Published : May 12, 2026, 06:46 AM ISTUpdated : May 12, 2026, 11:13 PM IST

India Latest News Live: ಮದುವೆ ಆಗಿಲ್ಲ.. ಆದ್ರೂ ನಟಿ ರೇಖಾ ಸಿಂಧೂರ ಇಡೋದು ಏಕೆ? ಆ ರಹಸ್ಯಕ್ಕೆ ಉತ್ತರ ಇಲ್ಲಿದೆ ನೋಡಿ!

ಸಾರಾಂಶ

ಕೋಲ್ಕತಾ: ಬಂಗಾಳದ ಮುಖ್ಯ ಚುನಾವಣಾಧಿಕಾರಿ ಮನೋಜ್ ಅಗರ್ವಾಲ್ ಅವರನ್ನು ಸಿಎಂ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಜತೆಗೆ, ನಿವೃತ್ತ ಐಎಎಸ್ ಅಧಿಕಾರಿ ಸುಬ್ರತಾ ಗುಪ್ತಾರನ್ನು ಮುಖ್ಯಮಂತ್ರಿಗಳ ಸಲಹೆಗಾರರಾಗಿ ನೇಮಕ ಮಾಡಲಾಗಿದೆ. ಇದಕ್ಕೆ ವಿಪಕ್ಷ ಟಿಎಂಸಿ ಕಡೆಯಿಂದ ಭಾರೀ ಆಕ್ಷೇಪ ವ್ಯಕ್ತವಾಗಿದೆ.

‘ಇದು ನಾಚಿಗ್ಗೇಡನ್ನೂ ಮೀರಿದ ನಡೆ’ ಎಂದು ಕರೆದಿರುವ ಟಿಎಂಸಿಯ ಸಾಕೇತ್‌ ಗೋಖಲೆ, ‘ಚುನಾವಣೆ ಕಳವಿನ ಬಗ್ಗೆ ಬಿಜೆಪಿ ಮತ್ತು ಚುನಾವಣಾ ಆಯೋಗ ಮುಕ್ತವಾಗಿ ಒಪ್ಪಿಕೊಂಡಂತಾಗಿದೆ’ ಎಂದು ವ್ಯಂಗ್ಯವಾಡಿದ್ದಾರೆ. ಜತೆಗೆ, ಕೋರ್ಟ್‌ ಕುರುಡಾಗಿದೆಯೇ ಎಂದೂ ಪ್ರಶ್ನಿಸಿದ್ದಾರೆ.

ಪಶ್ಚಿಮ ಬಂಗಾಳ ಕೇಡರ್‌ನ 1990ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಅಗರ್ವಾಲ್, ಇತ್ತೀಚೆಗೆ ಇತ್ತೀಚಿನ ಚುನಾವಣೆ ನಡೆಸುವ ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಅಂಶಗಳನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿದ್ದರು. ಇವರೀಗ ದುಷ್ಯಂತ್ ನರಿಯಾಲರ ಜಾಗಕ್ಕೆ ನೇಮಕವಾಗಿದ್ದಾರೆ.

11:13 PM (IST) May 12

ಮದುವೆ ಆಗಿಲ್ಲ.. ಆದ್ರೂ ನಟಿ ರೇಖಾ ಸಿಂಧೂರ ಇಡೋದು ಏಕೆ? ಆ ರಹಸ್ಯಕ್ಕೆ ಉತ್ತರ ಇಲ್ಲಿದೆ ನೋಡಿ!

ಬಾಲಿವುಡ್ ನಟಿ ರೇಖಾ, ದೆಹಲಿ ಮೂಲದ ಉದ್ಯಮಿ ಮತ್ತು ಟೆಲಿವಿಷನ್ ತಯಾರಕರಾದ ಮುಕೇಶ್ ಅಗರ್ವಾಲ್ ಅವರನ್ನು ಮದುವೆಯಾಗಿದ್ದರು. ಮುಕೇಶ್ ಅವರು 1990ರಲ್ಲಿ ನಿಧನರಾದರು. ಆದರೆ, ರೇಖಾ ಈಗಲೂ ಸಿಂಧೂರ ಇಡುವ ರಹಸ್ಯ ಇದು.. 

Read Full Story

10:33 PM (IST) May 12

ಸಿಎಂ ಜೋಸೆಫ್​ ವಿಜಯ್​ಗೆ ಜ್ಯೋತಿಷಿ ತಂದಿಟ್ಟ ಸಂಕಷ್ಟ - ತಮಿಳುನಾಡಲ್ಲಿ ಭುಗಿಲೆದ್ದ ವಿವಾದ

ದಳಪತಿ ವಿಜಯ್ ಮುಖ್ಯಮಂತ್ರಿಯಾದ ನಂತರ, ತಮಗೆ ಭವಿಷ್ಯ ನುಡಿದಿದ್ದ ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ತಮ್ಮ ವಿಶೇಷ ಕರ್ತವ್ಯದ ಅಧಿಕಾರಿಯಾಗಿ (OSD) ನೇಮಿಸಿದ್ದಾರೆ. ಈ ನೇಮಕಾತಿಯು ತಮಿಳುನಾಡು ರಾಜಕೀಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ.

Read Full Story

10:08 PM (IST) May 12

ಮೈಸೂರು-ಆಗ್ರಾ-ದೆಹಲಿ ನಡುವೆ ವಿಶೇಷ ರೈಲು - ರಾಜ್ಯದ ಆರು ಜಿಲ್ಲೆಗಳಲ್ಲಿ ಸ್ಟಾಪ್​ - ಡಿಟೇಲ್ಸ್​ ಇಲ್ಲಿದೆ

ಬೇಸಿಗೆ ರಜೆಯ ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆಯು ಮೈಸೂರಿನಿಂದ ದೆಹಲಿಯ ಹಜರತ್ ನಿಜಾಮುದ್ದೀನ್‌ ನಿಲ್ದಾಣಕ್ಕೆ ವಿಶೇಷ ರೈಲು ಸಂಚಾರವನ್ನು ಘೋಷಿಸಿದೆ. ಈ ರೈಲು ಆಗ್ರಾ ಕ್ಯಾಂಟ್‌ನಲ್ಲಿ ನಿಲುಗಡೆ ಹೊಂದಿದ್ದು, ಮೇ 21 ರಂದು ಮೈಸೂರಿನಿಂದ ಹೊರಡಲಿದೆ.
Read Full Story

09:31 PM (IST) May 12

ಶಿವನ ಪಾತ್ರದಲ್ಲಿ ರಣವೀರ್ ಸಿಂಗ್ - 40 ಕೋಟಿ ಕೊಟ್ಟು ಖರೀದಿಸಿದ್ರು ಆ ಬಿಗ್ ಬಜೆಟ್ ಚಿತ್ರದ ರೈಟ್ಸ್!

ಸಾಲು ಸಾಲು ಹಿಟ್ ಚಿತ್ರಗಳ ಮೂಲಕ ಸೂಪರ್‌ಸ್ಟಾರ್ ಪಟ್ಟಕ್ಕೇರಿರುವ ರಣವೀರ್ ಸಿಂಗ್ ಅವರ ಮುಂದಿನ ಪ್ರಾಜೆಕ್ಟ್ ಯಾವುದು ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಕೆಲವು ತಿಂಗಳ ಹಿಂದೆ ಅವರು 'ಪ್ರಳಯ್' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Read Full Story

08:35 PM (IST) May 12

ಮಿತವ್ಯಯ ಸೂತ್ರ ಪಾಲನೆ ಜಾರಿಗೊಳಿಸಲು ಮುಂದಾದ ಕೇಂದ್ರ, ಯೋಜನೆ ಸಲ್ಲಿಸಲು ಸಚಿವಾಲಯಗಳಿಗೆ ಆದೇಶ, ಎಲ್ಲವೂ ಬದಲಾಗಲಿದೆ!

ಜಾಗತಿಕ ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಮೋದಿ ಸರ್ಕಾರವು ಮಿತವ್ಯಯದ ಕ್ರಮಗಳನ್ನು ಜಾರಿಗೆ ತರಲು ಮುಂದಾಗಿದೆ. ಸಚಿವರು ಮತ್ತು ಅಧಿಕಾರಿಗಳ ಅನಗತ್ಯ ಪ್ರಯಾಣ ಕಡಿತ, ಆನ್‌ಲೈನ್ ಸಭೆಗಳಿಗೆ ಒತ್ತು ಹಾಗೂ ಸಾರ್ವಜನಿಕ ಸಾರಿಗೆ ಬಳಕೆಗೆ ಪ್ರೋತ್ಸಾಹ ನೀಡುವ ಮೂಲಕ ಕೇಂದ್ರವೇ ಮಾದರಿಯಾಗಲು ಸಿದ್ಧತೆ ನಡೆಸಿದೆ.
Read Full Story

08:08 PM (IST) May 12

ನಾನು ಅಲ್ಲು ಅರ್ಜುನ್ ಆಸ್ತಿ ಅಲ್ಲ.. ಸೀರತ್ ಕಪೂರ್ ಹೀಗಂದಿದ್ದೇಕೆ? ಅಷ್ಟಕ್ಕೂ ಯಾರೀಕೆ?

ಸೋಶಿಯಲ್ ಮೀಡಿಯಾದಲ್ಲಿ ತನ್ನನ್ನು 'ಅಲ್ಲು ಅರ್ಜುನ್ ಆಸ್ತಿ' ಎಂದು ಕರೆದವನಿಗೆ ನಟಿ ಸೀರತ್ ಕಪೂರ್ ಖಡಕ್ ಉತ್ತರ ನೀಡಿದ್ದಾರೆ. ಮಹಿಳೆಯರ ವ್ಯಕ್ತಿತ್ವ, ಘನತೆ ಮತ್ತು ಸ್ವಾಭಿಮಾನದ ಬಗ್ಗೆ ಅವರು ನೀಡಿದ ಸಂದೇಶ ವೈರಲ್ ಆಗಿದ್ದು, ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Read Full Story

08:07 PM (IST) May 12

ಚಿನ್ನದ ಮೇಲಿನ ಸಮರ - ಇಂದಿರಾ ಗಾಂಧಿ- ನರೇಂದ್ರ ಮೋದಿ ಒಂದೇ ಹಾದಿ! ಅಂದು ಆಗಿದ್ದೇನು

1967ರಲ್ಲಿ ಇಂದಿರಾ ಗಾಂಧಿ ಅವರು ವಿದೇಶಿ ವಿನಿಮಯ ಬಿಕ್ಕಟ್ಟಿನಿಂದಾಗಿ ಚಿನ್ನ ಖರೀದಿಸದಂತೆ ಜನರಿಗೆ ಮನವಿ ಮಾಡಿದ್ದರು. ದಶಕಗಳ ನಂತರ, ಪ್ರಧಾನಿ ನರೇಂದ್ರ ಮೋದಿ ಕೂಡ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಇದೇ ರೀತಿಯ ಕರೆ ನೀಡಿದ್ದು, ಈ ಲೇಖನವು ಈ ಎರಡೂ ಸಂದರ್ಭಗಳ ಹಿಂದಿನ ಆರ್ಥಿಕ ಕಾರಣಗಳನ್ನು ವಿವರಿಸುತ್ತದೆ.
Read Full Story

07:43 PM (IST) May 12

ಕೇನ್ಸ್‌ನಲ್ಲಿ ಮಿಂಟ್ ಗ್ರೀನ್ ಪ್ರಿನ್ಸೆಸ್ ಗೌನ್‌ನಲ್ಲಿ ಮಿಂಚಿದ ಆಲಿಯಾ ಭಟ್ - ಮಾಡರ್ನ್ ಗ್ಲಾಮರ್ ಲುಕ್ ವೈರಲ್!

2026ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಆಲಿಯಾ ಭಟ್ ಮಿಂಟ್-ಗ್ರೀನ್ ಪ್ರಿನ್ಸೆಸ್ ಗೌನ್ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಈ ಎಲಿಗೆಂಟ್ ಹಾಗೂ ಮಾಡರ್ನ್ ಫ್ಯಾಷನ್, ಆನ್‌ಲೈನ್‌ನಲ್ಲಿ ಅತಿ ಹೆಚ್ಚು ಚರ್ಚೆಯಾದ ಲುಕ್‌ಗಳಲ್ಲಿ ಒಂದಾಗಿದೆ.

Read Full Story

07:05 PM (IST) May 12

ಈ ನಟಿ-ಹನಿ ಸಿಂಗ್ ಮಾನ ಹರಾಜ್ ಆಗ್ತಿದೆ ಜಗತ್ತಿನ ತುಂಬಾ; ಯಾಕೋ ನಸೀಬ್ ಖರಾಬ್ ಆಗೋಯ್ತಾ?

ಒಬ್ಬ ವ್ಯಕ್ತಿ ಕಾಡಿನ ಮೂಲಕ ಓಡುತ್ತಾ ಹೊಳೆಯುವ ಕೆರೆಯ ಬಳಿ ಬರುತ್ತಾನೆ. ಅಲ್ಲಿ ಚಿನ್ನದ ಆಭರಣಗಳಿಂದ ಕಂಗೊಳಿಸುವ ಸುಂದರಿ ನೀರಿನಿಂದ ಮೇಲೆದ್ದು ಬರುತ್ತಾಳೆ. ಈ ಇಡೀ ದೃಶ್ಯಾವಳಿ, ಬಳಸಲಾದ ಬಣ್ಣಗಳು ಮತ್ತು ಪಾತ್ರಗಳ ವಿನ್ಯಾಸವು ಈಗ ದೊಡ್ಡ ವಿವಾದವಾಗಿದೆ. ಏನ್ ಸಮಸ್ಯೆ ಆಗಿದೆ ನೋಡಿ.. 

Read Full Story

07:04 PM (IST) May 12

ಸಿಎಂ ವಿಜಯ್‌ಗೆ ಇಷ್ಟವಾದ ಹೀರೋ ಯಾರು? ಅಷ್ಟಕ್ಕೂ ಅವರನ್ನೇ ಯಾಕೆ ಇಷ್ಟಪಡ್ತಾರೆ ಗೊತ್ತಾ?

ಕೊನೆಗೂ ತಮಿಳುನಾಡು ಸಿಎಂ ಕುರ್ಚಿಯಲ್ಲಿ ದಳಪತಿ ವಿಜಯ್ ಕುಳಿತಿದ್ದಾರೆ. ನಟನಾಗಿ ಮಾತ್ರವಲ್ಲ, ನಾಯಕನಾಗಿಯೂ ವಿಜಯ್ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ. ಕಾಲಿವುಡ್‌ನ ಸ್ಟಾರ್ ಹೀರೋ ಆಗಿ ಮಿಂಚಿದ ವಿಜಯ್‌ಗೆ ತೆಲುಗಿನಲ್ಲಿ ಇಷ್ಟವಾದ ಹೀರೋ ಯಾರು ಗೊತ್ತಾ? ಅವರ ಮೇಲೆ ಯಾಕೆ ಅಷ್ಟೊಂದು ಪ್ರೀತಿ?

Read Full Story

06:33 PM (IST) May 12

Cannes 2026 - L'Oreal ಪ್ರೋಮೋದಲ್ಲಿ ಐಶ್ವರ್ಯಾ ರೈ ಯಾಕಿಲ್ಲ? ಶುರುವಾಯ್ತು ಹೊಸ ಚರ್ಚೆ!

ಕೇನ್ಸ್ 2026 ಫಿಲ್ಮ್ ಫೆಸ್ಟಿವಲ್‌ಗೆ ದಿನಗಣನೆ ಶುರುವಾಗಿದೆ. ಈ ಸಂಭ್ರಮದ ನಡುವೆಯೇ ಒಂದು ಅಚ್ಚರಿಯ ವಿಷಯ ಎಲ್ಲರ ಗಮನ ಸೆಳೆದಿದೆ. L'Oreal ಪ್ಯಾರಿಸ್ ಕಂಪನಿ ತನ್ನ ಹೊಸ ಪ್ರಚಾರ ವಿಡಿಯೋವನ್ನು ರಿಲೀಸ್ ಮಾಡಿದೆ.

Read Full Story

06:12 PM (IST) May 12

Video Viral - ಕಾಲಿಗೆ ಬಿದ್ದ ಫ್ಯಾನ್, ಎಳೆದಾಡಿದ ಸೆಕ್ಯುರಿಟಿ - ನಟ ಸೂರ್ಯ ಮಾಡಿದ್ದೇನು ನೋಡಿ!

ಸಿನಿಮಾ ಸ್ಟಾರ್‌ಗಳ ಮೇಲೆ ಅಭಿಮಾನಿಗಳಿಗೆ ಎಷ್ಟರಮಟ್ಟಿಗೆ ಪ್ರೀತಿ, ಅಭಿಮಾನ ಇರುತ್ತೆ ಅನ್ನೋದಕ್ಕೆ ಆಗಾಗ ಸಾಕ್ಷಿಗಳು ಸಿಗುತ್ತಲೇ ಇರುತ್ತವೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಭಿಮಾನಿಗಳು ತಮ್ಮ ಪ್ರೀತಿಯನ್ನು..

Read Full Story

05:58 PM (IST) May 12

ಜಾಗತಿಕ ಆರ್ಥಿಕ ಹಿಂಜರಿತದ ಭೀತಿ, ಭಾರತದ ಮುಂದಿದೆ ಅಗ್ನಿಪರೀಕ್ಷೆ! ವಿಶ್ವ ಆರ್ಥಿಕ ಸಮರ

ಪಶ್ಚಿಮ ಏಷ್ಯಾದ ಯುದ್ಧ ಮತ್ತು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ದೇಶದ ಜನತೆಗೆ 8 ಪ್ರಮುಖ ಸಂದೇಶಗಳನ್ನು ನೀಡಿದ್ದಾರೆ. ಚಿನ್ನದ ಖರೀದಿ ಮತ್ತು ಇಂಧನ ಬಳಕೆಯನ್ನು ಕಡಿಮೆ ಮಾಡುವಂತೆ ಕರೆ ನೀಡಿದ್ದು, ಈ ನಿರ್ಧಾರಗಳು ದೇಶದ ಆರ್ಥಿಕ ಭವಿಷ್ಯವನ್ನು ಹೇಗೆ ರೂಪಿಸಲಿವೆ ಎಂಬುದನ್ನು ಈ ಲೇಖನ ವಿವರಿಸುತ್ತದೆ.
Read Full Story

04:54 PM (IST) May 12

ನೂರಾರು ಕೋಟಿ ಒಡೆಯನ ವರ್ಷದ ಆದಾಯ ಎಷ್ಟಿತ್ತು? ದಳಪತಿ ವಿಜಯ್​​​​​ಗೆ ಈಗ ಸರ್ಕಾರಿ ಭತ್ಯೆ ಎಷ್ಟು ಬರುತ್ತೆ?

ಬಹುಕೋಟಿ ಬೆಲೆ ಬಾಳೋ ಕಾರುಗಳು, ಕೈಗೆ ಕಾಲಿಗೆ ಆಳು ಕಾಳು ಜೈಕಾರಕ್ಕೆ ಕೋಂಟ್ಯಾಂತರ ಅಭಿಮಾನಿಗಳು, ಐಶಾರಾಮಿ ಬದುಕು ಎಲ್ಲವೂ ಇದ್ದು ವಿಜಯ್​​ ರಾಜಕೀಯಕ್ಕೆ ಬಂದಿದ್ದಾರೆ. ರಾಜಕೀಯ ಅಂದ್ಮೇಲೆ ಗೊತ್ತಲ್ವಾ..?

Read Full Story

04:38 PM (IST) May 12

ವಿಜಯ್ ಗೆಳತಿ ತ್ರಿಷಾರನ್ನು ಐಶ್ವರ್ಯಾ ರೈಗೆ ಹೋಲಿಸಿ ನೆಟ್ಟಿಗರು ಹೇಳ್ತಿರೋದೇನು? 20 ವರ್ಷದ ಹಿಂದೆ ಹೀಗ್ ಆಗಿತ್ತಾ?

ವಿಜಯ್ ಅವರ ರಾಜಕೀಯ ಎಂಟ್ರಿ ಮತ್ತು ತ್ರಿಶಾ ಅವರ ಕ್ಲಾಸಿಕ್ ಲುಕ್ ಎರಡೂ ಸೇರಿ ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ. ಆದರೆ, ಅವರಿಬ್ಬರ ಮಧ್ಯೆ ಐಶ್ವರ್ಯಾ ರೈ ಬಂದಿದ್ದು ಹೇಗೆ? ಈ ಸೀಕ್ರೆಟ್ ತಿಳಿಯಲು ಈ ಸ್ಟೋರಿ ನೋಡಿ..

Read Full Story

02:20 PM (IST) May 12

ಒಂದಲ್ಲ, ಎರಡಲ್ಲ, ಆರು ಮದುವೆಯಲ್ಲಿ ನಿರಾಸೆ ಕಂಡ ನಟಿ; ಏಳನೇ ಬಾರಿಗೆ ಸವತಿ ಜೊತೆ ಅಡ್ಜಸ್ಟ್

ಅಪಘಾತದ ನಂತರ ಸಿನಿಮಾ ಅವಕಾಶ ಕಳೆದುಕೊಂಡು, ಆರು ಬಾರಿ ಮದುವೆ ಮುರಿದುಬಿದ್ದ ನಂತರ, ಏಳನೇ ಬಾರಿಗೆ ಉದ್ಯಮಿಯೊಬ್ಬರನ್ನು ಮದುವೆಯಾಗಿ ಅವರ ಮೊದಲ ಪತ್ನಿಯೊಂದಿಗೆ (ಸವತಿ) ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

Read Full Story

01:25 PM (IST) May 12

Fuel Prices - 'ಪೆಟ್ರೋಲ್ ಕಡಿಮೆ ಬಳಸಿ' ಎಂದ ಮೋದಿಗೆ ರಾಹುಲ್ ಟಾಂಗ್! ಕಾಂಗ್ರೆಸ್ ಅನ್ನು ಜನ ಗಂಭೀರವಾಗಿ ತಗೋಳಲ್ಲ ಎಂದ ಬಿಜೆಪಿ

ಪ್ರಧಾನಿ ಮೋದಿಯವರ ಇಂಧನ ಸಂರಕ್ಷಣೆ ಉಪಕ್ರಮವನ್ನು ಬೆಂಬಲಿಸುವಂತೆ ಬಿಜೆಪಿ ಬಿಹಾರ ಅಧ್ಯಕ್ಷ ಸಂಜಯ್ ಸರೋಗಿ ಜನರಿಗೆ ಕರೆ ನೀಡಿದ್ದಾರೆ. ಜೊತೆಗೆ, ಕಾಂಗ್ರೆಸ್ ಅನ್ನು ಜನ ಈಗ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

Read Full Story

12:48 PM (IST) May 12

ಜನರನ್ನು ಬೇರ್ಪಡಿಸುವ ಸನಾತನ ಧರ್ಮ ನಿರ್ಮೂಲನೆ ಮಾಡಬೇಕು - ಶಾಸಕ ಉದಯನಿಧಿ ಸ್ಟಾಲಿನ್

ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಜನರನ್ನು ಬೇರ್ಪಡಿಸುವ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂಬ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಮುಖ್ಯಮಂತ್ರಿ ಪ್ರಮಾಣವಚನ ಸಮಾರಂಭದಲ್ಲಿ ತಮಿಳುನಾಡು ನಾಡಗೀತೆಗೆ ಆದ್ಯತೆ ನೀಡದಿರುವುದರ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Read Full Story

12:44 PM (IST) May 12

Breaking - ಪ್ರಶ್ನೆ ಪ್ರಿಕೆ ಸೋರಿಕೆ ಮೇ 3 ರಂದು ನಡೆದಿದ್ದ ನೀಟ್ ಪರೀಕ್ಷೆ ರದ್ದು, ಸಿಬಿಐ ತನಿಖೆಗೆ ಆದೇಶ

ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ, ಮೇ 3 ರಂದು ನಡೆದಿದ್ದ ನೀಟ್ ಯುಜಿ 2026 ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಕೇಂದ್ರ ಸರ್ಕಾರವು ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮರು ಪರೀಕ್ಷೆ ನಡೆಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ದೃಢಪಡಿಸಿದೆ.
Read Full Story

11:53 AM (IST) May 12

2026ರ ಅತಿದೊಡ್ಡ ಫ್ಲಾಪ್ ಸಿನಿಮಾ; 1400 ಕೋಟಿ ಬಂಡವಾಳಕ್ಕೆ ಸಿಕ್ಕಿದ್ದು ಕೇವಲ 6 ಕೋಟಿ

ಇಂಟರ್‌ನ್ಯಾಷನಲ್ ಸ್ಟಾರ್ ಕಲಾವಿದರು ನಟಿಸಿರುವ  ಸಿನಿಮಾ 1400 ಕೋಟಿ ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಹಾಲಿವುಡ್‌ನ ಖ್ಯಾತನಾಮರ ದಂಡೇ ಇದ್ದರೂ, ಈ ಚಿತ್ರವು ವಿಶ್ವಾದ್ಯಂತ ಕೇವಲ 6 ಕೋಟಿ ಗಳಿಸಿ, ಜಗತ್ತಿನ ಅತಿದೊಡ್ಡ ಫ್ಲಾಪ್‌ಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.

Read Full Story

11:26 AM (IST) May 12

Breaking - ಸಿಎಂ ಆಗ್ತಿದ್ದಂತೆ ಹೊಸ ರೂಲ್ಸ್ ತಂದ Thalapathy Vijay; ಸೈಲೆಂಟ್‌ ಆದ ವಿರೋಧಿಗಳು!

Tamil Nadu CM Thalapathy Vijay: ನಟ, ತಮಿಳುನಾಡು ಸಿಎಂ ಜೋಸೆಫ್‌ ವಿಜಯ್‌ ಅವರು ಮುಖ್ಯಮಂತ್ರಿ ಆಗುತ್ತಿದ್ದಂತೆ ಒಂದು ಆದೇಶ ಹೊರಡಿಸಿದ್ದಾರೆ. ಈ ಆದೇಶ ಕಂಡು ಅನೇಕರು ಖುಷಿ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಏನದು?

 

Read Full Story

11:08 AM (IST) May 12

Gautham Adhani - ಮುಂದಿನ ಶತಮಾನವನ್ನು ಆಳೋದು ಯಾವ ದೇಶ? ಗೌತಮ್ ಅದಾನಿ ನೀಡಿದ ಫಾರ್ಮುಲಾ ವೈರಲ್!

ಜಗತ್ತು ಛಿದ್ರವಾಗಿದ್ದು, ರಾಷ್ಟ್ರಗಳು ಇಂಧನ, ತಂತ್ರಜ್ಞಾನದಲ್ಲಿ ಸ್ವಾವಲಂಬನೆಗೆ ಆದ್ಯತೆ ನೀಡುತ್ತಿವೆ. ಅಮೆರಿಕ ಮತ್ತು ಚೀನಾದ ಮಾರ್ಗಗಳನ್ನು ವಿಶ್ಲೇಷಿಸಿ, ಭಾರತವು ತನ್ನದೇ ಆದ ರೀತಿಯಲ್ಲಿ ಇಂಧನ ಸಾಮರ್ಥ್ಯ ಹೆಚ್ಚಿಸಿ, ಎಐ ಅನ್ನು ಅವಕಾಶವಾಗಿ ಬಳಸಿ ಭವಿಷ್ಯ ರೂಪಿಸಬೇಕು ಎಂದು ಈ ಲೇಖನ ವಿವರಿಸುತ್ತದೆ.

Read Full Story

09:50 AM (IST) May 12

Supreme Court - ಪತ್ನಿಯನ್ನು ಪ್ರಾಣಿಯಂತೆ ನೋಡಬೇಡಿ, ಅವಳಿಗೂ ಘನತೆಯಿಂದ ಬದುಕುವ ಹಕ್ಕಿದೆ - ಸುಪ್ರೀಂ ಖಡಕ್ ಎಚ್ಚರಿಕೆ!

ಕೌಟುಂಬಿಕ ದೌರ್ಜನ್ಯ ಪ್ರಕರಣವೊಂದರಲ್ಲಿ ಆರೋಪಿ ಪತಿಗೆ ನಿರೀಕ್ಷಣಾ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಪತ್ನಿಯನ್ನು ಪ್ರಾಣಿಯಂತೆ ನಡೆಸಿಕೊಳ್ಳಬಾರದು, ಮಹಿಳೆಯರಿಗೂ ಘನತೆಯಿಂದ ಬದುಕುವ ಹಕ್ಕಿದೆ ಎಂದು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ.ಬಿ. ವರಾಳೆ ಅವರ ಪೀಠ ಸ್ಪಷ್ಟಪಡಿಸಿದೆ.
Read Full Story

08:43 AM (IST) May 12

ದೇಶೀಯ ತೈಲ ಮತ್ತು ಅನಿಲ ಉತ್ಪಾದನೆಗೆ ಉತ್ತೇಜನ - ಕೇಂದ್ರ ಸರ್ಕಾರದ ಹೊಸ ಸೂತ್ರವೇನು?

ಕೇಂದ್ರ ಸರ್ಕಾರವು ದೇಶೀಯ ತೈಲ ಮತ್ತು ಅನಿಲ ಉತ್ಪಾದನೆಗೆ ಉತ್ತೇಜನ ನೀಡಲು ರಾಯಲ್ಟಿ ದರಗಳನ್ನು ಕಡಿತಗೊಳಿಸಿದೆ. ಡೀಪ್ ವಾಟರ್ ಮತ್ತು ಅಲ್ಟ್ರಾ-ಡೀಪ್ ವಾಟರ್ ಕ್ಷೇತ್ರಗಳಲ್ಲಿನ ಈ ಬದಲಾವಣೆಯು ಹೂಡಿಕೆಯನ್ನು ಆಕರ್ಷಿಸಿ, ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ.
Read Full Story

More Trending News