ಹೈದರಾಬಾದ್: ಇಲ್ಲಿನ ದ್ವಿಮುಖಿ ಆಂಜನೇಯ ದೇಗುಲದಲ್ಲಿನ ಆಂಜನೇಯ ಮೂರ್ತಿಯ ಹಣೆಯಲ್ಲಿದ್ದ ಸಿಂದೂರವನ್ನು ಅಳಿಸಿಹಾಕಿ ವಿರೂಪಗೊಳಿಸಿದ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಆರಂಭಿಸಿದ್ದಾರೆ.
ಅತ್ತ ಘಟನೆಯನ್ನು ಖಂಡಿಸಿರುವ ಬಿಜೆಪಿಯ ರಾಜ್ಯಾಧ್ಯಕ್ಷ ಎನ್. ರಾಮಚಂದ್ರರಾವ್, ‘ತೆಲಂಗಾಣದಲ್ಲಿ ಒಂದರಹಿಂದೊಂದರಂತೆ ನಡೆಯುತ್ತಿರುವ ಇಂತಹ ಘಟನೆಗಳು ಪ್ರತ್ಯೇಕ ಪ್ರಕರಣಗಳಲ್ಲ. ಬದಲಿಗೆ ಸನಾತನ ಧರ್ಮದ ವಿರುದ್ಧದ ಯೋಜಿತ ಸಂಚು. ಇದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಮಾರಕ’ ಎಂದಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಜತೆಗೆ, ವೋಟ್ಬ್ಯಾಂಕ್ ರಾಜಕಾರಣದಲ್ಲಿ ತೊಡಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಇಂತಹ ಸಮಾಜವಿರೋಧಿ ಕೃತ್ಯಗಳನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಕಿಡಿ ಕಾರಿದ್ದಾರೆ.
11:55 PM (IST) Feb 25
11:17 PM (IST) Feb 25
ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅವರನ್ನು 'ನೆಗೆಟಿವ್ ಪಾಲಿಟಿಕ್ಸ್ನ ಪೋಸ್ಟರ್ ಬಾಯ್, 'ವಿದೇಶಿ ಶಕ್ತಿಗಳ ಕೈಗೊಂಬೆ' ಎಂದು ಕರೆದಿದ್ದಾರೆ. ಜಾರ್ಜ್ ಸೊರೊಸ್ನಂತಹ ಭಾರತ ವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
11:10 PM (IST) Feb 25
10:56 PM (IST) Feb 25
09:23 PM (IST) Feb 25
SC Refuses to Ban 'Yadav Ji Ki Love Story': Key Remarks "ಯಾದವ್ ಜಿ ಕಿ ಲವ್ ಸ್ಟೋರಿ" ಚಿತ್ರಕ್ಕೆ ನಿಷೇಧ ಹೇರಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಯಾದವ ಸಮುದಾಯದ ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕನ ಪ್ರೇಮಕಥೆಯು ರಾಷ್ಟ್ರದ ಏಕತೆಗೆ ಧಕ್ಕೆ ತರುತ್ತದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿದೆ.
09:20 PM (IST) Feb 25
ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್' ಸಿನಿಮಾದ ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಕೇರಳವನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ, ವಿಚಾರಣೆ ಮುಗಿಯುವವರೆಗೆ ಚಿತ್ರವನ್ನು ಬಿಡುಗಡೆ ಮಾಡದಂತೆ ನಿರ್ಮಾಪಕರಿಗೆ ನಿರ್ದೇಶನ ನೀಡಿದೆ.
08:56 PM (IST) Feb 25
08:52 PM (IST) Feb 25
08:27 PM (IST) Feb 25
ಕಾಜೋಲ್ ಮತ್ತು ಅಜಯ್ ದೇವಗನ್ ಅವರ 27ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಅಜಯ್ಗಾಗಿ ಇಬ್ಬರು ಪ್ರಮುಖ ನಟಿಯರಾದ ರವೀನಾ ಟಂಡನ್ ಮತ್ತು ಕರಿಷ್ಮಾ ಕಪೂರ್ ನಡುವೆ ನಡೆದಿದ್ದ ಜಗಳದ ಹಳೆಯ ಕಥೆಯೊಂದು ಮುನ್ನೆಲೆಗೆ ಬಂದಿದೆ.
08:06 PM (IST) Feb 25
ಬಿಎಸ್ಎನ್ಎಲ್ನ ಹಿರಿಯ ನಿರ್ದೇಶಕ ವಿವೇಕ್ ಬಂಝಲ್ ಅವರು ತಮ್ಮ ಪ್ರಯಾಗ್ರಾಜ್ ಭೇಟಿಗಾಗಿ ಶಿಷ್ಟಾಚಾರದ ಹೆಸರಿನಲ್ಲಿ ವೈಯಕ್ತಿಕ ಬೇಡಿಕೆಗಳ ದೊಡ್ಡ ಪಟ್ಟಿ ನೀಡಿದ್ದು. ಈ ಆದೇಶ ವೈರಲ್ ಆಗಿ ತೀವ್ರ ವಿವಾದಕ್ಕೀಡಾಗಿದೆ ಕೇಂದ್ರ ಸಚಿವರು ತನಿಖೆಗೆ ಆದೇಶಿಸಿದ್ದಾರೆ, ಜೊತೆಗೆ ಅವರ ಪ್ರವಾಸವೂ ರದ್ದಾಗಿದೆ.
07:46 PM (IST) Feb 25
ತೆಲುಗಿನ ಜನಪ್ರಿಯ ಯೂಟ್ಯೂಬರ್ ಕೋಮಲಿ (21) ಪ್ರೇಮ ವೈಫಲ್ಯದಿಂದಾಗಿ ಹೈದರಾಬಾದ್ನಲ್ಲಿ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಮಾಜಿ ಪ್ರಿಯತಮ ನಿಖಿಲ್ ರೆಡ್ಡಿ ಜೊತೆಗಿನ ಮನಸ್ತಾಪದಿಂದ ಖಿನ್ನತೆಗೆ ಒಳಗಾಗಿದ್ದ ಅವರು, ಮನೆಯಲ್ಲಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ.
06:56 PM (IST) Feb 25
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಸುದ್ದಿಯ ನಡುವೆಯೇ, ವಿಜಯ್ ಜೊತೆಗಿನ ತಮ್ಮ ಮೊದಲ ಕಿಸ್ಸಿಂಗ್ ಅನುಭವವನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ. ನೂರಾರು ಜನರ ಮುಂದೆ ಕಿಸ್ ಮಾಡಲು ಆರಂಭದಲ್ಲಿ ಮುಜುಗರವಾದರೂ, ವಿಜಯ್ ಅವರ ಸಹಕಾರದಿಂದ ಆ ದೃಶ್ಯವನ್ನು ಸುಲಭವಾಗಿ ಮಾಡಿದೆ ಎಂದಿದ್ದಾರೆ.
06:54 PM (IST) Feb 25
RCB Team Sale: Diageo Sets March Deadline for RCB ಡಿಯಾಜಿಯೊ ಒಡೆತನದ ಯುನೈಟೆಡ್ ಸ್ಪಿರಿಟ್ಸ್, ತನ್ನ ಅಂಗಸಂಸ್ಥೆಯಾದ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ (RCSPL) ಅನ್ನು ಮಾರಾಟ ಮಾಡುತ್ತಿದೆ. ಮಾರ್ಚ್ ಅಂತ್ಯದೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
06:12 PM (IST) Feb 25
05:56 PM (IST) Feb 25
ಟ್ರಾವೆಲ್ ವ್ಲಾಗರ್ ದೀಪಕ್ ಸಮಲ್ ಅವರು ತಮ್ಮ ಮಗ ರೈಲಿನಲ್ಲಿ ಚಿಪ್ಸ್ ಚೆಲ್ಲಿದಾಗ, ಅದನ್ನು ಮಗುವಿನ ಕೈಯಲ್ಲೇ ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವ ಮೂಲಭೂತ ಕರ್ತವ್ಯದ ಬಗ್ಗೆ ಪಾಠ ಮಾಡಿದ್ದಾರೆ. ಈ ವೀಡಿಯೋ ವೈರಲ್ ಆಗಿದೆ.
05:28 PM (IST) Feb 25
Modi Netanyahu Summit ಪ್ರಧಾನಿ ನರೇಂದ್ರ ಮೋದಿಯವರ ಐತಿಹಾಸಿಕ ಇಸ್ರೇಲ್ ಭೇಟಿಯು ಪಾಕಿಸ್ತಾನದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಭಾರತ-ಇಸ್ರೇಲ್ ನಡುವಿನ ಸಂಭಾವ್ಯ ರಕ್ಷಣಾ ಒಪ್ಪಂದಗಳು ಮತ್ತು 'ಷಟ್ಕೋನ' ಮೈತ್ರಿಯ ಪ್ರಸ್ತಾಪವನ್ನು ವಿರೋಧಿಸಿ ಪಾಕಿಸ್ತಾನದ ಸೆನೆಟ್ ನಿರ್ಣಯ ಅಂಗೀಕರಿಸಿದೆ.
05:11 PM (IST) Feb 25
04:56 PM (IST) Feb 25
AI ಶೃಂಗಸಭೆಯಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 'ತುರ್ತು ಪರಿಸ್ಥಿತಿ'ಗೆ ಹೋಲಿಸಿ ತೀವ್ರವಾಗಿ ಟೀಕಿಸಿದ್ದಾರೆ. ಪೊಲೀಸರು 8 ಜನರನ್ನು ಬಂಧಿಸಿದ್ದರೆ, ರಾಹುಲ್ ಗಾಂಧಿ ಪ್ರತಿಭಟನಾಕಾರರನ್ನು 'ಬಬ್ಬರ್ ಶೇರ್ ಎಂದು ಹೊಗಳಿದ್ದಾರೆ.
04:50 PM (IST) Feb 25
ಐಡಿಎಫ್ಸಿ ಫಸ್ಟ್ ಬ್ಯಾಂಕ್ನ ಚಂಡೀಗಢ ಶಾಖೆಯಲ್ಲಿ ನಡೆದ ₹590 ಕೋಟಿ ವಂಚನೆ ಪ್ರಕರಣದಲ್ಲಿ, ಮಾಜಿ ಮ್ಯಾನೇಜರ್ ರಿಭವ್ ರಿಷಿ ತನ್ನ ಪತ್ನಿಯ ಕಂಪನಿಗೆ ಹಣ ವರ್ಗಾಯಿಸಿರುವುದು ಬೆಳಕಿಗೆ ಬಂದಿದೆ. ಹರಿಯಾಣ ಭ್ರಷ್ಟಾಚಾರ ವಿರೋಧಿ ದಳವು ರಿಷಿ, ಆತನ ಪತ್ನಿ ಸೇರಿದಂತೆ ನಾಲ್ವರನ್ನು ಬಂಧಿಸಿದೆ,
04:30 PM (IST) Feb 25
ಶಿವಮೊಗ್ಗದಲ್ಲಿ ಸ್ನೇಹಿತನನ್ನು ರಕ್ಷಿಸಲು ಹೋಗಿ ಅಪ್ರಾಪ್ತರಿಂದ ಹ*ತ್ಯೆಯಾದ ಸಂಕೇತ್ ಘಟನೆಯು, ಅಪ್ರಾಪ್ತ ಅಪರಾಧಿಗಳಿಗೆ ನಮ್ಮ ಕಾನೂನಿನಲ್ಲಿ ಸಿಗುವ ರಕ್ಷಣೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಗಂಭೀರ ಅಪರಾಧ ಎಸಗಿದರೂ ಅಪ್ರಾಪ್ತರಿಗೆ ಸಿಗುವ ಕಾನೂನು ವಿನಾಯಿತಿ ಮತ್ತು ಅದರ ದುರ್ಬಳಕೆಯ ಕರಾಳ ಸತ್ಯ ಇಲ್ಲಿದೆ
04:22 PM (IST) Feb 25
Keralam Rename ಕೇರಳ ರಾಜ್ಯದ ಹೆಸರನ್ನು 'ಕೇರಳಂ' ಎಂದು ಬದಲಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಮಲಯಾಳಂ ಭಾಷೆಯ ಮೂಲ ಹೆಸರಿಗೆ ಮನ್ನಣೆ ನೀಡುವ ಈ ಪ್ರಸ್ತಾಪಕ್ಕೆ ಸಂಸತ್ತಿನ ಅನುಮೋದನೆ ಇನ್ನೂ ಬಾಕಿ ಇದೆ. ಈ ಮೂಲಕ ರಾಜ್ಯದ ಭಾಷಾ ಪರಂಪರೆಗೆ ಗೌರವ ಸಲ್ಲಿಸಲಾಗಿದೆ.
04:04 PM (IST) Feb 25
Former Jharkhand CM Champai Soren’s Grandson Found Dead in Manali ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ಅವರ 19 ವರ್ಷದ ಮೊಮ್ಮಗ ವೀರ್ ಸೊರೇನ್, ಸ್ನೇಹಿತರೊಂದಿಗೆ ಮನಾಲಿಗೆ ಪ್ರವಾಸಕ್ಕೆ ತೆರಳಿದ್ದಾಗ ಹೋಂಸ್ಟೇಯೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
02:56 PM (IST) Feb 25
01:47 PM (IST) Feb 25
01:32 PM (IST) Feb 25
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ತುಪ್ಪದ ಇಡ್ಲಿಗೆ ₹315 ವಿಧಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ದುಬಾರಿ ಬೆಲೆಯ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಕೆಲವರು ಇದನ್ನು ಅನಿವಾರ್ಯ ಎಂದರೆ, ಕೆಲವರು ಇದು ಮೋಸ ಎಂದು ವಾದಿಸುತ್ತಿದ್ದಾರೆ
12:06 PM (IST) Feb 25
ಟಿ20 ವಿಶ್ವಕಪ್ನಲ್ಲಿ ನಿರೀಕ್ಷಿಸಲಾಗುತ್ತಿದ್ದ ಭಾರತ-ಪಾಕಿಸ್ತಾನ ಸೆಮಿಫೈನಲ್ ಪಂದ್ಯವು ನಡೆಯುವುದಿಲ್ಲ. ಸೂಪರ್ 8 ಹಂತದ ಸದ್ಯದ ಸ್ಥಿತಿಗತಿ ಮತ್ತು ಐಸಿಸಿ ನಿಯಮಗಳ ಪ್ರಕಾರ, ಎರಡೂ ತಂಡಗಳು ಸೆಮಿಫೈನಲ್ನಲ್ಲಿ ಮುಖಾಮುಖಿಯಾಗುವ ಗಣಿತದ ಸಾಧ್ಯತೆಗಳು ಮುಗಿದುಹೋಗಿವೆ.
11:34 AM (IST) Feb 25
ಕಲ್ಲಿದ್ದಲು ಉದ್ಯಮಿಯಿಂದ 30 ಸಾವಿರ ರೂ. ಲಂಚ ಪಡೆದ ಆರೋಪದ ಮೇಲೆ ಗಣಿ ಉಪ ನಿರ್ದೇಶಕ ಮೊಹಂತಿ ಅವರನ್ನು ಬಂಧಿಸಲಾಗಿದೆ. ಬಂಧನದ ನಂತರ, ವಿಜಿಲೆನ್ಸ್ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಅವರ ಮನೆಯಲ್ಲಿ ಸುಮಾರು 4 ಕೋಟಿ ರೂ. ನಗದು, 130 ಗ್ರಾಂ ಚಿನ್ನ ಮತ್ತು ಎರಡು ಐಷಾರಾಮಿ ಮನೆಗಳು ಪತ್ತೆಯಾಗಿವೆ.
11:27 AM (IST) Feb 25
ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಭಾಗವಾಗಿರುವ ರಿಂಕು ಸಿಂಗ್, ಇದೀಗ ದಿಢೀರ್ ಎನ್ನುವಂತೆ ಭಾರತ ತಂಡ ತೊರೆದು ಮನೆಗೆ ವಾಪಾಸ್ಸಾಗಿದ್ದಾರೆ. ಅವರ ತಂದೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಈ ಕುರಿತಾದ ಮಹತ್ವದ ಅಪ್ಡೇಟ್ಸ್ ಇಲ್ಲಿದೆ ನೋಡಿ.
10:54 AM (IST) Feb 25
10:02 AM (IST) Feb 25
ಟಿ20 ವಿಶ್ವಕಪ್ ಸೂಪರ್ 8 ಹಂತದಲ್ಲಿ ಜಿಂಬಾಬ್ವೆ ವಿರುದ್ಧ ಭಾರತ ಸೆಣಸಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಬದಲಾವಣೆ ಖಚಿತ. ತಿಲಕ್ ಮತ್ತು ಅಭಿಷೇಕ್ ಫಾರ್ಮ್ನಲ್ಲಿ ಇಲ್ಲ. ಯಾರನ್ನು ಕೈಬಿಡುತ್ತಾರೆ ಎನ್ನುವ ಕುತೂಹಲವಿದೆ. ಈ ನಡುವೆ ಇರ್ಫಾನ್ ಪಠಾಣ್ ತಮ್ಮ ಆಯ್ಕೆಯ ಪ್ಲೇಯಿಂಗ್ XI ಪ್ರಕಟಿಸಿದ್ದಾರೆ.
09:30 AM (IST) Feb 25
ಟಿ20 ವಿಶ್ವಕಪ್ನ ಸೂಪರ್-8 ಹಂತದ ನಿರ್ಣಾಯಕ ಪಂದ್ಯಕ್ಕೂ ಮುನ್ನ, ಸ್ಟಾರ್ ಫಿನಿಶರ್ ರಿಂಕು ಸಿಂಗ್ ಕುಟುಂಬದ ತುರ್ತು ಪರಿಸ್ಥಿತಿಯಿಂದಾಗಿ ತವರಿಗೆ ಮರಳಿದ್ದಾರೆ. ಜಿಂಬಾಬ್ವೆ ವಿರುದ್ಧದ 'ಮಾಡು ಇಲ್ಲವೇ ಮಡಿ' ಪಂದ್ಯದಲ್ಲಿ ಅವರ ಅನುಪಸ್ಥಿತಿಯು ತಂಡಕ್ಕೆ ಹಿನ್ನಡೆಯಾಗಿದೆ.
08:58 AM (IST) Feb 25
ಟಿ20 ವಿಶ್ವಕಪ್ ಇತಿಹಾಸದಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ, ಪಾಕಿಸ್ತಾನದ ಬಾಬರ್ ಅಜಂ ಅತಿ ಕಡಿಮೆ ಸ್ಟ್ರೈಕ್ ರೇಟ್ ಹೊಂದಿದ ಆಟಗಾರ ಎಂಬ ಕೆಟ್ಟ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 24 ಎಸೆತಗಳಲ್ಲಿ 25 ರನ್ ಗಳಿಸಿದ ಅವರ ನಿಧಾನಗತಿಯ ಆಟವು ಈ ದಾಖಲೆಗೆ ಕಾರಣವಾಯಿತು.
07:50 AM (IST) Feb 25
ಕೇರಳ ವಿಧಾನಸಭೆಯು ರಾಜ್ಯದ ಮೂಲ ನಿವಾಸಿಗಳಿಗಾಗಿ 'ನೇಟಿವಿಟಿ ಕಾರ್ಡ್' ಮಸೂದೆಗೆ ಅನುಮೋದನೆ ನೀಡಿದ್ದು, ಇದು ದೇಶದಲ್ಲೇ ಮೊದಲ ಇಂತಹ ವ್ಯವಸ್ಥೆಯಾಗಿದೆ. ಈ ಅಧಿಕೃತ ಗುರುತಿನ ಚೀಟಿಯು ಕೇರಳಿಗರಿಗೆ ಸರ್ಕಾರದ ವಿವಿಧ ಸೇವೆಗಳು ಮತ್ತು ಸೌಲಭ್ಯಗಳನ್ನು ಪಡೆಯಲು ಸಹಾಯ ಮಾಡುತ್ತದೆ.