ಕಪಿಲ್‌ ದೇವ್‌ಗೆ ICUನಲ್ಲಿ ಚಿಕಿತ್ಸೆ, ಕುಕ್ಕೆ ದೇವಳದ ಆಭರಣ ನಾಪತ್ತೆ; ಅ.23ರ ಟಾಪ್ 10 ಸುದ್ದಿ!

By Suvarna NewsFirst Published Oct 23, 2020, 4:43 PM IST
Highlights

ತೀವ್ರ ಎದೆನೋವು ಕಾಣಿಸಿಕೊಂಡ ಮಾಜಿ ನಾಯಕ ಕಪಿಲ್ ದೇವ್ ದೆಹಲಿಯ ಫೋರ್ಟೀಸ್ ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನವೆಂಬರ್ 17 ರಿಂದ ರಾಜ್ಯಾದ್ಯಂತ ಡಿಗ್ರಿ ಕಾಲೇಜ್ ಓಪನ್ ಮಾಡಲು ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.  ಕುಕ್ಕೆ ದೇವಳದ ಕೋಟ್ಯಂತರ ರೂ. ಬೆಲೆಬಾಳುವ ಆಭರಣ ನಾಪತ್ತೆಯಾಗಿದೆ. ನಿಖಿಲ್ ಕುಮಾರಸ್ವಾಮಿ ವಿರುದ್ಧ ಆರೋಪ,  ಧೋನಿ ಪಡೆಗೆ ಮುಂಬೈ ಸವಾಲು ಸೇರಿದಂತೆ ಅಕ್ಟೋಬರ್ 23ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ದಿಗ್ಗಜ ಕ್ರಿಕೆಟಿಗ ಕಪಿಲ್‌ದೇವ್‌ಗೆ ತೀವ್ರ ಹೃದಯಾಘಾತ, ಆಸ್ಪತ್ರೆ ದಾಖಲು!...

ಟೀಂ ಇಂಡಿಯಾ ಮಾಜಿ ನಾಯಕ, 1983ರ ವಿಶ್ವಕಪ್ ಕಪ್ ವಿಜೇತ ನಾಯಕ ಕಪಿಲ್ ದೇವ್‌ ತೀವ್ರ ಹೃದಯಾಘಾತದಿಂದ ಆಸ್ಪತ್ರೆ ದಾಖಲಾಗಿದ್ದಾರೆ. 


ಸೋಷಿಯಲ್ ಮೀಡಿಯಾಗೆ ಸೆಲ್ಫೀ ಪೋಸ್ಟ್ ಮಾಡ್ತೀರಾ..? ಡೀಪ್ ಫೇಕ್ ಸಿಕ್ಕಾಪಟ್ಟೆ ಡೇಂಜರ್...

ಸೆಲ್ಫೀ ತೆಗೆದು ಸೋಷಿಯಲ್ ಮೀಡಿಯಾಗೆ ಪೋಸ್ಟ್ ಮಾಡೋ ಅಭ್ಯಾಸ ಇದೆಯಾ...? ಹಾಗಾದ್ರೆ ಈ ಸುದ್ದಿ ಸ್ವಲ್ಪ ಭಯಹುಟ್ಟಿಸಬಹುದು. ಒಂದು ಸಲ ನಿಮ್ಮ ಆಕ್ಷೇಪಾರ್ಹ ಫೊಟೋ ಏನಾದರೂ ಸೋಷಿಯಲ್ ಮೀಡಿಯಾಗೆ ಪೋಸ್ಟ್ ಆದ್ರೆ ನಂತರ ಅದನ್ನು ನೀವು ಬೇಕು ಅಂದ್ರೂ ರಿಮೂವ್ ಮಾಡೋದು ಸಿಕ್ಕಾಪಟ್ಟೆ ಕಷ್ಟ.

ಹಾಲಿ ಚಾಂಪಿಯನ್ ಮುಂಬೈಗಿಂದು ಎಂ ಎಸ್ ಧೋನಿ ಪಡೆ ಸವಾಲು..!...

ಶಾರ್ಜಾ ಮೈದಾನದಲ್ಲಿಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸವಾಲನ್ನು ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸ್ವೀಕರಿಸಲಿದೆ. 

ಯಾರೀ ಸಾಥ್ವಿಕಾ ಅಪ್ಪಯ್ಯ? ನೀವು ಕೇಳಲೇ ಬೇಕು ಈಕೆಯ ಬಗ್ಗೆ!...

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ ಸಾಥ್ವಿಕಾ ಅಪ್ಪಯ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್‌. ಟ್ರೆಂಡಿ ಲುಕ್‌ನಲ್ಲಿ ಮಿಂಚುವ ಸಾಥ್ವಿಕಾ ಈ ಫೋಟೋಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿ ಕೊಂಡಿದ್ದಾರೆ.

ಕುಕ್ಕೆ ದೇವಳದ ಕೋಟ್ಯಂತರ ರೂ. ಬೆಲೆಬಾಳುವ ಆಭರಣ ನಾಪತ್ತೆ...

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧಿಕೃತ ದಾಖಲಾತಿ ಪುಸ್ತಕದಲ್ಲಿ ದಾಖಲಾಗಿರುವ ಕೋಟ್ಯಂತರ ರೂಪಾಯಿ ಬೆಲೆಬಾಳುವ ವಜ್ರದ ಕಂಠಿಹಾರ, ಆಭರಣಗಳು, ಶ್ರೀ ಸತ್ಯನಾರಾಯಣ ದೇವರ ಫೋಟೋ, ಶ್ರೀ ಕುಕ್ಕೆ ಲಿಂಗ ದೇವಳದ ಬಳಿ ಇದ್ದ ಬೆಳ್ಳಿಯ ಒಡವೆಗಳು, ಪುರಾತನ ಕಾಲದ ವಿಗ್ರಹಗಳು ನಾಪತ್ತೆ

ದೇಶದಲ್ಲೇ ಅತಿ ಹೆಚ್ಚು ಬಂಡವಾಳ ಹೂಡಿಕೆಗೆ ಆಕರ್ಷಿಸಿದ ಕರ್ನಾಟಕ...

ರಾಜ್ಯದಲ್ಲಿ ಕೈಗಾರಿಕೆಗಳಿಗೆ ಪೂರಕ ವಾತಾವರಣ ನಿರ್ಮಿಸಿದ್ದು, ರಾಜ್ಯದಲ್ಲಿ ಹೂಡಿಕೆಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉದ್ಯಮ ಸಂಸ್ಥೆಗಳಲ್ಲಿ ಮನವಿ ಮಾಡಿದ್ದಾರೆ.

15 ವರ್ಷದಲ್ಲೇ ಬಲವಂತದ ಸೆಕ್ಸ್: ಲೈಂಗಿಕ ದೌರ್ಜನ್ಯ ಎದುರಿಸಿದ ಆಸ್ಕರ್ ನಟ..!...

ಹಾಲಿವುಡ್ ಖ್ಯಾತ ನಟ ಮಾಥ್ಯೂ ಮೆಕ್‌ಕೊನೌಘೆ ತಾನು ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.


ನ.17 ರಿಂದ ರಾಜ್ಯಾದ್ಯಂತ ಡಿಗ್ರಿ ಕಾಲೇಜ್ ಓಪನ್; ವಿದ್ಯಾರ್ಥಿಗಳಿಗಿದೆ ಈ ಆಪ್ಷನ್!...

ನವೆಂಬರ್ 17 ರಿಂದ ರಾಜ್ಯಾದ್ಯಂತ ಡಿಗ್ರಿ ಕಾಲೇಜ್ ಓಪನ್ ಮಾಡಲು ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸಿದ್ಧತೆ ಕೂಡಾ ಶುರುವಾಗಿದೆ. 

ಲೆಸ್ಬಿಯನ್ ಪೆಂಗ್ವಿನ್‌ನಿಂದ ಮೊಟ್ಟೆಯ ಗೂಡನ್ನೇ ಕದ್ದೊಯ್ದ ಗೇ ಪೆಂಗ್ವಿನ್..!...

ಗೇ ಪೆಂಗ್ವಿನ್ ಜೋಡಿಯೊಂದು ಪಕ್ಕದ ಲೆಸ್ಬಿಯನ್ ಪೆಂಗ್ವಿನ್ ಜೋಡಿಯ ಮೊಟ್ಟೆಯ ಗೂಡನ್ನೇ ಕದ್ದಿರುವಂತಹ ಘಟನೆ ಡಚ್ ಮೃಗಾಲಯದ ಕ್ವೀರ್ ಪೆಂಗ್ವಿನ್ ಗುಂಪಿನಲ್ಲಿ ನಡೆದಿದೆ.

ನಿಖಿಲ್ ಕುಮಾರಸ್ವಾಮಿ ವಿರುದ್ಧ ಆರೋಪ : ಉತ್ತರ ನೀಡಲು ಸಜ್ಜಾದ ಯುವರಾಜ...

ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಿರುದ್ಧ ಆರೋಪ ಕೇಳಿ ಬಂದ ಹಿನ್ನೆಲೆ ಅದಕ್ಕೆ ಉತ್ತರ ನೀಡಲು ಸಜ್ಜಾಗಿದ್ದಾರೆ

click me!