LIVE NOW
Published : Feb 01, 2026, 06:48 AM ISTUpdated : Feb 01, 2026, 12:37 PM IST

Karnataka News Live: Bengaluru - ಮಾಗಡಿ ರಸ್ತೆಯಲ್ಲಿರುವ ಟ್ರಸ್ಟ್‌ಗೆ ಸೇರಿದ 172 ಎಕರೆ ಸರ್ಕಾರದ ವಶಕ್ಕೆ

ಸಾರಾಂಶ

ಬೆಳಗಾವಿ: ಮಾಜಿ ಸಚಿವ ಲಕ್ಷ್ಮಣ ಸವದಿಗೂ ನಮಗೂ ಮುಸುಕಿನ ಗುದ್ದಾಟವಿಲ್ಲ, ಓಪನ್ ಗುದ್ದಾಟ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಬಹಿರಂಗವಾಗಿಯೇ ಹೇಳಿದರು. ಬೆಳಗಾವಿಯ ಅಥಣಿ ತಾಲೂಕಿನ ಕೆಂಪವಾಡದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಲಕ್ಷ್ಮಣ ಸವದಿ ಅವರ ಬಗ್ಗೆ ಮಾತನಾಡಿದರೆ ಹೊರಗಿನವರು ಎಂದು ಹೇಳುತ್ತಾರೆ. ಆದ್ದರಿಂದ, ನನ್ನ ಹಿತೈಷಿಗಳು ನನಗೆ ಅಥಣಿಯಲ್ಲಿ ಮಾತನಾಡಬಾರದು ಎಂದು ಹೇಳಿದ್ದಾರೆ. ಇದರ ಬಗ್ಗೆ ಈಗ ಮಾತನಾಡದೇ ಚುನಾವಣೆ ಸಂದರ್ಭದಲ್ಲಿ ಎಳೆಎಳೆಯಾಗಿ ಮಾತನಾಡುತ್ತೇನೆ ಎಂದರು. 

ಸವದಿ ಬಿಜೆಪಿಗೆ ಬರುತ್ತಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮಲ್ಲೇ ಘಟಾನುಘಟಿ ನಾಯಕರು ಇರುವಾಗ ಅಂಥವರ ಅವಶ್ಯಕತೆ ನಮಗಿಲ್ಲ. ನನಗಂತೂ ಮೊದಲೇ ಅವಶ್ಯಕತೆ ಇಲ್ಲ, ಹೈಕಮಾಂಡ್‌ಗೆ ಬೇಕಾದರೆ ನಾವೇನೂ ಹೇಳಕ್ಕಾಗಲ್ಲ ಎಂದರು.

12:37 PM (IST) Feb 01

Bengaluru - ಮಾಗಡಿ ರಸ್ತೆಯಲ್ಲಿರುವ ಟ್ರಸ್ಟ್‌ಗೆ ಸೇರಿದ 172 ಎಕರೆ ಸರ್ಕಾರದ ವಶಕ್ಕೆ

ಮಾಗಡಿ ರಸ್ತೆಯಲ್ಲಿರುವ ಜಮ್ನಾಲಾಲ್ ಬಜಾಜ್ ಟ್ರಸ್ಟ್‌ಗೆ ಸೇರಿದ 172 ಎಕರೆ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯುವ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ.  15ನೇ ವಿತ್ತೀಯ ಆಯೋಗದಿಂದ ಬರಬೇಕಿದ್ದ 2304 ಕೋಟಿ ರೂಪಾಯಿಗಳ ಕೇಂದ್ರ ಅನುದಾನವನ್ನು ಕಳೆದುಕೊಂಡಿದೆ.

Read Full Story

12:27 PM (IST) Feb 01

Yash-CJ Roy - ನಟ ಯಶ್ & ಸಿಜೆ ರಾಯ್ ನಡುವೆ ಮುಂಬೈನಲ್ಲಿ ಬಿಸಿನೆಸ್ ಡೀಲ್? ಸೋಷಿಯಲ್ ಮೀಡಿಯಾ ಸುದ್ದಿ ನಿಜವೇ?

ಇತ್ತೀಚೆಗೆ ನಿಧನರಾದ ಖ್ಯಾತ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿಜೆ ರಾಯ್ ಮತ್ತು ಯಶ್ ಅವರು ಮುಂಬೈನಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಪಾಲುದಾರರಾಗಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ. ಸೋಷಿಯಲ್ ಮೀಡಿಯಾದ ಈ ಸುದ್ದಿ ನಿಜವೇ?

Read Full Story

12:13 PM (IST) Feb 01

ತಂಗಿಗೆ ಅಮ್ಮನ ರಕ್ತಸಿಕ್ತ ಹೆಣವನ್ನೇ ಗಿಫ್ಟ್ ಕೊಟ್ಟ ಅಣ್ಣ; ಭಯದಲ್ಲಿದ್ದ ತಂಗಿಯನ್ನೂ ತಾಯಿ ಜಾಗಕ್ಕೆ ಕಳಿಸಿದ!

ವಿಜಯನಗರದಲ್ಲಿ, ಹಣಕ್ಕಾಗಿ ತಾಯಿಯನ್ನು ಕೊಂದ ಮಗ, ನಂತರ 'ಗಿಫ್ಟ್' ಎಂದು ನಂಬಿಸಿ ತಂಗಿಯನ್ನೂ, ತಂದೆಯನ್ನೂ ಹತ್ಯೆ ಮಾಡಿದ್ದಾನೆ. ಮೂವರ ಶವಗಳನ್ನು ಮನೆಯಲ್ಲೇ ಹೂತುಹಾಕಿ, ನಾಪತ್ತೆ ದೂರು ದಾಖಲಿಸಿ ನಾಟಕವಾಡಿದ ಆರೋಪಿಯನ್ನು ಪೊಲೀಸರು, ಕೊಲೆಯ ಇಂಚಿಂಚು ಮಾಹಿತಿ ಬಿಚ್ಚಿಟ್ಟಿದ್ದಾರೆ.

Read Full Story

12:07 PM (IST) Feb 01

ರೆಸಾರ್ಟ್‌ನಲ್ಲಿ ನಟಿಯರೊಂದಿಗೆ 'ರಾಯ್' ಮಿಡ್‌ನೈಟ್ ಫೋಟೋ ಸೆಷನ್ - ಸ್ಫೋಟಕ ಮಾಹಿತಿ ಹೇಳಿದ ಚಂದ್ರಚೂಡ

ಸಿ.ಜೆ.ರಾಯ್ ಆತ್ಮಹ*ತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಸ್ಫೋಟಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ರಾಯ್ ಅವರು ಹನಿಟ್ರ್ಯಾಪ್‌ನಿಂದ ಹೇಗೆ ಬಚಾವ್ ಆಗಿದ್ದರು ಮತ್ತು ಅವರು ಕಾಂಗ್ರೆಸ್ ಪಕ್ಷಕ್ಕೆ ಫಂಡರ್ ಆಗಿದ್ದರು ಎಂಬ ವಿಷಯಗಳನ್ನು ಚಂದ್ರಚೂಡ ಬಹಿರಂಗಪಡಿಸಿದ್ದಾರೆ.

Read Full Story

11:41 AM (IST) Feb 01

Union Budget 2026 - ಬೆಂಗಳೂರು ಸೇರಿದಂತೆ ಏಳು ಹೈ ಸ್ಪೀಡ್‌ ರೈಲು ಕಾರಿಡಾರ್‌ ಯೋಜನೆ ಘೋಷಣೆ

2026ರ ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರಿಗೆ ಎರಡು ಹೈಸ್ಪೀಡ್ ರೈಲು ಕಾರಿಡಾರ್‌ಗಳು ಸೇರಿದಂತೆ ದೇಶಾದ್ಯಂತ ಒಟ್ಟು ಏಳು ಯೋಜನೆಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಣೆ ಮಾಡಿದ್ದಾರೆ.

 

Read Full Story

11:38 AM (IST) Feb 01

ನನ್ನಿಷ್ಟದ ಹುಡುಗ ಸಿಕ್ಕರೆ ಮಾತ್ರ ಮದುವೆ ಆಗೋದು ಅಂತ ಫಿಕ್ಸ್‌ ಆಗಿದ್ದೆ - 'ಪುಟ್ಟಕ್ಕನ ಮಕ್ಕಳು' ನಟಿ ಸಂಜನಾ ಬುರ್ಲಿ

Actress Sanjana Burli Interview: ‘ಲಗ್ನಪತ್ರಿಕೆ’, ‘ಪುಟ್ಟಕ್ಕನ ಮಕ್ಕಳು’ ಹಾಗೂ ‘ಗಂಧದ ಗುಡಿ’ ಧಾರಾವಾಹಿ ನಟಿ ಸಂಜನಾ ಬುರ್ಲಿ ಅವರು ಮಾರ್ಚ್‌ನಲ್ಲಿ ಮದುವೆ ಆಗಲಿದ್ದಾರೆ. ಈ ಬಗ್ಗೆ ಅವರು ಎಷಿಯಾನೆಟ್‌ ಸುವರ್ಣ ನ್ಯೂಸ್‌ ಜೊತೆಗೆ ಸಂದರ್ಶನ ನೀಡಿದ್ದಾರೆ.

Read Full Story

11:28 AM (IST) Feb 01

ಏನೇ ಮಾಡಿದ್ರೂ ಬೋಂಡಾ ಆಗ್ತಿದೆಯಾ ಉದ್ದಿನ ವಡೆ? ಎಣ್ಣೆಗೆ ಹಾಕೋ ಮುನ್ನ ಒಂದು ವಸ್ತು ಸೇರಿಸಿ

ಹೋಟೆಲ್‌ನಂತೆ ಗರಿಗರಿಯಾದ ತೂತು ಉದ್ದಿನವಡೆ ಮಾಡಲು ಹಲವರು ಪ್ರಯತ್ನಿಸಿ ವಿಫಲರಾಗಿರುತ್ತಾರೆ. ಉದ್ದಿನಬೇಳೆ ಹಿಟ್ಟಿಗೆ ನೆನೆಸಿದ ಒಂದು ವಸ್ತು ಸೇರಿಸುವುದರಿಂದ ಮನೆಯಲ್ಲೇ ಸುಲಭವಾಗಿ ಹೋಟೆಲ್ ಶೈಲಿಯ ಕ್ರಿಸ್ಪಿ ವಡೆಯನ್ನು ತಯಾರಿಸಬಹುದು.

Read Full Story

11:28 AM (IST) Feb 01

22 ಸಾವಿರ ಮನೆಗಳನ್ನು ನಿರ್ಮಿಸದಿದ್ದರೇ ರಾಜಕೀಯಕ್ಕೆ ನಿವೃತ್ತಿ - ಸಂಸದ ಡಾ. ಕೆ ಸುಧಾಕರ್ ಘೋಷಣೆ

ಸಂಸದ ಡಾ.ಕೆ.ಸುಧಾಕರ್, 2028ರೊಳಗೆ 22 ಸಾವಿರ ಮನೆಗಳನ್ನು ನಿರ್ಮಿಸದಿದ್ದರೆ ರಾಜಕೀಯ ನಿವೃತ್ತಿ ಹೊಂದುವುದಾಗಿ ಸವಾಲು ಹಾಕಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ತೀವ್ರವಾಗಿ ಟೀಕಿಸಿದ ಅವರು, ಚಿಮುಲ್ ಚುನಾವಣೆ, ಎತ್ತಿನಹೊಳೆ ಯೋಜನೆಯ ಬಗ್ಗೆಯೂ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

Read Full Story

10:46 AM (IST) Feb 01

ಕೊಟ್ಟೂರು ಮರ್ಯಾದೆಗೇಡು ಹತ್ಯೆ ಕೇಸಿಗೆ ಬಿಗ್ ಟ್ವಿಸ್ಟ್; ಕೊಲೆಯಾಗಿದ್ದು 3 ಆದ್ರೆ ಸತ್ತಿದ್ದು ನಾಲ್ವರು!

ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ, ತಂಗಿಯ ಪ್ರೀತಿ ಮತ್ತು ಗರ್ಭಿಣಿ ಎಂಬ ವಿಚಾರದಿಂದ ಮರ್ಯಾದೆಗೆ ಅಂಜಿ ಅಣ್ಣನೊಬ್ಬ ತನ್ನ ತಂದೆ-ತಾಯಿ ಹಾಗೂ ತಂಗಿಯನ್ನು ಹತ್ಯೆ ಮಾಡಿದ್ದಾನೆ. ಆದರೆ, ಇದೀಗ ಆತ ಪೊಲೀಸರ ಮುಂದೆ 3 ಕೊಲೆಯಲ್ಲ, 4 ಕೊಲೆ ಮಾಡಿದ್ದಾಗಿ ಬಾಯಿ ಬಿಟ್ಟಿದ್ದಾನೆ.

Read Full Story

10:45 AM (IST) Feb 01

ಅಕ್ಕ ನಿನ್ ಗಂಡ್ ಹೆಂಗಿರಬೇಕು? ಶಂಕ್ರಣ್ಣಂಗೆ ಇರ್ಬೇಕೆಂದ್ರು ಸೀರಿಯಲ್ ನೋಡುವ ಲೇಡಿಸ್!

'ಅಣ್ಣಯ್ಯ' ಧಾರಾವಾಹಿಯ ಶಂಕರಣ್ಣ ಪಾತ್ರವು ಮಹಿಳಾ ವೀಕ್ಷಕರ ಮನಗೆದ್ದಿದೆ. ಆರಂಭದಲ್ಲಿ ಕುಡುಕನಾಗಿದ್ದ ಈ ಪಾತ್ರವು, ಪತ್ನಿ ಶಾರದಮ್ಮ ವಾಪಸ್ ಬಂದ ನಂತರ ಬದಲಾಗಿ, ಆಕೆಯ ಮೇಲಿನ ಪ್ರೀತಿ ಮತ್ತು ಕಾಳಜಿಯಿಂದಾಗಿ 'ಗಂಡ ಎಂದರೆ ಹೀಗಿರಬೇಕು' ಎಂದು ಹೆಂಗಳೆಯರು ಮಾತನಾಡುವಂತೆ ಮಾಡಿದೆ.
Read Full Story

10:44 AM (IST) Feb 01

500 ಜನರಿಗಾಗಿ 50 ಲಕ್ಷ ಖರ್ಚು ಮಾಡಿದ ರಾಮ್ ಚರಣ್! ಕೊಟ್ಟ ಮಾತು ಉಳಿಸಿಕೊಂಡ ಮೆಗಾ ಪವರ್ ಸ್ಟಾರ್

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತೊಮ್ಮೆ ತಮ್ಮ ಒಳ್ಳೆಯ ಮನಸ್ಸನ್ನು ಸಾಬೀತುಪಡಿಸಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಮೆಗಾಸ್ಟಾರ್ ಚಿರಂಜೀವಿಗೆ ತಕ್ಕ ಮಗ ಎನಿಸಿಕೊಂಡಿದ್ದಾರೆ. ಅಷ್ಟಕ್ಕೂ ಅವರು ಏನು ಮಾಡಿದ್ದಾರೆ ಗೊತ್ತಾ?

Read Full Story

10:39 AM (IST) Feb 01

Vijay Devarakonda, Rashmika Mandanna ಮುಚ್ಚಿಟ್ಟಿದ್ದ ಮಹಾಸತ್ಯವನ್ನು ಬಯಲು ಮಾಡಿದ್ರಾ ಆ ಹುಡುಗಿಯರು?

Vijay Devarakonda, Rashmika Mandanna News: ನಟಿ ರಶ್ಮಿಕಾ ಮಂದಣ್ಣ, ವಿಜಯ್‌ ದೇವರಕೊಂಡ ಮದುವೆ ಬಗ್ಗೆ ಊಹಾಪೋಹಗಳು ಹರಡುತ್ತಿವೆ. ಹೀಗಿರುವಾಗ ಇಬ್ಬರು ಹುಡುಗಿಯರು ಮಾಡಿದ ವಿಡಿಯೋವೊಂದು ಈಗ ಇನ್ನೊಂದಿಷ್ಟು ಅನುಮಾನವನ್ನು ಸೃಷ್ಟಿಸಿದೆ. ಏನದು?

 

Read Full Story

10:30 AM (IST) Feb 01

400 ಕೋಟಿ ದರೋಡೆ ಕೇಸ್‌ನಲ್ಲಿ ಬಿಗ್‌ ಟ್ವಿಸ್ಟ್; 35 ಕೋಟಿ ತೋರಿಸಲು ಮುಂದಾಯ್ತಾ SIT?

400 ಕೋಟಿ ರೂಪಾಯಿ ದರೋಡೆ ಪ್ರಕರಣವು ರೋಚಕ ತಿರುವು ಪಡೆದುಕೊಂಡಿದೆ. ದೂರುದಾರ ಸಂದೀಪ್ ಪಾಟೀಲ್, ತನಿಖೆ ನಡೆಸುತ್ತಿರುವ ಎಸ್‌ಐಟಿ ವಿರುದ್ಧವೇ ಪ್ರಕರಣವನ್ನು ಮುಚ್ಚಿಹಾಕುವ ಆರೋಪ ಮಾಡಿದ್ದಾರೆ. ಈ ನಡುವೆ, ಹಣದ ಮಾಲೀಕ ಎನ್ನಲಾದ ಬಿಲ್ಡರ್ ಕಿಶೋರ್ ಶೇಠ್ ಪೊಲೀಸರಿಗೆ ಶರಣಾಗಿದ್ದಾರೆ.

Read Full Story

09:55 AM (IST) Feb 01

ಮನೆಯಲ್ಲಿ ಗಂಡು ಮೊಮ್ಮಗು ಇಲ್ಲ ಎಂದು ಕೊರಗಿದ್ದ ಚಿರಂಜೀವಿ; ಅವಳಿ ಮಕ್ಕಳಿಗೆ ತಂದೆಯಾದ Ram Charan Teja, Upasana

Actor Ram Charan Teja Upasana Twins Babies: ನಟ ರಾಮ್‌ ಚರಣ್‌ ತೇಜ ಹಾಗೂ ಉಪಾಸನಾ ಕುಟುಂಬಕ್ಕೆ ಇನ್ನಿಬ್ಬರ ಆಗಮನ ಆಗಿದೆ. ಹೌದು, ಈ ದಂಪತಿ ಅವಳಿ ಮಕ್ಕಳಿಗೆ ಪಾಲಕರಾಗಿದ್ದಾರೆ. ಒಟ್ಟಿನಲ್ಲಿ ಚಿರಂಜೀವಿ ಕುಟುಂಬದಲ್ಲಿ ಖುಷಿ ಮನೆ ಮಾಡಿದೆ. 

Read Full Story

09:38 AM (IST) Feb 01

ರಾಜಕೀಯದ ಜಂಜಾಟದ ನಡುವೆ ಸಿ.ಟಿ ರವಿಗೆ ಡಾಕ್ಟರೇಟ್ ಕಿರೀಟ! ಪಿಎಚ್‌ಡಿ ಮಂಡಿಸಿದ ಪ್ರಬಂಧವಿದು

ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಮತ್ತು ಕೆ.ಜಿ.ಎಫ್ ಶಾಸಕಿ ರೂಪಕಲಾ ಎಂ. ಶಶಿಧರ್ ಅವರು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಪಿಎಚ್‌ಡಿ ಪದವಿ ಸ್ವೀಕರಿಸಿದರು.  

Read Full Story

09:32 AM (IST) Feb 01

Indian Railways - ಶಿವರಾತ್ರಿ ಪ್ರಯುಕ್ತ ಯಶವಂತಪುರ-ಮಡಗಾಂವ್ ನಡುವೆ ವಿಶೇಷ ರೈಲು ಸಂಚಾರ

Shivaratri festival train service: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ನಿವಾರಿಸಲು, ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ಗೋವಾದ ಮಡಗಾಂವ್ ನಡುವೆ ವಿಶೇಷ ರೈಲು ಸಂಚಾರವನ್ನು ಘೋಷಿಸಿದೆ. 

Read Full Story

08:53 AM (IST) Feb 01

ಮಲಪ್ರಭಾ ಡ್ಯಾಂನಿಂದ ಕೃಷಿಗೆ ಹರಿಸುವ ನೀರು ಬಂದ್‌ ಮಾಡುವ ದಿನಾಂಕ ಪ್ರಕಟಿಸಿದ ಇಲಾಖೆ

ಮಲಪ್ರಭಾ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾದ ಕಾರಣ, ಕೃಷಿಗೆ ಹರಿಸಲಾಗುತ್ತಿರುವ ನೀರನ್ನು ಫೆಬ್ರವರಿ 15 ರಂದು ಸ್ಥಗಿತಗೊಳಿಸಲಾಗುವುದು. ಜುಲೈ ಅಂತ್ಯದವರೆಗಿನ ಕುಡಿಯುವ ನೀರಿನ ಅಗತ್ಯಕ್ಕಾಗಿ ನೀರನ್ನು ಕಾಯ್ದಿರಿಸಲಾಗಿದ್ದು, ಉಳಿದ ನೀರನ್ನು ಸದುಪಯೋಗಪಡಿಸಿಕೊಳ್ಳಲು ರೈತರಲ್ಲಿ ಮನವಿ ಮಾಡಲಾಗಿದೆ.
Read Full Story

08:38 AM (IST) Feb 01

ತಿರುಪತಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಗೋಮಾಂಸ ಇತ್ತು ಎಂದ ತೆಲುಗುದೇಶಂ

ತಿರುಪತಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಗೋಮಾಂಸದ ಅಂಶಗಳಿವೆ ಎಂದು ಟಿಡಿಪಿ ಆರೋಪಿಸಿದೆ. 2022 ಮತ್ತು 2023ರ ಪ್ರಯೋಗಾಲಯ ವರದಿಗಳು ತುಪ್ಪ ಕಲಬೆರಕೆಯಾಗಿದ್ದು, ಪ್ರಾಣಿಜನ್ಯ ಅಂಶಗಳನ್ನು ಹೊಂದಿದೆ ಎಂದು ದೃಢಪಡಿಸಿವೆ ಎಂದು ಆಡಳಿತಾರೂಢ ಪಕ್ಷ ಹೇಳಿದೆ. 

Read Full Story

08:27 AM (IST) Feb 01

ಬಂಡೀಪುರ ರಕ್ಷಿತಾರಣ್ಯದಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ವಿರೋಧ! ಕಾನೂನುಬಾಹಿರ ಕೆಲಸ ಮಾಡುವವರಿಗೆ ಆಸಕ್ತಿ?

ಕೇರಳ ಸಂಪರ್ಕಕ್ಕಾಗಿ ಬಂಡೀಪುರ ಅರಣ್ಯದಲ್ಲಿ ಸುರಂಗ ಮಾರ್ಗ ನಿರ್ಮಿಸಲು ಕೇಂದ್ರ ಸರ್ಕಾರ ತಜ್ಞರ ಸಮಿತಿ ರಚಿಸಿರುವುದಕ್ಕೆ ಪರಿಸರವಾದಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆ ಮತ್ತು ಜೀವವೈವಿಧ್ಯಕ್ಕೆ ಮಾರಕವಾಗಿದ್ದು, ಹೋರಾಟದ ಎಚ್ಚರಿಕೆ ನೀಡಿದ್ದಾರೆ.

Read Full Story

08:24 AM (IST) Feb 01

Bagalkote - ಪ್ರತಿ ಕ್ವಿಂಟಲ್‌ಗೆ 5875 ರೂ.ನಂತೆ ಕಡಲೆಕಾಳು ಖರೀದಿ ಆರಂಭ - ಷರತ್ತು ಅನ್ವಯ

ಬಾಗಲಕೋಟೆ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಕಡಲೆಕಾಳನ್ನು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‌ಗೆ ₹5,875 ರಂತೆ ಖರೀದಿಸಲಾಗುತ್ತಿದೆ. ಪ್ರತಿ ರೈತರಿಂದ ಗರಿಷ್ಠ 40 ಕ್ವಿಂಟಲ್ ಕಡಲೆ ಖರೀದಿಸಲಾಗುತ್ತಿದೆ.

Read Full Story

08:16 AM (IST) Feb 01

ದಾವೋಸ್ ರಹಸ್ಯ - ಕರ್ನಾಟಕಕ್ಕೆ ಸಿಕ್ಕಿದ್ದೇನು? 2ನೇ ಸ್ತರದ ನಗರಗಳತ್ತ ಹಲವು ಕಂಪನಿಗಳ ಆಸಕ್ತಿ!

ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ಸಮಾವೇಶವು ರಾಜ್ಯಕ್ಕೆ ಹೊಸ ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ಪ್ರಕಾರ, ಆಹಾರ ಸಂಸ್ಕರಣೆ, ಶುದ್ಧ ಇಂಧನ, ಮತ್ತು ಡೇಟಾ ಕೇಂದ್ರಗಳಂತಹ ವಲಯಗಳಲ್ಲಿ ಹಲವು ಜಾಗತಿಕ ಕಂಪನಿಗಳು ಹೂಡಿಕೆ ಮಾಡಲು ಒಲವು ತೋರಿವೆ.

Read Full Story

08:04 AM (IST) Feb 01

ಮಕ್ಕಳು ಚರಂಡಿ ನೀರಿನಲ್ಲಿ ತಟ್ಟೆ ತೊಳೆದ ಪ್ರಕರಣ - ಸಮರ್ಪಕ ಉತ್ತರ ನೀಡದ ಶಿಕ್ಷಕಿಗೆ ಶಿಕ್ಷೆ

ಜಮಖಂಡಿ ತಾಲೂಕಿನ ಆಲಬಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಚರಂಡಿ ನೀರಿನಲ್ಲಿ ತಟ್ಟೆ ತೊಳೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಹಶಿಕ್ಷಕಿ ನಂದಾ ಕುಲಕರ್ಣಿ ಅವರನ್ನು ಅಮಾನತುಗೊಳಿಸಲಾಗಿದೆ. 

Read Full Story

07:52 AM (IST) Feb 01

Union Budget 2026 - ಬಜೆಟ್‌ ಅರ್ಥ ಆಗ್ಬೇಕಾ? ಮೊದಲು ಇದನ್ನು ಓದಿ

Meaning and explanation of terms related to economics: ಬಜೆಟ್ ಮಂಡನೆಯಲ್ಲಿ ಬಳಸಲಾಗುವ ಜಿಡಿಪಿ, ವಿತ್ತೀಯ ಕೊರತೆ, ನೇರ ಮತ್ತು ಪರೋಕ್ಷ ತೆರಿಗೆಗಳಂತಹ ಹಲವಾರು ಆರ್ಥಿಕ ಪದಗಳನ್ನು ಈ ಲೇಖನವು ಸರಳವಾಗಿ ವಿವರಿಸುತ್ತದೆ.

Read Full Story

More Trending News