ನವದೆಹಲಿ (ಜು.19): ಅಯೋಧ್ಯೆ ಸೇರಿ ಉತ್ತರ ಭಾರತದ ದೇಗುಲಗಳಲ್ಲಿ ಭಾರೀ ಪ್ರಮಾಣದ ಹುಂಡಿ ಕಳವು ಪ್ರಕರಣ ಬಯಲಾದ ಬೆನ್ನಲ್ಲೇ, ತಮಿಳುನಾಡಿನ ದಿಂಡಿಗಲ್ ಜಿಲ್ಲೆ ಪಳನಿಯ ಖ್ಯಾತ ಶ್ರೀ ದಂಡಾಯುಧ ಪಾಣಿ ಸ್ವಾಮಿ ದೇಗುಲದ ಜಮೀನನ್ನೇ ಆಕ್ರಮವಾಗಿ ಮಾರಾಟ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.100 ಕೋಟಿ ಮೌಲ್ಯದ ಆಸ್ತಿಯನ್ನು 2 ಕೋಟಿ ಮೊತ್ತಕ್ಕೆ ರೆಜಿಸ್ಟರ್ ಮಾಡಿಸಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಬ್ ರಿಜಿಸ್ಟ್ರಾರ್ ಸೇರಿ ಹಲವು ಅಧಿಕಾರಿಗಳು, ಬ್ರೋಕರ್ಗಳ ಮನೆ ಮೇಲೆ ಶನಿವಾರ ಸಿಬಿ-ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
09:37 PM (IST) Jul 19
Nolan Praises RRR: ಇಡೀ ಜಗತ್ತೇ ನೋಲನ್ ಅವರನ್ನು ಹೊಗಳುತ್ತಿದ್ದರೆ, ಕ್ರಿಸ್ಟೋಫರ್ ನೋಲನ್ ಭಾರತೀಯ ಸಿನಿಮಾವನ್ನು ಮೆಚ್ಚಿ ಮಾತನಾಡಿದ್ದಾರೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯ.
08:54 PM (IST) Jul 19
Upcoming Electric Cars India 2026: ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ 500 ಕಿಮೀಗೂ ಅಧಿಕ ಮೈಲೇಜ್ ನೀಡುವ ಮೂರು ಹೊಸ ಎಲೆಕ್ಟ್ರಿಕ್ ಕಾರುಗಳು ಪ್ರವೇಶಿಸಲಿವೆ. ಮಹಿಂದ್ರಾ, ಟಾಟಾ ಮತ್ತು ಮಾರುತಿ ಸುಜುಕಿ ಕಂಪನಿಗಳು ತಮ್ಮ ಬಜೆಟ್ ಫ್ರೆಂಡ್ಲಿ ಹಾಗೂ ಪ್ರೀಮಿಯಂ ಇವಿಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿವೆ.
08:25 PM (IST) Jul 19
ದೆಹಲಿಯ ಈ ಸಮಾರಂಭದಲ್ಲಿ ಯಶ್ ಅವರ ಸರಳತೆ ಮತ್ತು ಪ್ರಾಮಾಣಿಕತೆ ಎಲ್ಲರ ಹೃದಯ ಗೆದ್ದಿದೆ. ಸಣ್ಣ ಭಾಷಾ ಎಡವಟ್ಟು ಆದರೂ, ಅವರು ತೋರಿದ ಆಪ್ತತೆ ಮತ್ತು ಸಿನಿಮಾ ಮೇಲಿನ ಅವರ ಬದ್ಧತೆ ‘ರಾಮಾಯಣ’ ಚಿತ್ರದ ಮೇಲಿನ ನಿರೀಕ್ಷೆಯನ್ನು ಹತ್ತರಷ್ಟು ಹೆಚ್ಚಿಸಿದೆ. ರಾಕಿಂಗ್ ಸ್ಟಾರ್ ಈಗ ರಾವಣನಾಗಿ ವಿಶ್ವವನ್ನೇ ಗೆಲ್ಲಲು ಸಜ್ಜಾಗಿದ್ದಾರೆ!
07:32 PM (IST) Jul 19
ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಕಾರ್ಯಕ್ರಮದಲ್ಲಿ ಶೂರ್ಪಣಖಿ ಪಾತ್ರದಲ್ಲಿ ನಟಿಸಿರುವ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ತಮ್ಮ ಸಾಂಪ್ರದಾಯಿಕ ಲುಕ್ ಮೂಲಕ ಎಲ್ಲರ ಗಮನ ಸೆಳೆದರು.
07:17 PM (IST) Jul 19
ಶ್ರೀಮಂತ ಮಹಿಳೆಯೊಬ್ಬಳು ತನ್ನ 3 ಕೋಟಿ ರೂಪಾಯಿ ಮೌಲ್ಯದ ಬೆಂಟ್ಲಿ ಕಾರಿನಲ್ಲಿ ಬಂದು ರೆಸ್ಟೋರೆಂಟ್ಗಳಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಾಳೆ. ಈಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತನ್ನ ಸಂಪತ್ತಿನ ಹೊರತಾಗಿಯೂ ಕೆಲಸ ಮಾಡಲು ಇಷ್ಟಪಡುವ ಈಕೆಯ ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
06:26 PM (IST) Jul 19
ನಿರ್ದೇಶಕ ನಿತೇಶ್ ತಿವಾರಿ ಅವರ ಈ ಮಹತ್ವಾಕಾಂಕ್ಷೆಯ ಚಿತ್ರದಲ್ಲಿ ರಾಕುಲ್ ಪ್ರೀತ್ ಸಿಂಗ್ ಅವರು ರಾವಣನ ತಂಗಿ, ಶಕ್ತಿಶಾಲಿ ಮತ್ತು ತೀಕ್ಷ್ಣ ಸ್ವಭಾವದ 'ಶೂರ್ಪನಖಿ' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಕುಲ್ ರಾಮಾಯಣದ ಬಗ್ಗೆ ಆಡಿರುವ ಮಾತೀಗ ವೈರಲ್ ಆಗುತ್ತಿದೆ.
06:21 PM (IST) Jul 19
ನಟಿ ಕತ್ರಿನಾ ಕೈಫ್ ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದಂದು ಪತಿ ವಿಕ್ಕಿ ಕೌಶಲ್ ಮತ್ತು ಮಗ ವಿಹಾನ್ ಜೊತೆಗಿನ ಅಪರೂಪದ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.
05:51 PM (IST) Jul 19
ವಿಝಿಂಜಂನಲ್ಲಿ ಸಮುದ್ರದಿಂದ ತಂದ 150 ಚೀಲಗಳಿಗಾಗಿ ಹೈಡ್ರಾಮಾ! ನಷ್ಟಪರಿಹಾರಕ್ಕಾಗಿ ಮೀನುಗಾರರು ಪಟ್ಟು ಹಿಡಿದಿದ್ದು, ಕಂಪನಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಹಿಂದಿನ ಕಾರಣವೇನು?
05:32 PM (IST) Jul 19
ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ 'ತಬಾಹಿ' ಹಾಡಿನಲ್ಲಿ ಕಿಯಾರಾ ಅಡ್ವಾಣಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಈ ಬಗ್ಗೆ ಈಗ ಪರ-ವಿರೋಧ ಚರ್ಚೆಗಳು ಜೋರಾಗಿವೆ.
05:29 PM (IST) Jul 19
05:19 PM (IST) Jul 19
ನಟಿ ಮೌನಿ ರಾಯ್ ಮತ್ತೊಮ್ಮೆ ಡೇಟಿಂಗ್ ವದಂತಿಗಳಿಂದ ಸುದ್ದಿಯಲ್ಲಿದ್ದಾರೆ. ಪತಿ ಸೂರಜ್ ನಂಬಿಯಾರ್ ಜೊತೆಗಿನ ವಿಚ್ಛೇದನದ ಘೋಷಣೆ ಬೆನ್ನಲ್ಲೇ, ಇದೀಗ ಅವರ ಹೆಸರು 15 ವರ್ಷಗಳ ಹಳೆಯ ಸ್ನೇಹಿತ, ನಟ ಅರ್ಜುನ್ ಬಿಜ್ಲಾನಿ ಜೊತೆ ಕೇಳಿಬರುತ್ತಿದೆ.
04:13 PM (IST) Jul 19
04:06 PM (IST) Jul 19
ಸರ್ಕಾರಿ ಶಾಲೆಯೊಂದರಲ್ಲಿ, ಶಿಕ್ಷಕಿಯೊಬ್ಬರು ತಮ್ಮ 500 ರೂಪಾಯಿ ಕಳೆದುಕೊಂಡಿದ್ದಕ್ಕೆ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯ ವಿಡಿಯೋ ವೈರಲ್ ಆದ ನಂತರ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದ್ದು, ಘಟನೆಯ ಸತ್ಯಾಸತ್ಯತೆಯ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
02:11 PM (IST) Jul 19
02:03 PM (IST) Jul 19
ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಮತ್ತು ನಮಿತ್ ಮಲ್ಹೋತ್ರಾ ಅವರ ಕನಸಿನ ಕೂಸು 'ರಾಮಾಯಣ', ಭಾರತದ ಸಂಸ್ಕೃತಿಯನ್ನು ವಿಶ್ವದ ಪ್ರತಿ ಮೂಲೆಯಲ್ಲೂ ಬೆಳಗಲು ಸಜ್ಜಾಗಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಈ ಜಾಗತಿಕ ಪಯಣಕ್ಕೆ ಈಗಲೇ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
01:28 PM (IST) Jul 19
ರಾಮಾಯಣ ಸಿನಿಮಾದಲ್ಲಿ ರಾವಣನಾಗಿ ಕಾಣಿಸಿಕೊಂಡಿರುವ ಯಶ್, ವೇದಿಕೆಯ ಮೇಲೆ ನಿಂತು ಅಚ್ಚುಕಟ್ಟಾದ ಹಿಂದಿಯಲ್ಲಿ ಮಾತನಾಡಿದ ಅವರು, "ನಮಸ್ಕಾರ, ಇಲ್ಲಿ ಎಲ್ಲರೂ ಹಿಂದಿಯಲ್ಲಿ ಮಾತನಾಡುತ್ತಿದ್ದಾರೆ, ಹಾಗಾಗಿ ನಾನೂ ಕೂಡ ಪ್ರಯತ್ನ ಪಡುತ್ತೇನೆ" ಎಂದರು.
12:41 PM (IST) Jul 19
₹38,000 ಸಂಬಳದ ಕೆಲಸಕ್ಕೆ ರಾಜೀನಾಮೆ ನೀಡಿ, ಸ್ವಂತ ಚಹಾ ಅಂಗಡಿ ಆರಂಭಿಸಿದ ಯುವಕನೊಬ್ಬನ ಸ್ಪೂರ್ತಿದಾಯಕ ಕಥೆಯಿದು. ಕೇವಲ ₹2 ಲಕ್ಷ ಹೂಡಿಕೆಯಿಂದ ತಿಂಗಳಿಗೆ ₹1 ಲಕ್ಷ ನಿವ್ವಳ ಲಾಭ ಗಳಿಸಿ, ಇದೀಗ ತನ್ನ ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ.
12:32 PM (IST) Jul 19
ದೆಹಲಿಯ ಟ್ಯಾಟೂ ಪಾರ್ಲರ್ನಲ್ಲಿ ಹಚ್ಚೆ ಹಾಕಿಸಿಕೊಂಡ ಕಾನ್ಪುರದ ಮಹಿಳೆಯೊಬ್ಬರಿಗೆ ಎಚ್ಐವಿ ಸೋಂಕು ತಗುಲಿದೆ. ಸೋಂಕಿತ ಸೂಜಿಯ ಬಳಕೆಯೇ ಇದಕ್ಕೆ ಕಾರಣವೆಂದು ವೈದ್ಯರು ಶಂಕಿಸಿದ್ದು, ಮಹಿಳೆಗೆ ಎಆರ್ಟಿ ಚಿಕಿತ್ಸೆ ನೀಡಲಾಗುತ್ತಿದೆ.
12:11 PM (IST) Jul 19
ನಮಿತ್ ಮಲ್ಹೋತ್ರಾರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿ-ನೆಗ್ (DNEG) ಮತ್ತು ನಟ ಯಶ್ ಒಡೆತನದ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ಈ ‘ರಾಮಾಯಣ’ ಸಿನಿಮಾ ರೂಪುಗೊಳ್ಳುತ್ತಿದ್ದು, ಇದು ಅತ್ಯಂತ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿದೆ. ನಿತೇಶ್ ತಿವಾರಿ ನಿರ್ದೇಶಕರು..
12:05 PM (IST) Jul 19
ಇಪಿಎಫ್ಒ ಸದಸ್ಯರು ತಮ್ಮ ಪಿಎಫ್ ಖಾತೆಯ ಪ್ರೊಫೈಲ್ ಫೋಟೋವನ್ನು ಅಪ್ಡೇಟ್ ಮಾಡುವುದು ಅತ್ಯಗತ್ಯ. ಇ-ನಾಮಿನೇಷನ್, ಪಿಎಫ್ ಕ್ಲೇಮ್ನಂತಹ ಆನ್ಲೈನ್ ಸೇವೆಗಳ ಪರಿಶೀಲನೆಗೆ ಇದು ಸಹಕಾರಿಯಾಗಿದೆ. ಮನೆಯಲ್ಲೇ ಕುಳಿತು ಯುನಿಫೈಡ್ ಮೆಂಬರ್ ಪೋರ್ಟಲ್ ಮೂಲಕ ಫೋಟೋವನ್ನು ಸುಲಭವಾಗಿ ಬದಲಾಯಿಸಬಹುದು.
11:41 AM (IST) Jul 19
11:24 AM (IST) Jul 19
'ರಾಮಾಯಣಂ' ಚಿತ್ರದ ಕಾರ್ಯಕ್ರಮದಲ್ಲಿ ಯೋಗ ಗುರು ಬಾಬಾ ರಾಮದೇವ್ ಮತ್ತು ಕವಿ ಕುಮಾರ್ ವಿಶ್ವಾಸ್ ನಡುವೆ ಸ್ವಾರಸ್ಯಕರ ಮಾತುಕತೆ ನಡೆದಿದೆ. ಪತಂಜಲಿ ಸಂಸ್ಥೆಯ ಉತ್ತರಾಧಿಕಾರಿಯಾಗಲು ಕುಮಾರ್ ವಿಶ್ವಾಸ್ ಬಯಸಿದ್ದಾರೆ ಎಂದು ರಾಮದೇವ್ ತಮಾಷೆ ಮಾಡಿದ್ದಾರೆ.
11:00 AM (IST) Jul 19
09:45 AM (IST) Jul 19
08:54 AM (IST) Jul 19
08:52 AM (IST) Jul 19
ಮಹಾರಾಷ್ಟ್ರದ ನಾಸಿಕ್ನಲ್ಲಿ, ತನ್ನ ಮಾಜಿ ಪ್ರೇಯಸಿಗೆ ಬೇರೊಬ್ಬನೊಂದಿಗೆ ಮದುವೆ ನಿಶ್ಚಯವಾದ ಕಾರಣಕ್ಕೆ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿ, ಯುವಕನೊಬ್ಬ ಆತ್ಮ*ತ್ಯೆ ಮಾಡಿಕೊಂಡಿದ್ದಾನೆ. ಕೊಲೆಯಾಗುವ ಮುನ್ನ ಯುವತಿ ತನ್ನ ಭಾವಿ ಪತಿಗೆ ಫೋನ್ ಮಾಡಿದ್ದು, ಆತ ಇಡೀ ವಾಗ್ವಾದವನ್ನು ಫೋನ್ನಲ್ಲಿ ಕೇಳಿಸಿಕೊಂಡಿದ್ದಾನೆ.
08:21 AM (IST) Jul 19
07:53 AM (IST) Jul 19
ತಮಿಳುನಾಡಿನ ಪಳನಿ ಶ್ರೀ ದಂಡಾಯುಧ ಪಾಣಿ ಸ್ವಾಮಿ ದೇಗುಲಕ್ಕೆ ಸೇರಿದ ₹100 ಕೋಟಿ ಮೌಲ್ಯದ ಜಮೀನನ್ನು ಕೇವಲ ₹2 ಕೋಟಿಗೆ ಅಕ್ರಮವಾಗಿ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬೃಹತ್ ಹಗರಣದ ಸಂಬಂಧ ಸಬ್ ರಿಜಿಸ್ಟ್ರಾರ್ ಸೇರಿದಂತೆ ಹಲವರ ಮೇಲೆ ಸಿಬಿ-ಸಿಐಡಿ ದಾಳಿ ನಡೆಸಿದೆ.