ನವದೆಹಲಿ (ಏ.11): 40 ದಿನಗಳ ಮಧ್ಯಪ್ರಾಚ್ಯ ಯುದ್ಧಕ್ಕೆ ಪೂರ್ಣವಿರಾಮ ಹಾಕುವ ಹುಟ್ಟಿನಲ್ಲಿ ಶನಿವಾರ ಪಾಕಿಸ್ತಾನದಲ್ಲಿ ನಿಗದಿಯಾಗಿರುವ ಸಂಧಾನ ಸಭೆಗೂ ಮುನ್ನ ಇರಾನ್ಗೆ ಮತ್ತೆ 24 ಗಂಟೆಗಳ ಡೆಡ್ಲೈನ್ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಇರಾನಿಯನ್ನರ ಮುಂದೆ ಬೇರೆ ಯಾವುದೇ ಅವಕಾಶವೇ ಉಳಿದಿಲ್ಲ. ಇರಾನಿಯನ್ನರು ಬದುಕಿರೋದೇ ನಮ್ಮ ಜೊತೆ ಸಂಧಾನ ಮಾತುಕತೆ ನಡೆಸಲು. ಪಾಕಿಸ್ತಾನದ ಮಾತುಕತೆಯಲ್ಲಿ ಯಾವುದೇ ಡೀಲ್ ಹೊರಹೊಮ್ಮದೇ ಇದ್ದರೆ ನಾವು ಇರಾನ್ ಮೇಲೆ ಹಿಂದೆಂದಿಗಿಂತಲೂ ಭೀಕರ ದಾಳಿ ನಡೆಸುತ್ತೇವೆ' ಎಂದು ಗಂಭೀರ ಎಚ್ಚರಿಕೆಯನ್ನು ನೀಡಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
11:17 AM (IST) Apr 11
10:52 AM (IST) Apr 11
ಮಹಾತ್ಮ ಜ್ಯೋತಿಬಾ ಫುಲೆ ಅವರ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ಆತ್ಮೀಯವಾಗಿ ಮಾತನಾಡಿಕೊಂಡರು. ರಾಜಕೀಯ ವೈರಿಗಳ ಈ ಅಪರೂಪದ ಕ್ಷಣವನ್ನು ನೆಟ್ಟಿಗರು ಪ್ರಜಾಪ್ರಭುತ್ವದ ಸೌಂದರ್ಯ ಎಂದು ಶ್ಲಾಘಿಸಿದರು. ಇ
10:51 AM (IST) Apr 11
10:24 AM (IST) Apr 11
ಯುವ ಕ್ರಿಕೆಟಿಗ ವೈಭವ್, ಬುಮ್ರಾರಂತಹ ಬೌಲರ್ಗಳನ್ನು ನಿರ್ಭೀತಿಯಿಂದ ಎದುರಿಸಿ ಕೇವಲ 15 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದ್ದಾರೆ. ಪಂದ್ಯದ ನಂತರವೂ ಸಂಭ್ರಮಕ್ಕಿಂತ ಶಿಸ್ತಿಗೆ ಆದ್ಯತೆ ನೀಡಿದ ಅವರ ವೃತ್ತಿಪರತೆ ಮತ್ತು ತಂದೆ-ಕೋಚ್ರ ಮಾರ್ಗದರ್ಶನವನ್ನು ನೆನಪಿಸಿಕೊಂಡಿದ್ದಾರೆ.
10:04 AM (IST) Apr 11
ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ನ ಯುವ ಆಟಗಾರ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಅವರ ಆಟಕ್ಕೆ ಮನಸೋತ ವಿರಾಟ್ ಕೊಹ್ಲಿ ವಿಶೇಷ ಉಡುಗೊರೆ ನೀಡಿ ಪ್ರಶಂಸಿಸಿದ್ದಾರೆ.
09:51 AM (IST) Apr 11
09:49 AM (IST) Apr 11
09:37 AM (IST) Apr 11
ಇರಾನ್ನಲ್ಲಿ ಹೊಡೆದುರುಳಿಸಲಾದ ಯುದ್ಧವಿಮಾನದ ಪೈಲಟ್ನನ್ನು 'ಗೋಸ್ಟ್ ಮರ್ಮರ್' ಎಂಬ ತಂತ್ರಜ್ಞಾನ ಬಳಸಿ ಅಮೆರಿಕ ಸೇನೆ ರಕ್ಷಿಸಿದೆ. ಈ ಉಪಕರಣವು ಎಐ ಮತ್ತು ಕ್ವಾಂಟಂ ಮ್ಯಾಗ್ನೆಟೊಮೆಟ್ರಿ ತಂತ್ರಜ್ಞಾನ ಬಳಸಿ, ದೂರದಿಂದಲೇ ಮಾನವನ ಹೃದಯ ಬಡಿತದ ಸಂಕೇತಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ.
09:08 AM (IST) Apr 11
08:22 AM (IST) Apr 11
08:10 AM (IST) Apr 11
ಮನೆಯಲ್ಲಿ ಸುಟ್ಟ ನೋಟುಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧ ವಾಗ್ದಂಡನೆ ಪ್ರಕ್ರಿಯೆ ಎದುರಿಸುತ್ತಿದ್ದ ಅಲಹಾಬಾದ್ ಹೈಕೋರ್ಟ್ನ ನ್ಯಾ। ಯಶವಂತ್ ವರ್ಮಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ತನಿಖಾ ಸಮಿತಿಯ ಮುಂದೆ ಹಾಜರಾಗುವ ಮುನ್ನವೇ ರಾಷ್ಟ್ರಪತಿಗಳಿಗೆ ರಾಜೀನಾಮೆ ಪತ್ರ ನೀಡಿವಾಗ್ದಂಡನೆಯಿಂದ ಬಚಾವ್.
07:48 AM (IST) Apr 11
ನಾಸಾದ ಆರ್ಟೆಮಿಸ್ II ಮಿಷನ್ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ನಾಲ್ವರು ಗಗನಯಾತ್ರಿಗಳು ಚಂದ್ರನ ಸುತ್ತ ಪ್ರದಕ್ಷಿಣೆ ಹಾಕಿ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಈ 10 ದಿನಗಳ ಐತಿಹಾಸಿಕ ಪಯಣದಲ್ಲಿ, ಗಗನಯಾತ್ರಿಗಳು ಅತಿ ಹೆಚ್ಚು ದೂರ ಪ್ರಯಾಣಿಸಿದ ದಾಖಲೆ ನಿರ್ಮಿಸಿದೆ.
07:35 AM (IST) Apr 11
ಪಶ್ಚಿಮ ಬಂಗಾಳ ಚುನಾವಣೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಿಂದ ಬಿಜೆಪಿ 'ಸಂಕಲ್ಪ ಪತ್ರ'ವನ್ನು ಬಿಡುಗಡೆ. ಅಧಿಕಾರಕ್ಕೆ ಬಂದರೆ ಆರು ತಿಂಗಳಲ್ಲಿಯುಸಿಸಿ ಜಾರಿ, ಮಹಿಳೆಯರಿಗೆ ಆರ್ಥಿಕ ನೆರವು, ಯುವಕರಿಗೆ ಮಾಸಿಕ ಭತ್ಯೆ, ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿಯಂತಹ ಪ್ರಮುಖ ಭರವಸೆಗಳನ್ನು ಒಳಗೊಂಡಿದೆ.
07:34 AM (IST) Apr 11
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ, ನಿಷೇಧಿತ ಬಬ್ಬರ್ ಖಾಲ್ಸಾ ಉಗ್ರರ ಮೂಲಕ ಭಾರತದ 4 ರಾಜ್ಯಗಳ ಸೇನಾ ನೆಲೆಗಳ ಬಳಿ ಸಿಸಿಟಿವಿ ಅಳವಡಿಸಿತ್ತು. ಈ ಮೂಲಕ ಭಾರತೀಯ ಸೇನೆಯ ಚಲನವಲನಗಳನ್ನು ನೇರವಾಗಿ ವೀಕ್ಷಿಸುತ್ತಿದ್ದ ಬೇಹುಗಾರಿಕಾ ಜಾಲವನ್ನು ದೆಹಲಿ ಪೊಲೀಸರು ಭೇದಿಸಿದ್ದು, 11 ಮಂದಿ ಸೆರೆ.
07:32 AM (IST) Apr 11
ಅಮೆರಿಕ-ಇರಾನ್ ನಡುವಿನ ಸಂಧಾನದ ಕೀರ್ತಿ ಪಡೆಯಲು ಯತ್ನಿಸಿದ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮುಖಭಂಗವಾಗಿದೆ. ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ಗಳನ್ನು ಅಮೆರಿಕದ ಶ್ವೇತಭವನವೇ ಬರೆದುಕೊಟ್ಟಿತ್ತು ಎಂದು 'ನ್ಯೂಯಾರ್ಕ್ ಟೈಮ್ಸ್' ವರದಿಯಲ್ಲಿ ಬಯಲು