Published : May 13, 2025, 05:39 AM ISTUpdated : May 13, 2025, 06:19 PM IST

Operation Sindoor Live: ಟ್ರಾವೆಲ್ ಸಂಸ್ಧೆ ನಿರ್ಧಾರದಿಂದ ಪಾಕ್ ಬೆಂಬಲಿಸಿದ ಚೀನಾ, ಟರ್ಕಿ, ಅಜರ್‌ಬೈಜಾನ್‌ ಕಂಗಾಲು

ಸಾರಾಂಶ

ಪಹಲ್ಗಾಂ ದಾಳಿಗೆ 2 ತಿಂಗಳ ಮೊದಲು, ಉಪಗ್ರಹ ಚಿತ್ರಗಳ ಸೇವೆ ನೀಡುವ ಅಮೆರಿಕ ಮೂಲದ ಕಂಪನಿಗೆ ಪಹಲ್ಗಾಂ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳಿಗೆ ಅಪಾರ ಬೇಡಿಕೆ ಬಂದಿತ್ತು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಮ್ಯಾಕ್ಸರ್ ಟೆಕ್ನಾಲಜೀಸ್ ಎಂಬ ಕಂಪನಿಗೆ ಫೆ.2 ಮತ್ತು 22ರ ನಡುವೆ ಪಹಲ್ಗಾಂನ ಉಪಗ್ರಹ ಚಿತ್ರಗಳಿಗಾಗಿ ಕನಿಷ್ಠ 12 ಮನವಿಗಳು ಬಂದಿದ್ದವು. 2024ರಲ್ಲಿ ಪಾಕಿಸ್ತಾನ ಮೂಲದ ಬ್ಯುಸಿನೆಸ್ ಸಿಸ್ಟಮ್ಸ್ ಎಂಬ ಸಂಸ್ಥೆ ಮ್ಯಾಕ್ಸರ್‌ನ ಜೊತೆ ಪಾಲುದಾರಿಕೆ ಮಾಡಿಕೊಂಡಿತ್ತು. ಅದಾದ ಬಳಿಕ ಕಾಶ್ಮೀರ ಭೂಭಾಗದ ಚಿತ್ರಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಅದರಲ್ಲೂ 2025ರ ಫೆ2ರ ಬಳಿಕ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಜತೆ ಪಾಲುದಾರಿಕೆ ಹೊಂದಿದ ಬಳಿಕ ಬೇಡಿಕೆಯಲ್ಲಿ ಏರಿಕೆಯಾಗಿದೆ. ಹೀಗೆ ಬೇಡಿಕೆ ಬಂದ ಪ್ರದೇಶಗಳ ಪೈಕಿ ಪಹಲ್ಗಾಂ, ಪುಲ್ವಾಮಾ, ಅನಂತ್‌ನಾಗ್, ಪೂಂಛ್, ರಜೌರಿ ಮೊದಲಾದ ಸೂಕ್ಷ್ಮ ಪ್ರದೇಶಗಳು ಸೇರಿವೆ. ಒಂದು ಚಿತ್ರಕ್ಕೆ ಕನಿಷ್ಠ 3 ಲಕ್ಷ ರು.ಗಳನ್ನು ಮ್ಯಾಕ್ಸರ್ ಕಂಪನಿ ವಿಧಿಸುತ್ತದೆ.

Operation Sindoor Live: ಟ್ರಾವೆಲ್ ಸಂಸ್ಧೆ ನಿರ್ಧಾರದಿಂದ ಪಾಕ್ ಬೆಂಬಲಿಸಿದ  ಚೀನಾ, ಟರ್ಕಿ, ಅಜರ್‌ಬೈಜಾನ್‌ ಕಂಗಾಲು

11:10 PM (IST) May 13

ಟ್ರಾವೆಲ್ ಸಂಸ್ಧೆ ನಿರ್ಧಾರದಿಂದ ಪಾಕ್ ಬೆಂಬಲಿಸಿದ ಚೀನಾ, ಟರ್ಕಿ, ಅಜರ್‌ಬೈಜಾನ್‌ ಕಂಗಾಲು

ಭಾರತದ ಉಗ್ರರ ನೆಲೆ ಟಾರ್ಗೆಟ್ ಮಾಡಿದ್ದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತದ ಮೇಲೆ ನಡೆಸಿದ ವಿಫಲ ದಾಳಿಗೆ ನೆರವು ನೀಡಿದ ದೇಶಗಳು ಇದೀಗ ಕಂಗಾಲಾಗಿದೆ. ಭಾರತದಲ್ಲಿ ಇದೀಗ ಪಾಕ್ ಬೆಂಬಲಿಸಿದ ರಾಷ್ಟ್ರಗಳ ಬಾಯ್ಕಾಟ್ ಅಭಿಯಾನ ತೀವ್ರಗೊಳ್ಳುತ್ತಿದೆ. ಟ್ರಾವೆಲ್ ಸಂಸ್ಥೆ ನಿರ್ಧಾರದಿಂದ ಚೀನಾ, ಟರ್ಕಿ, ಅಜರ್‌ಬೈಜಾನ್ ಕಂಗಾಲಾಗಿದೆ.

ಪೂರ್ತಿ ಓದಿ

09:14 PM (IST) May 13

23ರಲ್ಲಿ ಮದುವೆ, 30ರೊಳಗೆ ಮಕ್ಕಳು: 40 ದಾಟಿದ ಬಳಿಕ ಯುವ ಸಮೂಹ ನಾಚಿಸಿದ ಜೋಡಿ

20ರ ಆಸುಪಾಸಿನಲ್ಲಿ ಮದುವೆಯಾಗಿದೆ. ವಯಸ್ಸು 30 ದಾಟುವುದರೊಳಗೆ ಇಬ್ಬರು ಮಕ್ಕಳ ಪೋಷಕರಾಗಿದ್ದಾರೆ. ಈಗ ವಯಸ್ಸು 40 ದಾಟಿದೆ. ಆದರೆ ಈ ದಂಪತಿ ಯುವ ಸಮೂಹವನ್ನೇ ನಾಚಿಸಿದ್ದಾರೆ. ಪೋಷಕರ ರೀತಿ ಇದ್ದ ಈ ಜೋಡಿ ಇದೀಗ ಮಾಡೆಲ್ ರೀತಿ ಬದಲಾಗಿದ್ದಾರೆ.

ಪೂರ್ತಿ ಓದಿ

08:55 PM (IST) May 13

ಪಾಕ್​ನಲ್ಲೂ ಮೋದಿಗೆ ಜೈಜೈಕಾರ: ಅಚ್ಚರಿಯ ವಿಡಿಯೋ ವೈರಲ್​- ಜನರು ಏನಂದ್ರು ಕೇಳಿ...

ಭಾರತ ಮತ್ತು ಪಾಕಿಸ್ತಾನದ ಉದ್ವಿಗ್ನತೆಯ ನಡುವೆಯೂ ಪಾಕಿಸ್ತಾನದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಜನರು ಜೈಜೈಕಾರ ಹಾಕುತ್ತಿರುವ ವಿಡಿಯೋ ವೈರಲ್​ ಆಗಿದೆ. ಅವರು ಹೇಳಿದ್ದೇನು ಕೇಳಿ... 
 

ಪೂರ್ತಿ ಓದಿ

08:32 PM (IST) May 13

ರನೌಟ್ or ನಾಟೌಟ್? ತೀರ್ಪು ಬಳಿಕ ತಲೆಗೆ ಹುಳ ಬಿಟ್ಟ ಅಂಪೈರ್, ಹಲವರ ಕನ್ಫ್ಯೂಸ್ ಮಾಡಿದ ವಿಡಿಯೋ

ಕ್ರಿಕೆಟ್‌ನಲ್ಲಿ ಕೆಲ ಘಟನೆಗಳು ಭಾರಿ ಚರ್ಚೆಯಾಗುತ್ತದೆ. ಇದೀಗ ಈ ರನೌಟ್ ಅಥವಾ ನಾಟೌಟ್ ಅನ್ನೋ ಗೊಂದಲ ಶುರುವಾಗಿದೆ. ಕಾರಣ ಅಂಪೈರ್ ಕೊಟ್ಟ ತೀರ್ಪು ಇದೀಗ ಹಲವರ ಕನ್ಫ್ಯೂಸ್ ಮಾಡಿದೆ. ಈ ವಿಡಿಯೋ ನೋಡಿ ನಿಮ್ಮ ತೀರ್ಪು ಏನು?

ಪೂರ್ತಿ ಓದಿ

08:25 PM (IST) May 13

ನವಾಜ್ ಹೆಸರಿನಲ್ಲಿ ಪ್ರಧಾನಿ ಮೋದಿ ವಿರುದ್ಧ ವಿಡಿಯೋ ಪೋಸ್ಟ್ ಮಾಡಿದ ರಮೇಶ ಅರೆಸ್ಟ್!

ಪ್ರಧಾನಿ ಮೋದಿ ವಿರುದ್ಧ ಪ್ರಚೋದನಾತ್ಮಕ ವಿಡಿಯೋ ಪೋಸ್ಟ್ ಮಾಡಿದ ಆರೋಪದ ಮೇಲೆ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ರಮೇಶ್ ಬಾನೋತ್ ಎಂಬಾತ ನಕಲಿ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದ.

ಪೂರ್ತಿ ಓದಿ

07:28 PM (IST) May 13

ಪಾಕಿಸ್ತಾನದಲ್ಲಿ ಮತ್ತೆ ಮತ್ತೆ ಭೂಂಕಪ! ಪರಮಾಣು ಪರೀಕ್ಷೆ ನಡೆಸ್ತಿದ್ಯಾ ಪಾಕ್​? ಏನಂದ್ರು ತಜ್ಞರು?

 ಮೂರು ದಿನಗಳ ಅವಧಿಯಲ್ಲಿ ಪಾಕಿಸ್ತಾನದಲ್ಲಿ ಇಂದು ಮತ್ತೆ ಭೂಕಂಪನವಾಗಿದ್ದು,  ಅಲ್ಲಿ ಪರಮಾಣು ಪರೀಕ್ಷೆ ನಡೆಸಲಾಗುತ್ತಿದೆಯೇ ಎನ್ನುವ ಅನುಮಾನ ಕಾಡುತ್ತಿದೆ. ಇದಕ್ಕೆ ತಜ್ಞರ ಪ್ರತಿಕ್ರಿಯೆ ಏನು? 
 

ಪೂರ್ತಿ ಓದಿ

06:45 PM (IST) May 13

ಪಾಕ್ ಕರೆಯ ನಂತರ ಕದನ ವಿರಾಮ ಚರ್ಚೆ: ವಿದೇಶಾಂಗ ಸಚಿವಾಲಯ

ಅಮೆರಿಕದ ಜೊತೆ ವ್ಯಾಪಾರದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಹೇಳಿದರು.

 

ಪೂರ್ತಿ ಓದಿ

05:57 PM (IST) May 13

ಪಾಕಿಸ್ತಾನ ಜೊತೆ ಸೇರಿದ ರಾಷ್ಟ್ರಕ್ಕೆ ಶಾಕ್, ಭಾರತೀಯ ವರ್ತಕರಿಂಗ ಟರ್ಕಿ ಆ್ಯಪಲ್ ಬ್ಯಾನ್

ಭಾರತದ ಮೇಲೆ ಉಗ್ರರ ಬಿಟ್ಟು ಬಳಿಕ ಗಡಿಯಲ್ಲಿ ದಾಳಿ ನಡೆಸಿದ ಪಾಕಿಸ್ತಾನಕ್ಕೆ ನೆರವು ನೀಡಿದ್ದು ಟರ್ಕಿ. ಆದರೆ ಈ ಟರ್ಕಿಗೆ ಇದೀಗ ಭಾರತೀಯರು ಶಾಕ್ ನೀಡಿದ್ದಾರೆ.  ವರ್ತಕರು ಟರ್ಕಿ ಆ್ಯಪಲ್ ಬ್ಯಾನ್ ಮಾಡಿದ್ದಾರೆ. 

ಪೂರ್ತಿ ಓದಿ

05:21 PM (IST) May 13

ಯಾವುದೇ ದೇಶಕ್ಕೆ ಹೋದರೂ ಬೆಂಗಳೂರಿನ ಬಗ್ಗೆ ಮಾತನಾಡೋದು ಒಂದೇ ಟ್ರಾಫಿಕ್, ಟ್ರಾಫಿಕ್- ನಿಖಿಲ್ ಕಾಮತ್!

ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಮತ್ ಅವರು ತಮ್ಮ 'WTF' ಪಾಡ್‌ಕ್ಯಾಸ್ಟ್‌ನಲ್ಲಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯ ಬಗ್ಗೆ ನಗರದ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.

ಪೂರ್ತಿ ಓದಿ

05:15 PM (IST) May 13

ಮೈಕ್ರೋಸಾಫ್ಟ್‌ಗೆ 44, ಅಮೆಜಾನ್ 24 ವರ್ಷ ತೆಗೆದುಕೊಂಡರೆ ಫೇಸ್‌ಬುಕ್ ಕೇವಲ 17 ವರ್ಷದಲ್ಲಿ ಈ ಸಾಧನೆ

ಉದ್ಯಮ ಜಗತ್ತಿನಲ್ಲಿ ಈ ಮೈಲಿಗಲ್ಲು ಸಾಧಿಸಲು ಮೈಕ್ರೋಸಾಫ್ಟ್ ಬರೋಬ್ಬರಿ 44 ವರ್ಷ ತೆಗೆದುಕೊಂಡಿದ್ದರೆ, ಅಮೆದಾನ್ 24 ವರ್ಷ ತೆಗೆದುಕೊಂಡಿದೆ. ದಿಗ್ಗಜ ಕಂಪನಿಗಳು ಈ ಸಾಧನೆಗೆ ಸುದೀರ್ಘ ವರ್ಷ ತೆಗೆದುಕೊಂಡಿದೆ. ಆದರೆ ಫೇಸ್‌ಬುಕ್ ಇದೇ ಸಾಧನೆಯನ್ನು ಕೇವಲ 18 ವರ್ಷ ತಗೆದುಕೊಂಡಿದೆ.

ಪೂರ್ತಿ ಓದಿ

04:20 PM (IST) May 13

ಭಾರತದ ಪಹ್ಗಲಾಂ ದಾಳಿಗೆ ಉಗ್ರರಿಗೆ ಅಮೇರಿಕಾದ ನೆರವು; ಸಿಕ್ಕೇಬಿಡ್ತು ಮಹತ್ವದ ಸಾಕ್ಷಿ!

ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಹಿಂದೂ ಪ್ರವಾಸಿಗರು ಹತರಾಗಿದ್ದಾರೆ. ದಾಳಿಗೆ ಮುನ್ನ ಪಾಕಿಸ್ತಾನಕ್ಕೆ ಅಮೆರಿಕ ಸ್ಯಾಟಲೈಟ್ ನೆರವು ನೀಡಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಪೂರ್ತಿ ಓದಿ

04:07 PM (IST) May 13

ಶತ್ರುಗೆ ಮಣ್ಣು ಮುಕ್ಕಿಸಲು ನಮ್ಮ ಸೇನೆ ಸಶಕ್ತ: ವಾಯಪಡೆ ಉದ್ದೇಶಿಸಿ ಪ್ರಧಾನಿ ಮೋದಿ ಮಾತು

ಪ್ರಧಾನಿ ಮೋದಿ ಮಂಗಳವಾರ ಪಂಜಾಬ್‌ನ ಆದಂಪುರ ಏರ್‌ಬೇಸ್‌ಗೆ ಭೇಟಿ ನೀಡಿದರು. S-400 ವಾಯು ರಕ್ಷಣಾ ವ್ಯವಸ್ಥೆ ಬಗ್ಗೆ ಪಾಕಿಸ್ತಾನದ ಸುಳ್ಳನ್ನು ಬಯಲು ಮಾಡಿದರು.

ಪೂರ್ತಿ ಓದಿ

04:06 PM (IST) May 13

ಅದಂಪುರ ವಾಯುನೆಲೆಗೆ ಭೇಟಿ ಪಾಕ್ ಸುಳ್ಳು ಬಯಲು ಮಾಡಿದ ಮೋದಿ, ಜಗತ್ತಿಗೆ ಸ್ಪಷ್ಟ ಸಂದೇಶ

ಅದಂಪರು ವಾಯುನೆಲೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವ ಮೂಲಕ ಪಾಕಿಸ್ತಾನದ ಸುಳ್ಳು ಬಯಲು ಮಾಡಿದ್ದು ಮಾತ್ರವಲ್ಲ, ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಅಷ್ಟಕ್ಕೂ ಮೋದಿ ಈ ಭೇಟಿ ನೀಡಿದ ಸಂದೇಶವೇನು? 

ಪೂರ್ತಿ ಓದಿ

04:03 PM (IST) May 13

ಪಾಕ್​ನಲ್ಲಿ ವಿಕಿರಣ ಸೋರಿಕೆ- ವೈದ್ಯಕೀಯ ಎಮರ್ಜೆನ್ಸಿ? ಕದನ ವಿರಾಮದ ಘನಘೋರ ಸತ್ಯ ಬಯಲು?

ಪಾಕಿಸ್ತಾನ ಕದನ ವಿರಾಮಕ್ಕೆ ಕಾರಣ ಭಾರತದ ದಾಳಿಯ ಒತ್ತಡವೇ ಅಥವಾ ಬೇರೇನಾದರೂ ಕಾರಣವಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಪಾಕಿಸ್ತಾನದ ರೇಡಿಯೋಲಾಜಿಕಲ್ ಸೇಫ್ಟಿ ಬುಲೆಟಿನ್, ವಿಕಿರಣ ಸೋರಿಕೆಯ ಬಗ್ಗೆ ಸುಳಿವು ನೀಡುತ್ತಿದೆ.

ಪೂರ್ತಿ ಓದಿ

03:59 PM (IST) May 13

ಬಯಲಾಯ್ತು ಪಾಕಿಸ್ತಾನಿ ಅಣ್ವಸ್ತ್ರದ ಬೂಟಾಟಿಕೆ

ಆಪರೇಷನ್ ಸಿಂಧೂರದಿಂದ ಪಾಕಿಸ್ತಾನದ ಅಣ್ವಸ್ತ್ರ ಬೆದರಿಕೆ ಕೇವಲ ಬೂಟಾಟಿಕೆ ಎಂದು ಜಗತ್ತಿಗೆ ಸಾಬೀತಾಯಿತು. ಭಾರತೀಯ ಸೇನೆ ಪಾಕಿಸ್ತಾನದ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಿದರೂ, ಪಾಕಿಸ್ತಾನ ಅಣ್ವಸ್ತ್ರ ಪ್ರಯೋಗಿಸಲಿಲ್ಲ.

ಪೂರ್ತಿ ಓದಿ

03:24 PM (IST) May 13

ಭೂಮಿಗೂ ಇದೆ ಆಯಸ್ಸು ಅಂತ್ಯದ ನಿಖರ ದಿನಾಂಕ ಬಹಿರಂಗಪಡಿಸಿದ ವಿಜ್ಞಾನಿಗಳ ತಂಡ

ಭೂಮಿಗೆ ಅಂತ್ಯ ಇದೆಯಾ? ಇದ್ದರೆ ಅದು ಯಾವಾಗ ಸಂಭವಿಸುತ್ತೆ? ಈ ಕುರಿತು ವಿಜ್ಞಾನಿಗಳ ತಂಡ ನಡೆಸಿದ ಅಧ್ಯಯನ ವರದಿ ಕೆಲ ಸ್ಫೋಟಕ ಮಾಹಿತಿ ಬಹಿರಂಗಡಿಸಿದೆ . ಭೂಮಿ ಯಾವಾಗ ಅಂತ್ಯಗೊಳ್ಳಲಿದೆ ಅನ್ನೋದನ್ನು ಈ ಅಧ್ಯಯನ ವರದಿ ನಿಖರವಾಗಿ ಹೇಳಿದೆ. 


 

ಪೂರ್ತಿ ಓದಿ

02:20 PM (IST) May 13

ಯೋಧರಿಗೆ ನೆರವಾಗೋ ಆಸೆ ಇದ್ಯಾ? ನಿಮ್ಮ ಹಣ ಹೇಗೆ ಬಳಕೆಯಾಗತ್ತೆ? ಸಂಗ್ರಹವಾದದ್ದೆಷ್ಟು?

ರಕ್ಷಣಾ ಕ್ಷೇತ್ರಕ್ಕೆ ಭಾರತ ಸರ್ಕಾರ ದಾಖಲೆಯ ಹಣ ಮೀಸಲಿಟ್ಟಿದೆ. ಹುತಾತ್ಮ ಯೋಧರ ಕುಟುಂಬಗಳಿಗೆ ಹೇಗೆ ಸಹಾಯ ಮಾಡಬಹುದು ಎಂಬುದರ ಮಾಹಿತಿ ಇಲ್ಲಿದೆ. ರಾಷ್ಟ್ರೀಯ ರಕ್ಷಣಾ ನಿಧಿಗೆ ಹಣ ನೀಡುವ ಬಗೆ, ಅದರ ಬಳಕೆ ಮತ್ತು ಕಳೆದ ಐದು ವರ್ಷಗಳ ಖರ್ಚಿನ ವಿವರ ಇಲ್ಲಿದೆ.

ಪೂರ್ತಿ ಓದಿ

01:33 PM (IST) May 13

ಐಎನ್‌ಎಸ್ ವಿಕ್ರಾಂತ್‌ ಈಗ ಎಲ್ಲಿದೆ ಎಂದು ಕೇಳಿದ ಕೇರಳದ ವ್ಯಕ್ತಿಯ ಬಂಧನ

ಪ್ರಧಾನಿ ಕಚೇರಿಯ ಅಧಿಕಾರಿ ಎಂದು ಹೇಳಿಕೊಂಡು ಐಎನ್‌ಎಸ್ ವಿಕ್ರಾಂತ್ ಯುದ್ಧನೌಕೆಯ ಬಗ್ಗೆ ಮಾಹಿತಿ ಕೇಳಿದ ಕೇರಳ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. 

ಪೂರ್ತಿ ಓದಿ

01:05 PM (IST) May 13

ಹೀಗೊಂದು ದೇಶಪ್ರೇಮ: ವಿದೇಶ ಟ್ರಿಪ್​ ರದ್ದು ಮಾಡಿ ಹುತಾತ್ಮ ಯೋಧನ ಕುಟುಂಬಕ್ಕೆ ನೆರವು

ಕಾರ್ಯಾಚರಣೆ ಸಿಂದೂರದಲ್ಲಿ ಹುತಾತ್ಮರಾದ ಅಗ್ನಿವೀರ್ ಮುದವತ್ ಮುರಳಿ ನಾಯಕ್ ಅವರ ಕುಟುಂಬಕ್ಕೆ ದಂಪತಿಯೊಬ್ಬರು ತಮ್ಮ ವಿದೇಶಿ ಪ್ರವಾಸವನ್ನು ರದ್ದುಗೊಳಿಸಿ ₹1,09,001 ರೂಪಾಯಿಗಳನ್ನು ನೀಡಿದ್ದಾರೆ. ಮುರಳಿ ನಾಯಕ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದ 23 ವರ್ಷದ ಯುವಕರಾಗಿದ್ದರು.

ಪೂರ್ತಿ ಓದಿ

01:04 PM (IST) May 13

1971ರಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯಿಂದ ಪಾರಾಗಿದ್ದೆವು: ಹಸನ್‌ ಸಾಹೇಬ್

1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ವಾಯುಪಡೆಯ ಮೆಕ್ಯಾನಿಕ್ ಆಗಿದ್ದ ಹಸನ್ ಸಾಹೇಬ್ ಅವರ ಅನುಭವಗಳು. ವೈರಿ ದಾಳಿ, ಕೋಡ್‌ ಮೂಲಕ ಸಂವಹನ, ಯುದ್ಧದಲ್ಲಿ ಭಾರತದ ವಿಜಯದ ಬಗ್ಗೆ ತಿಳಿಸಿದ್ದಾರೆ.

ಪೂರ್ತಿ ಓದಿ

12:18 PM (IST) May 13

ಸ್ವದೇಶಿ ಶಸ್ತ್ರಾಸ್ತ್ರ ಶಕ್ತಿ ಸಾಬೀತು: ಪಾಕ್ ಯುದ್ಧದಿಂದ ಭಾರತದ ಶಸ್ತ್ರಾಸ್ತ್ರಕ್ಕೆ ಈಗ ಭಾರಿ ಬೇಡಿಕೆ

ಆಪರೇಷನ್ ಸಿಂದೂರದಲ್ಲಿ ಭಾರತ ಬಳಸಿದ ನಿಖರ ದಾಳಿ ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರಗಳು ವಿಶ್ವದ ಗಮನ ಸೆಳೆದಿವೆ. ಈ ಯುದ್ಧದಲ್ಲಿ ಬಳಸಲಾದ ದೇಶೀಯ ಶಸ್ತ್ರಾಸ್ತ್ರಗಳು ಮತ್ತು ತಂತ್ರಜ್ಞಾನಗಳು ಭಾರತದ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದು ವಿದೇಶಗಳಿಂದ ಬೇಡಿಕೆ ಹೆಚ್ಚಾಗಿದೆ.

ಪೂರ್ತಿ ಓದಿ

12:01 PM (IST) May 13

ಈ ದಿನಾಂಕದಿಂದ ಭಾರತದ ಭವಿಷ್ಯ ಬದಲಾಗುತ್ತದೆಯೇ? ವೈಮಾನಿಕ ದಾಳಿ ನಂತರ ಸ್ವಾಮಿ ಭವಿಷ್ಯ ವೈರಲ್

ಮೇ 30, 2025 ರಂದು ಗ್ರಹಗಳ ಅಪರೂಪದ ಸ್ಥಾನವು ಭಾರತಕ್ಕೆ ದೊಡ್ಡ ಬದಲಾವಣೆಯನ್ನು ತರುತ್ತದೆ ಎಂದು ಸ್ವಾಮಿ ಯೋಗೇಶ್ವರಾನಂದ ಗಿರಿ ಹೇಳಿದ್ದಾರೆ.
 

ಪೂರ್ತಿ ಓದಿ

11:36 AM (IST) May 13

ದಕ್ಷಿಣ ಕಾಶ್ಮೀರದಲ್ಲಿ ಉಗ್ರರು ಪತ್ತೆ, ಭಾರತೀಯ ಸೇನೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ  ಭಯೋತ್ಪಾದಕರ ನಡುವೆ ತೀವ್ರ ಗುಂಡಿನ ಚಕಮಕಿ ನಡೆಯುತ್ತಿದೆ. 3 ಉಗ್ರರು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಮತ್ತು ಸ್ಥಳೀಯ ಅರೆ ಸೇನಾ ಪಡೆ ಭಾಗಿಯಾಗಿದೆ.

ಪೂರ್ತಿ ಓದಿ

10:30 AM (IST) May 13

ಚೀನಾ ಮಾನ ಕಳೆದ ಪಾಕಿಸ್ತಾನ: ಚೀನಾಕ್ಕೀಗ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತದ ಭೀತಿ

ಭಾರತವನ್ನು ಕಟ್ಟಿಹಾಕಲು ಪಾಕಿಸ್ತಾನಕ್ಕೆ ತನ್ನ ಅತ್ಯಾಧುನಿಕ ಕ್ಷಿಪಣಿ, ವಿಮಾನಗಳನ್ನು ನೀಡಿದ್ದ ಕಮ್ಯುನಿಸ್ಟ್‌ ದೇಶ ಚೀನಾ ಇದೀಗ ಅದೇ ಕಾರಣದಿಂದಾಗಿ ಪೇಚಿಗೀಡಾಗಿದೆ. ಏಕೆಂದರೆ ಪಾಕಿಸ್ತಾನವು ಬಳಸಿದ ಚೀನಾ ನಿರ್ಮಿತ ಕ್ಷಿಪಣಿ ಹಾಗೂ ಕೆಲವು ಶಸ್ತ್ರಾಸ್ತ್ರಗಳನ್ನು ಭಾರತ ಹೊಡೆದುರುಳಿಸಿದೆ.

ಪೂರ್ತಿ ಓದಿ

10:27 AM (IST) May 13

ಕದನ ವಿರಾಮಕ್ಕೆ ಪ್ರಿಯಾಂಕ್ ಖರ್ಗೆ ಅಸಮಾಧಾನ, ಪ್ರಧಾನಿ ಮೋದಿಗೆ ಎರಡು ಪ್ರಶ್ನೆ

ಕೇಂದ್ರ ಸರ್ಕಾರದ ಕದನ ವಿರಾಮದ ನಿರ್ಧಾರವು ಸೇನೆ ಮತ್ತು ಜನರಿಗೆ ನಿರಾಸೆ ತಂದಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕಾಶ್ಮೀರ ವಿಚಾರದಲ್ಲಿ ಅಮೆರಿಕದ ಮಧ್ಯಸ್ಥಿಕೆ ಮತ್ತು ಟ್ರಂಪ್ ಅವರ ಟ್ವೀಟ್ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪೂರ್ತಿ ಓದಿ

10:12 AM (IST) May 13

ಡ್ರೈವರ್‌ನ ಲಾಡ್ಜ್‌ನಲ್ಲಿ ಕೂಡಾಕಿ ಟ್ಯಾಕ್ಸಿ ಸಮೇತ ಖತರ್ನಾಕ್ ಲೇಡಿ ಪರಾರಿ!

ಬಾಡಿಗೆ ಕಾರಿನ ನೆಪದಲ್ಲಿ ಮಹಿಳೆಯೊಬ್ಬರು ಚಾಲಕನ ಕಾರು ಮತ್ತು ಮೊಬೈಲ್ ಕಳವು ಮಾಡಿದ್ದಾರೆ. ಕಾರವಾರದಲ್ಲಿ ಪರಿಚಯವಾದ ಮಹಿಳೆ ಚಾಲಕನ ನಂಬಿಕೆ ಗಳಿಸಿ ವಂಚಿಸಿದ್ದಾಳೆ. ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪೂರ್ತಿ ಓದಿ

09:55 AM (IST) May 13

ಸೇನೆ ಸೇರಿ ತಂದೆ ಸಾವಿನ ಸೇಡು ತೀರಿಸಿಕೊಳ್ಳುವೆ: ಹುತಾತ್ಮನ ಪುತ್ರಿ

ಪಾಕ್ ದಾಳಿಯಲ್ಲಿ ಹುತಾತ್ಮರಾದ ಯೋಧ ಸುರೇಂದ್ರ ಸಿಂಗ್ ಪುತ್ರಿ ವರ್ತಿಕಾ, ಸೇನೆ ಸೇರಿ ತಂದೆಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದಾರೆ. 

ಪೂರ್ತಿ ಓದಿ

09:24 AM (IST) May 13

'ನಮಗೆ ಯುದ್ಧನೂ ಬೇಕು, ಬುದ್ದನೂ ಬೇಕು': ಮಲ್ಲಿಕಾರ್ಜುನ ಖರ್ಗೆ

ದೇಶದ ಸ್ವಾಭಿಮಾನ, ಭದ್ರತೆಗೆ ಧಕ್ಕೆಯಾದಾಗ ಜಾತಿ-ಧರ್ಮ ಮೀರಿ ದೇಶಧರ್ಮ ಮೆರೆಯಬೇಕು. ಧರ್ಮಕ್ಕಿಂತ ದೇಶ ದೊಡ್ಡದು ಎಂದು ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಕೆಲವು ಸಂದರ್ಭಗಳಲ್ಲಿ ಯುದ್ಧ ಅನಿವಾರ್ಯ ಎಂದಾದರೆ ಒಪ್ಪಿಕೊಳ್ಳಲೇಬೇಕು.

ಪೂರ್ತಿ ಓದಿ

08:26 AM (IST) May 13

ಆಪರೇಷನ್ ಸಿಂದೂರಕ್ಕೆ ದೇಸಿ ಶಸ್ತ್ರಾಸ್ತ್ರಗಳ ಶಕ್ತಿ: ಜಗತ್ತಿನ ಎದುರು ಆತ್ಮನಿರ್ಭರ ಭಾರತದ ಅನಾವರಣ

ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ನಡೆದ ಆಪರೇಷನ್ ಸಿಂದೂರದಲ್ಲಿ ಭಾರತ ದೇಶೀಯವಾಗಿ ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರಗಳೇ ರಾರಾಜಿಸಿವೆ. ಈ ದಾಳಿಯಲ್ಲಿ ಬ್ರಹ್ಮೋಸ್ ಕ್ಷಿಪಣಿ, ಆಕಾಶ್ ವಾಯು ರಕ್ಷಣಾ ವ್ಯವಸ್ಥೆ, ಸ್ಕೈ ಸ್ಟ್ರೈಕರ್ ಡ್ರೋನ್, ಬರಾಕ್ 8 ಕ್ಷಿಪಣಿ ಸೇರಿದಂತೆ ಹಲವು ದೇಶೀಯ ತಂತ್ರಜ್ಞಾನಗಳು ಪ್ರಮುಖ ಪಾತ್ರ ವಹಿಸಿವೆ.

ಪೂರ್ತಿ ಓದಿ

06:59 AM (IST) May 13

ಮೋದಿ ನಾಯಕತ್ವ, ನಮ್ಮ ಸೇನಾಪಡೆಗಳ ಶಕ್ತಿಯ ಮುಂದೆ ಪಾಕ್ ಮಂಡಿಯೂರಿದೆ: ಎಚ್‌ಡಿ ಕುಮಾರಸ್ವಾಮಿ

ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆಯಲ್ಲಿ ದೃಢ ಹೆಜ್ಜೆಗಳನ್ನು ಇಟ್ಟಿದ್ದು, ದೇಶದ ಮೇಲೆ ದಾಳಿ ನಡೆಸಿದ ನೆರೆ ರಾಷ್ಟ್ರಕ್ಕೆ ಸೇನಾಪಡೆಗಳು ತಕ್ಕ ಪಾಠ ಕಲಿಸಿವೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಪಾಕಿಸ್ತಾನದ ಭಯೋತ್ಪಾದಕ ದಾಳಿಗಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದೆ.

ಪೂರ್ತಿ ಓದಿ

06:41 AM (IST) May 13

ಪಾಕ್‌ಗೆ ಕಾಶ್ಮೀರ ಸೇರಿಸಿ ಕಾಂಗ್ರೆಸ್ ಟ್ವೀಟ್‌ ಮಾಡಿ ಯಡವಟ್ಟು: ಸಿಬ್ಬಂದಿ ವಜಾ, ಇದೊಂದು ಸಣ್ಣ ತಪ್ಪು ಎಂದ ಡಿಕೆಶಿ

ಪಾಕಿಸ್ತಾನದ ಭೂಪಟದಲ್ಲಿ ಕಾಶ್ಮೀರವನ್ನು ಸೇರಿಸಿ ಟ್ವೀಟ್ ಮಾಡಿದ್ದಕ್ಕಾಗಿ ಕೆಪಿಸಿಸಿ ಸಾಮಾಜಿಕ ಜಾಲತಾಣ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಖಚಿತಪಡಿಸಿದ್ದಾರೆ.

ಪೂರ್ತಿ ಓದಿ

06:17 AM (IST) May 13

ಭಾರತ ಪಾಕಿಸ್ತಾನ ಕದನ ವಿರಾಮದ ನಂತರ ಸೆನ್ಸೆಕ್ಸ್‌ ಭರ್ಜರಿ ಏರಿಕೆ, ಒಂದೇ ದಿನ 16 ಲಕ್ಷ ಕೋಟಿ ಲಾಭ, ಚಿನ್ನದ ಬೆಲೆ ಭಾರೀ ಇಳಿಕೆ!

ಭಾರತ-ಪಾಕ್ ಕದನ ವಿರಾಮ ಘೋಷಣೆ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ 2975 ಅಂಕಗಳ ಭರ್ಜರಿ ಏರಿಕೆ ಕಂಡಿದೆ. ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ 3400 ರೂ. ಇಳಿಕೆಯಾಗಿದೆ. ಪಾಕ್ ಷೇರುಪೇಟೆಯಲ್ಲಿ ಶೇ.9ರಷ್ಟು ಏರಿಕೆಯಾಗಿದೆ.

ಪೂರ್ತಿ ಓದಿ

05:52 AM (IST) May 13

ಭಾರತ-ಪಾಕ್ ಕದನವಿರಾಮದ ಹಿಂದಿನ ರಹಸ್ಯ ಬಯಲು! ಎರಡು ದೇಶಗಳಿಗೆ ಟ್ರಂಪ್ ಬೆದರಿಕೆ ಏನು?

ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮಕ್ಕೆ ಅಮೆರಿಕ ಮಧ್ಯಸ್ಥಿಕೆ ವಹಿಸಿದ್ದು, ವ್ಯಾಪಾರ ಒಪ್ಪಂದವನ್ನು ಬಳಸಿಕೊಂಡು ಯುದ್ಧವನ್ನು ನಿಲ್ಲಿಸುವಂತೆ ಒತ್ತಾಯಿಸಿತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗಪಡಿಸಿದ್ದಾರೆ. ಟ್ರಂಪ್ ಪ್ರಕಾರ, ಯುದ್ಧವನ್ನು ನಿಲ್ಲಿಸಿದರೆ ವ್ಯಾಪಾರ ಮುಂದುವರಿಸುವುದಾಗಿ, ಇಲ್ಲದಿದ್ದರೆ ವ್ಯಾಪಾರವನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದರಿಂದ ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದವು. ಈ ಮೂಲಕ ಪರಮಾಣು ಸಂಘರ್ಷವನ್ನು ತಪ್ಪಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಪೂರ್ತಿ ಓದಿ

More Trending News