LIVE NOW
Published : Mar 26, 2026, 08:24 AM ISTUpdated : Mar 26, 2026, 12:40 PM IST

India Latest News Live: ಐಪಿಎಲ್‌ಗೆ ಕೆಕೆಆರ್‌, ಡೆಲ್ಲಿ, ಗುಜರಾತ್‌ ಭರ್ಜರಿ ಸಿದ್ಧತೆ! ಈ 3 ತಂಡಗಳ ಬಲ-ದೌರ್ಬಲ್ಯಗಳೇನು?

ಸಾರಾಂಶ

ಅಮರಾವತಿ (ಆಂಧ್ರ ಪ್ರದೇಶ): ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಉಗ್ರವಾದವನ್ನು ಪಸರಿಸಿ, ಭಯೋತ್ಪಾದಕ ಕೃತ್ಯಗಳಿಗೆ ಸಂಚು ರೂಪಿಸುತ್ತಿದ್ದ 12 ಮಂದಿಯನ್ನು ಆಂಧ್ರ ಪ್ರದೇಶದ ಪೊಲೀಸರು ಬುಧವಾರ ಬಂಧಿಸಿದ್ದಾರೆ.

KKR

12:19 PM (IST) Mar 26

ಐಪಿಎಲ್‌ಗೆ ಕೆಕೆಆರ್‌, ಡೆಲ್ಲಿ, ಗುಜರಾತ್‌ ಭರ್ಜರಿ ಸಿದ್ಧತೆ! ಈ 3 ತಂಡಗಳ ಬಲ-ದೌರ್ಬಲ್ಯಗಳೇನು?

19ನೇ ಆವೃತ್ತಿಯ ಐಪಿಎಲ್‌ಗೆ ಸಜ್ಜಾಗಿರುವ ಕೋಲ್ಕತಾ ನೈಟ್‌ರೈಡರ್ಸ್‌, ಗುಜರಾತ್‌ ಟೈಟಾನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳ ಸಮಗ್ರ ವಿಶ್ಲೇಷಣೆ ಇಲ್ಲಿದೆ. ಈ ಲೇಖನವು ಪ್ರತಿ ತಂಡದ 2026ರ ಬಲಾಬಲ, ದೌರ್ಬಲ್ಯಗಳು ಮತ್ತು ಸಂಭಾವ್ಯ ಆಡುವ ಬಳಗದ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ.
Read Full Story

11:59 AM (IST) Mar 26

IPL Code of Conduct - ಆಟಗಾರರಿಗೆ ಬಿಸಿಸಿಐನಿಂದ ಹೊಸ ರೂಲ್ಸ್! ಡ್ರೆಸ್ ಕೋಡ್, ಟ್ರೈನಿಂಗ್‌ಗೂ ಬಂತು ಕಠಿಣ ನಿಯಮ

ಐಪಿಎಲ್ ಸೀಸನ್‌ ಆರಂಭಕ್ಕೂ ಮುನ್ನ, ಬಿಸಿಸಿಐ ಆಟಗಾರರಿಗಾಗಿ ಹೊಸ ನೀತಿ ಸಂಹಿತೆಯನ್ನು ಜಾರಿಗೆ ತಂದಿದೆ. ತರಬೇತಿ, ಪೋಸ್ಟ್-ಮ್ಯಾಚ್ ಪ್ರೆಸೆಂಟೇಷನ್ ಡ್ರೆಸ್ ಕೋಡ್ ಮತ್ತು ಕುಟುಂಬ ಸದಸ್ಯರ ಪ್ರವೇಶದ ಮೇಲೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ.

Read Full Story

11:50 AM (IST) Mar 26

'ಹಾಗೆ ಹೇಳೋಕೆ ಅವನ್ಯಾರು?' ಅರ್ಜುನ್ ತೆಂಡೂಲ್ಕರ್ ಬಗ್ಗೆ ಮಾತಾಡಿದ ಅಶ್ವಿನ್ ಮೇಲೆ ಕೆಂಡ ಕಾರಿದ ಯೋಗರಾಜ್ ಸಿಂಗ್!

ಲಖನೌ ಸೂಪರ್ ಜೈಂಟ್ಸ್ ತಂಡದಲ್ಲಿ ಅರ್ಜುನ್ ತೆಂಡೂಲ್ಕರ್‌ಗೆ ಆಡುವ ಅವಕಾಶ ಸಿಗುವುದಿಲ್ಲ ಎಂಬ ಆರ್. ಅಶ್ವಿನ್ ಹೇಳಿಕೆಗೆ, ಅರ್ಜುನ್ ಕೋಚ್ ಯೋಗರಾಜ್ ಸಿಂಗ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅಶ್ವಿನ್ ಹೇಳಿಕೆ ಅಸಂಬದ್ಧ ಎಂದಿರುವ ಅವರು, ಅರ್ಜುನ್ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಅಶ್ವಿನ್‌ಗೆ ತಿಳಿದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

Read Full Story

11:44 AM (IST) Mar 26

ರಾಹುಲ್ ಗಾಂಧಿ ಬಿಜೆಪಿಯ 'ಬಿ-ಟೀಮ್' ಇದ್ದಂತೆ - ಕಾಂಗ್ರೆಸ್ ವಿರುದ್ಧ ಪಿಣರಾಯಿ ವಿಜಯನ್ ವಾಗ್ದಾಳಿ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷವನ್ನು ಬಿಜೆಪಿಯ 'ಬಿ-ಟೀಮ್' ಎಂದು ಟೀಕಿಸಿದ್ದಾರೆ. ರಾಹುಲ್ ಗಾಂಧಿಗೆ ರಾಜಕೀಯ ಅರಿವಿನ ಕೊರತೆಯಿದೆ ಮತ್ತು ತಪ್ಪುಗಳಿಂದ ಪಾಠ ಕಲಿಯುತ್ತಿಲ್ಲ. ದೇಶದಾದ್ಯಂತ ಕಾಂಗ್ರೆಸ್, ಬಿಜೆಪಿಯ ನಿಲುವನ್ನೇ ಅನುಸರಿಸುತ್ತಿದೆ ಎಂದು ಕಿಡಿ.

Read Full Story

11:39 AM (IST) Mar 26

ನನ್ನ ಯಾಕೆ ಬಿಟ್ಟೋದೆ - ಮಲತಾಯಿಯ ಕಿರುಕುಳದ ಬಳಿಕ ತಾಯಿ ಸಮಾಧಿ ಬಳಿ ಗೋಳಾಡಿದ ಪುಟ್ಟ ಬಾಲಕಿ

ಮಲತಾಯಿಯ ಕಿರುಕುಳದಿಂದ ನೊಂದ 12 ವರ್ಷದ ಬಾಲಕಿಯೊಬ್ಬಳು, ತನ್ನ ತಾಯಿಯ ಸಮಾಧಿಯ ಬಳಿ ಗೋಳಾಡುತ್ತಿರುವ ಹೃದಯವಿದ್ರಾವಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Read Full Story

10:21 AM (IST) Mar 26

ಭಾರತಕ್ಕಾಗಿ ಹಾರ್ಮುಜ್ ತೆರೆಯುತ್ತೇವೆ - ಯುದ್ಧದ ನಡುವೆಯೂ ಇರಾನ್‌ನಿಂದ ಸಿಹಿ ಸುದ್ದಿ, ಯಾವ್ಯಾವ ದೇಶಗಳಿಗೆ ಅನುಮತಿ?

ಇರಾನ್-ಇಸ್ರೇಲ್ ಸಂಘರ್ಷದ ನಡುವೆಯೂ, ಭಾರತ, ಚೀನಾ ಮತ್ತು ರಷ್ಯಾದಂತಹ ಸ್ನೇಹಪರ ರಾಷ್ಟ್ರಗಳ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತವಾಗಿ ಸಾಗಲು ಇರಾನ್ ಅನುಮತಿ ನೀಡಿದೆ. ವಿಶ್ವಸಂಸ್ಥೆಯ ಮನವಿಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇರಾನ್ ಹೇಳಿದೆ.

Read Full Story

09:46 AM (IST) Mar 26

ಲವರ್ ಜೊತೆ ಸೇರಿ ಅಮ್ಮನನ್ನೇ ಕೊಂದು ಮನೆಯಲ್ಲೇ ಹೂತು ಹಾಕಿದ ಮಗಳು - ತಾಯಿಯ ಸ್ಕೂಟಿ ನೀಡಿತು ರೋಚಕ ಸುಳಿವು

ಹೈದರಾಬಾದ್‌ನಲ್ಲಿ, ತನ್ನ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ತಾಯಿಯನ್ನು ಮಗಳೇ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಾಳೆ. ಒಂದು ವರ್ಷದ ಹಿಂದೆ ನಡೆದ ಈ ಘಟನೆ ಬೆಳಕಿಗೆ ಬಂದಿದ್ದು ಹೇಗೆ ಇಲ್ಲಿದೆ ಡಿಟೇಲ್ ಸ್ಟೋರಿ..

Read Full Story

09:23 AM (IST) Mar 26

ಆಂಧ್ರದಲ್ಲಿ ಭೀಕರ ಬಸ್ ಅಪಘಾತ, ನಿದ್ದೆಯ ಮಂಪರಿನಲ್ಲಿ 13 ಪ್ರಯಾಣಿಕರು ಸಜೀವ ದಹನ, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ!

ಆಂಧ್ರ ಪ್ರದೇಶದ ಮಾರ್ಕಪುರಂ ಬಳಿ ಖಾಸಗಿ ಬಸ್ ಮತ್ತು ಟಿಪ್ಪರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡು 13 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ನಿದ್ದೆಯಲ್ಲಿದ್ದಾಗ ಸಂಭವಿಸಿದ ಈ ದುರಂತದಲ್ಲಿ ಹಲವರು ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
Read Full Story

08:53 AM (IST) Mar 26

ಶೇನ್ ವಾರ್ನ್ 'ಮಾಸ್ಟರ್ ಸ್ಟ್ರೋಕ್' - ದಿಗ್ಗಜ ಸ್ಪಿನ್ನರ್ ಸಣ್ಣ ಹೂಡಿಕೆಯಿಂದಾಗಿ ಇಂದು ಅವರ ಕುಟುಂಬಕ್ಕೆ ಸಿಗಲಿದೆ ₹450 ಕೋಟಿ!

ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್, 2008ರಲ್ಲಿ ರಾಜಸ್ಥಾನ್ ರಾಯಲ್ಸ್ ಜೊತೆ ಮಾಡಿಕೊಂಡಿದ್ದ ವಿಶೇಷ ಷೇರು ಒಪ್ಪಂದದಿಂದಾಗಿ ಅವರ ಕುಟುಂಬಕ್ಕೆ ಈಗ ಕೋಟ್ಯಂತರ ರೂಪಾಯಿ ಲಭಿಸಲಿದೆ. ತಂಡದಲ್ಲಿ 3% ಷೇರುಗಳನ್ನು ಹೊಂದಿದ್ದ ವಾರ್ನ್, ತಂಡದ ಹೊಸ ಮೌಲ್ಯಮಾಪನದ ಪ್ರಕಾರ ಸುಮಾರು 450 ಕೋಟಿ ರೂಪಾಯಿಗಳಷ್ಟು ಹಣವನ್ನು ತಮ್ಮ ಕುಟುಂಬಕ್ಕೆ ಆಸ್ತಿಯಾಗಿ ಬಿಟ್ಟುಹೋಗಿದ್ದಾರೆ. 

Read Full Story

More Trending News