LIVE NOW
Published : Jun 03, 2026, 06:55 AM ISTUpdated : Jun 03, 2026, 11:14 PM IST

India Latest News Live: ಕಂಗನಾ ರಣಾವತ್‌ಗೆ ದೊಡ್ಡ ಸಹಾಯ ಮಾಡಿದ ಜಾನ್ ಅಬ್ರಹಾಂ ಅದಕ್ಕೆ ಪ್ರತಿಯಾಗಿ ಪಡೆದಿದ್ದೇನು?

ಸಾರಾಂಶ

ಮುಂಬೈ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ನಿವೃತ್ತ ಪ್ರಾಧ್ಯಾಪಕ ಪಿ. ವಿ. ಕುಲಕರ್ಣಿಗೆ ಸೇರಿದೆ ಎನ್ನಲಾದ ನಿರ್ಮಾಣ ಹಂತದಲ್ಲಿರುವ ಕಟ್ಟಡವನ್ನು ಕೆಡವಲು ನಗರಾಡಳಿತ ಆದೇಶಿಸಿದೆ. ಇದರ ಬೆನ್ನಲ್ಲೇ ಸ್ವಯಂಪ್ರೇರಿತರಾಗಿ ಆತನ ಮನೆಯವರು ಕಟ್ಟಡ ಧ್ವಂಸ ಮಾಡಿದ್ದಾರೆ

ನಿಯಮವನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡುತ್ತಿರುವುದರಿಂದ, ಕಟ್ಟಡದ ಕೆಲವು ಭಾಗಗಳನ್ನು ಕೆಡವಲು ಆದೇಶಿಸಲಾಗಿತ್ತು. ಕುಲಕರ್ಣಿ ರಸಾಯನಶಾಸ್ತ್ರ ಪ್ರಾಧ್ಯಾಪಕನಾಗಿದ್ದು, ಹಲವು ವರ್ಷಗಳಿಂದ ನೀಟ್‌ ಪತ್ರಿಕೆ ಸಿದ್ಧತೆ ಮಂಡಳಿಯಲ್ಲಿದ್ದ. ಪ್ರಶ್ನೆಪತ್ರಿಕೆ ಸೋರಿಕೆ ಆರೋಪದಲ್ಲಿ ಈತನನ್ನು ಕಳೆದ ತಿಂಗಳು ಪುಣೆಯಲ್ಲಿ ಬಂಧಿಸಲಾಗಿತ್ತು.

11:14 PM (IST) Jun 03

ಕಂಗನಾ ರಣಾವತ್‌ಗೆ ದೊಡ್ಡ ಸಹಾಯ ಮಾಡಿದ ಜಾನ್ ಅಬ್ರಹಾಂ ಅದಕ್ಕೆ ಪ್ರತಿಯಾಗಿ ಪಡೆದಿದ್ದೇನು?

ಪ್ರಧಾನಿ ನರೇಂದ್ರ ಮೋದಿ, ದೇಶದ ದುಡಿಯುವ ವರ್ಗವನ್ನು "ದೇಶದ ಹಣೆಬರಹ ರೂಪಿಸುವವರು ಅಥವಾ ಭಾಗ್ಯವಿಧಾತರು" ಎಂದು ಕರೆದ ಮಾತುಗಳು ಕಂಗನಾ ಅವರ ಮನಸ್ಸಿನಲ್ಲಿ ಅಚ್ಚೊತ್ತಿದ್ದವು. ಹೀಗಾಗಿ ಸಿನಿಮಾಗೆ ‘ಭಾರತ್ ಭಾಗ್ಯ ವಿಧಾತಾ’ ಎಂಬ ಹೆಸರಿಡಲು ತಂಡ ನಿರ್ಧರಿಸಿತು. ಆದ್ರೆ ಟೈಟಲ್ ಜಾನ್ ಅಬ್ರಹಾಂ ಬಳಿ ಇತ್ತು!

Read Full Story

10:21 PM (IST) Jun 03

ಪದವೀಧರರಿಗೆ ಬಂಪರ್ ಆಫರ್ - SBIನಲ್ಲಿ ಬರೋಬ್ಬರಿ 7150 ಹುದ್ದೆಗಳ ಬೃಹತ್ ನೇಮಕಾತಿ, ಅರ್ಜಿ ಸಲ್ಲಿಸಲು ದಿನಗಳಷ್ಟೇ ಬಾಕಿ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದೇಶಾದ್ಯಂತ 7,150 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಪದವೀಧರ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆಯು ಲಿಖಿತ ಪರೀಕ್ಷೆ ಮತ್ತು ವೈದ್ಯಕೀಯ ತಪಾಸಣೆ ಮೂಲಕ ನಡೆಯಲಿದೆ.
Read Full Story

10:09 PM (IST) Jun 03

ಇವಿ ಮಾರುಕಟ್ಟೆಗೆ ಬರಲಿದೆ ಟಾಟಾದ ಮತ್ತೆರಡು ಹೊಸ ಕಾರ್‌; ಸಿಂಗಲ್‌ ಚಾರ್ಜ್‌ನಲ್ಲಿ 500 ಕಿಮೀಗಿಂತಲೂ ಹೆಚ್ಚು ಮೈಲೇಜ್

ಟಾಟಾ ಮೋಟಾರ್ಸ್ ಶೀಘ್ರದಲ್ಲೇ 'ಸಿಯೆರಾ ಇವಿ' ಮತ್ತು 'ಸಫಾರಿ ಇವಿ' ಎಂಬ ಎರಡು ಶಕ್ತಿಶಾಲಿ ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಬಿಡುಗಡೆ ಮಾಡಲಿದೆ. ಸುಮಾರು 500 ರಿಂದ 600 ಕಿ.ಮೀ.ವರೆಗಿನ ಅದ್ಭುತ ಡ್ರೈವಿಂಗ್ ರೇಂಜ್ ಮತ್ತು ಹೈಟೆಕ್ ವೈಶಿಷ್ಟ್ಯಗಳೊಂದಿಗೆ ಕಾರ್‌ ರಿಲೀಸ್‌ ಆಗಲಿದೆ.

Read Full Story

09:51 PM (IST) Jun 03

ಒಂದೇ ಒಂದು ಡೈಲಾಗ್ ಇಲ್ದೇ ಸ್ಟಾರ್ ಆದ ಬಜರಂಗಿ ಭಾಯಿಜಾನ್ ಮುನ್ನಿ - 18ನೇ ವಯಸ್ಸಿಗೆ ಹೇಗಾಗಿದ್ದಾರೆ ನೋಡಿ!

ಬಜರಂಗಿ ಭಾಯಿಜಾನ್‌ನ ಮುನ್ನಿ ಈಗ ಹೇಗಿದ್ದಾರೆ? ಹರ್ಷಾಲಿ ಮಲ್ಹೋತ್ರಾ ಯಾವ ಚಿತ್ರದ ಮೂಲಕ ಮತ್ತೆ ನಟನೆಗೆ ಮರಳಿದರು? ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾಗ ಹರ್ಷಾಲಿ ಯಾವ ಕೌಶಲ್ಯವನ್ನು ಕಲಿತರು? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. 

Read Full Story

09:20 PM (IST) Jun 03

ಶಾಹಿದ್-ರಶ್ಮಿಕಾ ಜೊತೆಗಿನ ಸಿನಿಮಾಗೆ ಮುನ್ನ ಈ ಬಾಲಿವುಡ್ ನಟಿ ತಿರುಪತಿಗೆ ತೆರಳಿದ್ದೇಕೆ?

ಬಾಲಿವುಡ್ ನಟಿ ಕೃತಿ ಸನೋನ್ ಅವರು ಬುಧವಾರ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

Read Full Story

09:03 PM (IST) Jun 03

ಬರೀ 11 ಸಾವಿರ ಇದ್ರೆ ಸಾಕು, ಮನೆಗೆ ಬರುತ್ತೆ ಟಾಟಾದ ಹೊಚ್ಚ ಹೊಸ ಇವಿ ಕಾರು!

ಟಾಟಾ ಕಂಪನಿಯು ತನ್ನ ಜನಪ್ರಿಯ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ 'ಟಿಯಾಗೊ ಇವಿ'ಯ ಫೇಸ್‌ಲಿಫ್ಟ್ ಮಾಡೆಲ್‌ನ ಬುಕ್ಕಿಂಗ್ ಆರಂಭಿಸಿದೆ. ಗ್ರಾಹಕರು ಕೇವಲ ₹11,000 ಪಾವತಿಸಿ, ಆಧುನಿಕ ಫೀಚರ್ಸ್ ಹೊಂದಿರುವ ಈ ಹೊಸ ಕಾರನ್ನು ಬುಕ್ ಮಾಡಬಹುದು ಮತ್ತು ಉಳಿದ ಮೊತ್ತಕ್ಕೆ ಸಾಲ ಸೌಲಭ್ಯ ಪಡೆಯಬಹುದು.
Read Full Story

07:45 PM (IST) Jun 03

ಮನಸ್ಸು ಕಲಕಿದೆ, ಭಯ ಆಗ್ತಿದೆ - ಮಗುವಿನ ಬರ್ಬರ ಹ*ತ್ಯೆಗೆ ಖ್ಯಾತ ಗಾಯಕಿ ಕೆ.ಎಸ್.ಚಿತ್ರಾ ಕಣ್ಣೀರು

ಕೇರಳದ ನೆಡುಮಂಗಾಡ್‌ನಲ್ಲಿ ನಡೆದ ಒಂದೂವರೆ ವರ್ಷದ ಮಗುವಿನ ಹ*ತ್ಯೆ ಇಡೀ ಕೇರಳವನ್ನೇ ಬೆಚ್ಚಿಬೀಳಿಸಿದೆ. ಪೋಸ್ಟ್‌ಮಾರ್ಟಂ ವರದಿ ಪ್ರಕಾರ, ಮಗುವಿನ ದೇಹದ ಮೇಲೆ ಬರೋಬ್ಬರಿ 91 ಗಾಯಗಳಾಗಿದ್ದವು. ಈ ಘಟನೆ ಬಗ್ಗೆ..

Read Full Story

06:31 PM (IST) Jun 03

ಇಸ್ರೇಲ್‌ ದಾಳಿಯಲ್ಲಿ ಸಾವು ಕಂಡ 4 ತಿಂಗಳ ಬಳಿಕ ಇರಾನ್‌ ಮಾಜಿ ಸುಪ್ರೀಂ ಅಯತೊಲ್ಲಾ ಖಮೇನಿ ಅಂತ್ಯಸಂಸ್ಕಾರ ಸಿದ್ದತೆ

ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಮೃತದೇಹವನ್ನು, ಅವರು ಹತರಾದ ನಾಲ್ಕು ತಿಂಗಳ ನಂತರ ಮಶಹದ್ ನಗರದಲ್ಲಿ ದಫನ್ ಮಾಡಲು ನಿರ್ಧರಿಸಲಾಗಿದೆ. ಯುದ್ಧದ ಪರಿಸ್ಥಿತಿ ಮತ್ತು 2 ಕೋಟಿಗೂ ಅಧಿಕ ಜನ ಸೇರುವ ನಿರೀಕ್ಷೆಯಿಂದಾಗಿ ಈ ವಿಳಂಬವಾಗಿದೆ.

Read Full Story

06:22 PM (IST) Jun 03

ಇದಕ್ಕಿಂತ ಫುಲ್ ಸಿನಿಮಾನೇ ಹಾಕಿ - ಅರ್ಜುನ್ ಸರ್ಜಾ ಚಿತ್ರದ ಟ್ವಿಸ್ಟ್‌ಗಳು ಇನ್‌ಸ್ಟಾದಲ್ಲಿ ವೈರಲ್, ಫ್ಯಾನ್ಸ್ ಆಕ್ರೋಶ

ಕೆಲವು ಸಿನಿಮಾಗಳು ಹಾಗೇನೇ, ರಿಲೀಸ್‌ಗೂ ಮುನ್ನ ಯಾವುದೇ ಸದ್ದು ಮಾಡಲ್ಲ, ದೊಡ್ಡ ನಿರೀಕ್ಷೆಗಳೂ ಇರಲ್ಲ. ಆದರೆ ಥಿಯೇಟರ್‌ನಲ್ಲಿ ಅಬ್ಬರಿಸಿ ದೊಡ್ಡ ಹಿಟ್ ಆಗುತ್ತವೆ. ಇತ್ತೀಚೆಗೆ ತಮಿಳು ಚಿತ್ರರಂಗದಲ್ಲಿ ಈ ಟ್ರೆಂಡ್ ಹೆಚ್ಚಾಗಿದೆ.

Read Full Story

06:10 PM (IST) Jun 03

'ಏಕ್ ಬಿಹಾರಿ....' ವೈಭವ್ ಸೂರ್ಯವಂಶಿಗೆ ವಿರಾಟ್ ಕೊಹ್ಲಿ ಹೇಳಿದ್ದೇನು? ಇಲ್ಲಿದೆ ಇನ್‌ಸೈಡ್ ಡೀಟೈಲ್ಸ್

ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನು ಈ ವೇಳೆ ವಿರಾಟ್ ಕೊಹ್ಲಿ, 15 ವರ್ಷದ ವೈಭವ್ ಸೂರ್ಯವಂಶಿ ಭೇಟಿಯಾಗಿದ್ದರು. ಆಗ ಏನು ಮಾತುಕತೆ ನಡೆಯಿತು ಎನ್ನುವ ವಿಚಾರ ಬಹಿರಂಗವಾಗಿದೆ.

 

Read Full Story

06:05 PM (IST) Jun 03

ಕೆಜಿಎಫ್‌ನ ರಮಿಕಾ ಸೇನ್ ಮನೆಯಲ್ಲಿ 25 ಲಕ್ಷದ ಚಿನ್ನಾಭರಣ ಕದ್ದ ಮಹಿಳೆ ಅರೆಸ್ಟ್ - ಆಗಿದ್ದೇನು?

ನಟಿ ರವೀನಾ ಟಂಡನ್ ಅವರ ಕುಟುಂಬಕ್ಕೆ ನಂಬಿಕೆ ದ್ರೋಹ ಮಾಡಿ, ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳನ್ನು ಕದ್ದ ಆರೋಪದ ಮೇಲೆ 47 ವರ್ಷದ ಮಹಿಳೆಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

Read Full Story

05:49 PM (IST) Jun 03

ರಾಮ್ ಚರಣ್ ನೋಡಲು ಭದ್ರತೆ ಮುರಿದುಬಂದ ಫ್ಯಾನ್ - ಪಕ್ಕದಲ್ಲೇ ಇದ್ದ ಜಾನ್ವಿ ಶಾಕ್ ಆಗಿದ್ದೇಕೆ!

ಅಭಿಮಾನಿ ಬ್ಯಾರಿಕೇಡ್‌ಗಳನ್ನು ದಾಟಿ ನೇರವಾಗಿ ರಾಮ್ ಚರಣ್ ಕುಳಿತಿದ್ದ ಜಾಗಕ್ಕೆ ಓಡಿ ಬಂದಿದ್ದಾನೆ. ತಕ್ಷಣವೇ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಆತನನ್ನು ವೇದಿಕೆಯಿಂದ ಹೊರಗೆ ಕರೆದೊಯ್ದರು. ಈ ಅನಿರೀಕ್ಷಿತ ಘಟನೆಯಿಂದ..

Read Full Story

05:05 PM (IST) Jun 03

ಕಂಗನಾ ಹೊಸ ಸಿನಿಮಾದ ಟೈಟಲ್‌ಗೆ ಪ್ರಧಾನಿ ಮೋದಿ ಕಾರಣವೇ? ಅಸಲಿ ಕಥೆ ಬಹಿರಂಗ!

ನಟಿ ಕಂಗನಾ ರಣಾವತ್ ತಮ್ಮ ಹೊಸ ಸಿನಿಮಾದ ಶೀರ್ಷಿಕೆಗೆ ಪ್ರಧಾನಿ ನರೇಂದ್ರ ಮೋದಿಯವರ ಮಾತುಗಳೇ ಸ್ಫೂರ್ತಿ ಎಂದು ಹೇಳಿದ್ದಾರೆ. 'ಭಾರತ್ ಭಾಗ್ಯ ವಿಧಾತಾ' ಅನ್ನೋ ಹೆಸರನ್ನು 2025 ರಲ್ಲಿ ಪ್ರಧಾನ ಮಂತ್ರಿಯವರು ನೀಡಿದ್ದರು.

Read Full Story

05:00 PM (IST) Jun 03

Exclusive - ಬೆಂಗಳೂರು ಮೂಲದ ಗೌರಿಯನ್ನು ಜು.5ರಂದು ವರಿಸಲಿದ್ದಾರೆ ಬಾಲಿವುಡ್‌ ಮಿ.ಪರ್ಫೆಕ್ಷನಿಸ್ಟ್‌ ಆಮೀರ್‌ ಖಾನ್‌!

59 ವರ್ಷದ ನಟ ಅಮೀರ್ ಖಾನ್ ಅವರು ಗೌರಿ ಸ್ಪ್ರ್ಯಾಟ್ ಅವರೊಂದಿಗೆ ಮೂರನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಯಾವುದೇ ಅದ್ದೂರಿತನವಿಲ್ಲದೆ, ಜುಲೈ 5 ರಂದು ತಮ್ಮ ಮನೆಯಲ್ಲೇ ಆಪ್ತರ ಸಮ್ಮುಖದಲ್ಲಿ ರಿಜಿಸ್ಟರ್ಡ್ ಮ್ಯಾರೇಜ್ ಆಗಲಿದ್ದಾರೆ. 

Read Full Story

04:23 PM (IST) Jun 03

'ರಾಮಾಯಣ'ದಲ್ಲಿ ಯಶ್ ಪಾತ್ರದ ಬಗ್ಗೆ ಹೊರಬಿತ್ತು ಸೀಕ್ರೆಟ್ - ರಾವಣನಾಗಲು ಕಾರಣ ಇದೇನಾ?

'ರಾಮಾಯಣ' ಸಿನಿಮಾದಲ್ಲಿ ಯಶ್ ಪಾತ್ರ ಎಷ್ಟು ಪವರ್‌ಫುಲ್ ಆಗಿದೆ? ಯಶ್ ಕೇವಲ ರಾವಣನ ಪಾತ್ರ ಮಾಡ್ತಿದ್ದಾರಾ ಅಥವಾ ಸಿನಿಮಾ ನಿರ್ಮಾಣದಲ್ಲೂ ಭಾಗಿಯಾಗಿದ್ದಾರಾ? 'ರಾಮಾಯಣ' ಭಾರತದ ಅತೀ ದುಬಾರಿ ಸಿನಿಮಾನಾ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

Read Full Story

03:54 PM (IST) Jun 03

ತಿರುಗಿಬಿದ್ದ ಜೆನ್‌ಝಿ ವಿದ್ಯಾರ್ಥಿಗಳು, ನೇಪಾಳ ಪ್ರಧಾನಿ ಬಲೆನ್ ಶಾ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

ನೇಪಾಳದಲ್ಲಿ ವಿದ್ಯಾರ್ಥಿ ಪ್ರತಿಭಟನೆಯಿಂದ ಸರ್ಕಾರ ಉರುಳಿ ಬಿದ್ದು, ಹೊಸ ಸರ್ಕಾರ ರಚನೆಯಾಗಿತ್ತು. ಬಲೆನ್ ಶಾ ಪ್ರಧಾನಿಯಾದ ಹಿಂದೆ ಇದೇ ಜೆನ್‌ಝಿ ವಿದ್ಯಾರ್ಥಿಗಳ ಪ್ರಯತ್ನವಿತ್ತು. ಇದೀಗ ಇದೇ ವಿದ್ಯಾರ್ಥಿ ಸಮೂಹ ಬಲೆನ್ ಶಾ ವಿರುದ್ಧ ತಿರುಗಿ ಬಿದ್ದಿದ್ದಾರೆ.

Read Full Story

03:24 PM (IST) Jun 03

ಭವಿಷ್ಯದ ಎಐ ತಜ್ಞರನ್ನು ರೂಪಿಸಲು ಮುಂದಾದ ಕಾಗ್ನಿಜೆಂಟ್, ಯುವ ಎಂಜಿನಿಯರ್‌ಗಳಿಗೆ ಬಂಪರ್ ಅವಕಾಶ!

ಖ್ಯಾತ ಐಟಿ ಸಂಸ್ಥೆ 'ಕಾಗ್ನಿಜೆಂಟ್' ಭಾರತದಲ್ಲಿ 'ಏಸ್ ಟೀಮ್' ಎಂಬ ಹೊಸ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಮೂಲಕ ಉನ್ನತ ಸಾಮರ್ಥ್ಯದ ಎಂಜಿನಿಯರ್‌ಗಳಿಗೆ ಆಧುನಿಕ ಎಐ ತಂತ್ರಜ್ಞಾನದ ತರಬೇತಿ ನೀಡಿ, ಗ್ರಾಹಕರ ನೈಜ ಸಮಸ್ಯೆಗಳನ್ನು ಬಗೆಹರಿಸುವ ಪಡೆಯನ್ನು ಸಿದ್ಧಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

Read Full Story

03:19 PM (IST) Jun 03

ಕುಟುಂಬ ತನಗಾಗಿ ಮಾಡಿದ ತ್ಯಾಗಕ್ಕೆ IPL 2026 ಟೂರ್ನಿಯಿಂದ ಬಂದ ₹2.60 ಕೋಟಿ ಹಣದಲ್ಲಿ ಮನೆಯ ಸಾಲ ತೀರಿಸಿದ ಈ ಕ್ರಿಕೆಟಿಗ!

Mukul Chaudhary Family Debt Repaid 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತೊಮ್ಮೆ ಯುವ ಪ್ರತಿಭೆಗಳ ಅನಾವರಣಕ್ಕೆ ಸಾಕ್ಷಿಯಾಗಿದೆ. ಈ ಪೈಕಿ ಲಖನೌ ಸೂಪರ್ ಜೈಂಟ್ಸ್ ತಂಡದ ಆಟಗಾರನೊಬ್ಬ, ತಮ್ಮ ಕುಟುಂಬ ತನಗಾಗಿ ಮಾಡಿದ ತ್ಯಾಗಕ್ಕೆ ಪ್ರತಿಯಾಗಿ ಕುಟುಂಬದ ಸಾಲ ಚುಕ್ತಾ ಮಾಡಿದ್ದಾರೆ.

 

Read Full Story

02:56 PM (IST) Jun 03

ಸತತ 2ನೇ ಐಪಿಎಲ್‌ ಟ್ರೋಫಿ ಗೆದ್ದ ಬೆನ್ನಲ್ಲೇ ಆರ್‌ಸಿಬಿಗೆ ಶಾಕ್‌, ನಿವೃತ್ತಿ ಪ್ರಕಟಿಸಿದ ಸ್ಟಾರ್‌

ಐಪಿಎಲ್ ಪ್ರಶಸ್ತಿ ಗೆದ್ದ ಸಂಭ್ರಮದ ಬೆನ್ನಲ್ಲೇ, ಆರ್‌ಸಿಬಿ ತಂಡದ ಸ್ಟ್ರೆಂತ್ ಅಂಡ್ ಕಂಡೀಷನಿಂಗ್ ಕೋಚ್ ಬಸು ಶಂಕರ್ ನಿವೃತ್ತಿ ಘೋಷಿಸಿದ್ದಾರೆ. ತಂಡದ ಯಶಸ್ಸಿನಲ್ಲಿ, ವಿಶೇಷವಾಗಿ ವಿರಾಟ್ ಕೊಹ್ಲಿಯವರ ಫಿಟ್‌ನೆಸ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Read Full Story

02:45 PM (IST) Jun 03

ಭಾರತೀಯರ ಸಾರ್ವಕಾಲಿಕ ನೆಚ್ಚಿನ ಬೆಳಗ್ಗಿನ ಉಪಹಾರವಾಗಿ ಉಳಿದಿರೋದ್ಯಾಕೆ ಅವಲಕ್ಕಿ, ಕಾರಣಗಳೇನು?

ಭಾರತೀಯರ ಅಚ್ಚುಮೆಚ್ಚಿನ ಉಪಹಾರವಾದ ಅವಲಕ್ಕಿ, ತನ್ನ ಸರಳತೆ, ರುಚಿ ಮತ್ತು ಆರೋಗ್ಯಕರ ಗುಣಗಳಿಂದ ಜನಪ್ರಿಯವಾಗಿದೆ. ಕರ್ನಾಟಕದ ಚಿತ್ರಾನ್ನ ಶೈಲಿಯಿಂದ ಹಿಡಿದು ಇಂದೋರಿ ಪೋಹಾದವರೆಗೆ ಹಲವು ಪ್ರಾದೇಶಿಕ ವೈವಿಧ್ಯತೆಗಳನ್ನು ಹೊಂದಿರುವ ಇದು, ಆಧುನಿಕ ಜೀವನಶೈಲಿಗೆ ಹೊಂದುವ ಪರಿಪೂರ್ಣ ಸಾಂಪ್ರದಾಯಿಕ ಆಹಾರವಾಗಿದೆ.
Read Full Story

01:41 PM (IST) Jun 03

'ವಿರಾಟ್ ಕೊಹ್ಲಿಯಲ್ಲ...!' - ಅನುಷ್ಕಾ ಶರ್ಮಾ ಮೊಬೈಲ್ ಸ್ಕ್ರೀನ್‌ ವಾಲ್‌ ಪೇಪರ್‌ ಫೋಟೋ ವೈರಲ್..!

ಐಪಿಎಲ್ ಗೆಲುವಿನ ನಂತರ ವೃಂದಾವನಕ್ಕೆ ಭೇಟಿ ನೀಡಿದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ, ಪ್ರೇಮಾನಂದ್ ಮಹಾರಾಜರ ಆಶೀರ್ವಾದ ಪಡೆದರು. ಈ ವೇಳೆ, ಅನುಷ್ಕಾ ಅವರ ಮೊಬೈಲ್ ವಾಲ್‌ಪೇಪರ್‌ನಲ್ಲಿ ಪತಿ ವಿರಾಟ್ ಬದಲಿಗೆ ಪ್ರೇಮಾನಂದ್ ಮಹಾರಾಜರ ಫೋಟೋ ಇರುವುದು ಬಹಿರಂಗಗೊಂಡು ವೈರಲ್ ಆಗಿದೆ.
Read Full Story

01:24 PM (IST) Jun 03

'ನಿನಗೊಂದು ಚಾನ್ಸ್‌ ಬೇಕು ಅಂದ್ರೆ, ನನಗೊಂದು ಚಾನ್ಸ್‌ ಕೊಡು' ಹಾಗ್ ಹೇಳಿದ್ರೆ ಹೀಗ್ ಮಾಡಿ ಎಂದ ನಟಿ ಅಪೂರ್ವ!

ಸಿನಿಮಾ ಇಂಡಸ್ಟ್ರಿಯಲ್ಲಿ ‘ನಿನಗೆ ಸಿನಿಮಾದಲ್ಲಿ ಒಂದು ಅವಕಾಶ ಬೇಕು ಅಂದ್ರೆ, ಅದಕ್ಕೆ ಪ್ರತಿಯಾಗಿ ನೀನು ನನಗೊಂದು ಅವಕಾಶ (ಫೇವರ್) ನೀಡಬೇಕು" ಎಂದು ನೇರವಾಗಿಯೇ ಕೇಳುವ ಸಂಸ್ಕೃತಿ ಇದೆ’ ಎಂದು ಅಪೂರ್ವ ಬೇಸರ ವ್ಯಕ್ತಪಡಿಸಿದ್ದಾರೆ.

Read Full Story

01:15 PM (IST) Jun 03

ದೆಹಲಿಯ ಹೋಟೆಲ್‌ನಲ್ಲಿ ಭೀಕರ ಅಗ್ನಿ ಅವಘಡ - 21 ಸಾವು, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ

ದೆಹಲಿಯ ಮಾಳವೀಯ ನಗರದ ಐದು ಅಂತಸ್ತಿನ ಹೋಟೆಲ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 21 ಮಂದಿ ಮೃತಪಟ್ಟಿದ್ದಾರೆ. ಇಕ್ಕಟ್ಟಾದ ಬೀದಿಯಲ್ಲಿದ್ದ ಈ ಹೋಟೆಲ್‌ನಲ್ಲಿ ದಟ್ಟ ಹೊಗೆಯಿಂದಾಗಿ ರಕ್ಷಣಾ ಕಾರ್ಯಾಚರಣೆ ಸವಾಲಾಗಿತ್ತು.

Read Full Story

12:14 PM (IST) Jun 03

ಖಾನ್ ಸರ್ ಕೋಚಿಂಗ್ ಸೆಂಟರ್ ಮೇಲೆ ದಾಳಿ; ಸಿಸಿಟಿವಿಯಲ್ಲಿ ಮುಸುಕುಧಾರಿಗಳ ದೃಶ್ಯ ಸರೆ

ಖಾನ್ ಸರ್ ಅವರ ಕೋಚಿಂಗ್ ಸೆಂಟರ್ ಮೇಲೆ ಮುಸುಕುಧಾರಿಗಳು ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದು, ಯಶಸ್ವಿ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದ ನಂತರ ಬೆದರಿಕೆ ಬಂದಿತ್ತು ಎಂದು ಖಾನ್ ಸರ್ ತಿಳಿಸಿದ್ದಾರೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Read Full Story

12:01 PM (IST) Jun 03

ವಿಶ್ವದ ಮೂಲೆಯಲ್ಲೂ ವೈರಲ್ ಆಗಿರೋ ನಟ ರಾಮ್‌ ಚರಣ್ ಬಾಡಿ ಗಾರ್ಡ್ ಅಂತಿಂಥವರಲ್ಲ; ಗೊತ್ತಾದ್ರೆ ಶಾಕ್ ಆಗ್ತೀರಾ!

ಸಿನಿಮಾದ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಕೆವಿನ್ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಎತ್ತರ, ಗಾಂಭೀರ್ಯ ಮತ್ತು ಸ್ಟೈಲಿಶ್ ಲುಕ್ ಕಂಡ ಅಭಿಮಾನಿಗಳು "ಯಾರು ಈ ವ್ಯಕ್ತಿ?" ಎಂದು ಗೂಗಲ್‌ನಲ್ಲಿ ಹುಡುಕಲಾರಂಭಿಸಿದ್ದಾರೆ. ಈಗ ಗೊತ್ತಾಗಿದೆ, ಕೆವಿನ್ ಕುಂಟಾ ಸಾಮಾನ್ಯದವರಲ್ಲ..!

Read Full Story

11:48 AM (IST) Jun 03

19 ನಿಮಿಷ 34 ಸೆಕೆಂಡ್ ವಿಡಿಯೋ ವೈರಲ್ ಆದ್ಮೇಲೆ ಸೋಫಿಕ್-ಸೋನಾಲಿ ಲೈಫ್ ಹೇಗಿದೆ? ಇಲ್ಲಿದೆ ಮಾಹಿತಿ

ಸೋಫಿಕ್-ಸೋನಾಲಿ ಅವರ ವೈರಲ್ ವಿಡಿಯೋ ವಿವಾದದ ನಂತರ, ಆತ್ಮ*ಹತ್ಯೆಯ ಸುಳ್ಳು ಸುದ್ದಿಗಳು ಹಬ್ಬಿದ್ದವು. ಆದರೆ, ಈ ಎಲ್ಲ ಟ್ರೋಲಿಂಗ್ ಮತ್ತು ಅವಮಾನದ ನಡುವೆಯೂ ಅವರು ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಗಳಿಸಿ, ತಮ್ಮ ಖಾತೆಗಳಲ್ಲಿ ಸಕ್ರಿಯರಾಗಿದ್ದಾರೆ. ಈ ಪ್ರಕರಣವು ಆನ್‌ಲೈನ್ ಖಾಸಗಿತನ ಮತ್ತು ಸೈಬರ್ ಸುರಕ್ಷತೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

Read Full Story

10:53 AM (IST) Jun 03

'ಕಾಲು ಸ್ವಲ್ಪ ನೆಲದ ಮೇಲೆ ಇರಲಿ..' - ವೈಭವ್ ಸೂರ್ಯವಂಶಿಗೆ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಖಡಕ್ ವಾರ್ನಿಂಗ್

ಬೆಂಗಳೂರು: 2026ರ ಐಪಿಎಲ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯವಾಗಿ ಒಂದು ವಾರವಾಗುತ್ತಾ ಬಂದಿದೆ. ಹೀಗಿರುವಾಗಲೇ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನ ತೋರಿರುವ ವೈಭವ್ ಸೂರ್ಯವಂಶಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

 

Read Full Story

09:02 AM (IST) Jun 03

ಮಹಾರಾಜ ಟ್ರೋಫಿ - ಬೆಂಗಳೂರಿಗೆ ಒಲಿದ ಫೈನಲ್ ಭಾಗ್ಯ!

ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯ 5ನೇ ಆವೃತ್ತಿಗೆ ಬೆಂಗಳೂರು ಸಹ ಆತಿಥ್ಯ ವಹಿಸಲಿದೆ. ಜೂ.20ರಿಂದ ಜು.12ರ ವರೆಗೂ ನಡೆಯಲಿರುವ ಪಂದ್ಯಾವಳಿಯ ಫೈನಲ್ ಸೇರಿದಂತೆ 10 ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದ್ದು, ಮಂಗಳೂರು ಮತ್ತು ಶಿವಮೊಗ್ಗ ತಂಡಗಳು ಹೊಸ ಹೆಸರುಗಳೊಂದಿಗೆ ಕಣಕ್ಕಿಳಿಯಲಿವೆ.
Read Full Story

07:17 AM (IST) Jun 03

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಇರಾನ್; ಕಾಫಿಗೆ 40 ಸಾವಿರ, ಹೇರ್ ಕಟಿಂಗ್‌ಗೆ 1 ಲಕ್ಷ

ಇಸ್ರೇಲ್ ಮತ್ತು ಅಮೆರಿಕದೊಂದಿಗಿನ ಸಂಘರ್ಷ ಹಾಗೂ ಆರ್ಥಿಕ ನಿರ್ಬಂಧಗಳಿಂದಾಗಿ ಇರಾನ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ದೇಶದ ಹಣದುಬ್ಬರ ದರವು ಎರಡನೇ ವಿಶ್ವಯುದ್ಧದ ಸಮಯದ ಮಟ್ಟವಾದ ಶೇ.77ಕ್ಕೆ ಏರಿದ್ದು, ಅಲ್ಲಿನ ಕರೆನ್ಸಿ 'ರಿಯಾಲ್‌' ಮೌಲ್ಯ ದಾಖಲೆಯ ಕುಸಿತ ಕಂಡಿದೆ.
Read Full Story

More Trending News