ನವದೆಹಲಿ: ದೂರದ ಇಥಿಯೋಪಿಯಾದಲ್ಲಿ 120000 ವರ್ಷಗಳ ಬಳಿಕ ಸ್ಫೋಟಿಸಿದ ಹೈಲಿ ಗುಬ್ಬಿ ಜ್ವಾಲಾಮುಖಿ ಸೃಷ್ಟಿಸಿದ ದಟ್ಟ ಹೊಗೆಯಿಂದಾಗಿ ದೆಹಲಿ ಏರ್ಪೋರ್ಟ್ನಿಂದ ವಿದೇಶಕ್ಕೆ ತೆರಳಬೇಕಿದ್ದ ಹಲವು ವಿಮಾನಗಳ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಂಗಳವಾರ ಏಳು ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ರದ್ದಾಗಿದ್ದು, 10 ವಿದೇಶಿ ವಿಮಾನಗಳ ಸಂಚಾರ ವಿಳಂಬಗೊಂಡಿದೆ.
ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ಸ್ಫೋಟಿಸಿ ಕಾಣಿಸಿಕೊಂಡ ಭಾರೀ ಹೊಗೆಯ ಮೋಡ ಇದೀಗ ಭಾರತದ ಪಶ್ಚಿಮ ಕರಾವಳಿಯಲ್ಲೂ ಕಾಣಿಸಿಕೊಂಡಿದ್ದು, ವಿಮಾನ ಸಂಚಾರಕ್ಕೆ ಸಮಸ್ಯೆ ಸೃಷ್ಟಿಸಿದೆ. ಈಗಾಗಲೇ ಭಾರತದ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು ಜ್ವಾಲಾಮುಖಿಯ ಬೂದಿ ಸಾಗುವ ಮಾರ್ಗದಲ್ಲಿ ಸಾಗದಂತೆ ಎಚ್ಚರಿಕೆ ನೀಡಿದ್ದು, ಹೀಗಾಗಿ ಭಾರತದಲ್ಲಿ ಹಲವು ವಿಮಾನಗಳ ಸಂಚಾರ ವ್ಯತ್ಯಯವಾಗಿದೆ. ಸೋಮವಾರದಿಂದ ಏರ್ಇಂಡಿಯಾವು 13 ವಿಮಾನಗಳ ಸಂಚಾರ ಸ್ಥಗಿತಗೊಳಿಸಿದೆ.
11:04 PM (IST) Nov 26
Nikki Bhatti Murder Noida Police Files 500-Page Chargesheet Reveals Conspiracy ಪೊಲೀಸ್ ತನಿಖೆಯಲ್ಲಿ ಪತಿ ವಿಪಿನ್ಗೆ ನಿಕ್ಕಿ ಬೊಟಿಕ್ ನಡೆಸುವುದರ ಬಗ್ಗೆ ಮತ್ತು ಕಾಂಚನ್ ಮನೆಯಲ್ಲಿ ಬ್ಯೂಟಿ ಪಾರ್ಲರ್ ನಡೆಸುವುದರ ಬಗ್ಗೆ ಅತೃಪ್ತರಾಗಿದ್ದರು ಎಂದು ತಿಳಿದುಬಂದಿದೆ.
10:36 PM (IST) Nov 26
OPPO ಕಂಪನಿಯ ಅಧಿಕಾರಿಗಳ ಪ್ರಕಾರ, ಕೃತಕ ಬುದ್ಧಿಮತ್ತೆ (AI) ಮಾನವ ಉದ್ಯೋಗಗಳಿಗೆ ಪರ್ಯಾಯವಲ್ಲ, ಬದಲಿಗೆ ಕೆಲಸವನ್ನು ಸುಲಭಗೊಳಿಸುವ ಒಂದು ಶಕ್ತಿಶಾಲಿ ಸಹಾಯಕ. AI ತಂತ್ರಜ್ಞಾನ ವೇಗವಾಗಿ ಕಲಿಯುವವರು ಮಾತ್ರ ಯಶಸ್ವಿಯಾಗುತ್ತಾರೆ. AI ಮನುಷ್ಯರನ್ನು ಬದಲಿಸದೆ, ಅವರೊಂದಿಗೆ ಸಹಾಯಕನಾಗಿ ಕೆಲಸ ಮಾಡುತ್ತದೆ.
10:34 PM (IST) Nov 26
ಹರಿಯಾಣದ ರೋಹ್ಟಕ್ನಲ್ಲಿ, ಬ್ಯಾಸ್ಕೆಟ್ಬಾಲ್ ಅಭ್ಯಾಸದ ವೇಳೆ ತುಕ್ಕು ಹಿಡಿದ ಪೋಲ್ ಕುಸಿದು 16 ವರ್ಷದ ರಾಷ್ಟ್ರೀಯ ಆಟಗಾರ ಹಾರ್ದಿಕ್ ಸಾವನ್ನಪ್ಪಿದ್ದಾರೆ. ಈ ದುರಂತ ಘಟನೆಯಿಂದಾಗಿ ಜಿಲ್ಲಾ ಕ್ರೀಡಾ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
10:30 PM (IST) Nov 26
fancy number plate: ಫ್ಯಾನ್ಸಿ ನಂಬರ್ ಪ್ಲೇಟ್ ಪಡೆಯುವುದಕ್ಕೆ ಬಹುತೇಕ ವಾಹನಗಳ ಮಾಲೀಕರು ಬಯಸುತ್ತಾರೆ. ಅನೇಕ ಸೆಲೆಬ್ರಿಟಿಗಳು ತಮ್ಮಿಷ್ಟದ ಫ್ಯಾನ್ಸಿ ನಂಬರ್ ಪ್ಲೇಟ್ ಪಡೆಯುವುದಕ್ಕೆ ಇನ್ನಿಲ್ಲದ ಸಾಹಸ ಮಾಡುತ್ತಾರೆ. ಅದೇ ರೀತಿ ಇಲ್ಲೊಂದು ನಂಬರ್ ಪ್ಲೇಟ್ ದುಬಾರಿ ಮೊತ್ತಕ್ಕೆ ಸೇಲ್ ಆಗಿದೆ.
09:53 PM (IST) Nov 26
ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯು ದೇಶದ ಕೇಂದ್ರ ಸರ್ಕಾರಿ ಆಸ್ಪತ್ರೆಯಲ್ಲೇ ಮೊದಲ ಬಾರಿಗೆ ಮಕ್ಕಳ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 11 ವರ್ಷದ ಬಾಲಕನಿಗೆ, ಅವನ ತಾಯಿಯೇ ದಾನ ಮಾಡಿದ ಮೂತ್ರಪಿಂಡ ಉಚಿತವಾಗಿ ಕಸಿ ಮಾಡಿ ಹೊಸ ಜೀವನ ನೀಡಲಾಗಿದೆ.
09:34 PM (IST) Nov 26
Hong Kong skyscraper fire: ಒಂದಲ್ಲ ಎರಡಲ್ಲ ಬರೋಬ್ಬರಿ 9 ಗಗನಚುಂಬಿ ಬಹುಮಹಡಿ ಕಟ್ಟಡಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ 13 ಜನರು ಸಾವನ್ನಪಿದ್ದು, ಅನೇಕರು ಗಾಯಗೊಂಡಿದ್ದಾರೆ. ಚೀನಾದ ಹಾಂಗ್ಕಾಂಗ್ನಲ್ಲಿ ಘಟನೆ ನಡೆದಿದೆ.
09:34 PM (IST) Nov 26
Celina Jaitly Alleges Blackmail Forced Sex Abuse Against Husband Peter Haag ಬಾಲಿವುಡ್ ನಟಿ ಸೆಲಿನಾ ಜೇಟ್ಲಿ ತನ್ನ ಪತಿ ಹಾಗೂ ಉದ್ಯಮಿ ಪೀಟರ್ ಹಾಕ್ ವಿರುದ್ಧ ಶಾಕಿಂಗ್ ಆರೋಪ ಮಾಡಿದ್ದಾರೆ. ಈ ಕುರಿತು ಅವರು ತಮ್ಮ ದೂರಿನಲ್ಲಿಯೂ ವಿವರಿಸಿದ್ದಾರೆ.
08:41 PM (IST) Nov 26
ದುಬೈ ಏರ್ ಶೋನಲ್ಲಿ ತೇಜಸ್ ಫೈಟರ್ ಜೆಟ್ ಅಪಘಾತಕ್ಕೀಡಾದ ನಂತರ, ಭಾರತದಿಂದ ಜೆಟ್ಗಳನ್ನು ಖರೀದಿಸುವ ಮಾತುಕತೆಯನ್ನು ಅರ್ಮೇನಿಯಾ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ. ಈ ₹10,000 ಕೋಟಿ ಒಪ್ಪಂದವು ತೇಜಸ್ನ ಮೊದಲ ವಿದೇಶಿ ರಫ್ತಾಗುವ ನಿರೀಕ್ಷೆಯಿತ್ತು.
08:33 PM (IST) Nov 26
Jeet Pabari death : ಕ್ರಿಕೆಟಿಗ ಚೇತೇಶ್ವರ್ ಪೂಜಾರ್ ಅವರ ಭಾಮೈದ ಜೀತ್ ಪಬಾರಿ ಅವರು ರಾಜ್ಕೋಟ್ನಲ್ಲಿ ಆತ್ಮ*ಹತ್ಯೆಗೆ ಶರಣಾಗಿದ್ದಾರೆ. ಒಂದು ವರ್ಷದ ಹಿಂದೆ ಅವರ ಮಾಜಿ ಗೆಳತಿ ಅತ್ಯಾ*ಚಾರ ದೂರು ದಾಖಲಿಸಿದ ದಿನವೇ ಈ ದುರಂತ ಸಂಭವಿಸಿದ್ದು, ಈ ಪ್ರಕರಣದಿಂದಾಗಿ ಅವರ ವಿವಾಹ ನಿಶ್ಚಿತಾರ್ಥ ರದ್ದಾಗಿತ್ತು.
08:04 PM (IST) Nov 26
ಟಿಎಂಸಿ ಶಾಸಕನ ಹೇಳಿಕೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತೀವ್ರ ಪ್ರತಿಕ್ರಿಯೆ ನೀಡಿದೆ. ಪಕ್ಷದ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲ್ಲಾ ಅವರು ಶಾಸಕರ ಘೋಷಣೆಯನ್ನು ರಾಜಕೀಯ ಪ್ರೇರಿತ ಎಂದು ಟೀಕಿಸಿದರು.
07:21 PM (IST) Nov 26
ಅಯೋಧ್ಯೆ ರಾಮಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ಧರ್ಮಧ್ವಜ ಏರಿಸಿದ ವಿಡಿಯೋ ನೋಡಿ ಪಾಕಿಸ್ತಾನ ಉರಿದುಕೊಂಡಿದೆ. ಇದು ಭಾರತದಲ್ಲಿ ಮುಸ್ಲಿಂ ಪರಂಪರೆಯನ್ನು ಅಳಿಸಿಹಾಕುವ ಪ್ರಯತ್ನ ಎಂದು ಹೇಳಿದೆ.
06:57 PM (IST) Nov 26
ವೈಷ್ಣೋ ದೇವಿ ವೈದ್ಯಕೀಯ ಕಾಲೇಜಿಗೆ 42 ಮುಸ್ಲಿಂ ವಿದ್ಯಾರ್ಥಿಗಳ ಪ್ರವೇಶವು ತೀವ್ರ ವಿವಾದಕ್ಕೆ ಕಾರಣವಾಗಿದೆ. ದೇವಾಲಯದ ದೇಣಿಗೆಯಿಂದ ನಡೆಯುವ ಸಂಸ್ಥೆಯಲ್ಲಿ ಹಿಂದೂಗಳಿಗೆ ಆದ್ಯತೆ ನೀಡಬೇಕೆಂದು ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ವಾದಿಸಿದೆ.
06:34 PM (IST) Nov 26
ಗುವಾಹಟಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ನಲ್ಲೂ ಟೀಂ ಇಂಡಿಯಾ ಸೋಲು ಅನುಭವಿಸಿದೆ. ಈ ಮೂಲಕ ಎರಡನೇ ಬಾರಿಗೆ ಭಾರತ ತವರಿನಲ್ಲಿ ವೈಟ್ವಾಷ್ ಮುಖಭಂಗ ಅನುಭವಿಸಿದೆ. ಈ ಸೋಲಿನ ಹೊರತಾಗಿಯೂ ಗೌತಮ್ ಗಂಭೀರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
06:11 PM (IST) Nov 26
Hydrogen balloon explosion at wedding: ದೆಹಲಿಯಲ್ಲಿ ನಡೆದ ಅರಿಶಿನ ಶಾಸ್ತ್ರದ ವೇಳೆ, ವಧು-ವರರ ಗ್ರ್ಯಾಂಡ್ ಎಂಟ್ರಿಗಾಗಿ ಬಳಸಿದ ಹೈಡ್ರೋಜನ್ ಬಲೂನ್ಗಳು ಸ್ಫೋಟಗೊಂಡು ವಧು ವರರು ಗಾಯಗೊಂಡ ಘಟನೆ ನಡೆದಿದೆ.
05:31 PM (IST) Nov 26
05:25 PM (IST) Nov 26
hit and run case: ಅಪಘಾತದ ನಂತರ ಒಂದೂವರೆ ವರ್ಷದ ಮಗುವೊಂದು ವಾಹನದ ರೂಫ್ ಮೇಲೆ ಬಿದ್ದರೂ ಸ್ಕಾರ್ಫಿಯೋ ಚಾಲಕನೋರ್ವ ವಾಹನವನ್ನು ನಿಲ್ಲಿಸದೇ ಸುಮಾರು 10 ಕಿಲೋ ಮೀಟರ್ ದೂರದವರೆಗೆ ವೇಗವಾಗಿ ಚಲಾಯಿಸಿದಂತಹ ಅಮಾನವೀಯ ಘಟನೆ ನಡೆದಿದೆ. ನಂತರ ಏನಾಯ್ತು. ಇಲ್ಲಿದೆ ಡಿಟೇಲ್ ಸ್ಟೋರಿ..
04:48 PM (IST) Nov 26
04:37 PM (IST) Nov 26
man hides mother's body: ವ್ಯಕ್ತಿಯೊಬ್ಬ ತನ್ನ ಸತ್ತ ತಾಯಿಯ ಪಿಂಚಣಿ ಹಣ ಪಡೆಯಲು ಆಕೆಯ ಶವವನ್ನು ಮನೆಯಲ್ಲಿ ಬಚ್ಚಿಟ್ಟಿದ್ದ. ಬರೀ ಇಷ್ಟೇ ಅಲ್ಲ ತಾಯಿಯ ಗುರುತಿನ ಚೀಟಿ ನವೀಕರಿಸಲು ಆಕೆಯಂತೆ ವೇಷ ಧರಿಸಿ ಕಚೇರಿಗೆ ಹೋಗಿದ್ದಾನೆ. ಈ ಘಟನೆಯ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ..
04:27 PM (IST) Nov 26
04:23 PM (IST) Nov 26
03:37 PM (IST) Nov 26
basketball player death:ತುಕ್ಕು ಹಿಡಿದಿದ್ದ ಬಾಸ್ಕೆಟ್ಬಾಲ್ ಕಂಬ ಕುಸಿದು ಬಿದ್ದು, 16ರ ಹರೆಯದ ಯುವ ಆಟಗಾರನೋರ್ವ ಸಾವನ್ನಪಿದ ಆಘಾತಕಾರಿ ಘಟನೆ ಹರ್ಯಾಣದ ರೋಹ್ಟಕ್ನಲ್ಲಿ ನಡೆದಿದೆ.
01:24 PM (IST) Nov 26
India vs south africa 2nd test: ಅಂತಿಮ ದಿನದಾಟದ ಆರಂಭದಲ್ಲಿ ಭಾರತ 27-2 ಸ್ಕೋರ್ ಮಾಡಿತ್ತು. ಕೇವಲ 37 ರನ್ ನೀಡಿ ಆರು ವಿಕೆಟ್ ಪಡೆದ ಸೈಮನ್ ಹಾರ್ಮರ್ ಭಾರತ ತಂಡವನ್ನು ಕಟ್ಟಿಹಾಕಿದರು.
11:36 AM (IST) Nov 26
ಮುಂದಿನ ವರ್ಷದ ಟಿ20 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಫೈನಲ್ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಿ 2023ರ ಸೋಲಿಗೆ ಸೇಡು ತೀರಿಸಿಕೊಳ್ಳಲು ಬಯಸುವುದಾಗಿ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
10:22 AM (IST) Nov 26
ಪ್ರಸ್ತಾವಿತ ಗೋವಾ ಹುಲಿ ಪ್ರದೇಶವನ್ನು ಹಂತ ಹಂತವಾಗಿ ಜಾರಿಗೊಳಿಸಲು ಸುಪ್ರೀಂ ಕೋರ್ಟ್ನ ಉನ್ನತಾಧಿಕಾರ ಸಮಿತಿ ಶಿಫಾರಸು ಮಾಡಿದೆ. ಮೊದಲ ಹಂತದಲ್ಲಿ, ಕಡಿಮೆ ಜನವಸತಿಯಿರುವ ಮತ್ತು ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಅಭಯಾರಣ್ಯಗಳನ್ನು ಮಾತ್ರ ಸೇರಿಸಬೇಕು.
10:03 AM (IST) Nov 26
ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಆಯೋಜಿಸಿರುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾಗೆ ಐಸಿಸಿ ಸಪ್ರೈಸ್ ಗಿಫ್ಟ್ ನೀಡಿದೆ. ಏನದು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
07:53 AM (IST) Nov 26
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸೋಲಿನ ಹಿನ್ನೆಲೆಯಲ್ಲಿ, ಕೋಚ್ ಗೌತಮ್ ಗಂಭೀರ್ ಅವರ ತಂಡದ ಆಯ್ಕೆ ನಿರ್ಧಾರಗಳ ವಿರುದ್ಧ ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪದೇ ಪದೇ ತಂಡದಲ್ಲಿ ಬದಲಾವಣೆ ಮಾಡುವುದನ್ನು ಶ್ರೀಕಾಂತ್ ಕಟುವಾಗಿ ಟೀಕಿಸಿದ್ದಾರೆ.
07:51 AM (IST) Nov 26
ಗಾಯಕ ಜುಬೀನ್ ಗರ್ಗ್ ಅವರದ್ದು ಆಕಸ್ಮಿಕ ಸಾವಲ್ಲ, ಹತ್ಯೆ ಎಂದು ಅಸ್ಸಾಂ ಸಿಎಂ ಹೇಳಿದ್ದಾರೆ. ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಅವರಿಗೆ 'ಜಾಗತಿಕ ಶಾಂತಿ ಗೌರವ' ಪ್ರದಾನ ಮಾಡಲಾಗಿದೆ. ಕೆನಡಾದಲ್ಲಿ ಖಲಿಸ್ತಾನಿಗಳು ಭಾರತದ ಧ್ವಜವನ್ನು ವಿರೂಪಗೊಳಿಸಿ ಬೆದರಿಕೆ ಒಡ್ಡಿದ್ದಾರೆ.
07:41 AM (IST) Nov 26
ವೃದ್ಧ ತಂದೆ-ತಾಯಿಯರನ್ನು ನೋಡಿಕೊಳ್ಳದ ಮಗನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಪೋಷಕರಿಂದ ಆಸ್ತಿ ಪಡೆದು ಅವರನ್ನು ಮನೆಯಿಂದ ಹೊರಹಾಕಲು ಯತ್ನಿಸಿದ ಆರೋಪದ ಮೇಲೆ, ಹಿರಿಯ ನಾಗರಿಕರ ಕಾಯ್ದೆ-2007ರ ಅಡಿಯಲ್ಲಿ ಈ ಶಿಕ್ಷೆ ವಿಧಿಸಲಾಗಿದೆ.