LIVE NOW
Published : Mar 06, 2026, 07:41 AM ISTUpdated : Mar 06, 2026, 11:19 PM IST

India News Live: TTD Rules - ತಿರುಪತಿಯಲ್ಲಿ ಬರ್ತ್‌ಡೇ ಕೇಕ್ ಕಟ್ ಮಾಡಂಗಿಲ್ವಾ? ಬೇರೆ ಯಾವೆಲ್ಲಾ ನಿಯಮಗಳಿವೆ?

ಸಾರಾಂಶ

ನವದೆಹಲಿ (ಮಾ.6): ಭಾರತದ ಬುಡದಲ್ಲಿಯೇ ತನ್ನ ಯುದ್ಧನೌಕೆ ನಾಶವಾದ ಬೆನ್ನಲ್ಲಿಯೇ ಅಮೆರಿಕ ವಿರುದ್ಧದ ಯುದ್ಧಕ್ಕೆ ಭಾರತವನ್ನೂ ಇರಾನ್‌ ಎಳೆದಿದೆ. ನಮ್ಮ ಯುದ್ಧನೌಕೆ ಭಾರತದ ಅತಿಥಿಯಾಗಿತ್ತು. ಅದರ ಮೇಲೆ ಅಮೆರಿಕ ತನ್ನ ಕ್ರೌರ್ಯ ಮೆರೆದಿದೆ. ನೆನಪಿಟ್ಟುಕೊಳ್ಳಿ ಇದಕ್ಕಾಗಿ ಅಮೆರಿಕ ಪಶ್ಚಾತ್ತಾಪ ಪಡುವ ದಿನ ಖಂಡಿತಾ ಬರಲಿದೆ ಎಂದು ಇರಾನ್‌ ಕಿಡಿಕಾರಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

11:19 PM (IST) Mar 06

TTD Rules - ತಿರುಪತಿಯಲ್ಲಿ ಬರ್ತ್‌ಡೇ ಕೇಕ್ ಕಟ್ ಮಾಡಂಗಿಲ್ವಾ? ಬೇರೆ ಯಾವೆಲ್ಲಾ ನಿಯಮಗಳಿವೆ?

ಪ್ರತಿದಿನ ಸಾವಿರಾರು ಭಕ್ತರು ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯುತ್ತಾರೆ. ದೇವಾಲಯದ ಪಾವಿತ್ರ್ಯತೆ ಕಾಪಾಡಲು ಟಿಟಿಡಿ ಹಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಇತ್ತೀಚೆಗೆ ನಡೆದ ಒಂದು ವಿವಾದ ಈಗ ಚರ್ಚೆಗೆ ಗ್ರಾಸವಾಗಿದೆ.

Read Full Story

10:43 PM (IST) Mar 06

2023ರ ಕಹಿ ನೆನಪು, ಟಿ20 ಫೈನಲ್‌ಗೆ ಟೀಂ ಇಂಡಿಯಾ ಹೊಟೆಲ್ ಬದಲು, ಈ ಬಾರಿ ಕೈಹಿಡಿಯುತ್ತಾ ನಂಬಿಕೆ?

2023ರ ಕಹಿ ನೆನಪು, ಟಿ20 ಫೈನಲ್‌ಗೆ ಟೀಂ ಇಂಡಿಯಾ ಹೊಟೆಲ್ ಬದಲು, ಈ ಬಾರಿ ಕೈಹಿಡಿಯುತ್ತಾ ನಂಬಿಕೆ? ಚಂದ್ರಗ್ರಹಣಕ್ಕೆ ಅಭ್ಯಾಸ ಮುಂದೂಡಿಕೆಯಿಂದ ಹಿಡಿದು ಈ ಬಾರಿಯ ಟೀಂ ಇಂಡಿಯಾ ಶುಭಶಕುನಕ್ಕಾಗಿ ಭಾರಿ ಕಸರತ್ತು ನಡೆಸಿದೆ.

Read Full Story

09:50 PM (IST) Mar 06

ರಾಮ್ ಚರಣ್ ರಿಜೆಕ್ಟ್ ಮಾಡಿದ ಫ್ಲಾಪ್ ಸಿನಿಮಾಗಳಿವು - ಚಿರಂಜೀವಿ ಟೈಟಲ್ ಉಳಿಸಿದ್ದೇ ಒಳ್ಳೇದಾಯ್ತು!

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತಮ್ಮ ವೃತ್ತಿಜೀವನದಲ್ಲಿ ಕೆಲವು ಸಿನಿಮಾಗಳನ್ನು ತಿರಸ್ಕರಿಸಿದ್ದಾರೆ. ಚರಣ್ ಬೇಡ ಅಂದ ಕಥೆಗಳು ನಾನಿ, ರವಿತೇಜರಂತಹ ಹೀರೋಗಳ ಪಾಲಾದವು. ಆ ಸಿನಿಮಾಗಳ ರಿಸಲ್ಟ್ ಏನಾಯ್ತು ಅಂತ ಈ ಫೋಟೋ ಸ್ಟೋರಿಯಲ್ಲಿ ನೋಡೋಣ.

Read Full Story

09:42 PM (IST) Mar 06

ರಹಸ್ಯ ಸ್ಥಳದಲ್ಲಿ ಜೀವಂತವಾಗಿದ್ದಾರಾ ಖಮೇನಿ? ಅಧಿಕೃತ ಎಕ್ಸ್ ಖಾತೆಯಿಂದ ಪ್ರತೀಕಾರದ ಮೊದಲ ಪೋಸ್ಟ್

ರಹಸ್ಯ ಸ್ಥಳದಲ್ಲಿ ಜೀವಂತವಾಗಿದ್ದಾರಾ ಖಮೇನಿ? ಅಧಿಕೃತ ಎಕ್ಸ್ ಖಾತೆಯಿಂದ ಪ್ರತೀಕಾರದ ಮೊದಲ ಪೋಸ್ಟ್ ಮಾಡಲಾಗಿದೆ. ಖಮೇನಿ ಹತ್ಯೆಯಾದ ಬಳಿಕ ಇದೀಗ ಪ್ರತೀಕಾರದ ಪೋಸ್ಟ್ ಖಮೇನಿ ಅಧಿಕೃತ ಖಾತೆಯಿಂದ ಪೋಸ್ಟ್ ಆಗಿದೆ.

 

Read Full Story

09:26 PM (IST) Mar 06

5 ನಿಮಿಷ ಸಮಯ ಕೇಳಿದ ನಟಿ ಪ್ರಿಯಾಮಣಿ ಬಳಿಕ ಆ ಡ್ರೆಸ್ ಹಾಕೊಂಡ್ರ.. ಅಷ್ಟಕ್ಕೂ ಆಗಿದ್ದೇನು?

ಶೂಟಿಂಗ್ ಶುರುವಾದ ಮೇಲೆ ಸ್ಟಾರ್ ನಟಿಯೊಬ್ಬರಿಗೆ ನಿರ್ಮಾಪಕರು ಬಿಕಿನಿ ಧರಿಸುವಂತೆ ಹೇಳಿದ್ರಂತೆ. ಇದಕ್ಕೆ ಆ ನಟಿಯ ಪ್ರತಿಕ್ರಿಯೆ ಹೇಗಿತ್ತು? ಅಷ್ಟಕ್ಕೂ ಅದು ಯಾವ ಸಿನಿಮಾ? ಈ ಬಗ್ಗೆ ಇಲ್ಲಿದೆ ಮಾಹಿತಿ.

Read Full Story

07:53 PM (IST) Mar 06

ತ್ರಿಶಾ ಜೊತೆ ಬಹಿರಂಗವಾಗಿ ಕಾಣಿಸಿಕೊಳ್ಳೋ ಮೊದಲೇ ನಟ ವಿಜಯ್ ಬಾಡಿಗಾರ್ಡ್ ಕೊಟ್ಟ ಸುಳಿವು

ತ್ರಿಶಾ ಜೊತೆ ಬಹಿರಂಗವಾಗಿ ಕಾಣಿಸಿಕೊಳ್ಳೋ ಮೊದಲೇ ನಟ ವಿಜಯ್ ಬಾಡಿಗಾರ್ಡ್ ಕೊಟ್ಟ ಸುಳಿವು, ವಿಜಯ್ ಹಾಗೂ ತ್ರಿಶಾ ಜೋಡಿ ಒಂದೇ ಕಾರಿನಲ್ಲಿ ಮ್ಯಾಚಿಂಗ ಡ್ರೆಸ್ ಹಾಕಿ ಕಾಣಿಸಿಕೊಳ್ಳವ ಮೊದಲೇ ನಟನ ಬಾಡಿಗಾರ್ಡ್ ಮಹತ್ವದ ಸುಳಿವು ನೀಡಿದ್ದರು.

 

Read Full Story

07:08 PM (IST) Mar 06

ಮಹಿಳೆಯರು ಟಿಂಡರ್ ಡೇಟಿಂಗ್ ಆ್ಯಪ್ ಬಳಸೋದು ಹೀಗಾ? ವಿಡಿಯೋ ನೋಡಿಯೇ ಸುಸ್ತಾದ ಜನ

ಮಹಿಳೆಯರು ಟಿಂಡರ್ ಡೇಟಿಂಗ್ ಆ್ಯಪ್ ಬಳಸೋದು ಹೀಗಾ? ವಿಡಿಯೋ ನೋಡಿಯೇ ಸುಸ್ತಾದ ಜನ, ಡೇಟಿಂಗ್ ಆ್ಯಪ್ ಮೂಲಕವೇ ಇದೀಗ ಜನ ಹೆಚ್ಚು ಸಕ್ರಿಯವಾಗಿದ್ದಾರೆ. ಇದೀಗ ಮಹಿಳೆಯರು ಡೇಟಿಂಗ್ ಆ್ಯಪ್ ಬಳಕೆ ಕುರಿತು ಭಾರಿ ಚರ್ಚೆಯಾಗುತ್ತಿದೆ.

 

Read Full Story

06:57 PM (IST) Mar 06

ಕತ್ತೆಗಳಿಂದ ಕೋಟ್ಯಧಿಪತಿಯಾಗಲು ಕೇಂದ್ರದ ಬಂಪರ್​ ಆಫರ್​ - 50 ಲಕ್ಷದ ಸಹಾಯಧನ- ಡಿಟೇಲ್ಸ್ ಇಲ್ಲಿದೆ

ಕೇಂದ್ರ ಸರ್ಕಾರವು ರಾಷ್ಟ್ರೀಯ ಜಾನುವಾರು ಮಿಷನ್ (NLM) ಅಡಿಯಲ್ಲಿ ಕತ್ತೆ ಸಾಕಾಣಿಕೆಯನ್ನು ಉತ್ತೇಜಿಸಲು ಬಂಪರ್ ಆಫರ್ ನೀಡಿದೆ. ಈ ಯೋಜನೆಯಡಿ, ಉದ್ಯಮಿಗಳು ತಳಿ ಸಾಕಣೆ ಕೇಂದ್ರಗಳನ್ನು ಸ್ಥಾಪಿಸಲು 50 ಲಕ್ಷದವರೆಗೆ ಬಂಡವಾಳ ಸಬ್ಸಿಡಿಯನ್ನು ಪಡೆಯಬಹುದು.

Read Full Story

06:18 PM (IST) Mar 06

ಗಲ್ಫ್‌ನಲ್ಲಿ ಆತಂಕದ ಕಾರ್ಮೋಡ - ಬಹ್ರೇನ್‌ನಲ್ಲಿ ಕತಾರ್ ನೌಕಾಪಡೆ ಸಿಬ್ಬಂದಿ ನೆಲೆಸಿದ್ದ ಕಟ್ಟಡಗಳ ಮೇಲೆ ಇರಾನ್ ದಾಳಿ

ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ತನ್ನ ದಾಳಿಯನ್ನು ಮುಂದುವರೆಸಿದ್ದು, ಬಹ್ರೇನ್‌ನಲ್ಲಿರುವ ಕತಾರ್ ನೌಕಾ ಸಿಬ್ಬಂದಿ ವಾಸಿಸುವ ಕಟ್ಟಡಗಳನ್ನು ಗುರಿಯಾಗಿಸಿಕೊಂಡಿದೆ. ಈ ಆಕ್ರಮಣಕಾರಿ ಕೃತ್ಯವನ್ನು ಕತಾರ್ ತೀವ್ರವಾಗಿ ಖಂಡಿಸಿದ್ದು, ಇದು ಬಹ್ರೇನ್‌ನ ಸಾರ್ವಭೌಮತ್ವದ ಉಲ್ಲಂಘನೆ ಮತ್ತು ಪ್ರಾದೇಶಿಕ ಭದ್ರತೆಗೆ ಬೆದರಿಕೆ ಎಂದು ಹೇಳಿದೆ.
Read Full Story

06:16 PM (IST) Mar 06

ಕಳರಿ ಪಯಟ್ಟು ಪಟ್ಟು ಕಲಿತ ರಾಹುಲ್ ಗಾಂಧಿ, ನಾಯಕರ ಕಸರತ್ತಿಗೆ ಕಾಂಗ್ರೆಸ್ಸಿಗರೇ ಸುಸ್ತು

ಕಳರಿ ಪಯಟ್ಟು ಪಟ್ಟು ಕಲಿತ ರಾಹುಲ್ ಗಾಂಧಿ, ನಾಯಕರ ಕಸರತ್ತಿಗೆ ಕಾಂಗ್ರೆಸ್ಸಿಗರೇ ಸುಸ್ತು, ಕಾಲೇಜು ಭೇಟಿ ವೇಳೆ ವಿದ್ಯಾರ್ಥಿನಿ ಸೂಚನೆ ಮೇರೆಗೆ ರಾಹುಲ್ ಗಾಂಧಿ ಕೇರಳದ ಪುರಾತನ ಮಾರ್ಷಲ್ ಆರ್ಟ್ಸ್ ಕಲೆ ಕಳರಿ ಪಯಟ್ಟು ಪಟ್ಟುಗಳನ್ನು ಪ್ರದರ್ಶಿಸಿದ್ದಾರೆ.

 

Read Full Story

06:15 PM (IST) Mar 06

ಕ್ರಿಕೆಟ್ ವರ್ಲ್ಡ್ ಕಪ್ ದಿಕ್ಕನ್ನೇ ಬದಲಿಸಿದ ಮ್ಯಾಜಿಕಲ್ 3 ಕ್ಯಾಚ್‌ಗಳನ್ನು ನೆನಪಿಸಿದ ಅಕ್ಷರ್ ಪಟೇಲ್!

ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ, ಅಕ್ಷರ್ ಪಟೇಲ್ ಅದ್ಭುತ ಕ್ಯಾಚ್‌ ಹಿಡಿದು ಪಂದ್ಯದ ಗತಿಯನ್ನೇ ಬದಲಿಸಿದರು. ಹ್ಯಾರಿ ಬ್ರೂಕ್ ವಿಕೆಟ್ ಪಡೆಯಲು 24 ಮೀಟರ್ ಓಡಿ ಹಿಡಿದ ಕ್ಯಾಚ್ ಭಾರತದ ಗೆಲುವಿಗೆ ಕಾರಣವಾಯಿತು. ಇದಕ್ಕೂ ಮುನ್ನ ವರ್ಲ್ಡ್ ಕಪ್ ಟರ್ನಿಂಗ್ ಪಾಯಿಂಟ್ ಕ್ಯಾಚ್‌ಗಳು ಇಲ್ಲಿವೆ ನೋಡಿ.

Read Full Story

05:46 PM (IST) Mar 06

ದೇವರಕೊಂಡ ಜಸ್ಟ್​ ಫ್ರೆಂಡ್​ - ದಳಪತಿಯನ್ನೇ ಮದ್ವೆಯಾಗೋದು ಎಂದು ದೃಷ್ಟಿ ತೆಗೆದ Rashmika Mandanna! ವಿಡಿಯೋ ವೈರಲ್

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಸುದ್ದಿಯ ನಡುವೆ, ದಳಪತಿ ವಿಜಯ್ ವಿಚ್ಛೇದನದ ವದಂತಿ ಹಬ್ಬಿದೆ. ಈ ಸಮಯದಲ್ಲಿ, ರಶ್ಮಿಕಾ ತಾನು ದಳಪತಿ ವಿಜಯ್ ಅವರನ್ನು ಮದುವೆಯಾಗುವುದಾಗಿ ಹೇಳಿದ್ದ ಹಳೆಯ ವಿಡಿಯೋವೊಂದು ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ.
Read Full Story

05:31 PM (IST) Mar 06

ಪೇಟ್ರಿಯಾಟ್ ಸಿನಿಮಾದ ವಿವಾದವೇನು? ಮಮ್ಮುಟ್ಟಿ, ಮೋಹನ್‌ಲಾಲ್ ನಟನೆಯ ಈ ಸಿನಿಮಾವನ್ನು ಕೇರಳದಲ್ಲಿ ನಿಷೇಧಿಸಿದ್ದೇಕೆ?

ಮಮ್ಮುಟ್ಟಿ ಮತ್ತು ಮೋಹನ್‌ಲಾಲ್ ಅಭಿನಯದ ಬಹುನಿರೀಕ್ಷಿತ 'ಪೇಟ್ರಿಯಾಟ್' ಚಿತ್ರದ ಬಿಡುಗಡೆಯನ್ನು ಕೇರಳದ ಚಿತ್ರ ಪ್ರದರ್ಶಕರ ಸಂಘಟನೆ (FEUOK) ನಿಷೇಧಿಸಿದೆ.  ಸಂಘಟನೆಯು ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ಪ್ರದರ್ಶಿಸದಂತೆ ಚಿತ್ರಮಂದಿರಗಳ ಮಾಲೀಕರಿಗೆ ನಿರ್ದೇಶನ ನೀಡಿದೆ.

Read Full Story

05:10 PM (IST) Mar 06

ನಿತ್ಯ 10 ನಿಮಿಷ ಈ ವ್ಯಾಯಾಮ, ಹತ್ತಾರು ಮಾತ್ರೆಗಳು ಔಟ್​ - ವಿಡಿಯೋ ಮೂಲಕ ನಟಿ Malaika Arora ಮಾಹಿತಿ

52ರ ಹರೆಯದ ನಟಿ ಮಲೈಕಾ ಅರೋರಾ ತಮ್ಮ ಫಿಟ್ನೆಸ್​ಗಾಗಿ ಒಂದು ಸೂಪರ್​ ಚೈನೀಸ್​ ವ್ಯಾಯಾಮವನ್ನು ಪರಿಚಯಿಸಿದ್ದಾರೆ. ಈ ವ್ಯಾಯಾಮವು ದೇಹದ ಕೊಬ್ಬನ್ನು ಕರಗಿಸಲು, ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಕಾರಿ ಎಂದು ಅವರು ಹೇಳಿದ್ದಾರೆ. 

Read Full Story

04:48 PM (IST) Mar 06

ಬಾಯ್‌ಫ್ರೆಂಡ್ ಕ್ಯಾಂಪೇನ್, ವಿದ್ಯಾರ್ಥಿನಿಯರ ಕೂಪಕ್ಕೆ ತಳ್ಳಿ ಹುಡುಗರ ಜೊತೆ ವಿಡಿಯೋ ಕಾಲ್ ಲೈಂಗಿಕತೆ

ಬಾಯ್‌ಫ್ರೆಂಡ್ ಕ್ಯಾಂಪೇನ್, ವಿದ್ಯಾರ್ಥಿನಿಯರ ಕೂಪಕ್ಕೆ ತಳ್ಳಿ ಹುಡುಗರ ಜೊತೆ ವಿಡಿಯೋ ಕಾಲ್ ಲೈಂಗಿಕತೆ, ವಿದ್ಯಾರ್ಥಿನಿ ಒಬ್ಬಳು ಈ ಅಭಿಯಾನ ಆರಂಭಿಸಿದ್ದಾಳೆ. ಬಳಿಕ ಆಕೆಯ ಗೆಳತಿಯರು ಸೇರಿದಂತೆ ಹಲವರನ್ನು ಒತ್ತಾಯಪೂರ್ವಕವಾಗಿ ಕೂಪಕ್ಕೆ ತಳ್ಳಿದ್ದಾಳೆ.

Read Full Story

04:01 PM (IST) Mar 06

ಇಶಾನ್ ಕಿಶನ್, ವರುಣ್ ಚಕ್ರವರ್ತಿ ಔಟ್, ಟಿ20 ವಿಶ್ವಕಪ್ ಹೀರೋ ಆಗ್ತಾರಾ ಸಂಜು ಸ್ಯಾಮ್ಸನ್? ಐಸಿಸಿ ಪಟ್ಟಿ ರಿಲೀಸ್!

2026ರ ಟಿ20 ವಿಶ್ವಕಪ್‌ನ 'ಟೂರ್ನಿಯ ಶ್ರೇಷ್ಠ ಆಟಗಾರ' ಪ್ರಶಸ್ತಿಗಾಗಿ ಐಸಿಸಿ ನಾಮನಿರ್ದೇಶಿತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತದಿಂದ ಸಂಜು ಸ್ಯಾಮ್ಸನ್ ಮಾತ್ರ ಈ ಗೌರವಕ್ಕೆ ಪಾತ್ರರಾಗಿದ್ದು, ನಿರ್ಣಾಯಕ ಪಂದ್ಯಗಳಲ್ಲಿ ಅವರ ಪ್ರದರ್ಶನವನ್ನು ಪರಿಗಣಿಸಲಾಗಿದೆ.

Read Full Story

03:59 PM (IST) Mar 06

ಪರೀಕ್ಷೆ ಬರೆದು ಟಾಯ್ಲೆಟ್‌‌ನಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ, ಮಗುವನ್ನು ಡಸ್ಟ್‌ಬಿನ್ ಎಸೆದ ತಾಯಿ

ಪರೀಕ್ಷೆ ಬರೆದು ಟಾಯ್ಲೆಟ್‌‌ನಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ, ಮಗುವನ್ನು ಡಸ್ಟ್‌ಬಿನ್ ಎಸೆದ ತಾಯಿ, ಪರೀಕ್ಷೆ ಬಳಿಕ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಾಯಿ ಜೊತೆ ಆಸ್ಪತ್ರೆ ತೆರಳಿದ ವಿದ್ಯಾರ್ಥಿನಿ ಡೆಲಿವರಿಯಾಗಿದ್ದಾಳೆ.

Read Full Story

03:47 PM (IST) Mar 06

ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್‌ - 1.1 ಲಕ್ಷ ಕೋಟಿ ಮೌಲ್ಯದ ಚಿನ್ನ ಮಾರಿ ಶಸ್ತ್ರಾಸ್ತ್ರ ಖರೀದಿಗೆ ಭಾರತದ ವೈರಿ ದೇಶ!

ಯುದ್ಧದ ಭೀತಿಯಿಂದಾಗಿ, ವಿಶ್ವದ ಪ್ರಮುಖ ಚಿನ್ನದ ದಾಸ್ತಾನುದಾರ ದೇಶವಾದ ಪೋಲೆಂಡ್ ತನ್ನ ರಕ್ಷಣಾ ಪಡೆಯನ್ನು ಬಲಪಡಿಸಲು ಮುಂದಾಗಿದೆ. ಇದಕ್ಕಾಗಿ, ಗಗನಕ್ಕೇರಿರುವ ಚಿನ್ನದ ಬೆಲೆಯ ಲಾಭ ಪಡೆದು, ಸುಮಾರು ₹1.1 ಲಕ್ಷ ಕೋಟಿ ಮೌಲ್ಯದ ಬಂಗಾರವನ್ನು ಮಾರಿ ಯುದ್ಧೋಪಕರಣಗಳನ್ನು ಖರೀದಿಸಲು ನಿರ್ಧರಿಸಿದೆ.

Read Full Story

03:29 PM (IST) Mar 06

ಟಿ20 ವಿಶ್ವಕಪ್‌ನಲ್ಲಿ ಎರಡು ಸೆಂಚುರಿ ಮಿಸ್ ಆಯ್ತಾ? ಪತ್ರಕರ್ತರ ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ಸಂಜು ಸ್ಯಾಮ್ಸನ್!

ತಮ್ಮ ಮೊದಲ ವಿಶ್ವಕಪ್ ಫೈನಲ್‌ಗೆ ಸಜ್ಜಾಗಿರುವ ಸಂಜು ಸ್ಯಾಮ್ಸನ್, ಕಳೆದ ಆರು ತಿಂಗಳ ಸವಾಲುಗಳನ್ನು ಮತ್ತು ತಂಡದಲ್ಲಿನ ತಮ್ಮ ಜವಾಬ್ದಾರಿಯನ್ನು ಹಂಚಿಕೊಂಡಿದ್ದಾರೆ. ಫಾರ್ಮ್ ಕೊರತೆಯಿಂದ ವಿಶ್ವಕಪ್ ಸ್ಥಾನವೇ ಅನಿಶ್ಚಿತವಾಗಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

Read Full Story

03:19 PM (IST) Mar 06

Budget 2026 - ರೈತರಿಗೆ ಭರ್ಜರಿ ಸಿಹಿ ಸುದ್ದಿ! ಸಾಲ ಮನ್ನಾ ಘೋಷಿಸಿದ ಮುಖ್ಯಮಂತ್ರಿ; ಯಾರಿಗೆ ಸಿಗಲಿದೆ ಲಾಭ?

ಮಹಾರಾಷ್ಟ್ರ ಸರ್ಕಾರವು 'ಪುಣ್ಯಶ್ಲೋಕ ಅಹಲ್ಯಾಬಾಯಿ ಹೋಳ್ಕರ್ ಶೇತ್ಕರಿ ಕರ್ಜ್ ಮಾಫಿ ಯೋಜನೆ'ಯನ್ನು ಘೋಷಿಸಿದೆ. ಈ ಯೋಜನೆಯಡಿ, 2 ಲಕ್ಷ ರೂಪಾಯಿವರೆಗಿನ ಬೆಳೆ ಸಾಲವನ್ನು ಮನ್ನಾ ಮಾಡಲಾಗುವುದು ಮತ್ತು ಪ್ರಾಮಾಣಿಕವಾಗಿ ಸಾಲ ಮರುಪಾವತಿಸುವ ರೈತರಿಗೆ ₹50,000 ಪ್ರೋತ್ಸಾಹಧನ ನೀಡಲಾಗುವುದು.
Read Full Story

03:03 PM (IST) Mar 06

ಅಡುಗೆ ಅನಿಲ ಕೊರತೆ ಭೀತಿ - ತುರ್ತು ಅಧಿಕಾರ ಬಳಸಿ LPG ಉತ್ಪಾದನೆ ಹೆಚ್ಚಿಸಲು ಕೇಂದ್ರದ ಆದೇಶ!

ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗುವ ಆತಂಕದ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ತುರ್ತು ಅಧಿಕಾರ ಚಲಾಯಿಸಿದೆ. ದೇಶದ ಎಲ್ಲಾ ತೈಲ ಸಂಸ್ಕರಣಾಗಾರಗಳು ಪೆಟ್ರೋಕೆಮಿಕಲ್ ಉತ್ಪಾದನೆ ನಿಲ್ಲಿಸಿ, ಕೇವಲ ಎಲ್‌ಪಿಜಿ ಉತ್ಪಾದನೆಯನ್ನು ಗರಿಷ್ಠಗೊಳಿಸಬೇಕೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. 

Read Full Story

02:45 PM (IST) Mar 06

ಮಾಂಸಕ್ಕಾಗಿ ಕತ್ತರಿಸಿದ ಬಾತುಕೋಳಿ ಹೊಟ್ಟೆಯಲ್ಲಿ ಸಿಕ್ತು ₹1.6 ಲಕ್ಷ ಮೌಲ್ಯದ ಚಿನ್ನ!

ಚೀನಾದಲ್ಲಿ, ಮಾಂಸಕ್ಕಾಗಿ ಬಾತುಕೋಳಿಯನ್ನು ಕತ್ತರಿಸಿದಾಗ ಅದರ ಹೊಟ್ಟೆಯಲ್ಲಿ ಸುಮಾರು 1.6 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ತುಣುಕುಗಳು ಪತ್ತೆಯಾಗಿವೆ. ಈ ಬಾತುಕೋಳಿಯು ಹತ್ತಿರದ ನದಿಯಲ್ಲಿ ಆಹಾರ ಹುಡುಕುವಾಗ ಚಿನ್ನದ ಕಣಗಳನ್ನು ನುಂಗಿರಬಹುದೆಂದು ಶಂಕಿಸಲಾಗಿದೆ. 

Read Full Story

02:36 PM (IST) Mar 06

ಕುಡಿದ ಮತ್ತಿನಲ್ಲಿ ಬಾಯ್‌ಫ್ರೆಂಡ್‌ನ ಬೀದಿಯಲ್ಲಿ ಕೆಡವಿ ಮೇಲೆ ಕುಳಿತು ಥಳಿಸಿದ ಮಹಿಳೆ - ನಡುರಸ್ತೆಯಲ್ಲಿ WWE ನೋಡಿ ಖುಷಿಪಟ್ಟ ಜನ!

ಕೇರಳದ ತಿರುವನಂತಪುರಂನಲ್ಲಿ ಮಹಿಳೆಯೊಬ್ಬಳು ಯುವಕನ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿದ ವೀಡಿಯೋ ವೈರಲ್ ಆಗಿದೆ. ಮದ್ಯಪಾನದ ನಂತರ ನಡೆದ ಈ ಜಗಳ ತಮಾಷೆ ಎಂದು ಜೋಡಿ ಹೇಳಿಕೊಂಡಿದ್ದರೂ, ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
Read Full Story

02:24 PM (IST) Mar 06

ಅಗ್ಗದ ಬೆಲೆಯ, ಬಜೆಟ್‌ ಫ್ರೆಂಡ್ಲಿ ಲ್ಯಾಪ್‌ಟಾಪ್‌ ಮ್ಯಾಕ್‌ಬುಲ್‌ ನಿಯೋ ಅನಾವರಣ ಮಾಡಿದ Apple, ಭಾರತದಲ್ಲಿ ಬೆಲೆ ಎಷ್ಟು?

ಟೆಕ್ ದೈತ್ಯ ಆಪಲ್ ತನ್ನ ಬಜೆಟ್ ಸ್ನೇಹಿ ಮ್ಯಾಕ್‌ಬುಕ್ ನಿಯೋವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. A18 ಪ್ರೊ ಚಿಪ್‌ಸೆಟ್, 13-ಇಂಚಿನ ಡಿಸ್‌ಪ್ಲೇ ಹೊಂದಿರುವ ಈ ಲ್ಯಾಪ್‌ಟಾಪ್‌ನ ಆರಂಭಿಕ ಬೆಲೆ ₹69,900 ಆಗಿದ್ದು, ಇದು ವಿಂಡೋಸ್ ಲ್ಯಾಪ್‌ಟಾಪ್‌ಗಳಿಗೆ ತೀವ್ರ ಸ್ಪರ್ಧೆ ನೀಡಲಿದೆ.
Read Full Story

02:23 PM (IST) Mar 06

ತಮ್ಮದೇ ಮದುವೆ ಆರತಕ್ಷತೆಯಲ್ಲಿ ಸ್ಟ್ಯಾಚ್ಯೂ ಥರ ನಿಂತ ಅರ್ಜುನ್ ತೆಂಡೂಲ್ಕರ್! ವಿಡಿಯೋ ವೈರಲ್

ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್, ಉದ್ಯಮಿ ಸಾನಿಯಾ ಚಂದೋಕ್ ಅವರನ್ನು ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವಿವಾಹವಾದರು. ಈ ಮದುವೆಗೆ ಕ್ರಿಕೆಟ್ ಮತ್ತು ಬಾಲಿವುಡ್ ತಾರೆಯರು ಸಾಕ್ಷಿಯಾಗಿದ್ದು, ಆರತಕ್ಷತೆ ವೇಳೆ ಅರ್ಜುನ್ ಭಾವನೆರಹಿತವಾಗಿ ನಿಂತಿದ್ದ ವಿಡಿಯೋ ವೈರಲ್ ಆಗಿದೆ.

Read Full Story

01:23 PM (IST) Mar 06

Virosh ರೋಚಕ ಸ್ಟೋರಿ - ಅಂದು ಜೀವನದ ಮೊದಲ ಗೋಲ್ಡ್​ಮೆಡಲ್​ ಹಾಕಿದ, ಇಂದು ಚಿನ್ನದ ತಾಳಿ ಕಟ್ಟಿದ!

ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. 2019ರಲ್ಲಿ 'ಡಿಯರ್ ಕಾಮ್ರೇಡ್' ಚಿತ್ರಕ್ಕಾಗಿ ವಿಜಯ್ ಅವರು ರಶ್ಮಿಕಾಗೆ ಚಿನ್ನದ ಪದಕ ತೊಡಿಸಿದ್ದರು, ಇದೀಗ ಅವರೇ ಮಾಂಗಲ್ಯ ಕಟ್ಟಿದ್ದಾರೆ. 

Read Full Story

01:22 PM (IST) Mar 06

Sakshi MS Dhoni Video - 'ಹೇ.. ಕುತ್ಕೋ.. ಅದು ಔಟಲ್ಲ..' ಖುಷಿಯಿಂದ ಕುಣಿದ ಸಾಕ್ಷಿಗೆ ಸಮಾಧಾನ ಮಾಡಿದ ಎಂಎಸ್‌ ಧೋನಿ!

ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದ ವೇಳೆ, ಸಾಕ್ಷಿ ಧೋನಿ ಅವರು ಬೌನ್ಸ್‌ ಆದ ಚೆಂಡನ್ನು ಕ್ಯಾಚ್ ಎಂದು ಭಾವಿಸಿ ಸಂಭ್ರಮಿಸಿದರು. ಇದನ್ನು ಕಂಡ ಎಂ.ಎಸ್. ಧೋನಿ, ಅದು ವಿಕೆಟ್ ಅಲ್ಲ ಎಂದು ಮುಗುಳ್ನಗುತ್ತಲೇ ಸನ್ನೆ ಮಾಡಿ ತಿಳಿಸಿದರು. 

Read Full Story

01:14 PM (IST) Mar 06

ತನ್ನ ಚಿನ್ನಾಭರಣ ಅಡವಿಟ್ಟು ಗಂಡನ ಇಂಜಿನಿಯರ್ ಓದಿಸಿದ ಹೆಂಡ್ತಿ - ಉದ್ಯೋಗದ ಬಳಿಕ ತೊರೆದು ಹೋದ ಪತಿ

ತನ್ನ ಚಿನ್ನಾಭರಣಗಳನ್ನು ಅಡವಿಟ್ಟು ಗಂಡನನ್ನು ಇಂಜಿನಿಯರ್ ಮಾಡಿದ ಪತ್ನಿಗೆ, ಆತ ಉದ್ಯೋಗ ಸಿಕ್ಕ ನಂತರ ದ್ರೋಹ ಬಗೆದಿದ್ದಾನೆ. ತನ್ನನ್ನು ಹಾಗೂ ಮಕ್ಕಳನ್ನು ತೊರೆದು ಹೋದ ಪತಿಯ ಬಗ್ಗೆ ಆಕೆ ಗದ್ಗದಿತಳಾಗಿ ಮಾತನಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

12:58 PM (IST) Mar 06

'ನಂಬರ್ 1 ಬ್ಯಾಟರ್ ಅಲ್ಲ, ನಂಬರ್ 1 ಫ್ರಾಡ್'! ಸೆಮಿಫೈನಲ್‌ನಲ್ಲೂ ಫ್ಲಾಪ್ ಆದ ಅಭಿಷೇಕ್‌ ಶರ್ಮಾ ಮೇಲೆ ಫ್ಯಾನ್ಸ್ ಫುಲ್ ಗರಂ!

ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅಭಿಷೇಕ್ ಶರ್ಮಾ ಕೇವಲ 9 ರನ್‌ಗಳಿಗೆ ಔಟಾಗಿ ತೀವ್ರ ನಿರಾಸೆ ಮೂಡಿಸಿದ್ದಾರೆ. ಟೂರ್ನಿಯುದ್ದಕ್ಕೂ ಕಳಪೆ ಫಾರ್ಮ್ ಪ್ರದರ್ಶಿಸಿದ ಅವರ ಈ ವೈಫಲ್ಯಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  

Read Full Story

12:20 PM (IST) Mar 06

ಏರ್ಪೋರ್ಟ್‌ ಬಳಿ ನಮಾಜ್‌ - ಎಲ್ಲೆಂದರಲ್ಲಿ ಪ್ರಾರ್ಥನೆ ಮಾಡೋದು ಧಾರ್ಮಿಕ ಹಕ್ಕು ಅಲ್ಲ - ಬಾಂಬೆ ಹೈಕೋರ್ಟ್

ಮುಂಬೈ ವಿಮಾನ ನಿಲ್ದಾಣದ ಬಳಿ ರಮ್ಜಾನ್‌ ಸಮಯದಲ್ಲಿ ನಮಾಜ್‌ ಮಾಡಲು ಅನುಮತಿ ಕೋರಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ತಿರಸ್ಕರಿಸಿದೆ. ವಿಮಾನ ನಿಲ್ದಾಣದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಧರ್ಮಕ್ಕಿಂತ ಭದ್ರತೆಯೇ ಮುಖ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು, 

Read Full Story

11:50 AM (IST) Mar 06

ಅದೊಂದು ತಪ್ಪು ಮಾಡ್ಕೊಂಡು ಚಿನ್ನದಂಥ ಸಂಸಾರಕ್ಕೆ ಕೊಳ್ಳಿ ಇಟ್ಕೊಂಡ ಖ್ಯಾತ ಸೆಲೆಬ್ರಿಟಿಗಳಿವರು!

Celebrities ExtraMarital Affair: ಅನೇಕ ನಟ, ನಟಿಯರು ಮದುವೆಯಾದ ಬಳಿಕ ಕೂಡ ಅಕ್ರಮ ಸಂಬಂಧ ಹೊಂದಿರುವ ಉದಾಹರಣೆಗಳು ಸಾಕಷ್ಟಿವೆ. ಇದೇ ಕಾರಣಕ್ಕೆ ಸ್ಟಾರ್‌ ನಟರು ಡಿವೋರ್ಸ್‌ ಕೂಡ ಪಡೆದಿದ್ದುಂಟು. ಹಾಗಾದರೆ ಯಾರು? ಯಾರು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. ಲೇಖನ ಓದಿ. 

 

Read Full Story

11:11 AM (IST) Mar 06

Kejriwal - ಕೇಜ್ರಿವಾಲ್‌ಗೆ ಬಿಜೆಪಿ ಹೆದರಿದೆಯಾ? ವಿಚಾರಣೆ ಲೈವ್ ಮಾಡಿ - ಸ್ಪೀಕರ್‌ಗೆ ಅತಿಶಿ ಸವಾಲು

ದೆಹಲಿ ವಿಧಾನಸಭೆಯ 'ಫಾನ್ಸಿ ಘರ್' ವಿವಾದಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಹಕ್ಕುಬಾಧ್ಯತಾ ಸಮಿತಿ ಮುಂದೆ ಹಾಜರಾಗಲಿದ್ದಾರೆ. ಈ ವಿಚಾರಣೆಯನ್ನು ನೇರ ಪ್ರಸಾರ ಮಾಡುವಂತೆ ವಿಪಕ್ಷ ನಾಯಕಿ ಅತಿಶಿ ಸ್ಪೀಕರ್ ವಿಜೇಂದರ್ ಗುಪ್ತಾಗೆ ಸವಾಲು ಹಾಕಿದ್ದಾರೆ. 

Read Full Story

10:55 AM (IST) Mar 06

'ಹಾರ್ಟ್‌ಬೀಟ್ 175ಕ್ಕೆ ಹೋಗಿತ್ತು!' ಇಂಗ್ಲೆಂಡ್ ಎದುರಿನ ಹೈವೋಲ್ಟೇಜ್ ಪಂದ್ಯದ ಆ ಕ್ಷಣ ನೆನಪಿಸಿಕೊಂಡ ಸೂರ್ಯಕುಮಾರ್ ಯಾದವ್!

ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ 7 ರನ್‌ಗಳ ರೋಚಕ ಜಯ ಸಾಧಿಸಿ ಭಾರತ ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಪಂದ್ಯದ ನಂತರ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ ಅವರ ಇನ್ನಿಂಗ್ಸ್ ಮತ್ತು ಬೌಲರ್‌ಗಳ ಪ್ರದರ್ಶನವನ್ನು ಶ್ಲಾಘಿಸಿದರು.  

Read Full Story

10:13 AM (IST) Mar 06

ಜೊತೆಯಾಗಿ ಮದುವೆಗೆ ಬಂದ ದಳಪತಿ ವಿಜಯ್ ತ್ರಿಷಾ ಕೃಷ್ಣನ್ - ರವಿಮೋಹನ್ ಹಾಗೂ ಕೆನಿಷಾಗೆ ಹೋಲಿಸಿದ ನೆಟ್ಟಿಗರು

ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ, ನಟ ದಳಪತಿ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ಮದುವೆ ಆರತಕ್ಷತೆಯೊಂದಕ್ಕೆ ಜೊತೆಯಾಗಿ ಬಂದಿದ್ದು, ಒಂದೇ ಬಣ್ಣದ ಬಟ್ಟೆ ಧರಿಸಿ, ಒಂದೇ ಕಾರಿನಲ್ಲಿ ಬಂದಿದ್ದು, ಇವರಿಬ್ಬರ ವಿವಾಹೇತರ ಸಂಬಂಧದ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.

Read Full Story

09:54 AM (IST) Mar 06

ಟೇಕಾಫ್‌ ಆದ ಬೆನ್ನಲ್ಲಿಯೇ ರಾಡಾರ್‌ ಸಂಪರ್ಕ ಕಳೆದುಕೊಂಡ ಭಾರತದ ಸುಖೋಯ್‌-30 ಫೈಟರ್‌ಜೆಟ್‌, ಇಬ್ಬರು ಪೈಲಟ್‌ ದುರ್ಮರಣ!

ಅಸ್ಸಾಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ Su-30 MKI ಫೈಟರ್ ಜೆಟ್ ಪತನಗೊಂಡಿದೆ. ತರಬೇತಿ ಕಾರ್ಯಾಚರಣೆಯಲ್ಲಿದ್ದ ಈ ವಿಮಾನ ಅಪಘಾತದಲ್ಲಿ ಸ್ಕ್ವಾಡ್ರನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಎಂಬ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ.
Read Full Story

09:49 AM (IST) Mar 06

ಮ್ಯಾನ್ ಆಫ್‌ ದಿ ಮ್ಯಾಚ್ ನನಗಲ್ಲ, ಈ ಕ್ರಿಕೆಟಿಗನಿಗೆ ಸಿಗಬೇಕಿತ್ತು! ಮತ್ತೆ ಫ್ಯಾನ್ಸ್ ಹೃದಯ ಗೆದ್ದ ಸಂಜು ಸ್ಯಾಮ್ಸನ್!

ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ರೋಚಕ ಜಯ ಸಾಧಿಸಿ ಫೈನಲ್‌ಗೆ ಪ್ರವೇಶಿಸಿದೆ. 89 ರನ್ ಗಳಿಸಿ ಪಂದ್ಯಶ್ರೇಷ್ಠರಾದ ಸಂಜು ಸ್ಯಾಮ್ಸನ್, ಈ ಪ್ರಶಸ್ತಿಯನ್ನು ಜಸ್ಪ್ರೀತ್ ಬುಮ್ರಾಗೆ ಅರ್ಪಿಸಿದ್ದಾರೆ. ಬುಮ್ರಾ ಅವರ ಅದ್ಭುತ ಡೆತ್ ಓವರ್ ಬೌಲಿಂಗ್ ಇಲ್ಲದಿದ್ದರೆ ಕಷ್ಟವಾಗ್ತಿತ್ತು.

Read Full Story

08:45 AM (IST) Mar 06

ಇರಾನ್ ಯುದ್ಧದ ಮಧ್ಯೆ ರಷ್ಯಾದ ತೈಲ ಖರೀದಿಸಲು ಭಾರತಕ್ಕೆ ಅಮೆರಿಕದಿಂದ 30 ದಿನಗಳ ವಿನಾಯಿತಿ

ಇರಾನ್-ಇಸ್ರೇಲ್ ಯುದ್ಧದಿಂದ ಹಾರ್ಮುಜ್ ಜಲಸಂಧಿ ಬಂದ್ ಆಗಿ ಭಾರತಕ್ಕೆ ತೈಲ ಸಂಕಷ್ಟ ಎದುರಾಗಿತ್ತು. ಈ ಬಿಕ್ಕಟ್ಟಿನ ನಡುವೆ, ಜಾಗತಿಕ ಇಂಧನ ಮಾರುಕಟ್ಟೆ ಸ್ಥಿರಗೊಳಿಸಲು ಅಮೆರಿಕವು ಭಾರತಕ್ಕೆ ರಷ್ಯಾದ ತೈಲ ಖರೀದಿಸಲು 30 ದಿನಗಳ ತಾತ್ಕಾಲಿಕ ವಿನಾಯಿತಿ ನೀಡಿದೆ. 

Read Full Story

08:35 AM (IST) Mar 06

Arjun Tendulkar Wedding - ಸಚಿನ್ ಮಗ ಅರ್ಜುನ್ ತೆಂಡೂಲ್ಕರ್ ಮದುವೆ - ಧೋನಿ, ಯುವರಾಜ್ ಸೇರಿ ಕ್ರಿಕೆಟ್ ತಾರೆಯರ ದಂಡು!

ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಮಾರ್ಚ್ 5ರ ಗುರುವಾರದಂದು ಸಾನಿಯಾ ಚಾಂದೋಕ್ ಅವರೊಂದಿಗೆ ಸಪ್ತಪದಿ ತುಳಿದರು. ಈ ಅದ್ದೂರಿ ವಿವಾಹ ಸಮಾರಂಭದಲ್ಲಿ ಕುಟುಂಬದ ಆಪ್ತರು, ಸ್ನೇಹಿತರು ಹಾಗೂ ಕ್ರೀಡಾ ಕ್ಷೇತ್ರದ ಹಲವಾರು ಗಣ್ಯರು ಭಾಗವಹಿಸಿದ್ದರು.
Read Full Story

07:42 AM (IST) Mar 06

ಟಿ20 ಸೆಮೀಸ್: ನಿನ್ನೆ ನಡೆದ ಭಾರತ - ಇಂಗ್ಲೆಂಡ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ಭಾರತ, ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ 7 ರನ್‌ಗಳ ರೋಚಕ ಜಯ ಸಾಧಿಸಿ ಫೈನಲ್‌ಗೆ ಪ್ರವೇಶಿಸಿದೆ. ಸಂಜು ಸ್ಯಾಮ್ಸನ್‌ (89) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 253 ರನ್ ಗಳಿಸಿದರೆ, ಜೇಕಬ್ ಬೆಥೆಲ್ (105) ಶತಕದ ಹೊರತಾಗಿಯೂ ಇಂಗ್ಲೆಂಡ್ ಸೋಲೊಪ್ಪಿಕೊಂಡಿತು.

 

Read Full Story

07:41 AM (IST) Mar 06

US Iran conflict: 4 ದಿನದ ಯುದ್ಧದಲ್ಲಿ ಅಮೆರಿಕದ ₹18000 ಕೋಟಿ, ಇಸ್ರೇಲ್‌ಗೆ ವಾರಕ್ಕೆ ₹2.74 ಲಕ್ಷ ಕೋಟಿ ನಷ್ಟ!

ಇರಾನ್ ವಿರುದ್ಧದ ಯುದ್ಧವು 100 ದಿನಗಳ ಕಾಲ ಮುಂದುವರಿಯುವ ಸಾಧ್ಯತೆಯಿದ್ದು, ಅಮೆರಿಕ ಸೇನೆಯು ಹೆಚ್ಚುವರಿ ಗುಪ್ತಚರ ಅಧಿಕಾರಿಗಳನ್ನು ಕೋರಿದೆ. ಈ ಸಂಘರ್ಷದಿಂದಾಗಿ ಅಮೆರಿಕ ಮತ್ತು ಇಸ್ರೇಲ್ ಭಾರೀ ಆರ್ಥಿಕ ನಷ್ಟವನ್ನು ಅನುಭವಿಸುತ್ತಿವೆ.

 

Read Full Story

More Trending News