗೆದ್ದು 50 ವರ್ಷ; ಈವರೆಗೂ ದೇಶ ಗೆದ್ದಿರುವ ಏಕೈಕ ವಿಶ್ವಕಪ್!
1975ರಲ್ಲಿ ಭಾರತ ಹಾಕಿ ವಿಶ್ವಕಪ್ ಗೆದ್ದ ಸವಿನೆನಪಿಗಾಗಿ ಹಾಕಿ ಇಂಡಿಯಾ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿತ್ತು. ಹರ್ಮನ್ಪ್ರೀತ್ ಸಿಂಗ್ ಮತ್ತು ಸವಿತಾ ಪುನಿಯಾ ವರ್ಷದ ಶ್ರೇಷ್ಠ ಆಟಗಾರ/ಆಟಗಾರ್ತಿ ಪ್ರಶಸ್ತಿ ಪಡೆದರು.
ಪೂರ್ತಿ ಓದಿ9:23 AM
ಮಂಡ್ಯ ವಿಶ್ವವಿದ್ಯಾಲಯದಲ್ಲೂ ಬೋಧಕ ಹುದ್ದೆ ಖಾಲಿ: ಶಿಕ್ಷಣ, ಸಂಶೋಧನೆಗೆ ಸಿಗದ ಆದ್ಯತೆ
ರಾಜ್ಯದ ನೂತನ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಮಂಡ್ಯ ವಿಶ್ವವಿದ್ಯಾಲಯವನ್ನೂ ಬೋಧಕ, ಬೋಧಕೇತರ ಸಿಬ್ಬಂದಿ ಕೊರತೆ ಕಾಡುತ್ತಿದೆ. 345 ಬೋಧಕ, ಬೋಧಕೇತರ ಹುದ್ದೆ ಮಂಜೂರಾಗಿದ್ದರೂ ಸರ್ಕಾರ ಭರ್ತಿಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಅತಿಥಿ ಬೋಧಕರ ಮೇಲೆ ಅವಲಂಬಿತವಾಗಿದೆ.
ಪೂರ್ತಿ ಓದಿ9:14 AM
ಹೋಳಿ ಆಡದ ಪತಿ ಬಗ್ಗೆ ಸಾಲು ಸಾಲು ಪ್ರಶ್ನೆ; ಸಹೋದರ ಅಂತ ಕರೆದು ಮದುವೆಯಾದ ನಟಿ ಈಗ ಏನಂತಾರೆ?
ಬಾಲಿವುಡ್ನಲ್ಲಿ ಸಿನಿಮಾಗಳಿಗಿಂತ ಜಾಸ್ತಿ ಕಾಂಟ್ರವರ್ಸಿ ಮಾಡಿಕೊಳ್ಳುವ ಸ್ವರಾ ಭಾಸ್ಕರ್ ಅವರು ಮಗಳ ಜೊತೆ ಹೋಳಿ ಆಚರಿಸಿದ್ದಾರೆ, ಆದರೆ ಅವರ ಪತಿ ಹೋಳಿ ಆಚರಿಸಿಲ್ಲ. ಈ ವಿಷಯದ ಬಗ್ಗೆ ಟ್ರೋಲ್ ಮಾಡಿದವರಿಗೆ ನಟಿ ಖಡಕ್ ಉತ್ತರ ಕೊಟ್ಟಿದ್ದಾರೆ.
9:11 AM
ಈ 3 ರಾಶಿ ಜನರು ಒಂಟಿಯಾಗಿದ್ದಾಗ ಹೆಚ್ಚು ಅದೃಷ್ಟವಂತರು, ಇವರಿಗೆ ಮಿಂಗಲ್ಗಿಂತ ಸಿಂಗಲ್ದ್ದರೆ ಯಶಸ್ಸು ಪಕ್ಕಾ
ಜ್ಯೋತಿಷ್ಯದ ಪ್ರಕಾರ ರಾಶಿಚಕ್ರದ 12 ಚಿಹ್ನೆಗಳಲ್ಲಿ 3 ಚಿಹ್ನೆಗಳು ಒಂಟಿಯಾಗಿರುವುದರಿಂದ ಅವರ ಅದೃಷ್ಟ ಹೊಳೆಯುತ್ತದೆ.
9:08 AM
ಕಲಬುರಗಿಯಲ್ಲಿ ಮಂಗಳಮುಖಿಯರ ಜಡೆ ಜಗಳ: ವಿಡಿಯೋ ವೈರಲ್!
ಕಲಬುರಗಿಯ ದೇವಸ್ಥಾನದಲ್ಲಿ ಇಬ್ಬರು ಮಂಗಳಮುಖಿಯರು ಜಡೆ ಹಿಡಿದು ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೂರ್ತಿ ಓದಿ9:05 AM
ಭಾರತ ಟಿ20 ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡ್ತಾರಾ ಕೊಹ್ಲಿ? ಒಲಿಂಪಿಕ್ಸ್ನಲ್ಲಿ ಚಿನ್ನ ಗೆಲ್ಲುವ ಆಸೆ ವ್ಯಕ್ತಪಡಿಸಿದ ವಿರಾಟ್!
ವಿರಾಟ್ ಕೊಹ್ಲಿ ತಮ್ಮ ನಿವೃತ್ತಿ ವದಂತಿಗಳಿಗೆ ತೆರೆ ಎಳೆದಿದ್ದು, ಸದ್ಯಕ್ಕೆ ನಿವೃತ್ತಿಯಾಗುವ ಯಾವುದೇ ನಿರ್ಧಾರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಚಿನ್ನ ಗೆಲ್ಲುವ ಕನಸನ್ನು ಅವರು ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ9:03 AM
4 ತಿಂಗಳಲ್ಲಿ 10 ಬಾರಿ ದುಬೈಗೆ ಪ್ರಯಾಣ ಮಾಡಿದ್ದ ನಟಿ ರನ್ಯಾ ರಾವ್ ಭೇಟಿ: ಇಲ್ಲಿದೆ ವಿವರ!
ಚಿನ್ನ ಕಳ್ಳ ಸಾಗಣೆ ಪ್ರಕರಣದ ಆರೋಪಿ ಹಾಗೂ ಡಿಜಿಪಿ ಮಲಮಗಳು ನಟಿ ರನ್ಯಾರಾವ್ ಅವರು ನಾಲ್ಕು ತಿಂಗಳ ಅವಧಿಯಲ್ಲಿ 10ಕ್ಕೂ ಹೆಚ್ಚು ಬಾರಿ ದುಬೈಗೆ ಭೇಟಿ ನೀಡಿದ್ದರು ಎನ್ನಲಾದ ಮಾಹಿತಿ ಬಹಿರಂಗವಾಗಿದೆ.
ಪೂರ್ತಿ ಓದಿ8:43 AM
ಡಿಎಂಕೆ ತಿರಸ್ಕರಿಸಿದ ರುಪಾಯಿ ಚಿಹ್ನೆ ರಚಿಸಿದ್ದು ಕಾಂಗ್ರೆಸ್ ಸರ್ಕಾರ: ಪ್ರಲ್ಹಾದ್ ಜೋಶಿ
ಕೇಂದ್ರದಲ್ಲಿ ಹಿಂದೆ ಕಾಂಗ್ರೆಸ್ ಸರ್ಕಾರವೇ ರೂಪಿಸಿದ ರೂಪಾಯಿ ಚಿಹ್ನೆನ್ನು ತಿರಸ್ಕರಿಸಿರುವ ತಮಿಳುನಾಡಿನ ಡಿಎಂಕೆ ಸರ್ಕಾರದ ಮುಖ್ಯಮಂತ್ರಿ ಸ್ಟಾಲಿನ್, ತಮ್ಮ ವೈಫಲ್ಯವನ್ನು ಮಚ್ಚಿಡುವುದಕ್ಕಾಗಿ ಈ ರೀತಿ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.
ಪೂರ್ತಿ ಓದಿ8:42 AM
WPL 2025 ಮುಂಬೈ ಇಂಡಿಯನ್ಸ್ ಚಾಂಪಿಯನ್; ಡೆಲ್ಲಿಗೆ ಫೈನಲ್ನಲ್ಲಿ ಹ್ಯಾಟ್ರಿಕ್ ಸೋಲು
ಮುಂಬೈ ಇಂಡಿಯನ್ಸ್ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಸತತ ಮೂರನೇ ಬಾರಿಗೆ ಫೈನಲ್ನಲ್ಲಿ ಸೋತಿದೆ.
ಪೂರ್ತಿ ಓದಿ8:40 AM
ಈ ರಾಶಿಯವರು ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರಂತೆ
ಯೋಚಿಸದೆ ಖರ್ಚು ಮಾಡುವ ಈ 5 ರಾಶಿಚಕ್ರ ಚಿಹ್ನೆಗಳು ಯಾವುವು ಎಂದು ನೋಡಿ.
8:37 AM
ಪರಮೇಶ್ವರ್ ಬಿಟ್ಟು ಉಳಿದ ಎಲ್ಲರೂ ಡಿಕೆಶಿ ಡಿನ್ನರ್ ಪಾರ್ಟಿಗೆ ಹೋಗಿದ್ವಿ: ಎಂ.ಬಿ.ಪಾಟೀಲ್
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಡಿನ್ನರ್ ಪಾರ್ಟಿಗೆ ನಾನು ಅಟೆಂಡ್ (ಹಾಜರು) ಆಗಿದ್ದೆ. ಫೋಟೋ ನೋಡಿದ್ದೀರಿ. ಸಚಿವರಾದ ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ, ರಾಜಣ್ಣ ಅಟೆಂಡ್ ಕೂಡ ಆಗಿದ್ದಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
8:32 AM
ಸುನಿತಾ ಆಗಮನ ಸನ್ನಿಹಿತ: 9 ತಿಂಗಳ ಬಳಿಕ ಕೂಡಿಬಂತು ಭೂಮಿಗೆ ಮರಳುವ ಯೋಗ!
ಗಗನಯಾತ್ರಿ ಸುನಿತಾ ವಿಲಿಯಮ್ಸ್ 9 ತಿಂಗಳ ಬಳಿಕ ಭೂಮಿಗೆ ಮರಳಲಿದ್ದಾರೆ. ತಾಂತ್ರಿಕ ತೊಡಕುಗಳಿಂದ ಐಎಸ್ಎಸ್ನಲ್ಲೇ ಉಳಿದುಕೊಂಡಿದ್ದ ಇವರು, ಇದೀಗ ನಾಸಾ ಹಾಗೂ ಎಲಾನ್ ಮಸ್ಕ್ರ ಜಂಟಿ ಪ್ರಯತ್ನದಿಂದ ವಾಪಸ್ಸಾಗಲಿದ್ದಾರೆ.
ಪೂರ್ತಿ ಓದಿ7:59 AM
ವಿದ್ಯಾರ್ಥಿ ಆಗಿದ್ದಾಗ 7 ದಿನ ಜೈಲೂಟ ತಿಂದಿದ್ದೆ: ಕೇಂದ್ರ ಸಚಿವ ಅಮಿತ್ ಶಾ
ಅಸ್ಸಾಂನಲ್ಲಿ ವಿದ್ಯಾರ್ಥಿಯಾಗಿದ್ದಾಗ ತಾವು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ವಿರುದ್ಧ ಅಸ್ಸಾಂನಲ್ಲಿ ಪ್ರತಿಭಟನೆ ನಡೆಸಿದ ವೇಳೆ ತಮ್ಮನ್ನು ಬಂಧಿಸಿ, ದೈಹಿಕ ಕಿರುಕುಳ ನೀಡಲಾಗಿತ್ತು. 7 ದಿನ ಜೈಲಿಗೆ ಹಾಕಲಾಗಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೆನಪಿಸಿಕೊಂಡಿದ್ದಾರೆ.
7:32 AM
ಮುಸ್ಲಿಮರಿಗಷ್ಟೇ ಗುತ್ತಿಗೆ ಮೀಸಲಾತಿ ಕೊಟ್ಟಿಲ್ಲ: ಡಿ.ಕೆ.ಶಿವಕುಮಾರ್
ಗುತ್ತಿಗೆಯಲ್ಲಿ ಮೀಸಲಾತಿ ಕೇವಲ ಮುಸ್ಲಿಂ ಸಮುದಾಯಕ್ಕಷ್ಟೇ ಸೀಮಿತವಾಗಿಲ್ಲ. ಅಲ್ಪಸಂಖ್ಯಾತ ಮತ್ತು ಹಿಂದುಳಿದವರಿಗೂ ಮೀಸಲಾತಿ ನೀಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.