Published : Oct 29, 2025, 07:06 AM ISTUpdated : Oct 29, 2025, 10:28 PM IST

India Latest News Live: ಕೆಮ್ಮಿನೂರಲ್ಲಿ ನಿಲ್ಲುತ್ತಲೇ ಇಲ್ಲ ಕೆಮ್ಮು, ಹನಿಯಲೇ ಇಲ್ಲ ಕೃತಕ ಮಳೆ..!

ಸಾರಾಂಶ

ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ) ವ್ಯವಸ್ಥೆ ಬಳಕೆ ಹೆಚ್ಚಾದ ಬೆನ್ನಲ್ಲೇ ಟೆಕ್‌ ಕಂಪನಿಗಳ ಉದ್ಯೋಗ ಕಡಿತ ಪರ್ವ ಮುಂದುವರೆದಿದ್ದು ಅಮೆಜಾನ್‌ ಜಾಗತಿಕವಾಗಿ 30 ಸಾವಿರ ಉದ್ಯೋಗಿಗಳಿಗೆ ಕೊಕ್‌ ನೀಡುವುದಕ್ಕೆ ಮುಂದಾಗಿದೆ. ಇದು 2022ರ ಬಳಿಕದ ಅತಿದೊಡ್ಡ ಉದ್ಯೋಗ ಕಡಿತವಾಗಿದೆ. ಕೋವಿಡ್‌ ಸಮಯದಲ್ಲಿ ಹೆಚ್ಚಿನ ನೌಕರರ ನೇಮಕಾತಿಯಿಂದ ಆದ ವೆಚ್ಚವನ್ನು ಸರಿದೂಗಿಸಲು ಮತ್ತು ಹೆಚ್ಚು ಹೆಚ್ಚು ಎಐ ತಂತ್ರಜ್ಞಾನ ಬಳಕೆ ಮೂಲಕ ಸೇವೆ ನೀಡಲು ಕಂಪನಿ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ

Delhi Air Pollution and Cloud Seeding

10:28 PM (IST) Oct 29

ಕೆಮ್ಮಿನೂರಲ್ಲಿ ನಿಲ್ಲುತ್ತಲೇ ಇಲ್ಲ ಕೆಮ್ಮು, ಹನಿಯಲೇ ಇಲ್ಲ ಕೃತಕ ಮಳೆ..!

Delhi Smog Crisis Artificial Rain Fails ದೆಹಲಿಯ ವಾಯು ಮಾಲಿನ್ಯ ನಿಯಂತ್ರಣದಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಡೆಸಿದ ಮೋಡ ಬಿತ್ತನೆಯಂತಹ ಪ್ರಯತ್ನಗಳು ಶೂನ್ಯ ಫಲಿತಾಂಶ ನೀಡಿವೆ. 

Read Full Story

09:47 PM (IST) Oct 29

4 ಬಾರಿಯ ಚಾಂಪಿಯನ್‌ ಇಂಗ್ಲೆಂಡ್‌ ಮಹಿಳೆಯರ ಮಣಿಸಿ ಚೊಚ್ಚಲ ಬಾರಿಗೆ ವಿಶ್ವಕಪ್‌ ಫೈನಲ್‌ಗೇರಿದ ದಕ್ಷಿಣ ಆಫ್ರಿಕಾ

South Africa Beats 4-Time Champions England to Reach First Women's World Cup Final ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ, ದಕ್ಷಿಣ ಆಫ್ರಿಕಾ ತಂಡವು 4 ಬಾರಿಯ ಚಾಂಪಿಯನ್ ಇಂಗ್ಲೆಂಡ್‌ ತಂಡವನ್ನು 125 ರನ್‌ಗಳಿಂದ ಸೋಲಿಸಿ ಇದೇ ಮೊದಲ ಬಾರಿಗೆ ಫೈನಲ್‌ಗೆ ಪ್ರವೇಶಿಸಿದೆ. 

 

Read Full Story

09:38 PM (IST) Oct 29

ಶೇ.65ರಷ್ಟು ಕ್ರಿಶ್ಚಿಯನ್ ಜನಸಂಖ್ಯೆ ಇರುವ ಈ ದೇಶದಲ್ಲಿ ನಿರ್ಮಾಣವಾಗುತ್ತಿದೆ ಭವ್ಯ ರಾಮ ಮಂದಿರ

ಶೇ.65ರಷ್ಟು ಕ್ರಿಶ್ಚಿಯನ್ ಜನಸಂಖ್ಯೆ ಇರುವ ಈ ದೇಶದಲ್ಲಿ ನಿರ್ಮಾಣವಾಗುತ್ತಿದೆ ಭವ್ಯ ರಾಮ ಮಂದಿರ, ವಿಶೇಷ ಅಂದರೆ ಈ ದೇಶದಲ್ಲಿ 3 ಲಕ್ಷಕ್ಕೂ ಅಧಿಕ ಹಿಂದೂಗಳು ನೆಲೆಸಿದ್ದಾರೆ. ಇದೀಗ ಅಲ್ಲಿನ ಸರ್ಕಾರ ರಾಮ ಮಂದಿರ ನಿರ್ಮಾಣಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದೆ.

Read Full Story

09:21 PM (IST) Oct 29

ನಷ್ಟದಲ್ಲಿರುವ ದೇಶದ 12 ಡಿಸ್ಕಾಮ್‌ ಪಾರುಮಾಡಲು ಮೋದಿ ಸರ್ಕಾರದ 1.05 ಲಕ್ಷ ಕೋಟಿಯ ಬೇಲ್‌ಔಟ್‌ ಪ್ಲ್ಯಾನ್‌?

Modi Govts ₹1.05 Lakh Cr Bailout Plan for Discoms ಸಾಲದ ಸುಳಿಯಲ್ಲಿರುವ ರಾಜ್ಯ ವಿದ್ಯುತ್ ವಿತರಣಾ ಕಂಪನಿಗಳಿಗೆ ಕೇಂದ್ರ ಸರ್ಕಾರವು 1 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ಬೃಹತ್ ಬೇಲ್ಔಟ್ ಪ್ಯಾಕೇಜ್ ಯೋಜಿಸುತ್ತಿದೆ. 

Read Full Story

08:12 PM (IST) Oct 29

8ನೇ ವೇತನ ಆಯೋಗ ಬಂದ್ರೂ ಸರ್ಕಾರಿ ಬ್ಯಾಂಕ್‌ ಉದ್ಯೋಗಿಗಳಿಗೆ ಯಾವುದೇ ಲಾಭವಿಲ್ಲ, ಇಲ್ಲಿದೆ ರೀಸನ್‌..!

8th Pay Commission Who Benefits & Who Doesnt Salary Calculation Fitment Factor Explained ಕೇಂದ್ರ ಸರ್ಕಾರವು 8ನೇ ವೇತನ ಆಯೋಗವನ್ನು ರಚಿಸಿದ್ದು, ಇದು ಸುಮಾರು 1.2 ಕೋಟಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡಲಿದೆ. 

Read Full Story

08:12 PM (IST) Oct 29

ಕಾಂಗ್ರೆಸ್ ಸಭೆಯಲ್ಲಿ ಮೊಳಗಿದ ಬಾಂಗ್ಲಾದೇಶ ರಾಷ್ಟ್ರಗೀತೆ, ಭುಗಿಲೆದ್ದ ಆಕ್ರೋಶ

ಕಾಂಗ್ರೆಸ್ ಸಭೆಯಲ್ಲಿ ಮೊಳಗಿದ ಬಾಂಗ್ಲಾದೇಶ ರಾಷ್ಟ್ರಗೀತೆ, ಭುಗಿಲೆದ್ದ ಆಕ್ರೋಶ, ಈಶಾನ್ಯ ರಾಜ್ಯ ತಮ್ಮದು ಎಂದು ಇತ್ತೀಚೆಗಷ್ಟೆ ಪಾಕಿಸ್ತಾನಕ್ಕೆ ಮ್ಯಾಪ್ ನೀಡಿದ್ದ ಬಾಂಗ್ಲಾದೇಶವನ್ನು ಕಾಂಗ್ರೆಸ್ ತಲೆ ಮೇಲೆ ಹೊತ್ತು, ಭಾರತದಿಂದ ಈಶಾನ್ಯ ಪ್ರತ್ಯೇಕಗೊಳಿಸಲು ಸಂಚು ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

Read Full Story

07:47 PM (IST) Oct 29

ಡಿಸೆಂಬರ್‌ ಮಧ್ಯದಲ್ಲಿ ಐಪಿಎಲ್‌ ಮಿನಿ ಹರಾಜು, ಇಡೀ ತಂಡವನ್ನೇ ಖಾಲಿ ಮಾಡಲು ನಿರ್ಧರಿಸಿದ ಎರಡು ಫ್ರಾಂಚೈಸಿ?

IPL Mini-Auction 2026 December Date Set CSK & RR Eyeing Full Squad Reset ಐಪಿಎಲ್ ಮಿನಿ-ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಫ್ರಾಂಚೈಸಿಗಳು ತಮ್ಮ ಆಟಗಾರರ ರಿಟೆನ್ಶನ್‌ ಮತ್ತು ರಿಲೀಸ್‌ಗಳನ್ನು ಸಲ್ಲಿಸಲು ಅಂತಿಮ ದಿನಾಂಕ ಮತ್ತು ತಾತ್ಕಾಲಿಕ ಹರಾಜು ವಿಂಡೋವನ್ನು ಸೂಚಿಸುವ ವರದಿಗಳು ಬಂದಿವೆ.

Read Full Story

07:26 PM (IST) Oct 29

ಸಾಫ್ಟ್​ವೇರ್​ ಎಂಜಿನಿಯರ್​ ಈ ಟೆರರಿಸ್ಟ್​? ಓದಿನಲ್ಲಿ ಟಾಪರ್​, ಕ್ರಿಕೆಟ್​ ತಂಡದ ನಾಯಕನ ಬೆಚ್ಚಿಬೀಳಿಸೋ ಕಥೆ ಕೇಳಿ!

ಪುಣೆಯ ಸಾಫ್ಟ್‌ವೇರ್ ಎಂಜಿನಿಯರ್ ಜುಬೈರ್ ಹಂಗರ್ಗೇಕರ್‌ನನ್ನು ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ. ಅಲ್ ಖೈದಾ ಜೊತೆ ಸಂಪರ್ಕ ಹೊಂದಿದ್ದ ಈತ, ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡುತ್ತಾ, ಭಯೋತ್ಪಾದಕ ದಾಳಿಗೆ ಸಂಚು ರೂಪಿಸುತ್ತಿದ್ದ ಎಂಬ ಆಘಾತಕಾರಿ ವಿಷಯ ತನಿಖೆಯಿಂದ ಬಹಿರಂಗಗೊಂಡಿದೆ.
Read Full Story

06:54 PM (IST) Oct 29

ಗಂಡನ ಅಪ್ಪನನ್ನೇ ವರಿಸಿದ ಸೊಸೆ! ಮದುವೆ ಮಾಡಿಕೊಂಡ ಕಾರಣ ಕೇಳಿ ಎಲ್ಲರೂ ಶಾಕ್​

ಸೊಸೆಯೊಬ್ಬಳು ತನ್ನ ಮಾವನನ್ನೇ ಮದುವೆಯಾದ ವಿಚಿತ್ರ ಘಟನೆಯೊಂದು ವರದಿಯಾಗಿದೆ. ತಾನು ಮಾವನಿಂದಲೇ ಗರ್ಭಿಣಿಯಾಗಿದ್ದು, ಈ ಕಾರಣಕ್ಕೆ ಮದುವೆಯಾಗಿದ್ದಾಗಿ ಆಕೆ ಯಾವುದೇ ಅಂಜಿಕೆ ಇಲ್ಲದೆ ಹೇಳಿಕೊಂಡಿದ್ದಾಳೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

06:26 PM (IST) Oct 29

ವೃತ್ತಿಜೀವನದ ಕೊನೇ ಘಟ್ಟದಲ್ಲಿ ಇದೇ ಮೊದಲ ಬಾರಿಗೆ ಮಹಾಸಾಧನೆ ಮಾಡಿದ ರೋಹಿತ್‌ ಶರ್ಮ!

Rohit Sharma Becomes World No. 1 ODI Batsman,ರೋಹಿತ್ ಶರ್ಮ, ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಏಕದಿನ ಕ್ರಿಕೆಟ್‌ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಈ ಮೂಲಕ ಸಚಿನ್‌ ತೆಂಡುಲ್ಕರ್‌ ದಾಖಲೆ ಮುರಿದು, ಈ ಸಾಧನೆ ಮಾಡಿದ ಅತ್ಯಂತ ಹಿರಿಯ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. 

Read Full Story

06:17 PM (IST) Oct 29

ಎಐನಿಂದ ಬದುಕಿಗೆ ಬಿತ್ತು ಕತ್ತರಿ - ರಾತ್ರಿ ಬೆಳಗಾಗುವುದರೊಳಗೆ ಸಾವಿರಾರು ಉದ್ಯೋಗಿಗಳಿಗೆ ಶಾಕ್ ನೀಡಿದ ಅಮೇಜಾನ್

Amazon Layoff:ಆನ್‌ಲೈನ್ ದೈತ್ಯ ಅಮೆಜಾನ್, ತನ್ನ ಸಾವಿರಾರು ಕಾರ್ಪೊರೇಟ್ ಉದ್ಯೋಗಿಗಳನ್ನು ರಾತ್ರೋರಾತ್ರಿ ವಜಾಗೊಳಿಸಿದೆ. ಎಐ ಪರಿಕರಗಳ ಮೇಲೆ ಹೆಚ್ಚಿದ ಗಮನ ಮತ್ತು ಸಂಸ್ಥೆಯ ಪುನರ್ರಚನೆಯ ಭಾಗವಾಗಿ ಈ ಉದ್ಯೋಗ ಕಡಿತ ಮಾಡಲಾಗಿದೆ.

Read Full Story

06:07 PM (IST) Oct 29

ವೋಟ್‌ಗಾಗಿ ಮೋದಿ ವೇದಿಕೆ ಮೇಲೆ ಡಾನ್ಸ್‌ ಕೂಡ ಮಾಡ್ತಾರೆ ಎಂದ ರಾಹುಲ್‌ ಗಾಂಧಿ

PM Modi 'Will Even Dance for Votes ಬಿಹಾರ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಮತಗಳಿಗಾಗಿ ಯಾವುದೇ ನಾಟಕವಾಡುತ್ತಾರೆ, ನೃತ್ಯ ಮಾಡಲು ಹೇಳಿದರೂ ಮಾಡುತ್ತಾರೆ ಎಂದು ಆರೋಪಿಸಿದರು. 20 ವರ್ಷಗಳ ನಿತೀಶ್ ಕುಮಾರ್ ಆಡಳಿತವನ್ನು ಅವರು ಟೀಕಿಸಿದ್ದಾರೆ.

Read Full Story

05:25 PM (IST) Oct 29

ಪಾಕಿಸ್ತಾನ ವಾಯುಪ್ರದೇಶ ಮುಚ್ಚಿರುವುದರಿಂದ ಏರ್ ಇಂಡಿಯಾಗೆ ಆಗಿರುವ ನಷ್ಟ ಎಷ್ಟು ಕೋಟಿ?

Pakistan airspace ban impact: ಭಾರತದ ವಿಮಾನಗಳಿಗೆ ಪಾಕಿಸ್ತಾನ ವಾಯುಪ್ರದೇಶವನ್ನು ಮುಚ್ಚಿದ್ದರಿಂದ, ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ ಸುಮಾರು 4000 ಕೋಟಿ ರೂಪಾಯಿಗಳಷ್ಟು ಭಾರಿ ಆರ್ಥಿಕ ನಷ್ಟವಾಗಿದೆ ಎಂದು ಅದರ ಸಿಇಒ ಕಂಪಬೆಲ್ ವಿಲ್ಸನ್ ತಿಳಿಸಿದ್ದಾರೆ.

Read Full Story

04:33 PM (IST) Oct 29

25-30 ಲಕ್ಷ ಲಂಚ ಕೊಟ್ಟು ಸರ್ಕಾರಿ ಉದ್ಯೋಗ ಗಿಟ್ಟಿಸಿದ 150 ಜನ - FIR ದಾಖಲಿಸಲು ಇಡಿ ಸೂಚನೆ

Bribe for job scam: ತಮಿಳುನಾಡಿನಲ್ಲಿ ನಡೆದಿದೆ ಎನ್ನಲಾದ ಉದ್ಯೋಗಕ್ಕಾಗಿ ಲಂಚ ಹಗರಣವನ್ನು ಜಾರಿ ನಿರ್ದೇಶನಾಲಯ ಬಯಲಿಗೆಳೆದಿದೆ. ಸುಮಾರು 150 ಅಭ್ಯರ್ಥಿಗಳು 25-35 ಲಕ್ಷ ರೂ. ಲಂಚ ನೀಡಿ ಕೆಲಸ ಪಡೆದಿದ್ದು, ಈ ಸಂಬಂಧ ಎಫ್‌ಐಆರ್ ದಾಖಲಿಸಲು ಇಡಿ ರಾಜ್ಯ ಪೊಲೀಸರಿಗೆ ಸೂಚಿಸಿದೆ.

Read Full Story

03:44 PM (IST) Oct 29

ರಾಫೆಲ್‌ನಲ್ಲಿ ಹಾರಿ ಹೊಸ ದಾಖಲೆ ನಿರ್ಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

Droupadi Murmu Rafale flight: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಫೆಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ರಾಷ್ಟ್ರಪತಿಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಈ ಹಾರಾಟದಲ್ಲಿ, ಮೊದಲ ಮಹಿಳಾ ರಾಫೆಲ್ ಪೈಲಟ್ ಶಿವಾಂಗಿ ಸಿಂಗ್ ಅವರ ಜೊತೆಗಿದ್ದರು. 

Read Full Story

02:47 PM (IST) Oct 29

ತನಗೆ ದಂಡ ವಿಧಿಸಿ ತಾವೇ ರೂಲ್ಸ್ ಬ್ರೇಕ್ ಮಾಡಿದ ಟ್ರಾಫಿಕ್ ಪೊಲೀಸರ ಬೆನ್ನಟ್ಟಿ ಹಿಡಿದ ವಿದ್ಯಾರ್ಥಿ

Thane student confronts police: ಯುವಕನೋರ್ವನಿಗೆ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ವಿಧಿಸಿದ್ದಾರೆ. ಆದರೆ ಸ್ವಲ್ಪ ಹೊತ್ತಲ್ಲಿ ಆ ದಂಡ ವಿಧಿಸಿದ ಪೊಲೀಸರೇ ಸಂಚಾರ ನಿಯಮ ಬ್ರೇಕ್ ಮಾಡಿದ್ದು, ಕಾಲೇಜು ವಿದ್ಯಾರ್ಥಿಯೋರ್ವ ಆ ಪೊಲೀಸರನ್ನು ಬೆನ್ನಟ್ಟಿ ಹಿಡಿದಿದ್ದಾನೆ.

Read Full Story

02:45 PM (IST) Oct 29

ಎಲ್ಲಾ ದಾಖಲೆ ಬ್ರೇಕ್ ಮಾಡಿತ್ತು 1957ರ ಸಿನಿಮಾ; 2025ರಲ್ಲಾಗಿದ್ರೆ ಕಲೆಕ್ಷನ್ ಆಗ್ತಿತ್ತು 2,000 ಕೋಟಿ ರೂಪಾಯಿ

Box Office Collection Record: ಭಾರತೀಯ ಚಿತ್ರರಂಗದ ಒಂದು ಐಕಾನಿಕ್ ಸಿನಿಮಾವಾಗಿದೆ. ಕೇವಲ 60 ಲಕ್ಷದಲ್ಲಿ ನಿರ್ಮಾಣವಾದ ಈ ಚಿತ್ರ, ವಿಶ್ವಾದ್ಯಂತ 8 ಕೋಟಿಗೂ ಅಧಿಕ ಗಳಿಸಿತ್ತು, ಇದರ ಇಂದಿನ ಮೌಲ್ಯ ಸುಮಾರು ₹2000 ಕೋಟಿ ಆಗಿದೆ.

Read Full Story

12:49 PM (IST) Oct 29

QR Codes for Highway Project - ರಸ್ತೆ ದೋಷಗಳಿಗೆ ನಾನೊಬ್ಬನೇ ಏಕೆ ಹೊಣೆ ತೆಗೆದುಕೊಳ್ಳಲಿ - ನಿತಿನ್ ಗಡ್ಕರಿ

QR codes on national highways ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೀಘ್ರದಲ್ಲೇ QR ಕೋಡ್‌ಗಳನ್ನು ಅಳವಡಿಸಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ. ರಸ್ತೆ ದೋಷಗಳಿಗೆ ನಾನೊಬ್ಬನೇ ಏಕೆ ಹೊಣೆ ಎಂದು ಗಡ್ಕರಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.

Read Full Story

12:30 PM (IST) Oct 29

ಕುಡಿದ ಮತ್ತಿನಲ್ಲಿ ಹುಲಿಯ ಮುದ್ದು ಮಾಡಿದ ಹುಲಿಯಾ..! ಸಿಸಿಟಿವಿ ವೀಡಿಯೋ ವೈರಲ್

drunk man adores tiger: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ, ಹುಲಿಯನ್ನು ಬೆಕ್ಕೆಂದು ಭಾವಿಸಿ ಮುದ್ದಿಸಿದ್ದಾನೆ. ಸಿಸಿಟಿವಿಯಲ್ಲಿ ಸೆರೆಯಾಗಿದೆ ಎನ್ನಲಾದ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಸತ್ಯಾಸತ್ಯತೆ ಬಗ್ಗೆ ಅನುಮಾನವಿದೆ

Read Full Story

11:48 AM (IST) Oct 29

ದೇವಾಲಯದ ದುಡ್ಡನ್ನು ಮುಟ್ಟಿದ್ರೆ ಜೋಕೆ! ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಹೈಕೋರ್ಟ್​ ತೀರ್ಪಿನಲ್ಲಿ ಹೇಳಿದ್ದೇನು?

ದೇವಸ್ಥಾನಗಳಿಗೆ ಭಕ್ತರು ನೀಡುವ ದೇಣಿಗೆ ದೇವರಿಗೆ ಸೇರಿದ್ದು, ಅದನ್ನು ಸರ್ಕಾರದ ಯೋಜನೆಗಳಿಗೆ ಅಥವಾ ಇತರೆ ಉದ್ದೇಶಗಳಿಗೆ ಬಳಸುವಂತಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.  ದೇವಾಲಯದ ನಿಧಿಯನ್ನು ಧಾರ್ಮಿಕ ಉದ್ದೇಶಗಳಿಗೆ ಮಾತ್ರ ಬಳಸಬೇಕೆಂದು ಸರ್ಕಾರಗಳಿಗೆ ತಾಕೀತು ಮಾಡಿದೆ.

Read Full Story

11:41 AM (IST) Oct 29

ಕೆನಡಾದಲ್ಲಿ ಬಿಷ್ಣೋಯ್ ಗ್ಯಾಂಗ್‌ನಿಂದ ಭಾರತೀಯ ಉದ್ಯಮಿಯ ಹತ್ಯೆ

Indian businessman killed in Canada: ಕೆನಡಾದಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಭಾರತೀಯ ಮೂಲದ ಉದ್ಯಮಿ ದರ್ಶನ್ ಸಿಂಗ್ ಸಾಹಸಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದೆ. ಗ್ಯಾಂಗ್‌ನ ಸದಸ್ಯ ಗೋಲ್ಡಿ ಧಿಲ್ಲನ್ ಈ ಸಾವಿನ ಹೊಣೆ ಹೊತ್ತುಕೊಂಡಿದ್ದಾಗಿ ಹೇಳಿಕೊಂಡಿದ್ದಾನೆ.

Read Full Story

10:19 AM (IST) Oct 29

ಇದೇ ಮೊದಲ ಬಾರಿಗೆ ಜಾರ್ಖಂಡ್‌ನಲ್ಲಿ ಹುಲಿಗಳ ಹಸಿವು ನೀಗಿಸಲು ಕಾಡೆಮ್ಮೆ, ಜಿಂಕೆ ಆಮದು

ಜಾರ್ಖಂಡ್‌ನ ಪಲಾಮು ಹುಲಿ ಸಂರಕ್ಷಿತಾರಣ್ಯದಲ್ಲಿ ಹುಲಿಗಳ ಆಹಾರ ಕೊರತೆ ನೀಗಿಸಲು ಮಧ್ಯಪ್ರದೇಶದಿಂದ ಕಾಡೆಮ್ಮೆ ಮತ್ತು ಜಿಂಕೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಪ್ರಶಾಂತ್ ಕಿಶೋರ್‌ಗೆ ಚುನಾವಣಾ ಆಯೋಗ ನೋಟಿಸ್

Read Full Story

09:11 AM (IST) Oct 29

ವಿವಾದಕ್ಕೆ ಕಾರಣವಾದ ಕೇಂದ್ರ ಸರ್ಕಾರದ ನಿರ್ಧಾರ; ಅಗ್ನಿವೀರರ ಭವಿಷ್ಯ ಮುಂದೇನು?

ಕೇಂದ್ರ ಗೃಹ ಸಚಿವಾಲಯವು ನಿವೃತ್ತ ಅಗ್ನಿವೀರರನ್ನು ದೇಶದ ಪ್ರಮುಖ ಖಾಸಗಿ ಭದ್ರತಾ ಸಂಸ್ಥೆಗಳಿಗೆ ನೇಮಕ ಮಾಡಿಕೊಳ್ಳುವ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಈ ನಿರ್ಧಾರವು ವಿವಾದಕ್ಕೆ ಕಾರಣವಾಗಿದ್ದು, ಸರ್ಕಾರಿ ಉದ್ಯೋಗದ ಭರವಸೆ ನೀಡಿದ್ದ ಕೇಂದ್ರವು ಈಗ ವಂಚಿಸುತ್ತಿದೆ ಎಂದು ವಿಪಕ್ಷಗಳು ತೀವ್ರವಾಗಿ ಟೀಕಿಸಿವೆ.
Read Full Story

08:52 AM (IST) Oct 29

ಸುಳ್ಳು ಕೇಸಲ್ಲಿ ಶಿಕ್ಷೆಯಾಗಿ ಗುರಿಯಾದವರಿಗೆ ಪರಿಹಾರ ನೀಡಲು ಸಾಧ್ಯವೇ? ಸುಪ್ರೀಂ ಕೋರ್ಟ್

ಸುಳ್ಳು ಕೇಸುಗಳಲ್ಲಿ ತಪ್ಪಾಗಿ ಶಿಕ್ಷೆಗೆ ಗುರಿಯಾಗಿ ಜೈಲು ಸೇರುವ ನಿರಪರಾಧಿಗಳಿಗೆ ಪರಿಹಾರ ನೀಡುವ ಕುರಿತು ಸುಪ್ರೀಂ ಕೋರ್ಟ್ ಪರಿಶೀಲನೆ ನಡೆಸುತ್ತಿದೆ.  ಈ ಬಗ್ಗೆ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಲು ನ್ಯಾಯಾಲಯ ಮುಂದಾಗಿದೆ.

Read Full Story

08:16 AM (IST) Oct 29

ಮೋಂಥಾ ಚಂಡಮಾರುತ - ಕರಾವಳಿ ಭಾಗದಲ್ಲಿ ಕರಾಳ ರಾತ್ರಿ, 90 ರಿಂದ 100 ಕಿ.ಮೀ. ವೇಗದಲ್ಲಿ ಗಾಳಿ

ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾದ ಮೋಂಥಾ ಚಂಡಮಾರುತವು ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಿದ್ದು, ಭಾರೀ ಮಳೆ ಮತ್ತು ಹಾನಿಯನ್ನುಂಟುಮಾಡಿದೆ. ಆಂಧ್ರ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
Read Full Story

08:00 AM (IST) Oct 29

ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ; 50 ಲಕ್ಷ ನೌಕರರು ಮತ್ತು 69 ಲಕ್ಷ ಪಿಂಚಣಿದಾರರಿಗೆ ಶುಭ ಸುದ್ದಿ

8th Central Pay Commission :ಕೇಂದ್ರ ಸಚಿವ ಸಂಪುಟವು 8ನೇ ವೇತನ ಆಯೋಗದ ನಿಯಮಗಳಿಗೆ ಒಪ್ಪಿಗೆ ನೀಡಿದ್ದು, ಇದು 50 ಲಕ್ಷ ನೌಕರರು ಮತ್ತು 69 ಲಕ್ಷ ಪಿಂಚಣಿದಾರರ ವೇತನ ಪರಿಷ್ಕರಣೆಗೆ ದಾರಿ ಮಾಡಿಕೊಟ್ಟಿದೆ. 

Read Full Story

07:45 AM (IST) Oct 29

ಪುಷ್ಕರ್ ಜಾನುವಾರು ಮೇಳದಲ್ಲಿ 23 ಕೋಟಿಯ ಎಮ್ಮೆ, 15 ಕೋಟಿ ಮೌಲ್ಯದ ಕುದುರೆ

ರಾಜಸ್ಥಾನದ ವಾರ್ಷಿಕ ಪುಷ್ಕರ್ ಜಾನುವಾರು ಮೇಳದಲ್ಲಿ 23 ಕೋಟಿ ಮೌಲ್ಯದ 'ಅನ್‌ಮೋಲ್‌' ಎಮ್ಮೆ ಮತ್ತು 15 ಕೋಟಿ ಮೌಲ್ಯದ 'ಶಹಬಾಜ್‌' ಕುದುರೆ ಪ್ರಮುಖ ಆಕರ್ಷಣೆಯಾಗಿವೆ. ಈ ದುಬಾರಿ ಜಾನುವಾರುಗಳನ್ನು ನೋಡಲು ದೇಶ-ವಿದೇಶಗಳಿಂದ ಜನರು ಆಗಮಿಸುತ್ತಿದ್ದು, ಇವುಗಳ ನಿರ್ವಹಣಾ ವೆಚ್ಚವೂ ಅಧಿಕವಾಗಿದೆ.
Read Full Story

07:28 AM (IST) Oct 29

ಮದುವೆಯಲ್ಲಿ ವಧು ಧರಿಸುವ ಚಿನ್ನಾಭರಣಕ್ಕೆ ಮಿತಿ ಹೇರಿದ ಗ್ರಾಮ; ನಿಯಮ ಉಲ್ಲಂಘಿಸಿದ್ರೆ 50 ಸಾವಿರ ದಂಡ

ಆರ್ಥಿಕ ಹೊರೆ ತಗ್ಗಿಸಲು ಮತ್ತು ಸಮಾನತೆ ತರಲು ಚಿನ್ನಾಭರಣ ಧರಿಸುವುದಕ್ಕೆ ಮಿತಿ ಹೇರಲಾಗಿದೆ. ಈ ಹೊಸ ನಿಯಮ ಉಲ್ಲಂಘಿಸಿದವರಿಗೆ 50,000 ರೂ. ದಂಡ ವಿಧಿಸಲಾಗುತ್ತದೆ. ಗ್ರಾಮದಲ್ಲಿ ಈ ನಿಯಮವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. 

Read Full Story

More Trending News