LIVE NOW
Published : May 29, 2026, 08:00 AM ISTUpdated : May 29, 2026, 08:55 PM IST

India News Live Updates: 10 ವರ್ಷದ ಉದ್ಯೋಗ ಪೂರೈಸಿಲ್ವೇ? ಚಿಂತೆ ಬೇಡ - ಈ ಸರಳ ವಿಧಾನದ ಮೂಲಕ EPS ಪಿಂಚಣಿಯ ಅಷ್ಟೂ ಹಣ ವಾಪಾಸ್‌ ಪಡೆಯಿರಿ

ಸಾರಾಂಶ

ಇತ್ತೀಚಿನ ನೀಟ್‌ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಭಾರೀ ಮುಜುಗರಕ್ಕೆ ಒಳಗಾಗಿರುವ ಕೇಂದ್ರ ಸರ್ಕಾರ ಜೂ.21ರಂದು ನಡೆಯಲಿರುವ ನೀಟ್‌ ಮರುಪರೀಕ್ಷೆಯನ್ನು ದೋಷರಹಿತವಾಗಿ ನಡೆಸುವ ಉದ್ದೇಶದಿಂದ ಭಾರತೀಯ ಸೇನೆಯ ನೆರವು ಪಡೆಯುವ ಬಗ್ಗೆ ಚಿಂತನೆ ನಡೆಸಿದೆ.ಮರುಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಭಾರತೀಯ ವಾಯುಪಡೆಯ ವಿಮಾನಗಳನ್ನು ಬಳಸಿ ದೇಶಾದ್ಯಂತ ಸಾಗಿಸಲು ಸಾಧ್ಯವೇ ಎಂಬುದರ ಬಗ್ಗೆ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

₹10 ಲಕ್ಷ ಕೋಟಿ ಒಡೆಯ ಅಂಬಾನಿ ಸತತ 6ನೇ ವರ್ಷ ವೇತನ ಪಡೀಲಿಲ್ಲ

ರಿಲಯನ್ಸ್‌ ಸಮೂಹದ ಮುಖ್ಯಸ್ಥ ಮುಕೇಶ್‌ ಅಂಬಾನಿ (69) ಸತತ 6ನೇ ವರ್ಷವೂ ಕಂಪನಿಯಿಂದ ಯಾವುದೇ ವೇತನ ಪಡೆದುಕೊಂಡಿಲ್ಲ. ಕೋವಿಡ್‌ಗೂ ಮುನ್ನ ಮುಕೇಶ್‌ ತಮ್ಮ ವಾರ್ಷಿಕ ವೇತನವನ್ನು 15 ಕೋಟಿ ರು. ದಾಟದಂತೆ ಮಿತಿ ಹೇರಿದ್ದರು. ಆದರೆ ಕೋವಿಡ್‌ ಸಮಯದಲ್ಲಿ ಇತರರಿಗೆ ಮಾದರಿಯಾಗು ಹಿನ್ನೆಲೆಯಲ್ಲಿ ಅವರು ವೇತನ ಪಡೆಯುವುದನ್ನು ಕೈಬಿಟ್ಟಿದ್ದು, ಈ ವರ್ಷವೂ ಅದನ್ನು ಮುಂದುವರೆಸಿದ್ದಾರೆ. ಕಂಪನಿಯ ವಾರ್ಷಿಕ ವರದಿಯಲ್ಲಿ ಈ ಅಂಶಗಳಿವೆ. ರಿಲಯನ್ಸ್‌ನಲ್ಲಿ ಮುಕೇಶ್‌ ಸ್ವತಃ 1.61 ಕೋಟಿ ಷೇರುಗಳನ್ನು ಹೊಂದಿದ್ದಾರೆ. ಇದರ ಹೊರತಾಗಿ ಪ್ರವರ್ತಕರ ಕಂಪನಿ ರಿಲಯನ್ಸ್‌ನಲ್ಲಿ 664.5 ಕೋಟಿ ಅಥವಾ ಶೇ.50.07ರಷ್ಟು ಷೇರು ಪಾಲು ಹೊಂದಿದೆ. ಈ ಲೆಕ್ಕಾಚಾರದಲ್ಲಿ ಮುಕೇಶ್‌ ಅಂಬಾನಿ ಒಟ್ಟು 10 ಲಕ್ಷ ಕೋಟಿ ರು. ಆಸ್ತಿ ಹೊಂದಿದ್ದಾರೆ.

08:55 PM (IST) May 29

10 ವರ್ಷದ ಉದ್ಯೋಗ ಪೂರೈಸಿಲ್ವೇ? ಚಿಂತೆ ಬೇಡ - ಈ ಸರಳ ವಿಧಾನದ ಮೂಲಕ EPS ಪಿಂಚಣಿಯ ಅಷ್ಟೂ ಹಣ ವಾಪಾಸ್‌ ಪಡೆಯಿರಿ

10 ವರ್ಷಗಳ ಸೇವೆ ಪೂರ್ಣಗೊಳ್ಳದಿದ್ದರೂ, ನೌಕರರು ಇಪಿಎಫ್‌ಒ 'ಫಾರ್ಮ್ 10ಸಿ' ಬಳಸಿ ತಮ್ಮ ಪೆನ್ಷನ್ ಖಾತೆಯಲ್ಲಿನ ಸಂಪೂರ್ಣ ಹಣವನ್ನು ಹಿಂಪಡೆಯಬಹುದು. ಈ ಲೇಖನವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ, ಬೇಕಾಗುವ ದಾಖಲೆಗಳು ಮತ್ತು ಯಾರು ಅರ್ಹರು ಎಂಬ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ.
Read Full Story

08:36 PM (IST) May 29

ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡು ಬಾರಿ ಟಾಸ್ ಹಾಕಿದ್ದೇಕೆ? ಗುಜರಾತ್‌ಗೆ ಆಯಿತಾ ಅನ್ಯಾಯಾ?

ಕ್ವಾಲಿಫೈಯರ್ 2 ಪಂದ್ಯದಲ್ಲಿ ಒಂದಲ್ಲ ಎರಡು ಬಾರಿ ಟಾಸ್ ಹಾಕಲಾಗಿದೆ. ಮೊದಲ ಬಾರಿಗೆ ಗುಜರಾತ್ ಪರ ಟಾಸ್ ಬಿದ್ದರೆ, ಎರಡನೇ ಬಾರಿಗೆ ರಾಜಸ್ಥಾನ ರಾಯಲ್ಸ್ ಪರವಾಗಿತ್ತು. ಅಷ್ಟಕ್ಕೂ 2 ಬಾರಿ ಟಾಸ್ ಹಾಕಿ ಟೈಟಾನ್ಸ್‌ಗೆ ಅನ್ಯಾಯ ಮಾಡಿದ್ರಾ?

Read Full Story

08:12 PM (IST) May 29

ಲಕ್ನೋ ನಾಯಕತ್ವಕ್ಕೆ ರಿಷಭ್ ಪಂತ್ ಹಠಾತ್ ಗುಡ್‌ಬೈ - ಕೋಚ್ ಜೊತೆಗಿನ ಜಗಳ, ಇಂಟರ್ನಲ್ ಪಾಲಿಟಿಕ್ಸ್ ಬಿಚ್ಚಿಟ್ಟ ಇನ್‌ಸೈಡ್ ಸ್ಟೋರಿ!

ಐಪಿಎಲ್ 2026ರಲ್ಲಿ ಲಕ್ನೋ ತಂಡದ ಹೀನಾಯ ಪ್ರದರ್ಶನದ ನಂತರ ರಿಷಭ್ ಪಂತ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮ್ಯಾನೇಜ್‌ಮೆಂಟ್ ಜೊತೆಗಿನ ಭಿನ್ನಾಭಿಪ್ರಾಯ, ನಿರ್ಧಾರಗಳಲ್ಲಿ ಸ್ವಾತಂತ್ರ್ಯದ ಕೊರತೆ ಮತ್ತು ತಮ್ಮ ಬ್ಯಾಟಿಂಗ್ ಮೇಲೆ ಗಮನಹರಿಸುವ ಉದ್ದೇಶದಿಂದ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

Read Full Story

07:44 PM (IST) May 29

ಜಾಹೀರಾತು ಶೂಟಿಂಗ್​ಗೆ ಹೋಗಿದ್ದ ಖ್ಯಾತ ಮಾಡೆಲ್​ ದುರಂತ ಸಾವು - ಆಯ ತಪ್ಪಿ ಕ್ವಾರಿಯಲ್ಲಿ ಬಿದ್ದು ಘಟನೆ

ಬಟ್ಟೆ ಜಾಹೀರಾತಿನ ಶೂಟಿಂಗ್‌ಗಾಗಿ ಕೇರಳಕ್ಕೆ ಬಂದಿದ್ದ ದೆಹಲಿಯ 26 ವರ್ಷದ ಮಾಡೆಲ್, ಎರ್ನಾಕುಲಂನ ನಿಷಿದ್ಧ ಕ್ವಾರಿಯೊಂದರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಶೂಟಿಂಗ್ ಸ್ಥಳ ಪರಿಶೀಲನೆ ವೇಳೆ ನೀರಿಗೆ ಇಳಿದಾಗ ಈ ದುರಂತ ಸಂಭವಿಸಿದ್ದು, ಅಗ್ನಿಶಾಮಕ ದಳದವರು 30 ಅಡಿ ಆಳದಿಂದ ಅವರ ಮೃತದೇಹವನ್ನು ಹೊರತೆಗೆದಿದ್ದಾರೆ.
Read Full Story

06:50 PM (IST) May 29

ಡೇಟಿಂಗ್​ ಆ್ಯಪ್​ನಲ್ಲಿ ಸುಂದರಿಯ ನೋಡುತ್ತಲೇ 1.66 ಕೋಟಿ ರೂ. ಕಳಕೊಂಡ ಬೆಂಗಳೂರು ಟೆಕ್ಕಿ

ಬೆಂಗಳೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು 'ಟಂಟನ್' ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವತಿಯ ನಕಲಿ ಪ್ರಣಯದ ಬಲೆಗೆ ಬಿದ್ದಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ, ಆನ್‌ಲೈನ್ ಹೂಡಿಕೆ ಯೋಜನೆಯಲ್ಲಿ ಹಣ ತೊಡಗಿಸುವಂತೆ ಪ್ರೇರೇಪಿಸಿದ ಆಕೆ, ಯುವಕನಿಂದ 1.66 ಕೋಟಿ ರೂಪಾಯಿ ಜೊತೆ ಪರಾರಿಯಾಗಿದ್ದಾಳೆ.

Read Full Story

05:28 PM (IST) May 29

ಸೂರ್ಯವಂಶಿಯನ್ನು 14ನೇ ವಯಸ್ಸಿಗೆ ಐಪಿಎಲ್ ಆಡಿಸಿದ್ದೂ ದ್ರಾವಿಡ್, ಪ್ರವೀಣ್ ತಾಂಬೆಯನ್ನು 41ನೇ ವಯಸ್ಸಿಗೆ ಐಪಿಎಲ್ ಆಡಿಸಿದ್ದೂ ದ್ರಾವಿಡ್..!

ರಾಹುಲ್ ದ್ರಾವಿಡ್ ಅವರ ಅಸಾಮಾನ್ಯ ಪ್ರತಿಭಾ ಶೋಧನೆಯನ್ನು ಈ ಲೇಖನ ವಿವರಿಸುತ್ತದೆ. 13 ವರ್ಷದ ವೈಭವ್ ಸೂರ್ಯವಂಶಿ ಮತ್ತು 41 ವರ್ಷದ ಪ್ರವೀಣ್ ತಾಂಬೆ ಅವರಂತಹ ವಯಸ್ಸಿನ ಹಂಗಿಲ್ಲದೆ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಐಪಿಎಲ್‌ನಲ್ಲಿ ಅವಕಾಶ ನೀಡಿದ ಅವರ ನಿರ್ಧಾರಗಳ ಹಿಂದಿನ ಕಥೆಯನ್ನು ಇದು ತೆರೆದಿಡುತ್ತದೆ.
Read Full Story

05:02 PM (IST) May 29

ಟಾಕ್ಸಿಕ್, ರಾಮಾಯಣ,ಪೆದ್ದಿ ಯಾವುದು ಅಲ್ಲ, IMDb ರೇಟಿಂಗ್ ನೀಡಿದ 2026ರ ಬಹುನಿರೀಕ್ಷಿತ ಚಿತ್ರ ಇದು

2026ರಲ್ಲಿ ಧುರಂಧರ್ 2 ಮೂಲಕ ಬಾಲಿವುಡ್ ಸಿನಿಮಾದಲ್ಲಿ ಹಂಗಾಮ ಸೃಷ್ಟಿಯಾಗಿದೆ. ಇದೀಗ 2026ರಲ್ಲಿ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಆದರೆ IMDb ರೇಟಿಂಗ್ ಪ್ರಕಾರ 2026ರ ಬಹುನಿರೀಕ್ಷಿತ ಚಿತ್ರದಲ್ಲಿ ಯಾವ ಸೂಪರ್ ಸ್ಟಾರ್‌ಗಳು ಇಲ್ಲ.

 

Read Full Story

04:25 PM (IST) May 29

ಅದೊಂದು ಕಾರಣಕ್ಕಾಗಿ ಐಪಿಎಲ್ ಮಧ್ಯದಲ್ಲಿಯೇ ಮುಂಬೈ ಇಂಡಿಯನ್ಸ್ ತೊರೆಯಲು ಮುಂದಾಗಿದ್ದ ಹಾರ್ದಿಕ್ ಪಾಂಡ್ಯ..!

2026ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕಳಪೆ ಪ್ರದರ್ಶನದ ನಂತರ, ನಾಯಕ ಹಾರ್ದಿಕ್ ಪಾಂಡ್ಯ ತಂಡವನ್ನು ತೊರೆಯಲು ಮುಂದಾಗಿದ್ದರು ಎಂದು ವರದಿಯಾಗಿದೆ. ಮಾನಸಿಕ ಒತ್ತಡ ಮತ್ತು ತಂಡದ ಹೀನಾಯ ಸೋಲಿನಿಂದಾಗಿ, ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದ ನಂತರ ಪಾಂಡ್ಯ ಈ ನಿರ್ಧಾರವನ್ನು ಫ್ರಾಂಚೈಸಿಗೆ ತಿಳಿಸಿದ್ದರು ಎನ್ನಲಾಗಿದೆ.
Read Full Story

03:12 PM (IST) May 29

ಜೂನ್‌ 21ರ ನೀಟ್ ಮರುಪರೀಕ್ಷೆ ಸೋರಿಕೆ ತಡೆಯಲು ಭಾರತೀಯ ಸೇನೆಯ ನೆರವು, ಕೇಂದ್ರದ ಮಾಸ್ಟರ್ ಪ್ಲಾನ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ವಿವಾದದ ನಂತರ, ಕೇಂದ್ರ ಸರ್ಕಾರವು ಜೂನ್ 21ರ ಮರುಪರೀಕ್ಷೆಯನ್ನು ಸೋರಿಕೆ-ನಿರೋಧಕವಾಗಿ ನಡೆಸಲು ಐತಿಹಾಸಿಕ ಕ್ರಮ ಕೈಗೊಂಡಿದೆ.  ಸುರಕ್ಷಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ತಲುಪಿಸಲು ಭಾರತೀಯ ವಾಯುಪಡೆಯ ವಿಶೇಷ ವಿಮಾನಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ 

Read Full Story

02:55 PM (IST) May 29

ಪ್ರವಾಸೋದ್ಯಮದಲ್ಲಿ ಎಐ ತಂತ್ರಜ್ಞಾನ, ವಿಮಾನ, ಹೋಟೆಲ್ ಬುಕ್ಕಿಂಗ್ ಇನ್ಮುಂದೆ ಮತ್ತಷ್ಟು ಸುಲಭ!

ಜಾಗತಿಕ ಟೆಕ್ ದೈತ್ಯ ಕಾಗ್ನಿಜೆಂಟ್, ಟ್ರಾವೆಲ್‌ಪೋರ್ಟ್ & ಎಐ ಸಂಶೋಧನಾ ಸಂಸ್ಥೆ ಆಂಥ್ರೋಪಿಕ್, ಪ್ರವಾಸೋದ್ಯಮ ಕ್ಷೇತ್ರವನ್ನು ಸಂಪೂರ್ಣವಾಗಿ ಎಐ ಯುಗಕ್ಕೆ ಕೊಂಡೊಯ್ಯಲು ಕೈಜೋಡಿಸಿವೆ. ಆಂಥ್ರೋಪಿಕ್‌ನ 'ಕ್ಲೌಡ್' ಎಐ ಮಾಡೆಲ್ ಬಳಸಿ, ಟ್ರಾವೆಲ್‌ಪೋರ್ಟ್‌ನ ಬುಕ್ಕಿಂಗ್ ತಂತ್ರಜ್ಞಾನ ಆಧುನೀಕರಿಸಲಾಗುತ್ತಿದೆ.

Read Full Story

02:41 PM (IST) May 29

IPL ಕ್ವಾಲಿಫೈಯರ್-2 - ರಾಜಸ್ಥಾನ ಎದುರಿನ ಹೈವೋಲ್ಟೇಜ್ ಮ್ಯಾಚ್‌ಗೆ ಗುಜರಾತ್ ತಂಡದಲ್ಲಿ 2 ಮೇಜರ್ ಚೇಂಜ್! ಸ್ಟಾರ್ ಆಟಗಾರರು ಔಟ್

ಮುಲ್ಲನ್‌ಪುರ್: 19ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಕ್ವಾಲಿಫೈಯರ್-2 ಪಂದ್ಯದಲ್ಲಿಂದು ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಕಾದಾಡಲಿವೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ಬಲಿಷ್ಠ ರಾಜಸ್ಥಾನ ಎದುರು ಗುಜರಾತ್ ಟೈಟಾನ್ಸ್ ತಂಡವು ಎರಡು ಮಹತ್ವದ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲು ರೆಡಿಯಾಗಿದೆ.

 

Read Full Story

02:03 PM (IST) May 29

CJP Account Ban - ಕಾಕ್ರೋಚ್ ಜನತಾ ಪಾರ್ಟಿಗೆ ಹಿನ್ನಡೆ - 'ಎಕ್ಸ್' ಖಾತೆ ಬ್ಯಾನ್, ತಕ್ಷಣಕ್ಕೆ ರಿಲೀಫ್ ನೀಡಲು ಹೈಕೋರ್ಟ್ ನಕಾರ

'ಕಾಕ್ರೋಚ್ ಜನತಾ ಪಾರ್ಟಿ'ಯ 'ಎಕ್ಸ್' ಖಾತೆ ಬ್ಯಾನ್ ಪ್ರಶ್ನಿಸಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಸಲ್ಲಿಸಿದ್ದ ಅರ್ಜಿಗೆ ದೆಹಲಿ ಹೈಕೋರ್ಟ್ ತಕ್ಷಣದ ರಿಲೀಫ್ ನೀಡಿಲ್ಲ. ಪ್ರಕರಣದ ಗಂಭೀರತೆ ಪರಿಗಣಿಸಿ, ಕೇಂದ್ರದ ವಾದ ಕೇಳಿದ ನಂತರವೇ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿ, ವಿಚಾರಣೆ ಜುಲೈ 6ಕ್ಕೆ ಮುಂದೂಡಿದೆ.

Read Full Story

01:32 PM (IST) May 29

IPL 2026 GT vs RR ಕ್ವಾಲಿಫೈಯರ್-2 ಪಂದ್ಯಕ್ಕೆ ಕ್ಷಣಗಣನೆ; ಎಲ್ಲರ ಕಣ್ಣು ವೈಭವ್ ಸೂರ್ಯವಂಶಿ ಮೇಲೆ!

ರಾಜಸ್ಥಾನ ರಾಯಲ್ಸ್‌ನ ಯುವ ಆಟಗಾರ ವೈಭವ್ ಸೂರ್ಯವಂಶಿ, ಎಲಿಮಿನೇಟರ್ ಪಂದ್ಯದಲ್ಲಿ 29 ಎಸೆತಗಳಲ್ಲಿ 97 ರನ್ ಸಿಡಿಸಿ ಮಿಂಚಿದ್ದಾರೆ. ಅವರ ಈ ಸ್ಫೋಟಕ ಬ್ಯಾಟಿಂಗ್‌ಗೆ ಸಚಿನ್ ತೆಂಡೂಲ್ಕರ್ ಸೇರಿದಂತೆ ಕ್ರಿಕೆಟ್ ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದೀಗ ಎಲ್ಲರ ಕಣ್ಣು ಕ್ವಾಲಿಫೈಯರ್ ಪಂದ್ಯದ ಮೇಲಿದೆ.
Read Full Story

01:08 PM (IST) May 29

ಇನ್​ಸ್ಟಾ, ಫೇಸ್​ಬುಕ್​, ವಾಟ್ಸ್​ಆ್ಯಪ್​ಗೆ ಮಾಸಿಕ ಶುಲ್ಕ ನಿಗದಿ - ದುಡ್ಡು ಕೊಟ್ರೆ ಮಾತ್ರ ಬಳಕೆ- ಡಿಟೇಲ್ಸ್​ ಇಲ್ಲಿದೆ

ಮೆಟಾ ತನ್ನ ಜನಪ್ರಿಯ ಆ್ಯಪ್​ಗಳಾದ ಇನ್​ಸ್ಟಾಗ್ರಾಮ್​, ವಾಟ್ಸ್​ಆ್ಯಪ್​ ಮತ್ತು ಫೇಸ್​ಬುಕ್​ಗಳಿಗಾಗಿ ಹೊಸ ಚಂದಾದಾರಿಕೆ ಯೋಜನೆಗಳನ್ನು ಪರಿಚಯಿಸುತ್ತಿದೆ. ಈ ಪ್ಲಸ್ ಯೋಜನೆಗಳ ಮೂಲಕ, ಬಳಕೆದಾರರು ಹಣ ಪಾವತಿಸಿ ವಿಶೇಷ AI ವೈಶಿಷ್ಟ್ಯಗಳು, ಕಸ್ಟಮೈಸೇಶನ್ ಆಯ್ಕೆಗಳು ಮತ್ತು ಇತರ ಪ್ರೀಮಿಯಂ ಸೌಲಭ್ಯ ಪಡೆಯಬಹುದು.

Read Full Story

01:05 PM (IST) May 29

IPL 2026 - ಗುಜರಾತ್-ರಾಜಸ್ಥಾನ ನಡುವಿನ ಕ್ವಾಲಿಫೈಯರ್ ಪಂದ್ಯಕ್ಕೆ ಮಳೆ ವಿಲನ್ ಆಗುತ್ತಾ? ಹೇಗಿದೆ ನ್ಯೂ ಚಂಡೀಗಢ ಹವಾಮಾನ ವರದಿ?

ಮುಲ್ಲನ್‌ಪುರ: 2026ರ ಐಪಿಎಲ್ ಟೂರ್ನಿಯ ಕ್ವಾಲಿಫೈಯರ್-2 ಪಂದ್ಯದಲ್ಲಿಂದು ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಬನ್ನಿ ಸದ್ಯ ನ್ಯೂ ಚಂಡೀಗಢದಲ್ಲಿ ಹವಾಮಾನ ಪರಿಸ್ಥಿತಿ ಹೇಗಿದೆ ನೋಡೋಣ.

 

Read Full Story

11:12 AM (IST) May 29

15 ವರ್ಷದ ವೈಭವ್ ಸೂರ್ಯವಂಶಿ ಹರಾಜಿಗೆ ಬಂದ್ರೆ 50 ಕೋಟಿಗೆ ಬಿಡ್..! ಅಚ್ಚರಿ ಭವಿಷ್ಯ ನುಡಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ

2026ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಅಬ್ಬರಿಸುತ್ತಿರುವ 15ರ ಯುವ ಆಟಗಾರ ವೈಭವ್ ಸೂರ್ಯವಂಶಿ, ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. ಅವರ ಸ್ಪೋಟಕ ಆಟವನ್ನು ಗಮನಿಸಿ, ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ವೈಭವ್ ಹರಾಜಿಗೆ ಬಂದರೆ 50 ಕೋಟಿ ರೂ. ಪಡೆಯಬಹುದು ಎಂದು ಭವಿಷ್ಯ ನುಡಿದಿದ್ದಾರೆ.
Read Full Story

11:04 AM (IST) May 29

₹34 ಕೋಟಿ ಬ್ಲಡ್‌ ಮನಿ ಕೊಟ್ಟು ಬಚಾವ್‌, ಸೌದಿಯಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಕೇರಳಿಗ 2 ದಶಕದ ಬಳಿಕ ಮನೆಗೆ!

ಸೌದಿ ಅರೇಬಿಯಾದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಕೇರಳದ ಅಬ್ದುಲ್ ರಹೀಂ, 20 ವರ್ಷಗಳ ನಂತರ ಬಿಡುಗಡೆಯಾಗಿದ್ದಾರೆ. ಸಾರ್ವಜನಿಕವಾಗಿ ಸಂಗ್ರಹಿಸಿದ 34 ಕೋಟಿ ರೂಪಾಯಿ ರಕ್ತದ ಹಣವನ್ನು ಪಾವತಿಸಿ, ಅವರು ಇದೀಗ ತಮ್ಮ ತವರು ರಾಜ್ಯಕ್ಕೆ ಮರಳಿದ್ದಾರೆ.
Read Full Story

10:51 AM (IST) May 29

MP Kakoli Ghosh Dastidar - TMC ಸೋಲಿನ ಬೆನ್ನಲ್ಲೇ ಭಾರೀ ಸ್ಫೋಟ; ತಮ್ಮದೇ ಪಕ್ಷದ ಸಂಸದನಿಂದ ನಿಂದನೆ ಎಂಪಿ ಕಕೋಲಿ ಘೋಷ್ ದೂರು

ತಮ್ಮದೇ ಪಕ್ಷದ ಸಂಸದ ಕಲ್ಯಾಣ್‌ ಬ್ಯಾನರ್ಜಿ ತಮ್ಮನ್ನು ನಿಂದಿಸಿದ್ದಾರೆ  ಸ್ತ್ರೀದ್ವೇಷದ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಟಿಎಂಸಿ ಸಂಸದೆ ಕಾಕೋಲಿ ಘೋಷ್‌ ಲೋಕಸಭಾಧ್ಯಕ್ಷ ಓಂ ಬಿರ್ಲಾಗೆ ಪತ್ರ ಬರೆದಿದ್ದಾರೆ. ಚುನಾವಣಾ ಸೋಲಿನಿಂದ TMC ಯಲ್ಲಿ ಹೆಚ್ಚುತ್ತಿರುವ ಆಂತರಿಕ ಭಿನ್ನಾಭಿಪ್ರಾಯ ಹೆಚ್ಚುತ್ತಿದೆ.

Read Full Story

09:49 AM (IST) May 29

ಮಗಳನ್ನು ಮದುವೆ ಮಾಡಿಕೊಡುವ ಮುನ್ನ ಅಳಿಯನ ಟ್ರಾಫಿಕ್ ಚಲನ್ ಚೆಕ್‌ ಮಾಡಿ ಗುಣ-ನಡತೆ ತಿಳಿದುಕೊಂಡ ತಂದೆ!

ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ತಂದೆಯೊಬ್ಬರು ಮಗಳ ಮದುವೆಗೂ ಮುನ್ನ, ಭಾವಿ ಅಳಿಯನ ಸಂಚಾರ ನಿಯಮ ಉಲ್ಲಂಘನೆಯ ಇತಿಹಾಸವನ್ನು ಪರಿಶೀಲಿಸಲು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಚಾಲನಾ ನಡವಳಿಕೆಯೇ ವ್ಯಕ್ತಿತ್ವದ ಕನ್ನಡಿ ಎಂದು ನಂಬಿದ್ದ ಅವರು, ಅಳಿಯನ ಹೆಸರಲ್ಲಿ ಯಾವುದೇ ಚಲನ್ ಬಾಕಿ ಇಲ್ಲವೆಂದು ತಿಳಿದು ನಿರಾಳರಾಗಿ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ.
Read Full Story

08:46 AM (IST) May 29

ಭಾರತದ ಹೊಸ ಪರ್ವ, ದೇಶದ ಮೊದಲ ಹೈಡ್ರೋಜನ್ ರೈಲಿಗೆ ಕೇಂದ್ರ ಅಸ್ತು, ರೈಲು ಓಡುವುದು ಹೇಗೆ? ಎಲ್ಲೆಲ್ಲಿ ನಿಲುಗಡೆ?

ಮಾಲಿನ್ಯ ನಿಯಂತ್ರಣದತ್ತ ಮಹತ್ವದ ಹೆಜ್ಜೆ ಇಟ್ಟಿರುವ ಭಾರತೀಯ ರೈಲ್ವೆಯು, ದೇಶದ ಮೊದಲ ಹೈಡ್ರೋಜನ್ ಚಾಲಿತ ರೈಲನ್ನು ಹರ್ಯಾಣದ ಜಿಂದ್-ಸೋನಿಪತ್ ಮಾರ್ಗದಲ್ಲಿ ಆರಂಭಿಸಿದೆ. ಈ ಪರಿಸರಸ್ನೇಹಿ ರೈಲು ಫ್ಯುಯೆಲ್ ಸೆಲ್ ತಂತ್ರಜ್ಞಾನ ಬಳಸಿ, ಕೇವಲ ನೀರಿನ ಆವಿಯನ್ನು ಹೊರಸೂಸುವ ಮೂಲಕ ಶೂನ್ಯ ಮಾಲಿನ್ಯದೊಂದಿಗೆ ಸಂಚರಿಸಲಿದೆ.
Read Full Story

08:27 AM (IST) May 29

IPL ಕ್ವಾಲಿಫೈಯರ್-2 - ಫೈನಲ್‌ ಟಿಕೆಟ್‌ಗಾಗಿಂದು ಗುಜರಾತ್ ಟೈಟಾನ್ಸ್ - ರಾಜಸ್ಥಾನ ರಾಯಲ್ಸ್ ಫೈಟ್

ಐಪಿಎಲ್ ಕ್ವಾಲಿಫೈಯರ್-2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಫೈನಲ್ ಟಿಕೆಟ್‌ಗಾಗಿ ಸೆಣಸಲಿವೆ. ಎರಡೂ ತಂಡಗಳು ತಮ್ಮ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಮೇಲೆ ಅವಲಂಬಿತವಾಗಿದ್ದು, ಬಲಿಷ್ಠ ಬೌಲಿಂಗ್ ಪಡೆಗಳನ್ನು ಹೊಂದಿವೆ. ಈ ಪಂದ್ಯದ ವಿಜೇತರು ಫೈನಲ್‌ನಲ್ಲಿ ಆರ್‌ಸಿಬಿ ತಂಡವನ್ನು ಎದುರಿಸಲಿದ್ದಾರೆ.
Read Full Story

More Trending News