Published : Jul 13, 2025, 06:27 AM ISTUpdated : Jul 13, 2025, 11:00 PM IST

India Latest News Live: ನೀನು ಸೂಪರ್ ಆಕ್ಟರ್, ಹೀಗೆ ಜೀವನ ಹಾಳು ಮಾಡ್ಕೋಬೇಡ - ಕೋಟಗೆ ಎಚ್ಚರಿಕೆ ಕೊಟ್ಟಿದ್ರು ಚಿರಂಜೀವಿ

ಸಾರಾಂಶ

260 ಜನರ ಬಲಿಪಡೆದ ಜೂ.12ರ ಅಹಮದಾಬಾದ್ ಏರಿಂಡಿಯಾ ವಿಮಾನ ಅಪಘಾತದ ಕುರಿತ ಪ್ರಾಥಮಿಕ ತನಿಖಾ ವರದಿ ಶುಕ್ರವಾರ ತಡರಾತ್ರಿ ಬಹಿರಂಗವಾಗಿದೆ. ಅಪಘಾತಕ್ಕೆ ತುತ್ತಾಗುವ ಕೆಲವೇ ಸೆಕೆಂಡ್‌ಗಳ ಮುನ್ನ ವಿಮಾನದ ಎರಡೂ ಎಂಜಿನ್ನಿಗೆ ಇಂಧನ ಪೂರೈಕೆ ಮಾಡುವ ಸ್ವಿಚ್‌ಗಳನ್ನು ಆಫ್ ಮಾಡಲಾಗಿತ್ತು ಎಂದು ಘಟನೆ ಕುರಿತು ತನಿಖೆ ನಡೆಸಿದ್ದ ವಾಯು ಅಪಘಾತ ತನಿಖಾ ಬ್ಯೂರೋ (ಎಎಐಬಿ) ತನ್ನ ವರದಿಯಲ್ಲಿ ಹೇಳಿದೆ. ಈ ಮೂಲಕ ಪೈಲಟ್‌ಗಳು ಎಸಗಿದ ತಪ್ಪೇ ದುರಂತಕ್ಕೆ ಕಾರಣ ಎಂಬ ಕಡೆಗೆ ವರದಿ ಬೊಟ್ಟು ಮಾಡಿದೆ. ವಿಮಾನದ ಸ್ವಿಚ್ ಸ್ವಯಂ ಆನ್, ಆಫ್ ಆಗದು. ಆನ್, ಆಫ್‌ಗೆ ಸಾಕಷ್ಟು ಪ್ರಯತ್ನ ಬೇಕು. ಈ ದೃಷ್ಟಿಯಲ್ಲಿ ನೋಡಿದರೆ ಪೈಲಟ್‌ಗಳೇ ಎಂಜಿನ್‌ಗೆ ಇಂಧನ ಪೂರೈಸುವ ಸ್ವಿಚ್ ಆಫ್ ಮಾಡಿರುವ ಸಾಧ್ಯತೆ ದಟ್ಟವಾಗಿದೆ. ಇದು ಆಕಸ್ಮಿಕ ಅಥವಾ ಉದ್ದೇಶಪೂರ್ವಕ ಆಗಿರಬಹುದು ಎಂಬುದು ಹಲವು ದೇಶೀಯ ಮತ್ತು ವಿದೇಶಿ ವಿಮಾನಯಾನ ತಜ್ಞರ ಅಭಿಪ್ರಾಯ.

11:00 PM (IST) Jul 13

ನೀನು ಸೂಪರ್ ಆಕ್ಟರ್, ಹೀಗೆ ಜೀವನ ಹಾಳು ಮಾಡ್ಕೋಬೇಡ - ಕೋಟಗೆ ಎಚ್ಚರಿಕೆ ಕೊಟ್ಟಿದ್ರು ಚಿರಂಜೀವಿ

ಪ್ರಸಿದ್ಧ ನಟ ಕೋಟ ಶ್ರೀನಿವಾಸ ರಾವ್ ಅವರ ನಿಧನದಿಂದ ಚಿತ್ರರಂಗದಲ್ಲಿ ದುಃಖ ಮಡುಗಟ್ಟಿದೆ. ಕೋಟ ಶ್ರೀನಿವಾಸ ರಾವ್ 750 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕಾಮಿಡಿ ಪಾತ್ರಗಳಲ್ಲಿ, ವಿಲನ್ ಆಗಿ, ಪೋಷಕ ನಟರಾಗಿ ಅವರು ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ಪ್ರದರ್ಶಿಸಿದ್ದಾರೆ.
Read Full Story

10:45 PM (IST) Jul 13

ನಾಪತ್ತೆಯಾಗಿರುವ ವಿದ್ಯಾರ್ಥಿನಿ ಸ್ನೇಹಾ ದೇಬನಾತ್ ಕೈಬರಹದ ಪತ್ರ ಪತ್ತೆ, ಕುಟಂಬಕ್ಕ ಶಾಕ್

ಕಳೆದ ಒಂದು ವಾರದಿಂದ ನಾಪತ್ತೆಯಾಗಿರುವ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಸ್ನೇಹಾ ದೇಬನಾಥ್ ಕೊಠಡಿಯಲ್ಲಿ ನೋಟ್ ಪತ್ತೆಯಾಗಿದೆ. ಮಿಸ್ಸಿಂಗ್ ಪ್ರಕರಣಕ್ಕೆ ತಿರುವು ನೀಡಿದೆ.

Read Full Story

10:32 PM (IST) Jul 13

ಕೊಡಗಿಗೆ ಹೋದರೆ ಕಡ್ಡಾಯವಾಗಿ ರುಚಿಸಬೇಕು ಈ ಮಳೆಗಾಲದ ಆಹಾರಗಳು!

ದಕ್ಷಿಣದ ಕಾಶ್ಮೀರ ಎಂದು ಕರೆಸಿಕೊಳ್ಳುವ ಕೊಡಗಿಗೆ ಹೋದರೆ ಪಂದಿಕರಿ, ಕಡುಂಬಟ್ಟು, ನೂಪ್ಪುಟ್ಟು ಇಂತಹ ಆಹಾರಗಳ ರುಚಿಯನ್ನು ನೋಡದೆ ಯಾರು ಬರ್ತೀರಾ ಅಲ್ವಾ.

Read Full Story

10:17 PM (IST) Jul 13

ಲಂಡನ್‌ನಲ್ಲಿ ಒಂದೇ ಕಡೆ ಫೋಟೋ ವೈರಲ್ - ಕ್ರಿಕೆಟರ್ ಚಹಾಲ್, ಆರ್ ಜೆ ಮೆಹ್ವಾಶ್ ಡೇಟಿಂಗ್ ರೂಮರ್ಸ್‌

ಯಜುವೇಂದ್ರ ಚಹಾಲ್ ಮತ್ತು ಆರ್‌ಜೆ ಮೆಹ್ವಾಶ್ ಲಂಡನ್‌ನಲ್ಲಿ ಒಂದೇ ಸ್ಥಳದಲ್ಲಿ ತೆಗೆದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಳಿಸುದ್ದಿಗಳು ಹಬ್ಬಿವೆ.

Read Full Story

10:06 PM (IST) Jul 13

ಲಾರ್ಡ್ಸ್ ಟೆಸ್ಟ್‌ನಲ್ಲಿ ಸುಲಭ ಟಾರ್ಗೆಟ್ ಪಡೆದ ಭಾರತಕ್ಕೆ ಆರಂಭದಲ್ಲೇ ಶಾಕ್, ವಿಕೆಟ್ ಪತನ

ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 193 ರನ್ ಸುಲಭ ಟಾರ್ಗೆಟ್ ಪಡೆದಿದೆ. ಆದರೆ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಆರಂಭದಲ್ಲೇ ಆಘಾತ ಅನುಭವಿಸಿದೆ.

Read Full Story

09:43 PM (IST) Jul 13

ಲಾರ್ಡ್ಸ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ 192 ರನ್‌ಗೆ ಆಲೌಟ್, ಭಾರತಕ್ಕೆ 193 ರನ್ ಟಾರ್ಗೆಟ್

ಲಾರ್ಡ್ಸ್ ಟೆಸ್ಟ್ 2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು 192 ರನ್‌ಗೆ ಆಲೌಟ್ ಮಾಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಹೀಗಾಗಿ ಭಾರತಕ್ಕೆ 193 ರನ್ ಟಾರ್ಗೆಟ್ ಸಿಕ್ಕಿದ್ದು, ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ.

Read Full Story

09:42 PM (IST) Jul 13

ನಮ್ಮ ಸಂಬಂಧಗಳಲ್ಲಿ ಟಿಬೆಟ್ ವಿಷಯ ಯಾವುತ್ತೂ ಮುಳ್ಳೆ, ದಲೈ ಲಾಮಾ ವಿಷಯ ನಿಮಗೆ ಬೇಡ - ಭಾರತಕ್ಕೆ ಚೀನಾ ಎಚ್ಚರಿಕೆ!

ದಲೈ ಲಾಮಾ ಅವರ ಉತ್ತರಾಧಿಕಾರಿ ಆಯ್ಕೆ ವಿಚಾರದಲ್ಲಿ ಚೀನಾ ಮಧ್ಯಪ್ರವೇಶಿಸಬಾರದು ಎಂದು ಭಾರತ ಹೇಳಿದೆ. ಚೀನಾ ಇದನ್ನು ತನ್ನ ಆಂತರಿಕ ವಿಚಾರ ಎಂದು ಹೇಳುತ್ತಿದೆ. ಈ ವಿವಾದ ಉಭಯ ದೇಶಗಳ ಸಂಬಂಧವನ್ನು ಹದಗೆಡಿಸುತ್ತಿದೆ.
Read Full Story

09:24 PM (IST) Jul 13

ಸಿಗಂದೂರು ಸೇತುವೆ ಉದ್ಘಾಟನೆಗೆ ಬರಲ್ಲ - ಗಡ್ಕರಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಸಿಗಂದೂರು ಸೇತುವೆ ಲೋಕಾರ್ಪಣೆ ಸೋಮವಾರ (ಜು.14) ನಡೆಯಲಿದ್ದು, ಸಿಗಂದೂರು ಸೇತುವೆ ಉದ್ಘಾಟನೆಗೆ ಬರಲ್ಲ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ.

Read Full Story

09:08 PM (IST) Jul 13

ಪೊಲೀಸ್ ಠಾಣೆ ಮೆಟ್ಟಿಲೇರಿದ ಖ್ಯಾತ್ ಬಿಗ್ ಬಾಸ್ ಸ್ಪರ್ಧಿ, ಮನೆಕೆಲಸದವನ ವಿರುದ್ಧ ದೂರು

ಖ್ಯಾತ ಬಿಗ್ ಬಾಸ್ ಸ್ಪರ್ಧಿ ರಿಯಾಲಿಟಿ ಶೋ ಹಾಗೂ ತಮ್ಮ ನಟೆಯಿಂದಲೂ ಭಾರಿ ಗಮನಸೆಳೆದಿದ್ದಾರೆ. ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರುವ ಮೂಲಕ ಸುದ್ದಿಯಾಗಿದ್ದಾರೆ. ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರನ ವಿರುದ್ದವೇ ದೂರು ದಾಖಲಿಸಿದ್ದಾರೆ.

 

Read Full Story

09:02 PM (IST) Jul 13

ಪವನ್ ಸಿನಿಮಾಗೆ ಪೈಪೋಟಿ ನೀಡಲು ಕನ್ನಡ ಡಬ್ ಸಿನಿಮಾ - ಅಲ್ಲು ಅರ್ಜುನ್ ತಂದೆ ಪ್ಲ್ಯಾನ್ ಏನು?

ಪವನ್ ಕಲ್ಯಾಣ್ ನಟಿಸಿರುವ 'ಹರಿಹರ ವೀರಮಲ್ಲು' ಸಿನಿಮಾ ಕೊನೆಗೂ ಬಿಡುಗಡೆಯಾಗಲಿದೆ. ಆದರೆ ಈ ಚಿತ್ರಕ್ಕೆ ಪೈಪೋಟಿಯಾಗಿ ಒಂದು ಡಬ್ಬಿಂಗ್ ಸಿನಿಮಾವನ್ನು ತರುತ್ತಿದ್ದಾರೆ ಅಲ್ಲು ಅರವಿಂದ್.

 

Read Full Story

08:49 PM (IST) Jul 13

ಭಾರತದಲ್ಲಿ ಹೊಸದಕ್ಕಿಂತ 2 ಪಟ್ಟು ಹೆಚ್ಚು ಸೆಕೆಂಡ್ ಹ್ಯಾಂಡ್ ಕಾರಿಗೆ ಬೇಡಿಕೆ , 6 ಮಿಲಿಯನ್ ಮಾರಾಟ ನಿರೀಕ್ಷೆ

ಬಳಸಿದ ಕಾರುಗಳ ಮಾರಾಟ ಈ ವರ್ಷ 6 ಮಿಲಿಯನ್ ದಾಟುವ ನಿರೀಕ್ಷೆ. ಹೊಸ ಕಾರುಗಳಿಗಿಂತ ಬಳಸಿದ ಕಾರುಗಳ ಮಾರಾಟ ದ್ವಿಗುಣಗೊಂಡಿದೆ. ಈ ಬೆಳವಣಿಗೆಯ ಹಿಂದಿನ ಕಾರಣಗಳೇನು?
Read Full Story

08:36 PM (IST) Jul 13

ರೈಲ್ವೆ ಇಲಾಖೆಯಲ್ಲಿ ಕ್ರಾಂತಿಕಾರಕ ಬದಲಾವಣೆ - ಕೇಂದ್ರ ಸಚಿವ ವಿ.ಸೋಮಣ್ಣ

ವಂದೇ ಭಾರತ ಸ್ಲೀಪರ್ ರೈಲು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು.

Read Full Story

08:33 PM (IST) Jul 13

ಪದವಿ, ರೆಸ್ಯೂಮ್ ಬೇಡ ಆದ್ರೂ ₹1 ಕೋಟಿ ಸಂಬಳದ IT ಉದ್ಯೋಗ! ಬೆಂಗಳೂರು ಸ್ಟಾರ್ಟಪ್ ಜಾಬ್ ಆಫರ್!

ಬೆಂಗಳೂರಿನ ಸ್ಟಾರ್ಟ್‌ಅಪ್ ಸ್ಮಾಲೆಸ್ಟ್ AI, ಯಾವುದೇ ಡಿಗ್ರಿ ಅಥವಾ ರೆಸ್ಯೂಮೆ ಇಲ್ಲದೆ ₹1 ಕೋಟಿ ವಾರ್ಷಿಕ ಸಂಬಳದ ಫುಲ್-ಸ್ಟಾಕ್ ಎಂಜಿನಿಯರಿಂಗ್ ಲೀಡ್ ಹುದ್ದೆಗೆ ನೇಮಕಾತಿ ನಡೆಸುತ್ತಿದೆ. ಅನುಭವಿ ಡೆವಲಪರ್‌ಗಳಿಗೆ ಇದು ಉತ್ತಮ ಅವಕಾಶ. ಅಭ್ಯರ್ಥಿಗಳು info@smallest.ai ಗೆ ಮಾಹಿತಿ ಕಳುಹಿಸಬೇಕು.

Read Full Story

08:16 PM (IST) Jul 13

ಇಂದಿನ ಯುವಕರೇ ಮುಂದಿನ ಭವಿಷ್ಯದ ನಾಯಕರು - ಸಚಿವ ಪ್ರಿಯಾಂಕ್‌ ಖರ್ಗೆ

ಯುವ ಕಾಂಗ್ರೆಸ್ ಭರವಸೆಯ ಬೆಳಕಾಗಿದೆ. ಇಂದಿನ ಯುವಕರೇ ಮುಂದಿನ ಭವಿಷ್ಯದ ನಾಯಕರು ಎಂದು ಗ್ರಾಮೀಣಾಭಿವೃದ್ಧಿ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

Read Full Story

08:01 PM (IST) Jul 13

ತಮಿಳು ಸಾಹಸ ಕಲಾವಿದನ ಸಾವು ಖಚಿತಪಡಿಸಿದ ನಟ ವಿಶಾಲ್! ದಕ್ಷಿಣ ಭಾರತಕ್ಕೆ ಮತ್ತೊಂದು ಬರಸಿಡಿಲು

ತಮಿಳು ನಟ ಆರ್ಯ ಅಭಿನಯದ ವೆಟ್ಟುವಂ ಚಿತ್ರದ ಚಿತ್ರೀಕರಣದ ವೇಳೆ ಸ್ಟಂಟ್‌ಮ್ಯಾನ್ ರಾಜು ಅವರು ಕಾರು ಪಲ್ಟಿ ಸಾಹಸದ ಸಮಯದಲ್ಲಿ ದುರಂತವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ನಟ ವಿಶಾಲ್ ದೃಢಪಡಿಸಿದ್ದು, ಚಿತ್ರರಂಗದಲ್ಲಿ ಶೋಕ ಮಡುಗಟ್ಟಿದೆ.

Read Full Story

07:55 PM (IST) Jul 13

ಬೆಂಗಳೂರಿಗೆ ಆರೇಂಜ್ ಅಲರ್ಟ್, ಮರ-ರೆಂಬೆ ಕೊಂಬೆ ಮುರಿದು ಬೀಳುವ ಎಚ್ಚರಿಕೆ

ಬೆಂಗಳೂರಿಗೆ ಮುಂದಿನ ಮೂರು ಗಂಟೆ ಆರೇಂಜ್ ಅಲರ್ಟ್ ನೀಡಲಾಗಿದೆ. ಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮರ, ರೆಂಬೆ ಕೊಂಬೆಗಳು ಮುರಿದು ಬೀಳುವ ಸಾಧ್ಯತೆ ಇದೆ. ಅತೀವ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.

 

Read Full Story

07:36 PM (IST) Jul 13

ಕೈಗಾರಿಕಾ ಕ್ಷೇತ್ರದಲ್ಲಿ ಸ್ಕಿಲ್‌, ಸ್ಕೇಲ್‌, ಸ್ಪೀಡ್‌ ಅಗತ್ಯ - ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಕೈಗಾರಿಕೆ ಉತ್ಪಾದನಾ ಕ್ಷೇತ್ರದಲ್ಲಿ ಸ್ಕಿಲ್, ಸ್ಕೇಲ್ ಮತ್ತು ಸ್ಪೀಡ್ ಇಂದಿನ ತುರ್ತು ಅಗತ್ಯವಾಗಿದ್ದು, ಅದನ್ನು ಮೈಗೂಡಿಸಿಕೊಂಡಲ್ಲಿ ಭಾರತ ಸಮಗ್ರ ಅಭಿವೃದ್ಧಿಯ ಜತೆಗೆ ಮತ್ತಷ್ಟು ಆರ್ಥಿಕ ಬಲಿಷ್ಠ ರಾಷ್ಟ್ರವಾಗಲಿದೆ ಎಂದು ಪ್ರಲ್ಹಾದ್‌ ಜೋಶಿ ಹೇಳಿದರು.

Read Full Story

07:33 PM (IST) Jul 13

ಯೂಟ್ಯೂಬ್ ಲೈವ್‌‌ಸ್ಟ್ರೀಮ್‌ ಹುಚ್ಚಿಗೆ ಮಕ್ಕಳನ್ನೇ ಮಾರಿದ ತಾಯಿ, ಹಲವರು ಅರೆಸ್ಟ್

ಲೈವ್‌ಸ್ಟ್ರೀಮ್, ಹೆಚ್ಚು ವೀಕ್ಷಣೆ, ಲೈಕ್ಸ್ ಈ ಮೂಲಕ ಆದಾಯ ಬಯಸಿದ್ದ ತಾಯಿಯ ಹುಚ್ಚುತನಕ್ಕೆ ಇದೀಗ ಇಬ್ಬರು ಮಕ್ಕಳು ಅನಾಥವಾಗಿದ್ದು ಮಾತ್ರವಲ್ಲ, ಭವಿಷ್ಯವೇ ಅತಂತ್ರವಾಗಿದೆ.

Read Full Story

07:16 PM (IST) Jul 13

ಆಧಾರ್ ಕಾರ್ಡ್ ಕ್ಯಾನ್ಸಲ್ ಆಗಿದೆಯಾ? ಈ ವಿಧಾನದ ಮೂಲಕ ರಿ-ಆಕ್ಟಿವೇಟ್ ಮಾಡಿ!

ನಿಮ್ಮ ಆಧಾರ್ ಕಾರ್ಡ್ ರದ್ದುಗೊಂಡಿದೆಯೇ? ಸರ್ಕಾರದ ಯೋಜನೆಗೆ ಆಧಾರ್ ಕಾರ್ಡ್ ಕೊಟ್ಟರೂ ಅದನ್ನು ಸ್ವೀಕಾರ ಮಾಡುತ್ತಿಲ್ಲ ಎಂದಾದಲ್ಲಿ ಕೂಡಲೇ ನೀವು ಈ ಸರಳ ವಿಧಾನ ಅನುಸರಿಸಿ ಪುನಃ ಸಕ್ರಿಯಗೊಳಿಸಿಕೊಳ್ಳಬಹುದು. ಮೂವತ್ತು ದಿನಗಳಲ್ಲಿ ಆಧಾರ್ ರಿ-ಆಕ್ಟಿವೇಟ್ ಆಗುತ್ತದೆ.

Read Full Story

06:57 PM (IST) Jul 13

Disha Madan - ಕನ್ನಡ ಮಾತಾಡಿಲ್ಲ ಅಂತ ಗಲಾಟೆ ಮಾಡೋರಿಗೆ ಹೀಗೆ ಕ್ಲಾಸ್​​ ತೆಗೆದುಕೊಳ್ಳೋದಾ ಲಕ್ಷ್ಮೀನಿವಾಸ ಭಾವನಾ?

ಬ್ಯಾಂಕ್​ ಸೇರಿದಂತೆ ಕೆಲವು ಕಡೆಗಳಲ್ಲಿ ಕನ್ನಡ ಮಾತನಾಡದೇ ಉಲ್ಟಾ ಮಾತನಾಡುವ ಸಿಬ್ಬಂದಿಯ ಬಗೆಗಿನ ವಿಷಯ ಹೈಲೈಟ್​ ಆಗುತ್ತಿದ್ದಂತೆಯೇ, ಲಕ್ಷ್ಮೀ ನಿವಾಸ ಸೀರಿಯಲ್​ ಭಾವನಾ ಉರ್ಫ್​ ದಿಶಾ ಮದನ್​ ಹೇಳಿದ್ದೇನು ನೋಡಿ!

 

Read Full Story

06:45 PM (IST) Jul 13

ನಂಜೇಗೌಡ ಗೆದ್ದರೆ ನಾನು ಮಾಲೂರಿನತ್ತ ತಲೆ ಹಾಕೋಲ್ಲ - ನಿಖಿಲ್ ಕುಮಾರಸ್ವಾಮಿ ಶಪಥ

ನಂಜೇಗೌಡ ಜನತಾದಳದಿಂದ ಬೆಳೆದವರು, ಈಗ ಜನತಾದಳ ಎಲ್ಲಿದೆ ಎಂದು ಕೇಳುತ್ತಾರೆ, 2028ರ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿನ ಜನತೆ ತಕ್ಕ ಪಾಠ ಕಲಿಸಿ ಮನೆಗೆ ಕಳುಹಿಸಲಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಶಪಥ ಮಾಡಿದರು.

Read Full Story

06:32 PM (IST) Jul 13

5 ಹುಲಿಗಳನ್ನು ಕೊಲ್ಲಲು ಕೀಟನಾಶಕ ಕಾರ್ಬೋಫುರಾನ್ ಬಳಕೆ - ತನಿಖೆಯಲ್ಲೇನಿದೆ?

ಐದು ಹುಲಿಗಳ ಅಸಹಜ ಸಾವಿನ ಪ್ರಕರಣವನ್ನು ತನಿಖೆ ಮಾಡುತ್ತಿರುವ ಉನ್ನತ ಮಟ್ಟದ ಸಮಿತಿಗೆ, ಹುಲಿಗಳನ್ನು ಕೊಲ್ಲಲು ಅತ್ಯಂತ ವಿಷಕಾರಿ ಕೀಟನಾಶಕ ಕಾರ್ಬೋಫುರಾನ್ ಬಳಸಲಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.

Read Full Story

06:30 PM (IST) Jul 13

Preity Zinta - ಇನ್ನೂ ಗರ್ಭಿಣಿ ಆಗಿಲ್ವಾ? ನಾನು ಮಾಡ್ಲಾ? ಎಲ್ಲರ ಎದುರೇ ಕೇಳಿದ ಶಾರುಖ್​ ವಿಡಿಯೋ ವೈರಲ್​

ವಯಸ್ಸು 60 ಆದರೂ ಮಗಳ ವಯಸ್ಸಿನವಳ ಜೊತೆ ರೊಮಾನ್ಸ್​ ಮಾಡುತ್ತಲೇ ಬಾಲಿವುಡ್​ನ ಬಾದ್​ಶಾ ಎಂದು ಬಿರುದು ಪಡೆದಿರುವ ನಟ ಶಾರುಖ್​ ಖಾನ್​, ಪ್ರೀತಿ ಜಿಂಟಾರನ್ನು ಒಮ್ಮೆ ಗರ್ಭಿಣಿ ಮಾಡುವೆ ಎಂದು ಓಪನ್​ ಆಗಿಯೇ ಹೇಳಿದ್ದರು. ಅದರ ವಿಡಿಯೋ ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

 

Read Full Story

06:24 PM (IST) Jul 13

ಹೃದಯಾಘಾತ, ಸ್ಟ್ರೋಕ್, ಕಿಡ್ನಿ ಸೇರಿ ಹಲವು ಸಮಸ್ಯೆಗೆ ಈ ಆಹಾರ ಕಾರಣ, ICMR ಸ್ಫೋಟಕ ವರದಿ

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಹೃದಯಾಘಾತ ಸಮಸ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲೇ ಹೃದಯಾಘಾತ, ಕಿಡ್ನಿ, ಸ್ಟ್ರೋಕ್ ಸೇರಿದಂತೆ ಮಾರಾಣಾಂತಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ. ಇದೀಗ ICMR ನಡೆಸಿದ ಅಧ್ಯಯನ ವರದಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದೆ. 

Read Full Story

06:24 PM (IST) Jul 13

ಸಿಎಂ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟಿದ್ದು - ಶಾಸಕ ಕೆ.ಎಂ.ಉದಯ್

ಸಿಎಂ ಸ್ಥಾನ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕಾಂಗ್ರೆಸ್ ಹೈಕಮಾಂಡ್‌ಗೆ ಬಿಟ್ಟಿದ್ದು, ಇದರ ಬಗ್ಗೆ ವಿಪಕ್ಷಗಳು ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ಶಾಸಕ ಕೆ.ಎಂ.ಉದಯ್ ಕಿಡಿಕಾರಿದರು.

Read Full Story

06:02 PM (IST) Jul 13

ಬನ್ನೇರುಘಟ್ಟ ಮೃಗಾಲಯದಲ್ಲಿ ಹಸಿವಿನಿಂದ ಬಳಲಿ ಪ್ರಾಣ ಬಿಟ್ಟ 3 ಹುಲಿ ಮರಿಗಳು!

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹಸಿವಿನಿಂದ ಮೂರು ಹುಲಿ ಮರಿಗಳು ಸಾವನ್ನಪ್ಪಿವೆ. ತಾಯಿ ಹುಲಿ ಮರಿಗಳಿಗೆ ಹಾಲುಣಿಸದೇ ಇರುವುದು ಮತ್ತು ಮೃಗಾಲಯದ ಸಿಬ್ಬಂದಿ ನಿರ್ಲಕ್ಷ್ಯ ಈ ದುರಂತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಈ ಘಟನೆ ಮೃಗಾಲಯ ಪ್ರಾಣಿಗಳ ಆರೈಕೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Read Full Story

05:42 PM (IST) Jul 13

'ಪೆದ್ದಿ' ಶೂಟಿಂಗ್‌ನಲ್ಲಿ ರಾಮ್ ಚರಣ್ ಹವಾ - ಕ್ಲೈಮ್ಯಾಕ್ಸ್‌ನಲ್ಲಿವೆ ಧೂಳೆಬ್ಬಿಸೋ ಸೀನ್‌ಗಳು!

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟಿಸುತ್ತಿರುವ 'ಪೆದ್ದಿ' ಸಿನಿಮಾದ ಅಪ್ಡೇಟ್ ಇಲ್ಲಿದೆ. ಉಪ್ಪೆನ ಖ್ಯಾತಿಯ ಬುಚ್ಚಿಬಾಬು ಸನಾ ಚಿತ್ರ ನಿರ್ದೇಶಿಸುತ್ತಿದ್ದು, ಎ.ಆರ್. ರೆಹಮಾನ್ ಸಂಗೀತ ನೀಡುತ್ತಿದ್ದಾರೆ.

Read Full Story

05:32 PM (IST) Jul 13

Rashmika Mandanna ಕುರಿತು ಅಂದೇ ಭವಿಷ್ಯ ನುಡಿದಿದ್ರು ಅಪ್ಪು! ಹಳೆಯ ವಿಡಿಯೋ ವೈರಲ್​

ನ್ಯಾಷನಲ್​ ಕ್ರಷ್​ ಎಂದೇ ಬಿಂಬಿತ ಆಗಿರೋ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರ ಭವಿಷ್ಯವನ್ನು ಅಂದೇ ನುಡಿದಿದ್ದರು ನಟ ಪುನೀತ್​ ರಾಜ್​. ಆ ವಿಡಿಯೋ ಮತ್ತೆ ವೈರಲ್​ ಆಗಿದೆ. ಅವರು ಹೇಳಿದ್ದೇನು?

 

Read Full Story

05:31 PM (IST) Jul 13

ಒಂದು ಸೆಕೆಂಡಿಗೆ ₹10 ಲಕ್ಷ ಸಂಭಾವನೆ ಪಡೆಯುವ ಸ್ಟಾರ್ ನಟಿ ಯಾರು ಗೊತ್ತಾ? ಪ್ರೈವೇಟ್ ಜೆಟ್ ಇಟ್ಟ ಬ್ಯೂಟಿ ಈಕೆ!

ದಕ್ಷಿಣ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು ಗೊತ್ತಾ? ಒಂದು ಸೆಕೆಂಡಿಗೆ ₹10 ಲಕ್ಷ ಪಡೆಯುವ ಸ್ಟಾರ್ ನಟಿ ಬಗ್ಗೆ ತಿಳಿಯೋಣ.

Read Full Story

05:21 PM (IST) Jul 13

ಡಿವೋರ್ಸ್ ಸಿಕ್ಕ ಖುಷಿಯಲ್ಲಿ 40 ಲೀಟರ್ ಹಾಲಿನಲ್ಲಿ ಸ್ನಾನ ಮಾಡಿದ ಗಂಡ, ಸಂಭ್ರಮದ ವಿಡಿಯೋ

ಪತ್ನಿಗೆ ಒಬ್ಬ ಲವರ್. ಆತನ ಜೊತೆ ಓಡಿ ಹೋದರೂ ಪತಿ ಮಾತ್ರ ಕುಟುಂಬದ ಸಂತೋಷ ಹಾಳುಗುತ್ತೆ ಅನ್ನೋ ಕಾರಣಕ್ಕೆ ಮೌನವಾಗಿದ್ದ. ಕೊನೆಗೆ ಪತ್ನಿಯ ಟಾರ್ಚರ್ ತಡಿಯಲು ಆಗದೆ ಡಿವೋರ್ಸ್‌ಗೆ ಅರ್ಜಿ ಹಾಕಿದ್ದ. ಇದೀಗ ಡಿವೋರ್ಸ್ ಸಿಗುತ್ತಿದ್ದಂತೆ ಗಂಡ ಖುಷಿಯಲ್ಲಿ ಕ್ಷೀರಾಭೀಷಕ ಮಾಡಿದ್ದಾನೆ.

Read Full Story

05:10 PM (IST) Jul 13

ಕರ್ನಾಟಕದ ಏಕೈಕ ಐತಿಹಾಸಿಕ ಗಡಿಗೋಪುರಕ್ಕೆ ಮತ್ತೆ ಹಾನಿ! ಸರ್ಕಾರ ಇನ್ನಾದ್ರೂ ಎಚ್ಚೆತ್ತುಕೊಳ್ಳಬೇಕು

ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿರುವ ಐತಿಹಾಸಿಕ ಗಡಿ ಗೋಪುರಕ್ಕೆ ಮತ್ತೊಮ್ಮೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದ ಈ ಸ್ಮಾರಕಕ್ಕೆ ಹಾನಿಯುಂಟಾಗಿರುವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ. ಈ ಹಿಂದೆಯೂ ಇದೇ ರೀತಿಯ ಘಟನೆ ನಡೆದಿತ್ತು.
Read Full Story

05:01 PM (IST) Jul 13

'ಜೆಲ್ಲಿ ಫಿಶ್ ಪೇರೆಂಟಿಂಗ್'..ಮಕ್ಕಳನ್ನ ಈ ರೀತಿ ಬೆಳೆಸಿದ್ರೆ ಖುಷಿಯಾಗಿರ್ತಾರಂತೆ

ಜೆಲ್ಲಿ ಫಿಶ್ ಪೇರೆಂಟಿಂಗ್ ಎಂದರೇನು, ಅದರ ಅನುಕೂಲಗಳು ಅಥವಾ ಅನಾನುಕೂಲಗಳು ಯಾವುವು ಮತ್ತು ಈ ಪಾಲನೆಯ ಶೈಲಿಯು ಮಕ್ಕಳಿಗೆ ಹೇಗೆ ಉಪಯುಕ್ತವಾಗಿದೆ ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ. 

Read Full Story

03:59 PM (IST) Jul 13

Facebookನಲ್ಲಿ ಶಿವ್ ವರ್ಮಾ, ಗರ್ಭಿಣಿಯಾದಾಗ ನಾನು ಕಾಸಿಬ್ ಪಠಾಣ್ ಎಂದ ಯುವಕ!

ಫೇಸ್‌ಬುಕ್‌ನಲ್ಲಿ ಶಿವ್ ವರ್ಮಾ ಎಂದು ಪರಿಚಯಿಸಿಕೊಂಡ ಕಾಸಿಬ್ ಪಠಾಣ್, ಹಿಂದೂ ಯುವತಿಯನ್ನು ಪ್ರೀತಿಸಿ ಮತಾಂತರಕ್ಕೆ ಒತ್ತಾಯಿಸಿದ್ದಾನೆ. ಬಲವಂತದ ಗರ್ಭಪಾತ ಮತ್ತು ಬ್ಲ್ಯಾಕ್‌ಮೇಲ್ ಆರೋಪಗಳೂ ಕೇಳಿಬಂದಿವೆ. ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
Read Full Story

03:29 PM (IST) Jul 13

ಬಾಲಿವುಡ್ ಎಡವಿದ್ದೆಲ್ಲಿ? ಸಿನಿಮಾ ಇಂಡಸ್ಟ್ರಿಗೆ ಬಿರಿಯಾನಿ ಸಲಹೆ ಕೊಟ್ಟ ನಿಖಿಲ್ ಕಾಮತ್

ಬಾಲಿವುಡ್ ಸಿನಿಮಾಗಳು ಕಳೆಗುಂದಿದೆ. ಮತ್ತೆ ವೀಕ್ಷಕರ ಸೆಳೆಯಲು ಏನು ಮಾಡಬೇಕು? ಉದ್ಯಮಿ ನಿಖಿಲ್ ಕಾಮತ್ ಬಿರಿಯಾನಿ ಮೂಲಕ ಬಾಲಿವುಡ್ ಮಂದಿಗೆ ಮಹತ್ವದ ಸಲಹೆ ನೀಡಿದ್ದಾರೆ. ಇದೇ ವೇಳೆ ಕನ್ನಡ ಹಾಗೂ ಮಲೆಳೆಯಾಳಂ ಸಿನಿಮಾ ಇಂಡಸ್ಟ್ರೀಯನ್ನು ನಿಖಿಲ್ ಹೊಗಳಿದ್ದಾರೆ.

Read Full Story

03:16 PM (IST) Jul 13

ಲಾರ್ಡ್ಸ್‌ ಟೆಸ್ಟ್‌ನಲ್ಲಿ ಎಷ್ಟು ರನ್ ಟಾರ್ಗೆಟ್ ಸಿಕ್ಕರೇ ಟೀಂ ಇಂಡಿಯಾ ಚೇಸ್ ಮಾಡಬಹುದು?

ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನಲ್ಲಿ ಭಾರತ ಗೆಲ್ಲಲು ಹಲವು ಸವಾಲುಗಳಿವೆ. 300ಕ್ಕೂ ಹೆಚ್ಚು ರನ್‌ಗಳನ್ನು ಚೇಸ್ ಮಾಡುವುದು ಕಠಿಣ, ಬೌಲರ್‌ಗಳು ಮಿಂಚಬೇಕು, ಮತ್ತು ಸ್ಪಿನ್ನರ್‌ಗಳು ಪಿಚ್‌ನ ಲಾಭ ಪಡೆಯಬೇಕು.
Read Full Story

02:48 PM (IST) Jul 13

Chhangur Baba - ಮತಾಂತರಿ ಬಾಬಾ ಮನೆ ನೆಲಸಮ - ಈ ಆಸಾಮಿ ಮತಾಂತರಕ್ಕೆ ಬಳಸ್ತಿದ್ದ ಕೋಡ್​ ವರ್ಡ್​ ನೋಡಿ!

ಮತಾಂತರ ಮಾಡುತ್ತಿದ್ದ ಛಂಗುರ್‌ ಬಾಬಾ ಬಳಸುತ್ತಿದ್ದ ಕೋಡ್‌ ವರ್ಡ್‌ಗಳು ಬಯಲಿಗೆ ಬಂದಿವೆ. ಮಿಟ್ಟಿ ಪಲಟನಾ, ಕಾಜಲ್​ ಲಗಾನಾ, ದರ್ಶನ್​ ಎಂಬ ಕೋಡ್‌ಗಳ ಮೂಲಕ ಮತಾಂತರ ನಡೆಸುತ್ತಿದ್ದ. ಜಾತಿಯ ಆಧಾರದ ಮೇಲೆ ಹಣ ನಿಗದಿಪಡಿಸಿ ಮತಾಂತರ ಮಾಡಿಸುತ್ತಿದ್ದ.
Read Full Story

02:17 PM (IST) Jul 13

ಹೆಂಡತಿಯನ್ನು ಅರಸುತ್ತಾ ರೈಲ್ವೆ ಫ್ಲಾಟ್‌ಫಾರ್ಮ್‌ ಮೇಲೆ ಕಾರು ಓಡಿಸಿದವನ ಕಂಬಿ ಹಿಂದೆ ಕೂರಿಸಿದ ಪೊಲೀಸರು

ಹೆಂಡತಿಯನ್ನು ಹುಡುಕಿಕೊಂಡು ಗಂಡನೋರ್ವ ರೈಲ್ವೆ ಪ್ಲಾಟ್‌ಫಾರ್ಮ್‌ ಮೇಲೆ ಕಾರನ್ನು ಓಡಿಸಿದ ಘಟನೆ ಗ್ವಾಲಿಯರ್‌ನಲ್ಲಿ ನಡೆದಿದೆ. ಕುಡಿದ ಅಮಲಿನಲ್ಲಿ ಈ ಕೃತ್ಯ ಎಸಗಿದ ಆತನನ್ನು ಪೊಲೀಸರು ಬಂಧಿಸಿದ್ದಾರೆ. 

Read Full Story

01:59 PM (IST) Jul 13

'ನನ್ನ ನಜೀಂ ಎಲ್ಲರಂತಲ್ಲ..' ಪ್ರೀತಿಗಾಗಿ ಹಿಂದೂ ಹುಡುಗಿ ಇಸ್ಲಾಂಗೆ ಮತಾಂತರ, ವಿಡಿಯೋ ವೈರಲ್, ಭಜರಂಗದಳದಿಂದ ಪೊಲೀಸ್ ಠಾಣೆಗೆ ಮುತ್ತಿಗೆ!

ಮೊರಾದಾಬಾದ್‌ನಲ್ಲಿ ಯುವತಿಯೊಬ್ಬಳು ಇಸ್ಲಾಂ ಧರ್ಮ ಸ್ವೀಕರಿಸಿದ ವಿಡಿಯೋ ವೈರಲ್ ಆಗಿದ್ದು, ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಯುವತಿಯ ಕುಟುಂಬ ನಾಪತ್ತೆ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
Read Full Story

01:37 PM (IST) Jul 13

Junior Cinema - 'ವೈರಲ್ ವೈಯ್ಯಾರಿ'ಗೆ ಬಿಗ್​ಬಾಸ್​ ಕಿಶನ್​ ಜೊತೆ ಚಿಂದಿ ಉಡಾಯಿಸಿದ ನಮ್ರತಾ ಗೌಡ

ಇದೇ 18ರಂದು ತೆರೆ ಕಾಣಲಿರುವ 'ವೈರಲ್ ವೈಯ್ಯಾರಿ' ಟ್ರೆಂಡಿಂಗ್​ ಸಾಂಗ್​ಗೆ ನಮ್ರತಾ ಗೌಡ ಮತ್ತು ಕಿಶನ್​ ಬಿಳಗಲಿ ಸ್ಟೆಪ್​ ಹಾಕಿದ್ರೆ ಹೇಗಿರತ್ತೆ? ಚಿಂದಿ ಉಡಾಯಿಸಿದೆ ಈ ಜೋಡಿ. ನೋಡಿ ವೈರಲ್​ ವಿಡಿಯೋ...

 

Read Full Story

01:24 PM (IST) Jul 13

ಹಾಡಹಗಲೇ ಬಿಜೆಪಿ ನಾಯಕನ ಭೀಕರ ಹ*ತ್ಯೆ!

ಬಿಜೆಪಿ ನಾಯಕನ ಹತ್ಯೆ: ಪಾಟ್ನಾದಲ್ಲಿ ಭಾಜಪ ನಾಯಕ ಸುರೇಂದ್ರ ಕೇವಟ್‌ರನ್ನ ಗುಂಡಿಕ್ಕಿ ಕೊಲ್ಲಲಾಗಿದೆ. ಶೇಖ್‌ಪುರ ಗ್ರಾಮದಲ್ಲಿ ಹೊಲದಿಂದ ವಾಪಸ್ ಬರುವಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಪಾಟ್ನಾ ಏಮ್ಸ್‌ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
Read Full Story

More Trending News