Published : Apr 23, 2026, 06:16 AM ISTUpdated : Apr 23, 2026, 09:45 PM IST

India Latest News Live: ಮೊದಲ ಚಿತ್ರದಲ್ಲೇ ಹೀರೋಯಿನ್‌ಗೆ ಸ್ವಿಮ್‌ಸೂಟ್‌ ಹಾಕಿಸಿದ್ದು ಯಾಕೆ? ಸೀಕ್ರೆಟ್ ಬಿಚ್ಚಿಟ್ಟ ನಿರ್ದೇಶಕ!

ಸಾರಾಂಶ

ಕೋಲ್ಕತಾ: ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯೀಗ ಚುನಾವಣಾ ಕಾಳಗದ ಶಸ್ತ್ರವಾಗಿ ಬಳಕೆಯಾಗಲು ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬೀದಿ ಬದಿಯ ಅಂಗಡಿಯೊಂದರಿಂದ ಝಾಲ್ಮುರಿ (ಚುರುಮುರಿ) ಖರೀದಿಸಿ ತಿಂದ ಬೆನ್ನಲ್ಲೇ, ‘ಬೇಕಿದ್ದರೆ ನಾನು ಮೀನಿನ ಅಡುಗೆ ಮಾಡಿ ಬಡಿಸುವೆ’ ಎಂದು ಸಿಎಂ ಮಮತಾ ಬ್ಯಾನರ್ಜಿ ಸವಾಲು ಹಾಕಿದ್ದಾರೆ.

‘ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಮಾಂಸಾಹಾರವನ್ನು ನಿಷೇಧಿಸುತ್ತಿದೆ’ ಎಂದು ಟಿಎಂಸಿ ಪ್ರಚಾರ ಮಾಡುತ್ತಿದ್ದು, ಅದಕ್ಕೆ ಪ್ರತಿಯಾಗಿ ತಾವು ಮಾಂಸದ ವಿರೋಧಿಗಳಲ್ಲ ಎಂದು ಬಿಂಬಿಸಿಕೊಳ್ಳಲು ಬಿಜೆಪಿಗರು ಮೀನು ಹಿಡಿದು ಪ್ರಚಾರ ಮಾಡಿದ್ದರು. ಇದಕ್ಕೆ ಸಡ್ಡು ಹೊಡೆದಿರುವ ಮಮತಾ, ‘ಮೋದಿಯವರಿಗೆ ಮೀನು ತಿನ್ನಬೇಕು ಅನ್ನಿಸಿದರೆ ನಾನೇ ಕೈಯ್ಯಾರೆ ಅಡುಗೆ ಮಾಡುವೆ’ ಎಂದು ಹೇಳಿದ್ದಾರೆ. ಈ ಮೊದಲು ಪ್ರಧಾನಿ ಝಾಲ್ಮುರಿ ತಿಂದದ್ದನ್ನು ಮಮತಾ ನಾಟಕ ಎಂದಿದ್ದರು.

 

09:45 PM (IST) Apr 23

ಮೊದಲ ಚಿತ್ರದಲ್ಲೇ ಹೀರೋಯಿನ್‌ಗೆ ಸ್ವಿಮ್‌ಸೂಟ್‌ ಹಾಕಿಸಿದ್ದು ಯಾಕೆ? ಸೀಕ್ರೆಟ್ ಬಿಚ್ಚಿಟ್ಟ ನಿರ್ದೇಶಕ!

ನಿರ್ದೇಶಕ ರಾಘವೇಂದ್ರ ರಾವ್ ತಮ್ಮ ಸಿನಿಮಾದಲ್ಲಿ ನಾಯಕಿಯೊಬ್ಬರಿಗೆ ಮೊದಲ ಚಿತ್ರದಲ್ಲೇ ಸ್ವಿಮ್‌ಸೂಟ್‌ ಹಾಕಿಸಿದ್ದರು. ಚೊಚ್ಚಲ ಸಿನಿಮಾದಲ್ಲೇ ಹೀಗೆ ತೋರಿಸಬೇಕಾದ ಅನಿವಾರ್ಯತೆ ಏನಿತ್ತು ಎಂಬುದನ್ನು ಅವರೇ ವಿವರಿಸಿದ್ದಾರೆ.

Read Full Story

09:20 PM (IST) Apr 23

ಅಕೀರಾ ನಂದನ್ ಸಿನಿಮಾ ಎಂಟ್ರಿಯಲ್ಲಿ ಟ್ವಿಸ್ಟ್ - ಪವನ್ ಫ್ಯಾನ್ಸ್‌ಗೆ ಶಾಕ್ ಕೊಟ್ಟ ಮಾಜಿ ಪತ್ನಿ ರೇಣು ದೇಸಾಯಿ!

ಪವನ್ ಕಲ್ಯಾಣ್ ಅವರ ಉತ್ತರಾಧಿಕಾರಿಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಅಕೀರಾ ನಂದನ್ ಹೀರೋ ಆಗಿ ಎಂಟ್ರಿ ಕೊಡುವುದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇಂತಹ ಸಮಯದಲ್ಲಿ ರೇಣು, ಪವನ್ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದ್ದಾರೆ.

Read Full Story

09:09 PM (IST) Apr 23

ಬಂಗಾಳದಲ್ಲಿ ಶೇ.92% ಮತದಾನ ಸ್ವತಂತ್ರ ಭಾರತದಲ್ಲೇ ಮೊದಲು, ಮೋದಿ ಎಚ್ಚರಿಕೆಗೆ ದೀದಿ ತಿರುಗೇಟು

ಬಂಗಾಳದಲ್ಲಿ ಶೇ.92% ಮತದಾನ ಸ್ವತಂತ್ರ ಭಾರತದಲ್ಲೇ ಮೊದಲು, ಮೋದಿ ಎಚ್ಚರಿಕೆಗೆ ದೀದಿ ತಿರುಗೇಟು, ಇದು ಟಿಎಂಸಿ ಎಕ್ಸ್‌ಪೈರ್ ಡೇಟ್ ಸೂಚನೆ ಎಂದು ಮೋದಿ ಹೇಳಿದ್ದರೆ, ಬಿಜೆಪಿ ಅಂತ್ಯ ಇಲ್ಲಿಂದಲೆ ಎಂದು ದೀದಿ ಹೇಳಿದ್ದಾರೆ.

Read Full Story

08:37 PM (IST) Apr 23

Lip Lock Scene - ನಟನ ಜೊತೆ ಲಿಪ್‌ಲಾಕ್‌ - ಬಿಗ್ ಬಾಸ್ ನಟಿಯ ವಿಡಿಯೋ ವೈರಲ್!

ಕಿರುತೆರೆಯಲ್ಲಿ ನಿರೂಪಕಿಯಾಗಿ ವೃತ್ತಿ ಆರಂಭಿಸಿದ ಮಹೇಶ್ವರಿ, ತಮಗಾಗಿಯೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡರು. ಆರಂಭದಲ್ಲಿ ಸನ್ ಟಿವಿಯಲ್ಲಿ, ನಂತರ ಜೀ ತಮಿಳು ವಾಹಿನಿಯಲ್ಲಿ ಹಲವು ಶೋಗಳನ್ನು ನಿರೂಪಣೆ ಮಾಡಿದರು.

Read Full Story

08:37 PM (IST) Apr 23

37ರ ವಿಚ್ಚೇದಿತನಿಗೆ ಬೇಕಿದೆ 30ರ ಹರೆಯದ ಬ್ರಾಹ್ಮಣ ವರ್ಜಿನ್ ಕನ್ಯೆ, ಕಿಚ್ಚು ಹಚ್ಚಿದ ವರನ ಬೇಡಿಕೆ

37ರ ವಿಚ್ಚೇದಿತನಿಗೆ ಬೇಕಿದೆ 30ರ ಹರೆಯದ ಬ್ರಾಹ್ಮಣ ವರ್ಜಿನ್ ಕನ್ಯೆ, ಕಿಚ್ಚು ಹಚ್ಚಿದ ವರನ ಬೇಡಿಕೆ, ಮ್ಯಾಟ್ರಿಮೋನಿ ಸೈಟ್‌ನಲ್ಲಿನ ವರನ ಬೇಡಿಕೆಗೆ ಇದೀಗ ಭಾರಿ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ವಿವಾದ ಆಗಿದ್ದೇಕೆ?

 

Read Full Story

07:59 PM (IST) Apr 23

ಬಾಲಿವುಡ್‌ನ 3 ಖಾನ್‌ಗಳ ಬಾಕ್ಸ್‌ ಆಫೀಸ್ ದಾಖಲೆಯೂ ಪುಡಿಪುಡಿ; ಹೊಸ ಕಿಂಗ್ ಆದ ರಣವೀರ್ ಸಿಂಗ್!

ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಇದೀಗ ಬಂದಿರುವ ಹೊಸ ವರದಿಗಳ ಪ್ರಕಾರ, ಈ ಚಿತ್ರ ವಿದೇಶಿ ಮಾರುಕಟ್ಟೆಯಲ್ಲಿ, ಅದರಲ್ಲೂ ಯುಕೆನಲ್ಲಿ ಮೂವರು ಖಾನ್‌ಗಳ ದಾಖಲೆ ಮುರಿದು ಹೊಸ ಇತಿಹಾಸ ಬರೆದಿದೆ.

Read Full Story

07:34 PM (IST) Apr 23

Gas Cylinder - ಗ್ಯಾಸ್ ಸಿಲಿಂಡರ್ ರೆಗ್ಯುಲೇಟರ್ ಬೇಗ ಫಿಟ್ ಆಗ್ತಿಲ್ವಾ? ಈ ಸಿಂಪಲ್ ಟ್ರಿಕ್ ಬಳಸಿ ನೋಡಿ!

ಗ್ಯಾಸ್ ಸಿಲಿಂಡರ್ ಬದಲಾಯಿಸುವುದು ಈಗ ತುಂಬಾ ಸುಲಭ! ರೆಗ್ಯುಲೇಟರ್ ಸರಿಯಾಗಿ ಕೂರದಿದ್ದರೂ ಅಥವಾ ಗ್ಯಾಸ್ ಲೀಕ್ ಆಗುವ ಭಯವಿದ್ದರೂ ಚಿಂತೆ ಬೇಡ. ತೆಂಗಿನೆಣ್ಣೆಯ ಈ ಸಣ್ಣ ಟ್ರಿಕ್ ಬಳಸಿ, ಸರಿಯಾದ ಕ್ರಮದಲ್ಲಿ ಅದನ್ನು ಹೇಗೆ ಫಿಕ್ಸ್ ಮಾಡುವುದು ಎಂದು ತಿಳಿಯೋಣ.

Read Full Story

07:13 PM (IST) Apr 23

ಎರಡು ನಿಮಿಷ ಕ್ಯೂನಲ್ಲಿ ನಿಲ್ಲೋಕಾಗಲ್ವಾ?' ವೋಟ್ ಹಾಕುವಾಗ ಲೈನ್ ಜಂಪ್ ಮಾಡಿದ ಕಮಲ್ ಹಾಸನ್‌ಗೆ ಕ್ಲಾಸ್

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವೋಟ್ ಹಾಕಲು ಬಂದಿದ್ದ ನಟ ಕಮಲ್ ಹಾಸನ್ ಮತ್ತು ಅವರ ಮಗಳು ಶ್ರುತಿ ಹಾಸನ್, ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ಬೂತ್‌ಗೆ ಹೋದರು ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

Read Full Story

07:10 PM (IST) Apr 23

Jawan 2 - ಬಾಕ್ಸ್‌ ಆಫೀಸ್‌ಗೆ ಮತ್ತೆ ಶಾರುಖ್ ಖಾನ್ ಲಗ್ಗೆ - 1000 ಕೋಟಿ ಬಾಚಿದ ಚಿತ್ರದ ಸೀಕ್ವೆಲ್‌ ಕನ್ಫರ್ಮ್!

'ಜೀರೋ' ಸಿನಿಮಾ ಫ್ಲಾಪ್ ಆದ ನಂತರ ಶಾರುಖ್ ಖಾನ್ ತುಂಬಾ ಯೋಚಿಸಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಸದ್ಯ ಅವರು ತಮ್ಮ 'ಕಿಂಗ್' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ..

Read Full Story

06:54 PM (IST) Apr 23

'ಪೇಟ್ರಿಯಾಟ್' ಸಿನಿಮಾಗೆ ಮೋಹನ್‌ಲಾಲ್ ಯಾಕೆ? ಅವರ ಹೆಸರು ಹೇಳಿದ್ದೇ ನಾನು - ಮಮ್ಮುಟ್ಟಿ

18 ವರ್ಷಗಳ ನಂತರ ಮಮ್ಮುಟ್ಟಿ ಮತ್ತು ಮೋಹನ್‌ಲಾಲ್ ಒಟ್ಟಿಗೆ ನಟಿಸುತ್ತಿರುವ 'ಪೇಟ್ರಿಯಾಟ್' ಚಿತ್ರಕ್ಕೆ ಮೋಹನ್‌ಲಾಲ್ ಆಯ್ಕೆಯಾಗಿದ್ದು ಹೇಗೆ ಎಂಬ ಸೀಕ್ರೆಟ್ ಅನ್ನು ಮಮ್ಮುಟ್ಟಿ ಅವರೇ ರಿವೀಲ್ ಮಾಡಿದ್ದಾರೆ.

Read Full Story

06:41 PM (IST) Apr 23

ಕಳೆದು ಹೋದ ತಾಳಿಗೆ ದೇವರಲ್ಲಿ ಪ್ರಾರ್ಥನೆ, ಮರು ದಿನವೇ ಚಪ್ಪಲಿಯಲ್ಲಿ ಪ್ರತ್ಯಕ್ಷವಾಯ್ತು ಚಿನ್ನ

ಕಳೆದು ಹೋದ ತಾಳಿಗೆ ದೇವರಲ್ಲಿ ಪ್ರಾರ್ಥನೆ, ಮರು ದಿನವೇ ಚಪ್ಪಲಿಯಲ್ಲಿ ಪ್ರತ್ಯಕ್ಷವಾಯ್ತು ಚಿನ್ನ, ಹುಡುಕಾಟಿ ಸುಸ್ತಾಗಿದ್ದ ಕುಟುಂಬ ಕೊನೆಗೆ ನೋವಿನಲ್ಲಿ ದೇವರಲ್ಲಿ ಬೇಡಿಕೊಂಡಿತ್ತು. ಮರು ದಿನವೇ ಚಿನ್ನ ಪ್ರತ್ಯಕ್ಷವಾದ ಘಟನೆ ನಡೆದಿದೆ.

Read Full Story

05:55 PM (IST) Apr 23

ಸಾಲಬಾಧೆ - ಮುದ್ದಿನ ಶ್ವಾನಕ್ಕೆ ವಿಷನೀಡಿ ತಾನು ಸಾವಿಗೆ ಶರಣಾದ 33 ವರ್ಷದ ಪ್ರಾಪರ್ಟಿ ಡೀಲರ್

ಉತ್ತರ ಪ್ರದೇಶದ ಬರೇಲಿಯಲ್ಲಿ, ತೀವ್ರ ಸಾಲಬಾಧೆಯಿಂದ ಬಳಲುತ್ತಿದ್ದ 33 ವರ್ಷದ ಪ್ರಾಪರ್ಟಿ ಡೀಲರ್, ತನ್ನ ಮುದ್ದಿನ ಲ್ಯಾಬ್ರಡಾರ್ ನಾಯಿಗೆ ವಿಷವಿಕ್ಕಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಸಾವಿನ ನಂತರ ನಾಯಿಯನ್ನು ಯಾರು ನೋಡಿಕೊಳ್ಳುತ್ತಾರೆಂಬ ಚಿಂತೆಯಿಂದ ಈ ಕೃತ್ಯ ಎಸಗಿದ್ದಾರೆ

Read Full Story

05:28 PM (IST) Apr 23

ಇಂದಿನ ರೇಟ್ ₹1.53 ಲಕ್ಷ, ಮುಂದೆ..? ಬಾಬಾ ವಂಗಾ ಭವಿಷ್ಯ ಕೇಳಿದ್ರೆ ನಿಮಗೂ ಅಚ್ಚರಿಯಾಗತ್ತೆ!

Baba Vanga Gold Price Prediction: ಇವತ್ತು ಗುರುವಾರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಇದೇ ಖುಷಿಯಲ್ಲಿ ನೀವಿದ್ರೆ, ಸ್ವಲ್ಪ ತಾಳಿ. ಈ ಖುಷಿ ಹೆಚ್ಚು ದಿನ ಇರಲ್ಲ ಅನ್ನೋದು ಬಲ್ಗೇರಿಯಾದ ಖ್ಯಾತ ಭವಿಷ್ಯಗಾರ್ತಿ ಬಾಬಾ ವಂಗಾ ಅವರ ಭವಿಷ್ಯವಾಣಿಯ ಎಚ್ಚರಿಕೆ. ಏನಿದು ವಾರ್ನಿಂಗ್? ಓದಿ.

Read Full Story

05:10 PM (IST) Apr 23

ಕೇವಲ ₹80ಕ್ಕೆ ತಯಾರು ಮಾಡಿ, ₹800ಕ್ಕೆ ಮಾರಾಟ ಮಾಡಿ! ₹5000ದಲ್ಲೇ ಆರಂಭಿಸಿ ಈ ಸೂಪರ್ ಬ್ಯುಸಿನೆಸ್

ಬೆಂಗಳೂರು: ಇತ್ತೀಚೆಗೆ ಎಲ್ಲರೂ ತಮ್ಮ ಮನೆ-ಗಾರ್ಡನ್‌ಗಳನ್ನು ಸ್ಟೈಲಿಶ್ ಆಗಿ ಇಡಲು ಬಯಸುತ್ತಾರೆ. ನೀವೂ ಕೂಡ ಸುಂದರವಾದ ಸಿಮೆಂಟ್ ಕುಂಡಗಳನ್ನು (ಕಾಂಕ್ರೀಟ್ ಪ್ಲಾಂಟರ್ಸ್) ನೋಡಿರುತ್ತೀರಿ. ಕೇವಲ ₹5000 ದಲ್ಲಿ ನಿಮ್ಮ ಮನೆಯ ಟೆರೇಸ್ ಅಥವಾ ಬಾಲ್ಕನಿಯಿಂದಲೇ ಈ ಬ್ಯುಸಿನೆಸ್ ಆರಂಭಿಸಬಹುದು.

 

Read Full Story

05:01 PM (IST) Apr 23

'ಎಷ್ಟು ಜನರ ಕನಸು ಹಾಳಾಯ್ತು?' - ಜನ ನಾಯಗನ್ ಸಿನಿಮಾ ಲೀಕ್ ಬಗ್ಗೆ ಕೊನೆಗೂ ಮೌನ ಮುರಿದ ನಟಿ ಮಮಿತಾ

ನಟ ವಿಜಯ್ ಅಭಿನಯದ 'ಜನ ನಾಯಗನ್' ಸಿನಿಮಾ ರಿಲೀಸ್‌ಗೂ ಮುನ್ನವೇ ಲೀಕ್ ಆಗಿದ್ದರ ಬಗ್ಗೆ ನಟಿ ಮಮಿತಾ ಬೇಸರ ವ್ಯಕ್ತಪಡಿಸಿದ್ದಾರೆ. ಇದು ಅದೆಷ್ಟೋ ಜನರ ಕನಸನ್ನು ಮುರಿದಿದೆ ಎಂದು ಅವರು ಹೇಳಿದ್ದಾರೆ.

Read Full Story

04:58 PM (IST) Apr 23

ತನಗೆ ಡಿವೋರ್ಸ್ ಆಗಿದ್ರೂ ಮರು ಮದುವೆಗೆ ಕನ್ಯೆಯೇ ಬೇಕು - 37 ವರ್ಷದ ಐಐಟಿಯನ್ ಬೇಡಿಕೆಗೆ ಭಾರಿ ಆಕ್ರೋಶ

ತಮಗೆ ಮದುವೆಯಾಗಿ ವಿಚ್ಛೇದನವಾಗಿದ್ದರೂ ಕೆಲವು ಪುರುಷರರಿಗೆ ಮರುಮದುವೆಗೆ ಇನ್ನೂ ಮದುವೆಯಾಗದ ಕನ್ಯೆಯಾಗಿರುವ ಹುಡುಗಿಯೇ ಬೇಕಂತೆ. ಇದನ್ನು ನಾನು ಹೇಳಿರೋದಲ್ಲ, ಒಂದು ಆನ್‌ಲೈನ್ ವಿವಾಹ ವೇದಿಕೆಯ ಸಿಇಒ ಒಬ್ಬರು ಈ ವಿಚಾರವನ್ನು ಆನ್‌ಲೈನ್‌ನಲ್ಲಿ ಹೇಳಿಕೊಂಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Read Full Story

04:50 PM (IST) Apr 23

ಪರೀಕ್ಷೆಗ ಓದುತ್ತಿದ್ದ ಐಆರ್‌ಎಸ್ ಅಧಿಕಾರಿ ಪುತ್ರಿ ಮೇಲೆ ಅತ್ಯಾ**ರ, ಕೊಲೆ, ಬೆಚ್ಚಿಬಿದ್ದ ದೆಹಲಿ

ಪರೀಕ್ಷೆಗ ಓದುತ್ತಿದ್ದ ಐಆರ್‌ಎಸ್ ಅಧಿಕಾರಿ ಪುತ್ರಿ ಮೇಲೆ ಅತ್ಯಾ**ರ, ಕೊಲೆ, ಬೆಚ್ಚಿಬಿದ್ದ ದೆಹಲಿ, 19 ವರ್ಷದ ಆರೋಪಿ ಇದೇ ಅದಿಕಾರಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಇದೀಗ ಪ್ಲಾನ್ ಮಾಡಿ ಕೊಲೆ, ಅತ್ಯಾ**ರ ಹಾಗೂ ಕಳ್ಳತನ ನಡೆಸಿದ್ದಾನೆ.

Read Full Story

04:47 PM (IST) Apr 23

Viral Video - ಸಾರಿ ಅಣ್ಣಾ, ವೋಟ್ ಹಾಕೋಕೆ ಆಗ್ಲಿಲ್ಲ - ವಿಜಯ್‌ಗೆ ಮತ ಹಾಕಲಾಗದೆ ಕಣ್ಣೀರಿಟ್ಟ ಯುವತಿ!

ತಮಿಳುನಾಡಿನಲ್ಲಿ ಇಂದು ಮತದಾನದ ದಿನ. ತನ್ನ ನೆಚ್ಚಿನ ನಟ ವಿಜಯ್‌ಗೆ ವೋಟ್ ಹಾಕೋಕೆ ಆಗಲಿಲ್ಲ ಎಂದು ಯುವತಿಯೊಬ್ಬಳು ಕಣ್ಣೀರು ಹಾಕಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Read Full Story

03:24 PM (IST) Apr 23

ಮುಂಬೈ ಎದುರಿನ ಹೈವೋಲ್ಟೇಜ್ ಪಂದ್ಯಕ್ಕೂ ಮೊದಲು ಕೊನೆಯ ಕ್ಷಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಬಿಗ್ ಶಾಕ್..! ಈ ಕ್ರಿಕೆಟಿಗ ಆಡೋದೇ ಡೌಟ್

ಮುಂಬೈ: 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಂದು ತಲಾ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಇಲ್ಲಿನ ವಾಂಖೆಡೆ ಮೈದಾನದಲ್ಲಿ ಮುಖಾಮುಖಿಯಾಗುತ್ತಿವೆ. ಈ ಹೈವೋಲ್ಟೇಜ್‌ ಮ್ಯಾಚ್‌ಗೂ ಮುನ್ನ ಸಿಎಸ್‌ಕೆಗೆ ಬಿಗ್ ಶಾಕ್ ಎದುರಾಗಿದೆ. ಏನದು ನೋಡೋಣ ಬನ್ನಿ

 

Read Full Story

01:52 PM (IST) Apr 23

WTC ಫೈನಲ್ ಮೇಲೆ ಕಣ್ಣು, ಜಸ್ಪ್ರೀತ್ ಬುಮ್ರಾ ಬಗ್ಗೆ BCCI ಮಹತ್ವದ ನಿರ್ಧಾರ!

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವ ಗುರಿಯೊಂದಿಗೆ, ಬಿಸಿಸಿಐ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾರನ್ನು ಕೇವಲ ಟೆಸ್ಟ್ ಪಂದ್ಯಗಳಿಗೆ ಸೀಮಿತಗೊಳಿಸಲು ನಿರ್ಧರಿಸಿದೆ. ಮುಂಬರುವ 9 ಟೆಸ್ಟ್ ಪಂದ್ಯಗಳಲ್ಲಿ ಬುಮ್ರಾ ಆಡುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಆಟಗಾರರ ಒತ್ತಡವನ್ನು ನಿರ್ವಹಿಸುವುದು ಈ ರಣತಂತ್ರದ ಪ್ರಮುಖ ಭಾಗವಾಗಿದೆ.
Read Full Story

01:51 PM (IST) Apr 23

ಮದ್ವೆ ಶೂಟಿಂಗ್​ ಮಾಡುತ್ತಿದ್ದ ಫೋಟೋಗ್ರಾಫರ್​ ಮೇಲೆ ಹರಿದ ಕಾರು - ಭಯಾನಕ ವಿಡಿಯೋ ವೈರಲ್​

ಹರಿಯಾಣದ ಸಿರ್ಸಾದಲ್ಲಿ ಮದುವೆಯೊಂದರ ಚಿತ್ರೀಕರಣ ಮಾಡುತ್ತಿದ್ದ 22 ವರ್ಷದ ಫೋಟೋಗ್ರಾಫರ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ, ಛಾಯಾಗ್ರಾಹಕ 10 ಅಡಿ ಎತ್ತರಕ್ಕೆ ಹಾರಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದು, ಈ ದುರಂತದ ದೃಶ್ಯ ವೈರಲ್ ಆಗಿದೆ.
Read Full Story

01:31 PM (IST) Apr 23

ಮನೆಯಲ್ಲೇ ಕುಸಿದು ಬಿದ್ದು ಖ್ಯಾತ ನಟಿ ದಿವ್ಯಾಂಕ ಸಾವು

ಹರ್ಯಾಣದ ಖ್ಯಾತ ನಟಿ 30 ವರ್ಷದ ದಿವ್ಯಾಂಕ ಸಿರೋಹಿ ಅವರು ಗಾಜಿಯಾಬಾದ್‌ನ ಮನೆಯಲ್ಲಿ ಕುಸಿದು ಬಿದ್ದು ನಿಧನರಾಗಿದ್ದಾರೆ. ತಲೆಗೆ ಗಂಭೀರ ಗಾಯವಾದ ಕಾರಣ ಅವರು ಸಾವನ್ನಪ್ಪಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
Read Full Story

01:31 PM (IST) Apr 23

ನಕಲಿ ಚಿನ್ನ ಅಡವಿಡಲು ಬಂದ, ಸಿಬ್ಬಂದಿ ಪ್ರಶ್ನಿಸುತ್ತಿದ್ದಂತೆ ಓಟಕ್ಕಿತ್ತ ಖದೀಮ! ಈಗ ಆತ ಪೊಲೀಸರ ಅತಿಥಿ

ಕೋಯಿಕ್ಕೋಡ್‌: ಒಂದು ಕಡೆ ಮದುವೆ ಸಮಾರಂಭ. ಇನ್ನೊಂದು ಕಡೆ ಇರಾನ್-ಇಸ್ರೇಲ್ ಯುದ್ದದ ಕಾವು. ಇದೆಲ್ಲದರ ನಡುವೆ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಹೀಗಿರುವಾಗಲೇ ನಕಲಿ ಚಿನ್ನ ಅಡವಿಡಲು ಬಂದ ಆಸಾಮಿಯೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.

Read Full Story

01:25 PM (IST) Apr 23

ಪತಿ, ಬಾಯ್​ಫ್ರೆಂಡ್​ & ಶುಗರ್​ ಡ್ಯಾಡಿ - ಕುಟುಂಬದ ಗ್ರೀನ್​ ಸಿಗ್ನಲ್​! ರಿಯಲ್​ ಲೈಫ್​ ಭಯಂಕರ ಸ್ಟೋರಿ ಇವಳದ್ದು

ಖಾಸಗಿ ಪತ್ತೆದಾರರೊಬ್ಬರು ತಮ್ಮ ವೃತ್ತಿ ಜೀವನದ ವಿಚಿತ್ರ ಪ್ರಕರಣವೊಂದನ್ನು ಹಂಚಿಕೊಂಡಿದ್ದಾರೆ. ತನ್ನ ವಿವಾಹಿತ ಪ್ರೇಯಸಿಯ ಮೇಲೆ ಕಣ್ಣಿಡಲು ಬಂದ ಕ್ಲೈಂಟ್‌ನೊಬ್ಬನ ಕೋರಿಕೆ ಮೇರೆಗೆ ತನಿಖೆಗಿಳಿದಾಗ, ಆಧುನಿಕ ಸಮಾಜದ ಸಂಬಂಧಗಳ ಹಿಂದಿನ ಕರಾಳ ಸತ್ಯಗಳು ಮತ್ತು ಶ್ರೀಮಂತಿಕೆಯ ಮುಖವಾಡಗಳು ಒಂದೊಂದಾಗಿ ಬಯಲಾಗುತ್ತವೆ.
Read Full Story

01:25 PM (IST) Apr 23

ನಿಮ್ಮ ಬಾಯಿಗೂ ಟ್ರೈನಿಂಗ್ ಬೇಕು! ಇಂಥದ್ದೊಂದು ಹೇಳಿಕೆ ಕೊಟ್ಟಿದ್ಯಾಕೆ ಹಾಲಿವುಡ್ ಸ್ಟಾರ್ ಪ್ರಿಯಾಂಕಾ ಚೋಪ್ರಾ?!

ಮಾತನಾಡಲು ನಿಮಗೆ ಯಾರ ಅನುಮತಿಯೂ ಬೇಕಿಲ್ಲ. ನೀವು ತಯಾರಿ ನಡೆಸಿದ್ದರೆ, ಇಡೀ ಜಗತ್ತೇ ನಿಮ್ಮ ಮಾತು ಕೇಳಲು ಸಜ್ಜಾಗಿರುತ್ತದೆ. ನಂಬಿಕೆಯಿಲ್ಲದ ಮಾತುಗಳು ಅರ್ಥಹೀನ. ನಿಮ್ಮ ಮಾತುಗಳು ಮೊದಲು ನಿಮ್ಮನ್ನೇ ಒಪ್ಪಿಸುವಂತಿರಲಿ, ಆಗ ಅದು ಇಡೀ ಜಗತ್ತನ್ನೇ ಗೆಲ್ಲುತ್ತದೆ!

Read Full Story

12:45 PM (IST) Apr 23

ಪಾರ್ಸೆಲ್​ ಮಾಡ್ರಪ್ಪ ಎಂದ ನಾಯಿ - Rapido Driverಗೆ ಬಂತು ಶಾಕಿಂಗ್​ ಆರ್ಡರ್​- Video viral

ರ್ಯಾಪಿಡೋ ಚಾಲಕನೊಬ್ಬ ನಾಯಿಯನ್ನು ಪಾರ್ಸೆಲ್ ರೂಪದಲ್ಲಿ ಸಾಗಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಮುದ್ದಾದ ವಿಡಿಯೋಗೆ ನೆಟ್ಟಿಗರು ಖುಷಿಪಟ್ಟರೆ, ಕೆಲವರು ಇದು ಲೈಕ್ಸ್‌ಗಾಗಿ ಮಾಡಿದ ನಕಲಿ ವಿಡಿಯೋ ಇರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
Read Full Story

12:45 PM (IST) Apr 23

ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ರಿಯಲ್ ಲವ್ ಸ್ಟೋರಿ ಸೀಕ್ರೆಟ್ ರಿವೀಲ್; ಈ ಮೊದಲು ಬಂದಿದ್ದೆಲ್ಲಾ ಅಂತೆ ಕಂತೆ!

ಬಾಲಿವುಡ್ ಅಂದಮೇಲೆ ಅಲ್ಲಿ ನೂರಾರು ಪ್ರೇಮಕಥೆಗಳು ಹುಟ್ಟುತ್ತವೆ, ಕೆಲವು ಅಳಿಯುತ್ತವೆ. ಆದರೆ, ಕಳೆದ ಎರಡು ದಶಕಗಳಿಂದ ಇಡೀ ಚಿತ್ರರಂಗವೇ ಹೆಮ್ಮೆಯಿಂದ ನೋಡುವ ಜೋಡಿ ಎಂದರೆ ಅದು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ. ಇತ್ತೀಚೆಗೆ ತಮ್ಮ ವೈವಾಹಿಕ ಜೀವನದ 'ಸೀಕ್ರೆಟ್ಸ್' ಬಿಚ್ಚಿಟ್ಟಿದ್ದಾರೆ.

Read Full Story

12:30 PM (IST) Apr 23

ಬಾಲಿಯಲ್ಲಿ ಭಾರತೀಯ ಪ್ರವಾಸಿಗರ ನಾಚಿಕೆಗೇಡಿನ ಕೆಲಸ - ಹೊಟೇಲ್‌ನಲ್ಲಿ ವಸ್ತುಗಳ ಕದ್ದು ಸಿಕ್ಕಿಬಿದ್ದ ಭಾರತೀಯರು

ಇಂಡೋನೇಷ್ಯಾದ ಬಾಲಿಗೆ ಪ್ರವಾಸಕ್ಕೆ ತೆರಳಿದ್ದ ಭಾರತೀಯ ಪ್ರವಾಸಿಗರ ಗುಂಪೊಂದು, ತಾವು ತಂಗಿದ್ದ ಹೊಟೇಲ್‌ನಿಂದ ಟವೆಲ್, ಹೇರ್ ಡ್ರೈಯರ್ ಸೇರಿದಂತೆ ಹಲವು ವಸ್ತುಗಳನ್ನು ಕದ್ದು ಸಿಕ್ಕಿಬಿದ್ದಿದೆ. ಹೊಟೇಲ್ ಸಿಬ್ಬಂದಿ ದೂರು ನೀಡದಿದ್ದರೂ, ಈ ಘಟನೆಯ ವೀಡಿಯೋ ವೈರಲ್ ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮರ್ಯಾದೆಗೆ ಧಕ್ಕೆಯುಂಟುಮಾಡಿದೆ.
Read Full Story

11:57 AM (IST) Apr 23

ದಿನಕ್ಕೆ ಕೇವಲ ₹330 ಉಳಿಸಿದ್ರೆ ₹13 ಲಕ್ಷ ಗಳಿಸಬಹುದು..! PPF ಯೋಜನೆಯಿಂದ ಇದು ನಿಜಕ್ಕೂ ಸಾಧ್ಯ!

ನೀವು ಎಷ್ಟು ಸಂಪಾದಿಸ್ತೀರಿ ಅನ್ನೋದಕ್ಕಿಂತ, ಅದರಲ್ಲಿ ಎಷ್ಟು ಉಳಿತಾಯ ಮಾಡ್ತೀರಿ ಅನ್ನೋದು ಮುಖ್ಯ ಅಂತಾರೆ ಆರ್ಥಿಕ ತಜ್ಞರು. ಸಣ್ಣ ಮೊತ್ತವನ್ನು ದೀರ್ಘಕಾಲ ಹೂಡಿಕೆ ಮಾಡಿದ್ರೆ ದೊಡ್ಡ ನಿಧಿ ಸೃಷ್ಟಿಸಬಹುದು. ಇದಕ್ಕಾಗಿ ಹಲವು ಯೋಜನೆಗಳಿವೆ, ಅದ್ರಲ್ಲೊಂದು ಪಿಪಿಎಫ್.
Read Full Story

11:27 AM (IST) Apr 23

IRS ಅಧಿಕಾರಿ ಪುತ್ರಿ ಕೊಲೆ ಪ್ರಕರಣ - ಆರೋಪಿ ಮನೆ ಕೆಲಸದವನ ಬಂಧನ - ಹಲವು ಸ್ಫೋಟಕ ವಿಚಾರ ಬೆಳಕಿಗೆ

ನಿನ್ನೆ ಅಗ್ನೇಯ ದೆಹಲಿಯ ಅಮರ್‌ ಕಾಲೋನಿಯಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮನೆಯ ಮಾಜಿ ಕೆಲಸಗಾರ 19 ವರ್ಷದ ರಾಹುಲ್ ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಮತ್ತಷ್ಟು ಪಾತಕ ಕೃತ್ಯಗಳನ್ನು ಎಸಗಿರುವುದು ಬೆಳಕಿಗೆ ಬಂದಿದೆ.

Read Full Story

11:25 AM (IST) Apr 23

West Bengal Polls - ಪಶ್ಚಿಮ ಬಂಗಾಳದಲ್ಲಿ ಬದಲಾವಣೆ ಖಚಿತ; ಬಿಜೆಪಿ ಅಭ್ಯರ್ಥಿ ಬಗ್ಗೆ ಟಿಎಂಸಿ ಅಭ್ಯರ್ಥಿ ವಿವಾದಾತ್ಮಕ ಹೇಳಿಕೆ

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ, ರಾಶ್‌ಬೆಹರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ವಪನ್ ದಾಸ್‌ಗುಪ್ತ, ಟಿಎಂಸಿ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಆರೋಪಿಸಿದ್ದಾರೆ. ಇತ್ತ, ಟಿಎಂಸಿ ಅಭ್ಯರ್ಥಿ ಪ್ರದೀಪ್ ಸರ್ಕಾರ್, ತಮ್ಮ ಬಿಜೆಪಿ ಪ್ರತಿಸ್ಪರ್ಧಿ ಮೇಲೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Read Full Story

11:02 AM (IST) Apr 23

ಇಂದು ಡಬಲ್ ಧಮಾಕಾ; ಚಿನ್ನದ ಬೆಲೆಯಲ್ಲಿ 12 ಸಾವಿರ ಇಳಿಕೆ; ಬೆಳ್ಳಿ ದರದಲ್ಲಿಯೂ ತೀವ್ರ ಕುಸಿತ

ಇಂದು ದೇಶದಲ್ಲಿ 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ. ಚಿನ್ನ ಖರೀದಿಗೆ ಹಿಂದೇಟು ಹಾಕುತ್ತಿದ್ದವರಿಗೆ ಇದು ಉತ್ತಮ ಅವಕಾಶವಾಗಿದ್ದು, ಬೆಳ್ಳಿ ಬೆಲೆಯಲ್ಲೂ ದೊಡ್ಡ ಮಟ್ಟದ ಕುಸಿತ ಕಂಡುಬಂದಿದೆ.
Read Full Story

10:59 AM (IST) Apr 23

Assembly Elections - ತಮಿಳುನಾಡು, ಬಂಗಾಳದಲ್ಲಿ ಅಬ್ಬರದ ಮತದಾನ - ಸ್ಟಾಲಿನ್, ರಜನಿ, ವಿಜಯ್ ವೋಟ್!

ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಯ ಮತದಾನ ನಡೆಯುತ್ತಿದೆ. ಗುರುವಾರ ಬೆಳಗ್ಗೆ 9 ಗಂಟೆಯ ಹೊತ್ತಿಗೆ ಪಶ್ಚಿಮ ಬಂಗಾಳದಲ್ಲಿ ಶೇ. 18.76 ಮತ್ತು ತಮಿಳುನಾಡಿನಲ್ಲಿ ಶೇ. 17.69 ರಷ್ಟು ಮತದಾನ. ಎಂ.ಕೆ. ಸ್ಟಾಲಿನ್, ರಜನಿಕಾಂತ್ ಸೇರಿದಂತೆ ಹಲವು ಗಣ್ಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.

Read Full Story

10:30 AM (IST) Apr 23

30ನೇ ವಯಸ್ಸಿಗೆ ಹೃದಯಾಘಾತದಿಂದ ಕೊನೆಯುಸಿರೆಳೆದ ನಟಿ ದಿವ್ಯಾಂಕಾ ಸಿರೋಹಿ

Divyanka Sirohi Death: ಕೇವಲ 29 ವರ್ಷದ ನಟಿ ದಿವ್ಯಾಂಕಾ ಸಿರೋಹಿ ಅವರ ಹಠಾತ್ ನಿಧನ ಮನರಂಜನಾ ಕ್ಷೇತ್ರಕ್ಕೆ ದೊಡ್ಡ ಆಘಾತ ನೀಡಿದೆ. ಅವರ ಸಾವಿಗೆ ನಿಜವಾದ ಕಾರಣವೇನು? ಆ ರಾತ್ರಿ ಏನಾಗಿತ್ತು ಮತ್ತು ಕುಟುಂಬಸ್ಥರು ಏನು ಹೇಳಿದ್ದಾರೆ? ಇಲ್ಲಿದೆ ಪೂರ್ತಿ ವಿವರ...

Read Full Story

10:21 AM (IST) Apr 23

17ರ ಯುವಕನ ಮೇಲೆ ಲೈಂ*ಗಿಕ ದೌರ್ಜನ್ಯ, 36ರ ಮಹಿಳೆ ವಿರುದ್ಧ ಪೋಕ್ಸೋ ಕೇಸ್! ವಿಚಾರಣೆ ವೇಳೆ ಬಯಲಾಯ್ತು ಬೆಚ್ಚಿ ಬೀಳಿಸೋ ಮಾಹಿತಿ

ಕಾಸರಗೋಡು: ಈಗ ಕಾಲ ಯಾವಪರಿ ಕೆಟ್ಟೋಗಿದೆ ಎಂದರೆ ಅಪ್ರಾಪ್ತ ಯುವಕನೊಬ್ಬ ಅಪ್ರಾಪ್ತ ಯುವತಿಯ ಮೇಲೆ ದೌರ್ಜನ್ಯ ಎಸಗಿದ್ದ. ಇದರ ವಿಚಾರಣೆ ವೇಳೆ ಆತನೇ 36ರ ಮಹಿಳೆಯಿಂದ ಲೈಂ*ಗಿಕ ಶೋಷಣೆಗೆ ಒಳಗಾಗಿದ್ದ ಎನ್ನುವ ವಿಚಾರ ಬಯಲಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

 

Read Full Story

10:18 AM (IST) Apr 23

ಜಲ್ಲಿಕಲ್ಲು ಸಾಗಿಸುತ್ತಿದ್ದ ಟ್ರಕ್ ಬ್ರೇಕ್ ಫೇಲ್ ಆಗಿ ಬೊಲೆರೋಗೆ ಡಿಕ್ಕಿ - 11 ಜನರ ದಾರುಣ ಸಾವು

ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು, ದುರಂತದಲ್ಲಿ 11 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಟ್ರಕ್‌ ಟ್ರೈಲರ್‌ಗೆ ಬೊಲೆರೋ ವಾಹನ ಡಿಕ್ಕಿ ಹೊಡೆದ ನಂತರ ಬೊಲೆರೋ ವಾಹನ ಬೆಂಕಿಗಾಹುತಿಯಾಗಿದ್ದು, ಮೃತರಲ್ಲಿ 9 ಜನ ಸಜೀವ ದಹನಗೊಂಡಿದ್ದಾರೆ.

Read Full Story

09:58 AM (IST) Apr 23

Vijay - ಎಲೆಕ್ಷನ್ ಅಖಾಡಕ್ಕೆ ಇಳಿದ 'ದಳಪತಿ', ಡಿಎಂಕೆ ಘಟಾನುಘಟಿಗಳಿಗೆ ಸೆಡ್ಡು ಹೊಡೆದ ನಟ!

ತಮಿಳುನಾಡು ವಿಧಾನಸಭಾ ಚುನಾವಣೆ 2026ರಲ್ಲಿ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷದ ಮುಖ್ಯಸ್ಥ, ನಟ ವಿಜಯ್ ತಮ್ಮ ಮತ ಚಲಾಯಿಸಿದ್ದಾರೆ. ಪೆರಂಬೂರ್ ಮತ್ತು ತಿರುಚಿರಾಪಳ್ಳಿ ಪೂರ್ವ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವ ಅವರು, ಡಿಎಂಕೆ ಪಕ್ಷದ ಪ್ರಬಲ ಅಭ್ಯರ್ಥಿಗಳಿಗೆ ಸವಾಲೊಡ್ಡಿದ್ದಾರೆ. 

Read Full Story

09:39 AM (IST) Apr 23

ಲಂಡನ್‌ನಲ್ಲಿ 100 ರೂ. ಹಿಡಿದು ಶಾಪಿಂಗ್‌ಗೆ ಹೋದ ಯುವತಿಗೆ ಸಿಕ್ಕಿದ್ದೇನು? ವಿಡಿಯೋ

ಲಂಡನ್‌ನಲ್ಲಿರುವ ಭಾರತೀಯ ಯುವತಿಯೊಬ್ಬರು 100 ರೂಪಾಯಿ ಬಜೆಟ್‌ನಲ್ಲಿ ದಿನಸಿ ಅಂಗಡಿಯಲ್ಲಿ ಶಾಪಿಂಗ್ ಮಾಡಲು ಪ್ರಯತ್ನಿಸಿದ್ದಾರೆ. ಸ್ಯಾಂಡ್‌ವಿಚ್, ನೀರಿನ ಬಾಟಲಿಯಂತಹ ಹೆಚ್ಚಿನ ವಸ್ತುಗಳು ದುಬಾರಿಯಾಗಿದ್ದರಿಂದ, ಕೊನೆಗೆ ಅವರು ಸುಮಾರು 75 ರೂಪಾಯಿಗೆ ವಸ್ತುವೊಂದನ್ನು ಖರೀದಿಸಿದ್ದಾರೆ.

Read Full Story

09:07 AM (IST) Apr 23

ಟ್ರಂಪ್‌ ಸರ್ಕಾರದಿಂದ ತೆರಿಗೆ ಹಣ ವಾಪಸ್‌ ಪ್ರಕ್ರಿಯೆ ಶುರು, 1.12 ಲಕ್ಷ ಕೋಟಿ ರು. ಭಾರತದ ರಫ್ತುದಾರರಿಗೆ ರೀಫಂಡ್‌?

ಅಮೆರಿಕದ ಸುಪ್ರೀಂ ಕೋರ್ಟ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿದ್ದ ಆಮದು ಸುಂಕವನ್ನು ಅಕ್ರಮವೆಂದು ಘೋಷಿಸಿದೆ. ಈ ತೀರ್ಪಿನಿಂದಾಗಿ, ಅಮೆರಿಕವು ಸಂಗ್ರಹಿಸಿದ್ದ 15.55 ಲಕ್ಷ ಕೋಟಿ ರು. ತೆರಿಗೆಯನ್ನು ಮರುಪಾವತಿಸಬೇಕಾಗಿದ್ದು, ಇದರಲ್ಲಿ ಭಾರತದಿಂದ ಆಮದಾದ ವಸ್ತುಗಳ ಮೇಲಿನ 1.12 ಲಕ್ಷ ಕೋಟಿ ರು. ಸೇರಿದೆ. 

Read Full Story

08:47 AM (IST) Apr 23

ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರೂ ಐಪಿಎಲ್‌ನಲ್ಲಿ ವಿಶೇಷ ದಾಖಲೆ ನಿರ್ಮಿಸಿದ ವೈಭವ್ ಸೂರ್ಯವಂಶಿ! ಮ್ಯಾಕ್ಸ್‌ವೆಲ್ ರೆಕಾರ್ಡ್ ನುಚ್ಚುನೂರು

ಲಖನೌ: 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ, ಐಪಿಎಲ್ ಇತಿಹಾಸದಲ್ಲಿ ಹೊಸದೊಂದು ಮೈಲಿಗಲ್ಲು ನೆಟ್ಟಿದ್ದಾರೆ. ಇದರ ಜತೆಗೆ ಆಸೀಸ್ ಮೂಲದ ದಿಗ್ಗಜ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಹೆಸರಿನಲ್ಲಿದ್ದ ದಾಖಲೆ ನುಚ್ಚುನೂರು ಮಾಡಿದ್ದಾರೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.

Read Full Story

More Trending News