LIVE NOW
Published : Apr 23, 2026, 06:16 AM ISTUpdated : Apr 23, 2026, 09:07 AM IST

India Latest News Live: ಟ್ರಂಪ್‌ ಸರ್ಕಾರದಿಂದ ತೆರಿಗೆ ಹಣ ವಾಪಸ್‌ ಪ್ರಕ್ರಿಯೆ ಶುರು, 1.12 ಲಕ್ಷ ಕೋಟಿ ರು. ಭಾರತದ ರಫ್ತುದಾರರಿಗೆ ರೀಫಂಡ್‌?

ಸಾರಾಂಶ

ಕೋಲ್ಕತಾ: ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯೀಗ ಚುನಾವಣಾ ಕಾಳಗದ ಶಸ್ತ್ರವಾಗಿ ಬಳಕೆಯಾಗಲು ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬೀದಿ ಬದಿಯ ಅಂಗಡಿಯೊಂದರಿಂದ ಝಾಲ್ಮುರಿ (ಚುರುಮುರಿ) ಖರೀದಿಸಿ ತಿಂದ ಬೆನ್ನಲ್ಲೇ, ‘ಬೇಕಿದ್ದರೆ ನಾನು ಮೀನಿನ ಅಡುಗೆ ಮಾಡಿ ಬಡಿಸುವೆ’ ಎಂದು ಸಿಎಂ ಮಮತಾ ಬ್ಯಾನರ್ಜಿ ಸವಾಲು ಹಾಕಿದ್ದಾರೆ.

‘ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಮಾಂಸಾಹಾರವನ್ನು ನಿಷೇಧಿಸುತ್ತಿದೆ’ ಎಂದು ಟಿಎಂಸಿ ಪ್ರಚಾರ ಮಾಡುತ್ತಿದ್ದು, ಅದಕ್ಕೆ ಪ್ರತಿಯಾಗಿ ತಾವು ಮಾಂಸದ ವಿರೋಧಿಗಳಲ್ಲ ಎಂದು ಬಿಂಬಿಸಿಕೊಳ್ಳಲು ಬಿಜೆಪಿಗರು ಮೀನು ಹಿಡಿದು ಪ್ರಚಾರ ಮಾಡಿದ್ದರು. ಇದಕ್ಕೆ ಸಡ್ಡು ಹೊಡೆದಿರುವ ಮಮತಾ, ‘ಮೋದಿಯವರಿಗೆ ಮೀನು ತಿನ್ನಬೇಕು ಅನ್ನಿಸಿದರೆ ನಾನೇ ಕೈಯ್ಯಾರೆ ಅಡುಗೆ ಮಾಡುವೆ’ ಎಂದು ಹೇಳಿದ್ದಾರೆ. ಈ ಮೊದಲು ಪ್ರಧಾನಿ ಝಾಲ್ಮುರಿ ತಿಂದದ್ದನ್ನು ಮಮತಾ ನಾಟಕ ಎಂದಿದ್ದರು.

 

09:07 AM (IST) Apr 23

ಟ್ರಂಪ್‌ ಸರ್ಕಾರದಿಂದ ತೆರಿಗೆ ಹಣ ವಾಪಸ್‌ ಪ್ರಕ್ರಿಯೆ ಶುರು, 1.12 ಲಕ್ಷ ಕೋಟಿ ರು. ಭಾರತದ ರಫ್ತುದಾರರಿಗೆ ರೀಫಂಡ್‌?

ಅಮೆರಿಕದ ಸುಪ್ರೀಂ ಕೋರ್ಟ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿದ್ದ ಆಮದು ಸುಂಕವನ್ನು ಅಕ್ರಮವೆಂದು ಘೋಷಿಸಿದೆ. ಈ ತೀರ್ಪಿನಿಂದಾಗಿ, ಅಮೆರಿಕವು ಸಂಗ್ರಹಿಸಿದ್ದ 15.55 ಲಕ್ಷ ಕೋಟಿ ರು. ತೆರಿಗೆಯನ್ನು ಮರುಪಾವತಿಸಬೇಕಾಗಿದ್ದು, ಇದರಲ್ಲಿ ಭಾರತದಿಂದ ಆಮದಾದ ವಸ್ತುಗಳ ಮೇಲಿನ 1.12 ಲಕ್ಷ ಕೋಟಿ ರು. ಸೇರಿದೆ. 

Read Full Story

08:47 AM (IST) Apr 23

ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರೂ ಐಪಿಎಲ್‌ನಲ್ಲಿ ವಿಶೇಷ ದಾಖಲೆ ನಿರ್ಮಿಸಿದ ವೈಭವ್ ಸೂರ್ಯವಂಶಿ! ಮ್ಯಾಕ್ಸ್‌ವೆಲ್ ರೆಕಾರ್ಡ್ ನುಚ್ಚುನೂರು

ಲಖನೌ: 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ, ಐಪಿಎಲ್ ಇತಿಹಾಸದಲ್ಲಿ ಹೊಸದೊಂದು ಮೈಲಿಗಲ್ಲು ನೆಟ್ಟಿದ್ದಾರೆ. ಇದರ ಜತೆಗೆ ಆಸೀಸ್ ಮೂಲದ ದಿಗ್ಗಜ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಹೆಸರಿನಲ್ಲಿದ್ದ ದಾಖಲೆ ನುಚ್ಚುನೂರು ಮಾಡಿದ್ದಾರೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.

Read Full Story

08:30 AM (IST) Apr 23

Assembly Elections - ಇಂದು ಪಶ್ಚಿಮ ಬಂಗಾಳದಲ್ಲಿ ಹಂತ-1, ತಮಿಳುನಾಡು ಚುನಾವಣೆ

ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿದ್ದು, ಪ್ರಮುಖ ರಾಜಕೀಯ ಪಕ್ಷಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಈ ನಡುವೆ, ಎರಡೂ ರಾಜ್ಯಗಳಲ್ಲಿ ಚುನಾವಣಾ ಅಕ್ರಮಕ್ಕೆ ಬಳಸಲು ಯತ್ನಿಸಿದ 2334 ಕೋಟಿ ರೂ. ಮೌಲ್ಯದ ನಗದು ಮತ್ತು ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
Read Full Story

08:04 AM (IST) Apr 23

ಐಪಿಎಲ್ ಮಹಾಸಮರ - ಮುಂಬೈ ಎದುರು ಧೋನಿ ಈ ಸೀಸನ್‌ನಲ್ಲಿ ಮೊದಲ ಸಲ ಕಣಕ್ಕೆ?

ಐಪಿಎಲ್‌ನಲ್ಲಿ ತಲಾ 5 ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ಗುರುವಾರ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಈ ಬಾರಿ 6 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಗೆದ್ದಿದ್ದು, ಪ್ರಮುಖ ಆಟಗಾರರಾದ ಎಂ.ಎಸ್. ಧೋನಿ ಮತ್ತು ರೋಹಿತ್ ಶರ್ಮಾ ಅವರ ಲಭ್ಯತೆಯ ಬಗ್ಗೆ ಕುತೂಹಲ ಮೂಡಿದೆ.
Read Full Story

07:26 AM (IST) Apr 23

IPL 2026 - ನಿನ್ನೆ ನಡೆದ ರಾಜಸ್ಥಾನ ರಾಯಲ್ಸ್ - ಲಖನೌ ಸೂಪರ್ ಜೈಂಟ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ರಾಜಸ್ಥಾನ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಲಖನೌ ತಂಡ 40 ರನ್‌ಗಳಿಂದ ಪರಾಭವಗೊಂಡಿತು. ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಬ್ಯಾಟಿಂಗ್ ವೈಫಲ್ಯದಿಂದಾಗಿ ತಂಡ ಸತತ 4ನೇ ಸೋಲು ಅನುಭವಿಸಿತು. ಮಿಚೆಲ್‌ ಮಾರ್ಷ್‌ ಅವರ ಏಕಾಂಗಿ ಹೋರಾಟ ವ್ಯರ್ಥವಾಯಿತು.
Read Full Story

More Trending News