LIVE NOW
Published : Jan 14, 2026, 06:47 AM ISTUpdated : Jan 14, 2026, 11:54 PM IST

Karnataka News Live: Karunya Ram Sister Case - ಒಡಹುಟ್ಟಿದ ತಂಗಿ ವಿರುದ್ಧವೇ ಪೊಲೀಸ್‌ ಠಾಣೆ ಮೆಟ್ಟಿಲೇರಿದ ನಟಿ ಕಾರುಣ್ಯಾ ರಾಮ್

ಸಾರಾಂಶ

ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಷಯದಲ್ಲಿ ಇನ್ನೆರಡು ದಿನಗಳಲ್ಲಿ ಪೂರಕ ವಾತಾವರಣ ಸೃಷ್ಟಿಯಾಗಲಿದ್ದು, ಜನವರಿ 16ರಂದು ಈ ಬಗ್ಗೆ ನಾನು ಮಾತನಾಡುತ್ತೇನೆ. ಸಿಹಿ ಸುದ್ದಿ ಸಿಗುವ ವಿಶ್ವಾಸವಿದೆ ಎಂದು ಡಿಕೆಶಿ ಆಪ್ತ, ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಎಲ್ಲರೂ ಸೈಲೆಂಟ್ ಆಗಿಬಿಟ್ರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾವ ಸೈಲೆಂಟೂ ಇಲ್ಲ. ಇನ್ನೆರಡು ದಿನಗಳಲ್ಲಿ ಪೂರಕ ವಾತಾವರಣ ಸೃಷ್ಟಿಯಾಗಲಿದ್ದು, ಸಂಕ್ರಾಂತಿ ಬಳಿಕ, ಜನವರಿ 16ರಂದು ಈ ಬಗ್ಗೆ ಮಾತನಾಡುವೆ ಎಂದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪಕ್ಷಕ್ಕಾಗಿ ಶ್ರಮಿಸಿದ್ದು, ಅವರು ಸಿಎಂ ಆಗಬೇಕು ಎಂಬುದು ನಮ್ಮ ಇಚ್ಛೆ ಎಂದರು. ಈ ವಿಷಯದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧಾರವೇ ಅಂತಿಮವಾಗಿದ್ದು, ಹೈಕಮಾಂಡ್‌ ಸೂಕ್ತ ನಿರ್ಧಾರ ಕೈಗೊಂಡು, ಡಿಕೆಶಿಗೆ ಸಿಎಂ ಆಗಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

Actress Karunya Ram sister

11:54 PM (IST) Jan 14

Karunya Ram Sister Case - ಒಡಹುಟ್ಟಿದ ತಂಗಿ ವಿರುದ್ಧವೇ ಪೊಲೀಸ್‌ ಠಾಣೆ ಮೆಟ್ಟಿಲೇರಿದ ನಟಿ ಕಾರುಣ್ಯಾ ರಾಮ್

Actress Karunya Ram Sister Controversy: ಕನ್ನಡದಲ್ಲಿ ಕೆಲ ಸಿನಿಮಾ, ಬಿಗ್‌ ಬಾಸ್‌ ಶೋನಲ್ಲಿ ಭಾಗವಹಿಸಿರುವ ಕಾರುಣ್ಯಾ ರಾಮ್‌ ಅವರು ಒಡಹುಟ್ಟಿದ ತಂಗಿ ಸಮೃದ್ಧಿ ರಾಮ್‌ ವಿರುದ್ಧವೇ ದೂರು ನೀಡಿದ್ದಾರೆ. ಅಷ್ಟಕ್ಕೂ ಅವರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು ಯಾಕೆ?

 

Read Full Story

11:11 PM (IST) Jan 14

ಇಡೀ ಸೀಸನ್‌ಗೆ ಕಿಚ್ಚನ ಚಪ್ಪಾಳೆ ಪಡೆದು BBK 12 ಶೋಗೆ ಗುಡ್‌ಬೈ ಹೇಳಿದ Dhruvanth;‌ ವೀಕ್ಷಕರಿಗೆ ಅದೇ ಡೌಟ್!

Bigg Boss Kannada 12 Elimination: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಟಾಪ್‌ 6 ಸ್ಪರ್ಧಿಗಳ ಆಯ್ಕೆ ಆಗಬೇಕು. ಹೀಗಿರುವಾಗ ಮಿಡ್‌ ವೀಕ್‌ ಎಲಿಮಿನೇಶನ್‌ ಆಗಿದೆ. ಧ್ರುವಂತ್‌ ಮನೆಯಿಂದ ಹೊರಬಂದಿದ್ದಾರೆ. ಹಾಗಾದರೆ ಯಾರದು?

 

Read Full Story

10:23 PM (IST) Jan 14

ಅಂತ್ಯಸಂಸ್ಕಾರದ ವೇಳೆ ಅಚ್ಚರಿ, ಚಿತೆಯಿಂದ ಎದ್ದು ಬಂದು ಬರ್ತ್‌ಡೇ ಆಚರಿಸಿದ 103ರ ಹರೆಯದ ಅಜ್ಜಿ

ಅಂತ್ಯಸಂಸ್ಕಾರದ ವೇಳೆ ಅಚ್ಚರಿ, ಪ್ರೀತಿಯ ಅಜ್ಜಿ ನಿಧನಕ್ಕೆ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಅಂತ್ಯಸಂಸ್ಕಾರಕ್ಕೆ ಎಲ್ಲಾ ಸಿದ್ಧತೆ ನಡೆದಿದೆ. ಅಚ್ಚರಿ ಎಂಬಂತೆ ಚಿತೆಯಿಂದ ಎದ್ದು ಬಂದ ಅಜ್ಜಿ ತಮ್ಮ 103ನೇ ವರ್ಷದ ಬರ್ತ್‌ಡೇ ಆಚರಿಸಿದ ಘಟನೆ ನಡೆದಿದೆ.

Read Full Story

09:42 PM (IST) Jan 14

ಬಿಗ್ ಬಾಸ್ ಪುಟುಗೋಸಿ ಶೋ, ಆಕ್ರೋಶಕ್ಕೆ ಗುರಿಯಾದ ಬೆಂಗಳೂರು ಕರವೇ ನಾಯಕನ ಹೇಳಿಕೆ

ಬಿಗ್ ಬಾಸ್ ಪುಟುಗೋಸಿ ಶೋ, ಆಕ್ರೋಶಕ್ಕೆ ಗುರಿಯಾದ ಬೆಂಗಳೂರು ಕರವೇ ನಾಯಕನ ಹೇಳಿಕೆ, ಈ ಕಾರ್ಯಕ್ರಮ ನಮಗೆ ಪುಟುಗೋಸಿ ಅಂದರೆ ಪುಟುಗೋಸಿ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರು ಕರವೇ ಅಧ್ಯಕ್ಷನ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಗುರಿಯಾಗಿದೆ.

 

Read Full Story

08:51 PM (IST) Jan 14

ಬೆಂಗಳೂರು ಮಾರುಕಟ್ಟೆಗೆ ಎಂಟ್ರಿಕೊಟ್ಟ ಅಮೆರಿಕ ಟೆಸ್ಲಾ ಕಾರು, ಕೇವಲ 22 ಸಾವಿರ ರೂ.ಗೆ ಬುಕಿಂಗ್

ಬೆಂಗಳೂರಿಗೆ ಬಂತು ಅಮೆರಿಕ ಟೆಸ್ಲಾ ಇವಿ ಕಾರು, ಮೊದಲ ಪಾಪ್ ಅಪ್ ಎಕ್ಸ್‌ಪೀರಿಯೆನ್ಸ್ ಆರಂಭಿಸಿದೆ. ಗ್ರಾಹಕರು ಟೆಸ್ಲಾ ಕಾರು ಡ್ರೈವ್ ಮಾಡುವ ಅವಕಾಶ ನೀಡಲಾಗಿದೆ. ಬುಕಿಂಗ್ ಆರಂಭಗೊಂಡಿದೆ. ಬೆಂಗಳೂರಿನಲ್ಲಿ ಟೆಸ್ಲಾ ಕಾರಿನ ಬೆಲೆ ಎಷ್ಟು, ಮೈಲೇಜ್ ಎಷ್ಟಿದೆ?

 

Read Full Story

08:22 PM (IST) Jan 14

ಮುಂದಿನ ಚುನಾವಣೆಗೆ ನಾನು ನಿಲ್ಲದಿದ್ದರೂ ಸರಿ, ಆರ್.ಅಶೋಕ್ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿ ಸೋಲಿಸಿಯೇ ಸಿದ್ಧ!

ಮದ್ದೂರು ಶಾಸಕ ಕೆ.ಎಂ. ಉದಯ್, ಮುಂದಿನ ಚುನಾವಣೆಯಲ್ಲಿ ಪದ್ಮನಾಭನಗರದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಅವರನ್ನು ಸೋಲಿಸಲು ವೈಯಕ್ತಿಕವಾಗಿ ಶ್ರಮಿಸುವುದಾಗಿ ಸವಾಲು ಹಾಕಿದ್ದಾರೆ. ಮದ್ದೂರು ನಗರಸಭೆ ರಚನೆ ವಿಚಾರದಲ್ಲಿ ಅಶೋಕ್ ಅವರ ನಿಲುವನ್ನು ಟೀಕಿಸಿದ್ದಾರೆ.

Read Full Story

07:51 PM (IST) Jan 14

BBK 12 - ಆ ವಿಷ್ಯ Suraj Singh ಮುಚ್ಚಿಟ್ಟಿದ್ದ- ಸೂರಜ್​ ಎಂಗೇಜ್​ಮೆಂಟ್​ ಕುರಿತು ರಾಶಿಕಾ ಹೇಳಿದ್ದೇನು?

ಬಿಗ್​ಬಾಸ್​ ಮನೆಯಿಂದ ಹೊರಬಂದಿರುವ ರಾಶಿಕಾ ಶೆಟ್ಟಿ, ಸೂರಜ್​ ಸಿಂಗ್​ ಜೊತೆಗಿನ ಪ್ರೇಮ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ತಾವಿಬ್ಬರೂ ಕೇವಲ ಸ್ನೇಹಿತರು ಎಂದಿರುವ ಅವರು, ಸೂರಜ್​ ಸೀರಿಯಲ್​ನಲ್ಲಿ ನಟಿಸುತ್ತಿರುವ ವಿಷಯ ತನಗೆ ಮನೆಯಲ್ಲಿ ತಿಳಿದಿರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Read Full Story

07:43 PM (IST) Jan 14

ವಾಲ್ಮೀಕಿ ನಿಗಮ ಹಗರಣ - ಮಾಜಿ ಸಚಿವ ಬಿ. ನಾಗೇಂದ್ರಗೆ ಬಿಗ್ ರಿಲೀಫ್; ಸಿಬಿಐ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಮಂಜೂರು

ಬಹುಕೋಟಿ ರೂಪಾಯಿಗಳ ಮಹರ್ಷಿ ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ, ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ತನಿಖೆಗೆ ಸಹಕರಿಸುವುದು ಸೇರಿದಂತೆ ನ್ಯಾಯಾಲಯವು ಹಲವು ಕಠಿಣ ಷರತ್ತುಗಳನ್ನು ವಿಧಿಸಿದೆ.
Read Full Story

07:05 PM (IST) Jan 14

25 ವರ್ಷದಲ್ಲಿ ಕೇವಲ 1 ಕಿ.ಮೀ ರಸ್ತೆ ನಿರ್ಮಾಣ - ನೈಸ್ ರಸ್ತೆಯ ಕಥೆ ಅಂತ್ಯ? ಹೈಕೋರ್ಟ್‌ನಿಂದ ಮಹತ್ವದ ಆದೇಶ

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (ನೈಸ್) ಯೋಜನೆಯು ದಶಕಗಳಿಂದ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಯೋಜನೆ ರದ್ದುಗೊಳಿಸಿ, ಬೆಂಗಳೂರಿನ ಪ್ರಸ್ತುತ ಅಗತ್ಯಗಳಿಗೆ ತಕ್ಕಂತೆ ಹೊಸ ಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

Read Full Story

06:50 PM (IST) Jan 14

ಬೆಂಗಳೂರಿಗೆ ವಿದಾಯ ಹೇಳಿದ ಆರ್‌ಸಿಬಿ, ತವರಿನ ಪಂದ್ಯಗಳಿಗೆ ಛತ್ತೀಸ್‌ಗಢದ ರಾಯ್ಪುರ ಆತಿಥ್ಯ ಖಚಿತಪಡಿಸಿದ ಫ್ರಾಂಚೈಸಿ!

RCB Bids Goodbye to Bengaluru: Raipur to Host Home Matches in IPL 2026 ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಎರಡು ಐಪಿಎಲ್ 2026 ಪಂದ್ಯಗಳನ್ನು ಆಯೋಜಿಸಲಿದೆ.

 

Read Full Story

06:45 PM (IST) Jan 14

ಗಗನಸಖಿಯಾಗುವ ಕನಸು ಕಂಡಿದ್ದ ಯುವತಿಗೆ ಜೆಡಿಎಸ್ ನಾಯಕಿಯ ಪುತ್ರನಿಂದ ಕಿರುಕುಳ, ಸಾವಿಗೆ ಶರಣಾದ ಯುವತಿ

ಕಾರವಾರದ ಕದ್ರಾದಲ್ಲಿ ರಿಶೇಲ್ ಡಿಸೋಜಾ ಎಂಬ ಯುವತಿ ಆತ್ಮ*ಹತ್ಯೆ ಮಾಡಿಕೊಂಡಿದ್ದು, ಜೆಡಿಎಸ್ ನಾಯಕಿ ಪುತ್ರ ಚಿರಾಗ್ ಕೊಠಾರಕರ ಕಿರುಕುಳವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರೀತಿ ನಿರಾಕರಿಸಿದ್ದಕ್ಕೆ ಚಿರಾಗ್ ಮಾನಸಿಕ ಹಿಂಸೆ ನೀಡಿದ್ದಾಗಿ ದೂರು ನೀಡಲಾಗಿದೆ

Read Full Story

06:35 PM (IST) Jan 14

ಶಿಡ್ಲಘಟ್ಟ ಪೌರಾಯುಕ್ತೆಗೆ ರೌಡಿ ದರ್ಪ ತೋರಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನಿಂದ ಕ್ಷಮೆ ಕೇಳಿಸಿದ ಸುವರ್ಣ ನ್ಯೂಸ್!

ಸಚಿವ ಜಮೀರ್ ಅಹಮದ್ ಖಾನ್ ಪುತ್ರನ ಸಿನಿಮಾ ಪೋಸ್ಟರ್ ತೆರವುಗೊಳಿಸಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವಾಚ್ಯವಾಗಿ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಏಷ್ಯಾನೆಟ್ ಸುವರ್ಣ ನ್ಯೂಸ್ ರಾಜೀವ್ ಗೌಡನಿಂದ ಕ್ಷಮೆ ಕೇಳಿಸಿದೆ.

Read Full Story

05:45 PM (IST) Jan 14

Karna Serial - ರಮೇಶ್‌ ಹೂಡಿದ ಬ್ರಹ್ಮಾಸ್ತ್ರದಿಂದಲೇ ತೇಜಸ್‌, ನಿತ್ಯಾ ಮದುವೆ ಮುರಿದೋಯ್ತು - ಅಂಥದ್ದೇನು ಮಾಡಿದ?

Karna Serial Episode Update: ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಹಾಗೂ ತೇಜಸ್‌ ಮದುವೆಗೆ ಸಕಲ ತಯಾರಿಯೂ ನಡೆದಿತ್ತು. ಆದರೆ ಕೊನೆ ಗಳಿಗೆಯಲ್ಲಿ ತೇಜಸ್‌ ಮದುವೆ ಆಗೋದಿಲ್ಲ ಎಂದು ಹೇಳಿದ್ದಾನೆ. ಇದಕ್ಕೆ ಕಾರಣ ರಮೇಶ್.‌ ಹಾಗಾದರೆ ಏನಾಯ್ತು?

 

Read Full Story

05:06 PM (IST) Jan 14

ದರ್ಶನ್ ಅಯ್ಯಪ್ಪ ಸ್ವಾಮಿ ಪರಮಭಕ್ತ , ಆದ್ರೆ ದಾಸನಿಗೆ ಈ ಸಲ ಜೈಲಲ್ಲೇ ಸಂಕ್ರಾಂತಿ! ಯಾವಾಗ ಮುಕ್ತಿ?

ನಟ ದರ್ಶನ್ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿದ್ದು, ಪ್ರತಿವರ್ಷ ಸಂಕ್ರಾಂತಿಯಂದು ವಿಶೇಷ ಪೂಜೆ ಸಲ್ಲಿಸಿ ಶಬರಿಮಲೆಗೆ ಹೋಗುತ್ತಿದ್ದರು. ಆದರೆ ಈ ಬಾರಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವುದರಿಂದ, ದರ್ಶನ್‌ಗೆ ಜೈಲಿನಲ್ಲೇ ಸಂಕ್ರಾಂತಿ ಆಚರಿಸುವ ಸ್ಥಿತಿ ಬಂದಿದೆ.
Read Full Story

04:48 PM (IST) Jan 14

ಲಕ್ಕುಂಡಿ ನಿಧಿಗೆ ಉಂಟು ವಿಜಯನಗರ ಸಾಮ್ರಾಜ್ಯದ ನಂಟು; ಚಿನ್ನಾಭರಣಕ್ಕಿರುವ 300 ವರ್ಷ ಇತಿಹಾಸ ಬಿಚ್ಚಿಟ್ಟ ಡಿಸಿ!

ಗದಗಿನ ಲಕ್ಕುಂಡಿಯಲ್ಲಿ ಪತ್ತೆಯಾದ ನಿಧಿಯು ಸುಮಾರು 300 ವರ್ಷಗಳಷ್ಟು ಹಳೆಯದಾದ ವಿಜಯನಗರ ಕಾಲದ ಬಂಗಾರದ ಒಡವೆಗಳೆಂದು ತಿಳಿದುಬಂದಿದೆ. ಸರ್ಕಾರಕ್ಕೆ ಒಪ್ಪಿಸಿದ ರಿತ್ತಿ ಕುಟುಂಬಕ್ಕೆ ನಿವೇಶನ, ಮನೆ ಹಾಗೂ ಉದ್ಯೋಗ ನೀಡಲು ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲಾಧಿಕಾರಿ ಕೊಟ್ಟ ಮಾಹಿತಿ ಇಲ್ಲಿದೆ ನೋಡಿ.

Read Full Story

04:47 PM (IST) Jan 14

ನಿಧಿ ಸಿಕ್ಕ ಕುಟುಂಬ ಸರ್ವನಾಶ; ಅರ್ಧಾಯುಷ್ಯಕ್ಕೆ ಪತನ? ಪುರಾಣ, ಮನುಸ್ಮೃತಿಯಂತೆ ಏನು ಮಾಡಬೇಕು?

ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಬಳಿಕ ಏನು ಮಾಡಬೇಕು ಎಂದು ನೋಡಬೇಕು. ಇದ್ದಕ್ಕಿದ್ದಂತೆ ಕೆಲವರು ಶ್ರೀಮಂತರಾಗುವುದುಂಟು. ಆದರೆ ಒಂದಲ್ಲ ಒಂದು ರೀತಿಯ ಸಂಕಷ್ಟಗಳು ಬರುತ್ತವೆ, ಅರ್ಧಾಯುಷ್ಯಕ್ಕೆ ಸಾಯುತ್ತಾರೆ, ಒಂದೊಂದು ದಿಕ್ಕಿನಿಂದ ಸಮಸ್ಯೆ ಬರುವುದು. 

Read Full Story

04:31 PM (IST) Jan 14

ಅರ್ಧ ಕೆಜಿ ಲಕ್ಕುಂಡಿ ನಿಧಿ, ಆದ್ರೆ ಇದೆಂಥಾ ವಿಧಿ? ಸರ್ಕಾರಕ್ಕೆ ನಿಧಿ ಕೊಟ್ಟು ಬೀದಿಗೆ ಬಿತ್ತಾ ಕುಟುಂಬ?

ಲಕ್ಕುಂಡಿಯಲ್ಲಿ ಮನೆ ಅಡಿಪಾಯ ತೋಡುವಾಗ ಗಂಗವ್ವ, ಪ್ರಜ್ವಲ್ ಎಂಬ ತಾಯಿ-ಮಗನಿಗೆ ಚಿನ್ನಾಭರಣಗಳಿದ್ದ ಮಡಿಕೆಯೊಂದು ಸಿಕ್ಕಿದೆ. ಕೆಜಿಎಫ್ ಕಥೆಯಂತೆ ಆಸೆಪಡದೆ, ಪ್ರಾಮಾಣಿಕವಾಗಿ ಅದನ್ನು ಸರ್ಕಾರಕ್ಕೆ ಒಪ್ಪಿಸಿದ ಈ ಘಟನೆಯು, ಸಿಕ್ಕಿದ್ದು ನಿಧಿಯೋ ಅಥವಾ ಪೂರ್ವಜರ ಆಸ್ತಿಯೋ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

Read Full Story

03:55 PM (IST) Jan 14

BBK 12 ಮಿಡ್‌ ವೀಕ್‌ ಎಲಿಮಿನೇಶನ್‌ ಆಯ್ತು; ಭಯದಲ್ಲೇ ಪ್ರಾರ್ಥಿಸುತ್ತ ಬಾಗಿಲೊಳಗೆ Rakshita Shetty

Bigg Boss Kannada Season 12 Episode: ಬಿಗ್‌ ಬಾಸ್‌ ಮನೆಯಲ್ಲಿ ಮಿಡ್‌ ವೀಕ್‌ ಎಲಿಮಿನೇಶನ್‌ ಶುರುವಾಗಿದೆ. ಕಲರ್ಸ್‌ ಕನ್ನಡ ವಾಹಿನಿಯು ಹೊಸ ಪ್ರೋಮೋ ರಿಲೀಸ್‌ ಮಾಡಿದ್ದು, ಮನೆಯಿಂದ ಯಾರು ಎಲಿಮಿನೇಟ್‌ ಆಗ್ತಾರೆ ಎಂದು ಸೂಚನೆ ನೀಡಿದೆ. ಹಾಗಾದರೆ ಯಾರು ಔಟ್‌ ಆದರು?

 

Read Full Story

03:47 PM (IST) Jan 14

ಸಿದ್ದರಾಮಯ್ಯ ಮುಡಾ ಪ್ರಕರಣಕ್ಕೆ ಮಹತ್ವದ ತಿರುವು, ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್ ವಿರುದ್ಧ ತನಿಖೆಗೆ ಸರ್ಕಾರ ಅಸ್ತು!

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ, ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್ ವಿರುದ್ಧ ತನಿಖೆ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ‘ಬಿ’ ರಿಪೋರ್ಟ್‌ಗೆ  ತೀರ್ಪನ್ನು ಕಾಯ್ದಿರಿಸಿದೆ.

Read Full Story

02:40 PM (IST) Jan 14

ಕಬ್ಬು ಕಟಾವು ಕಾರ್ಮಿಕರ ಟ್ರ್ಯಾಕ್ಟರ್ ಅಪಘಾತ; ಇಂದು ಅಕ್ಕ-ತಮ್ಮ ಸಾವು, ಮೃತರ ಸಂಖ್ಯೆ 5ಕ್ಕೆ ಏರಿಕೆ!

ಬಾಗಲಕೋಟೆ ಜಿಲ್ಲೆಯ ಕಮತಗಿ ಬಳಿ ನಡೆದ ಟ್ರ್ಯಾಕ್ಟರ್ ಅಪಘಾತದಲ್ಲಿ ಗಾಯಗೊಂಡಿದ್ದ ಅಕ್ಕ-ತಮ್ಮ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇದರೊಂದಿಗೆ, ವಿಜಯನಗರ ಜಿಲ್ಲೆಯ ತಾಂಡಾಗಳಿಗೆ ಮರಳುತ್ತಿದ್ದ ಕಬ್ಬು ಕಟಾವು ಕಾರ್ಮಿಕರ ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

Read Full Story

01:08 PM (IST) Jan 14

ವೈಯಕ್ತಿಕ ನಿಂದನೆ‌ ಮಾಡಿದ್ರೂ ಗಿಲ್ಲಿ ನಟ ಯಾಕೆ Bigg Boss ಗೆಲ್ಲಬೇಕು? ಗಟ್ಟಿ ಕಾರಣ ಕೊಟ್ಟ ಸಂಭಾಷಣೆಕಾರ ನಂದೀಶ್

BBK 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ ಸೇರಿದಂತೆ ಏಳು ಸ್ಪರ್ಧಿಗಳಿದ್ದಾರೆ. ಇವರಲ್ಲಿ ಯಾರು ಫಿನಾಲೆಗೆ ಹೋಗಲಿದ್ದಾರೆ ಎಂದು ಕಾದು ನೋಡಬೇಕಿದೆ. ಗಿಲ್ಲಿ ನಟ ಯಾಕೆ ಗೆಲ್ಲಬೇಕು ಎಂದು‌ ಸಂಭಾಷಣೆಕಾರ ನಂದೀಶ್‌ ತೀರ್ಥಹಳ್ಳಿ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

 

Read Full Story

12:51 PM (IST) Jan 14

ತೀರ್ಥಹಳ್ಳಿ ಬಳಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು ನಡುವೆ ಭೀಕರ ಡಿಕ್ಕಿ; ಶೃಂಗೇರಿಯ ಒಂದೇ ಕುಟುಂಬದ ನಾಲ್ವರ ಸಾವು!

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಳಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಸ್ವಿಫ್ಟ್ ಕಾರಿನ ನಡುವೆ ನಡೆದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಶೃಂಗೇರಿ ಮೂಲದ ಕುಟುಂಬವು ಪ್ರಯಾಣಿಸುತ್ತಿದ್ದ ಕಾರು ಸಂಪೂರ್ಣ ಜಖಂಗೊಂಡಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Read Full Story

12:49 PM (IST) Jan 14

BBK 12 - ಫಿನಾಲೆ ಹೊತ್ತಲ್ಲೇ ಸುದೀಪ್ ಮನೆಗೆ ನಾರಾಯಣ ಗೌಡ ಹೋಗಿದ್ಯಾಕೆ? ಬಿಸಿ ಬಿಸಿ ಚರ್ಚೆ

ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಸಮೀಪಿಸುತ್ತಿದ್ದಂತೆ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣ ಗೌಡರು ನಟ ಸುದೀಪ್ ಅವರನ್ನು ಭೇಟಿಯಾಗಿದ್ದಾರೆ. ಬಿಗ್‌ಬಾಸ್ ಸ್ಪರ್ಧಿ ಅಶ್ವಿನಿ ಗೌಡರ ಆಸೆಯಂತೆ ನಾರಾಯಣ ಗೌಡರು ಮನೆಗೆ ಪ್ರವೇಶಿಸುತ್ತಾರೆಯೇ ಎಂಬ ಕುತೂಹಲ ಸೃಷ್ಟಿಯಾಗಿದೆ.

Read Full Story

12:45 PM (IST) Jan 14

ಶೋ ಆಗಿ ಉಳಿದುಕೊಳ್ಳದ Bigg Boss Kannada 12; ನೀವು ಮಾಡುವ ಹಾನಿ ಜೀವನಪೂರ್ತಿ ಉಳಿಯಬಹುದು - ಕಂಪೆನಿ HR

BBK 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಈಗ ರಿಯಾಲಿಟಿ ಶೋ ಆಗಿ ಉಳಿದುಕೊಂಡಿಲ್ಲ. ಸ್ಪರ್ಧಿಗಳ ಜೊತೆಯಲ್ಲಿ ಮನೆಯವರು, ಸ್ನೇಹಿತರು, ಕುಟುಂಬಸ್ಥರು, PR ಟೀಂ ಎಲ್ಲರೂ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ.

 

Read Full Story

12:44 PM (IST) Jan 14

ವಿನ್ನರ್ ಪಟ್ಟ ಜಸ್ಟ್ ಮಿಸ್, ರನ್ನರ್-ಅಪ್ ಗಿಲ್ಲಿ? ಕೊನೆ ಹಂತದಲ್ಲಿ ಡಲ್ ಆಗಿದ್ಯಾಕೆ ಗಿಲ್ಲಿ ನಟ?

ಬಿಗ್ ಬಾಸ್ ಕನ್ನಡ ಸೀಸನ್-12 ಅಂತಿಮ ಹಂತ ತಲುಪಿದ್ದು, ಗೆಲ್ಲುವ ಸ್ಪರ್ಧಿ ಎಂದು ಬಿಂಬಿತವಾಗಿದ್ದ ಗಿಲ್ಲಿಗೆ ವಿನ್ನರ್ ಪಟ್ಟ ಕೈತಪ್ಪುವ ಸಾಧ್ಯತೆ ಇದೆ. ಕೊನೆಯ ವಾರಗಳಲ್ಲಿ ಗಿಲ್ಲಿಯ ಆಟ ಡಲ್ ಆಗಿದ್ದು, ಹಿಂದಿನ ಸೀಸನ್‌ಗಳಂತೆ ಈ ಬಾರಿಯೂ ಅನಿರೀಕ್ಷಿತ ಫಲಿತಾಂಶ ಬಂದು ಗಿಲ್ಲಿ ರನ್ನರ್ ಅಪ್ ಆಗಬಹುದು.

Read Full Story

12:43 PM (IST) Jan 14

Bigg Bossನಲ್ಲಿ ಕಳಚಿ ಬಿತ್ತು ಪ್ರೇಮದ ಕೊಂಡಿ - ಗಿಲ್ಲಿಗೆ ಗಂಡನಾಗೋ ಕ್ವಾಲಿಟಿನೇ ಇಲ್ಲ- ಕೆಂಡಾಮಂಡಲ

ಬಿಗ್​ಬಾಸ್ ಮನೆಯಲ್ಲಿ ಗಿಲ್ಲಿ ನಟ, ಕಾವ್ಯಾ ಶೈವ ಮತ್ತು ರಕ್ಷಿತಾ ಶೆಟ್ಟಿ ನಡುವೆ ತ್ರಿಕೋನ ಪ್ರೇಮಕಥೆ ನಡೆಯುತ್ತಿದೆ ಎಂದು ಭಾವಿಸಲಾಗಿತ್ತು. ಆದರೆ, ಗಿಲ್ಲಿ ನಟನ ಕುರಿತು  ಅನಿರೀಕ್ಷಿತ ಹೇಳಿಕೆ ಎಲ್ಲವನ್ನೂ ಬದಲಿಸಿದೆ. ಅಷ್ಟಕ್ಕೂ ಆಗಿದ್ದೇನು? 

Read Full Story

12:29 PM (IST) Jan 14

ಶಾಲೆಯಲ್ಲೇ ಅತಿಥಿ ಶಿಕ್ಷಕ-SDMC ಅಧ್ಯಕ್ಷರ ಬಡಿದಾಟ; ಮಾದರಿ ಶಾಲೆಯಲ್ಲಿ 'ಪುಂಡರ' ವರ್ತನೆ, ವಿಡಿಯೋ ವೈರಲ್!

ಹಾನಗಲ್‌ನ ಶಾಸಕರ ಸರ್ಕಾರಿ ಮಾದರಿ ಶಾಲೆಯಲ್ಲಿ, ಅತಿಥಿ ಶಿಕ್ಷಕ ಮತ್ತು ಎಸ್‌ಡಿಎಂಸಿ ಅಧ್ಯಕ್ಷರು ಮಕ್ಕಳ ಮುಂದೆಯೇ ಹೊಡೆದಾಡಿಕೊಂಡಿದ್ದಾರೆ. ವೈಯಕ್ತಿಕ ಭಿನ್ನಾಭಿಪ್ರಾಯದಿಂದ ಆರಂಭವಾದ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.

Read Full Story

12:21 PM (IST) Jan 14

ಕೆಎಸ್‌ಸಿಸಿಎಫ್ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ, 34 ಸಹಾಯಕ ಹುದ್ದೆಗಳಿಗೆ ನೇಮಕಾತಿ!

ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ನಿಯಮಿತ (KSCCF) 2026ನೇ ಸಾಲಿನ 34 ಪ್ರಥಮ ದರ್ಜೆ ಸಹಾಯಕ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. 12ನೇ ತರಗತಿ, ಡಿಪ್ಲೊಮಾ, ಅಥವಾ ಪದವಿ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Read Full Story

12:15 PM (IST) Jan 14

Bigg Boss ಮನೆಯಿಂದ ಹೊರಬಂದ ಗಿಲ್ಲಿನಟ - ಫ್ಯಾನ್ಸ್​ ಭರ್ಜರಿ ಸ್ವಾಗತ- ಆಟದ ದಿಕ್ಕು ಬದಲಾಯ್ತು ಎಂದದ್ಯಾಕೆ ಬಿಗ್​ಬಾಸ್​​?

ಬಿಗ್​ಬಾಸ್​ ಫಿನಾಲೆ ಹತ್ತಿರವಾಗುತ್ತಿದ್ದಂತೆ, ಸ್ಪರ್ಧಿ ಗಿಲ್ಲಿ ನಟ ತಮ್ಮ ಅಭಿಮಾನಿಗಳನ್ನು ಭೇಟಿಯಾಗಿ ಭಾವುಕರಾದರು. ಆದರೆ, "ಆಟದ ದಿಕ್ಕನ್ನು ಜೋಕರ್ ಬದಲಾಯಿಸಬಹುದು" ಎಂಬ ಬಿಗ್​ಬಾಸ್​ ಅವರ ಅನಿರೀಕ್ಷಿತ ಹೇಳಿಕೆಯು, ಗಿಲ್ಲಿ ನಟನ ಗೆಲುವಿನ ಬಗ್ಗೆಯೇ ಹೊಸ ಅನುಮಾನಗಳನ್ನು ಹುಟ್ಟುಹಾಕಿದೆ.
Read Full Story

12:09 PM (IST) Jan 14

2 ವರ್ಷಕ್ಕೂ ಮೊದಲೇ ರಂಗೇರಿದ ಅರಸೀಕೆರೆ ಅಖಾಡ; ಶಿವಲಿಂಗೇಗೌಡರನ್ನ ಸೋಲಿಸಲು ಸಿದ್ಧವಾದ ಜೆಡಿಎಸ್?

ಅರಸೀಕೆರೆ ಶಾಸಕ ಶಿವಲಿಂಗೇಗೌಡರು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ನೀಡಿದ ಸವಾಲನ್ನು ಜೆಡಿಎಸ್ ಮುಖಂಡರು ಸ್ವೀಕರಿಸಿದ್ದಾರೆ. 2028ರ ಚುನಾವಣೆಯಲ್ಲಿ ಅವರಿಗೆ ಸೋಲು ಖಚಿತ ಎಂದು ವಾಗ್ದಾಳಿ ನಡೆಸಿದ್ದು, ಕಳೆದ 15 ವರ್ಷಗಳ ಅಭಿವೃದ್ಧಿ ಕುರಿತು ಶ್ವೇತಪತ್ರ ಬಿಡುಗಡೆ ಮಾಡುವಂತೆ ಸವಾಲು ಹಾಕಿದ್ದಾರೆ.
Read Full Story

12:01 PM (IST) Jan 14

ದೇಶದ ನಂಬರ್ 1 ಶಿಕ್ಷಣ ಸಂಸ್ಥೆ IISc ನಲ್ಲಿ ಭದ್ರತಾ ಹುದ್ದೆ, SSLC ಪಾಸಾದವರಿಗೆ ಸುವರ್ಣಾವಕಾಶ!

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) 5 ಭದ್ರತಾ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. SSLC ಪಾಸಾದ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆಯಾದವರಿಗೆ ಮಾಸಿಕ 35,000 ರೂ. ವೇತನ ನೀಡಲಾಗುತ್ತದೆ.
Read Full Story

11:55 AM (IST) Jan 14

ಬೆಂಗಳೂರಿನಲ್ಲಿದ್ದಾರೆ 2 ಲಕ್ಷಕ್ಕೂ ಅಧಿಕ ಅಕ್ರಮ ಬಾಂಗ್ಲಾ ವಲಸಿಗರು; ಟಾಸ್ಕ್‌ ಫೋರ್ಸ್ ರಚನೆಗೆ ಆರ್.ಅಶೋಕ್ ಆಗ್ರಹ!

ಬೆಂಗಳೂರಿನಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ ಎಂದು ಶಂಕಿಸಲಾಗಿದೆ. ನಕಲಿ ದಾಖಲೆಗಳನ್ನು ಪಡೆದು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಇವರನ್ನು ಪತ್ತೆ ಹಚ್ಚಿ ಗಡೀಪಾರು ಮಾಡಲು ವಿಶೇಷ ಟಾಸ್ಕ್ ಫೋರ್ಸ್ ರಚಿಸಬೇಕೆಂದು ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ

Read Full Story

11:47 AM (IST) Jan 14

Hassan - ಎರಡನೇ ಮದುವೆ ಪ್ರಶ್ನಿಸಿದ್ದ ಪತ್ನಿಯನ್ನು ಕೊಂದು ನದಿಗೆ ಎಸೆದ ಗಂಡ

ಹಾಸನದಲ್ಲಿ ಎರಡನೇ ಮದುವೆ ವಿಚಾರವಾಗಿ ಪ್ರಶ್ನಿಸಿದ್ದಕ್ಕೆ ಪತಿಯೇ ಪತ್ನಿಯನ್ನು ಕೊಂದು ನದಿಗೆ ಎಸೆದರೆ, ಮತ್ತೊಂದು ಪ್ರಕರಣದಲ್ಲಿ ಮರುಮದುವೆಗೆ ಒಪ್ಪದ ಪತ್ನಿಯನ್ನು ಪತಿ ಕತ್ತು ಹಿಸುಕಿ ಕೊಂದಿದ್ದಾನೆ. 

Read Full Story

11:14 AM (IST) Jan 14

ಚಿನ್ನದ ಅಂಗಡಿಗಳಲ್ಲಿ ಬುರ್ಖಾ ನಿಷೇಧ; ಫೇಸ್ ಮಾಸ್ಕ್, ಹೆಲ್ಮೆಟ್ ಹಾಕಿದ್ದರೂ ಪ್ರವೇಶವಿಲ್ಲ!

ರಾಜ್ಯದಲ್ಲಿ ಹೆಚ್ಚುತ್ತಿರುವ ಚಿನ್ನಾಭರಣ ದರೋಡೆ ಪ್ರಕರಣ ತಡೆಯಲು, ಕರ್ನಾಟಕದ ಚಿನ್ನದ ವ್ಯಾಪಾರಿಗಳ ಒಕ್ಕೂಟವು ಮಳಿಗೆಗಳಿಗೆ ಪ್ರವೇಶಿಸುವ ಗ್ರಾಹಕರಿಗೆ ಬುರ್ಖಾ, ಹೆಲ್ಮೆಟ್ ಮತ್ತು ಮಾಸ್ಕ್ ನಿಷೇಧಿಸಲು ಚಿಂತನೆ ನಡೆಸಿದೆ. ಭದ್ರತಾ ದೃಷ್ಟಿಯಿಂದ ಈ 'ನೋ ಫೇಸ್ ಮಾಸ್ಕ್, ನೋ ಎಂಟ್ರಿ' ನಿಯಮ ಜಾರಿಯಾಗಲಿದೆ.

Read Full Story

11:07 AM (IST) Jan 14

ಸುಹಾನ ಸೈಯದ್‌ ಬರ್ತ್‌ ಡೇಗೆ ಕವಿಯಾದ ಗಂಡ ನಿತಿನ್; ಕವನದಲ್ಲಿ ರಿವೀಲ್ ಆಯ್ತು ವಿಶೇಷ ಸಂಗತಿ!

ಸರಿಗಮಪ ಖ್ಯಾತಿಯ ಗಾಯಕಿ ಸುಹಾನಾ ಸೈಯದ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನದಂದು, ಅವರ ಪತಿ ನಿತಿನ್ ಶಿವಾಂಶ್ ಸುಂದರವಾದ ಕವನವನ್ನು ಬರೆದು ಶುಭ ಕೋರಿದ್ದಾರೆ.

Read Full Story

10:40 AM (IST) Jan 14

ವಿದೇಶಗಳಿಗೆ ಬಾಳೆ ಎಲೆ ರಪ್ತು ಮಾಡಿ ಗಳಿಸಿ ಲಕ್ಷ ಲಕ್ಷ ಆದಾಯ - ಉದ್ಯಮ ಆರಂಭಿಸುವವರಿಗಾಗಿ ಇಲ್ಲಿದೆ ಹಂತ ಹಂತದ ಮಾರ್ಗದರ್ಶನ

ಬಾಳೆ ಎಲೆಗಳಿಗೆ ಜಾಗತಿಕವಾಗಿ ಬೇಡಿಕೆ ಹೆಚ್ಚಾಗಿದ್ದು, ಇದು ಕೋಟಿ ಗಳಿಸುವ ಉದ್ಯಮವಾಗಿ ಬೆಳೆಯುತ್ತಿದೆ. ಕಡಿಮೆ ಹೂಡಿಕೆಯಲ್ಲಿ ಆರಂಭಿಸಬಹುದಾದ ಈ ವ್ಯವಹಾರವು, ರಫ್ತುದಾರರಿಗೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ತಂದುಕೊಡಬಲ್ಲದು. ಈ ಉದ್ಯಮವನ್ನು ಹೇಗೆ ಪ್ರಾರಂಭಿಸಬೇಕು ಎಂಬ ಡಿಟೇಲ್ ಇಲ್ಲಿದೆ.

Read Full Story

10:30 AM (IST) Jan 14

ಶ್ರೀನಿವಾಸ್-ಲಕ್ಷ್ಮೀಗೆ ಯಾಕಿಷ್ಟು ಅವಸರ? ಇದು ಸಿನಿಮಾ ಅಲ್ಲ, ಸೀರಿಯಲ್ ಅಂದ್ರು ವೀಕ್ಷಕರು!

ಜೀ ಕನ್ನಡದ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಲಲಿತಾ ಪಾತ್ರದ ಅಂತ್ಯವಾಗಿದ್ದು, ವೀಕ್ಷಕರು ಬೇಸರಗೊಂಡಿದ್ದಾರೆ. ಅತ್ತಿಗೆಯ ಅಂತಿಮ ಸಂಸ್ಕಾರಕ್ಕೂ ನಿಲ್ಲದೆ ಲಕ್ಷ್ಮೀ ಹೊರಟುಹೋಗಿದ್ದು, ಕಥೆಯನ್ನು ಅವಸರವಾಗಿ ಮುಗಿಸಲಾಗುತ್ತಿದೆ ಎಂದು ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Read Full Story

10:10 AM (IST) Jan 14

ಇರಾನ್ ಹೊತ್ತಿ ಉರಿದರೆ ಭಾರತಕ್ಕೆ ಬಿಸಿ!?

ಇರಾನ್ ನಲ್ಲಿ ಸರ್ವಾಧಿಕಾರಿ ಆಯತೊಲ್ಲಾ ಖಮೇನಿ ವಿರೋಧಿ ಪ್ರತಿಭಟನೆಯ ಕಿಚ್ಚು ದೇಶಾದ್ಯಂತ ಆವರಿಸಿದ್ದು, ಇಡೀ ದೇಶ ಹೊತ್ತಿ ಉರಿಯುವಂತೆ ಮಾಡಿದೆ. ಖಮೇನಿಯ ಕಟ್ಟರ್ ಇಸ್ಲಾಮಿಕ್ ಆಡಳಿತದ ವಿರುದ್ಧ ತಿರುಗಿ ಬಿದ್ದಿರುವ ಜನ ಅವರ ಪದತ್ಯಾಗಕ್ಕೆ ಪಟ್ಟು ಹಿಡಿದು ಲಕ್ಷಾಂತರ ಸಂಖ್ಯೆಯಲ್ಲಿ ಬೀದಿಗಿಳಿದಿದ್ದಾರೆ.

Read Full Story

09:52 AM (IST) Jan 14

ಈಗ ಮೆಟ್ರೋ ಪಾಸ್‌ ₹ 50 ಅಗ್ಗದ ದರದಲ್ಲಿ ಲಭ್ಯ

ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರಿಗೆ 1, 3, 5 ದಿನಗಳ ಅನಿಯಮಿತ ಸಂಚಾರದ ಪಾಸ್‌ ಜ.15ರಿಂದ ಕ್ಯುಆರ್‌ (QR) ಕೋಡ್‌ ಸ್ವರೂಪದಲ್ಲೂ ಸಿಗಲಿದೆ. ಸ್ಮಾರ್ಟ್‌ ಕಾರ್ಡ್‌ನಂತೆ ₹50 ಠೇವಣಿ ಇಡದೆ ಕೇವಲ ಪಾಸ್‌ ಮೊತ್ತವನ್ನು ಮಾತ್ರ ಪಾವತಿಸಿ ಇದನ್ನು ಪಡೆಯುವ ಅವಕಾಶವನ್ನು ಬಿಎಂಆರ್‌ಸಿಎಲ್‌ ನೀಡಿರುವುದು ವಿಶೇಷ.

Read Full Story

09:26 AM (IST) Jan 14

ತಾಳಿ ಕಟ್ಟಲು ಒಪ್ಪದ ತೇಜಸ್; ಇತ್ತ ನಿತ್ಯಾ ಮಾತುಗಳನ್ನು ದಿಗಿಲುಬಿದ್ದ ಕೇಳಿ ಕರ್ಣ-ನಿಧಿ

ಕರ್ಣ ಸೀರಿಯಲ್‌ನಲ್ಲಿ ನಿತ್ಯಾ-ತೇಜಸ್ ಮದುವೆ ನಿಂತುಹೋಗಿದೆ. ನಿತ್ಯಾಳ ಗರ್ಭದ ಬಗ್ಗೆ ಅನುಮಾನಗೊಂಡ ತೇಜಸ್ ಸತ್ಯ ತಿಳಿಯಲು ಮುಂದಾಗಿದ್ದಾನೆ. ಇದರಿಂದಾಗಿ, ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಕಾದಿದ್ದ ಕರ್ಣ ಮತ್ತು ನಿಧಿ ಪ್ಲಾನ್ ವಿಫಲವಾಗಿದ್ದು, ಕಥೆ ರೋಚಕ ತಿರುವು ಪಡೆದಿದೆ.

Read Full Story

More Trending News