ಮುಂಬೈ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ನಿವೃತ್ತ ಪ್ರಾಧ್ಯಾಪಕ ಪಿ. ವಿ. ಕುಲಕರ್ಣಿಗೆ ಸೇರಿದೆ ಎನ್ನಲಾದ ನಿರ್ಮಾಣ ಹಂತದಲ್ಲಿರುವ ಕಟ್ಟಡವನ್ನು ಕೆಡವಲು ನಗರಾಡಳಿತ ಆದೇಶಿಸಿದೆ. ಇದರ ಬೆನ್ನಲ್ಲೇ ಸ್ವಯಂಪ್ರೇರಿತರಾಗಿ ಆತನ ಮನೆಯವರು ಕಟ್ಟಡ ಧ್ವಂಸ ಮಾಡಿದ್ದಾರೆ
ನಿಯಮವನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡುತ್ತಿರುವುದರಿಂದ, ಕಟ್ಟಡದ ಕೆಲವು ಭಾಗಗಳನ್ನು ಕೆಡವಲು ಆದೇಶಿಸಲಾಗಿತ್ತು. ಕುಲಕರ್ಣಿ ರಸಾಯನಶಾಸ್ತ್ರ ಪ್ರಾಧ್ಯಾಪಕನಾಗಿದ್ದು, ಹಲವು ವರ್ಷಗಳಿಂದ ನೀಟ್ ಪತ್ರಿಕೆ ಸಿದ್ಧತೆ ಮಂಡಳಿಯಲ್ಲಿದ್ದ. ಪ್ರಶ್ನೆಪತ್ರಿಕೆ ಸೋರಿಕೆ ಆರೋಪದಲ್ಲಿ ಈತನನ್ನು ಕಳೆದ ತಿಂಗಳು ಪುಣೆಯಲ್ಲಿ ಬಂಧಿಸಲಾಗಿತ್ತು.
07:17 AM (IST) Jun 03