Published : Apr 11, 2026, 07:31 AM ISTUpdated : Apr 11, 2026, 11:39 PM IST

National News Live: ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವಿನ ಖಾತೆ ತೆರೆದ ಸಿಎಸ್‌ಕೆ; ಮ್ಯಾಚ್ ಗೆಲ್ಲಿಸಿದ ಶತಕ ವೀರ ಸಂಜು ಸ್ಯಾಮ್ಸನ್!

ಸಾರಾಂಶ

ನವದೆಹಲಿ (ಏ.11): 40 ದಿನಗಳ ಮಧ್ಯಪ್ರಾಚ್ಯ ಯುದ್ಧಕ್ಕೆ ಪೂರ್ಣವಿರಾಮ ಹಾಕುವ ಹುಟ್ಟಿನಲ್ಲಿ ಶನಿವಾರ ಪಾಕಿಸ್ತಾನದಲ್ಲಿ ನಿಗದಿಯಾಗಿರುವ ಸಂಧಾನ ಸಭೆಗೂ ಮುನ್ನ ಇರಾನ್‌ಗೆ ಮತ್ತೆ 24 ಗಂಟೆಗಳ ಡೆಡ್‌ಲೈನ್ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಇರಾನಿಯನ್ನರ ಮುಂದೆ ಬೇರೆ ಯಾವುದೇ ಅವಕಾಶವೇ ಉಳಿದಿಲ್ಲ. ಇರಾನಿಯನ್ನರು ಬದುಕಿರೋದೇ ನಮ್ಮ ಜೊತೆ ಸಂಧಾನ ಮಾತುಕತೆ ನಡೆಸಲು. ಪಾಕಿಸ್ತಾನದ ಮಾತುಕತೆಯಲ್ಲಿ ಯಾವುದೇ ಡೀಲ್ ಹೊರಹೊಮ್ಮದೇ ಇದ್ದರೆ ನಾವು ಇರಾನ್ ಮೇಲೆ ಹಿಂದೆಂದಿಗಿಂತಲೂ ಭೀಕರ ದಾಳಿ ನಡೆಸುತ್ತೇವೆ' ಎಂದು ಗಂಭೀರ ಎಚ್ಚರಿಕೆಯನ್ನು ನೀಡಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

11:39 PM (IST) Apr 11

ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವಿನ ಖಾತೆ ತೆರೆದ ಸಿಎಸ್‌ಕೆ; ಮ್ಯಾಚ್ ಗೆಲ್ಲಿಸಿದ ಶತಕ ವೀರ ಸಂಜು ಸ್ಯಾಮ್ಸನ್!

ಹ್ಯಾಟ್ರಿಕ್ ಸೋಲಿನ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 23 ರನ್‌ಗಳ ಜಯ ಸಾಧಿಸಿ ಗೆಲುವಿನ ಖಾತೆ ತೆರೆದಿದೆ. ಸಂಜು ಸ್ಯಾಮ್ಸನ್ ಅವರ ಅಜೇಯ ಶತಕ (115*) ಹಾಗೂ ಜೇಮಿ ಓವರ್‌ಟನ್ ಅವರ ಮಾರಕ ಬೌಲಿಂಗ್ (4 ವಿಕೆಟ್) ಸಿಎಸ್‌ಕೆ ಗೆಲುವಿಗೆ ಕಾರಣವಾದರೆ, ಡೆಲ್ಲಿ ಪರ ಟ್ರಿಸ್ಟಿನ್ ಸ್ಟಬ್ಸ್ ಅವರ ಏಕಾಂಗಿ ಹೋರಾಟ ವ್ಯರ್ಥವಾಯಿತು.
Read Full Story

10:33 PM (IST) Apr 11

6 ವರ್ಷದ ಪುತ್ರಿ ಜೊತೆ ಮೊದಲ ಬಾರಿ ನಟಿ Shilpa Shetty - ಬಾಡಿಗೆ ತಾಯ್ತನದಿಂದ ಹುಟ್ಟಿದ ಪುಟಾಣಿ ಸ್ಟೋರಿ

ನಟಿ ಶಿಲ್ಪಾ ಶೆಟ್ಟಿ ಅವರು ಆರೋಗ್ಯ ಸಮಸ್ಯೆಯಿಂದಾಗಿ ಬಾಡಿಗೆ ತಾಯ್ತನದ ಮೂಲಕ ಎರಡನೇ ಮಗುವನ್ನು ಪಡೆದ ಹಿಂದಿನ ನೋವಿನ ಕಥೆಯನ್ನು ಈ ಲೇಖನ ವಿವರಿಸುತ್ತದೆ. ಜೊತೆಗೆ, ಪತಿ ರಾಜ್ ಕುಂದ್ರಾ ಅವರ ನೀಲಿ ಚಿತ್ರ ಪ್ರಕರಣದ ವಿವಾದ ಮತ್ತು ಆ ಬಿರುಗಾಳಿಯ ನಂತರ ದಂಪತಿಯ ಜೀವನದ ಕುರಿತು ಬೆಳಕು ಚೆಲ್ಲುತ್ತದೆ.
Read Full Story

10:12 PM (IST) Apr 11

ಆಕೆಯೊಟ್ಟಿಗೆ ರೂಮ್​ಗೆ ಹೋದಾಗ ಆದಿತ್ಯ, ಬಟ್ಟೆ ಬಿಚ್ಚಿದಾಗ ಅಬ್ದುಲ್ಲಾ! ಮತಾಂತರಕ್ಕೆ ಯತ್ನಿಸಿದವನಿಗೆ ಪರೇಡ್​

ತನ್ನನ್ನು ಆದಿತ್ಯ ಎಂದು ಪರಿಚಯಿಸಿಕೊಂಡ ಅಬ್ದುಲ್ಲ ಎಂಬ ಯುವಕ, ದಲಿತ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿದ್ದಾನೆ. ಸ್ನೇಹದ ಹೆಸರಲ್ಲಿ ಲೈಂಗಿಕ ದೌರ್ಜನ್ಯ ಎಸಗಿ, ಬಳಿಕ ತನ್ನ ನಿಜಬಣ್ಣ ಬಯಲಾಗುತ್ತಿದ್ದಂತೆ ಇಸ್ಲಾಂಗೆ ಮತಾಂತರವಾಗುವಂತೆ ಬೆದರಿಕೆ ಹಾಕಿದ ಆತಂಕಕಾರಿ ಘಟನೆ ಇದು.
Read Full Story

10:05 PM (IST) Apr 11

Asha Bhosle - ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ, ಗಂಭೀರ? ಐಸಿಯುನಲ್ಲಿ ಚಿಕಿತ್ಸೆ

ಹಿರಿಯ ಗಾಯಕಿ ಆಶಾ ಭೋಸ್ಲೆ ಅವರು ಹೃದಯಾಘಾತದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎದೆನೋವು ಮತ್ತು ಸೋಂಕಿನಿಂದ ಬಳಲುತ್ತಿರುವುದಾಗಿ ಅವರ ಮೊಮ್ಮಗಳು ಖಚಿತಪಡಿಸಿದ್ದು, ವದಂತಿಗಳಿಗೆ ಕಿವಿಗೊಡದಂತೆ ಕುಟುಂಬ ಮನವಿ ಮಾಡಿದೆ.
Read Full Story

10:03 PM (IST) Apr 11

ಕಿವಿಯೊಳಗೇ ಸಿಡಿದ ಜೆಬಿಎಲ್ ಇಯರ್ ಬಡ್ - ಎಂಬಿಬಿಎಸ್ ವಿದ್ಯಾರ್ಥಿನಿಗೆ ಗಂಭೀರ ಗಾಯ

ರಾಜಸ್ತಾನದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಕಿವಿಯಲ್ಲಿದ್ದ ಜೆಬಿಎಲ್ ಇಯರ್‌ಬಡ್ ಸ್ಫೋಟಗೊಂಡು ಕಿವಿಗೆ ಹಾನಿಯಾಗಿದೆ. ಈ ಘಟನೆಯನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವೈರ್‌ಲೆಸ್ ಇಯರ್‌ಬಡ್‌ಗಳ ಸುರಕ್ಷತೆಯ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.

Read Full Story

09:42 PM (IST) Apr 11

ಪರೀಕ್ಷೆ ಟೆನ್ಶನ್‌ಗೆ ಗುಡ್‌ಬೈ ಹೇಳಿ! ಇಲ್ಲಿದೆ ಮಕ್ಕಳಿಗೆ ನಟಿ ಅನನ್ಯಾ ಪಾಂಡೆ ಕೊಟ್ಟ ಸಿಂಪಲ್ ಟಿಪ್ಸ್

ಅನನ್ಯಾ ಪಾಂಡೆ ನಿಕ್ ಚಾನೆಲ್‌ನ ಜನಪ್ರಿಯ ಪಾತ್ರಗಳಾದ ಚಿಕೂ ಮತ್ತು ಬಂಟಿ ಜೊತೆ ಒಂದು ಚಟುವಟಿಕೆಯಲ್ಲಿ ಭಾಗವಹಿಸಿದರು. ಮಕ್ಕಳು ತಮ್ಮ ಪರೀಕ್ಷೆಯ ಚಿಂತೆಗಳನ್ನು ಬಲೂನ್‌ಗಳ ಮೇಲೆ ಬರೆದು..

Read Full Story

09:41 PM (IST) Apr 11

ಚಿನ್ನ ಖರೀದಿಯಲ್ಲಿ ದೈತ್ಯ ರಾಷ್ಟ್ರಗಳಾದ ಭಾರತ-ಚೀನಾವನ್ನು ಹಿಂದಿಕ್ಕಿದ 2 ಪುಟ್ಟ ದೇಶಗಳು!

ವಿಶ್ವದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿರುವುದರಿಂದ, ದೇಶಗಳು ಸುರಕ್ಷಿತ ಹೂಡಿಕೆಯಾಗಿ ಚಿನ್ನವನ್ನು ಖರೀದಿಸುತ್ತಿವೆ. ಅಚ್ಚರಿಯ ವಿಷಯವೆಂದರೆ, ಫೆಬ್ರವರಿ ತಿಂಗಳಿನಲ್ಲಿ ಪೋಲೆಂಡ್ ಮತ್ತು ಉಜ್ಬೇಕಿಸ್ತಾನ್‌ನಂತಹ ಸಣ್ಣ ದೇಶಗಳು ಚಿನ್ನ ಖರೀದಿಯಲ್ಲಿ ಭಾರತ ಮತ್ತು ಚೀನಾವನ್ನು ಹಿಂದಿಕ್ಕಿವೆ.
Read Full Story

09:16 PM (IST) Apr 11

Tripti Dimri - ವಿಕ್ಟೋರಿಯಾ'ಸ್ ಸೀಕ್ರೆಟ್‌ನ ಮೊದಲ ಭಾರತೀಯ ರಾಯಭಾರಿಯಾದ 'ಅನಿಮಲ್' ಬೆಡಗಿ!

ತೃಪ್ತಿ ದಿಮ್ರಿ ವಿಕ್ಟೋರಿಯಾ'ಸ್ ಸೀಕ್ರೆಟ್‌ನ ಮೊದಲ ಭಾರತೀಯ ರಾಯಭಾರಿಯಾಗಿರುವುದು ಕೇವಲ ಸೆಲೆಬ್ರಿಟಿ ಒಪ್ಪಂದವಲ್ಲ.ಇದೊಂದು ಸಾಂಸ್ಕೃತಿಕ ಮೈಲಿಗಲ್ಲು. ದಶಕಗಳಿಂದ ಪಾಶ್ಚಿಮಾತ್ಯ ಸೌಂದರ್ಯವನ್ನೇ..

Read Full Story

09:00 PM (IST) Apr 11

ಅಟ್ಲಿ ಕಾಪಿ ಮಾಡಿದ್ದು ನಿಜಾನಾ? ಅಲ್ಲು ಅರ್ಜುನ್ ಚಿತ್ರದ 'ರಾಕಾ' ಪದದ ಅಸಲಿ ಅರ್ಥವೇನು?

ಅಟ್ಲಿ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ನಟಿಸುತ್ತಿರುವ ಬಿಗ್ ಬಜೆಟ್ ಚಿತ್ರಕ್ಕೆ 'ರಾಕಾ' ಎಂದು ಹೆಸರಿಡಲಾಗಿದೆ. ಈ ಪದದ ಅರ್ಥವೇನು ಮತ್ತು ಈ ಚಿತ್ರದ ಕುರಿತ ಇನ್ನಷ್ಟು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

Read Full Story

08:26 PM (IST) Apr 11

ಪತಿಗಾಗಿ ರೂಲ್ಸ್ ಬ್ರೇಕ್ ಮಾಡಿದ ನಟಿ ನಯನತಾರಾ - ವೇದಿಕೆಯಲ್ಲೇ ಭಾವುಕರಾಗಿದ್ದೇಕೆ ವಿಘ್ನೇಶ್ ಶಿವನ್?

ನಯನತಾರಾ ಬಗ್ಗೆ ಗೊತ್ತಿರುವವರಿಗೆ ಅವರ ಒಂದು ರೂಲ್ಸ್ ಕೂಡ ಚೆನ್ನಾಗಿ ಗೊತ್ತು. ಅದೇನೆಂದರೆ, ಅವರು ಯಾವುದೇ ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ. ಇದು ಅವರ ಸಿನಿಮಾ ಕಾಂಟ್ರ್ಯಾಕ್ಟ್‌ನಲ್ಲಿರೋ ಒಂದು ಕಡ್ಡಾಯ ಷರತ್ತು ಕೂಡ.

Read Full Story

08:18 PM (IST) Apr 11

ಭಾರತದ ಎಲ್‌ಪಿಜಿ ಪೂರೈಕೆಗೆ ಹೊಸ ಭರವಸೆ? ಹರ್ಮೋಜ್ ಜಲಸಂಧಿ ದಾಟಿದ ಜಗ್ ವಿಕ್ರಮ್ ನೌಕೆ

ಮಧ್ಯಪ್ರಾಚ್ಯದ ಯುದ್ಧದಿಂದ ಉಂಟಾದ ಎಲ್‌ಪಿಜಿ ಕೊರತೆಯ ನಡುವೆ, 20,400 ಟನ್ ಎಲ್‌ಪಿಜಿ ಹೊತ್ತ 'ಜಗ್ ವಿಕ್ರಮ್' ನೌಕೆಯು ಹರ್ಮೋಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದೆ. ಈ ನೌಕೆಯು ಭಾರತದತ್ತ ಆಗಮಿಸುತ್ತಿದ್ದು, ದೇಶದ ಇಂಧನ ಬಿಕ್ಕಟ್ಟನ್ನು ಪರಿಹರಿಸುವ ನಿರೀಕ್ಷೆ ಮೂಡಿಸಿದೆ.
Read Full Story

08:04 PM (IST) Apr 11

ರಾಕಾ ಪೋಸ್ಟರ್‌ಗೆ ಶಾರುಖ್ ಖಾನ್ ಫಿದಾ - ಅಲ್ಲು ಅರ್ಜುನ್ ಲುಕ್ 'ಮಾಸ್ ಮಾಸ್ ಮಾಸ್' ಎಂದ ಕಿಂಗ್ ಖಾನ್

ಸೂಪರ್‌ಸ್ಟಾರ್ ಶಾರುಖ್ ಖಾನ್, ನಿರ್ದೇಶಕ ಅಟ್ಲಿ ಅವರ ಮುಂಬರುವ 'ರಾಕಾ' ಸಿನಿಮಾದ ಫಸ್ಟ್ ಲುಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲು ಅರ್ಜುನ್ ಅವರ ಲುಕ್ 'ಇಂಟರೆಸ್ಟಿಂಗ್ ಮತ್ತು ಅದ್ಭುತವಾಗಿದೆ' ಎಂದು ಅವರು ಹೊಗಳಿದ್ದಾರೆ.

Read Full Story

07:43 PM (IST) Apr 11

ಭೂಮಿಗೆ ಭಾರವಾದ ಜನಸಂಖ್ಯೆ - ನಾವಿರೋದು 8.3 ಶತಕೋಟಿ - ಆದರೆ ಭೂಮಿಯ ಸಾಮರ್ಥ್ಯ ಇರೋದೆಷ್ಟು?

ಹಡಗಿನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ತುಂಬಿಸಿದರೆ ಅದು ಹೇಗೆ ಮುಳುಗುವುದೋ ಹಾಗೆಯೇ ಭೂಮಿ ಮೇಲಿನ ಮಿತಿ ಮೀರಿದ ಜನಸಂಖ್ಯೆಯಿಂದಾಗಿ ಭೂಮಿಯ ಮೇಲೆ ಅತೀವ ಒತ್ತಡ ಉಂಟಾಗಿದೆಯಂತೆ. ಹಾಗಿದ್ದರೆ ಭೂಮಿಯ ಸಾಮರ್ಥ್ಯ ಎಷ್ಟು ಈ ಬಗ್ಗೆ ಒಂದು ಸ್ಟೋರಿ ಇಲ್ಲಿದೆ.

Read Full Story

07:11 PM (IST) Apr 11

'Jana Nayagan' ಲೀಕ್ ಆಗಿದ್ದಕ್ಕೆ ಬೇಜಾರು - ದಯವಿಟ್ಟು ಥಿಯೇಟರ್‌ನಲ್ಲೇ ನೋಡಿ ಎಂದ ನಟಿ ಪೂಜಾ ಹೆಗ್ಡೆ

ನಟಿ ಪೂಜಾ ಹೆಗ್ಡೆ, 'ಜನ ನಾಯಗನ್' ಚಿತ್ರ ಆನ್‌ಲೈನ್‌ನಲ್ಲಿ ಲೀಕ್ ಆಗಿರೋದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರತಂಡದ ಶ್ರಮಕ್ಕೆ ಬೆಲೆ ಕೊಡಿ, ಪೈರಸಿ ಪ್ರೋತ್ಸಾಹಿಸಬೇಡಿ, ವಿಜಯ್ ಅವರ ಕೊನೆಯ ಸಿನಿಮಾವನ್ನು ಥಿಯೇಟರ್‌ನಲ್ಲೇ ನೋಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

Read Full Story

06:47 PM (IST) Apr 11

'ಹೀರೋಗಳ ಹಿಂದೆ ಬಿದ್ದು ಲೈಫ್ ಹಾಳ್ ಮಾಡ್ಕೋಬೇಡಿ' - ಯುವಕರಿಗೆ ರಜನಿಕಾಂತ್ ಖಡಕ್ ಎಚ್ಚರಿಕೆ

ಯುವಕರು ತಮ್ಮ ಶಿಕ್ಷಣ ಮತ್ತು ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಸ್ಟಾರ್‌ಗಳ ಮೇಲಿನ ಅತಿಯಾದ ಅಭಿಮಾನದ ಬಗ್ಗೆ ಸೂಪರ್‌ಸ್ಟಾರ್ ರಜನಿಕಾಂತ್ ಯುವಕರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

Read Full Story

06:44 PM (IST) Apr 11

ಫೋನ್ ಕಳ್ಳತನಕ್ಕಾಗಿಯೇ ಐಪಿಎಲ್ ಮ್ಯಾಚ್‌ಗೆ ವಿಮಾನವೇರಿ ಬರ್ತಿದ್ದ ಹೈಟೆಕ್ ಕಳ್ಳರು - ಸ್ಟೇಡಿಯಂನಲ್ಲಿ ಫೋನ್ ಎಗರಿಸಿ ಕ್ಷಣಾರ್ಧದಲ್ಲಿ ಎಸ್ಕೇಪ್

ಐಪಿಎಲ್ ಪಂದ್ಯಗಳ ವೇಳೆ ಮೊಬೈಲ್ ಕದಿಯಲೆಂದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಹೈಟೆಕ್ ಕಳ್ಳರ ಜಾಲವನ್ನು ಅಹ್ಮದಾಬಾದ್ ಪೊಲೀಸರು ಭೇದಿಸಿದ್ದಾರೆ. ಬೆಂಗಳೂರು ಮತ್ತು ಅಹ್ಮದಾಬಾದ್ ಸ್ಟೇಡಿಯಂಗಳಲ್ಲಿ ಕ್ರಿಕೆಟ್ ಪ್ರೇಮಿಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು.

Read Full Story

06:25 PM (IST) Apr 11

The Paradise - ಯೂಟ್ಯೂಬ್ ಶೇಕ್ ಮಾಡಿದ 'ಆಯಾ ಶೇರ್' ಹಾಡು - ನಾನಿ ಸಿನಿಮಾ ರಿಲೀಸ್ ಡೇಟ್ ಫಿಕ್ಸ್!

ತೆಲುಗು ನಟ ನಾನಿ ಅಭಿನಯದ 'ದಿ ಪ್ಯಾರಡೈಸ್' ಚಿತ್ರದ 'ಆಯಾ ಶೇರ್' ಹಾಡು ಯೂಟ್ಯೂಬ್‌ನಲ್ಲಿ 101 ಮಿಲಿಯನ್ ವೀಕ್ಷಣೆ ದಾಟಿದೆ. 'ದಸರಾ' ಬಳಿಕ ನಾನಿ-ಶ್ರೀಕಾಂತ್ ಒಡೆಲಾ ಕಾಂಬೋದಲ್ಲಿ ಬರುತ್ತಿರುವ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.

Read Full Story

06:02 PM (IST) Apr 11

ಚಪ್ಪಾಳೆ ಬದಲು ಜನ ಕೂಗಿದ್ರು, ಆ 7 ನಿಮಿಷ 7 ವರ್ಷದಂತಿತ್ತು - 'ಕಸಬ' ವಿವಾದದ ಬಗ್ಗೆ ಮಿಲನ ನಟಿ ಮಾತು

'ಕಸಬ' ಸಿನಿಮಾ ಬಗ್ಗೆ ಟೀಕೆ ಮಾಡಿದ ನಂತರ ನಡೆದ ವಿವಾದಗಳ ಬಗ್ಗೆ ಮಿಲನ ನಟಿ ಪಾರ್ವತಿ ತಿರುವೊತ್ತು ಮಾತನಾಡಿದ್ದಾರೆ. ಮಮ್ಮುಟ್ಟಿ ಜೊತೆ ಮಾತನಾಡಿದರೂ, ಅವರ ಪ್ರತಿಕ್ರಿಯೆ ತಡವಾದ ಕಾರಣ ಪರಿಸ್ಥಿತಿ ಕೈಮೀರಿ ಹೋಯಿತು ಎಂದು ಪಾರ್ವತಿ ಹೇಳಿದ್ದಾರೆ.

Read Full Story

05:45 PM (IST) Apr 11

Varanasi Sadhus - ಎಲ್ಲಾ ಸುಳ್ಳು ಸ್ವಾಮಿ..! ವಾರಣಾಸಿಯ ಶೇ. 40ರಷ್ಟು ಸಾಧುಗಳು ಕ್ರಿಮಿನಲ್‌ಗಳು ಎಂದ ನಟ ಆರ್ಯ

ನಟ ಆರ್ಯ ಅವರು 'ನಾನ್ ಕಡವುಳ್' ಸಿನಿಮಾ ಶೂಟಿಂಗ್ ಅನುಭವಗಳನ್ನು ಹಂಚಿಕೊಂಡಿದ್ದಾರೆ. ವಾರಣಾಸಿಯಲ್ಲಿರುವ ಸಾಧುಗಳಲ್ಲಿ ಶೇ. 40ರಷ್ಟು ಮಂದಿ, ಅಪರಾಧ ಮಾಡಿ ತಲೆಮರೆಸಿಕೊಂಡಿರುವ ಕ್ರಿಮಿನಲ್‌ಗಳು ಎಂದು ಆರ್ಯ ಗಂಭೀರ ಆರೋಪ ಮಾಡಿದ್ದಾರೆ.

Read Full Story

05:32 PM (IST) Apr 11

ಮತ್ತೆ 11 ಸಾವಿರ ನೌಕರರ ಮನೆಗೆ ಕಳುಹಿಸಿದ Dell ಕಂಪೆನಿ - ರಾಜ್ಯವೂ ಸೇರಿ ವಿವಿಧೆಡೆ ಸಾಮೂಹಿಕ ವಜಾ

ಡೆಲ್ ಕಂಪನಿಯು ಈ ವರ್ಷ 11 ಸಾವಿರಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಿದ್ದು, ಒಟ್ಟು ಉದ್ಯೋಗಿಗಳ ಸಂಖ್ಯೆ 97 ಸಾವಿರಕ್ಕೆ ಇಳಿದಿದೆ. ಶಿಸ್ತುಬದ್ಧ ವೆಚ್ಚ ನಿರ್ವಹಣೆ ಮತ್ತು ಕೃತಕ ಬುದ್ಧಿಮತ್ತೆ (AI) ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿರುವುದೇ ಈ ಉದ್ಯೋಗ ಕಡಿತಕ್ಕೆ ಪ್ರಮುಖ ಕಾರಣವೆಂದು ಕಂಪನಿ ತಿಳಿಸಿದೆ. ಈ ಬೆಳವಣಿಗೆಯು ಟೆಕ್ ಉದ್ಯಮದಲ್ಲಿ AI ನಿಂದಾಗಿ ಹೆಚ್ಚುತ್ತಿರುವ ಉದ್ಯೋಗ ನಷ್ಟದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
Read Full Story

05:07 PM (IST) Apr 11

ಮಗಳ ಕನಸಿಗೆ ರೆಕ್ಕೆ ಕಟ್ಟಿದ ತಂದೆ - ಪೊಲೀಸ್ ಇಲಾಖೆಗೆ ಆಯ್ಕೆಯಾದ ಸಂಭ್ರಮದಲ್ಲಿ ಅಪ್ಪನನ್ನೇ ಹೊತ್ತು ಕುಣಿದ ಸುಮೇಧಾ!

ಪೊಲೀಸ್ ಇಲಾಖೆಗೆ ಆಯ್ಕೆಯಾದ ಯುವತಿಯೊಬ್ಬಳು ತನ್ನ ಯಶಸ್ಸಿನ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸಿದ್ದಾಳೆ. ತನ್ನ ಕನಸಿಗೆ ಬೆನ್ನೆಲುಬಾಗಿ ನಿಂತ ತಂದೆಯನ್ನೇ ಹೆಗಲ ಮೇಲೆ ಹೊತ್ತು ಕುಣಿದು ಸಂಭ್ರಮಿಸಿದ್ದು, ಈ ತಂದೆ-ಮಗಳ ಬಾಂಧವ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮನಗೆದ್ದಿದೆ.
Read Full Story

05:04 PM (IST) Apr 11

ಕಣ್ಣು ಕುಕ್ಕಿದ ಸೋಫಿಯಾ ಅನ್ಸಾರಿ ಆದಾಯ; ಇವರಪ್ಪ ಬುರ್ಖಾ ಹಾಕಿಸಲಿಲ್ಲೇಕೆ ಎಂದ ನೆಟ್ಟಿಗರು

ಇನ್‌ಸ್ಟಾಗ್ರಾಂ ಮಾಡೆಲ್ ಸೋಫಿಯಾ ಅನ್ಸಾರಿ ತಮ್ಮ ಎಕ್ಸ್‌ಕ್ಲೂಸಿವ್ ವಿಡಿಯೋ ವೀಕ್ಷಣೆಗಾಗಿ ಪಾವತಿ ಪದ್ಧತಿಯನ್ನು ಜಾರಿಗೆ ತಂದಿದ್ದಾರೆ. ಸೋಫಿಯಾ ಅನ್ಸಾರಿ ಈ ನಿರ್ಧಾರದಿಂದ ಅವರು ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

Read Full Story

04:59 PM (IST) Apr 11

IPL ಮ್ಯಾಚ್ ವೇಳೆ ಸ್ಟೇಡಿಯಂನಲ್ಲೇ ಕ್ಯೂಟ್ ಆಗಿ ಕಿತ್ತಾಡಿಕೊಂಡ ಮುದ್ದಾದ ಜೋಡಿ! ವಿಡಿಯೋ ವೈರಲ್

ಲಖನೌ ಮತ್ತು ಕೋಲ್ಕತಾ ನಡುವಿನ ಐಪಿಎಲ್ ಪಂದ್ಯದ ವೇಳೆ, ಪ್ರೇಕ್ಷಕರ ಗ್ಯಾಲರಿಯಲ್ಲಿ ಜೋಡಿಯೊಂದು ಜಗಳವಾಡಿದ ವಿಡಿಯೋ ವೈರಲ್ ಆಗಿದೆ. ಇದೇ ಪಂದ್ಯದಲ್ಲಿ, ಮುಕುಲ್‌ ಚೌಧರಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಲಖನೌ ತಂಡವು ಕೋಲ್ಕತಾ ವಿರುದ್ಧ ರೋಚಕ ಜಯ ಸಾಧಿಸಿತು.
Read Full Story

03:30 PM (IST) Apr 11

ಪತ್ನಿಯ ದ್ರೋಹ - ಗಂಡನಿಗೆ ಕಾದಿತ್ತು ಭಯಾನಕ ಆಘಾತ, ಓಡಿ ಹೋದ್ರು ಬೆನ್ನು ಬಿಡದ ಹೆಂಡತಿ

ಖಾಸಗಿ ಬ್ಯಾಂಕ್ ಮ್ಯಾನೇಜರ್ ಪತ್ನಿಯೊಬ್ಬಳು ತನ್ನ ಪ್ರಿಯಕರನಾದ ಟ್ಯಾಕ್ಸಿ ಚಾಲಕನೊಂದಿಗೆ ಸೇರಿ, ಗಂಡ ಮತ್ತು ಅತ್ತೆಗೆ ಜೀವ ಬೆದರಿಕೆ ಹಾಕಿದ್ದಾಳೆ. 50 ಲಕ್ಷ ರೂಪಾಯಿಗಾಗಿ ಬೇಡಿಕೆಯಿಟ್ಟು, ಕೊಲೆ ಯತ್ನವನ್ನೂ ನಡೆಸಿದ್ದಾರೆ ಎನ್ನಲಾಗಿದೆ.

Read Full Story

03:18 PM (IST) Apr 11

ಇನ್ನೇನು ವರ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿಯೇ ಮದುಮಗಳಿಗೆ ಮಾಜಿ ಲವರ್​ ಗುಂಡೇಟು - ಭೀಕರ ವಿಡಿಯೋ ವೈರಲ್​

ಬಿಹಾರದ ಬಕ್ಸಾರ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ, ತಾಳಿ ಕಟ್ಟುವ ಕೆಲವೇ ಕ್ಷಣಗಳ ಮೊದಲು ವಧುವಿನ ಮೇಲೆ ಆಕೆಯ ಮಾಜಿ ಪ್ರಿಯಕರ ಗುಂಡು ಹಾರಿಸಿದ್ದಾನೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ವಧು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಆರೋಪಿ ಪರಾರಿಯಾಗಿದ್ದಾನೆ.
Read Full Story

03:06 PM (IST) Apr 11

ಬಿಜೆಪಿ ಕಾರ್ಪೊರೇಟರ್ ‘ಕೈ’ ಹಿಡಿದು 3 ಗಂಟೆಯಲ್ಲೇ ವಾಪಸ್, 'ಇಡಿ' ಫೋನ್‌ ಬಂದಿರ್ಬೇಕು ಎಂದ ನೆಟ್ಟಿಗರು!

ಗುಜರಾತ್‌ನ ಭಾವನಗರದಲ್ಲಿ, ಬಿಜೆಪಿ ಮಹಿಳಾ ಕಾರ್ಪೊರೇಟರ್ ಸೆಜಲ್ ಗೋಹೇಲ್ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರು. ಆದರೆ, ಕೇವಲ ಮೂರು ಗಂಟೆಗಳ ಅಂತರದಲ್ಲಿ, ಅವರು ಮತ್ತೆ ಬಿಜೆಪಿ ಪಾಳಯಕ್ಕೆ ಮರಳುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.
Read Full Story

02:43 PM (IST) Apr 11

ಕೋಟಿ ಮನೆಯ ಇಎಂಐ ಕಟ್ಟಲು ರಾಪಿಡೋ ಹತ್ತಿದ ಟೆಕ್ಕಿ - 40 ಲಕ್ಷ ಸಂಬಳವಿದ್ದವನ ಬದುಕು ಈಗ ಬೀದಿಗೆ!

ವಾರ್ಷಿಕ 40 ಲಕ್ಷ ರೂ. ಸಂಬಳ ಪಡೆಯುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್, ಐಟಿ ಲೇ-ಆಫ್‌ನಿಂದಾಗಿ ಕೆಲಸ ಕಳೆದುಕೊಂಡಿದ್ದಾರೆ. ತಮ್ಮ 1.4 ಕೋಟಿ ರೂ. ಬೆಲೆಯ ಫ್ಲಾಟ್‌ನ 95,000 ರೂ. ಇಎಂಐ ಪಾವತಿಸಲು, ಅವರು ಈಗ ರಾಪಿಡೋ ಬೈಕ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. 

Read Full Story

01:16 PM (IST) Apr 11

ಬಾಡಿಬಿಲ್ಡಿಂಗ್ ಚಾಂಪಿಯನ್‌ಗಳ ಪೊಲೀಸ್ ನೇಮಕಾತಿ - ವೈದ್ಯಕೀಯ ಪರೀಕ್ಷೆಯಲ್ಲಿ ಪ್ರಖ್ಯಾತ ಬಾಡಿಬಿಲ್ಡರ್‌ಗೆ ನಿರಾಸೆ

ಕೇರಳ ಸರ್ಕಾರದ ವಿವಾದಾತ್ಮಕ ನಿರ್ಧಾರದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಹುದ್ದೆಗೆ ನೇಮಕಗೊಂಡಿದ್ದ ಬಾಡಿಬಿಲ್ಡರ್ ಚಿತ್ತರೇಶ್ ನಟೇಶನ್ ಅವರಿಗೆ ವೈದ್ಯಕೀಯ ಪರೀಕ್ಷೆಯಲ್ಲಿ 'ಫ್ಲಾಟ್ ಫೂಟ್' ಇರುವುದು ಪತ್ತೆಯಾಗಿದೆ. ಈ ಕಾರಣದಿಂದ ಅವರ ನೇಮಕಾತಿ ತಡೆಹಿಡಿಯಲಾಗಿದೆ.

Read Full Story

12:49 PM (IST) Apr 11

Eylon Levy - ಪಾಕಿಸ್ತಾನ ಒಂದು ಆಕ್ರಮಣಕಾರಿ ದೇಶ, ಭಾರತಕ್ಕೂ ಅಪಾಯವಿದೆ - ಇಸ್ರೇಲ್ ಮಾಜಿ ವಕ್ತಾರ ಎಚ್ಚರಿಕೆ

ಇಸ್ರೇಲ್‌ನ ಮಾಜಿ ವಕ್ತಾರ ಐಲಾನ್ ಲೆವಿ, ಪಾಕಿಸ್ತಾನದ ರಕ್ಷಣಾ ಸಚಿವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಪಾಕಿಸ್ತಾನವು ಭಯೋತ್ಪಾದನೆಗೆ ಬೆಂಬಲ ನೀಡುವ, ಅಣ್ವಸ್ತ್ರ ಹೊಂದಿರುವ ಆಕ್ರಮಣಕಾರಿ ದೇಶ. ಇರಾನ್ ಜೊತೆ ಸೇರಿ ಇಸ್ಲಾಮಿಕ್ ಒಕ್ಕೂಟ ರಚಿಸಿ ಭಾರತ ಮತ್ತು ಇಸ್ರೇಲ್‌ಗೆ ಅಪಾಯ ತರಲು ನೋಡುತ್ತಿದೆ

Read Full Story

12:41 PM (IST) Apr 11

ಡ್ರೈವಿಂಗ್ ವೇಳೆ ಧಮ್‌ ಎಳೆದು ರಸ್ತೆಯಲ್ಲೇ ಸಿಗರೇಟ್ ಎಸೆದ್ರಾ ಯಜುವೇಂದ್ರ ಚಾಹಲ್‌? ವಿಡಿಯೋ ವೈರಲ್; ಸಂಕಷ್ಟದಲ್ಲಿ ಸ್ಪಿನ್ನರ್!

ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ (yuzvendra chahal) ಅವರನ್ನು ಹೋಲುವ ವ್ಯಕ್ತಿಯೊಬ್ಬರು ಧೂಮಪಾನ (smoking) ಮಾಡಿ, ಸಿಗರೇಟ್ ತುಂಡನ್ನು ರಸ್ತೆಗೆ ಎಸೆದ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಸಾರ್ವಜನಿಕರಿಂದ ತೀವ್ರ ಟೀಕೆಗೆ (controversy) ಗುರಿಯಾಗಿದ್ದಾರೆ.

Read Full Story

12:11 PM (IST) Apr 11

ಪ್ಲೂಟೋಗೆ ಮತ್ತೆ 'ಗ್ರಹ' ಪಟ್ಟ ನೀಡಿ - ನಾಸಾಗೆ 10 ವರ್ಷದ ಬಾಲಕಿಯ ಭಾವುಕ ಪತ್ರ; ಸಖತ್‌ ರಿಪ್ಲೈ ಕೊಟ್ಟ ಬಾಹ್ಯಾಕಾಶ ಸಂಸ್ಥೆ!

ಹತ್ತು ವರ್ಷದ ಕಾಯ್ಲಾ ಎಂಬ ಬಾಲಕಿ, ಪ್ಲೂಟೋವನ್ನು ಮತ್ತೆ ಗ್ರಹವೆಂದು ಪರಿಗಣಿಸುವಂತೆ ನಾಸಾಗೆ ಕೈಬರಹದಲ್ಲಿ ಪತ್ರ ಬರೆದಿದ್ದಾಳೆ. ತನ್ನ ವಾದಕ್ಕೆ ವೈಜ್ಞಾನಿಕ ಕಾರಣಗಳನ್ನು ನೀಡಿ, ಈ ಪತ್ರವು ವೈರಲ್ ಆಗಿದ್ದು, ನಾಸಾ ಕೂಡ ಇದಕ್ಕೆ ಪ್ರತಿಕ್ರಿಯಿಸಿದೆ.
Read Full Story

12:10 PM (IST) Apr 11

ವೈಭವ್ ಸೂರ್ಯವಂಶಿ ಅಂದ್ರೆ ಸುಮ್ನೆನಾ? ಆರ್​ಸಿಬಿ ಬೌಲರ್​ಗಳಿಗೆ ಬೆವರಿಳಿಸಿ ಹೊಸ ದಾಖಲೆ ಬರೆದ 15ರ ಪೋರ!

ಐಪಿಎಲ್ 2026ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಯುವ ಓಪನರ್ ವೈಭವ್ ಸೂರ್ಯವಂಶಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ತಮ್ಮ ಸ್ಪೋಟಕ ಬ್ಯಾಟಿಂಗ್​ನಿಂದ ಅಬ್ಬರಿಸುತ್ತಿರುವ ಇವರು, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

Read Full Story

11:47 AM (IST) Apr 11

China-Taiwan Conflict - ತೈವಾನ್ ಗಡಿಯಲ್ಲಿ ಮತ್ತೆ ಚೀನಾ ತಂಟೆ - 15 ಯುದ್ಧ ವಿಮಾನಗಳು ಗಡಿ ದಾಟಿ ಒಳನುಗ್ಗಿದವು!

China-Taiwan Conflict: ಚೀನಾದ 15 ಯುದ್ಧ ವಿಮಾನಗಳು ಗಡಿರೇಖೆ ದಾಟಿ ತೈವಾನ್‌ನ ವಾಯುಪ್ರದೇಶಕ್ಕೆ ನುಗ್ಗಿವೆ. ಈ ಮೂಲಕ ಚೀನಾ ಮತ್ತೆ ತೈವಾನ್‌ಗೆ ಪ್ರಚೋದನೆ ನೀಡಿದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ತಿಳಿಸಿದೆ.

Read Full Story

11:21 AM (IST) Apr 11

ದಳಪತಿ ವಿಜಯ್‌ಗೆ ಚಿರಂಜೀವಿ ಬೆಂಬಲ; ಸಿನಿಮಾ ಲೀಕ್ ಬಗ್ಗೆ ಮೆಗಾಸ್ಟಾರ್ ಹೇಳಿದ್ದೇನು?

'ಜನ ನಾಯಗನ್' ಸಿನಿಮಾ ಲೀಕ್ ವಿವಾದದಲ್ಲಿ ದಳಪತಿ ವಿಜಯ್‌ಗೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಬೆಂಬಲ ಸೂಚಿಸಿದ್ದಾರೆ. ಸಿನಿಮಾದ ಪ್ರಮುಖ ದೃಶ್ಯಗಳು ಲೀಕ್ ಆಗಿರುವ ಬಗ್ಗೆ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
Read Full Story

11:17 AM (IST) Apr 11

ಮದುವೆ ಪ್ರಪೋಸಲ್‌ ನಿರಾಕರಿಸಿದ್ದಕ್ಕೆ HIV ರಕ್ತ ಚುಚ್ಚಿದ ಬಾಯ್‌ಫ್ರೆಂಡ್‌, ಆ*ತ್ಮಹ*ತ್ಯೆ ಮಾಡಿಕೊಂಡ ಯುವತಿ

ಹೈದರಾಬಾದ್‌ನಲ್ಲಿ, ಎಚ್‌ಐವಿ ಪಾಸಿಟಿವ್ ಎಂದು ಮದುವೆ ನಿರಾಕರಿಸಿದ ಯುವತಿಯ ಮೇಲೆ ಯುವಕನೊಬ್ಬ ಸೇಡು ತೀರಿಸಿಕೊಂಡಿದ್ದಾನೆ. ಆತ ಎಚ್‌ಐವಿ ಪೀಡಿತ ರಕ್ತವನ್ನು ಆಕೆಗೆ ಇಂಜೆಕ್ಟ್ ಮಾಡಿದ್ದು, ಈ ಘಟನೆಯಿಂದ ಉಂಟಾದ ಮಾನಸಿಕ ಒತ್ತಡ ಮತ್ತು ಸಾಮಾಜಿಕ ಭಯದಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
Read Full Story

10:52 AM (IST) Apr 11

ಮೋದಿ-ರಾಹುಲ್ ಅಪರೂಪದ ಆತ್ಮೀಯ ಮಾತುಕತೆಯಲ್ಲಿ ಪ್ರಜಾಪ್ರಭುತ್ವದ ಸೌಂದರ್ಯ ಕಂಡ ನೆಟ್ಟಿಗರು

ಮಹಾತ್ಮ ಜ್ಯೋತಿಬಾ ಫುಲೆ ಅವರ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ಆತ್ಮೀಯವಾಗಿ ಮಾತನಾಡಿಕೊಂಡರು. ರಾಜಕೀಯ ವೈರಿಗಳ ಈ ಅಪರೂಪದ ಕ್ಷಣವನ್ನು ನೆಟ್ಟಿಗರು ಪ್ರಜಾಪ್ರಭುತ್ವದ ಸೌಂದರ್ಯ ಎಂದು ಶ್ಲಾಘಿಸಿದರು. ಇ

Read Full Story

10:51 AM (IST) Apr 11

ಲಖನೌ ಗೆಲ್ಲಿಸಿದ ಮುಕುಲ್ ಚೌಧರಿ; ಮಗನಿಗಾಗಿ ಮನೆ ಮಾರಾಟ, ಹೆಚ್ಚಾದ ಸಾಲ, ತಂದೆ ಜೈಲಿಗೆ!

ಕೆಕೆಆರ್‌ ವಿರುದ್ಧ ಸಿಕ್ಸರ್‌ಗಳ ಸುರಿಮಳೆಗೈದು ಲಖನೌಗೆ ಗೆಲುವು ತಂದುಕೊಟ್ಟ 21 ವರ್ಷದ ಮುಕುಲ್‌ ಚೌಧರಿ ರಾತ್ರೋರಾತ್ರಿ ಸ್ಟಾರ್ ಆಗಿದ್ದಾರೆ. ಎಂ.ಎಸ್. ಧೋನಿಯಿಂದ ಸ್ಫೂರ್ತಿ ಪಡೆದ ಇವರ ಯಶಸ್ಸಿನ ಹಿಂದೆ, ಮಗನ ಕ್ರಿಕೆಟ್‌ ಭವಿಷ್ಯಕ್ಕಾಗಿ ಮನೆ ಮಾರಿ, ಸಾಲ ಮಾಡಿ ಜೈಲಿಗೂ ಹೋಗಿ ಬಂದ ತಂದೆಯ ಅಪಾರ ತ್ಯಾಗದ ಕಥೆಯಿದೆ.
Read Full Story

10:24 AM (IST) Apr 11

'ಬ್ಯಾಟಿಂಗ್‌ ಮಾಡುವಾಗ ಬೌಲರ್‌ ಯಾರು ಅನ್ನೋದನ್ನ ನೋಡೋದಿಲ್ಲ' - ಆರ್‌ಸಿಬಿ ವಿರುದ್ಧದ ಇನ್ನಿಂಗ್ಸ್ ಬಳಿಕ ವೈಭವ್‌ ಗುಡುಗು

ಯುವ ಕ್ರಿಕೆಟಿಗ ವೈಭವ್, ಬುಮ್ರಾರಂತಹ ಬೌಲರ್‌ಗಳನ್ನು ನಿರ್ಭೀತಿಯಿಂದ ಎದುರಿಸಿ ಕೇವಲ 15 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದ್ದಾರೆ. ಪಂದ್ಯದ ನಂತರವೂ ಸಂಭ್ರಮಕ್ಕಿಂತ ಶಿಸ್ತಿಗೆ ಆದ್ಯತೆ ನೀಡಿದ ಅವರ ವೃತ್ತಿಪರತೆ ಮತ್ತು ತಂದೆ-ಕೋಚ್‌ರ ಮಾರ್ಗದರ್ಶನವನ್ನು ನೆನಪಿಸಿಕೊಂಡಿದ್ದಾರೆ.

Read Full Story

10:04 AM (IST) Apr 11

ಶಹಬ್ಬಾಶ್ ವೈಭವ್! ಯುವ ಆಟಗಾರನ ಆರ್ಭಟಕ್ಕೆ ಮನಸೋತು ವಿಶೇಷ ಉಡುಗೊರೆ ನೀಡಿದ ವಿರಾಟ್ ಕೊಹ್ಲಿ

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ನ ಯುವ ಆಟಗಾರ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಅವರ ಆಟಕ್ಕೆ ಮನಸೋತ ವಿರಾಟ್ ಕೊಹ್ಲಿ ವಿಶೇಷ ಉಡುಗೊರೆ ನೀಡಿ ಪ್ರಶಂಸಿಸಿದ್ದಾರೆ.

Read Full Story

09:51 AM (IST) Apr 11

ಪ್ರಧಾನಿ ನರೇಂದ್ರ ಮೋದಿ ಹ*ತ್ಯೆಗೆ ಸಂಚು - ಮೂವರ ಬಂಧನ

ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ಬಿಹಾರದ ಬಕ್ಸರ್‌ನಲ್ಲಿ ಮೂವರು ಯುವಕರನ್ನು ಬಂಧಿಸಲಾಗಿದೆ. ಪ್ರಧಾನಿ ಭದ್ರತೆಯನ್ನು ಭೇದಿಸಿ ಹತ್ಯೆ ಮಾಡುವುದಾಗಿ ಅಮೆರಿಕದ ಸಿಐಎಗೆ ಇ-ಮೇಲ್ ಕಳುಹಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Read Full Story

More Trending News