ಕೊಡಗು: ರಾಜ್ಯ ಸರ್ಕಾರವು ಸಾರ್ವಜನಿಕ ಹಾಗೂ ಸರ್ಕಾರಿ ಆವರಣಗಳ ಬಳಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಮಸೂದೆ ತರುತ್ತಿದೆಯೇ ಹೊರತು ಆರೆಸ್ಸೆಸ್ ನಿಯಂತ್ರಿಸಲು ಮಸೂದೆ ತರುತ್ತಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ, ಆರ್ಎಸ್ಎಸ್ ನೋಂದಣಿಗೆ ಸಂಬಂಧಿಸಿ ಆರ್ಎಸ್ಎಸ್ ಮುಖಂಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಯಾರ ಮನಸನ್ನು ನೋಯಿಸಲು ಈ ಕಾನೂನು ಮಾಡುತ್ತಿಲ್ಲ. ನ್ಯಾಯಾಲಯದ ಆದೇಶಗಳನ್ನು ಪಾಲಿಸಿಯೇ ಕಾನೂನು ರೂಪಿಸುತ್ತಿದ್ದೇವೆ. ನ್ಯಾಯಾಲಯದ ಕಾನೂನಿಗೆ ಗೌರವ ಕೊಡಬೇಕಲ್ಲವೇ? ಎಂದು ಪ್ರಶ್ನಿಸಿದರು.
ನಾವು ಭಾರತ್ ಜೋಡೋ ಕಾರ್ಯಕ್ರಮ ಮಾಡುವಾಗ ಫ್ರೀಡಂ ಪಾರ್ಕ್ನಿಂದ ರ್ಯಾಲಿ ಮಾಡಲು ಅವಕಾಶವಿರಲಿಲ್ಲ. ಆಗ ಕೋರ್ಟ್ನಿಂದಲೇ ಅನುಮತಿ ಪಡೆದಿದ್ದೆವು. ನಮ್ಮದೇ ಸರ್ಕಾರ ಇದ್ದರೂ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳಲಿಲ್ಲ. ಬಿ.ಎಲ್. ಸಂತೋಷ್ ಅವರು ಹಿರಿಯರು. ಅವರ ಮಾತಿಗೂ ಗೌರವ ಕೊಡುತ್ತೇವೆ. ಆದರೆ, ಮೊದಲಿಗೆ ಕಾನೂನಿಗೆ ಗೌರವ ಕೊಡಬೇಕು ಎಂದರು.
11:08 PM (IST) Aug 17
ಬಿಡದಿ ಟೌನ್ಶಿಪ್ ವಿರೋಧಿಸಿ ನಾಳೆ ಫ್ರೀಡಂ ಪಾರ್ಕ್ನಲ್ಲಿ ಜೆಡಿಎಸ್ ಬೃಹತ್ ಪ್ರತಿಭಟನೆ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.
10:45 PM (IST) Aug 17
ದಾವಣಗೆರೆಯ ಕಮ್ಮಾರಗಟ್ಟೆಯಲ್ಲಿ ನಡೆದ ಕಾರ್ಣಿಕೋತ್ಸವದಲ್ಲಿ 'ಭೂಲೋಕದ ಮುತ್ತು ಗಗನಕ್ಕೆ ಏರಿತಲೆ' ಎಂಬ ಭವಿಷ್ಯವಾಣಿ ಕೇಳಿಬಂದಿದೆ. ಇದು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಸೂಚನೆಯೋ ಅಥವಾ ರೈತರ ಬೆಳೆಗೆ ಸಿಗುವ ಬಂಪರ್ ಬೆಲೆಯ ಮುನ್ಸೂಚನೆಯೋ ಎಂಬ ಚರ್ಚೆ ಭಕ್ತರಲ್ಲಿ ಶುರುವಾಗಿದೆ.
10:40 PM (IST) Aug 17
Rishab Shetty IFFM: ಮೆಲ್ಬೋರ್ನ್ನ ಅಂತರರಾಷ್ಟ್ರೀಯ ರೆಡ್ ಕಾರ್ಪೆಟ್ನಲ್ಲಿ ನಟ ರಿಷಬ್ ಶೆಟ್ಟಿ ತಮ್ಮ ತವರು ಕರ್ನಾಟಕದ ಸಂಸ್ಕೃತಿ ಹಾಗೂ ಪರಂಪರೆಯನ್ನು ಹೆಮ್ಮೆಯಿಂದ ಪ್ರತಿನಿಧಿಸಿದ್ದಾರೆ.
10:35 PM (IST) Aug 17
10:15 PM (IST) Aug 17
ಪ್ರಜ್ವಲ್ ರೇವಣ್ಣ ಬ್ಯಾರಕ್ನಲ್ಲಿ ಮೊಬೈಲ್ ಸಿಕ್ಕ ಬೆನ್ನಲ್ಲೇ ಪರಪ್ಪನ ಅಗ್ರಹಾರದ 'ಸಿ' ಬ್ಯಾರಕ್ನಲ್ಲಿ ದೇವರ ಫೋಟೋ ಹಿಂದೆ ಬಚ್ಚಿಟ್ಟಿದ್ದ ಮತ್ತೊಂದು ಮೊಬೈಲ್ ಪತ್ತೆಯಾಗಿದೆ. ಹಾಗಿದ್ದರೆ ಆ ಮೊಬೈಲ್ ಯಾರದ್ದು?
10:09 PM (IST) Aug 17
09:58 PM (IST) Aug 17
09:29 PM (IST) Aug 17
Veteran Actress Saritha: ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕೇವಲ ಸೌಂದರ್ಯ ಮತ್ತು ಗ್ಲಾಮರ್ನಿಂದಲ್ಲದೆ, ಅಸಾಧಾರಣ ಅಭಿನಯದ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ಕೆಲವೇ ಕೆಲವು ನಟಿಯರಲ್ಲಿ ಸರಿತಾ ಪ್ರಮುಖರು.
09:18 PM (IST) Aug 17
ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬ್ಯಾರಕ್ನಲ್ಲಿ ಮೊಬೈಲ್ ಪತ್ತೆಯಾದ ಬಳಿಕ ಕಟ್ಟುನಿಟ್ಟಿನ ನಿಯಮ ಜಾರಿಯಾಗಿದ್ದು, ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೊಳ್ಳೆಗಳ ಕಾಟಕ್ಕೆ ಹೈರಾಣಾಗಿದ್ದಾರೆ. ಸೊಳ್ಳೆ ಪರದೆ ಇಲ್ಲದೆ ಕಳೆದ ಎರಡು ದಿನಗಳಿಂದ ದರ್ಶನ್ ಸರಿಯಾಗಿ ನಿದ್ರೆ ಮಾಡದೆ ಮಾನಸಿಕವಾಗಿ ಕುಗ್ಗಿದ್ದಾರೆ.
09:13 PM (IST) Aug 17
ಅಮಿತ್ ಮಾಳವೀಯ ಅವರ ಜಾಗಕ್ಕೆ ದೀಪಕ್ ಮಾಸ್ಕೆ ಅವರನ್ನು ನೇಮಿಸುವ ಮೂಲಕ ಬಿಜೆಪಿ ತನ್ನ ಐಟಿ ಸೆಲ್ನಲ್ಲಿ ದೊಡ್ಡ ಬದಲಾವಣೆ ಮಾಡಿದೆ. ಈ ಬದಲಾವಣೆಯು ಆಕ್ರಮಣಕಾರಿ ಪ್ರಚಾರದಿಂದ ವೈಜ್ಞಾನಿಕ ದತ್ತಾಂಶ ವಿಶ್ಲೇಷಣೆ ಮತ್ತು ಫಲಾನುಭವಿಗಳ ಡೇಟಾ ನಿರ್ವಹಣೆಯತ್ತ ಸಾಗುವ ಬಿಜೆಪಿಯ ಹೊಸ ಡಿಜಿಟಲ್ ತಂತ್ರವನ್ನು ಸೂಚಿಸುತ್ತದೆ.
08:50 PM (IST) Aug 17
South Indian Actresses: ಕೆಲವು ನಾಯಕಿಯರಿಗೆ ಚಿತ್ರರಂಗದಲ್ಲಿ ‘ಆಲ್ ಆಕ್ಸೆಸ್ ಪಾಸ್’ ಸಿಕ್ಕಂತಿದೆ. ಒಂದೇ ಒಂದು ಇಂಡಸ್ಟ್ರಿಗೆ ಸೀಮಿತವಾಗದೆ, ಬಹುತೇಕ ಎಲ್ಲಾ ಭಾಷೆಗಳಲ್ಲೂ ತಮ್ಮ ಪ್ರತಿಭೆಯ ಮೂಲಕ ಛಾಪು ಮೂಡಿಸುತ್ತಿದ್ದಾರೆ.
08:43 PM (IST) Aug 17
08:07 PM (IST) Aug 17
ಕಳೆದ 20 ವರ್ಷಗಳಿಂದ ಖಾಲಿ ಇದ್ದ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಗೆ ಕೆಎಎಸ್ ಅಧಿಕಾರಿ ರವಿಚಂದ್ರ ನಾಯಕ ಅವರ ನೇಮಕವಾಗಿದ್ದು, ನೆನೆಗುದಿಗೆ ಬಿದ್ದಿದ್ದ ಈ ರೈಲ್ವೆ ಯೋಜನೆಗೆ ಮತ್ತೆ ಚಾಲನೆ ಸಿಕ್ಕಂತಾಗಿದೆ.
07:41 PM (IST) Aug 17
07:38 PM (IST) Aug 17
ಬೆಂಗಳೂರಿನ ಕಾಮರಾಜ ರಸ್ತೆಯಲ್ಲಿ ಮೂರು ದಿನಗಳಿಂದ ಬೀಗ ಹಾಕಿದ್ದ ಮನೆಯೊಳಗೆ ಸಿಲುಕಿದ್ದ ಬೆಕ್ಕನ್ನು ಭಾರತೀನಗರ ಪೊಲೀಸರು 112 ಗೆ ಕರೆ ಬಂದ 7 ನಿಮಿಷದಲ್ಲಿ ಸ್ಥಳಕ್ಕೆ ಬಂದು ರಕ್ಷಿಸಿದ್ದಾರೆ. ಪೊಲೀಸರ ಈ ಮಾನವೀಯ ಕಾರ್ಯವನ್ನು ಕಂಡು ಅಲ್ಲಿದ್ದ ಪುಟ್ಟ ಬಾಲಕನೊಬ್ಬ ಭಾವುಕನಾಗಿ ಕಣ್ಣೀರು ಹಾಕಿದ್ದಾನೆ.
06:45 PM (IST) Aug 17
ಕನ್ನಡ ಚಿತ್ರರಂಗದಲ್ಲಿ ವೆಬ್ಸೀರಿಸ್ಗಳತ್ತ ಮುಖ ಮಾಡುತ್ತಿರುವ ಕಲಾವಿದರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳು ವಿಭಿನ್ನ ಫಾರ್ಮ್ಯಾಟ್ಗಳು ಹಾಗೂ ಕಥೆಗಳಿಗೆ ಅವಕಾಶ..
06:25 PM (IST) Aug 17
ದೆಹಲಿ ವಕೀಲರೊಬ್ಬರು ತಮ್ಮ Gen Z ಇಂಟರ್ನ್ಗೆ 9 ಗಂಟೆಗೆ ಕೋರ್ಟ್ಗೆ ಬರಲು ಹೇಳಿದಾಗ, ಜಿಮ್ ಸಮಯಕ್ಕೆ ಅಡ್ಡಿಯಾಗುತ್ತದೆ ಎಂದು ಆತ ನಿರಾಕರಿಸಿದ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೃತ್ತಿಪರ ಜವಾಬ್ದಾರಿ ಮತ್ತು ವರ್ಕ್-ಲೈಫ್ ಬ್ಯಾಲೆನ್ಸ್ ಕುರಿತು ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.
06:21 PM (IST) Aug 17
Mudhol Movie: ಬಹುಕಾಲದಿಂದ ನಿರೀಕ್ಷೆ ಮೂಡಿಸಿರುವ ನಟ-ನಿರ್ಮಾಪಕ ವಿಕ್ರಮ್ ರವಿಚಂದ್ರನ್ ಅಭಿನಯದ ‘ಮುಧೋಳ್’ ಸಿನಿಮಾ ಇದೀಗ ಮತ್ತೆ ಸುದ್ದಿಯಲ್ಲಿದೆ. ಚಿತ್ರದ ಮೊದಲ ಹಾಡು ‘ಗುಚ್ಚಿ ಗರ್ಲ್’ ಬಿಡುಗಡೆಯಾಗಿದೆ.
06:17 PM (IST) Aug 17
ಹನಿಮೂನ್ ವೇಳೆ ಪತ್ನಿಗೆ ಮುಟ್ಟಾಗಿದ್ದಕ್ಕೆ "ಮೂಡ್ ಹಾಳು ಮಾಡಿದೆ" ಎಂದು ಆಕೆಯ ಮೇಲೆ ಪತಿ ಭೀಕರ ಹಲ್ಲೆ ನಡೆಸಿ, ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಅಂಡಮಾನ್ನಲ್ಲಿ ನಡೆದಿದೆ. ಇನ್ನೊಂದು ವಿಚಾರ ಏನೆಂದರೆ ಪ್ರಕರಣ ನಡೆದ ಬರೋಬ್ಬರಿ ಮೂರು ವರ್ಷಗಳ ನಂತರ ಕೇಸ್ ದಾಖಲಾಗಿದೆ..
06:02 PM (IST) Aug 17
ವಾಹನಗಳ ಫ್ಯಾನ್ಸಿ ನೋಂದಣಿ ಸಂಖ್ಯೆಗಳ ಮೇಲಿನ ವ್ಯಾಮೋಹದಿಂದಾಗಿ ಸಾರಿಗೆ ಇಲಾಖೆಯು 2025-26ನೇ ಸಾಲಿನಲ್ಲಿ ಇ-ಹರಾಜಿನ ಮೂಲಕ ದಾಖಲೆಯ 118.14 ಕೋಟಿ ರೂ. ಆದಾಯ ಗಳಿಸಿದೆ.
05:49 PM (IST) Aug 17
ಆ ಒಬ್ಬ ಕನ್ನಡಿಗ, ಸೌರವ್ ಗಂಗೂಲಿಯರಿಗೆ ಆ ಒಬ್ಬ ಕನ್ನಡಿಗ ನೀಡಿದ ಶಾಕ್ಗೆ. ಗಂಗೂಲಿ ತಮ್ಮ ನಾಯಕತ್ವವನ್ನೇ ತ್ಯಜಿಸಲು ಮುಂದಾಗಿದ್ದರು. ಈ ಘಟನೆಯನ್ನು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಇತ್ತೀಚೆಗೆ ನೆನಪಿಸಿಕೊಂಡಿದ್ದಾರೆ. ಆ ಘಟನೆ ಯಾವುದು ಗೊತ್ತಾ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
05:41 PM (IST) Aug 17
Russian Singer Diana Ankudinova: ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಈಗಾಗಲೇ ಟೀಸರ್, ಹಾಡುಗಳು ಮತ್ತು ಟ್ರೇಲರ್ ಮೂಲಕ ಭಾರೀ ಕುತೂಹಲ ಮೂಡಿಸಿದೆ.
05:31 PM (IST) Aug 17
ನಟ ಪ್ರಕಾಶ್ ರಾಜ್ ನೇತೃತ್ವದ ನಾಗರಿಕ ಸಂಘಟನೆಗಳ ನಿಯೋಗ ಡಿಕೆಶಿ ಅವರನ್ನು ಭೇಟಿಯಾಗಿ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಕೈಬಿಡಲಾಗುತ್ತಿರುವ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿತು. ಮತದಾನದ ಹಕ್ಕನ್ನು ರಕ್ಷಿಸಲು ಈ ಪ್ರಕ್ರಿಯೆಯ ಕಾಲಾವಕಾಶವನ್ನು ವಿಸ್ತರಿಸುವಂತೆ ಮತ್ತು ಲೋಪದೋಷಗಳನ್ನು ಸರಿಪಡಿಸುವಂತೆ ಅವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
05:03 PM (IST) Aug 17
04:54 PM (IST) Aug 17
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಖುದ್ದು ಕೋರ್ಟ್ಗೆ ಹಾಜರಾಗಲು ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿ ದೊಡ್ಡ ಹಿನ್ನಡೆ ನೀಡಿದೆ. ಬದಲಾಗಿ, ವಿಚಾರಣೆಗೆ ಸ್ಪಷ್ಟ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಹಾಗೂ ವಕೀಲರೊಂದಿಗೆ ಗೌಪ್ಯ ಮಾತುಕತೆಗೆ ಅವಕಾಶ ನೀಡುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿದೆ.
04:49 PM (IST) Aug 17
ಬೆಂಗಳೂರಿನ BTM ಲೇಔಟ್ನಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಮೇಲೆ ಕಲ್ಲು ಹಾಗೂ ಚೂಪಾದ ವಸ್ತುವಿನಿಂದ ಗೀಚಿ, ಬಾನೆಟ್ ಮೇಲೆ 'ನೋ ಪಾರ್ಕಿಂಗ್' ಎಂದು ಕೆತ್ತಿ ವಿಕೃತಿ ಮೆರೆದ ಆಘಾತಕಾರಿ ಘಟನೆ ನಡೆದಿದೆ. ಈ ಅಮಾನವೀಯ ಕೃತ್ಯದ ವಿರುದ್ಧ ವಾಹನ ಮಾಲೀಕರು ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
04:34 PM (IST) Aug 17
Kichcha Sudeep Net Worth: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಂದಾಜು ನಿವ್ವಳ ಮೌಲ್ಯ ಎಷ್ಟು? ಅವರ ಆದಾಯದ ಮೂಲಗಳೇನು? ಯಾವ ರೀತಿಯ ಐಷಾರಾಮಿ ಜೀವನವನ್ನು ಅವರು ನಡೆಸುತ್ತಿದ್ದಾರೆ? ನೋಡೋಣ.
04:05 PM (IST) Aug 17
Rocking Star Yash: ದೇಶದ ಅತ್ಯಂತ ಪ್ರಸಿದ್ಧ ಈ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೊದಲ ಕನ್ನಡಿಗ ಯಶ್ ಆಗಿದ್ದಾರೆ. ಹಿಂದಿ ಭಾಷೆಯಲ್ಲಿ ನಡೆದ ಅವರ ಕುತೂಹಲಕರ ಸಂದರ್ಶನದ ಆಯ್ದಭಾಗ ಇಲ್ಲಿದೆ.
10:58 AM (IST) Aug 17
ಹೊಸನಗರ ತಾಲೂಕಿನ ಕೊಡಚಾದ್ರಿ ಬೆಟ್ಟದಲ್ಲಿ, ಚಾರಣಕ್ಕೆ ಬಂದಿದ್ದ ಕುಮಟಾ ಮೂಲದ ಪ್ರದೀಪ್ ಎಂಬ ಪ್ರವಾಸಿಗರು ತಲೆಸುತ್ತು ಬಂದು ಸುಮಾರು 60 ಅಡಿ ಆಳದ ಕಂದಕಕ್ಕೆ ಬಿದ್ದಿದ್ದಾರೆ. ಸ್ಥಳೀಯ ಜೀಪ್ ಚಾಲಕರು ಸಮಯಪ್ರಜ್ಞೆಯಿಂದ ಹಗ್ಗ ಬಳಸಿ ಅವರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.
09:53 AM (IST) Aug 17
ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಅನ್ಯಭಾಷಿಕ ನಿವಾಸಿಗಳು ನಿಂದಿಸಿ, ವಾಟ್ಸಾಪ್ ಗ್ರೂಪ್ನಿಂದ ತೆಗೆದುಹಾಕಿದ್ದಾರೆ. ನಮ್ಮ ನೆಲದಲ್ಲಿ ನಮ್ಮ ಭಾಷೆ ಮಾತನಾಡಿ ಎನ್ನುವುದು ತಪ್ಪೇ ಎಂದು ನಟಿ ಪ್ರಶ್ನಿಸಿದ್ದು, ಘಟನೆ ಚರ್ಚೆಗೆ ಗ್ರಾಸವಾಗಿದೆ.
08:50 AM (IST) Aug 17
08:24 AM (IST) Aug 17
'ಕರ್ಣ' ಸೀರಿಯಲ್ನಿಂದ ನಟಿ ನಮ್ರತಾ ಗೌಡ ದೂರವಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದೀಗ ಅವರು ಬಿಗ್ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಅವರಿಗೆ ಸರ್ಪ್ರೈಸ್ ಭೇಟಿ ನೀಡಿದ್ದಾರೆ.
06:38 AM (IST) Aug 17
06:28 AM (IST) Aug 17
ಕಳೆದ 30 ವರ್ಷಗಳಿಂದ ಮದ್ಯ ಮತ್ತು ಗುಟ್ಕಾವನ್ನು ಸಂಪೂರ್ಣವಾಗಿ ನಿಷೇಧಿಸಿ ರಾಜ್ಯಕ್ಕೆ ಈ ಗ್ರಾಮ ಮಾದರಿಯಾಗಿದೆ. ಈ ಸಾಮೂಹಿಕ ನಿರ್ಧಾರದಿಂದಾಗಿ ಗ್ರಾಮದಲ್ಲಿ ಯುವಕರು ಸರಿದಾರಿಯಲ್ಲಿದ್ದು, ಆರೋಗ್ಯವಂತರಾಗಿದ್ದಾರೆ ಮತ್ತು ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.
06:19 AM (IST) Aug 17
06:08 AM (IST) Aug 17
05:58 AM (IST) Aug 17
ಕರ್ನಾಟಕ ಸರ್ಕಾರವು 'ಸರ್ಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿಗಳ ಬಳಕೆ ನಿಯಂತ್ರಣ ವಿಧೇಯಕ-2026' ಅನ್ನು ಜಾರಿಗೆ ತರಲು ಮುಂದಾಗಿದೆ. ಈ ವಿಧೇಯಕದ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಚಟುವಟಿಕೆಗಳಿಗೆ ಸರ್ಕಾರದ ಅನುಮತಿ ಕಡ್ಡಾಯವಾಗಲಿದ್ದು, ನಿಯಮ ಉಲ್ಲಂಘಿಸಿದರೆ ಜಾಮೀನು ರಹಿತ ಅಪರಾಧವಾಗಿ ಪರಿಗಣಿಸಿ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.
05:41 AM (IST) Aug 17
05:30 AM (IST) Aug 17