Published : May 10, 2026, 07:06 AM ISTUpdated : May 10, 2026, 10:48 PM IST

Karnataka News Live: ಕಣ್ಣ ಮುಂದೆ ಮಗುವನ್ನು ಚಿರತೆ ಕೊಂದಿತು, ಮಲೆ ಮಹದೇಶ್ವರದಲ್ಲಿ ಮಗನ ಕಳ್ಕೊಂಡ ತಾಯಿ ಆಕ್ರಂದನ

ಸಾರಾಂಶ

ಬೆಂಗಳೂರು: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಸಚಿವ ಡಿ.ಸುಧಾಕರ್ ಇಂದು ಬೆಳಗಿನ ಜಾವ 3.15ರ ವೇಳೆಗೆ ನಿಧನರಾಗಿದ್ದಾರೆ. ಡಿ.ಸುಧಾಕರ್ ಅವರು ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ಮಂಡಿ ಚಿಪ್ಪಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆಪರೇಷನ್ ಬಳಿಕ ಇನ್ನೇನು ಡಿಸ್ಚಾರ್ಜ್ ಆಗಬೇಕು ಎನ್ನುವಷ್ಟರಲ್ಲಿ ಶ್ವಾಸಕೋಶಕ್ಕೆ ಸೋಂಕು ತಗುಲಿತ್ತು ಹೆಚ್ಚು ಧೂಮಪಾನ ಮಾಡ್ತಿದ್ದ ಕಾರಣಕ್ಕೆ ಶ್ವಾಸಕೋಶದ ಸೋಂಕು ತೀವ್ರವಾಗಿತ್ತು. ಕೊನೆಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೂ ಯಾವುದೇ ಚೇತರಿಕೆ ಕಾಣಲಿಲ್ಲ

ಕೊನೆಗೆ ವೈದ್ಯರು ECMO ಅಳವಡಿಕೆ ಮಾಡಿದ್ದರು. ಶ್ವಾಸಕೋಶ ಹಾಗೂ ಹೃದಯ ಸರಿಯಾಗಿ ಕೆಲಸ ಮಾಡದ ಕಾರಣ, ECMO ಮಷಿನ್ ಈ ಕಾರ್ಯ ನಿರ್ವಹಿಸುತ್ತದೆ ನಾಲ್ಕು ವಾರಗಳ ನಿಗಾದಲ್ಲಿ ಇರಿಸಲಾಗಿತ್ತು. ಚೇತರಿಕೆ ಕಂಡುಬಂದರೆ ಶ್ವಾಸಕೋಶದ ಟ್ರಾನ್ಸ್‌ಪ್ಲಾಂಟ್ ಮಾಡುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಯಾವುದೇ ಚೇತರಿಕೆ ಕಾಣದೆ ಬೆಳಗಿನ ಜಾವ ಸುಧಾಕರ್ ಕೊನೆಯುಸಿರೆಳಿದಿದ್ದಾರೆ

10:48 PM (IST) May 10

ಕಣ್ಣ ಮುಂದೆ ಮಗುವನ್ನು ಚಿರತೆ ಕೊಂದಿತು, ಮಲೆ ಮಹದೇಶ್ವರದಲ್ಲಿ ಮಗನ ಕಳ್ಕೊಂಡ ತಾಯಿ ಆಕ್ರಂದನ

ತಾಯಿ ಜೊತೆ ಮಲೆ ಮಹದೇಶ್ವರನ ಬೆಟ್ಟಕ್ಕೆ ಹೋಗಿದ್ದ ಬಾಲಕ ಹರ್ಷಿತ್ ಚಿರತೆ ದಾಳಿಗೆ ಬಲಿಯಾದ ಘಟನೆ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ನನ್ನ ಮಗುವನ್ನು ಕಣ್ಣ ಮುಂದೆ ಚಿರತೆ ಎತ್ತಿಕೊಂಡು ಹೋಗಿ ಕೊಂದಿತು ಎಂದು ಕಣ್ಣೀರಿಟ್ಟಿದ್ದಾರೆ.

Read Full Story

09:41 PM (IST) May 10

ಈಜಲು ಹೋದ ಕೊಪ್ಪಳದ ಯುವಕ ನೀರಿನಲ್ಲಿ ಮುಳುಗಿ ಸಾವು, ಮತೃದೇಹಕ್ಕಾಗಿ ಹುಡುಕಾಟ

17ರ ಹರೆಯದ ಯುವಕ ಬೋದೂರು ಗ್ರಾಮದಲ್ಲಿ ಈಜಾಡಲು ತೆರಳಿದ್ದಾನೆ. 6 ಮಂದಿ ಯುವಕರ ಗುಂಪು ಈಜಾಡುತ್ತಿದ್ದ ವೇಳೆ ಅಪ್ಪಾಜಿಗೌಡ ನೀರಿನಲ್ಲಿ ಮುಳುಗಿ ಮೃತಪಟ್ಟ ದುರಂತ ಘಟನೆ ನಡೆದಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದೆ.

Read Full Story

09:23 PM (IST) May 10

ಅಂಜನಾದ್ರಿ ದೇವಾಲಯಕ್ಕೆ ದಾನವಾದ ಆಭರಣಗಳು ಸಂಪೂರ್ಣ ಚಿನ್ನವಲ್ಲ - ಎಸಿ ಮಾಲಗಿತ್ತಿ ಹೇಳೋದೇನು?

ಅಂಜನಾದ್ರಿಯ ಶ್ರೀ ಆಂಜನೇಯಸ್ವಾಮಿಗೆ ಹೈದ್ರಾಬಾದ್ ಮೂಲಕ ಉದ್ಯಮಿ ಮಹೇಶರೆಡ್ಡಿ ಕುಟುಂಬದವರು ಸಮರ್ಪಣೆ ಮಾಡಿರುವ ಪ್ರಭಾವಳಿ,ಕಿರೀಟ, ಗಧೆ ಸೇರಿದಂತೆ 12 ಸಾಮಾನುಗಳು ಚಿನ್ನ ಲೇಪಿತ ತಾಮ್ರದಿಂದ ಕೂಡಿದೆ.

Read Full Story

08:32 PM (IST) May 10

25 ವರ್ಷಗಳಲ್ಲಾಗದ ಅಭಿವೃದ್ಧಿ 3 ವರ್ಷದಲ್ಲಿ ಮಾಡಿರುವೆ - ಎಚ್‌ಡಿಕೆ ವಿರುದ್ಧ ಇಕ್ಬಾಲ್ ಹುಸೇನ್ ವಾಗ್ದಾಳಿ

ರಾಮನಗರ ಕ್ಷೇತ್ರದಲ್ಲಿ 25 ವರ್ಷಗಳಿಂದ ಅಧಿಕಾರದಲ್ಲಿದ್ದವರು ಮಾಡಲಾಗದ ಅಭಿವೃದ್ಧಿ ಕಾರ್ಯಗಳನ್ನು ಕೇವಲ 3 ವರ್ಷಗಳಲ್ಲಿ ಮಾಡಿ ತೋರಿಸಿದ್ದೇನೆ ಎಂದು ಎಚ್‌ಡಿಕೆ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

Read Full Story

07:53 PM (IST) May 10

ಭ್ರಷ್ಟಾಚಾರದ ವಿರುದ್ಧ ವಾಟಾಳ್ ಪಕ್ಷದಿಂದ ರಾಜ್ಯಾದ್ಯಂತ ಹೋರಾಟ - ವಾಟಾಳ್ ನಾಗರಾಜ್

ಭ್ರಷ್ಟಾಚಾರ, ಲಂಚಾವತಾರ ವಿರೋಧಿಸಿ ವಾಟಾಳ್ ಕನ್ನಡ ಪಕ್ಷದ ವತಿಯಿಂದ ಯುವಜನರು, ರೈತರು, ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಹೋರಾಟ ಆರಂಭಿಸಿದ್ದೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.

Read Full Story

07:42 PM (IST) May 10

ಅವರಿಗೆ ಮಗಳಾಗಿ, ಇವರಿಗೆ ತಾಯಿಯಾಗಿರಲು ನಾನು ನಿಜಕ್ಕೂ ಅದೃಷ್ಟವಂತೆ; ರಾಧಿಕಾ ಪಂಡಿತ್ ಪೋಸ್ಟ್ ವೈರಲ್!

ರಾಧಿಕಾ ಪಂಡಿತ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಡಲ ತೀರದ ಅದ್ಭುತ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ರಾಧಿಕಾ ತಮ್ಮ ತಾಯಿ ಮತ್ತು ಮುದ್ದಾದ ಮಕ್ಕಳ ಜೊತೆ ಕಾಲ ಕಳೆಯುತ್ತಿರುವುದು ಕಂಡುಬಂದಿದೆ. ಆದರೆ ಈ ಪೋಸ್ಟ್ ಯಾಕೆ ಅಷ್ಟೊಂದು ವೈರಲ್ ಆಗಿದೆ ಗೊತ್ತಾ? ಈ ಸ್ಟೋರಿ ನೋಡಿ..

Read Full Story

07:16 PM (IST) May 10

ಒಳ ಮೀಸಲಾತಿಯಿಂದ ಯಾರಿಗೂ ಅನ್ಯಾಯ ಆಗಲ್ಲ - ಸಚಿವ ಕೆ.ಎಚ್‌.ಮುನಿಯಪ್ಪ

ಒಳ ಮೀಸಲಾತಿಗೆ ಸಂಬಂಧಿಸಿ ವಿಶ್ರಾಂತ ನ್ಯಾ.ನಾಗಮೋಹನ್‌ ದಾಸ್‌ ವರದಿಯನ್ನು ಕಾಂಗ್ರೆಸ್‌ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟ ಸಭೆ ಅವಿರೋಧವಾಗಿ ಒಪ್ಪಿಕೊಂಡಿದೆ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದ್ದಾರೆ.

Read Full Story

06:06 PM (IST) May 10

ಮಣಿಪಾಲದ ಎಂಐಟಿಗೆ ವಿಶ್ವ ಗರಿ, CFA ಮಾನ್ಯತೆ ಪಡೆದ ದೇಶದ ಮೊದಲ ಎಂಜಿನಿಯರಿಂಗ್ ಸಂಸ್ಥೆ! ಇನ್ಮುಂದೆ ಜಾಗತಿಕ ಶಿಕ್ಷಣ

ಮಣಿಪಾಲದ ಎಂಐಟಿಯು ಪ್ರತಿಷ್ಠಿತ ಸಿಎಫ್‌ಎ ಇನ್‌ಸ್ಟಿಟ್ಯೂಟ್‌ನಿಂದ ಮಾನ್ಯತೆ ಪಡೆದ ಭಾರತದ ಮೊದಲ ಮತ್ತು ಏಕೈಕ ಎಂಜಿನಿಯರಿಂಗ್ ಸಂಸ್ಥೆಯಾಗಿದೆ. ಈ ಮಾನ್ಯತೆಯು ವಿದ್ಯಾರ್ಥಿಗಳಿಗೆ ಹಣಕಾಸು ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದ ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸಲಿದೆ. ಸಂಸ್ಥೆಯು 2023ರಿಂದ ಕಂಪ್ಯೂಟರ್ ಸೈನ್ಸ್ ಮತ್ತು ಫೈನಾನ್ಶಿಯಲ್ ಟೆಕ್ನಾಲಜಿಯಲ್ಲಿ ಬಿಟೆಕ್ ಕೋರ್ಸ್ ಅನ್ನು ಸಹ ಆರಂಭಿಸಿದೆ.
Read Full Story

05:38 PM (IST) May 10

ಮಂಗಳೂರು ಕದ್ರಿಯಲ್ಲಿ ಮತ್ತೊಂದು ಉದ್ಯಾನವನಕ್ಕೆ ಸಿದ್ಧತೆ! 3.50ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ, ಇಲ್ಲಿ ಏನೇನಿರಲಿದೆ?

ಮಂಗಳೂರಿನ ಕದ್ರಿಯಲ್ಲಿ ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ 3.50 ಕೋಟಿ ರೂ. ವೆಚ್ಚದಲ್ಲಿ ಹೊಸ ಉದ್ಯಾನವನ ನಿರ್ಮಾಣವಾಗಲಿದೆ. ಹಾಲಿ ಉದ್ಯಾನವನದ ಎದುರು ನಿರ್ಮಾಣವಾಗಲಿರುವ ಈ ಪಾರ್ಕ್‌ನಲ್ಲಿ ವಾಕಿಂಗ್ ಪಥ, ಸಣ್ಣ ವೇದಿಕೆ ಹಾಗೂ ಪಾರ್ಕಿಂಗ್ ಸೌಲಭ್ಯಗಳಿರಲಿವೆ. ಅಲ್ಲದೆ, ಹಳೆಯ ಪಾರ್ಕ್‌ನ ನೀರಿನ ಕೊರತೆ ನೀಗಿಸಲು ಎಸ್‌ಟಿಪಿ ನೀರು ಮರುಬಳಕೆ ಯೋಜನೆ ರೂಪಿಸಲಾಗಿದೆ.
Read Full Story

04:36 PM (IST) May 10

ಮಂಗಳೂರು ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಯುವಕನನ್ನು ಹಿಡಿದ ರೈಲ್ವೆ ಪೊಲೀಸರೇ ಶಾಕ್ ಆದ್ರು!

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಯುವಕನನ್ನು ರೈಲ್ವೆ ಪೊಲೀಸರು ವಿಚಾರಿಸಿದಾಗ, ಆತ ಕೇರಳದ ಕುಖ್ಯಾತ ದರೋಡೆಕೋರ ಎಂದು ತಿಳಿದುಬಂದಿದೆ. ಬಂಧಿತ ಕಾಸರಗೋಡು ಮೂಲದ ಆಶಿಫ್‌ನಿಂದ ಸುಮಾರು ₹13.06 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಕೇರಳದ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದನು.
Read Full Story

03:55 PM (IST) May 10

ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿಗೆ ಬೆಂಗಳೂರು ಬಾಲಕ ಬಲಿಯಾಗಲು ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ!

ಮಲೆ ಮಹದೇಶ್ವರ ಬೆಟ್ಟದಲ್ಲಿ ಪಾದಯಾತ್ರೆ ವೇಳೆ ಚಿರತೆ ದಾಳಿಗೆ ಬಾಲಕನೊಬ್ಬ ಬಲಿಯಾಗಿದ್ದಾನೆ. ಈ ದುರ್ಘಟನೆಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಭಕ್ತರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.
Read Full Story

03:43 PM (IST) May 10

ಪ್ರತಿ ದಿನ 25 ಕಿ.ಮಿ ಇವಿ ಯೂನಿಸೈಕಲ್‌ನಲ್ಲಿ ಬೆಂಗಳೂರಿಗನ ಪ್ರಯಾಣ, ಪೊಲೀಸ್ ತಡೆದಿದ್ದೇಕೆ?

ಬೆಂಗಳೂರಿನ ಯವಕ ಪ್ರತಿ ದಿನ ಮನೆಯಿಂದ ಕಚೇರಿಗೆ ಎಲೆಕ್ಟ್ರಿಕ್ ಯೂನಿಸೈಕಲ್‌ನಲ್ಲಿ ಪ್ರಯಾಣ ಮಾಡುತ್ತಾನೆ. ಟ್ರಾಫಿಕ್ ನಡುವೆ ಸರಾಗವಾಗಿ ಸಾಗಬಹುದು, ಪಾರ್ಕಿಂಗ್ ಸಮಸ್ಯೆ ಇಲ್ಲ, ದಿಢೀರ್ ಟ್ರಾಫಿಕ್ ಪೊಲೀಸರು ತಡೆದು ಮಾಡಿದ್ದೇನು?

Read Full Story

02:22 PM (IST) May 10

ಬಿಟ್ ಕಾಯಿನ್ - ಇಷ್ಟೆಲ್ಲಾ ಆದ್ರೂ ಬುದ್ಧಿ ಕಲಿಯದ ಶ್ರೀಕಿ, ಇಡಿ ಬಂಧನದ ಹಿಂದಿನ ದಿನ ಅಮೆರಿಕ ಕಂಪನಿಯ ಸರ್ವರ್ ಹ್ಯಾಕ್

ಬಹುಕೋಟಿ ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ, ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ಕುಖ್ಯಾತ ಹ್ಯಾಕರ್ ಶ್ರೀಕಿ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಿದೆ. ಸರ್ಕಾರದ ವೆಬ್‌ಸೈಟ್‌ ಹ್ಯಾಕ್ ಮಾಡಿ, ಹಣವನ್ನು ಬಿಟ್‌ಕಾಯಿನ್ ಮೂಲಕ ವರ್ಗಾಯಿಸುತ್ತಿದ್ದ ಈ ಜಾಲವನ್ನು ಇಡಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
Read Full Story

01:59 PM (IST) May 10

ಅಪ್ಪು 'ಜೇಮ್ಸ್' ಪ್ರೊಡ್ಯೂಸರ್ ಭರ್ಜರಿ ಕಂಬ್ಯಾಕ್; ಭಾರೀ ಮೊತ್ತಕ್ಕೆ 'ಪೆದ್ದಿ' ಡಿಸ್ಟ್ರಿಬ್ಯೂಷನ್ ರೈಟ್ಸ್!

ನಗುಮುಖದ ಒಡೆಯ ಪುನೀತ್ ರಾಜ್‌ಕುಮಾರ್ ನಟಿಸಿದ ಕಟ್ಟ ಕಡೆಯ ಸಿನಿಮಾ ಜೇಮ್ಸ್. 50 ಕೋಟಿಯಲ್ಲಿ ತಯಾರಾದ ಈ ಸಿನಿಮಾ ಬರೋಬ್ಬರಿ 151 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ಎಲ್ಲರ ಕಣ್ಣು ಒದ್ದೆಯಾಗುವಂತೆ ಮಾಡಿತ್ತು. ಅಪ್ಪು ನಮ್ಮನ್ನ ಅಗಲಿದ ನಂತ್ರ ತೆರೆಕಂಡ ಸಿನಿಮಾ ಇದಾಗಿತ್ತು.

Read Full Story

12:48 PM (IST) May 10

ರಾಯಚೂರು - ಲಿಂಗಸುಗೂರು ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಗಳಿಂದಲೇ ತಡರಾತ್ರಿಯವರೆಗೆ ಗುಂಡು-ತುಂಡು ಪಾರ್ಟಿ, ಭಾರೀ ಆಕ್ರೋಶ

ರಾಯಚೂರು ಜಿಲ್ಲೆಯ ಲಿಂಗಸುಗೂರು ಪಿಡಬ್ಲ್ಯುಡಿ ಕಚೇರಿಯಲ್ಲಿ, ಎಇಇ ಹನುಮಪ್ಪ ಅದವಾನಿ ನೇತೃತ್ವದಲ್ಲಿ ತಡರಾತ್ರಿ ಪಾರ್ಟಿ ನಡೆಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಪಾರ್ಟಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
Read Full Story

12:40 PM (IST) May 10

'ಗೋಲ್ಡನ್ ಮೂವಿಸ್'ನಿಂದ ಸಿಹಿ ಸುದ್ದಿ; ಕೇವಲ ನಿರ್ಮಾಪಕಿಯಲ್ಲ, ಈಗ ಗಾಯಕಿಯೂ ಆದ ಶಿಲ್ಪಾ ಗಣೇಶ್!

ಗಣೇಶ್ ಅವರ ಸಿನಿಮಾಗಳಲ್ಲಿ ಸಂಗೀತಕ್ಕೆ ಯಾವಾಗಲೂ ಒಂದು ವಿಶೇಷ ತೂಕವಿರುತ್ತದೆ. ಈಗ ತಮ್ಮದೇ ಮನೆಯ ನಿರ್ಮಾಣದ ಚಿತ್ರಕ್ಕೆ ಪತ್ನಿಯೇ ಹಾಡಿರುವುದು ಈ ಸಿನಿಮಾದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. 'ಪಿಕ್ಚರ್' ಚಿತ್ರದ ಈ ಹಾಡು ಈಗ ವೈರಲ್ ಆಗಿದೆ.

Read Full Story

12:11 PM (IST) May 10

ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿ, ಕುಟುಂಬದೊಂದಿಗೆ ನಾಗಮಲೆಯತ್ತ ಹೋಗುತ್ತಿದ್ದಾಗ ಬೆಂಗಳೂರು ಮೂಲದ ಬಾಲಕ ಬಲಿ!

ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದ ಬಳಿ ಪಾದಯಾತ್ರೆಗೆ ತೆರಳಿದ್ದ ಬೆಂಗಳೂರಿನ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದೆ. ಕುಟುಂಬಸ್ಥರ ಕಣ್ಣೆದುರೇ ಬಾಲಕನನ್ನು ಎಳೆದೊಯ್ದಿದ್ದು, ಬಳಿಕ ಅರಣ್ಯ ಪ್ರದೇಶದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಈ ಘಟನೆಯು ಪಾದಯಾತ್ರಿಗಳ ಸುರಕ್ಷತೆಯ ಬಗ್ಗೆ ಆತಂಕವನ್ನು ಹೆಚ್ಚಿಸಿದೆ.
Read Full Story

11:55 AM (IST) May 10

JDS - ಮೈಚಳಿ ಬಿಟ್ಟು ಪಕ್ಷ ಸಂಘಟಿಸಿ, ಮುಂದಿನ ದಿನಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುತ್ತೆ - ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ

ದೊಡ್ಡಬಳ್ಳಾಪುರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಮುಖಂಡರು ವೈಮನಸ್ಸು ಬಿಟ್ಟು ಪಕ್ಷ ಸಂಘಟನೆಗೆ ಒತ್ತು ನೀಡಬೇಕೆಂದು ಕರೆ ನೀಡಿದರು. ರಾಜ್ಯ ಸರ್ಕಾರದ ವೈಫಲ್ಯ ಜನರ ಮುಂದಿಟ್ಟು, ಮುಂಬರುವ ಚುನಾವಣೆಗಳಲ್ಲಿ ಯುವಶಕ್ತಿಯ ಬೆಂಬಲದೊಂದಿಗೆ ಜೆಡಿಎಸ್ ಅಧಿಕಾರಕ್ಕೆ ಬರಲಿದೆ.

Read Full Story

11:19 AM (IST) May 10

ಮೈಸೂರು ಕನ್ನಡಿ ಗೋಡೆ - ಮೂತ್ರ ವಿಸರ್ಜನೆ ತಡೆ ಯೋಜನೆ ವಿಫಲ! ಕ್ಯಾರೇ ಅನ್ನದೆ ಕನ್ನಡಿ ಮುಂದೆ ನಿಂತೇ ಮೂತ್ರ ಮಾಡಿದ!

ಸ್ವಚ್ಛ ಸರ್ವೇಕ್ಷಣೆಯಲ್ಲಿ ನಂ.1 ಸ್ಥಾನಕ್ಕೇರಲು ಮೈಸೂರು ಮಹಾನಗರ ಪಾಲಿಕೆಯು ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ತಡೆಯಲು ಕನ್ನಡಿ ಗೋಡೆಗಳನ್ನು ಅಳವಡಿಸಿತ್ತು. ಆದರೆ, ಸಬರ್ಬ್ ಬಸ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬರು ಈ ಕನ್ನಡಿಯ ಎದುರೇ ಮೂತ್ರ ವಿಸರ್ಜಿಸುವ ಮೂಲಕ ಈ ಯೋಜನೆಗೆ ಹಿನ್ನಡೆ ಉಂಟುಮಾಡಿದ್ದಾರೆ.
Read Full Story

11:09 AM (IST) May 10

ಬೆಂಗಳೂರಿನ ನೆಲದಲ್ಲಿಂದು ಕೇಸರಿ ಸೂರ್ಯ ಉದಯ, ಎಚ್‌ಎಎಲ್‌ನಲ್ಲಿ ಪ್ರಧಾನಿ ಮೋದಿ ಅಬ್ಬರ, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ!

ಪಂಚರಾಜ್ಯ ಚುನಾವಣೆಯಲ್ಲಿನ ಗೆಲುವಿನ ಬಳಿಕ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭವ್ಯ ಸ್ವಾಗತ ದೊರೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿ ಗೆಲುವಿನ ಸಂಭ್ರಮವನ್ನು ಹಂಚಿಕೊಂಡು, ದಕ್ಷಿಣ ಭಾರತದಲ್ಲಿ ಪಕ್ಷದ ಬೆಳವಣಿಗೆಯನ್ನು ಶ್ಲಾಘಿಸಿದರು 

Read Full Story

10:28 AM (IST) May 10

ಬರ್ತ್​ಡೇ ದಿನ ಗುಡ್​ನ್ಯೂಸ್ ಕೊಡ್ತೀರಾ ಕೇಳಿದ್ರೆ ಅಭಿಮಾನಿಗಳ ಮೇಲೆ ಕೇಸ್​ ಹಾಕೋ ಎಚ್ಚರಿಕೆ ಕೊಟ್ಟ ಡಿಕೆಶಿ- ಫ್ಯಾನ್ಸ್​ ಶಾಕ್​

ತಮ್ಮ 64ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಭಿಮಾನಿಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಫ್лекಸ್ ಅಥವಾ ಬ್ಯಾನರ್ ಹಾಕಿದರೆ, ಅವರ ವಿರುದ್ಧ ಕಠಿಣ ಕ್ರಮ ಮತ್ತು ಕೇಸ್ ದಾಖಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
Read Full Story

10:10 AM (IST) May 10

ಯಾವುದೇ ಕೋಚಿಂಗ್ ಇಲ್ಲದೆ IFS ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್‍ಯಾಂಕ್; ಬೆಳಗಾವಿ ರೈತನ ಮಗನ ಪರೀಕ್ಷೆ ತಯಾರಿ ನಡೆಸಿದ್ದು ಹೇಗಿತ್ತು?

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರೈತ ಕುಟುಂಬದ ಬಸವರಾಜ ಕೆಂಪವಾಡ ಅವರು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್‌) ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದ್ದಾರೆ. ಯಾವುದೇ ಕೋಚಿಂಗ್ ಪಡೆಯದೆ, ಬಡತನದ ನಡುವೆಯೂ ಸತತ ಪರಿಶ್ರಮದಿಂದ ಈ ಐತಿಹಾಸಿಕ ಸಾಧನೆ ಮಾಡಿ ಯುವಕರಿಗೆ ಸ್ಫೂರ್ತಿ.

Read Full Story

09:46 AM (IST) May 10

Stray Dog Attacks 4 Month Old Baby - ಮನೆಯೊಳಗೆ ಮಲಗಿದ್ದ 4 ತಿಂಗಳ ಕಂದಮ್ಮನ ಮೇಲೆ ಬೀದಿ ನಾಯಿ ದಾಳಿ, ಚಿಕಿತ್ಸೆ ಫಲಿಸದೆ ಮಗು ಸಾವು

ಬೀದರ್‌ನ ದುಬಲಗುಂಡಿ ಗ್ರಾಮದಲ್ಲಿ, ಮನೆಯೊಳಗೆ ಮಲಗಿದ್ದ ನಾಲ್ಕು ತಿಂಗಳ ಕಂದಮ್ಮನ ಮೇಲೆ ಬೀದಿ ನಾಯಿ ದಾಳಿ ಮಾಡಿ, ಮಗು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ. ಈ ಘಟನೆಗೆ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಸಚಿವರಿಂದ ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ.

Read Full Story

09:29 AM (IST) May 10

Hubballi horror - ತಂಗಿಯರ ಫೋಟೋ ತೆಗೆಯಬೇಡ ಎಂದಿದ್ದಕ್ಕೆ ಪತ್ನಿ, 6 ತಿಂಗಳ ಮಗು ಸೇರಿ ಐವರ ಮೇಲೆ ಪತಿಯಿಂದ ಆಸಿಡ್ ದಾಳಿ!

ಹುಬ್ಬಳ್ಳಿ ತಾಲೂಕಿನ ತಾರಿಹಾಳದಲ್ಲಿ, ತಂಗಿಯರ ಫೋಟೋ ತೆಗೆಯಬೇಡ ಎಂದ ಪತ್ನಿಯನ್ನು ಧಿಕ್ಕರಿಸಿ ಫೋಟೋ ತೆಗೆದಿದ್ದಕ್ಕೆ ನಡೆದ ಜಗಳದಲ್ಲಿ ಪತಿಯು ಪತ್ನಿ ಸೇರಿ ಐವರ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಮಗು ಸೇರಿದಂತೆ ಐವರು ಗಾಯಗೊಂಡಿದ್ದು, ದಾಳಿಕೋರ ಪತಿ ಹಾಗೂ ಪತ್ನಿಯ ಸ್ಥಿತಿ ಗಂಭೀರವಾಗಿದೆ.
Read Full Story

09:20 AM (IST) May 10

ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಈ ಭಾಗದಲ್ಲಿ 10.20 ಕಿ.ಮೀ ಉದ್ದದ ಹೊಸ ರಸ್ತೆ ನಿರ್ಮಾಣ

ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು,  ಬಫರ್‌ ಜೋನ್‌ನಲ್ಲಿ 10.20 ಕಿ.ಮೀ ಉದ್ದದ ಹೊಸ ರಸ್ತೆ ನಿರ್ಮಾಣಕ್ಕೆ ಬಿ-ಸ್ಮೈಲ್ ಮುಂದಾಗಿದೆ. ಈ ಯೋಜನೆಯಲ್ಲಿ ಸೌಂದರ್ಯೀಕರಣದ ಜೊತೆಗೆ, 200ಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸಲಾಗುವುದು ಮತ್ತು ಆಸ್ತಿ ಕಳೆದುಕೊಳ್ಳುವವರಿಗೆ ಪರಿಹಾರ ನೀಡಲಾಗುವುದು.

Read Full Story

09:14 AM (IST) May 10

ಸಚಿವ ಡಿ. ಸುಧಾಕರ್ ನಿಧನ - ಹಿರಿಯೂರು ಶಾಸಕ, ಜನಪರ ನಾಯಕನ ರಾಜಕೀಯ ಜೀವನಕ್ಕೆ ಸ್ಪೂರ್ತಿಯೇ ಚಿಕ್ಕಪ್ಪ!

ಕರ್ನಾಟಕದ ಸಾಂಖ್ಯಿಕ ಮತ್ತು ಯೋಜನಾ ಸಚಿವ ಡಿ. ಸುಧಾಕರ್ ಅವರು ಅನಾರೋಗ್ಯದಿಂದಾಗಿ ತಮ್ಮ 65ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಹಿರಿಯೂರು ಕ್ಷೇತ್ರದಿಂದ ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, 'ಬಡವರ ಬಂಧು' ಎಂದೇ ಜನಪ್ರಿಯರಾಗಿದ್ದರು ಮತ್ತು ಸಹಕಾರ ಕ್ಷೇತ್ರದಲ್ಲೂ ಅಪಾರ ಸೇವೆ ಸಲ್ಲಿಸಿದ್ದರು.
Read Full Story

09:00 AM (IST) May 10

Mavu Mela - ಬೆಂಗಳೂರಿನ ಕಬ್ಬನ್ ಪಾರ್ಕ್‌ ಮೇಳ; 2 ದಿನದಲ್ಲಿಯೇ 7 ಟನ್‌+ ಮಾವು ಮಾರಾಟ

ಮಾವು-ಹಲಸು ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಸಾಯನಿಕ ಮುಕ್ತ, ನೈಸರ್ಗಿಕವಾಗಿ ಮಾಗಿದ ಮಾವು ಮತ್ತು ಹಲಸನ್ನು ರೈತರಿಂದ ನೇರವಾಗಿ ಕಡಿಮೆ ದರದಲ್ಲಿ ಒದಗಿಸುತ್ತಿದ್ದು, ಮೊದಲ ಎರಡು ದಿನಗಳಲ್ಲಿ ಏಳು ಟನ್‌ಗೂ ಹೆಚ್ಚು ಮಾವು ಮಾರಾಟವಾಗಿದೆ.

Read Full Story

08:44 AM (IST) May 10

ಬೇರೊಬ್ಬರ ವರದಿಯನ್ನು ಮತ್ತ್ಯಾರಿಗೋ ನೀಡಿ ರೋಗಿಯ ಪತಿಯನ್ನೇ ನಿಂದಿಸಿದ ಸ್ಕ್ಯಾನಿಂಗ್‌ ಸೆಂಟರ್‌ ಸಿಬ್ಬಂದಿ

ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಬೇರೊಬ್ಬರ ವರದಿಯನ್ನು ಮಹಿಳೆಯೊಬ್ಬರಿಗೆ ನೀಡಿದ ಪರಿಣಾಮ, ತಪ್ಪಾದ ಚಿಕಿತ್ಸೆಯಿಂದ ಅವರ ಆರೋಗ್ಯ ಹದಗೆಟ್ಟಿದೆ. ಕೇಂದ್ರದ ಸಿಬ್ಬಂದಿ ತಮ್ಮ ತಪ್ಪನ್ನು ಒಪ್ಪಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದು, ಈ ಘಟನೆಯು ಸರ್ಕಾರಿ ಆಸ್ಪತ್ರೆಯ ಸ್ಕ್ಯಾನಿಂಗ್ ಯಂತ್ರದ ದುಸ್ಥಿತಿಯನ್ನು ಸಹ ಬೆಳಕಿಗೆ ತಂದಿದೆ.

Read Full Story

08:33 AM (IST) May 10

ಪಂಚರಾಜ್ಯ ಚುನಾವಣಾ ಫಲಿತಾಂಶ ಬಳಿಕ ಕರ್ನಾಟಕ ಪ್ರಧಾನಿ ಮೋದಿ, ಆರು ತಿಂಗಳಲ್ಲಿ ಮೂರನೇ ಭೇಟಿ!

ಪಂಚರಾಜ್ಯಗಳ ಚುನಾವಣಾ ಗೆಲುವಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡುತ್ತಿದ್ದು, ಬಿಜೆಪಿ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ, ಅವರು ಆರ್ಟ್ ಆಫ್ ಲಿವಿಂಗ್ ಕೇಂದ್ರದಲ್ಲಿ ಧ್ಯಾನ ಮಂದಿರವನ್ನು ಉದ್ಘಾಟಿಸಲಿದ್ದು

Read Full Story

08:31 AM (IST) May 10

ಪೀಣ್ಯ ಫ್ಲೈಓವರ್‌ಗೆ ಕಠಿಣ ಪರೀಕ್ಷೆ ನಡೆಸಿದ ಪರಿಣಿತರ ತಂಡ; ರಿಸಲ್ಟ್‌ನಲ್ಲಿ ಬಂದಿದ್ದೇನು?

ಕೇಬಲ್ ಸಮಸ್ಯೆಯಿಂದ ಸುದ್ದಿಯಾಗಿದ್ದ ಪೀಣ್ಯ ಫ್ಲೈಓವರ್ ಕುರಿತ ಮಾಹಿತಿ ಇಲ್ಲಿದೆ. ಮೇಲ್ಸೇತುವೆಯು ಭಾರ ತಡೆಯುವ ಸಾಮರ್ಥ್ಯ ಹೊಂದಿದೆಯೇ ಎಂದು ಮೇ 5 ರಿಂದ ಲೋಡ್‌ ಟೆಸ್ಟಿಂಗ್‌ ನಡೆಸಿದೆ. ಈ ಪರೀಕ್ಷೆಯ ಫಲಿತಾಂಶ ಹೊರ ಬಂದಿದೆ.

Read Full Story

08:12 AM (IST) May 10

ಯಶವಂತಪುರ -ವಿಜಯಪುರ-ಸಿಂಧನೂರು ​ರೈಲಿಗೆ ಜರ್ಮನ್ ತಂತ್ರಜ್ಞಾನ ; ಈಗ ಮತ್ತಷ್ಟು ಆರಾಮದಾಯಕ ಪ್ರಯಾಣ

ಯಶ್ವಂತಪುರ ​ವಿಜಯಪುರ ​ಯಶ್ವಂತಪುರ (16 547/48) ಹಾಗೂ ಯಶ್ವಂತಪುರ ​ಸಿಂಧನೂರು ​ಯಶ್ವಂತಪುರ (16 545/46) ಪ್ರಯಾಣಿಕರಿಗೆ ಸಂತಸದ ಸುದ್ದಿಯನ್ನು ನೀಡಿದೆ. ಆಧುನಿಕ ಮೂಲ ಸೌಲಭ್ಯ ನೀಡುತ್ತಿರುವ ಕುರಿತು ಅಧಿಕಾರಿಗಳು ನೀಡಿದ ಮಾಹಿತಿ ಇಲ್ಲಿದೆ.

Read Full Story

08:07 AM (IST) May 10

ಸಚಿವ ಡಿ. ಸುಧಾಕರ್ ನಿಧನ; ಡಿಸಿಎಂ ಡಿಕೆಶಿ ರಾಯಚೂರು ಪ್ರವಾಸ ದಿಢೀರ್ ರದ್ದು?

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಯಚೂರು ಜಿಲ್ಲಾ ಪ್ರವಾಸವು, ಅವರ ಸಂಪುಟ ಸಹೋದ್ಯೋಗಿ ಹಾಗೂ ಸಚಿವ ಡಿ. ಸುಧಾಕರ್ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ರದ್ದಾಗಿದೆ. ತಮ್ಮ ಆಪ್ತ ಗೆಳೆಯನ ಅಗಲಿಕೆಗೆ ಡಿಕೆಶಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Read Full Story

07:43 AM (IST) May 10

Belagavi - ಪತಿ ಮನೆಯಲ್ಲೇ ಕಳ್ಳತನ ಮಾಡಿ ಪ್ರಿಯಕರನೊಂದಿಗೆ ತಗ್ಲಾಕೊಂಡ ನವವಿವಾಹಿತೆ

ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ, ಪತಿಯ ಮನೆಯಲ್ಲಿಯೇ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದ ಆರೋಪದ ಮೇಲೆ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯ ನಡೆದ 48 ಗಂಟೆಗಳಲ್ಲಿ ಆರೋಪಿಗಳನ್ನು ಸೆರೆಹಿಡಿದು, ಕಳವಾದ ಸಂಪೂರ್ಣ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
Read Full Story

07:36 AM (IST) May 10

DK Shivakumar Raichur visit Today - ಇಂದು ರಾಯಚೂರಿಗೆ ಡಿಸಿಎಂ ಡಿಕೆಶಿ ಸೇರಿ ‘ಕೈ’ ನಾಯಕರ ದಂಡು!

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಯಚೂರು ಜಿಲ್ಲೆಯ ಮುದಗಲ್ ಪಟ್ಟಣಕ್ಕೆ ವಿಶೇಷ ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದಾರೆ. ಅವರು ಲಿಂಗಸೂಗೂರು ಮಾಜಿ ಶಾಸಕರ ಪುತ್ರಿಯ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದು, ಸಚಿವರು ಹಾಗೂ ಶಾಸಕರ ದಂಡೇ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ.
Read Full Story

07:08 AM (IST) May 10

Minister D Sudhakar No More: ಹಿರಿಯೂರಿನ ಧ್ವನಿ ಮೌನ: ಸಚಿವ ಡಿ. ಸುಧಾಕರ್ ಇನ್ನಿಲ್ಲ

ಸಾಂಖ್ಯಿಕ ಮತ್ತು ಅಂಕಿ ಸಂಖ್ಯೆ ಸಚಿವರಾಗಿದ್ದ ಡಿ. ಸುಧಾಕರ್ ಅವರು ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹಿರಿಯೂರು ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ತಮ್ಮ ಚಿಕ್ಕಪ್ಪನ ರಾಜಕೀಯ ಮಾರ್ಗದರ್ಶನದಲ್ಲಿ ಸಾರ್ವಜನಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದರು.

 

 


More Trending News