ನವದೆಹಲಿ: ನಟಿ ಮತ್ತು ಬಿಜೆಪಿ ಕಂಗನಾ ರಾಣಾವತ್ ಅವರು ತಮ್ಮ ಚಿತ್ರಗಳನ್ನು ಕೃತಕ ಬುದ್ಧಿಮತ್ತೆ (ಎಐ) ಬಳಸಿ ತಿರುಚುತ್ತಿರುವುದಕ್ಕೆ ಕಿಡಿಕಾರಿದ್ದಾರೆ. ಕಂಗನಾ ಅವರಸಂಸತ್ತಿನ ಹೊರಗೆ ಸೀರೆಯ ಬದಲು ಸೂಟ್ ಧರಿಸಿರುವುದನ್ನು ತೋರಿಸುವ ಎಐ ಫೋಟೋಗಳನ್ನು ಆಧಾರಿತ ಫೋಟೋಗಳನ್ನು ''female_in_suit_shirt_tie'' ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಾಕಲಾಗಿದೆ. ಇದಕ್ಕೆ ಕಿಡಿಕಾರಿರುವ ಕಂಗನಾ, ‘ಮೂಲತಃ, ಇವು ಸೀರೆಯಲ್ಲಿದ್ದ ಸಂಸತ್ತಿನ ನನ್ನ ಚಿತ್ರಗಳು. ನನ್ನ ಚಿತ್ರಗಳಲ್ಲಿ ಎಐ ಬಳಸುವುದನ್ನು ನಿಲ್ಲಿಸಿ’ ಎಂದು ಕೋರಿದ್ದಾರೆ.

10:16 PM (IST) Dec 30
ಭಾರತೀಯ ಯುವಕರ ಮೂಲ ಪರಂಪರೆ ಜೊತೆ ಜೋಡಿಸುತ್ತಿದೆ, RSS ಮೆಚ್ಚಿದ ಇಸ್ರೇಲ್ ಕೌನ್ಸೆಲ್ ಜನರಲ್, ಭಾರತದಲ್ಲಿ ಆರ್ಎಸ್ಎಸ್ ವಾದ ವಿವಾದಗಳ ನಡುವೆ ಸಂಘದ ಶಾಖೆಗೆ ತೆರಳಿ ಚಟುವಟಿಕೆಗೆ ಗಮನಿಸಿದ್ದೇನೆ. ಇದು ನಿಜಕ್ಕೂ ಅದ್ಭುತ ಎಂದಿದ್ದಾರೆ.
08:41 PM (IST) Dec 30
ಅಮೆರಿಕದ ಟೆಕ್ಸಾಸ್ನಲ್ಲಿ ನಡೆದ ಒಂದು ವೈದ್ಯಕೀಯ ಪವಾಡದಲ್ಲಿ, ಗರ್ಭದಲ್ಲಿದ್ದ ಮಗುವಿಗೆ ಅಪರೂಪದ ಗಡ್ಡೆಯ ಕಾರಣ ಶಸ್ತ್ರಚಿಕಿತ್ಸೆ ನಡೆಸಲಾಯಿತು. ವೈದ್ಯರು ಮಗುವನ್ನು ಗರ್ಭದಿಂದ ಹೊರತೆಗೆದು, ಗಡ್ಡೆಯನ್ನು ತೆಗೆದುಹಾಕಿ, ಮತ್ತೆ ಗರ್ಭದೊಳಗೆ ಇರಿಸಿದರು.
08:21 PM (IST) Dec 30
2026ರಲ್ಲಿ 40 ಕೆಲಸ ನುಂಗಲಿದೆ ಎಐ, ಈ ಪಟ್ಟಿಯಲ್ಲಿ ನಿಮ್ಮ ನೌಕರಿ ಇದೆಯಾ ಚೆಕ್ ಮಾಡಿ, ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಕಾರಣದಿಂದ ಈಗಾಗಲೇ ಹಲವರು ಕೆಲಸ ಕಳೆದುಕೊಂಡಿದ್ದಾರೆ. ಆದರೆ 2026ರ ಮತ್ತಷ್ಟು ಕೆಲಸಕ್ಕೆ ಕತ್ತರಿಬೀಳಲಿದೆ ಎಂದು ವರದಿ ಹೇಳುತ್ತಿದೆ.
07:24 PM (IST) Dec 30
ಖ್ಯಾತ ಜ್ಯೋತಿಷಿಯೊಬ್ಬರು, ಸ್ಟಾರ್ ನಟಿಯೊಬ್ಬಳು ಮಾಟ-ಮಂತ್ರದ ಮೂಲಕ ಮುಸ್ಲಿಂ ಯುವಕನನ್ನು ಮದುವೆಯಾಗಿದ್ದಾಳೆ ಎಂದು ಹೇಳಿದ್ದಾರೆ. ಆ ನಟಿಯ ಕುಟುಂಬ ರಾಮಾಯಣದ ಹೆಸರಿನಿಂದ ಬಂದಿದೆ ಎಂಬ ಸುಳಿವು ನೀಡಿದ್ದು, ಈ ಹೇಳಿಕೆಯು ಈ ನಟಿಯತ್ತ ಬೆರಳು ಮಾಡುತ್ತಿದೆ.
07:19 PM (IST) Dec 30
2026ರಲ್ಲಿ ಭಾರತದ ಗರಿಷ್ಠ ವೀವ್ಸ್ ಯೂಟ್ಯೂಬ್ ಚಾನೆಲ್ AI ಜನರೇಟೆಡ್, ಈ ವರ್ಷ 38 ಕೋಟಿ ಆದಾಯ, ಈ ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಿರುವ ಎಲ್ಲಾ ವಿಡಿಯೋ ಎಐ ಜನರೇಟೆಡ್ ವಿಡಿಯೋ. ಆದರೆ ಆದಾಯ ಮಾತ್ರ ಚಿಂದಿ.
07:07 PM (IST) Dec 30
ಪಂಜಾಬ್ನ ಫಿರೋಜ್ಪುರದಲ್ಲಿ, ಸೋಫಾದಿಂದ ಎದ್ದೇಳುವಾಗ ಸೊಂಟದಲ್ಲಿದ್ದ ಗನ್ ಆಕಸ್ಮಿಕವಾಗಿ ಟ್ರಿಗರ್ ಆಗಿ ಅನಿವಾಸಿ ಭಾರತೀಯ ಸಾವನ್ನಪ್ಪಿದ್ದಾರೆ. ಹೊಟ್ಟೆಗೆ ಗುಂಡು ತಗುಲಿದ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಪ್ರಾಣ ಬಿಟ್ಟಿದ್ದು, ಈ ದುರಂತ ಘಟನೆ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
06:36 PM (IST) Dec 30
ಸಾವಿನ ಹಾಸಿಗೆಯಲ್ಲಿದ್ದ ತಾಯಿಯ ಕೊನೆಕ್ಷಣಗಳನ್ನು ಮಗಳು ವೀಡಿಯೋ ಮಾಡಿದ್ದು, ಅದು ವೈರಲ್ ಆಗಿದೆ. ಆ ತಾಯಿ ಮನೆಯ ಮಹಡಿಯನ್ನು ನೋಡುತ್ತಾ, ನಾಲ್ಕು ದೇವದೂತರು (ಏಂಜೆಲ್) ಕಾಣಿಸುತ್ತಿದ್ದಾರೆ ಎಂದು ಹೇಳಿದ್ದು, ಈ ಘಟನೆ ಸಾವಿನಂಚಿನ ಅನುಭವಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
06:34 PM (IST) Dec 30
06:32 PM (IST) Dec 30
ಟಿ20 ವಿಶ್ವಕಪ್ ದೃಷ್ಟಿಯಿಂದ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಗಾಯದಿಂದ ಚೇತರಿಸಿಕೊಂಡಿರುವ ನಾಯಕ ಶುಭಮನ್ ಗಿಲ್ ಮತ್ತು ಉಪನಾಯಕ ಶ್ರೇಯಸ್ ಅಯ್ಯರ್ ತಂಡಕ್ಕೆ ಮರಳಲಿದ್ದಾರೆ.
06:20 PM (IST) Dec 30
Malayalam Legend Mohanlal's Mother Shanthakumari Passes Away at 90 ನಟ ಮೋಹನ್ ಲಾಲ್ ಅವರ ತಾಯಿ ಶಾಂತಕುಮಾರಿ (90) ಕೊಚ್ಚಿಯ ಎಲಮಕ್ಕರದಲ್ಲಿ ನಿಧನರಾದರು. ಕಳೆದ ಹತ್ತು ವರ್ಷಗಳಿಂದ ಪಾರ್ಶ್ವವಾಯುವಿಗೆ ಒಳಗಾದ ನಂತರ ಅವರು ಚಿಕಿತ್ಸೆ ಪಡೆಯುತ್ತಿದ್ದರು.
06:06 PM (IST) Dec 30
ಸನ್ನಿ ಲಿಯೋನ್ಗೆ ನ್ಯೂ ಇಯರ್ ಶಾಕ್, ಭಾರಿ ವಿರೋದ ಬಳಿಕ ಹೊಸ ವರ್ಷ ಕಾರ್ಯಕ್ರಮ ರದ್ದು, ಹೊಸ ವರ್ಷ ಸಂಭ್ರಮಾಚರಣೆಗೆ ಸನ್ನಿ ಲಿಯೋನ್ ಕೋಟಿ ರೂಪಾಯಿ ಖರ್ಚು ಮಾಡಿ ಆಹ್ವಾನ ನೀಡಲಾಗಿದೆ. ಆದರೆ ಪರಿಸ್ಥಿತಿ ಉಲ್ಟಾ ಆಗಿದೆ.
06:02 PM (IST) Dec 30
ಗೂಗಲ್ ಪೇ ಮೂಲಕ ₹18 ಟಿಕೆಟ್ ಹಣ ಪಾವತಿಸಲು ವಿಫಲವಾದ ಕಾರಣ, ಕೆಎಸ್ಆರ್ಟಿಸಿ ಕಂಡಕ್ಟರ್ ಮಹಿಳಾ ಪ್ರಯಾಣಿಕರನ್ನು ನಡುರಾತ್ರಿಯಲ್ಲಿ ಬಸ್ನಿಂದ ಕೆಳಗಿಳಿಸಿದ್ದಾರೆ. ಈ ಘಟನೆಯಿಂದಾಗಿ ಮಹಿಳೆ ನಿರ್ಜನ ಪ್ರದೇಶದಲ್ಲಿ ಸುಮಾರು ಎರಡೂವರೆ ಕಿಲೋಮೀಟರ್ ನಡೆದು ಮನೆ ಸೇರಬೇಕಾಯಿತು.
05:39 PM (IST) Dec 30
ಬೆಂಗಳೂರು:ಬಹುನಿರೀಕ್ಷಿತ ನಾಲ್ಕನೇ ಸೀಸನ್ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹೀಗಿರುವಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಪ್ರಮುಖ ಆಟಗಾರ್ತಿಯರಿಬ್ಬರು ಟೂರ್ನಿಯಿಂದ ಹೊರಬಿದ್ದಿದ್ದಾರೆ.
05:34 PM (IST) Dec 30
Railways Offers 3% Discount on Unreserved Tickets via RailOne App ರೈಲ್ಒನ್ ಅಪ್ಲಿಕೇಶನ್ನಲ್ಲಿ ಆರ್-ವ್ಯಾಲೆಟ್ ಮೂಲಕ ಬುಕಿಂಗ್ಗಳಿಗೆ ಈಗಿರುವ ಶೇಕಡಾ 3 ರಷ್ಟು ಕ್ಯಾಶ್ಬ್ಯಾಕ್ ಮುಂದುವರಿಯುತ್ತದೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.
05:27 PM (IST) Dec 30
2026ರ ಭಯಾಕನ ಭವಿಷ್ಯ, ಭಯೋತ್ಪಾದಕ ಕಾರಣದಿಂದ ಭಾರತ ಪಾಕಿಸ್ತಾನ ಸಂಘರ್ಷ, ಕಾಶ್ಮೀರದಲ್ಲಿನ ಉಗ್ರ ಕೃತ್ಯಗಳಿಗೆ ಭಾರತ ತಿರುಗೇಟು ನೀಡಲಿದೆ. ಇದು ಸಂಘರ್ಷವಾಗಿ ಮಾರ್ಪಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
05:27 PM (IST) Dec 30
ಎರಡು ದಶಕಗಳಿಂದ ಬೇರ್ಪಟ್ಟಿದ್ದ ದಂಪತಿಗಳ ವಿಚ್ಛೇದನವನ್ನು ತೆಲಂಗಾಣ ಹೈಕೋರ್ಟ್ ಎತ್ತಿಹಿಡಿದಿದೆ. ಸರಿಪಡಿಸಲಾಗದಷ್ಟು ಸಂಬಂಧ ಹದಗೆಟ್ಟಿದೆ ಎಂದು ಹೇಳಿ, ಪತ್ನಿಗೆ ಶಾಶ್ವತ ಜೀವನಾಂಶವಾಗಿ 50 ಲಕ್ಷ ರೂ. ಪಾವತಿಸಲು ಪತಿಗೆ ಆದೇಶಿಸಿದೆ.
04:50 PM (IST) Dec 30
04:45 PM (IST) Dec 30
ದಿವಂಗತ ವಿ.ಜಿ. ಸಿದ್ಧಾರ್ಥ್ ಅವರ ಪತ್ನಿ ಮಾಳವಿಕಾ ಹೆಗಡೆ, ಕಾಫಿ ಡೇ ಕಂಪನಿಯ ಸಾಲ ತೀರಿಸುವಲ್ಲಿ ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಆಕ್ಸಿಸ್ ಬ್ಯಾಂಕ್ನೊಂದಿಗಿನ ₹70 ಕೋಟಿ ಸಾಲವನ್ನು ಒನ್ ಟೈಮ್ ಸೆಟಲ್ಮೆಂಟ್ ಮೂಲಕ ಇತ್ಯರ್ಥಪಡಿಸಲು ಅನುಮೋದನೆ ದೊರೆತಿದೆ.
04:41 PM (IST) Dec 30
ಬಾಂಗ್ಲಾದೇಶದಲ್ಲಿ 3ನೇ ಹಿಂದೂ ಹತ್ಯೆ, ಗಾರ್ಮೆಂಟ್ಸ್ ಫ್ಯಾಕ್ಟರಿ ಕೆಲಸದಲ್ಲಿರುವಾಗಲೇ ಗುಂಡಿನ ದಾಳಿಯಾಗಿದೆ. ಕಳೆದ ಎರಡು ವಾರದಲ್ಲಿ ನಡೆಯುತ್ತಿರುವ ಮೂರನೇ ಹಿಂದೂ ಹತ್ಯೆ ಇದಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಹುಡುಕಿ ಹುಡುಕಿ ದಾಳಿಯಾಗುತ್ತಿದೆ.
04:23 PM (IST) Dec 30
ಕೇವಲ ಮೂರು ಅಡಿ ಜಾಗದಲ್ಲಿ ವ್ಯಕ್ತಿಯೊಬ್ಬರು ಎರಡು ಮಹಡಿಯ ಮನೆ ನಿರ್ಮಿಸಿದ್ದಾರೆ. ಕೆಳಗೆ ಅಂಗಡಿಗಳಿದ್ದು, ಮೇಲೆ ವಾಸದ ಮನೆಯಿರುವ ಈ ಕಟ್ಟಡದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿದೆ ಎನ್ನಲಾಗುತ್ತಿದೆ.
04:13 PM (IST) Dec 30
2025ರಲ್ಲಿ ಹೆಚ್ಚು ಸಂಪತ್ತುಗಳಿಸಿದ ಭಾರತದ ಶ್ರೀಮಂತರ ಪಟ್ಟಿ ರಿಲೀಸ್, ಅಂಬಾನಿಗೆ ಎಷ್ಟನೇ ಸ್ಥಾನ?, ಬ್ಲೂಮ್ಬರ್ಗ್ ಬಿಲೇನಿಯರ್ಸ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಮೊದಲ ಸ್ಥಾನ ಯಾರಿಗೆ, ಅಂಬಾನಿ-ಅದಾನಿ ಈ ವರ್ಷ ಆಸ್ತಿಗಳಿಸಿದೆಷ್ಟು?
03:49 PM (IST) Dec 30
ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ, 2025ರಲ್ಲಿ ಅತಿ ಹೆಚ್ಚು ಅಂತರಾಷ್ಟ್ರೀಯ ರನ್ ಗಳಿಸಿದ ಆಟಗಾರ್ತಿ ಎಂಬ ದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಶುಭಮನ್ ಗಿಲ್ ಅವರನ್ನು ಹಿಂದಿಕ್ಕಲು ಅವರಿಗೆ ಕೇವಲ 62 ರನ್ಗಳ ಅಗತ್ಯವಿದೆ.
03:10 PM (IST) Dec 30
ಮದುವೆ ಮನೆಯೆಂದರೆ ಅದು ಸದಾ ಗಡಿಬಿಡಿ ಗೊಂದಲದ ಗೂಡು ಲ್ಲವನ್ನು ಜೋಡಿಸುವ ಗೊಂದಲದಲ್ಲಿ ಅಗತ್ಯವಾಗಿರುವುದನ್ನೇ ಮನೆಯವರು ಮರೆತು ಬಿಡುತ್ತಾರೆ. ಇಲ್ಲೂ ಅದೇ ಆಗಿದೆ. ಸಿಂದೂರವನ್ನೇ ಮರೆತು ಕುಟುಂಬ ಮದುವೆ ಮಂಟಪಕ್ಕೆ ಹೋಗಿದೆ.
03:02 PM (IST) Dec 30
ಫೆ.26ಕ್ಕೆ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ದೇವರಕೊಂಡ ಮದುವೆ, ಹೈದರಾಬಾದ್ನಲ್ಲಿ ರೆಸೆಪ್ಶನ್, ತಯಾರಿಗಳು ಆರಂಭಗೊಂಡಿದೆ. ಬಾಲಿವುಡ್ ಸೇರಿದಂತೆ ಹಲವು ಸಿನಿ ಕ್ಷೇತ್ರದ ದಿಗ್ಗಜರಿಗೆ ಆಹ್ವಾನ ನೀಡಲು ಪ್ಲಾನ್ ಮಾಡಲಾಗಿದೆ.
02:56 PM (IST) Dec 30
ಪ್ರಿಯಾಂಕಾ ಗಾಂಧಿ ಅವರ ಪುತ್ರ ರೆಹಾನ್ ವಾದ್ರಾ, ತಮ್ಮ ಗೆಳತಿ ಅವಿವಾ ಬೇಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವೃತ್ತಿಪರ ಛಾಯಾಗ್ರಾಹಕಿ ಮತ್ತು ಫುಟ್ಬಾಲ್ ಆಟಗಾರ್ತಿಯಾಗಿರುವ ಅವಿವಾ ಅವರ ಕುಟುಂಬದ ಹಿನ್ನೆಲೆ ಮತ್ತು 'ಬೇಗ್' ಉಪನಾಮದ ಧಾರ್ಮಿಕ ಸಂಪರ್ಕದ ಬಗ್ಗೆ ಈ ಲೇಖನ ವಿವರಿಸುತ್ತದೆ.
01:20 PM (IST) Dec 30
ಟೆಲಿಗ್ರಾಮ್ ಸಂಸ್ಥಾಪಕ ಪಾವೆಲ್ ಡುರೊವ್ ಅವರು 37 ವರ್ಷದೊಳಗಿನ ಮಹಿಳೆಯರಿಗೆ ತಮ್ಮ ವೀರ್ಯವನ್ನು ದಾನವಾಗಿ ನೀಡುವ ಮೂಲಕ ತಾಯಿಯಾಗಲು ಆಹ್ವಾನಿಸಿದ್ದಾರೆ. ಈ ಪ್ರಕ್ರಿಯೆಯ ಸಂಪೂರ್ಣ ಐವಿಎಫ್ ವೆಚ್ಚವನ್ನು ಭರಿಸುವುದಲ್ಲದೆ, ಈ ಮೂಲಕ ಜನಿಸುವ ಮಕ್ಕಳಿಗೆ ತಮ್ಮ ಆಸ್ತಿಯಲ್ಲಿ ಪಾಲು ನೀಡುವುದಾಗಿಯೂ ಘೋಷಿಸಿದ್ದಾರೆ.
01:17 PM (IST) Dec 30
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸ ಡೇಟಾ ಪ್ಲಾನ್ ಪರಿಚಯಿಸಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 10GB ಹೈ-ಸ್ಪೀಡ್ ಡೇಟಾ ಲಭ್ಯವಾಗಲಿದ್ದು, ತುರ್ತು ಸಮಯದಲ್ಲಿ ಹೆಚ್ಚು ಇಂಟರ್ನೆಟ್ ಬಳಸುವವರಿಗೆ ಇದು ಸಹಕಾರಿಯಾಗಿದೆ.
12:16 PM (IST) Dec 30
ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರ, ರಿಲಯನ್ಸ್ ಇಂಡಸ್ಟ್ರಿ ಗ್ರೂಪ್ನ ಕಾರ್ಯಕಾರಿ ನಿರ್ದೇಶಕ ಅನಂತ್ ಅಂಬಾನಿ ಅವರು ಇಂದು ಶಿರ್ಡಿಯ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದರು.
12:05 PM (IST) Dec 30
ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ತನಗೆ ನಿರಂತರವಾಗಿ ಮೆಸೇಜ್ ಮಾಡುತ್ತಿದ್ದರು ಎಂದು ಮಾಡೆಲ್ ಹಾಗೂ ನಟಿ ಖುಷಿ ಮುಖರ್ಜಿ ಹೇಳುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.
11:58 AM (IST) Dec 30
UP School Holiday: ಉತ್ತರ ಪ್ರದೇಶವು ತೀವ್ರ ಶೀತಗಾಳಿಯನ್ನು ಎದುರಿಸುತ್ತಿದೆ. ಜನವರಿ 1 ರವರೆಗೆ ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.
11:35 AM (IST) Dec 30
ಮದುವೆಗೂ ಮುನ್ನ ಪ್ರೇಯಸಿಯ ಫೋಟೋವನ್ನು ತೋಳಿನ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದ ಯುವಕ, ವಿಚ್ಛೇದನದ ನಂತರ ಅದೇ ಟ್ಯಾಟೂವನ್ನು ಗೊರಿಲ್ಲಾದ ಚಿತ್ರವಾಗಿ ಪರಿವರ್ತಿಸಿದ್ದಾನೆ. ಈ ಮೊದಲು ಮತ್ತು ನಂತರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
10:00 AM (IST) Dec 30
ಬೆಂಗಳೂರು: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಈಗಾಗಲೇ ಭಾರತ ತಂಡ ಪ್ರಕಟವಾಗಿದೆ. ಹಾಲಿ ಚಾಂಪಿಯನ್ ಆಗಿರುವ ಭಾರತ ಮತ್ತೊಮ್ಮೆ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ. ಹೀಗಿರುವಾಗಲೇ ಈ ಆಟಗಾರ ತಂಡಕ್ಕೆ ದೊಡ್ಡ ಹೊರೆಯಾಗುವ ಸಾಧ್ಯತೆಯಿದೆ. ಈ ಕುರಿತಾದ ಅಪ್ಡೇಟ್ಸ್ ಇಲ್ಲಿದೆ ನೋಡಿ.
09:15 AM (IST) Dec 30
ಪಹಲ್ಗಾಂ ನರಮೇಧದ ನಂತರ ಪಾಕಿಸ್ತಾನ ತಂಡದೊಂದಿಗೆ ಹಸ್ತಲಾಘವ ಮಾಡದಿರುವ ಬಿಸಿಸಿಐ ನಿರ್ಧಾರಕ್ಕೆ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಪ್ರತಿಕ್ರಿಯಿಸಿದ್ದಾರೆ. ಭಾರತ ಕೈಕುಲುಕಲು ಬಯಸದಿದ್ದರೆ ನಮಗೂ ಆಸಕ್ತಿಯಿಲ್ಲ ಎಂದು ಅವರು ಹೇಳಿದ್ದಾರೆ.