Published : Mar 26, 2026, 08:24 AM ISTUpdated : Mar 26, 2026, 10:32 PM IST

India Latest News Live: ಸಿಎಂ ಸಾರ್ವಜನಿಕ ಸಮಾವೇಶ ಮುಗಿಸಿ ವಾಪಸಾಗುತ್ತಿದ್ದ ಬಸ್‌ ಟ್ರಕ್‌ಗೆ ಢಿಕ್ಕಿ, 10 ಮಂದಿ ದಾರುಣ ಸಾವು!

ಸಾರಾಂಶ

ಅಮರಾವತಿ (ಆಂಧ್ರ ಪ್ರದೇಶ): ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಉಗ್ರವಾದವನ್ನು ಪಸರಿಸಿ, ಭಯೋತ್ಪಾದಕ ಕೃತ್ಯಗಳಿಗೆ ಸಂಚು ರೂಪಿಸುತ್ತಿದ್ದ 12 ಮಂದಿಯನ್ನು ಆಂಧ್ರ ಪ್ರದೇಶದ ಪೊಲೀಸರು ಬುಧವಾರ ಬಂಧಿಸಿದ್ದಾರೆ.

chhindwara bus pickup accident

10:32 PM (IST) Mar 26

ಸಿಎಂ ಸಾರ್ವಜನಿಕ ಸಮಾವೇಶ ಮುಗಿಸಿ ವಾಪಸಾಗುತ್ತಿದ್ದ ಬಸ್‌ ಟ್ರಕ್‌ಗೆ ಢಿಕ್ಕಿ, 10 ಮಂದಿ ದಾರುಣ ಸಾವು!

ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮದಿಂದ ಹಿಂತಿರುಗುತ್ತಿದ್ದ ಬಸ್ ಮತ್ತು ಪಿಕ್-ಅಪ್ ವಾಹನ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಒಂದು ಮಗು ಸೇರಿದಂತೆ 10 ಜನರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
Read Full Story

09:00 PM (IST) Mar 26

ರಾಮ್ ಚರಣ್‌ಗೆ ಆಪರೇಷನ್ ಮಾಡಿದ ಡಾಕ್ಟರ್ ಇವರೇ - 'ಪೆದ್ದಿ' ರಿಲೀಸ್ ಡೇಟ್ ಬಗ್ಗೆ ಸ್ಪಷ್ಟನೆಯೇನು?

'ಪೆದ್ದಿ' ಸಿನಿಮಾ ಶೂಟಿಂಗ್ ವೇಳೆ ನಟ ರಾಮ್ ಚರಣ್‌ ಗಾಯಗೊಂಡಿದ್ದರು. ಅವರಿಗೆ ಯಶಸ್ವಿಯಾಗಿ ಚಿಕಿತ್ಸೆ ನಡೆದಿದೆ. ಈ ಮಧ್ಯೆ, 'ಪೆದ್ದಿ' ಸಿನಿಮಾ ಬಿಡುಗಡೆ ಮುಂದೂಡಿಕೆಯಾಗುವುದಿಲ್ಲ ಎನ್ನಲಾಗಿದೆ.

Read Full Story

08:45 PM (IST) Mar 26

ಪತ್ನಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪತಿ - ತಿಂಗಳ ಬಳಿಕ ಲವರ್ ಜೊತೆ ಸಿಕ್ಕ ಹೆಂಡ್ತಿ

ಪತ್ನಿಯ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದ ಪತಿಯ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. 'ಕೊಲೆಯಾಗಿದ್ದಾಳೆ' ಎನ್ನಲಾಗಿದ್ದ ಪತ್ನಿ, ತನ್ನ ಪ್ರಿಯಕರನೊಂದಿಗೆ ಹರಿಯಾಣದಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ಪೊಲೀಸರು ನಿರ್ದೋಷಿ ಪತಿಯನ್ನು ಬಿಡುಗಡೆಗೊಳಿಸಿದ್ದಾರೆ.

Read Full Story

08:24 PM (IST) Mar 26

ನಿಮ್ಮ ಮನೆಗೆ ಗ್ಯಾಸ್‌ ತರುವ ಡೆಲಿವರಿ ಬಾಯ್‌ಗೆ ಪ್ರತಿ ಸಿಲಿಂಡರ್‌ ಮೇಲೆ ಎಷ್ಟು ರೂಪಾಯಿ ಸಿಗುತ್ತೆ?

ಯುದ್ಧದಿಂದಾಗಿ ಮನೆಬಳಕೆಯ ಗ್ಯಾಸ್ ಸಿಲಿಂಡರ್ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಗಳು ಏರಿಕೆಯಾಗಿವೆ. ಇಂತಹ ಸಮಯದಲ್ಲಿ ಗ್ಯಾಸ್ ಸಿಲಿಂಡರ್ ತಲುಪಿಸುವ ಡೆಲಿವರಿ ಬಾಯ್‌ಗೆ ಎಷ್ಟು ಕಮಿಷನ್ ಸಿಗುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ಅದರ ವಿವರ ಇಲ್ಲಿದೆ.

 

Read Full Story

07:45 PM (IST) Mar 26

5 ಪೈಸೆ ಕದ್ದಿಲ್ಲ ಎಂದು 40 ವರ್ಷದ ಬಳಿಕ ಕೋರ್ಟ್ ತೀರ್ಪು! ಖರ್ಚು ಮಾಡಿದ್ದು 4 ಲಕ್ಷ - ಏನಿದು ಸ್ಟೋರಿ

ದೆಹಲಿ ಸಾರಿಗೆ ನಿಗಮದ ಬಸ್ ಕಂಡಕ್ಟರ್ ರಣವೀರ್ ಸಿಂಗ್ ಯಾದವ್, 5 ಪೈಸೆ ಹೆಚ್ಚುವರಿ ಶುಲ್ಕ ವಿಧಿಸಿದ ಆರೋಪದ ಮೇಲೆ ಕೆಲಸ ಕಳೆದುಕೊಂಡರು. ತಮ್ಮದಲ್ಲದ ತಪ್ಪಿಗೆ ನ್ಯಾಯಕ್ಕಾಗಿ 40 ವರ್ಷಗಳ ಕಾಲ ನ್ಯಾಯಾಲಯದಲ್ಲಿ ಹೋರಾಡಿ, ಕೊನೆಗೂ ತಮ್ಮ ಪ್ರಕರಣದಲ್ಲಿ ಜಯ ಸಾಧಿಸಿದರು.
Read Full Story

07:20 PM (IST) Mar 26

Vijay Vs Ajith - ದಳಪತಿ ವಿಜಯ್-ಅಜಿತ್ ಕುಮಾರ್ - ರಿಯಲ್ ಬಾಕ್ಸ್ ಆಫೀಸ್ ಕಿಂಗ್ ಯಾರು ಗೊತ್ತಾ?

ತಮಿಳು ಚಿತ್ರರಂಗದ ಇಬ್ಬರು ದೊಡ್ಡ ಸ್ಟಾರ್‌ಗಳಾದ ದಳಪತಿ ವಿಜಯ್ ಮತ್ತು ಅಜಿತ್ ಕುಮಾರ್, ಸದ್ಯ ಸಿನಿಮಾಗಿಂತ ಹೆಚ್ಚಾಗಿ ರಾಜಕೀಯ ಮತ್ತು ಕಾರ್ ರೇಸಿಂಗ್‌ನಲ್ಲಿ ಗಮನ ಹರಿಸುತ್ತಿದ್ದಾರೆ. ಹೀಗಾಗಿ ಇಬ್ಬರ ಹಾದಿಯೂ ಈಗ ಸಿನಿಮಾವನ್ನು ಮೀರಿದೆ.

Read Full Story

07:14 PM (IST) Mar 26

ಆಂಧ್ರಪ್ರದೇಶ ಬಸ್‌ ದುರಂತ - ಮಗನನ್ನು ಕಿಟಕಿಯಿಂದ ಹೊರದೂಡಿ ಸಜೀವ ದಹನವಾದ ತಾಯಿ!

ಆಂಧ್ರಪ್ರದೇಶದ ಮಾರ್ಕಾಪುರಂ ಜಿಲ್ಲೆಯಲ್ಲಿ ಖಾಸಗಿ ಬಸ್ ಮತ್ತು ಟಿಪ್ಪರ್ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ 13 ಮಂದಿ ಸಜೀವ ದಹನವಾಗಿದ್ದಾರೆ. ಈ ದುರಂತದಲ್ಲಿ, ತಾಯಿಯೊಬ್ಬರು ತನ್ನ ಮಗನನ್ನು ಕಿಟಕಿಯಿಂದ ಹೊರಗೆ ತಳ್ಳಿ ಉಳಿಸಿ, ತಾನು ಬೆಂಕಿಗೆ ಆಹುತಿಯಾದ ಹೃದಯವಿದ್ರಾವಕ ಘಟನೆ ನಡೆದಿದೆ.
Read Full Story

07:01 PM (IST) Mar 26

ಇನ್‌ಸ್ಟಾಗ್ರಾಮ್‌ನಿಂದ ತಿಂಗಳಿಗೆ ಲಕ್ಷ ಲಕ್ಷ ಗಳಿಸುತ್ತಿರುವ ಈ ಬಾಲಿವುಡ್ ನಟಿ ಯಾರು ಗೊತ್ತಾ?

ನಟಿ ನೇಹಾ ಶರ್ಮಾ ಇನ್‌ಸ್ಟಾಗ್ರಾಮ್ ಪೇಯ್ಡ್ ಸಬ್‌ಸ್ಕ್ರಿಪ್ಷನ್ ಮೂಲಕ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ. ಅವರ ಆದಾಯ, ಆಸ್ತಿ ಮತ್ತು ವೃತ್ತಿಜೀವನದ ಸಂಪೂರ್ಣ ವಿವರ ಇಲ್ಲಿದೆ.

Read Full Story

06:58 PM (IST) Mar 26

ಪೊಲೀಸರ ಕರೆಸು ನನ್ನ ಏನೂ ಮಾಡಕ್ಕಾಗಲ್ಲ - ಜಸ್ಟ್ ಟಚ್ ಆಗಿದ್ದಕ್ಕೆ ರಾಯಲ್ ಎನ್‌ಫೀಲ್ಡ್‌ ಬುಲೆಟ್ ಬಲಿ ತೆಗೆದುಕೊಂಡ ಮಹಿಳೆ

ಟ್ರಾಫಿಕ್ ವೇಳೆ ತನ್ನ ಸ್ಕೂಟರ್‌ಗೆ ರಾಯಲ್ ಎನ್‌ಫೀಲ್ಡ್ ಬೈಕ್ ಸಣ್ಣದಾಗಿ ತಾಗಿದ್ದಕ್ಕೆ ಸಿಟ್ಟಿಗೆದ್ದ ಮಹಿಳೆಯೊಬ್ಬಳು, ಹೆಲ್ಮೆಟ್ ಹಾಗೂ ಇಟ್ಟಿಗೆಯಿಂದ ಬೈಕನ್ನು ಸಂಪೂರ್ಣವಾಗಿ ಜಖಂಗೊಳಿಸಿದ್ದಾಳೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.

Read Full Story

06:50 PM (IST) Mar 26

ಡೇಟಿಂಗ್‌ ಅಪ್ಲಿಕೇಶನ್‌ ಬಳಸಿ ಡ್ರಗ್‌ ವ್ಯವಹಾರ ಮಾಡ್ತಿದ್ದ ಮಾಜಿ ಫುಟ್‌ಬಾಲ್‌ ಪ್ಲೇಯರ್‌, ಸರ್ಕಾರಿ ಉದ್ಯೋಗಿ ಅರೆಸ್ಟ್‌!

ಕೇರಳದ ಮಾಜಿ ಸಂತೋಷ್ ಟ್ರೋಫಿ ಫುಟ್‌ಬಾಲ್ ಆಟಗಾರ ನಜೀಬ್ ಖಾನ್‌ನನ್ನು ಎಂಡಿಎಂಎ ಮಾರಾಟದ ಆರೋಪದ ಮೇಲೆ ಬಂಧಿಸಲಾಗಿದೆ. ಈತ ಡೇಟಿಂಗ್ ಆ್ಯಪ್‌ಗಳ ಮೂಲಕ ಗ್ರಾಹಕರನ್ನು ಸಂಪರ್ಕಿಸಿ, ಬೆಂಗಳೂರಿನಿಂದ ತಂದ ಮಾದಕ ವಸ್ತುಗಳನ್ನು ಹೋಟೆಲ್‌ಗಳಲ್ಲಿ ಪೂರೈಸುತ್ತಿದ್ದ. 

Read Full Story

06:39 PM (IST) Mar 26

Tamannaah Bhatia - ಕೆಂಪು ಲೆಹೆಂಗಾ, ಸಿಂಪಲ್ ಜ್ಯುವೆಲರಿಯಲ್ಲಿ ಮಿಂಚಿದ ತಮನ್ನಾ - 2026ಕ್ಕೆ ಹೊಸ ಟ್ರೆಂಡ್ ಸೆಟ್!

ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ನಟಿ ತಮನ್ನಾ ಭಾಟಿಯಾ ತಮ್ಮ ರ್‍ಯಾಂಪ್ ವಾಕ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಡಿಸೈನರ್ ಭೂಮಿಕಾ ಶರ್ಮಾ ಅವರ 'ಆಫ್ಟರ್‌ಗ್ಲೋ' ಕಲೆಕ್ಷನ್‌ಗಾಗಿ ಹೆಜ್ಜೆ ಹಾಕಿದರು.

Read Full Story

06:26 PM (IST) Mar 26

ಸರ್ಕಾರಿ ನೌಕರರ 8ನೇ ವೇತನ ಆಯೋಗ ಜಾರಿ ಯಾವಾಗ, ಎಲ್ಲಿಂದ ಅನ್ವಯ, ಹೆಚ್ಚಳವೆಷ್ಟು? ಡಿಟೇಲ್ಸ್​ ಇಲ್ಲಿದೆ

8ನೇ ವೇತನ ಆಯೋಗವನ್ನು ರಚಿಸಲಾಗಿದ್ದು, ಜಾರಿ ಯಾವಾಗ, ಎಲ್ಲಿಂದ ಅನ್ವಯ, ಎಷ್ಟು ಹೆಚ್ಚಳ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಸಂಸತ್ತಿನಲ್ಲಿ ಸರ್ಕಾರ ಹೇಳಿದ್ದೇನು ಎನ್ನುವ ವಿಷಯ ಇಲ್ಲಿದೆ.

 

Read Full Story

06:10 PM (IST) Mar 26

'ಕೆನ್ನೆಗೆ ಕೊಟ್ಟು ಬರೋದು ಬಿಟ್ಟು ನೀವೇನು ಮಾಡ್ತಿದ್ರಿ..' ಕಾಮಿ ಜ್ಯೋತಿಷಿ ಅಶೋಕ್‌ ಖರಾತ್‌ ಕೇಸ್‌ನಲ್ಲಿ ನಟಿ ಮಮತಾ ಕುಲಕರ್ಣಿ ಗರಂ!

ಮಹಾರಾಷ್ಟ್ರದ ಕಾಮಿ ಜ್ಯೋತಿಷಿ ಅಶೋಕ್ ಖರಾತ್ ಪ್ರಕರಣದ ಬಗ್ಗೆ ನಟಿ ಮಮತಾ ಕುಲಕರ್ಣಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಖರಾತ್ ಓರ್ವ ವಂಚಕನಾಗಿದ್ದು, ತನ್ನನ್ನು ಶಿವನ ಅವತಾರ ಎಂದು ಹೇಳಿಕೊಳ್ಳುವುದು ಅವನ ಭ್ರಮೆ ಎಂದಿದ್ದಾರೆ. 

Read Full Story

06:02 PM (IST) Mar 26

ಅತ್ಯಧಿಕ ಬಡ್ಡಿ ನೀಡುವ ಸರ್ಕಾರದ 9 ಸ್ಕೀಮ್​ಗಳು - 100% ಸೇಫ್​, ಕಳೆದುಕೊಳ್ಳೋ ಭೀತಿಯೇ ಇಲ್ಲ

ಭವಿಷ್ಯಕ್ಕಾಗಿ ಹಣ ಉಳಿಸಲು ಬಯಸುವವರಿಗೆ, ಖಾಸಗಿ ಸಂಸ್ಥೆಗಳ ಮೇಲಿನ ಅಪನಂಬಿಕೆ ಸಾಮಾನ್ಯ. ಅದಕ್ಕಾಗಿಯೇ, ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಸಾರ್ವಜನಿಕ ಭವಿಷ್ಯ ನಿಧಿ (PPF), ಸುಕನ್ಯಾ ಸಮೃದ್ಧಿ ಯೋಜನೆ, ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿದಂತೆ 9 ಸುರಕ್ಷಿತ ಯೋಜನೆಗಳ ಬಗ್ಗೆ ವಿವರಿಸಲಾಗಿದೆ.

Read Full Story

05:42 PM (IST) Mar 26

ಅರಿಜಿತ್ ಸಿಂಗ್‌ರ ಆ ಹಾಡು ಕೇಳಿ ಕಣ್ಣೀರು ಹಾಕಿದ ರಣವೀರ್ ಸಿಂಗ್ - ಅಭಿಮಾನಿಗಳೂ ಭಾವುಕ

ನಿರ್ದೇಶಕ ಆದಿತ್ಯ ಧರ್ ಅವರ ಸ್ಪೈ-ಥ್ರಿಲ್ಲರ್ 'ಧುರಂಧರ್ 2: ದಿ ರಿವೆಂಜ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಇದರ ಜೊತೆಗೆ, ಸಿನಿಮಾದ ಹಾಡುಗಳು ಕೂಡ ಜನರ ಮನಸ್ಸಿಗೆ ಹತ್ತಿರವಾಗಿವೆ.

Read Full Story

05:32 PM (IST) Mar 26

ಗಂಡಸ್ರೂ ಸೇಫಲ್ಲ! ರೈಲಿನಲ್ಲಿ ಮಲಗಿದ್ದ ಯುವಕನಿಗೆ ಮಾಡಬಾರದ್ದು ಮಾಡಿ ತಗ್ಲೊಕ್ಕೊಂಡ ಪತಿ ಮಹಾಶಯ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪತಿಯೊಬ್ಬ, ಪತ್ನಿಯ ಸಮ್ಮುಖದಲ್ಲಿಯೇ ಮಲಗಿದ್ದ ಯುವಕನಿಗೆ ಮುತ್ತಿಕ್ಕಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಕೆರಳಿದ ಯುವಕ, ಆ ವ್ಯಕ್ತಿಗೆ ಹಿಗ್ಗಾಮುಗ್ಗ ಥಳಿಸಿದ್ದು, ಪತ್ನಿ ಕಾಲು ಬಿದ್ದು ಕ್ಷಮೆ ಕೋರಿದರೂ ಬಿಡಲಿಲ್ಲ.
Read Full Story

05:19 PM (IST) Mar 26

'ಕಿಂಗ್' ಚಿತ್ರಕ್ಕಾಗಿ ಸಖತ್ ಬಾಡಿ ಬಿಲ್ಡ್! ಅಭಿಷೇಕ್ ಬಚ್ಚನ್ ಮಸ್ಕ್ಯುಲರ್ ಲುಕ್ ನೋಡಿ ಫ್ಯಾನ್ಸ್ ಫಿದಾ

ಅಭಿಷೇಕ್ ಬಚ್ಚನ್ ಸಾಮಾನ್ಯವಾಗಿ ಲೈಮ್‌ಲೈಟ್‌ನಿಂದ ದೂರ ಇರಲು ಇಷ್ಟಪಡುತ್ತಾರೆ ಮತ್ತು ಸೋಷಿಯಲ್ ಮೀಡಿಯಾದಲ್ಲೂ ಹೆಚ್ಚು ಆಕ್ಟಿವ್ ಆಗಿರುವುದಿಲ್ಲ. ಆದರೆ ಇತ್ತೀಚೆಗೆ ಅವರ ಒಂದು ಫೋಟೋ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ.

Read Full Story

05:04 PM (IST) Mar 26

ಆಪರೇಷನ್ ಸಿಂಧೂರ್ ಸಿನಿಮಾ ಮಾಡ್ತಿದ್ದಾರೆ ವಿವೇಕ್ ಅಗ್ನಿಹೋತ್ರಿ - ಏನಿದು ಸೇನಾ ಕಾರ್ಯಾಚರಣೆಯ ಕಥೆ?

ಈ ಸಿನಿಮಾವು ಮೇ 6 ರಿಂದ ಮೇ 10, 2025ರ ನಡುವೆ ನಡೆದ ಸೇನಾ ಕಾರ್ಯಾಚರಣೆಯ ಕಥೆಯನ್ನು ತೆರೆ ಮೇಲೆ ತರಲಿದೆ. ಈ ಆಪರೇಷನ್‌ನಲ್ಲಿ ಭಾರತೀಯ ಸೇನೆಯು ಯಾವ ರೀತಿ ರಣತಂತ್ರ ರೂಪಿಸಿ ದಾಳಿ ನಡೆಸಿತ್ತು.

Read Full Story

04:48 PM (IST) Mar 26

U ಟರ್ನ್ ಹೊಡೆದ್ರಾ ದಳಪತಿ? ಮತ್ತೆ ಸಿನಿಮಾನೇ ಗತಿ..! ಆದರೆ ಸಿಎಂ, ಇಲ್ಲದೇ ಹೋದರೇ ಚಿತ್ರರಂಗಕ್ಕೆ ರಿಟರ್ನ್..?

ರಾಜಕೀಯ ಪ್ರವೇಶಕ್ಕಾಗಿ 'ಜನನಾಯಗನ್' ತಮ್ಮ ಕೊನೆಯ ಸಿನಿಮಾ ಎಂದು ಘೋಷಿಸಿದ್ದ ದಳಪತಿ ವಿಜಯ್, ಇದೀಗ ಯು-ಟರ್ನ್ ಹೊಡೆಯುವ ಸಾಧ್ಯತೆ ಇದೆ. ಚುನಾವಣೆಯಲ್ಲಿ ನಿರೀಕ್ಷಿತ ಯಶಸ್ಸು ಸಿಗದಿದ್ದರೆ, ಮತ್ತೆ ಸಿನಿಮಾಗಳಲ್ಲಿ ಸಕ್ರಿಯರಾಗಲು ಅವರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
Read Full Story

04:25 PM (IST) Mar 26

ರಾಮ್ ಚರಣ್‌ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರಾ ಪವನ್ ಕಲ್ಯಾಣ್ ಪುತ್ರಿ? ಅಣ್ಣನೇ ಬಿಚ್ಚಿಟ್ಟ ಸೀಕ್ರೆಟ್!

ರಾಮ್ ಚರಣ್ ನಾಯಕನಾಗಿ, ಪವನ್ ಕಲ್ಯಾಣ್ ಪುತ್ರಿ ಆದ್ಯಾ ನಿರ್ದೇಶಕಿಯಾಗುವ ಪ್ಲ್ಯಾನ್ ಒಂದಿತ್ತು. ಈ ಬಗ್ಗೆ ಬಹಳ ಹಿಂದೆಯೇ ಚರ್ಚೆ ನಡೆದಿತ್ತಾ? ರಾಮ್ ಚರಣ್ ಬಿಚ್ಚಿಟ್ಟ ಸತ್ಯ ಎಲ್ಲರಿಗೂ ಅಚ್ಚರಿ ಮೂಡಿಸಿದೆ.
Read Full Story

03:59 PM (IST) Mar 26

ಪ್ರತಿ ತಿಂಗಳು ₹50,000 ಬಡ್ಡಿ ಬೇಕಾ? ಹಾಗಿದ್ರೆ ಬ್ಯಾಂಕ್‌ನಲ್ಲಿ ಎಷ್ಟು ಹಣ ಡೆಫಾಸಿಟ್ ಮಾಡಬೇಕು ಗೊತ್ತಾ?

ಬೆಂಗಳೂರು: ಬ್ಯಾಂಕ್‌ನಲ್ಲಿ ಹಣ ಠೇವಣಿ ಇಟ್ಟು ಪ್ರತಿ ತಿಂಗಳು ಆದಾಯ ಗಳಿಸಬಹುದು. ಆದರೆ, ತಿಂಗಳಿಗೆ ಇಂತಿಷ್ಟು ಬಡ್ಡಿ ಹಣ ಬರಲು ಎಷ್ಟು ಠೇವಣಿ ಇಡಬೇಕು ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ತಿಂಗಳಿಗೆ ₹50,000 ಬಡ್ಡಿ ರೂಪದಲ್ಲಿ ಪಡೆಯಲು ಎಷ್ಟು ಹಣ ಡೆಪಾಸಿಟ್ ಮಾಡಬೇಕು? ಇಲ್ಲಿದೆ ಮಾಹಿತಿ.

 

Read Full Story

03:41 PM (IST) Mar 26

ವಾಹನ ಸವಾರರಿಗೆ ಶಾಕ್ - ನಯಾರಾ ಎನರ್ಜಿ ಪೆಟ್ರೋಲ್ ₹5, ಡೀಸೆಲ್ ₹3 ಏರಿಕೆ!

ಖಾಸಗಿ ತೈಲ ಕಂಪನಿ 'ನಯಾರಾ ಎನರ್ಜಿ' ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿದೆ. ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ರಷ್ಯಾ ಮೇಲಿನ ನಿರ್ಬಂಧಗಳು ಈ ನಿರ್ಧಾರಕ್ಕೆ ಕಾರಣವಾಗಿವೆ. ಸದ್ಯಕ್ಕೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಬೆಲೆ ಏರಿಕೆ ಮಾಡಿಲ್ಲ.

Read Full Story

03:03 PM (IST) Mar 26

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರು ಬದಲಾಗುತ್ತಾ? 16,700 ಕೋಟಿ ಡೀಲ್ ನಂತರ ಮಹತ್ವದ ಅಪ್‌ಡೇಟ್ಸ್ ಕೊಟ್ಟ ಅನನ್ಯಾ ಬಿರ್ಲಾ!

ಐಪಿಎಲ್ ಇತಿಹಾಸದ ಅತಿದೊಡ್ಡ ಡೀಲ್‌ನಲ್ಲಿ ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಕನ್ಸೋರ್ಟಿಯಂ ಆರ್‌ಸಿಬಿ ತಂಡವನ್ನು ಖರೀದಿಸಿದೆ. ಇದರಿಂದ ತಂಡದ ಹೆಸರು ಬದಲಾಗಬಹುದೆಂಬ ಊಹಾಪೋಹಗಳು ಹರಡಿದ್ದವು. ಆದರೆ, ಅನನ್ಯಾ ಬಿರ್ಲಾ ಅವರು ತಂಡದ ಹೆಸರು 'ರಾಯಲ್ ಚಾಲೆಂಜರ್ಸ್ ಬೆಂಗಳೂರು' ಎಂದೇ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Read Full Story

02:11 PM (IST) Mar 26

'ಆಪರೇಷನ್​ ಸಿಂದೂರ್'​ನಲ್ಲಿ ಫ್ರೆಷ್ ಬಾಡಿ ಸಿಗತ್ತೆ ಅಂದ್ಕೊಂಡೆ! ಪಾಕ್​ ನಕ್ಷೆ ತೋರಿ ಖಾನ್​ ಸರ್ ಹೇಳಿದ್ದು ಕೇಳಿ

ಖಾನ್ ಸರ್, ತಮ್ಮ ವಿಶಿಷ್ಟ ಬೋಧನಾ ಶೈಲಿಯಿಂದ ಪ್ರಸಿದ್ಧರಾದ ಶಿಕ್ಷಣತಜ್ಞ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ಪಾಕಿಸ್ತಾನದ ನಕ್ಷೆಯನ್ನು ನಾಯಿಗೆ ಹೋಲಿಸಿ, ಅವರ ಬುದ್ಧಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಈ ಮಾತುಗಳು ನೆಟ್ಟಿಗರ ಚರ್ಚೆಗೆ ಕಾರಣವಾಗಿದೆ.
Read Full Story

01:47 PM (IST) Mar 26

Zombie Drug - ಮನುಷ್ಯರನ್ನು ಜೀವಂತ ಶವವಾಗಿಸುವ ಈ ಡ್ರಗ್ ಯಾವುದು? ಇದರ ಅಪಾಯಗಳೇನು?

ಕ್ಸೈಲಾಝಿನ್ (Xylazine) ಅನ್ನೋದು ಪ್ರಾಣಿಗಳಿಗೆ ಬಳಸುವ ಒಂದು ಅರಿವಳಿಕೆ ಔಷಧ. ಈಗ ಇದು ಜಗತ್ತಿನಾದ್ಯಂತ ದೊಡ್ಡ ಡ್ರಗ್ಸ್ ಪಿಡುಗಾಗಿ ಬದಲಾಗಿದೆ. ಇದನ್ನು ಫೆಂಟನಿಲ್‌ನಂತಹ ನಶೆಯ ವಸ್ತುವಿನ ಜೊತೆ ಬೆರೆಸಿ ಮಾರಲಾಗುತ್ತಿದ್ದು, ಇದು ಓವರ್‌ಡೋಸ್ ಅಪಾಯವನ್ನು ಹೆಚ್ಚಿಸುತ್ತಿದೆ.

Read Full Story

01:42 PM (IST) Mar 26

ಬೋಟ್‌ಗೆ ಏರುವ ವೇಳೆ ಪದ್ಮಾ ನದಿಗುರುಳಿದ ಬಸ್ - 25 ಜನರ ದಾರುಣ ಸಾವು

ಬಸ್ಸೊಂದು ನದಿ ದಾಟುವುದಕ್ಕೆ ಬೋಟ್‌ಗೆ ಏರುತ್ತಿದ್ದ ವೇಳೆ ನಿಯಂತ್ರಣ ತಪ್ಪಿ  ಉರುಳಿದ ಪರಿಣಾಮ 25 ಜನರು ದಾರುಣವಾಗಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಬಾಂಗ್ಲಾದೇಶದ ರಾಜ್ಬರಿ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿದೆ.

Read Full Story

01:27 PM (IST) Mar 26

ಯುದ್ಧದ ನಡುವೆ ಆಗಸದಲ್ಲಿ ಭಯಾನಕ ಕಾಗೆಗಳು! ಇದೆಂಥ ಮುನ್ಸೂಚನೆ? ಮುನ್ನೆಲೆಗೆ ಬಂದ ಸಿಎಂ ಕಾರಿನ ಸ್ಟೋರಿ

ಇಸ್ರೇಲ್-ಇರಾನ್ ಯುದ್ಧದ ಭೀತಿಯ ನಡುವೆ, ಟೆಲ್ ಅವಿವ್‌ನ ಆಗಸದಲ್ಲಿ ಸಾವಿರಾರು ಕಾಗೆಗಳು ವಿಚಿತ್ರವಾಗಿ ಹಾರಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ಹಲವರು ಅಪಶಕುನ ಮತ್ತು ವಿನಾಶದ ಮುನ್ಸೂಚನೆ ಎಂದು ಭಾವಿಸಿದ್ದರೆ, ತಜ್ಞರು ಮಾತ್ರ ಇದು ಕಾಗೆಗಳ ನೈಸರ್ಗಿಕ ವರ್ತನೆ ಎಂದು ವಿವರಿಸುತ್ತಾರೆ.
Read Full Story

01:10 PM (IST) Mar 26

ಚಾಂಪಿಯನ್‌ ಆರ್‌ಸಿಬಿ ತಂಡವನ್ನು ಸೇಲ್‌ ಮಾಡಿದ್ದೇಕೆ ಡಿಯಾಜಿಯೋ? ಇದಕ್ಕೆ ಕೊಹ್ಲಿ ಕಾರಣ?

ಬೆಂಗಳೂರು: ಐಪಿಎಲ್ ಟೂರ್ನಿಯಯ ಅತ್ಯಂತ ಜನಪ್ರಿಯ ಹಾಗೂ ಅತ್ಯಂತ ನಂಬಿಗಸ್ಥ ಅಭಿಮಾನಿಗಳನ್ನು ಹೊಂದಿದ್ದ ತಂಡ ಎನ್ನುವ ಖ್ಯಾತಿ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಫ್ರಾಂಚೈಸಿ ಮಾರಾಟ ಮಾಡಿದ್ದೇಕೆ ಎನ್ನುವುದೇಕೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

 

Read Full Story

12:19 PM (IST) Mar 26

ಐಪಿಎಲ್‌ಗೆ ಕೆಕೆಆರ್‌, ಡೆಲ್ಲಿ, ಗುಜರಾತ್‌ ಭರ್ಜರಿ ಸಿದ್ಧತೆ! ಈ 3 ತಂಡಗಳ ಬಲ-ದೌರ್ಬಲ್ಯಗಳೇನು?

19ನೇ ಆವೃತ್ತಿಯ ಐಪಿಎಲ್‌ಗೆ ಸಜ್ಜಾಗಿರುವ ಕೋಲ್ಕತಾ ನೈಟ್‌ರೈಡರ್ಸ್‌, ಗುಜರಾತ್‌ ಟೈಟಾನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳ ಸಮಗ್ರ ವಿಶ್ಲೇಷಣೆ ಇಲ್ಲಿದೆ. ಈ ಲೇಖನವು ಪ್ರತಿ ತಂಡದ 2026ರ ಬಲಾಬಲ, ದೌರ್ಬಲ್ಯಗಳು ಮತ್ತು ಸಂಭಾವ್ಯ ಆಡುವ ಬಳಗದ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ.
Read Full Story

11:59 AM (IST) Mar 26

IPL Code of Conduct - ಆಟಗಾರರಿಗೆ ಬಿಸಿಸಿಐನಿಂದ ಹೊಸ ರೂಲ್ಸ್! ಡ್ರೆಸ್ ಕೋಡ್, ಟ್ರೈನಿಂಗ್‌ಗೂ ಬಂತು ಕಠಿಣ ನಿಯಮ

ಐಪಿಎಲ್ ಸೀಸನ್‌ ಆರಂಭಕ್ಕೂ ಮುನ್ನ, ಬಿಸಿಸಿಐ ಆಟಗಾರರಿಗಾಗಿ ಹೊಸ ನೀತಿ ಸಂಹಿತೆಯನ್ನು ಜಾರಿಗೆ ತಂದಿದೆ. ತರಬೇತಿ, ಪೋಸ್ಟ್-ಮ್ಯಾಚ್ ಪ್ರೆಸೆಂಟೇಷನ್ ಡ್ರೆಸ್ ಕೋಡ್ ಮತ್ತು ಕುಟುಂಬ ಸದಸ್ಯರ ಪ್ರವೇಶದ ಮೇಲೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ.

Read Full Story

11:50 AM (IST) Mar 26

'ಹಾಗೆ ಹೇಳೋಕೆ ಅವನ್ಯಾರು?' ಅರ್ಜುನ್ ತೆಂಡೂಲ್ಕರ್ ಬಗ್ಗೆ ಮಾತಾಡಿದ ಅಶ್ವಿನ್ ಮೇಲೆ ಕೆಂಡ ಕಾರಿದ ಯೋಗರಾಜ್ ಸಿಂಗ್!

ಲಖನೌ ಸೂಪರ್ ಜೈಂಟ್ಸ್ ತಂಡದಲ್ಲಿ ಅರ್ಜುನ್ ತೆಂಡೂಲ್ಕರ್‌ಗೆ ಆಡುವ ಅವಕಾಶ ಸಿಗುವುದಿಲ್ಲ ಎಂಬ ಆರ್. ಅಶ್ವಿನ್ ಹೇಳಿಕೆಗೆ, ಅರ್ಜುನ್ ಕೋಚ್ ಯೋಗರಾಜ್ ಸಿಂಗ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅಶ್ವಿನ್ ಹೇಳಿಕೆ ಅಸಂಬದ್ಧ ಎಂದಿರುವ ಅವರು, ಅರ್ಜುನ್ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಅಶ್ವಿನ್‌ಗೆ ತಿಳಿದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

Read Full Story

11:44 AM (IST) Mar 26

ರಾಹುಲ್ ಗಾಂಧಿ ಬಿಜೆಪಿಯ 'ಬಿ-ಟೀಮ್' ಇದ್ದಂತೆ - ಕಾಂಗ್ರೆಸ್ ವಿರುದ್ಧ ಪಿಣರಾಯಿ ವಿಜಯನ್ ವಾಗ್ದಾಳಿ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷವನ್ನು ಬಿಜೆಪಿಯ 'ಬಿ-ಟೀಮ್' ಎಂದು ಟೀಕಿಸಿದ್ದಾರೆ. ರಾಹುಲ್ ಗಾಂಧಿಗೆ ರಾಜಕೀಯ ಅರಿವಿನ ಕೊರತೆಯಿದೆ ಮತ್ತು ತಪ್ಪುಗಳಿಂದ ಪಾಠ ಕಲಿಯುತ್ತಿಲ್ಲ. ದೇಶದಾದ್ಯಂತ ಕಾಂಗ್ರೆಸ್, ಬಿಜೆಪಿಯ ನಿಲುವನ್ನೇ ಅನುಸರಿಸುತ್ತಿದೆ ಎಂದು ಕಿಡಿ.

Read Full Story

11:39 AM (IST) Mar 26

ನನ್ನ ಯಾಕೆ ಬಿಟ್ಟೋದೆ - ಮಲತಾಯಿಯ ಕಿರುಕುಳದ ಬಳಿಕ ತಾಯಿ ಸಮಾಧಿ ಬಳಿ ಗೋಳಾಡಿದ ಪುಟ್ಟ ಬಾಲಕಿ

ಮಲತಾಯಿಯ ಕಿರುಕುಳದಿಂದ ನೊಂದ 12 ವರ್ಷದ ಬಾಲಕಿಯೊಬ್ಬಳು, ತನ್ನ ತಾಯಿಯ ಸಮಾಧಿಯ ಬಳಿ ಗೋಳಾಡುತ್ತಿರುವ ಹೃದಯವಿದ್ರಾವಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Read Full Story

10:21 AM (IST) Mar 26

ಭಾರತಕ್ಕಾಗಿ ಹಾರ್ಮುಜ್ ತೆರೆಯುತ್ತೇವೆ - ಯುದ್ಧದ ನಡುವೆಯೂ ಇರಾನ್‌ನಿಂದ ಸಿಹಿ ಸುದ್ದಿ, ಯಾವ್ಯಾವ ದೇಶಗಳಿಗೆ ಅನುಮತಿ?

ಇರಾನ್-ಇಸ್ರೇಲ್ ಸಂಘರ್ಷದ ನಡುವೆಯೂ, ಭಾರತ, ಚೀನಾ ಮತ್ತು ರಷ್ಯಾದಂತಹ ಸ್ನೇಹಪರ ರಾಷ್ಟ್ರಗಳ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತವಾಗಿ ಸಾಗಲು ಇರಾನ್ ಅನುಮತಿ ನೀಡಿದೆ. ವಿಶ್ವಸಂಸ್ಥೆಯ ಮನವಿಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇರಾನ್ ಹೇಳಿದೆ.

Read Full Story

09:46 AM (IST) Mar 26

ಲವರ್ ಜೊತೆ ಸೇರಿ ಅಮ್ಮನನ್ನೇ ಕೊಂದು ಮನೆಯಲ್ಲೇ ಹೂತು ಹಾಕಿದ ಮಗಳು - ತಾಯಿಯ ಸ್ಕೂಟಿ ನೀಡಿತು ರೋಚಕ ಸುಳಿವು

ಹೈದರಾಬಾದ್‌ನಲ್ಲಿ, ತನ್ನ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ತಾಯಿಯನ್ನು ಮಗಳೇ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಾಳೆ. ಒಂದು ವರ್ಷದ ಹಿಂದೆ ನಡೆದ ಈ ಘಟನೆ ಬೆಳಕಿಗೆ ಬಂದಿದ್ದು ಹೇಗೆ ಇಲ್ಲಿದೆ ಡಿಟೇಲ್ ಸ್ಟೋರಿ..

Read Full Story

09:23 AM (IST) Mar 26

ಆಂಧ್ರದಲ್ಲಿ ಭೀಕರ ಬಸ್ ಅಪಘಾತ, ನಿದ್ದೆಯ ಮಂಪರಿನಲ್ಲಿ 13 ಪ್ರಯಾಣಿಕರು ಸಜೀವ ದಹನ, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ!

ಆಂಧ್ರ ಪ್ರದೇಶದ ಮಾರ್ಕಪುರಂ ಬಳಿ ಖಾಸಗಿ ಬಸ್ ಮತ್ತು ಟಿಪ್ಪರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡು 13 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ನಿದ್ದೆಯಲ್ಲಿದ್ದಾಗ ಸಂಭವಿಸಿದ ಈ ದುರಂತದಲ್ಲಿ ಹಲವರು ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
Read Full Story

08:53 AM (IST) Mar 26

ಶೇನ್ ವಾರ್ನ್ 'ಮಾಸ್ಟರ್ ಸ್ಟ್ರೋಕ್' - ದಿಗ್ಗಜ ಸ್ಪಿನ್ನರ್ ಸಣ್ಣ ಹೂಡಿಕೆಯಿಂದಾಗಿ ಇಂದು ಅವರ ಕುಟುಂಬಕ್ಕೆ ಸಿಗಲಿದೆ ₹450 ಕೋಟಿ!

ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್, 2008ರಲ್ಲಿ ರಾಜಸ್ಥಾನ್ ರಾಯಲ್ಸ್ ಜೊತೆ ಮಾಡಿಕೊಂಡಿದ್ದ ವಿಶೇಷ ಷೇರು ಒಪ್ಪಂದದಿಂದಾಗಿ ಅವರ ಕುಟುಂಬಕ್ಕೆ ಈಗ ಕೋಟ್ಯಂತರ ರೂಪಾಯಿ ಲಭಿಸಲಿದೆ. ತಂಡದಲ್ಲಿ 3% ಷೇರುಗಳನ್ನು ಹೊಂದಿದ್ದ ವಾರ್ನ್, ತಂಡದ ಹೊಸ ಮೌಲ್ಯಮಾಪನದ ಪ್ರಕಾರ ಸುಮಾರು 450 ಕೋಟಿ ರೂಪಾಯಿಗಳಷ್ಟು ಹಣವನ್ನು ತಮ್ಮ ಕುಟುಂಬಕ್ಕೆ ಆಸ್ತಿಯಾಗಿ ಬಿಟ್ಟುಹೋಗಿದ್ದಾರೆ. 

Read Full Story

More Trending News