Published : Feb 05, 2026, 07:48 AM ISTUpdated : Feb 05, 2026, 11:21 PM IST

India News Live: ಕಳ್ಳತನ ಅವರ ಕುಟುಂಬ ವೃತ್ತಿ, ಅವರು ಮಹಾತ್ಮಗಾಂಧಿಯವರ ಉಪನಾಮವನ್ನೇ ಕದ್ದವರು - ಪ್ರಧಾನಿ

ಸಾರಾಂಶ

ನವದೆಹಲಿ (ಫೆ.5): ವಿಪಕ್ಷದ ಮಹಿಳಾ ಸಂಸದರು, ಲೋಕಸಭೆಯಲ್ಲಿ ಪ್ರಧಾನಿ ಕುಳಿತುಕೊಳ್ಳುವ ಸ್ಥಳಕ್ಕೆ ಮುತ್ತಿಗೆ ಹಾಕಿದ ಪರಿಣಾಮ ನರೇಂದ್ರ ಮೋದಿ ಅವರ ಭಾಷಣವನ್ನೇ ರದ್ದುಪಡಿಸಿದ ಅಪರೂಪದ ಬೆಳವಣಿಗೆಯೊಂದು ಬುಧವಾರ ನಡೆದಿದೆ.ಆದರೆ ಘಟನೆ ನಡೆದಾಗ ಮೋದಿ ಸ್ಥಳದಲ್ಲಿ ಹಾಜರಿರದ ಕಾರಣ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಲಾಪವನ್ನೇ ಗುರುವಾರಕ್ಕೆ ಮುಂದೂಡಲಾಯಿತು. ಪ್ರಧಾನಿ ಮೋದಿ ಇಂದು ಲೋಕಸಭೆಯಲ್ಲಿ ಭಾಷಣ ಮಾಡಲಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

11:21 PM (IST) Feb 05

ಕಳ್ಳತನ ಅವರ ಕುಟುಂಬ ವೃತ್ತಿ, ಅವರು ಮಹಾತ್ಮಗಾಂಧಿಯವರ ಉಪನಾಮವನ್ನೇ ಕದ್ದವರು - ಪ್ರಧಾನಿ

ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮತ್ತು ನೆಹರೂಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಗಾಂಧಿ ಕುಟುಂಬವು ಮಹಾತ್ಮ ಗಾಂಧಿಯವರ ಉಪನಾಮವನ್ನು ಕದ್ದಿದೆ ಎಂದು ಆರೋಪಿಸಿದ ಅವರು, ಕಳ್ಳತನ ಅವರ ಕುಟುಂಬ ವೃತ್ತಿ ಎಂದು ದೂಷಿಸಿದರು.

Read Full Story

10:51 PM (IST) Feb 05

Breaking News - ಡ್ರಗ್ಸ್ ಸಮೇತ ಯುವ ನಟಿ, ಸಹ ನಿರ್ದೇಶಕಿ ಸೇರಿ 8 ಮಂದಿ ಅರೆಸ್ಟ್

ಚೆನ್ನೈನಲ್ಲಿ ಯುವ ನಟಿ ಅಂಜು ಕೃಷ್ಣ ಸೇರಿದಂತೆ ಎಂಟು ಮಂದಿಯನ್ನು ಡ್ರಗ್ಸ್ ಸಮೇತ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ತಮಿಳು ಚಿತ್ರರಂಗದ ಸಹಾಯಕ ನಿರ್ದೇಶಕಿ ವಿನ್ಸಿ ನಿವೇದಾ ಹಾಗೂ ಆರು ಯುವಕರು ಸೇರಿದ್ದಾರೆ.
Read Full Story

10:28 PM (IST) Feb 05

ಮುಂಬೈ ವಿವಿ ಆಹ್ವಾನ ರದ್ದತಿಗೆ 'ವಿಶ್ವಗುರು' ಕಾರಣ - ನಟ ನಾಸಿರುದ್ದೀನ್‌ ಶಾ ಕಿಡಿ

ಹಿರಿಯ ನಟ ನಾಸಿರುದ್ದೀನ್‌ ಶಾ ಅವರನ್ನು ಮುಂಬೈ ವಿಶ್ವವಿದ್ಯಾಲಯವು ತನ್ನ ಜಷನ್‌-ಎ-ಉರ್ದು ಕಾರ್ಯಕ್ರಮಕ್ಕೆ ಆಹ್ವಾನಿಸಿ, ಕೊನೆಯ ಕ್ಷಣದಲ್ಲಿ ನಿರಾಕರಿಸಿದೆ. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನಟ, ತಾನು 'ವಿಶ್ವಗುರು'ವನ್ನು ಟೀಕಿಸಿದ್ದೇ ಈ ನಿರ್ಧಾರಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.
Read Full Story

09:55 PM (IST) Feb 05

ನವ ವಿವಾಹಿತನ ಹಿಟ್‌& ರನ್ ಪ್ರಕರಣಕ್ಕೆ ಟ್ವಿಸ್ಟ್‌ - ಬಾಯ್‌ಫ್ರೆಂಡ್ ಜೊತೆ ಸೇರಿ ಗಂಡನ ಕತೆ ಮುಗಿಸಿದ ಹೆಂಡ್ತಿ

ರಾಜಸ್ಥಾನದಲ್ಲಿ, ಹಿಟ್ & ರನ್‌ನಂತೆ ಕಂಡುಬಂದ ನವವಿವಾಹಿತ ಅಶೀಶ್ ಸಾವಿನ ಪ್ರಕರಣವು ರೋಚಕ ತಿರುವು ಪಡೆದುಕೊಂಡಿದೆ. ಪೊಲೀಸರ ತನಿಖೆಯು ಇದು ಅಪಘಾತವಲ್ಲ, ಬದಲಿಗೆ ಆತನ ಪತ್ನಿ ಅಂಜು ತನ್ನ ಪ್ರಿಯಕರ ಸಂಜು ಮತ್ತು ಇತರರೊಂದಿಗೆ ಸೇರಿ ಮಾಡಿದ ಪೂರ್ವನಿಯೋಜಿತ ಕೊಲೆ ಎಂದು ಬಹಿರಂಗಪಡಿಸಿದೆ.

Read Full Story

08:29 PM (IST) Feb 05

ಅಕ್ರಮ ವಲಸಿಗರ ರಕ್ಷಣೆಗೆ ಮಮತಾ ಬ್ಯಾನರ್ಜಿ ಕೋರ್ಟ್ ಮೆಟ್ಟಿಲೇರುತ್ತಿದ್ದಾರೆ - ಪ್ರಧಾನಿ ಮೋದಿ

ಮತದಾರರ ಪಟ್ಟಿ ಪರಿಷ್ಕರಣೆಯನ್ನು ವಿರೋಧಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಕ್ರಮ ವಲಸಿಗರನ್ನು ರಕ್ಷಿಸಲು ಟಿಎಂಸಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ರಾಜ್ಯಸಭೆಯಲ್ಲಿ ಅವರು ಆರೋಪಿಸಿದರು.

Read Full Story

07:37 PM (IST) Feb 05

ಬೆಂಗಳೂರಿನಲ್ಲಿ 24 ಕೊಲೆ ಪ್ರಕರಣಗಳಲ್ಲಿ ಬೇಕಾಗಿದ್ದ ಬಿಹಾರದ ಅಪ್ಪ ಮಗನ ಬಂಧನ

24 ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಿಹಾರ ಮೂಲದ ಕುಖ್ಯಾತ ಅಪ್ಪ-ಮಗನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಬಿಹಾರದ ಸ್ಪೆಷಲ್ ಟಾಸ್ಕ್ ಫೋರ್ಸ್, ಬೆಂಗಳೂರು ಪೊಲೀಸರ ಸಹಕಾರದೊಂದಿಗೆ, ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಮಣಿಕ್ ಸಿಂಗ್ ಮತ್ತು ಮನೋಜ್ ಸಿಂಗ್ ಅವರನ್ನು ಸೆರೆಹಿಡಿದಿದೆ. 

Read Full Story

06:43 PM (IST) Feb 05

U19 World Cup - ಪಾಕಿಸ್ತಾನದ 19 ವರ್ಷಗಳ ಹಳೆಯ ದಾಖಲೆ ಧೂಳೀಪಟ ಮಾಡಿದ ಭಾರತ!

ಅಂಡರ್-19 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲಿ 10ನೇ ಬಾರಿಗೆ ಫೈನಲ್ ಪ್ರವೇಶಿಸಿದ ಮೊದಲ ತಂಡ ಎಂಬ ದಾಖಲೆಯನ್ನು ಭಾರತ ತನ್ನದಾಗಿಸಿಕೊಂಡಿದೆ. ಇದರೊಂದಿಗೆ ಪಾಕಿಸ್ತಾನ ಹೆಸರಲ್ಲಿದ್ದ ದಾಖಲೆ ಮುರಿದಿದೆ.

Read Full Story

06:26 PM (IST) Feb 05

ಕೋವಿಡ್​ನಲ್ಲಿ ಕೆಲಸ ಕಳಕೊಂಡ, ತನ್ನ ಪ್ರತಿಕೃತಿ ಮಾರಿ 9 ಸಾವಿರ ಕೋಟಿಯ ಒಡೆಯನಾದ ಇನ್​ಫ್ಲುಯೆನ್ಸರ್​!

ಕೋವಿಡ್​ ಸಮಯದಲ್ಲಿ ಕಾರ್ಖಾನೆ ಕೆಲಸ ಕಳೆದುಕೊಂಡಿದ್ದ ಇಟಲಿಯ ಖಾಬಿ ಲ್ಯಾಮ್, ಟಿಕ್​ಟಾಕ್​ ಮೂಲಕ ಜಗತ್ಪ್ರಸಿದ್ಧರಾದರು. ಇದೀಗ ಅವರು ತಮ್ಮ ವ್ಯಕ್ತಿತ್ವ ಹಕ್ಕುಗಳನ್ನು ಹಾಂಗ್ ಕಾಂಗ್ ಮೂಲದ AI ಕಂಪನಿಗೆ ಮಾರಾಟ ಮಾಡುವ ಮೂಲಕ, ಕೆಲಸವೇ ಮಾಡದೇ 9 ಸಾವಿರ ಕೋಟಿ ರೂಪಾಯಿಗಳ ಒಡೆಯನಾಗಿದ್ದಾರೆ.
Read Full Story

06:24 PM (IST) Feb 05

ತಮಗೆಯೇ ಗೊತ್ತಿಲ್ಲದೇ ಇಂದಿರಾ ಗಾಂಧಿಯನ್ನು ಫಾಲೋ ಮಾಡ್ತಿದ್ದಾರೆ ಬಿಜೆಪಿಯ ಕಂಗನಾ ರಣಾವತ್

ಮಂಡಿ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್, ಲೋಕಸಭೆ ಅಧಿವೇಶನದಲ್ಲಿ ತಮ್ಮ ಸೀರೆಯುಟ್ಟ ಸ್ಟೈಲಿಶ್ ಲುಕ್‌ನಿಂದ ಗಮನ ಸೆಳೆಯುತ್ತಿದ್ದಾರೆ. ಅವರ ಈ ನೋಟವನ್ನು ನೆಟ್ಟಿಗರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರೊಂದಿಗೆ ಹೋಲಿಸುತ್ತಿದ್ದು, 'ಎಮರ್ಜೆನ್ಸಿ' ಸಿನಿಮಾದ ಪಾತ್ರವನ್ನು ನೆನಪಿಸಿಕೊಳ್ಳುತ್ತಿದ್ದಾರೆ.
Read Full Story

06:13 PM (IST) Feb 05

T20 World Cup 2026 - ಭಾರತದ ವಿರುದ್ಧ ಒಂದಾದ ಪಾಕ್-ಬಾಂಗ್ಲಾ; ನಮ್ಮ ಪರ ನಿಂತಿದ್ದಕ್ಕೆ ಥ್ಯಾಂಕ್ಸ್ ಎಂದ ಬಾಂಗ್ಲಾ!

ಮುಂಬರುವ ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶವನ್ನು ಹೊರಗಿಟ್ಟಿದ್ದನ್ನು ವಿರೋಧಿಸಿ, ಪಾಕಿಸ್ತಾನವು ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದೆ. ಪಾಕಿಸ್ತಾನದ ಈ ನಿರ್ಧಾರವನ್ನು ಬಾಂಗ್ಲಾದೇಶ ಸ್ವಾಗತಿಸಿದ್ದು, ಕ್ರೀಡೆಯಲ್ಲಿ ರಾಜಕೀಯ ಬೆರೆಸಬಾರದು ಎಂದು ಪಾಕ್ ಪ್ರಧಾನಿ ಹೇಳಿದ್ದಾರೆ.
Read Full Story

05:59 PM (IST) Feb 05

ಇಂದು ಭಾರತ ವಿಶ್ವದ ವಿಶ್ವಾಸ ಗಳಿಸಿರುವ ದೇಶವಾಗಿದೆ - ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

ರಾಷ್ಟ್ರಪತಿ ವಂದನಾ ನಿರ್ಣಯದ ಮೇಲೆ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ,  ಭಾರತದ ಆರ್ಥಿಕ ಶಕ್ತಿ, ಯುವ ಸಮುದಾಯದ ಬಲ ಮತ್ತು ಜಾಗತಿಕ ವಿಶ್ವಾಸದ ಬಗ್ಗೆ ವಿವರಿಸಿದರು. ಕಾಂಗ್ರೆಸ್ ಆಳ್ವಿಕೆಯ ತಪ್ಪುಗಳನ್ನು ಟೀಕಿಸಿದ ಅವರ ಭಾಷಣಕ್ಕೆ ವಿರೋಧ ವ್ಯಕ್ತಪಡಿಸಿ ವಿಪಕ್ಷಗಳು ಸಭಾತ್ಯಾಗ ಮಾಡಿದವು.

Read Full Story

05:45 PM (IST) Feb 05

Thyroid Cancer - ದೇಹ ನೀಡುವ ಈ ಮುನ್ಸೂಚನೆಗಳನ್ನು ಕಡೆಗಣಿಸಬೇಡಿ

ಥೈರಾಯ್ಡ್ ಕೋಶಗಳ ಅನಿಯಂತ್ರಿತ ಬೆಳವಣಿಗೆಯೇ ಥೈರಾಯ್ಡ್ ಕ್ಯಾನ್ಸರ್. ಆರಂಭದಲ್ಲಿ, ಥೈರಾಯ್ಡ್ ಕ್ಯಾನ್ಸರ್ ಯಾವುದೇ ರೋಗಲಕ್ಷಣಗಳನ್ನು ತೋರಿಸದೇ ಇರಬಹುದು ಹೀಗಿದ್ದರು ಈ ಕಾಯಿಲೆಯನ್ನು ಗುರುತಿಸುವುದು ಹೇಗೆ?

Read Full Story

04:16 PM (IST) Feb 05

ಪರ ಪುರುಷನ ಜೊತೆ ಮಲಗಿದ್ರೆ ಮಾತ್ರ ಮನೆಯೊಳಗೆ ಪ್ರವೇಶ - ದೂರಿನಲ್ಲಿ ಮಹಿಳೆ ಶಾಕಿಂಗ್​ ವಿಷ್ಯ ಬಯಲು

ಉತ್ತರ ಪ್ರದೇಶದಲ್ಲಿ ವರದಕ್ಷಿಣೆ ಕಿರುಕುಳದಿಂದ ತ್ರಿವಳಿ ತಲಾಖ್‌ಗೆ ಒಳಗಾದ ಮಹಿಳೆಗೆ, ಮರಳಿ ಮನೆಗೆ ಸೇರಿಸಿಕೊಳ್ಳಲು 'ಹಲಾಲಾ' ಸಂಪ್ರದಾಯ ಪಾಲಿಸುವಂತೆ ಷರತ್ತು ವಿಧಿಸಲಾಗಿದೆ. ಈ ಸಂಪ್ರದಾಯದ ಹೆಸರಿನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
Read Full Story

04:10 PM (IST) Feb 05

ಫೆ. 7 ರಂದು Ola, Uber, Rapido ಮುಷ್ಕರ - 6 ಗಂಟೆ ಸಿಗಲ್ಲ ವಾಹನ, ಚಾಲಕರ ಬೇಡಿಕೆಗಳು ಏನು?

ಫೆಬ್ರವರಿ 7 ರಂದು, ಓಲಾ, ಉಬರ್ ಮತ್ತು ರಾಪಿಡೋ ಚಾಲಕರು ಮುಷ್ಕರ ನಡೆಸಲಿದ್ದಾರೆ. ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ಒಕ್ಕೂಟದ ನೇತೃತ್ವದಲ್ಲಿ, ಕನಿಷ್ಠ ದರ ನಿಗದಿ ಮತ್ತು ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈ ಪ್ರತಿಭಟನೆ ನಡೆಯಲಿದೆ.
Read Full Story

03:47 PM (IST) Feb 05

ಸರಾಯಿ ಅಂಗಡಿ ವಿರುದ್ಧ ರೊಚ್ಚಿಗೆದ್ದು ರಸ್ತೆಯಲ್ಲೇ ಮದ್ಯದ ಹೊಳೆ ಹರಿಸಿದ ನಾರಿಯರು - 15 ಲಕ್ಷ ಮೌಲ್ಯದ ಮದ್ಯ ಉಡೀಸ್

ಉತ್ತರ ಪ್ರದೇಶದ ಲಲಿತ್‌ಪುರದಲ್ಲಿ, ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಪುರುಷರಿಂದ ಬೇಸತ್ತ ನೂರಾರು ಮಹಿಳೆಯರು ಮದ್ಯದಂಗಡಿಯ ಮೇಲೆ ದಾಳಿ ನಡೆಸಿದ್ದಾರೆ. ಸುಮಾರು 15 ಲಕ್ಷ ಮೌಲ್ಯದ ಮದ್ಯವನ್ನು ರಸ್ತೆಗೆಸೆದು ನಾಶಪಡಿಸಿ, ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಘಟನೆಯ ವೀಡಿಯೋ ವೈರಲ್ ಆಗಿದೆ.

Read Full Story

03:31 PM (IST) Feb 05

ತಿರುವನಂತಪುರ ಬೇಕರಿಗೆ ಬಂದು ಚಿಪ್ಸ್‌ ತೆಗೆದುಕೊಂಡು ಹೋದ Ajit Doval, ಬಂದಿದ್ದು, ಹೋಗಿದ್ದು ಯಾರಿಗೂ ಗೊತ್ತೇ ಆಗ್ಲಿಲ್ಲ!

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ ಅವರು ತಿರುವನಂತಪುರಂಗೆ ರಹಸ್ಯ ಭೇಟಿ ನೀಡಿದ್ದರು. ಈ ವೇಳೆ, ಅವರು ಸ್ಥಳೀಯ ಬೇಕರಿಯೊಂದರಲ್ಲಿ ಚಿಪ್ಸ್ ಖರೀದಿಸಿದ್ದಾರೆ. ಮಫ್ತಿಯಲ್ಲಿದ್ದ ಭದ್ರತಾ ಸಿಬ್ಬಂದಿ ಜೊತೆ ಸಾಮಾನ್ಯರಂತೆ ಬಂದ ದೋವಲ್‌, ಅಂಗಡಿಯಿಂದ ವಾಪಸ್ ಹೋಗುವ ವಿಡಿಯೋ ಈಗ ವೈರಲ್ ಆಗಿದೆ.

Read Full Story

03:16 PM (IST) Feb 05

ರವಿಚಂದ್ರನ್‌ ಯುಗಪುರುಷ ಸಿನಿಮಾ ಸ್ಟೈಲ್‌ನಲ್ಲಿ ಗಂಡನನ್ನು ಆಕ್ಸಿಡೆಂಟ್‌ ಮಾಡಿ ಕೊಂದ ಹೆಂಡ್ತಿ!

Rajasthan Honeymoon Murder: Wife Kills Husband with Boyfriend Help ಮೂರು ತಿಂಗಳ ಹಿಂದೆಯಷ್ಟೇ ಅಂಜು ಹಾಗೂ ಆಶಿಶ್‌ ಮದುವೆಯಾಗಿದ್ದರು. ಆದರ, ಮದುವೆಯ ಬಗ್ಗೆ ಅಂಜುಗೆ ಅತೃಪ್ತಿ ಇತ್ತು. ಕೆಲವೇ ದಿನದಲ್ಲಿ ಆಕೆ ತವರು ಮನೆಗೆ ವಾಪಸಾಗಿದ್ದರು ಎನ್ನಲಾಗಿದೆ.

 

Read Full Story

03:04 PM (IST) Feb 05

ಹೋಟೆಲ್ ರೂಮ್ ಕ್ಲೀನ್‌ರಿಗೆ ಕಂಡಿದ್ದು ಕಾಂಡೋಮ್‌ ರಾಶಿ; 1 ಮಿಲಿಯನ್ ವ್ಯೂವ್ ಪಡೆದ ವಿಡಿಯೋ

ಹೋಟೆಲ್ ಒಂದರ ವಿಡಿಯೋ ವೈರಲ್ ಆಗಿದ್ದು, ಗ್ರಾಹಕರು ಖಾಲಿ ಮಾಡಿದ ಕೋಣೆಯ ಅವ್ಯವಸ್ಥೆಯನ್ನು ಹೌಸ್ ಕೀಪಿಂಗ್ ಸಿಬ್ಬಂದಿ ತೋರಿಸಿದ್ದಾರೆ. ಕೋಣೆಯಲ್ಲಿ ಊಟದ ಡಬ್ಬಗಳು, ಸಿಗರೇಟ್ ತುಂಡುಗಳ ಜೊತೆಗೆ ಬಳಸಿದ ಕಾಂಡೋಮ್‌ಗಳು ಪತ್ತೆಯಾಗಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Read Full Story

01:54 PM (IST) Feb 05

ತನ್ನಿಂದ ಜನಿಸಿದವಳನ್ನೇ ಗರ್ಭಿಣಿ ಮಾಡಿದ ಪಾಪಿ - ಅತ್ಯಾ*ಚಾರವೆಸಗಿದ್ದು ಒಬ್ಬರು ಇಬ್ಬರು ಅಲ್ಲ - DNA ಟೆಸ್ಟ್ ನಡೆಸಿದಾಗ ಆಘಾತ

ಮುಂಬೈನಲ್ಲಿ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ 20 ವರ್ಷದ ಯುವತಿಯ ಮೇಲೆ ಹಲವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಆಕೆ ಐದು ತಿಂಗಳ ಗರ್ಭಿಣಿಯಾದ ನಂತರ  ಘೋರ ಕೃತ್ಯ ಬೆಳಕಿಗೆ ಬಂದಿದ್ದು, ಡಿಎನ್‌ಎ ಪರೀಕ್ಷೆ ವರದಿ ನೋಡಿ ಕುಟುಂಬದವರು ಆಘಾತಕ್ಕೀಡಾಗಿದ್ದಾರೆ. 

Read Full Story

01:16 PM (IST) Feb 05

ಕಂಪ್ಯೂಟ್ ಮತ್ತು ಅದರ ಅತೃಪ್ತಿಗಳು - ಕಾರ್ನೆಗಿ ಇಂಡಿಯಾದ ಜಾಗತಿಕ ತಂತ್ರಜ್ಞಾನ ಶೃಂಗಸಭೆ ಇನ್ನೋವೇಶನ್ ಡೈಲಾಗ್ ಪಾಠಗಳು

ಜಾಗತಿಕ ತಂತ್ರಜ್ಞಾನ ಶೃಂಗಸಭೆಯಲ್ಲಿ AI ಅಭಿವೃದ್ಧಿಯ ಭವಿಷ್ಯದ ಕುರಿತು ಚರ್ಚಿಸಲಾಯಿತು. ಸಾರ್ವಭೌಮ ಕಂಪ್ಯೂಟ್ ಸಾಮರ್ಥ್ಯದ ಅಗತ್ಯತೆ, ಬಾಹ್ಯ ಅವಲಂಬನೆಯ ಅಪಾಯಗಳು, ಮತ್ತು AI ಮಾದರಿಗಳು ಸಾಂಸ್ಕೃತಿಕ ಮೌಲ್ಯಗಳನ್ನು ಹೇಗೆ ಪ್ರತಿಬಿಂಬಿಸುತ್ತವೆ ಎಂಬ ಪ್ರಮುಖ ವಿಷಯಗಳ ಮೇಲೆ ಈ ಚರ್ಚೆ ಬೆಳಕು ಚೆಲ್ಲಿದೆ. 

Read Full Story

12:38 PM (IST) Feb 05

ದುಬೈನಲ್ಲಿ ಜನರಿಗೆ ಟ್ಯಾಕ್ಸ್ ಹೇಗಿದೆ? ಭಾರತದ ತೆರಿಗೆ ಬಗ್ಗೆ ಚರ್ಚೆಗೆ ಕಾರಣವಾಯ್ತು ಯುವಕನ ಪೋಸ್ಟ್

ಭಾರತ ಮತ್ತು ದುಬೈನಲ್ಲಿನ ತೆರಿಗೆ ವ್ಯವಸ್ಥೆ ಮತ್ತು ಜೀವನಶೈಲಿಯನ್ನು ಹೋಲಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್ ವೈರಲ್ ಆಗಿದೆ. ಭಾರತದಲ್ಲಿ ಶೇ. 30ರಷ್ಟು ತೆರಿಗೆ ಪಾವತಿಸಿದರೂ ಕಳಪೆ ಸೌಲಭ್ಯಗಳು ಸಿಗುತ್ತಿವೆ ಎಂದು ಜನ ಬೇಸರ ವ್ಯಕ್ತಪಡಿಸಿದ್ದಾರೆ.

Read Full Story

12:33 PM (IST) Feb 05

ವಾಷಿಂಗ್ಟನ್‌ ಪೋಸ್ಟ್‌ನಿಂದ 300 ಪತ್ರಕರ್ತರ ವಜಾ, ಕೆಲಸ ಕಳೆದುಕೊಂಡ ಶಶಿ ತರೂರ್‌ ಪುತ್ರ ಇಶಾನ್‌!

ವಾಷಿಂಗ್ಟನ್‌ ಪೋಸ್ಟ್‌ ತನ್ನ 300ಕ್ಕೂ ಹೆಚ್ಚು ಪತ್ರಕರ್ತರು ಮತ್ತು ಸಿಬ್ಬಂದಿಯನ್ನು ವಜಾಗೊಳಿಸಿದೆ, ಇದು ಸಂಪಾದಕೀಯ ತಂಡದ ಮೂರನೇ ಒಂದು ಭಾಗದಷ್ಟು ದೊಡ್ಡದಾಗಿದೆ. ಈ ಮಹಾ ವಜಾ ಪ್ರಕ್ರಿಯೆಯಲ್ಲಿ ಶಶಿ ತರೂರ್ ಅವರ ಪುತ್ರ ಇಶಾನ್ ತರೂರ್ ಕೂಡ ಸೇರಿದ್ದಾರೆ.

Read Full Story

11:56 AM (IST) Feb 05

'ಬರೀ ಸೇವಿಂಗ್ಸ್‌ ಮಾಡ್ಕೊಂಡು ಹೋಗ್ಬೇಡಿ..'ಜೆನ್‌ ಝೀಗೆ ದೇಶದ ಶ್ರೀಮಂತ ವ್ಯಕ್ತಿ ಮುಖೇಶ್‌ ಅಂಬಾನಿ ಕಿವಿಮಾತು!

Mukesh Ambani's Advice to Gen Z: Convert Savings into Investments ಭಾರತವನ್ನು ಭವಿಷ್ಯದ $25-30 ಟ್ರಿಲಿಯನ್ ಆರ್ಥಿಕತೆ ಎಂದು ಕರೆದ ಮುಖೇಶ್ ಅಂಬಾನಿ, ಜನರು ತಮ್ಮ ಉಳಿತಾಯವನ್ನು ಹೂಡಿಕೆಗಳಾಗಿ ಪರಿವರ್ತಿಸಿಕೊಳ್ಳುವಂತೆ ಸಲಹೆ ನೀಡಿದರು.

 

Read Full Story

11:37 AM (IST) Feb 05

Shocking - ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದಲ್ಲೇ ಸ್ಟಾಫ್ ನರ್ಸ್ ಗುಂಡಿಕ್ಕಿ ಹತ್ಯೆ!

ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ, ಶಾಘರ್ ಸಮುದಾಯ ಆರೋಗ್ಯ ಕೇಂದ್ರದ ಹೊರಗೆ ದೀಪ್ಶಿಖಾ ಚಾಧರ್ ಎಂಬ ಸ್ಟಾಫ್ ನರ್ಸ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ರಸ್ತೆ ದಾಟುತ್ತಿದ್ದಾಗ ಅಪರಿಚಿತ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿದ್ದು, ಹಂತಕನಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

11:10 AM (IST) Feb 05

ಜೆನ್ ಝೀ ದಂಗೆಗೆ ಕಾರಣವಾದ ನೇಪಾಳ ಜಾಲತಾಣ ಬಿಲ್‌ ರದ್ದು

ಕಳೆದ ವರ್ಷ ಯುವಜನರ ಬೃಹತ್ ಪ್ರತಿಭಟನೆಗೆ ಕಾರಣವಾಗಿ, ಹಿಂದಿನ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ವಿವಾದಿತ ಸಾಮಾಜಿಕ ಮಾಧ್ಯಮ ಬಿಲ್-2025 ಅನ್ನು ನೇಪಾಳದ ಹಾಲಿ ಸರ್ಕಾರ ಹಿಂತೆಗೆದುಕೊಂಡಿದೆ. 

Read Full Story

10:51 AM (IST) Feb 05

ಒಂದೇ ಒಂದು ಗ್ಯಾಸ್‌ ಟ್ಯಾಂಕರ್‌ ಪಲ್ಟಿಯಾಗಿದ್ದಕ್ಕೆ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ವೇ 32 ಗಂಟೆ ಟ್ರಾಫಿಕ್‌ ಜಾಮ್‌!

ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇಯ ಖಂಡಾಲಾ ಘಾಟ್ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ 32 ಗಂಟೆಗಳ ಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಅನಿಲ ಸೋರಿಕೆಯ ಅಪಾಯದ ನಡುವೆ, ಕ್ರೇನ್‌ಗಳ ಸಹಾಯದಿಂದ ಟ್ಯಾಂಕರ್ ಅನ್ನು ತೆರವುಗೊಳಿಸಿದ ನಂತರ ಬುಧವಾರ ಮಧ್ಯರಾತ್ರಿ ಸಂಚಾರವನ್ನು ಪುನರಾರಂಭಿಸಲಾಯಿತು.

Read Full Story

10:36 AM (IST) Feb 05

ಇನ್‌ಸ್ಟಾಗ್ರಾಂ ಲವ್ - ನಂಬರ್ ಬ್ಲಾಕ್ ಮಾಡಿದಕ್ಕೆ ಬಾಯ್‌ಫ್ರೆಂಡ್‌ಗೆ ಚಾಕುವಿನಿಂದ ಇರಿದು ಕೊಂ*ದ 22 ವರ್ಷದ ಯುವತಿ!

ಛತ್ತೀಸ್‌ಗಢದ ಬಿಲಾಸ್ಪುರ್‌ನಲ್ಲಿ, ತನ್ನ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ. ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ ಇವರಿಬ್ಬರ ನಡುವೆ ಮನಸ್ತಾಪ ಉಂಟಾದಾಗ, ಯುವತಿ ಈ ಕೃತ್ಯ ಎಸಗಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
Read Full Story

10:11 AM (IST) Feb 05

ಎಪ್‌ಸ್ಟೀನ್‌ ಫೈಲ್ಸ್‌ ನಲ್ಲಿ ಐಶ್ವರ್ಯಾ ರೈ, ಅಭಿಷೇಕ್, ಅನುರಾಗ್‌ ಹೆಸರು ಪ್ರಸ್ತಾಪ!

ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ ಸ್ಟೀನ್‌ನ ಕಡತದಲ್ಲಿ ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಮತ್ತು ಅನುರಾಗ್ ಕಶ್ಯಪ್ ಅವರ ಹೆಸರುಗಳು ಉಲ್ಲೇಖವಾಗಿವೆ. ಬಚ್ಚನ್ ದಂಪತಿಗಳು ಸಹ-ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವೊಂದಕ್ಕೆ ಎಪ್‌ಸ್ಟೀನ್ ಆಹ್ವಾನಿತರಾಗಿದ್ದರು.

Read Full Story

09:49 AM (IST) Feb 05

Dhurandhar 2 OTT - ನೆಟ್‌ಫ್ಲಿಕ್ಸ್‌ಗೆ ಸಿಗಲಿಲ್ಲ 'ಧುರಂಧರ್ 2'! ದಾಖಲೆ ಮೊತ್ತಕ್ಕೆ ಜಿಯೋ ಹಾಟ್‌ಸ್ಟಾರ್ ಜೊತೆ ಡೀಲ್ ಫೈನಲ್!

ರಣವೀರ್ ಸಿಂಗ್ ಅಭಿನಯದ ಬ್ಲಾಕ್‌ಬಸ್ಟರ್ ಚಿತ್ರ 'ಧುರಂಧರ್ 2' ಸಿನಿಮಾದ OTT ಡೀಲ್ ಡಿಜಿಟಲ್ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ವರದಿಗಳ ಪ್ರಕಾರ, ಈ ಚಿತ್ರದ ಸ್ಟ್ರೀಮಿಂಗ್ ಹಕ್ಕುಗಳು ಭಾರೀ ಮೊತ್ತಕ್ಕೆ ಮಾರಾಟವಾಗಿದ್ದು, ಬಾಲಿವುಡ್‌ನ ಅತಿದೊಡ್ಡ ಡಿಜಿಟಲ್ ಡೀಲ್‌ಗಳಲ್ಲಿ ಒಂದೆನಿಸಿದೆ.

Read Full Story

09:45 AM (IST) Feb 05

ಇನ್ನು ಪ್ರಯಾಣಿಕರಿಗೆ ಇರಲ್ಲ 'ಸರ್ಜ್ ಪ್ರೈಸ್' ಕಾಟ; ಇಂದು ಆರಂಭವಾಗಲಿರುವ ಭಾರತ್ ಟ್ಯಾಕ್ಸಿಯಲ್ಲಿ ಸಾರಥಿಯೇ ಮಾಲೀಕ!

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಶ್ವದ ಮೊದಲ ಸಹಕಾರಿ ಟ್ಯಾಕ್ಸಿ ಸೇವೆಯಾದ 'ಭಾರತ್ ಟ್ಯಾಕ್ಸಿ'ಗೆ ಚಾಲನೆ ನೀಡಲಿದ್ದಾರೆ. ಓಲಾ, ಉಬರ್‌ಗೆ ಸ್ಪರ್ಧಿಯಾಗಿರುವ ಈ ಸೇವೆಯು 'ಸಾರಥಿಯೇ ಮಾಲೀಕ' ಎಂಬ ಆಶಯದೊಂದಿಗೆ, ಕಮಿಷನ್ ಹಾಗೂ ಸರ್ಜ್ ದರವಿಲ್ಲದೆ ಕಾರ್ಯನಿರ್ವಹಿಸಲಿದೆ. 

Read Full Story

08:56 AM (IST) Feb 05

ಇಂದು ಆರ್‌ಸಿಬಿ-ಡೆಲ್ಲಿ ಫೈನಲ್‌ - ಎರಡನೇ ಟ್ರೋಫಿ ಮೇಲೆ ಕಣ್ಣಿಟ್ಟ ಬೆಂಗಳೂರು!

4ನೇ ಸೀಸನ್ ವುಮೆನ್ಸ್‌ ಪ್ರೀಮಿಯರ್‌ ಲೀಗ್‌ ಫೈನಲ್‌ನಲ್ಲಿ ಮಾಜಿ ಚಾಂಪಿಯನ್‌ ಆರ್‌ಸಿಬಿ ಹಾಗೂ ಕಳೆದ 3 ಆವೃತ್ತಿಗಳ ರನ್ನರ್‌-ಅಪ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ನೇರವಾಗಿ ಫೈನಲ್‌ಗೇರಿದ ಆರ್‌ಸಿಬಿ ಸಂಘಟಿತ ಆಟವನ್ನು ನೆಚ್ಚಿಕೊಂಡಿದೆ.

Read Full Story

08:10 AM (IST) Feb 05

ಎರಡು ಮದುವೆ 5 ಜನ ಮಕ್ಕಳು; ಕೊರಿಯನ್‌ ಗೇಮ್‌ಗೆ 3 ಸೋದರಿಯರು ಬಲಿಯಾಗಿದ್ದು ನಿಜವೇ?

3 Sisters Die Ghaziabad Due to Korean Game Addiction ಅಪ್ಪಾ... ನಮ್ಮನ್ನು ಕ್ಷಮಿಸಿ, ನಮ್ಮನ್ನು ಕೊರಿಯಾದಿಂದ ದೂರ ಮಾಡಲಾಗದು ಎಂದು ಪತ್ರ ಬರೆದಿಟ್ಟು 9ನೇ ಮಹಡಿಯಿಂದ ಬಾಲಕಿಯರು ಜಿಗಿದಿದ್ದಾರೆ. ನೂರಾರು ಮಕ್ಕಳ ಬಲಿ ಪಡೆದಿದ್ದ ಬ್ಲ್ಯೂವೇಲ್‌ ಬಳಿಕ ಮತ್ತೊಂದು ಮಾದರಿ ಆಟದ ಆತಂಕ ಶುರುವಾಗಿದೆ.

 

Read Full Story

07:52 AM (IST) Feb 05

ಹೆಲಿಕಾಪ್ಟರ್ ತೋರಿಸಿ ಮೋಸ: ತಾನು ಅಮಿತ್ ಶಾ ದತ್ತುಪುತ್ರನೆಂದು ಹೇಳುತ್ತಿದ್ದ ವಂಚಕನ ವಿರುದ್ಧ FIR!

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ದತ್ತು ಪುತ್ರನೆಂದು ಹೇಳಿಕೊಂಡು ವಂಚಿಸುತ್ತಿದ್ದ ಸುಜಯ್‌ ಅಲಿಯಾಸ್‌ ಸುಜಯೇಂದ್ರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಈತ ರಾಜ್ಯಪಾಲರ ಲೆಟರ್‌ಹೆಡ್‌ನಲ್ಲಿ ನಕಲಿ ಸಹಿ ಮಾಡಿ ವಿಐಟಿ ವಿವಿ ಕುಲಪತಿ ಹುದ್ದೆಗೆ ನೇಮಕಾತಿ ಪತ್ರ ನೀಡಿ ವಂಚಿಸಿದ್ದಾನೆ..

 

Read Full Story

07:51 AM (IST) Feb 05

ಕಿರಿಯರ ವಿಶ್ವಕಪ್: ಬೌಲರ್‌ಗಳನ್ನು ಚೆಂಡಾಡಿದ ವೈಭವ್, ಆ್ಯರೊನ್‌ ಜಾರ್ಜ್‌; ದಾಖಲೆ ರನ್ ಚೇಸ್ ಮಾಡಿ ಫೈನಲ್‌ಗೆ ಲಗ್ಗೆಯಿಟ್ಟ ಭಾರತ

ಐಸಿಸಿ ಅಂಡರ್‌-19 ವಿಶ್ವಕಪ್ ಸೆಮಿಫೈನಲ್‌ನಲ್ಲಿ, ಅಫ್ಘಾನಿಸ್ತಾನ ವಿರುದ್ಧ ಭಾರತ ತಂಡ ಐತಿಹಾಸಿಕ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶಿಸಿದೆ. 311 ರನ್‌ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಭಾರತ, ಕಿರಿಯರ ವಿಶ್ವಕಪ್ ಇತಿಹಾಸದಲ್ಲೇ ಗರಿಷ್ಠ ರನ್ ಚೇಸ್ ಮಾಡಿದ ದಾಖಲೆ ಬರೆಯಿತು.

 

Read Full Story

07:50 AM (IST) Feb 05

ಅಬ್ಬಬ್ಬಾ! .. ಅಬುದಾಭಿಯಲ್ಲಿ ಭರ್ಜರಿ ₹49 ಕೋಟಿ ಲಾಟ್ರಿ ಗೆದ್ದ ಉಡುಪಿಯ ಶಂತನು!

ಮಸ್ಕತ್‌ನಲ್ಲಿ ಉದ್ಯೋಗದಲ್ಲಿರುವ ಕರ್ನಾಟಕದ ಉಡುಪಿ ಜಿಲ್ಲೆಯ ಶಂತನು ಶೆಟ್ಟಿಗಾರ್‌ ಅಬುದಾಭಿಯಲ್ಲಿ ನಡೆದ ಬಿಗ್‌ ಟಿಕೆಟ್ ಡ್ರಾನಲ್ಲಿ 49 ಕೋಟಿ ( (20 ಮಿಲಿಯನ್‌ ದಿರಮ್‌ ) ರು. ಮೊತ್ತದ ಲಾಟರಿ ಗೆದ್ದಿದ್ದಾರೆ.

 

Read Full Story

07:50 AM (IST) Feb 05

ರಷ್ಯಾ ತೈಲ ನಿಲ್ಲಿಸಿದರೆ ಭಾರತಕ್ಕೆ ₹36000 ಕೋಟಿ ನಷ್ಟ

ವ್ಯಾಪಾರ ಒಪ್ಪಂದದ ಭಾಗವಾಗಿ, ರಷ್ಯಾದಿಂದ ತೈಲ ಖರೀದಿ ಸ್ಥಗಿತಕ್ಕೆ ಭಾರತ ನಿರ್ಧರಿಸಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೆ ಇದೀಗ ಅಮೆರಿಕ ಮತ್ತು ರಷ್ಯಾ ನಡುವೆ ಜಟಾಪಟಿಗೆ ಕಾರಣವಾಗಿದೆ.

 

Read Full Story

07:50 AM (IST) Feb 05

7 ಲಕ್ಷ ಸೇಬು ಮರ ಉಳಿಸಲು ಚಿಪ್ಕೋ ಚಳವಳಿ : 3 ಕಾಶ್ಮೀರ ರೈಲ್ವೆಗಳ ರದ್ದು

ಕಣಿವೆ ರಾಜ್ಯ ಜಮ್ಮು ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ಘೋಷಿಸಿದ್ದ ರೈಲ್ವೆ ಯೋಜನೆ ವಿರೋಧಿಸಿ 7 ಲಕ್ಷ ಸೇಬು ಮರಗಳ ಉಳಿವಿಗೆ ಜನ ಚಿಪ್ಕೋ ಚಳವಳಿ ನಡೆದದ್ದು, ಇದಕ್ಕೆ ಮಣಿದ ಸರ್ಕಾರ ಮೂರು ಯೋಜನೆಗಳನ್ನು ರದ್ದುಪಡಿಸಿದೆ.

 

Read Full Story

07:49 AM (IST) Feb 05

ಸುಪ್ರೀಂನಲ್ಲಿ ವಕೀಲೆ ಆದ ಬಂಗಾಳದ ಮುಖ್ಯಮಂತ್ರಿ ದೀದಿ!

ವಿಶೇಷ ಮತಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಸ್ವತಃ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ವಾದ ಮಂಡಿಸಿದ ಅಪರೂಪದ ಘಟನೆಗೆ ಸುಪ್ರೀಂಕೋರ್ಟ್‌ ಬುಧವಾರ ಸಾಕ್ಷಿಯಾಯಿತು.

 

Read Full Story

07:49 AM (IST) Feb 05

ಮಹಿಳಾ ಮಂಡಲ ಮುತ್ತಿಗೆಯಿಂದ ಪ್ರಧಾನಿ ಮೋದಿ ಮಾತಿಗೆ ಬ್ರೇಕ್‌

ವಿಪಕ್ಷದ ಮಹಿಳಾ ಸಂಸದರು, ಲೋಕಸಭೆಯಲ್ಲಿ ಪ್ರಧಾನಿ ಕುಳಿತುಕೊಳ್ಳುವ ಸ್ಥಳಕ್ಕೆ ಮುತ್ತಿಗೆ ಹಾಕಿದ ಪರಿಣಾಮ ನರೇಂದ್ರ ಮೋದಿ ಅವರ ಭಾಷಣವನ್ನೇ ರದ್ದುಪಡಿಸಿದ ಅಪರೂಪದ ಬೆಳವಣಿಗೆಯೊಂದು ಬುಧವಾರ ನಡೆದಿದೆ.

 

Read Full Story

More Trending News