LIVE NOW
Published : Jul 10, 2026, 07:57 AM ISTUpdated : Jul 10, 2026, 11:27 AM IST

India Latest News Live: ಎಥೆನಾಲ್ ಹಾಕಿದ್ರೆ ಮೈಲೇಜ್ ಡೌನ್ ಆಗುತ್ತೆ, ಆದ್ರೆ...? - ಕೊನೆಗೂ ಸತ್ಯ ಒಪ್ಪಿಕೊಂಡ ನಿತಿನ್ ಗಡ್ಕರಿ!

ಸಾರಾಂಶ

ನವದೆಹಲಿ: ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ನೀಟ್‌ ಸೋರಿಕೆ ವಿವಾದ ತಣ್ಣಗಾಗುವ ಮುನ್ನವೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸಿದ ಯುಜಿಸಿ-ನೆಟ್‌ ಪ್ರಶ್ನೆಪತ್ರಿಕೆಯೂ ಸೋರಿಕೆಯಾದ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ, ಆರೋಪದ ಕುರಿತು ಕೂಲಕಂಷವಾಗಿ ಪರಿಶೀಲನೆ ನಡೆಸುವಂತೆ ಶಿಕ್ಷಣ ಸಚಿವಾಲಯವು ಎನ್‌ಟಿಎಗೆ ಸೂಚನೆ ನೀಡಿದೆ.

ಪ್ರಧಾನಿ ಮೋದಿ ಆಸ್ಟ್ರೇಲಿಯಾ ಪ್ರವಾಸದ ಫಲಶ್ರುತಿಯಾಗಿ, ಅಲ್ಲಿನ ಫ್ಲಿಂಡರ್ಸ್‌ ವಿವಿಗೆ ಬೆಂಗಳೂರಿನಲ್ಲಿ ಕ್ಯಾಂಪಸ್‌ ತೆರೆಯಲು ಅನುಮೋದನೆ ದೊರಕಿದೆ. ಭಾರತ-ಆಸ್ಟ್ರೇಲಿಯಾ ಶೈಕ್ಷಣಿಕ ಸಹಕಾರ ಬಲಪಡಿಸುವ ನಿಟ್ಟಿನಲ್ಲಿ, ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ, ವಿಕ್ಟೋರಿಯಾ ವಿವಿಗೆ ಹರ್ಯಾಣದ ಗುರುಗ್ರಾಮದಲ್ಲಿ ಕ್ಯಾಂಪಸ್‌ ತೆರೆಯಲು ಅನುಮೋದನೆ ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಸತತ 2ನೇ ದಿನವೂ ಅಮೆರಿಕ ಮತ್ತು ಇರಾನ್‌ ನಡುವೆ ಭೀಕರ ಯುದ್ಧ ನಡೆದಿದ್ದು, ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಉಲ್ಬಣವಾಗುವಂತೆ ಮಾಡಿದೆ.   ಬುಧವಾರ ಇರಾನ್‌ನ 80ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ಮಾಡಿದ್ದ ಅಮೆರಿಕ ಸೇನೆ, ಅಧ್ಯಕ್ಷ ಟ್ರಂಪ್‌ ಎಚ್ಚರಿಕೆ ನೀಡಿದಂತೆ ಗುರುವಾರ ಇರಾನ್‌ನ 90ಕ್ಕೂ ಹೆಚ್ಚು ಆಯಕಟ್ಟಿನ ಪ್ರದೇಶಗಳ ಮೇಲೆ ಭೀಕರ ದಾಳಿ ನಡೆಸಿದೆ.

11:27 AM (IST) Jul 10

ಎಥೆನಾಲ್ ಹಾಕಿದ್ರೆ ಮೈಲೇಜ್ ಡೌನ್ ಆಗುತ್ತೆ, ಆದ್ರೆ...? - ಕೊನೆಗೂ ಸತ್ಯ ಒಪ್ಪಿಕೊಂಡ ನಿತಿನ್ ಗಡ್ಕರಿ!

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಿಂದ ವಾಹನಗಳ ಮೈಲೇಜ್ ಸ್ವಲ್ಪ ಕಡಿಮೆಯಾಗುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಇದು ಇಂಜಿನ್‌ಗೆ ಹಾನಿ ಮಾಡುತ್ತದೆ ಎಂಬ ವದಂತಿಗಳನ್ನು ತಳ್ಳಿಹಾಕಿದ್ದು, ಫ್ಲೆಕ್ಸ್-ಫ್ಯುಯೆಲ್ ತಂತ್ರಜ್ಞಾನ ಮತ್ತು ಪರ್ಯಾಯ ಇಂಧನಗಳ ಬಳಕೆಯಿಂದ ದೇಶವನ್ನು ಇಂಧನದಲ್ಲಿ ಸ್ವಾವಲಂಬಿಯಾಗಿಸುವ ಗುರಿಯನ್ನು ವಿವರಿಸಿದ್ದಾರೆ.
Read Full Story

11:17 AM (IST) Jul 10

ಅಮೆರಿಕ ದಾಳಿ ನಡುವೆಯೇ ಖಮೇನಿ ಅಂತ್ಯ ಸಂಸ್ಕಾರ ಮುಕ್ತಾಯ, 3 ಕೋಟಿ ಜನರಿಂದ ಅಂತಿಮ ದರ್ಶನ! ಮೊಳಗಿತು ಪ್ರತೀಕಾರದ ಕೂಗು

ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಹತರಾದ ಇರಾನ್ ಸರ್ವೋಚ್ಚ ನಾಯಕ ಖಮೇನಿ ಅವರ ಅಂತ್ಯಕ್ರಿಯೆಯು 4 ತಿಂಗಳ ಬಳಿಕ ಮಶಾದ್‌ನಲ್ಲಿ ಕೋಟ್ಯಂತರ ಜನರ ಸಮ್ಮುಖದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಪ್ರತೀಕಾರದ ಕರೆಗಳು ಮೊಳಗಿದ್ದು, ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ಸಂಘರ್ಷ ತೀವ್ರಗೊಂಡಿದೆ. 

Read Full Story

10:50 AM (IST) Jul 10

ಫಿಫಾ ವಿಶ್ವಕಪ್ ಕ್ವಾರ್ಟರ್‌ ಫೈನಲ್ - ಸ್ಪೇನ್-ಬೆಲ್ಜಿಯಂ ನಡುವೆ ಹೈವೋಲ್ಟೇಜ್ ಕದನಕ್ಕೆ ಕ್ಷಣಗಣನೆ ಶುರು

ಫಿಫಾ ವಿಶ್ವಕಪ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಅಜೇಯ ತಂಡಗಳಾದ ಸ್ಪೇನ್‌ ಮತ್ತು ಬೆಲ್ಜಿಯಂ ಸೆಣಸಾಡಲಿವೆ. ಈ ವಿಶ್ವಕಪ್‌ನಲ್ಲಿ ಒಂದೂ ಗೋಲು ಬಿಟ್ಟುಕೊಡದ ಸ್ಪೇನ್‌ ಹಾಗೂ ಉತ್ತಮ ಫಾರ್ಮ್‌ನಲ್ಲಿರುವ ಬೆಲ್ಜಿಯಂ, ಎರಡೂ ತಂಡಗಳು 3ನೇ ಬಾರಿ ಸೆಮಿಫೈನಲ್‌ ಪ್ರವೇಶಿಸುವ ಗುರಿ ಹೊಂದಿವೆ.
Read Full Story

10:35 AM (IST) Jul 10

ರಾಮ ಮಂದಿರ ಅಭಿಯಾನಕ್ಕೆ ಮಸಿ ಬಳಿಯುವ ಯತ್ನ? ಹುಂಡಿ ಕಳವು, ಎಲೆಕ್ಷನ್ ಮೇಲೆ ಎಫೆಕ್ಟ್?

ಅಯೋಧ್ಯೆ ರಾಮಮಂದಿರದ ಹುಂಡಿ ಹಣ ಕಳವು ಪ್ರಕರಣದಲ್ಲಿ, ಟ್ರಸ್ಟ್ ಸಿಬ್ಬಂದಿ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಈ ಕಳವು ಪ್ರಕರಣವನ್ನು ವಿಪಕ್ಷಗಳು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು, ರಾಮಮಂದಿರ ಅಭಿಯಾನದ ಮೂಲಕ ಪುನರುಜ್ಜೀವನಗೊಂಡ ಹಿಂದೂ ರಾಷ್ಟ್ರೀಯತೆಯ ಮೌಲ್ಯಗಳಿಗೆ ಧಕ್ಕೆ ತರಲು ಯತ್ನ?

Read Full Story

10:19 AM (IST) Jul 10

ವಿಂಬಲ್ಡನ್ 2026 - ವಿಶ್ವ ನಂ.1 ಸಿನ್ನರ್ ವಿರುದ್ಧ ನೋವಾಕ್ ಜೋಕೋವಿಚ್‌ಗೆ ಅಗ್ನಿಪರೀಕ್ಷೆ

ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ನೋವಾಕ್‌ ಜೋಕೋವಿಚ್‌ ಮತ್ತು ಹಾಲಿ ಚಾಂಪಿಯನ್‌ ಯಾನ್ನಿಕ್‌ ಸಿನ್ನರ್‌ ಮುಖಾಮುಖಿಯಾಗಲಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ, ಅಮೆರಿಕದ ಕೊಕೊ ಗಾಫ್‌ರನ್ನು ಸೋಲಿಸಿದ ಜೆಕ್‌ ಗಣರಾಜ್ಯದ ಕ್ಯಾರೊಲಿನಾ ಮುಕೋವಾ ಫೈನಲ್‌ ಪ್ರವೇಶಿಸಿದ್ದಾರೆ.
Read Full Story

10:13 AM (IST) Jul 10

Glorifying separatism - ಜಮ್ಮು&ಕಾಶ್ಮೀರ ಶಾಲಾಪಠ್ಯದಲ್ಲಿ ಉಗ್ರರ ವೈಭವೀಕರಣ ವಿವಾದ ಭುಗಿಲೆದ್ದ ಬೆನ್ನಲ್ಲೇ ಸಿಎಂ ಒಮರ್ ಅಬ್ದುಲ್ಲಾ ಮಹತ್ವದ ಆದೇಶ!

ಜಮ್ಮು ಮತ್ತು ಕಾಶ್ಮೀರದಲ್ಲಿ, ಶಾಲಾ ಪಠ್ಯಪುಸ್ತಕಗಳಲ್ಲಿ ಪ್ರತ್ಯೇಕತಾವಾದಿಗಳನ್ನು ಮತ್ತು ಭಯೋತ್ಪಾದಕರನ್ನು ವೈಭವೀಕರಿಸಿದ ಸಂಬಂಧ ವಿವಾದ ಭುಗಿಲೆದ್ದಿರುವ ಬೆನ್ನಲ್ಲೆ ಒಮರ್ ಅಬ್ದುಲ್ಲಾ ಸರ್ಕಾರ ಮಹತ್ವ ನಿರ್ಧಾರ. ಎಲ್ಲ ಸರ್ಕಾರಿ ಶಾಲೆಗಳ ಪಠ್ಯ-ಪುಸ್ತಕಗಳನ್ನ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದೆ.

Read Full Story

09:58 AM (IST) Jul 10

ಒಡಿಶಾದ ರಕ್ಷಕ, ವಿಶ್ವಕ್ಕೆ ಮಾದರಿಯಾದ ಭಾರತದ ವಿಕೆ ಪಾಂಡಿಯನ್ ಗೆ ವೆನಿಜುವೆಲಾ ವಿಪತ್ತು ನಿರ್ವಹಣೆಗೆ ಕರೆ!

ಒಡಿಶಾದಲ್ಲಿ ಚಂಡಮಾರುತಗಳಿಂದ ಆಗುತ್ತಿದ್ದ ಸಾವು-ನೋವನ್ನು 'ಶೂನ್ಯ'ಕ್ಕೆ ಇಳಿಸಿದ ಕೀರ್ತಿ ಮಾಜಿ ಐಎಎಸ್‌ ಅಧಿಕಾರಿ ವಿ.ಕೆ.ಪಾಂಡಿಯನ್‌ ಅವರಿಗೆ ಸಲ್ಲುತ್ತದೆ. ಅವರ ವಿಶಿಷ್ಟ ವಿಪತ್ತು ನಿರ್ವಹಣಾ ಮಾದರಿಯ ಯಶಸ್ಸಿನಿಂದಾಗಿ, ಭೂಕಂಪ ಪೀಡಿತ ವೆನಿಜುವೆಲಾ ದೇಶವು ಅವರಿಂದ ಪಾಠ ಕಲಿಯಲು ಆಹ್ವಾನಿಸಿದೆ.
Read Full Story

09:01 AM (IST) Jul 10

ಇರಾನ್‌ನ 90 ಸ್ಥಳಗಳ ಮೇಲೆ ಯುಎಸ್‌ ದಾಳಿ, ಭಾರತದ ನೆರವಿನಲ್ಲಿ ನಿರ್ಮಿಸಿದ ಚಾಬಹಾರ್‌ ಬಂದರು ಮೇಲೂ ಅಮೆರಿಕದ ದಾಳಿ!

ಅಮೆರಿಕ ಸತತ ಎರಡನೇ ದಿನವೂ ಇರಾನ್‌ನ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ, ಇರಾನ್‌ ಕೂಡಾ ಕುವೈತ್‌, ಬಹ್ರೈನ್‌ ಸೇರಿದಂತೆ ಟ್ರಂಪ್‌ ಮಿತ್ರದೇಶಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಪ್ರತಿದಾಳಿ ನಡೆಸಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
Read Full Story

More Trending News