Published : May 07, 2025, 04:00 AM ISTUpdated : May 07, 2025, 12:17 PM IST

ಭಾರತದ ನಿಖರ ದಾಳಿ: Breaking News: ರಾಜ್ಯದ ಜಲಾಶಯಗಳಿಗೆ ಬಿಗಿ ಭದ್ರತೆ ಒದಗಿಸಲು ರಾಜ್ಯ ಸರ್ಕಾರದಿಂದ ತುರ್ತು ಆದೇಶ!

ಸಾರಾಂಶ

ಪಾಕಿಸ್ತಾನ ನಿರೀಕ್ಷೆ ಮಾಡಿದಂತೆಯೇ 9 ಟೆರರ್‌ ಕ್ಯಾಂಪ್‌ಗಳ ಮೇಲೆ ಭಾರತ ಬುಧವಾರ ಮಧ್ಯರಾತ್ರಿ ಘಾತಕ ದಾಳಿ ನಡೆಸಿದೆ. ಆಪರೇಷನ್‌ ಸಿಂಧೂರ್‌ ಹೆಸರಿನಲ್ಲಿ ದಾಳಿ ನಡೆದಿದ್ದು, ಪಾಕ್‌ ಆಕ್ರಮಿತ ಕಾಶ್ಮೀರದ ಎರಡು ಪ್ರದೇಶ ಹಾಗೂ ಪಾಕಿಸ್ತಾನದ ಒಂದು ಪ್ರದೇಶವನ್ನು ಟಾರ್ಗೆಟ್‌ ಮಾಡಲಾಗಿದೆ. ಅಪಾರ ಸಾವುನೋವುಗಳು ಪಾಕಿಸ್ತಾನದ ಕಡೆ ಆಗಿದ್ದು, ಇಂದು ಭಾರತೀಯ ಸೇನೆ ಅಧಿಕೃತವಾಗಿ ಇದರ ಮಾಹಿತಿ ನೀಡಲಿದೆ.

ಭಾರತದ ನಿಖರ ದಾಳಿ: Breaking News: ರಾಜ್ಯದ ಜಲಾಶಯಗಳಿಗೆ ಬಿಗಿ ಭದ್ರತೆ ಒದಗಿಸಲು ರಾಜ್ಯ ಸರ್ಕಾರದಿಂದ ತುರ್ತು ಆದೇಶ!

11:51 PM (IST) May 07

Breaking News: ರಾಜ್ಯದ ಜಲಾಶಯಗಳಿಗೆ ಬಿಗಿ ಭದ್ರತೆ ಒದಗಿಸಲು ರಾಜ್ಯ ಸರ್ಕಾರದಿಂದ ತುರ್ತು ಆದೇಶ!

ಭಾರತ-ಪಾಕಿಸ್ತಾನ ಗಡಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲಾ ಅಣೆಕಟ್ಟುಗಳಿಗೆ ಬಿಗಿ ಭದ್ರತೆ ಒದಗಿಸಲು ಆದೇಶಿಸಿದೆ. ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜನೆ, 24/7 ಗಸ್ತು, ಮತ್ತು ಕಣ್ಗಾವಲು ವ್ಯವಸ್ಥೆಗಳನ್ನು ಜಾರಿಗೊಳಿಸಲಾಗುವುದು.

ಪೂರ್ತಿ ಓದಿ

11:51 PM (IST) May 07

ಆಪರೇಶನ್ ಸಿಂದೂರ್‌ಗೆ ಐಪಿಎಲ್ ಪಂದ್ಯದಲ್ಲಿ ಟ್ರಿಬ್ಯೂಟ್, ಲೆ.ಕರ್ನಲ್ ಧೋನಿಗೆ ಗೆಲುವಿನ ಗೌರವ

ಭಾರತೀಯ ಸೇನೆಗೆ ಐಪಿಎಲ್ ಪಂದ್ಯದಲ್ಲಿ ವಿಶೇಷ ಗೌರವ ಸಲ್ಲಿಸಲಾಗಿದೆ. ಪಾಕಿಸ್ತಾನ ಉಗ್ರ ತಾಣಗಳ ಮೇಲೆ ಸೇನೆ ನಡೆಸಿದ ಆಪರೇಶನ್ ಸಿಂದೂರ್‌ಗೆ ಬಿಸಿಸಿಐ ವಿಶೇಷ ರೀತಿಯಲ್ಲಿ ಟ್ರಿಬ್ಯೂಟ್ ಸಲ್ಲಿಸಿದೆ.

ಪೂರ್ತಿ ಓದಿ

11:43 PM (IST) May 07

ಚೆನ್ನೈ ಎದುರು ಸೋತ ಹಾಲಿ ಚಾಂಪಿಯನ್‌ ಕೆಕೆಆರ್ ಪ್ಲೇ ಆಫ್ ಹಾದಿ ಬಹುತೇಕ ಬಂದ್!

ನೂರ್ ಅಹಮದ್ ಮಾರಕ ಬೌಲಿಂಗ್ ಹಾಗೂ ಡೆವಾಲ್ಡ್ ಬ್ರೆವಿಸ್ ಮತ್ತು ಶಿವಂ ದುಬೆ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತಾ ನೈಟ್ ರೈಡರ್ಸ್ ಎದುರು 2 ವಿಕೆಟ್ ಅಂತರದ ರೋಚಕ ಜಯ ಸಾಧಿಸಿದೆ. ಈ ಸೋಲಿನೊಂದಿಗೆ ಕೆಕೆಆರ್ ಪ್ಲೇ ಆಫ್ ಕನಸು ಬಹುತೇಕ ಬಂದ್ ಆಗಿದೆ.

ಪೂರ್ತಿ ಓದಿ

11:19 PM (IST) May 07

ಭಾರತ ಪಾಕಿಸ್ತಾನದ ಮಧ್ಯೆ ಪರಮಾಣು ಯುದ್ಧ ಶುರುವಾದ್ರೆ ಸಾಮಾನ್ಯ ಜನರು ಬಚಾವ್‌ ಆಗಲು ಏನೇನು ಮಾಡಬೇಕು? Tips

ಫಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಭಾರತವು ಮಾಕ್ ಡ್ರಿಲ್ಸ್ ನಡೆಸುತ್ತಿದ್ದು, ಪರಮಾಣು ದಾಳಿಯ ಸಾಧ್ಯತೆಯನ್ನು ಎದುರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಪೂರ್ತಿ ಓದಿ

11:08 PM (IST) May 07

ಇಂಡಿಗೋದಿಂದ ಮೇ.10ರ ವರೆಗೆ ಭಾರತದ 11 ನಗರಗಳಿಗೆ ವಿಮಾನ ಸೇವೆ ರದ್ದು

ಭಾರತದ ಆಪರೇಶನ್ ಸಿಂದೂರ ಬಳಿಕ ಪಾಕಿಸ್ತಾನ ಗಡಿ ತೀರದಲ್ಲಿ ಭಾರಿ ಗುಂಡಿನ ದಾಳಿ ನಡೆಸುತ್ತಿದೆ. ಪಾಕಿಸ್ತಾನ ಇದೀಗ ಯುದ್ಧಕ್ಕೆ ಸನ್ನದ್ಧಗೊಂಡಿದೆ. ಇದರ ಪರಿಣಾಮ ಮೇ.10 ರ ವೆರೆಗೆ ಭಾರತದ 11 ನಗರಗಳಿಗೆ ಇಂಡಿಗೋ ವಿಮಾನ ಸೇವೆ ರದ್ದಾಗಿದೆ. 

ಪೂರ್ತಿ ಓದಿ

11:06 PM (IST) May 07

ಶೌಚಾಲಯದಲ್ಲಿ ಮೊಬೈಲ್ ಇರಿಸಿ ಸ್ತ್ರೀಯರ ವಿಡಿಯೋ ಸೆರೆ; ಬಿಹಾರ ಮೂಲದ ಆರೋಪಿ ಬಂಧನ

ಕೋರಮಂಗಲದ ಸಿಹಿ ತಿನಿಸು ಮಳಿಗೆಯ ಶೌಚಾಲಯದಲ್ಲಿ ಮಹಿಳೆಯ ವಿಡಿಯೋ ಚಿತ್ರೀಕರಿಸಿದ ಆರೋಪದ ಮೇಲೆ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಪೂರ್ತಿ ಓದಿ

10:37 PM (IST) May 07

'ಆಪರೇಷನ್​ ಸಿಂದೂರ'ದ ಹೀರೋ, ರಫೇಲ್​ ಯುದ್ಧ ವಿಮಾನದ ರೋಚಕ ಮಾಹಿತಿ ಇಲ್ಲಿದೆ...

ಉಗ್ರರ ನೆಲೆಯನ್ನು ನೆಲಸಮಗೊಳಿಸುವ ಮೂಲಕ 'ಆಪರೇಷನ್​ ಸಿಂದೂರ'ದ ಹೀರೋ ಆಗಿ ಮಿಂಚಿರುವ ರಫೇಲ್​ ಯುದ್ಧ ವಿಮಾನದ ರೋಚಕ ಮಾಹಿತಿ ಇಲ್ಲಿದೆ..

ಪೂರ್ತಿ ಓದಿ

10:25 PM (IST) May 07

ಟೆಸ್ಟ್ ಅವಕಾಶಕ್ಕೆ 6 ವರ್ಷ ಕಾದಿದ್ದ ರೋಹಿತ್, 6 ನಿಮಿಷದಲ್ಲಿ ವಿದಾಯ ನಿರ್ಧಾರ

ಏಕದಿನದಲ್ಲಿ ಅಬ್ಬರಿಸುತ್ತಿದ್ದ ರೋಹಿತ್ ಶರ್ಮಾ ಟೆಸ್ಟ್ ತಂಡದಲ್ಲಿ ಸ್ಥಾನ ಸಿಗಲು ಬರೋಬ್ಬರಿ 6 ವರ್ಷ ಕಾದಿದ್ದರು, 108 ಏಕದಿನ ಪಂದ್ಯ ಆಡಿದ ಬಳಿಕ ರೋಹಿತ್ ಶರ್ಮಾಗೆ ಮೊದಲ ಟೆಸ್ಟ್ ಪಂದ್ಯಕ್ಕೆ ಅವಕಾಶ ಸಿಕ್ಕಿತ್ತು. ಆದರೆ ಟೆಸ್ಟ್ ವಿದಾಯ ನಿರ್ಧಾರವನ್ನು ಕೇವಲ 6 ನಿಮಿಷದಲ್ಲಿ ತೆಗೆದುಕೊಂಡ್ರಾ?

ಪೂರ್ತಿ ಓದಿ

10:19 PM (IST) May 07

ಹಣ ಉಳಿಸಲು ಸೆಕೆಂಡ್ ಹ್ಯಾಂಡ್ ಬಟ್ಟೆ ಖರೀದಿಸ್ತೀರಾ? ಈ ಯುವಕನ ಚರ್ಮರೋಗ ಕೇಳಿದ್ರೆ ಶಾಕ್!

ಅಂಗಡಿಯಿಂದ ಖರೀದಿಸಿದ ಹಳೆಯ ಬಟ್ಟೆಗಳನ್ನು ತೊಳೆಯದೆ ಪದೇ ಪದೇ ಧರಿಸಿದ ನಂತರ ತನಗೆ ಚರ್ಮ ರೋಗ ಬಂದಿದೆ ಎಂದು ಯುವಕ ಟಿಕ್‌ಟಾಕ್‌ನಲ್ಲಿ ಬಹಿರಂಗಪಡಿಸಿದ್ದಾನೆ.

ಪೂರ್ತಿ ಓದಿ

10:10 PM (IST) May 07

ಪಂಜರದಲ್ಲಿ ಗಂಡನ ತಲೆ- ಹೆಂಡ್ತಿಯ ಬಳಿ ಕೀಲಿ ಕೈ: ಕಾರಣ ಅಷ್ಟೇ ಕುತೂಹಲ!

ಪಂಜರದಲ್ಲಿ ಗಂಡನ ತಲೆ- ಹೆಂಡ್ತಿಯ ಬಳಿ ಕೀಲಿ ಕೈ: ಕಾರಣ ಅಷ್ಟೇ ಕುತೂಹಲ! ಇದನ್ನು ಕೇಳಿದ್ರೆ ಪುರುಷರು ಹೌಹಾರೋದು ಗ್ಯಾರೆಂಟಿ. ಅಂಥದ್ದೇನಿದೆ ಅಂತೀರಾ? 

ಪೂರ್ತಿ ಓದಿ

10:00 PM (IST) May 07

ಧಾರವಾಡ ಸೇರಿ ದೇಶದ 5 ಐಐಟಿಗಳ ವಿಸ್ತರಣೆಗೆ ಅಸ್ತು; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ

ಐದು ಐಐಟಿಗಳಲ್ಲಿ ಶೈಕ್ಷಣಿಕ ಮತ್ತು ಮೂಲಸೌಕರ್ಯ ಸಾಮರ್ಥ್ಯ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ₹11,828.79 ಕೋಟಿ ಅನುದಾನ ನೀಡಿದೆ. ಈ ಯೋಜನೆಯಿಂದ 6500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅವಕಾಶ ದೊರೆಯಲಿದೆ.

ಪೂರ್ತಿ ಓದಿ

09:41 PM (IST) May 07

ಯುದ್ಧ ನಡೆದರೆ ಚೀನಾ ಹೊರತುಪಡಿಸಿ ಪಾಕ್ ಬೆಂಬಲಕ್ಕೆ ನಿಲ್ಲುವ ಭಾರತದ ಶತ್ರು ದೇಶಗಳು ಇವೇ ನೋಡಿ!

ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತವು ಪಾಕಿಸ್ತಾನದ 9 ಭಯೋತ್ಪಾದಕ ಅಡಗುತಾಣಗಳ ಮೇಲೆ ವಾಯುದಾಳಿ ನಡೆಸಿದೆ. ಇಸ್ರೇಲ್ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದರೆ, ಚೀನಾ, ಟರ್ಕಿ ಮತ್ತು ಅಜೆರ್ಬೈಜಾನ್ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿವೆ. ಈ ಕಾರ್ಯಾಚರಣೆಯಿಂದ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.

ಪೂರ್ತಿ ಓದಿ

07:58 PM (IST) May 07

ಆಪರೇಷನ್ ಸಿಂದೂರ್: ಮಧ್ಯರಾತ್ರಿಯಿಂದ ಈವರೆಗೆ ಭಾರತ-ಪಾಕ್ ನಡುವಿನ ಪ್ರಮುಖ 10 ಬೆಳವಣಿಗೆಗಳು

ಭಾರತೀಯ ಸೇನೆಯು 'ಆಪರೇಷನ್ ಸಿಂದೂರ್' ಅಡಿಯಲ್ಲಿ ಪಾಕಿಸ್ತಾನ ಮತ್ತು ಪಿಒಕೆನಲ್ಲಿ 9 ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದೆ. ಇದರ ನಂತರ ಭಾರತ ಮತ್ತು ಪಾಕ್ ನಡುವೆ ನಡೆದ 10 ಪ್ರಮುಖ ಘಟನೆಗಳು ಇಲ್ಲಿವೆ ನೋಡಿ..

ಪೂರ್ತಿ ಓದಿ

07:47 PM (IST) May 07

ನನ್ಗೆ ವಯಸ್ಸಾಗಿದೆ ಆದ್ರೆ ಅವಕಾಶ ಸಿಕ್ರೆ ಪಾಕಿಸ್ತಾನ ಮುಗಿಸುತ್ತೇನೆ, ಕರ್ನಲ್ ಸೋಫಿಯಾ ತಂದೆ ಹೇಳಿಕೆ ವೈರಲ್

ಮಗಳ ಬಗ್ಗೆ ಅತೀವ ಹೆಮ್ಮೆ ಇದೆ ಎಂದು ಕರ್ನಲ್ ಸೋಫಿಯಾ ಖುರೇಷಿ ತಂದೆ ಹೇಳಿದ್ದಾರೆ. ಇದೇ ವೇಳೆ ಪಾಕಿಸ್ತಾನ ನಿರ್ನಾಮ ಮಾಡುವ ಕುರಿತು ಸೋಫಿಯಾ ತಂದೆ ನೀಡಿದ ಹೇಳಿಕೆ ಭಾರಿ ವೈರಲ್ ಆಗಿದೆ.

ಪೂರ್ತಿ ಓದಿ

07:45 PM (IST) May 07

ಜನ್ಮದಿನಕ್ಕೆ ಅನುಗುಣವಾಗಿ ಈ ಮೊಬೈಲ್​ ನಂಬರ್​ ಆಯ್ಕೆ ಮಾಡಿದ್ರೆ ಅದೃಷ್ಟವೋ ಅದೃಷ್ಟ...

ಸಂಖ್ಯಾಶಾಸ್ತ್ರದ ಪ್ರಕಾರ ಹುಟ್ಟಿದ ದಿನಾಂಕದ ಆಧಾರದ ಮೇಲೆ ಒಂಬತ್ತು ವಿಭಿನ್ನ ಪ್ರಕಾರಗಳಿವೆ. ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆಗಳ ಮೊತ್ತದ ಆಧಾರದ ಮೇಲೆ ಅದೃಷ್ಟ ಸಂಖ್ಯೆಯನ್ನು ಕಂಡುಹಿಡಿಯಬಹುದು.

ಪೂರ್ತಿ ಓದಿ

07:42 PM (IST) May 07

'ನಾನಿಲ್ಲದೆ ಅಲ್ಲಿಗೆ ಹೋಗಬೇಡ..' ಶಾರುಖ್ ಖಾನ್ ಇಲ್ಲಿಯವರೆಗೆ ಕಾಶ್ಮೀರಕ್ಕೆ ಹೋಗದೇ ಇರಲು ಕಾರಣ ಬಹಿರಂಗ!

ಶಾರುಖ್ ಖಾನ್ ಅವರ ಕಾಶ್ಮೀರದೊಂದಿಗಿನ ಸಂಬಂಧವು ಆಳವಾದ ಭಾವನಾತ್ಮಕ ನಂಟನ್ನು ಹೊಂದಿದೆ. ತಂದೆಯೊಂದಿಗಿನ ಭರವಸೆಯಿಂದಾಗಿ ಅವರು ಇನ್ನೂ ಕಾಶ್ಮೀರಕ್ಕೆ ಭೇಟಿ ನೀಡಿಲ್ಲ. ಪಹಲ್ಗಾಮ್ ದಾಳಿಯ ಬಗ್ಗೆ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ

07:17 PM (IST) May 07

ಮಗಳು ದಾರಿ ತಪ್ಪದಿರಲು 16 ವರ್ಷಕ್ಕೆ ಸೆಕ್ಸ್‌ಟಾಯ್ ಕೊಡಿಸಿದ ಭಾರತದ ಏಕೈಕ ನಟಿ!

ಗೌತಮಿ ಕಪೂರ್ ತಮ್ಮ ಮಗಳಿಗೆ 16ನೇ ವರ್ಷದ ಹುಟ್ಟುಹಬ್ಬಕ್ಕೆ ಸೆಕ್ಸ್ ಟಾಯ್ ಉಡುಗೊರೆಯಾಗಿ ನೀಡುವ ಬಗ್ಗೆ ಚರ್ಚಿಸಿದ್ದಾರೆ. ಈ ಘಟನೆ ಭಾರತೀಯ ಪೋಷಕರಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಮಕ್ಕಳೊಂದಿಗೆ ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡುವ ಅಗತ್ಯವನ್ನು ಗೌತಮಿ ಒತ್ತಿ ಹೇಳಿದ್ದಾರೆ.

ಪೂರ್ತಿ ಓದಿ

07:00 PM (IST) May 07

EXCLUSIVE: ಟೀಮ್‌ ಇಂಡಿಯಾ ಟೆಸ್ಟ್‌ ನಾಯಕತ್ವದಿಂದ ರೋಹಿತ್‌ ಶರ್ಮಗೆ ಗೇಟ್‌ಪಾಸ್‌

ಇಂಗ್ಲೆಂಡ್ ಪ್ರವಾಸಕ್ಕೆ ರೋಹಿತ್ ಶರ್ಮಾ ಅವರನ್ನು ಭಾರತದ ಟೆಸ್ಟ್ ತಂಡದ ನಾಯಕ ಸ್ಥಾನದಿಂದ ವಜಾ ಮಾಡಲು ರಾಷ್ಟ್ರೀಯ ಆಯ್ಕೆದಾರರು ನಿರ್ಧರಿಸಿದ್ದಾರೆ. ಕಳಪೆ ಫಾರ್ಮ್ ಮತ್ತು ರೆಡ್-ಬಾಲ್ ಕ್ರಿಕೆಟ್‌ನಲ್ಲಿನ ಪ್ರದರ್ಶನವೇ ಇದಕ್ಕೆ ಕಾರಣ ಎನ್ನಲಾಗಿದೆ. ಆದರೆ, ರೋಹಿತ್ ಏಕದಿನ ತಂಡದಲ್ಲಿ ಮುಂದುವರಿಯಲಿದ್ದಾರೆ.

ಪೂರ್ತಿ ಓದಿ

06:53 PM (IST) May 07

'ಇದು ಚಿಕ್ಕ ಟ್ರೀಸರ್..' ಪಾಕಿಸ್ತಾನಕ್ಕೆ ಚಂದನ್ ಶೆಟ್ಟಿ ಎಚ್ಚರಿಕೆ! ಸೋನು ನಿಗಮ್‌ಗೂ ವಾರ್ನ್!

ಪಾಕಿಸ್ತಾನದ ಉಗ್ರರ ಅಡಗುದಾಣಗಳ ಮೇಲೆ ಭಾರತ ನಡೆಸಿದ ವಾಯು ದಾಳಿಯನ್ನು ಶ್ಲಾಘಿಸಿದ ಚಂದನ್ ಶೆಟ್ಟಿ, ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಸೋನು ನಿಗಮ್ ಅವರ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ, ಅವರ ಮಾನಸಿಕ ಸ್ಥಿತಿಯ ಬಗ್ಗೆ ಪ್ರಶ್ನಿಸಿದ್ದಾರೆ.

ಪೂರ್ತಿ ಓದಿ

06:48 PM (IST) May 07

ಆಪರೇಶನ್ ಸಿಂಧೂರ್‌ಗೆ ಯುಕೆ ಮಾಜಿ ಪ್ರಧಾನಿ ಬೆಂಬಲ, ಸಂಚಲನ ಸೃಷ್ಟಿಸಿದ ಕಾಶ್ಮೀರ ಹೇಳಿಕೆ

ಭಾರತದ ನಡೆಸಿದ ಆಪರೇಶನ್ ಸಿಂಧೂರ್ ದಾಳಿಯನ್ನು ಬ್ರಿಟನ್ ಮಾಜಿ ಪ್ರಧಾನಿ ಬೆಂಬಲಿಸಿದ್ದಾರೆ. ಭಾರತದ ನಡೆ ಸರಿಯಾಗಿದೆ ಎಂದಿದ್ದಾರೆ. ಇದೇ ವೇಳೆ ಮಾಜಿ ಪ್ರಧಾನಿ ಕಾಶ್ಮೀರ ಕುರಿತು ನೀಡಿದ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ.

ಪೂರ್ತಿ ಓದಿ

06:39 PM (IST) May 07

ಆಪರೇಷನ್ ಸಿಂಧೂರ್ ದಾಳಿಗೂ ಮೊದಲ ಹಾಗೂ ನಂತರದ ವೀಡಿಯೋ ವೈರಲ್‌

ಆಪರೇಷನ್ ಸಿಂಧೂರ್ ನಲ್ಲಿ ಜೈಶ್-ಎ-ಮೊಹಮ್ಮದ್ ನ ಮುಖ್ಯ ಕಚೇರಿಯನ್ನು ಭಾರತೀಯ ಪಡೆಗಳು ಧ್ವಂಸಗೊಳಿಸಿದವು. ದಾಳಿಗೂ ಮೊದಲು ಮತ್ತು ನಂತರದ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 

ಪೂರ್ತಿ ಓದಿ

06:17 PM (IST) May 07

ಆರ್‌ಸಿಬಿ ಕಪ್ ಗೆಲ್ಲೋ ಚಾನ್ಸ್ ಇದೆ, ಮೇ 25ರ ನಂತ್ರ ಪಾಕ್ ಮೇಲೆ ಯುದ್ದ ಮಾಡಿ ಎಂದ ಅಭಿಮಾನಿ!

ಪಾಕಿಸ್ತಾನದ ಮೇಲೆ ಪೂರ್ಣ ಪ್ರಮಾಣದ ಯುದ್ಧ ನಡೆಸುವುದಿದ್ದರೆ ಮೇ 25ರ ನಂತರ ನಡೆಸಿ ಎಂದು ಆರ್‌ಸಿಬಿ ಅಭಿಮಾನಿಯೊಬ್ಬ ಮನವಿ ಮಾಡಿದ್ದಾನೆ. ಈ ಮನವಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರತೀಯ ಸೇನೆ ಪಾಕಿಸ್ತಾನದ ಒಳಗೆ ನುಸುಳಿ ಉಗ್ರರನ್ನು ಹೊಡೆದುರುಳಿಸಿದೆ.

ಪೂರ್ತಿ ಓದಿ

06:17 PM (IST) May 07

ದೇಶ ಸಂಕಷ್ಟಕ್ಕೆ ಸಿಲುಕಿದಾಗ ಹೇಗೆ ಹೋರಾಡಬೇಕು ಅನ್ನೋದು ಕಾಂಗ್ರೆಸ್ ಜಗತ್ತಿಗೆ ತೋರಿಸಿದೆ: ಬಿಕೆ ಹರಿಪ್ರಸಾದ್

ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನದ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸಿದ ಕ್ಷಿಪಣಿ ದಾಳಿಗೆ ರಾಜಕೀಯ ವಲಯದಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಕೆ ಹರಿಪ್ರಸಾದ್ ಸೇರಿದಂತೆ ಹಲವರು ಭಾರತೀಯ ಸೇನೆಯ ಕ್ರಮವನ್ನು ಶ್ಲಾಘಿಸಿದ್ದಾರೆ. ದೇಶದ ಭದ್ರತೆಗೆ ಕಠಿಣ ಕ್ರಮ ಅಗತ್ಯ ಎಂದು ಅವರು ಹೇಳಿದ್ದಾರೆ.

ಪೂರ್ತಿ ಓದಿ

06:13 PM (IST) May 07

ಮುಂದಿನ ಸಿಎಂ ಯಾರೆಂದು ಕೇಳಿದ್ರೆ ಶಾಸಕ ಪ್ರದೀಪ್​ ಈಶ್ವರ್​ ಹೀಗೆ ಹೇಳೋದಾ? ಏನಿದರ ಮರ್ಮ?

ಮುಂದಿನ ಸಿಎಂ ಯಾರೆಂದು ಕೇಳಿದ್ರೆ ಶಾಸಕ ಪ್ರದೀಪ್​ ಈಶ್ವರ್​ ಹೀಗೆ ಎಡವಟ್ಟು ಮಾಡೋದಾ? ಅವರು ಹೇಳಿದ್ದೇನು, ಆಗಿದ್ದೇನು? 

ಪೂರ್ತಿ ಓದಿ

06:05 PM (IST) May 07

ಭಾರತ ಹಿಂದೆ ಸರಿದರೆ ನಾವು ನಿಲ್ಲಿಸುತ್ತೇವೆ, ದಾಳಿಗೆ ಬೆಚ್ಚಿ ಪಾಕ್ ರಕ್ಷಣಾ ಸಚಿವನ ವರಸೆ ಬದಲು

ಭಾರತ ನಡೆಸಿದ ದಾಳಿಗೆ ಪಾಕಿಸ್ತಾನ ವಿಲವಿಲ ಒದ್ದಾಡಿದೆ. ಭಾರತ ಮಾತ್ರವಲ್ಲ ಜಗತ್ತನ್ನೇ ನಾಶ ಮಾಡುತ್ತೇನೆ ಎಂದಿದ್ದ ರಕ್ಷಣಾ ಸಚಿವ ಇದೀಗ ಭಾರತ ಇದರಿಂದ ಹಿಂದೆ ಸರಿದರೆ ನಾವು ಉದ್ವಿಘ್ನತೆ ಕಡಿಮೆ ಮಾಡುತ್ತೇವೆ. ನಾವು ಶಾಂತಿ ಬಯಸುತ್ತಿದ್ದೇವೆ ಎಂದಿದ್ದಾರೆ. ಈ ರಕ್ಷಣಾ ಸಚಿವ ಹೇಳಿದ್ದೇನು? 

ಪೂರ್ತಿ ಓದಿ

05:41 PM (IST) May 07

Operation Sindoor: ಮಾಕ್ ಡ್ರಿಲ್ ಬಗ್ಗೆ ಗೃಹ ಸಚಿವ ಕಳವಳ! ಅಧಿಕಾರಿಗಳಿಗೆ ಸೂಚಿಸಿದ್ದು ಏನು?

ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ಪ್ರತಿದಾಳಿ ನಡೆಸಿದ ಬಳಿಕ ಯುದ್ಧದ ಛಾಯೆ ಆವರಿಸಿದೆ. ಕೇಂದ್ರ ಸರ್ಕಾರ ನಾಗರಿಕರಲ್ಲಿ ಜಾಗೃತಿ ಮೂಡಿಸಲು 244 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ನಡೆಸುತ್ತಿದೆ. ಗೃಹ ಸಚಿವ ಪರಮೇಶ್ವರ ರಕ್ಷಣಾ ಕಾರ್ಯವನ್ನು ವೇಗಗೊಳಿಸುವಂತೆ ಸೂಚಿಸಿದ್ದಾರೆ.

ಪೂರ್ತಿ ಓದಿ

05:20 PM (IST) May 07

ಆಪರೇಷನ್ ಸಿಂಧೂರ್‌ಗೆ 'ಶಾಂತಿಮಂತ್ರ' ಪಠಿಸಿದ ಕಾಂಗ್ರೆಸ್; ಆದ್ರೆ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶ್ಲಾಘನೆ

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಶ್ಲಾಘಿಸಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮತ್ತು ಭದ್ರತಾ ಪಡೆಗಳ ಪರ ನಿಲ್ಲುವುದಾಗಿ ತಿಳಿಸಿದ್ದಾರೆ.

ಪೂರ್ತಿ ಓದಿ

05:11 PM (IST) May 07

ನಿನ್ನ ಸಂತಾಪ ನರಕಕ್ಕೆ ಹೋಗಲಿ-ಭಾರತದ ಉಪ್ಪು ತಿಂದ ನಟನಿಗೆ ನೀರು ಕುಡಿಸಿದ ಪಾಕಿಸ್ತಾನಿ ಅಭಿಮಾನಿಗಳು!

ಪಾಕಿಸ್ತಾನ ನಟ ಫವಾದ್ ಖಾನ್, 'ಆಪರೇಷನ್ ಸಿಂಧೂರ'ದಲ್ಲಿ ಮೃತಪಟ್ಟ ಉಗ್ರರಿಗೆ ಸಂತಾಪ ಸೂಚಿಸಿ ವಿವಾದಕ್ಕೆ ಗುರಿಯಾಗಿದ್ದಾರೆ. ಈ ಹೇಳಿಕೆ ಭಾರತ ಮತ್ತು ಪಾಕಿಸ್ತಾನದಲ್ಲಿ ಟೀಕೆಗೆ ಗುರಿಯಾಗಿದೆ. ಫವಾದ್ ಖಾನ್ ಅವರನ್ನು ಭಾರತದಲ್ಲಿ ಬಹಿಷ್ಕರಿಸಲಾಗಿದೆ ಮತ್ತು ಅವರ ಸಿನಿಮಾಗಳನ್ನು ನಿಷೇಧಿಸಲಾಗಿದೆ.

ಪೂರ್ತಿ ಓದಿ

05:11 PM (IST) May 07

ಕಾಲು ಕೆರೆದುಕೊಂಡು ಬರಲು ಸಿದ್ಧವಾದ ಪಾಕ್‌, ಭಾರತಕ್ಕೆ ಉತ್ತರ ನೀಡಲು ಸೇನೆಗೆ ಸ್ವಾತಂತ್ರ್ಯ ನೀಡಿದ ಪಾಕ್‌ ಪ್ರಧಾನಿ!

ಭಾರತದ ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನ ಕುದ್ದುಹೋಗಿದ್ದು, ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಪಾಕಿಸ್ತಾನದ ಪ್ರಧಾನಿ ಶೆಷಬಾಜ್ ಷರೀಫ್ ಭದ್ರತಾ ಸಭೆ ಕರೆದಿದ್ದು, ಚೀನಾಗೆ ಭಾರತದ ದಾಳಿಯ ಬಗ್ಗೆ ಮಾಹಿತಿ ನೀಡಿದೆ.

ಪೂರ್ತಿ ಓದಿ

05:07 PM (IST) May 07

ಮುಂದಿನ ಪೋಪ್ ಆಯ್ಕೆ ಪ್ರಕ್ರಿಯೆಯಲ್ಲಿ ದಕ್ಷಿಣ ಭಾರತದ ದಲಿತ ಮೂಲದ ಆ್ಯಂಟನಿ ಪೂಲಾ

ಮುಂದಿನ ಪೋಪ್ ಆಯ್ಕೆಯಲ್ಲಿ ವಿಶ್ವದ 138 ಕಾರ್ಡಿನಲ್ ಪಾಲ್ಗೊಂಡಿದ್ದಾರೆ. ವಿಶೇಷ ಅಂದರೆ ಈ ಆಯ್ಕೆ ಪ್ರಕ್ರಿಯೆಲ್ಲಿ ಪಾಲ್ಗೊಂಡ ಕಾರ್ಡಿನಲ್ ಪೈಕಿ ಭಾರತದ ದಲಿತ ಕ್ರಿಶ್ಚಿಯನ್ ಆ್ಯಂಟಿನಿ ಪೋಲಾ ಕೂಡ ಒಬ್ಬರಾಗಿದ್ದಾರೆ. ಯಾರು ಈ ದಲಿತ ಕ್ರಿಶ್ಚಿಯನ್ ಆ್ಯಂಟನಿ ಪೂಲಾ?

ಪೂರ್ತಿ ಓದಿ

05:04 PM (IST) May 07

ಆಪರೇಷನ್ ಸಿಂಧೂರನ್ನು ವಿದೇಶಿ ಮಾಧ್ಯಮಗಳು ಬಣ್ಣಿಸಿದ್ದು ಹೇಗೆ?

ಆಪರೇಷನ್ ಸಿಂಧೂರ್‌ ಕಾರ್ಯಾಚರಣೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿದ್ದು, ಅವು ಈ ಘಟನೆಯನ್ನು ಬಣ್ಣಿಸಿದ್ದು ಹೇಗೆ?

ಪೂರ್ತಿ ಓದಿ

04:54 PM (IST) May 07

ಭಾರತದ ಏರ್‌ಸ್ಟ್ರೈಕ್‌ ಬಳಿಕ ಸಿಂಧೂರ Vs ಕುಂಕುಮದ ಬಗ್ಗೆ ಜೋರು ಚರ್ಚೆ, ಏನಿದರ ನಡುವಿನ ವ್ಯತ್ಯಾಸ?

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತವು 'ಆಪರೇಷನ್ ಸಿಂಧೂರ್' ಎಂಬ ಸಂಕೇತನಾಮದ ಕಾರ್ಯಾಚರಣೆ ನಡೆಸಿತು. ಈ ಲೇಖನವು ಸಿಂಧೂರ್ ಮತ್ತು ಕುಂಕುಮದ ಸಾಂಸ್ಕೃತಿಕ ಮಹತ್ವವನ್ನು, ಕಾರ್ಯಾಚರಣೆಯ ಹೆಸರಿನ ಹಿಂದಿನ ಕಾರಣವನ್ನು ವಿವರಿಸುತ್ತದೆ.

ಪೂರ್ತಿ ಓದಿ

04:50 PM (IST) May 07

ಬುಧ ಮತ್ತು ಶನಿಯಿಂದ ದ್ವಾದಶ ರಾಜಯೋಗ, ಈ 3 ರಾಶಿಗೆ ಅದೃಷ್ಟ, ಸಂಪತ್ತು

ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ತಮ್ಮ ಸ್ಥಾನಗಳನ್ನು ಬದಲಾಯಿಸುತ್ತವೆ. ಮೇಷ ರಾಶಿಯಲ್ಲಿ ಬುಧನ ಸಂಚಾರದ ನಂತರ, ದ್ವಿದಶ ರಾಜಯೋಗವು ರೂಪುಗೊಳ್ಳುತ್ತದೆ.
 

ಪೂರ್ತಿ ಓದಿ

04:45 PM (IST) May 07

'ಭಾರತದ ಸಿಂಧೂರಕ್ಕೆ ಕಲೆ ಬಿದ್ದಿತ್ತು, ಅದೀಗ ಮರಳಿ ಸ್ಥಾಪನೆಯಾಗಿದೆ'-Kiccha Sudeep On Operation Sindoor

ಪಾಕ್ ಉಗ್ರರ ಮೇಲಿನ ದಾಳಿಯ ಬಗ್ಗೆ ಭಾರತ ಸಂಭ್ರಮಿಸುತ್ತಿದೆ. ಕಿಚ್ಚ ಸುದೀಪ್, ಜಗ್ಗೇಶ್ ಮತ್ತು ಪವನ್ ಕಲ್ಯಾಣ್ ಸೇರಿದಂತೆ ಅನೇಕರು 'ಆಪರೇಷನ್ ಸಿಂಧೂರ'ದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಕಾರ್ಯಾಚರಣೆಯು ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿದೆ.

ಪೂರ್ತಿ ಓದಿ

04:31 PM (IST) May 07

ತುರ್ತು ಸಭೆಯಲ್ಲಿ ಪಾಕ್ ಪ್ರಧಾನಿ ಕೆಂಡಾಮಂಡಲ, ಉಗ್ರರೇ ಇಲ್ಲದ ದೇಶದ ಮೇಲೆ ದಾಳಿ ಎಂದ ಷರೀಫ್

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಕೆಂಡಾಮಂಡಲರಾಗಿದ್ದಾರೆ. ಭಾರತದ ದಾಳಿ ಯುದ್ಧ ಕೃತ್ಯ. ಇದಕ್ಕೆ ಭಾರತ ಬೆಲೆ ತೆರಬೇಕು ಎಂದಿದ್ದಾರೆ. ಪಾಕಿಸ್ತಾನದ ಷ್ಟ್ರೀಯ ಭದ್ರತಾ ಸಮಿತಿ ಜೊತಗಿನ ಸಭೆಯಲ್ಲಿ ಪಾಕ್ ಪ್ರಧಾನಿ ಹೇಳಿದ್ದೇನು? 

ಪೂರ್ತಿ ಓದಿ

04:18 PM (IST) May 07

ಐಪಿಎಲ್ ಮೇಲೆ ಆಪರೇಷನ್ ಸಿಂಧೂರ್ ಎಫೆಕ್ಟ್; ಧರ್ಮಶಾಲಾದಿಂದ ಪಂಜಾಬ್-ಮುಂಬೈ ಪಂದ್ಯ ಶಿಫ್ಟ್?

ಪಾಕಿಸ್ತಾನ ಗಡಿಯಲ್ಲಿರುವ ವಿಮಾನ ನಿಲ್ದಾಣಗಳನ್ನು ಮೇ 10 ರವರೆಗೆ ಮುಚ್ಚಿರುವುದು ಐಪಿಎಲ್ ಪಂದ್ಯಗಳ ಮೇಲೆ ಪರಿಣಾಮ ಬೀರಲಿದೆ. ಚಂಡೀಗಢ ವಿಮಾನ ನಿಲ್ದಾಣ ಮುಚ್ಚಿರುವುದರಿಂದ ಮುಂಬೈ ತಂಡ ಧರ್ಮಶಾಲಾ ತಲುಪುವುದು ಕಷ್ಟವಾಗಿದ್ದು, ಪಂದ್ಯ ಸ್ಥಳಾಂತರವಾಗಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಪೂರ್ತಿ ಓದಿ

04:11 PM (IST) May 07

ಆಪರೇಷನ್ ಸಿಂಧೂರ್ ಎಫೆಕ್ಟ್: 11 ಏರ್ಪೋರ್ಟ್‌ಗಳೂ ಬಂದ್‌, ವಿಮಾನಗಳ ಹಾರಾಟ ರದ್ದು

ಆಪರೇಷನ್ ಸಿಂದೂರ್ ವಾಯುದಾಳಿಯ ನಂತರ ಭಾರತದಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಮತ್ತು 11 ವಿಮಾನ ನಿಲ್ದಾಣಗಳಲ್ಲಿ ವಿಮಾನಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಗಡಿ ಪ್ರದೇಶಗಳಲ್ಲಿ ಶಾಲೆಗಳನ್ನು ಸಹ ಮುಚ್ಚಲಾಗಿದೆ.

ಪೂರ್ತಿ ಓದಿ

04:03 PM (IST) May 07

ಆಪರೇಷನ್ ಸಿಂಧೂರ್: ಭಯೋತ್ಪಾದಕರಿಗೆ ಭಾರತದ ಪ್ರತ್ಯುತ್ತರ

ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತವು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು. LMS ತಂತ್ರಜ್ಞಾನವನ್ನು ಬಳಸಿಕೊಂಡು, ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದವು.

ಪೂರ್ತಿ ಓದಿ

03:54 PM (IST) May 07

ಆಪರೇಷನ್ ಸಿಂಧೂರ ಯಶಸ್ವಿ; ರಾಜ್ಯಾದ್ಯಂತ ದೇವಾಲಯಗಳಲ್ಲಿ ಸೇನೆಗೆ ವಿಶೇಷ ಪೂಜೆ

ಭಾರತೀಯ ಸೇನೆಯ 'ಆಪರೇಷನ್ ಸಿಂಧೂರ್' ಯಶಸ್ಸಿನ ಹಿನ್ನೆಲೆಯಲ್ಲಿ ಕರ್ನಾಟಕದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ಸರ್ಕಾರ ಆದೇಶಿಸಿದೆ. ಈ ಪೂಜೆಗಳು ಭಾರತೀಯ ಸೇನೆಗೆ ಶಕ್ತಿ ತುಂಬಲಿ ಎಂಬ ಉದ್ದೇಶದಿಂದ ನೆರವೇರುತ್ತಿವೆ.

ಪೂರ್ತಿ ಓದಿ

03:43 PM (IST) May 07

25 ನಿಮಿಷ, 24 ಸ್ಟ್ರೈಕ್ , 9 ಉಗ್ರರ ನೆಲೆ ಧ್ವಂಸ; ವಿಡಿಯೋ ರಿಲೀಸ್ ಮಾಡಿದ ಭಾರತೀಯ ಸೇನೆ

ಇಂದು ರಾತ್ರಿ 1.05 ರಿಂದ 1.30ರ ವರಗೆ 25 ನಿಮಿಷಗಳ ಕಾಲ ಭಾರತ ಶಸಸ್ತ್ರ ಪಡೆ ಜಂಟಿಯಾಗಿ ದಾಳಿ ನಡೆಸಿದೆ. ಕೊಟ್ಟಿರುವ 24 ಮಿಸೈಲ್ ಸ್ಟ್ರೈಕ್‌ಗೆ 9 ಉಗ್ರ ನೆಲೆಗಳು ಧ್ವಂಸವಾಗಿದೆ. ಈ ಬಾರಿ ಭಾರತೀಯ  ಸೇನೆ ದಾಖಲೆ ಕೇಳುವ ಮೊದಲೇ ವಿಡಿಯೋ ರಿಲೀಸ್ ಮಾಡಿದೆ.

ಪೂರ್ತಿ ಓದಿ

More Trending News