LIVE NOW
Published : Jan 29, 2026, 07:44 AM ISTUpdated : Jan 29, 2026, 11:28 PM IST

India News Live: ಸನಾತನ ಸಂಸ್ಕೃತಿಯ ಪ್ರಚಾರಕಿ ನಿಗೂಢ ಸಾವು - ವಿವಾದಾತ್ಮಕ ವಿಡಿಯೋ ಬಲಿ ಪಡೆಯಿತೇ? ಯಾರು ಈ ಸಾಧ್ವಿ ಪ್ರೇಮ್ ಬೈಸಾ?

ಸಾರಾಂಶ

ನವದೆಹಲಿ (ಜ.29): ಅಜಿತ್‌ ಪವಾರ್ ಅಗಲಿಕೆ ಯಿಂದ ಮಹಾರಾಷ್ಟ್ರದ ಮಹಾಯುತಿ ಸರ್ಕಾರದ ಆಧಾರಸ್ತಂಭ ಕುಸಿದಂತಾಗಿದ್ದರೆ, ಅತ್ತ ಅವರ ಎನ್‌ಸಿಪಿ ಅತಂತ್ರ ಸ್ಥಿತಿಗೆ ತಲುಪಿದೆ. ಅದರ ಭವಿಷ್ಯದ ಬಗ್ಗೆ ಸಾಕಷ್ಟು ಪ್ರಶ್ನೆಗಳೇಳುತ್ತಿದ್ದು, ಅಜಿತ್ ಇಲ್ಲದೆ ಎನ್‌ಸಿಪಿ ಶಾಸಕರಿಗೆ ಅನಾಥ ಭಾವ ಕಾಡತೊಡಗಿದೆ. ಈ ನಡುವೆ ಅಜಿತ್ ಅನುಪಸ್ಥಿತಿಯಲ್ಲಿ ಭವಿಷ್ಯದ ದೃಷ್ಟಿಯಿಂದ ಶಾಸಕರು ಅನ್ಯ ಪಕ್ಷದತ್ತ ಹೆಜ್ಜೆ ಇಟ್ಟರೂ ಅಚ್ಚರಿ ಇಲ್ಲ ಎನ್ನಲಾಗಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

11:28 PM (IST) Jan 29

ಸನಾತನ ಸಂಸ್ಕೃತಿಯ ಪ್ರಚಾರಕಿ ನಿಗೂಢ ಸಾವು - ವಿವಾದಾತ್ಮಕ ವಿಡಿಯೋ ಬಲಿ ಪಡೆಯಿತೇ? ಯಾರು ಈ ಸಾಧ್ವಿ ಪ್ರೇಮ್ ಬೈಸಾ?

ರಾಜಸ್ಥಾನದ ಜನಪ್ರಿಯ ಪ್ರವಚನಗಾರ್ತಿ ಸಾಧ್ವಿ ಪ್ರೇಮ್ ಬೈಸಾ ಅವರು ಜೋಧ್‌ಪುರದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ತಂದೆಯೊಂದಿಗಿನ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ತಪ್ಪಾಗಿ ವೈರಲ್ ಆದ ನಂತರ ತೀವ್ರ ಸೈಬರ್ ಬುಲ್ಲಿಯಿಂಗ್‌ಗೆ ಒಳಗಾಗಿದ್ದ ಅವರ ಸಾವು ಅನುಮಾನಗಳನ್ನು ಹುಟ್ಟುಹಾಕಿದೆ.

Read Full Story

11:03 PM (IST) Jan 29

ಏರ್‌ಟೆಲ್ ಗ್ರಾಹಕರಿಗೆ ಬಂಪರ್ ಗಿಫ್ಟ್, 4000 ರೂ ಮೌಲ್ಯದ ಅಡೋಬ್ ಎಕ್ಸ್‌ ಪ್ರೆಸ್ ಪ್ರೀಮಿಯಂ ಉಚಿತ

ಏರ್‌ಟೆಲ್ ಗ್ರಾಹಕರಿಗೆ ಬಂಪರ್ ಗಿಫ್ಟ್, ಜಾಗತಿಕ ಮಟ್ಟದಲ್ಲೇ ಮೊದಲ ಬಾರಿಗೆ 360 ಮಿಲಿಯನ್ ಭಾರತೀಯರಿಗೆ ಉಚಿತವಾಗಿ ಅಡೋಬ್ ಎಕ್ಸ್‌ ಪ್ರೆಸ್ ಪ್ರೀಮಿಯಂ ಒದಗಿಸಲಾಗಿದೆ. ಇದು ಏರ್‌ಟೆಲ್ ಗ್ರಾಹಕರಿಗಾಗಿ ಮಾತ್ರ.

Read Full Story

09:49 PM (IST) Jan 29

ತತ್ಕಾಲ್ ರೈಲು ಟಿಕೆಟ್ ಬುಕಿಂಗ್‌ನಲ್ಲಿ ಮಹತ್ತರ ಬದಲಾವಣೆ, ಪ್ರಯಾಣಿಕನಿಗೆ ನೆರವಾದ ಸ್ಮಾರ್ಟರ್ ಟಿಕೆಟ್‌

ತತ್ಕಾಲ್ ರೈಲು ಟಿಕೆಟ್ ಬುಕಿಂಗ್‌ನಲ್ಲಿ ಮಹತ್ತರ ಬದಲಾವಣೆ, ಮಧ್ಯವರ್ತಿಗಳು, ನಕಲಿ ಖಾತೆಗಳ ಮೂಲಕ ತತ್ಕಾಲ್ ಟಿಕೆಟ್ ಬುಕಿಂಗ್ ಪರಿಣಾಮ ಪ್ರಯಾಣಿಕನಿಗೆ ಸಮಸ್ಯೆಯಾಗುತ್ತಿತ್ತು. ಇದೀಗ ಸಮಸ್ಯೆಗೆ ಸ್ಮಾರ್ಟರ್ ಪರಿಹಾರ ನೀಡಲಾಗಿದೆ.

 

Read Full Story

08:26 PM (IST) Jan 29

ಸಹಪಾಠಿಗಳ ನೆರವಿನಿಂದ 55 ದಿನಗಳ ಬಳಿಕ ಕೋಮಾದಿಂದ ಹೊರಬಂದ 8 ವರ್ಷದ ಬಾಲಕ

ಸಹಪಾಠಿಗಳ ನೆರವಿನಿಂದ 55 ದಿನಗಳ ಬಳಿಕ ಕೋಮಾದಿಂದ ಹೊರಬಂದ 8 ವರ್ಷದ ಬಾಲಕ, ಭೀಕರ ಕಾರು ಅಪಘಾತದಿಂದ ಆಸ್ಪತ್ರೆ ದಾಖಲಾಗಿದ್ದ ಬಾಲಕ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳಿದ್ದರು. ಆದರೆ ಅಚ್ಚರಿ ನಡೆದಿದೆ.

 

Read Full Story

08:22 PM (IST) Jan 29

ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ ಕ್ಲಾಸ್‌ಮೇಟ್‌ಗೆ ಅವಮಾನಿಸಿದ ಯುವತಿ - ವೀಡಿಯೋಗೆ ತೀವ್ರ ಆಕ್ರೋಶ

ತನ್ನ ಮಾಜಿ ಕ್ಲಾಸ್‌ಮೇಟ್ ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವುದನ್ನು ನೋಡಿದ ಯುವತಿಯೊಬ್ಬಳು, ಆತನನ್ನು ಅವಮಾನಿಸಿ ವಿಡಿಯೋ ಮಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವತಿಯ ವರ್ತನೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Read Full Story

07:12 PM (IST) Jan 29

ವಿಮಾನ ಪ್ರಯಾಣದಲ್ಲಿ ಮೊಬೈಲ್ ಏರೋಪ್ಲೇನ್ ಮೂಡ್‌ಗೆ ಯಾಕೆ ಹಾಕಬೇಕು? ಸೇಫ್ಟಿ ರೂಲ್

ವಿಮಾನ ಪ್ರಯಾಣದಲ್ಲಿ ಮೊಬೈಲ್ ಏರೋಪ್ಲೇನ್ ಮೂಡ್‌ಗೆ ಯಾಕೆ ಹಾಕಬೇಕು? ಸೇಫ್ಟಿ ರೂಲ್ ಏನು ಹೇಳುತ್ತೆ. ವಿಮಾನ ಸಿಬ್ಬಂದಿಗಳು ನೀಡುವ ಸೂಚನೆಯಲ್ಲಿ ಫ್ಲೈಟ್ ಮೂಡ್ ಅಲರ್ಟ್ ಇದ್ದೆ ಇರುತ್ತೆ. ಯಾಕೆ ಮುಖ್ಯ?

Read Full Story

06:59 PM (IST) Jan 29

ಸಲ್ಲು ಭಯಕ್ಕೆ ಸಿಂಗರ್ ಅರಿಜಿತ್ ವಿದಾಯ? ಹಾಡು ನಿಲ್ಲಿಸಿದ್ದೇಕೆ ಬಾಲಿವುಡ್ ಗಾನಕೋಗಿಲೆ?

ಬಾಲಿವುಡ್‌ನ ಖ್ಯಾತ ಗಾಯಕ ಅರಿಜೀತ್ ಸಿಂಗ್ ಅವರು ತಮ್ಮ ಹಿನ್ನೆಲೆ ಗಾಯನ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಘೋಷಿಸಿ, ಅಭಿಮಾನಿಗಳಿಗೆ ಮತ್ತು ಚಿತ್ರರಂಗಕ್ಕೆ ಆಘಾತ ನೀಡಿದ್ದಾರೆ. ಈ ಅನಿರೀಕ್ಷಿತ ನಿರ್ಧಾರದ ಹಿಂದಿನ ಸಂಭವನೀಯ ಕಾರಣಗಳನ್ನು ನೋಡೋಣ ಬನ್ನಿ

Read Full Story

06:35 PM (IST) Jan 29

ಟಾಕ್ಸಿಕ್ ಟೀಸರ್ ಮ್ಯಾಜಿಕ್ - ಯಾರದು ಟಾಕ್ಸಿಕ್ ರಂಭೆ? ಆ ಗುಟ್ಟು ಬಿಚ್ಚಿಟ್ಟ ಫ್ಯಾನ್ಸ್‌ಗೆ ಹಾಲಿವುಡ್ ಗೊಂಬೆ ನಟಾಲಿಯಾ!

ಟಾಕ್ಸಿಕ್ ಟೀಸರ್​ನಲ್ಲಿ ಯಶ್ ಜೊತೆಗಿದ್ದ ನಟಿ ಯಾರೆಂಬ ಗೊಂದಲಕ್ಕೆ ನಿರ್ದೇಶಕಿ ಗೀತು ಮೋಹನ್ ದಾಸ್ ತೆರೆ ಎಳೆದಿದ್ದಾರೆ. ಅಭಿಮಾನಿಗಳು ಭಾವಿಸಿದ್ದಂತೆ ಆಕೆ ನಟಾಲಿಯಾ ಬರ್ನ್ ಅಲ್ಲ, ಆದರೆ ನಟಾಲಿಯಾ ಚಿತ್ರದಲ್ಲಿ ನಟಿಸಿದ್ದು, ತಮ್ಮ ಪಾತ್ರದ ಬಗ್ಗೆ ಅಚ್ಚರಿಯ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.

Read Full Story

05:19 PM (IST) Jan 29

ಕೆಳಗಿಳಿದು ಬರಲು ಒಪ್ಪದ ಕಸ್ಟಮರ್ - ಆರ್ಡರ್ ಕ್ಯಾನ್ಸಲ್ ಮಾಡಿ ಗ್ರಾಹಕನ ಆಹಾರ ತಿಂದ ಝೋಮ್ಯಾಟೋ ಡೆಲಿವರಿ ಬಾಯ್

ಮನೆ ಬಾಗಿಲಿಗೆ ಆಹಾರ ತಲುಪಿಸಲು ನಿರಾಕರಿಸಿದ ಡೆಲಿವರಿ ಬಾಯ್, ಗ್ರಾಹಕನ ಜೊತೆ ವಾಗ್ವಾದಕ್ಕಿಳಿದು ಆರ್ಡರ್ ಕ್ಯಾನ್ಸಲ್ ಮಾಡಿದ್ದಾನೆ. ನಂತರ ಗ್ರಾಹಕ ಆರ್ಡರ್ ಮಾಡಿದ್ದ ಆಹಾರವನ್ನು ತಾನೇ ತಿಂದು ವಿಡಿಯೋ ಮಾಡಿದ್ದು, ಈ ಘಟನೆಗೆ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Read Full Story

05:08 PM (IST) Jan 29

ಶನಿದೇವನ ಕರುಣೆ - 30 ವರ್ಷಗಳ ನಂತರ ನಡೆಯುತ್ತೆ ಅದ್ಭುತ! ಈ ರಾಶಿಗಳಿಗೆ ಮುಟ್ಟಿದ್ದೆಲ್ಲಾ ಚಿನ್ನ!

ಶನಿ ಗೋಚಾರ: ಹೋಳಿ ನಂತರ ಮೀನ ರಾಶಿಯಲ್ಲಿ ಶನಿ ಅಸ್ತಮಿಸಲಿದ್ದಾನೆ. ಸುಮಾರು 30 ವರ್ಷಗಳ ನಂತರ ನಡೆಯುತ್ತಿರುವ ಈ ಬದಲಾವಣೆಯಿಂದಾಗಿ ಧನು, ಕುಂಭ ಮತ್ತು ಮೀನ ರಾಶಿಯವರಿಗೆ ಅದೃಷ್ಟ ಮತ್ತು ಹಠಾತ್ ಧನಲಾಭ ಉಂಟಾಗಲಿದೆ. ಪೂರ್ಣ ವಿವರಗಳನ್ನು ಇಲ್ಲಿ ತಿಳಿಯೋಣ.

Read Full Story

04:48 PM (IST) Jan 29

ಫೆ.1ರಿಂದ ಫಾಸ್ಟಾಗ್ ನಿಯಮದಲ್ಲಿ ಮತ್ತೊಂದು ಬದಲಾವಣೆ, ವಾಹನ ಮಾಲೀಕರು ಫುಲ್ ಖುಷ್

ಫೆ.1ರಿಂದ ಫಾಸ್ಟಾಗ್ ನಿಯಮದಲ್ಲಿ ಮತ್ತೊಂದು ಬದಲಾವಣೆ, ವಾಹನ ಮಾಲೀಕರಿಗೆ ಇನ್ನು ಮುಂದೆ ಫಾಸ್ಟಾಗ್ ಕಿರಿಕಿರಿ ಇರುವುದಿಲ್ಲ. ಫೆಬ್ರವರಿ 1 ರಿಂದ ಹೊಸ ನಿಯಮ ಜಾರಿಯಾಗುತ್ತಿದೆ. ಏನಿದು ಈ ನಿಯಮ?

 

Read Full Story

04:05 PM (IST) Jan 29

ಡೆಲ್ಲಿ ಮಹಿಳಾ ಪೊಲೀಸ್ ಕಮಾಂಡೋ ಹತ್ಯೆ ಪ್ರಕರಣ ಟ್ವಿಸ್ಟ್, ಕೊನೆ ಕರೆಯಲ್ಲಿ ಪತಿಯ ಕೃತ್ಯ ಬಯಲು

ಡೆಲ್ಲಿ ಮಹಿಳಾ ಪೊಲೀಸ್ ಕಮಾಂಡೋ ಹತ್ಯೆ ಪ್ರಕರಣ ಟ್ವಿಸ್ಟ್, ಹತ್ಯೆ ಮಾಡಿದ್ದು ಬೇರೆ ಯಾರು ಅಲ್ಲ ಸ್ವತಃ ಪತಿ. ಈ ರೋಚಕ ಮಾಹಿತಿ ಕೊನೆಯ ಫೋನ್‌ ಕಾಲ್‌ನಲ್ಲಿ ಬಯಲಾಗಿದೆ. ಅಷ್ಟಕ್ಕೂ ಏನಿದು ಘಟನೆ?

 

Read Full Story

03:49 PM (IST) Jan 29

ಜನನಾಯಗನ್ ​​ಗೆ ಸದ್ಯಕ್ಕಿಲ್ಲ ಬಿಡುಗಡೆ ಭಾಗ್ಯ! ದಳಪತಿ ವಿಜಯ್ ನಂಬಿ 400 ಕೋಟಿ ಕಳೆದುಕೊಂಡ KVN?

ವಿಜಯ್ ಅವರ ಕೊನೆಯ ಚಿತ್ರ 'ಜನನಾಯಗನ್' ಸೆನ್ಸಾರ್ ಸಮಸ್ಯೆಯಿಂದಾಗಿ ಬಿಡುಗಡೆಯಾಗದೆ ಸಂಕಷ್ಟಕ್ಕೆ ಸಿಲುಕಿದೆ. ಸೆನ್ಸಾರ್ ಮಂಡಳಿ ಮತ್ತು ನಿರ್ಮಾಪಕರ ನಡುವಿನ ಕಾನೂನು ಹೋರಾಟದಲ್ಲಿ, ಮದ್ರಾಸ್ ಹೈಕೋರ್ಟ್ ಚಿತ್ರದ ಬಿಡುಗಡೆಗೆ ತಡೆ ನೀಡಿದೆ. ಇದರಿಂದಾಗಿ ಕೆವಿಎನ್ ಪ್ರೊಡಕ್ಷನ್ಸ್‌ಗೆ ಹಿನ್ನಡೆಯಾಗಿದೆ.

Read Full Story

03:48 PM (IST) Jan 29

ಎಂಎಂಎಸ್‌ ಲೀಕ್‌ ಆದ ಬೆನ್ನಲ್ಲಿಯೇ ದುಡುಕಿನ ನಿರ್ಧಾರ ತೆಗೆದುಕೊಂಡ್ರಾ ಸಾಧ್ವಿ ಪ್ರೇಮ್‌ ಬಾಯಿಸಾ!

ಜೋಧ್‌ಪುರದ ಸಾಧ್ವಿ ಪ್ರೇಮ್ ಬಾಯಿಸಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಸಾವಿನ ನಾಲ್ಕು ಗಂಟೆಗಳ ನಂತರ ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನ್ಯಾಯಕ್ಕಾಗಿ ಒತ್ತಾಯಿಸಿದ ಪೋಸ್ಟ್ ಪ್ರಕರಣವನ್ನು ಮತ್ತಷ್ಟು ಜಟಿಲಗೊಳಿಸಿದ್ದು, ಪೊಲೀಸರು ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದಾರೆ. 

Read Full Story

03:27 PM (IST) Jan 29

ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಸಾವಿನಲ್ಲೂ ಆಟವಾಡಿದ ನಂಬರ್‌ 11

Ajit Pawar Death: The Mysterious Connection of Number 11 in Plane Crash ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ದುರಂತದಲ್ಲಿ ಸಾವು ಕಂಡಿದ್ದಾರೆ. ಇದು ರಾಜಕೀಯದಲ್ಲಿ ಒಂದು ದೊಡ್ಡ ಶೂನ್ಯ ಸೃಷ್ಟಿಸಿದೆ.

 

Read Full Story

03:26 PM (IST) Jan 29

ಇದು ಅಸಲಿ ಡಾಗ್ ಪ್ರೀತಿ, ಕೇವಲ ಸ್ಥಳಾಂತರಕ್ಕೆ 15 ಲಕ್ಷ ರೂ ಖರ್ಚು ಮಾಡಿದ ಭಾರತೀಯ ದಂಪತಿ

ಇದು ಅಸಲಿ ಡಾಗ್ ಪ್ರೀತಿ ಕತೆ, ಕೇವಲ ಸ್ಥಳಾಂತರಕ್ಕೆ 15 ಲಕ್ಷ ರೂ ಖರ್ಚು ಮಾಡಿದ ಭಾರತೀಯ ದಂಪತಿ, ಪ್ರೀತಿಯ ನಾಯಿಗಾಗಿ ದಂಪತಿ ದುಡ್ಡಿನ ಮುಖ ನೋಡಿಲ್ಲ. ಬೇರೆ ನಾಯಿ ಪಡೆಯುವ ಆಲೋಚನೆಯೂ ಮಾಡಿಲ್ಲ

Read Full Story

03:07 PM (IST) Jan 29

ಮೋದಿ ಸರ್ಕಾರಕ್ಕೆ ಹಿನ್ನಡೆ, ಯುಜಿಸಿ ಹೊಸ ತಾರತಮ್ಯ ವಿರೋಧಿ ನಿಯಮಗಳ ಅನುಷ್ಠಾನಕ್ಕೆ ಸುಪ್ರೀಂ ತಡೆ

SC Stays UGC New Anti-Discrimination Rules; Issues Notice to Centre ಯುಜಿಸಿಯ ಹೊಸ ತಾರತಮ್ಯ ವಿರೋಧಿ ನಿಯಮಗಳನ್ನು ಸುಪ್ರೀಂ ಕೋರ್ಟ್ ತಾತ್ಕಾಲಿಕವಾಗಿ ರದ್ದುಗೊಳಿಸಿ, ಮಾರ್ಗಸೂಚಿಗಳ ಅಸ್ಪಷ್ಟತೆ ಮತ್ತು ದುರುಪಯೋಗದ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

 

Read Full Story

02:42 PM (IST) Jan 29

ಅಜಿತ್ ಪವಾರ್ ನಿಧನ - ಸುಪ್ರಿಯಾ ಸುಳೆ ಹಾಗೂ ಸುನೇತ್ರಾ ಅವರನ್ನು ಸಮಾಧಾನಿಸುತ್ತಿರುವ ವೃದ್ಧ ಯಾರು?

ವಿಮಾನ ಅಪಘಾತದಲ್ಲಿ ನಿಧನರಾದ ಅಜಿತ್ ಪವಾರ್ ಅವರ ಅಂತ್ಯಸಂಸ್ಕಾರದ ವೇಳೆ, ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದ ವೃದ್ಧರೊಬ್ಬರು ಗಮನ ಸೆಳೆದಿದ್ದು, ಅವರು ಅಜಿತ್ ಪವಾರ್ ಪತ್ನಿ, ಸೋದರಿಗೆ ಸಾಂತ್ವಾನ ಹೇಳುತ್ತಿರುವುದು ವೀಡಿಯೋದಲ್ಲಿ ಸೆರೆ ಆಗಿದೆ. ಅವರು ಯಾರು?

Read Full Story

02:31 PM (IST) Jan 29

ಬರೋಬ್ಬರಿ 11,956 ಕೋಟಿ ರು.ಗೆ ರಾಜಸ್ಥಾನ ರಾಯಲ್ಸ್‌ ಮಾಲೀಕತ್ವ ಹರಾಜು? ಖರೀದಿಸಲು ಒಲವು ತೋರಿವೆ ಈ ಸಂಸ್ಥೆಗಳು!

ನವದೆಹಲಿ: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಭರದ ಸಿದ್ದತೆಗಳು ಶುರುವಾಗಿವೆ. ಹೀಗಿರುವಾಗಲೇ ಕೆಲವು ತಂಡಗಳ ಮಾಲೀಕತ್ವ ಬದಲಾಗುವ ಸಾಧ್ಯತೆಯಿದೆ. ಈ ಪೈಕಿ ರಾಜಸ್ಥಾನ ರಾಯಲ್ಸ್‌ ಮಾಲೀಕತ್ವ ದಾಖಲೆಯ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆಯಿದೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ

 

Read Full Story

01:22 PM (IST) Jan 29

ಪ್ರಭಾಸ್ ಒಂದು ದಿನದ ಊಟದ ಖರ್ಚು ಎಷ್ಟು ಗೊತ್ತಾ? ಬಾಹುಬಲಿ ಸ್ಟಾರ್ ಲಂಚ್ ಮೆನುವಿನಲ್ಲಿ ಏನಿರುತ್ತೆ?

ಪ್ರಭಾಸ್ ಒಳ್ಳೆಯ ಭೋಜನ ಪ್ರಿಯ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ. ಅವರ ಜೊತೆಗಿದ್ದರೆ ರಾಜಮನೆತನದ ಊಟದ ರುಚಿ ನೋಡಬಹುದು. ಅನೇಕ ಸ್ಟಾರ್‌ಗಳು ಪ್ರಭಾಸ್ ಆತಿಥ್ಯದ ಬಗ್ಗೆ ಮಾತನಾಡಿದ್ದಾರೆ. ಹಾಗಾದ್ರೆ ಪ್ರಭಾಸ್ ಊಟದ ಮೆನುವಿನಲ್ಲಿರುವ ವಿಶೇಷತೆಗಳೇನು? ಒಂದು ದಿನದ ಊಟಕ್ಕೆ ಎಷ್ಟು ಖರ್ಚು ಮಾಡುತ್ತಾರೆ?

Read Full Story

01:11 PM (IST) Jan 29

ಮಕ್ಕಳ ವಾಟ್ಸಾಪ್‌ ಚಾಟ್‌ ಲೀಕ್‌ ಆದ ಬೆನ್ನಲ್ಲೇ, ತರಾತುರಿಯಲ್ಲಿ ಮದುವೆ ಮಾಡಿದ ಪೋಷಕರು!

Shocking Viral Video: ಆಘಾತಕಾರಿ ವಿಡಿಯೋದಲ್ಲಿ ಮಕ್ಕಳ ವಾಟ್ಸಾಪ್‌ ಚಾಟ್‌ ಲೀಕ್‌ ಆದ ಬೆನ್ನಲ್ಲಿಯೇ ಕುಟುಂಬದವರು ಇಬ್ಬರೂ ಮಕ್ಕಳನ್ನು ಬಲವಂತವಾಗಿ ಮದುವೆ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

 

Read Full Story

01:05 PM (IST) Jan 29

ಏಮ್ಸ್‌ ಆಸ್ಪತ್ರೆಯ ಲಿಫ್ಟ್‌ನಲ್ಲಿ ಚಿನ್ನದ ಸರ ಕದ್ದಿದ್ದು ಬೇರೆ ಯಾರೋ ಅಲ್ಲ - 45 cctv ನೋಡಿ ಆರೋಪಿಯ ಬಂಧನ

ಭೋಪಾಲ್‌ನ ಏಮ್ಸ್ ಆಸ್ಪತ್ರೆಯ ಲಿಫ್ಟ್‌ನಲ್ಲಿ ವೈದ್ಯಕೀಯ ಸಿಬ್ಬಂದಿಯ ಚಿನ್ನದ ಸರ ಕದ್ದಿದ್ದ ಆರೋಪಿಯನ್ನು ಪೊಲೀಸರು 48 ಗಂಟೆಗಳಲ್ಲಿ ಬಂಧಿಸಿದ್ದಾರೆ. ವಿಚಾರಣೆ ವೇಳೆ, ಆರೋಪಿಯು ಹಣಕಾಸಿನ ಸಮಸ್ಯೆ ಹಾಗೂ ಐಷಾರಾಮಿ ಜೀವನದ ಆಸೆಗಾಗಿ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.

Read Full Story

12:30 PM (IST) Jan 29

ಟ್ಯಾರೋ ಜಾತಕ - ಈ ರಾಶಿಯವರಿಗೆ ಫೆಬ್ರವರಿ ತುಂಬಾ ವಿಶೇಷ; ಆದ್ರೆ ಈ ವಿಚಾರದ ಬಗ್ಗೆ ಹುಷಾರಾಗಿರಿ!

ಪಂಡಿತರು ಹೇಳುವ ಜ್ಯೋತಿಷ್ಯದ ಜೊತೆಗೆ, ಟ್ಯಾರೋ ಕಾರ್ಡ್‌ಗಳ ಜಾತಕವನ್ನು ಸಹ ಅನೇಕರು ನಂಬುತ್ತಾರೆ. ಕಾರ್ಡ್‌ಗಳ ಮೇಲಿನ ಚಿಹ್ನೆಗಳು ಮತ್ತು ಚಿತ್ರಗಳ ಆಧಾರದ ಮೇಲೆ ಭವಿಷ್ಯದ ಸಾಧ್ಯತೆಗಳನ್ನು ಅರ್ಥೈಸುವ ವಿಧಾನವಿದು. ಇದರ ಪ್ರಕಾರ, ಕುಂಭ ರಾಶಿಯವರಿಗೆ ಫೆಬ್ರವರಿ ತಿಂಗಳು ಹೇಗಿರಲಿದೆ ಎಂಬುದನ್ನು ನೋಡೋಣ.

 

Read Full Story

12:19 PM (IST) Jan 29

ಇನ್ಸ್‌ಟಾಗ್ರಾಮ್‌ ಬಾಯ್‌ಫ್ರೆಂಡ್‌ಗಾಗಿ ಹೆತ್ತ ತಂದೆ-ತಾಯಿಗೆ ನಿದ್ರೆ ಇಂಜೆಕ್ಷನ್‌ ನೀಡಿ ಕೊಂದ 25 ವರ್ಷದ ನರ್ಸ್‌!

ವಿಕಾರಾಬಾದ್‌ನಲ್ಲಿ, ನರ್ಸ್ ಒಬ್ಬಳು ತನ್ನ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ಹೆತ್ತವರಿಗೆ ನಿದ್ರಾಜನಕ ಇಂಜೆಕ್ಷನ್‌ ನೀಡಿ ಹತ್ಯೆ ಮಾಡಿದ್ದಾಳೆ. ತನ್ನ ನರ್ಸಿಂಗ್ ವೃತ್ತಿಯ ಜ್ಞಾನವನ್ನು ದುರ್ಬಳಕೆ ಮಾಡಿಕೊಂಡು, ಮೈ-ಕೈ ನೋವಿನ ಚಿಕಿತ್ಸೆ ನೆಪದಲ್ಲಿ ಈ ಕೃತ್ಯ ಎಸಗಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
Read Full Story

11:53 AM (IST) Jan 29

₹340 ಸೀದಾ 736 ರೂಪಾಯಿ..ಎರಡೇ ತಿಂಗಳಲ್ಲಿ ಹೂಡಿಕೆದಾರರ ಹಣ ಡಬಲ್‌ ಮಾಡಿದ ಸರ್ಕಾರಿ ಕಂಪನಿಯ ಷೇರು!

ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ಷೇರುಗಳು ಸತತ ನಾಲ್ಕನೇ ದಿನವೂ ಏರಿಕೆ ಕಂಡು, ಜನವರಿಯಲ್ಲಿ ಶೇ. 36ರಷ್ಟು ಲಾಭ ಗಳಿಸಿವೆ. ಎರಡು ತಿಂಗಳಲ್ಲಿ ಷೇರುಗಳ ಮೌಲ್ಯ ದ್ವಿಗುಣಗೊಂಡಿದ್ದು, ತಾಮ್ರದ ಬೆಲೆ ಏರಿಕೆ ಮತ್ತು ಹೆಚ್ಚಿದ ಹೂಡಿಕೆದಾರರ ಆಸಕ್ತಿಯಿಂದಾಗಿ ಮಾರುಕಟ್ಟೆ ಬಂಡವಾಳ ₹70,000 ಕೋಟಿಗೆ ತಲುಪಿದೆ.

Read Full Story

10:44 AM (IST) Jan 29

IND vs NZ - ವೈಜಾಗ್‌ನಲ್ಲಿ ಟೀಂ ಇಂಡಿಯಾ ಸೋತಿದ್ದೇ ಈ ಕಾರಣಕ್ಕೆ!

IND vs NZ: ನಾಲ್ಕನೇ ಟಿ20ಯಲ್ಲಿ ನ್ಯೂಜಿಲೆಂಡ್ 50 ರನ್‌ಗಳಿಂದ ಭಾರತವನ್ನು ಸೋಲಿಸಿತು. ಶಿವಂ ದುಬೆ (65) ಹೋರಾಡಿದರೂ, ಟಾಪ್ ಆರ್ಡರ್ ವೈಫಲ್ಯ ಮತ್ತು ಬೌಲಿಂಗ್ ದೋಷಗಳಿಂದ ಟೀಂ ಇಂಡಿಯಾ ಸೋತಿತು. ಸರಣಿಯು ಭಾರತದ ಕೈಯಲ್ಲಿದೆ. ಭಾರತ ತಂಡದ ಸೋಲಿಗೆ ಕಾರಣಗಳೇನು?

Read Full Story

10:33 AM (IST) Jan 29

ಸಿಗರೇಟ್‌, ಫಾಸ್ಟ್‌ಟ್ಯಾಗ್‌ನಿಂದ ಸಿಲಿಂಡರ್‌ವರೆಗೆ..ಫೆ.1 ರಿಂದ ಬದಲಾಗಲಿರುವ ನಿಯಮಗಳು!

From LPG to cigarettes… These big changes from February 1 ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಇದೇ ದಿನದಿಂದ ಹಲವು ನಿಯಮಗಳು ಬದಲಾಗಲಿವೆ. ಎಲ್‌ಪಿಜಿ ಸಿಲಿಂಡರ್ ಬೆಲೆ, ಪಾನ್ ಮಸಾಲ ಮತ್ತು ಸಿಗರೇಟ್ ದರಗಳು ಹಾಗೂ ಫಾಸ್ಟ್‌ಟ್ಯಾಗ್ ನಿಯಮಗಳಲ್ಲಿ ಬದಲಾವಣೆಗಳಾಗುವ ನಿರೀಕ್ಷೆಯಿದೆ.

Read Full Story

10:29 AM (IST) Jan 29

ಆಸ್ಟ್ರೇಲಿಯನ್ ಓಪನ್ - ನಾವು ಟೆನಿಸ್‌ ಆಟಗಾರರೇ, ಮೃಗಾಲಯದ ಪ್ರಾಣಿಗಳೇ? - ಟೆನಿಸರ್‌ ತಾರೆ ಇಗಾ ಕಿಡಿ!

ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಆಟಗಾರ್ತಿ ಕೊಕೊ ಗಾಫ್‌ರ ಗೌಪ್ಯತೆ ಉಲ್ಲಂಘಿಸಿದ್ದಕ್ಕೆ ಇಗಾ ಸ್ವಿಯಾಟೆಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ನೋವಾಕ್‌ ಜೋಕೋವಿಚ್‌ ಮತ್ತು ಯಾನಿಕ್‌ ಸಿನ್ನರ್‌ ಪುರುಷರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದು, ಪ್ರಶಸ್ತಿಗಾಗಿ ಸೆಣಸಲಿದ್ದಾರೆ.
Read Full Story

09:46 AM (IST) Jan 29

ಚುನಾವಣಾ ಪ್ರಚಾರಕ್ಕೆ ಹೊರಟಿದ್ದ ನಾಯಕರಿಗೆ ಮೃತ್ಯುಪಾಶ; ಕೊಲಂಬಿಯಾದಲ್ಲಿ ಭೀಕರ ವಿಮಾನ ದುರಂತ!

ಕೊಲಂಬಿಯಾದ ನಾರ್ಟೆ ಡಿ ಸ್ಯಾಂಟ್ಯಾಂಡರ್ ಪ್ರಾಂತ್ಯದಲ್ಲಿ ಸಟೇನಾ ಏರ್‌ಲೈನ್ಸ್ ವಿಮಾನ ಅಪಘಾತಕ್ಕೀಡಾಗಿ, ಸಂಸದರೂ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 15 ಜನರು ಸಾವನ್ನಪ್ಪಿದ್ದಾರೆ. ಕುಕುಟಾದಿಂದ ಓಕಾನಾಗೆ ತೆರಳುತ್ತಿದ್ದ ವಿಮಾನವು ಇಳಿಯುವ ಸ್ವಲ್ಪ ಸಮಯದ ಮೊದಲು ಸಂಪರ್ಕ ಕಳೆದುಕೊಂಡಿದೆ.

Read Full Story

09:44 AM (IST) Jan 29

ಅಜಿತ್ ಪವಾರ್ ತಾಯಿ ಟಿವಿ ನೋಡ್ತಿದ್ದಾಗಲೇ ಬಂತು ವಿಮಾನ ಅಪಘಾತ ಸುದ್ದಿ - ಟಿವಿ ಕೇಬಲ್ ಕಟ್ ಮಾಡಿದ ಸಿಬ್ಬಂದಿ

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ. ಈ ದುರಂತದ ಸುದ್ದಿ ಅವರ ತಾಯಿಗೆ ತಿಳಿಯದಂತೆ ತಡೆಯಲು ಸಿಬ್ಬಂದಿ  ಮನೆಯ ಕೇಬಲ್ ಸಂಪರ್ಕವನ್ನು ಕಡಿತಗೊಳಿಸಿದ್ದರು ಎಂದು ವರದಿಯಾಗಿದೆ.

Read Full Story

09:33 AM (IST) Jan 29

ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ನ ₹1800 ಕೋಟಿ ಆಸ್ತಿ ಇ.ಡಿ. ಮುಟ್ಟುಗೋಲು

ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಸಮೂಹಕ್ಕೆ ಸೇರಿದ 1,885 ಕೋಟಿ ರು. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಯೆಸ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ.

Read Full Story

08:19 AM (IST) Jan 29

ಹೆಣ್ಣು ಮಕ್ಕಳಿಗೆ ಮಾಲ್ ಮಾಲ್ ಎಂದು ಕರೆದು ಚುಡಾಯಿಸ್ತಿದ್ದ ಬೀದಿ ಕಾಮಣ್ಣರಿಗೆ ಬೆಂಡೆತ್ತಿದ್ದ ಪೊಲೀಸರು

ಬೈಕ್‌ನಲ್ಲಿ ಹೋಗುತ್ತಾ ಯುವತಿಯರನ್ನು 'ಮಾಲ್ ಮಾಲ್' ಎಂದು ಚುಡಾಯಿಸುತ್ತಿದ್ದ ಇಬ್ಬರು ಯುವಕರನ್ನು ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಅವರಿಗೆ ವಿಶಿಷ್ಟ ರೀತಿಯಲ್ಲಿ ಶಿಕ್ಷೆ ನೀಡಿ, ಬೀದಿಯಲ್ಲಿ ಮೆರವಣಿಗೆ ಮಾಡಿಸಿ ಕ್ಷಮೆ ಕೇಳಿಸಿದ್ದು, ಈ ಘಟನೆಯ ವೀಡಿಯೋ ವೈರಲ್ ಆಗಿದೆ.
Read Full Story

07:48 AM (IST) Jan 29

ದೇಶಹಿತ ವಿಚಾರದಲ್ಲಿ ಒಗ್ಗಟ್ಟು: ಎಲ್ಲ ಪಕ್ಷಗಳಿಗೆ ಮುರ್ಮು ಕರೆ

ವಿಕಸಿತ ಭಾರತ, ಸ್ವದೇಶಿ ಅಭಿಯಾನ ಮತ್ತು ರಾಷ್ಟ್ರೀಯ ಭದ್ರತಾ ವಿಷಯದಲ್ಲಿ ಎಲ್ಲ ಪಕ್ಷಗಳೂ ತಮ್ಮಲ್ಲಿನ ರಾಜಕೀಯ ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗಟ್ಟಿನಿಂದ ನಿಲ್ಲಬೇಕೆಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ಒತ್ತಾಯಿಸಿದ್ದಾರೆ.

 

Read Full Story

07:48 AM (IST) Jan 29

ವಿಮಾನ ದಿಢೀರ್‌ ನೆಲಕ್ಕಪ್ಪಳಿಸಿ ಬೆಂಕಿ ಮುಗಿಲೆತ್ತರಕ್ಕೆ ಚಿಮ್ಮಿತು!

ದುರಂತಕ್ಕೀಡಾದ ವಿಮಾನ ಲ್ಯಾಂಡಿಂಗ್‌ಗೂ ಮುನ್ನ ಆಗಸದಲ್ಲಿ ಕೊಂಚ ನಿಯಂತ್ರಣ ಕಳೆದುಕೊಂಡಂತಿತ್ತು. ಬಳಿಕ ವಿಮಾನ ದಿಢೀರ್‌ ನೆಲಕ್ಕಪ್ಪಳಿಸಿದ್ದು ಅದರ ಬೆನ್ನಲ್ಲೇ ಭಾರೀ ಸ್ಫೋಟದ ಸದ್ದು ಕೇಳಿಸಿತು. ಸ್ಫೋಟದ ತೀವ್ರತೆಗೆ ಬೆಂಕಿಯ ಕೆನ್ನಾಲಗೆ ಮುಗಿಲೆತ್ತರಕ್ಕೆ ಚಿಮ್ಮಿತು!

 

Read Full Story

07:48 AM (IST) Jan 29

ಮಹಾರಾಷ್ಟ್ರ ಪಾಲಿನ ‘ಶಾಶ್ವತ ಡಿಸಿಎಂ’ ಅಜಿತ್‌ ದಾದಾ : 6 ಬಾರಿ ಡಿಸಿಎಂ ಹುದ್ದೆ

ಮಹಾರಾಷ್ಟ್ರ ರಾಜಕಾರಣದ ಭೀಷ್ಮ, ಎನ್‌ಸಿಪಿ ಸಂಸ್ಥಾಪಕ ಶರದ್‌ ಪವಾರ್‌ ಅವರಿಗೇ ಸೆಡ್ಡು ಹೊಡೆದು ಪ್ರತ್ಯೇಕ ಗುರುತು ಮೂಡಿಸಿದ್ದ, ಮಹಾರಾಷ್ಟ್ರದ ಪಾಲಿನ ‘ಶಾಶ್ವತ ಉಪಮುಖ್ಯಮಂತ್ರಿ’ಯೆಂದೇ ಕರೆಯಲ್ಪಡುತ್ತಿದ್ದ ಅಜಿತ್‌ ಅನಂತರಾವ್‌ ಪವಾರ್‌ ಅವರು ನೆಲಮೂಲದಿಂದ ಬೆಳೆದು ಬಂದ ನಾಯಕ.

 

Read Full Story

07:47 AM (IST) Jan 29

ಪವಾರ್‌ ವಿಮಾನ ದುರಂತ : ಸುಪ್ರೀಂ ನಿಗಾದಲ್ಲಿ ತನಿಖೆಗೆ ಮಮತಾ, ಖರ್ಗೆ ಆಗ್ರಹ

ಅಜಿತ್‌ ಪವಾರ್‌ ವಿಮಾನ ದುರಂತದ ತನಿಖೆಯನ್ನು ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ನಡೆಸಬೇಕು. ಏಕೆಂದರೆ ಈ ದೇಶಲ್ಲಿ ಯಾರೂ ಸೇಫ್‌ ಅಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ. ಇದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.

 

Read Full Story

07:45 AM (IST) Jan 29

ಅಜಿತ್‌ ಅಗಲಿಕೆಯಿಂದ ಎನ್‌ಸಿಪಿ ಅತಂತ್ರ

ಡಿಸಿಎಂ ಅಜಿತ್‌ ಪವಾರ್‌ ಅವರ ಅಗಲಿಕೆಯಿಂದ ಮಹಾರಾಷ್ಟ್ರದ ಮಹಾಯುತಿ ಸರ್ಕಾರದ ಆಧಾರಸ್ತಂಭ ಕುಸಿದಂತಾಗಿದ್ದರೆ, ಅತ್ತ ಅವರು ಕಟ್ಟಿ ಬೆಳೆಸಿದ್ದ ಎನ್‌ಸಿಪಿ ಅತಂತ್ರ ಸ್ಥಿತಿಗೆ ತಲುಪಿದೆ. ಅದರ ಭವಿಷ್ಯದ ಬಗ್ಗೆ ಸಾಕಷ್ಟು ಪ್ರಶ್ನೆಗಳೇಳುತ್ತಿದ್ದು, ಅಜಿತ್‌ ಇಲ್ಲದೆ ಅವರ ಬಣದ ಶಾಸಕರಿಗೆ ಅನಾಥ ಭಾವ ಕಾಡತೊಡಗಿದೆ.

 

Read Full Story

More Trending News