ಮುಂಬೈ / ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿನ ಯುದ್ಧದ ನಡುವೆಯೂ ಭಾರತೀಯ ಕ್ಯಾಪ್ಟನ್ ಮುನ್ನಡೆಸುವ, ಲೈಬೀರಿಯನ್ ಧ್ವಜ ಹೊಂದಿರುವ ಕಚ್ಚಾ ತೈಲ ಹಡಗೊಂದು ಇರಾನ್ನಿಂದ ನಿರ್ಬಂಧಿತವಾಗಿರುವ ಹೋರ್ಮುಜ್ ಜಲ ಸಂಧಿಯನ್ನು ದಾಟಿ ಮುಂಬೈ ಬಂದರನ್ನು ತಲುಪಿದೆ. 1.35 ಲಕ್ಷಟನ್ (10 ಲಕ್ಷ ಬ್ಯಾರೆಲ್) ಕಚ್ಚಾ ತೈಲವನ್ನು ಇದು ಹೊತ್ತು ತಂದಿದ್ದು, ಸುರಕ್ಷಿತವಾಗಿ ತಲುಪಿದೆ.

11:32 PM (IST) Mar 13
10:15 PM (IST) Mar 13
09:50 PM (IST) Mar 13
ಮಾಜಿ ಕ್ರಿಕೆಟಿಗ ಹಾಗೂ ಸಂಸದ ಹರ್ಭಜನ್ ಸಿಂಗ್ ಅವರು ಇಂಟರ್ನೆಟ್ನಲ್ಲಿನ ಅಶ್ಲೀಲ ವಿಷಯಗಳು ಮತ್ತು ಸಾಮಾಜಿಕ ಜಾಲತಾಣಗಳ ದುರುಪಯೋಗದ ವಿರುದ್ಧ ಕಠಿಣ ಕಾನೂನು ರೂಪಿಸಲು ರಾಜ್ಯಸಭೆಯಲ್ಲಿ ಒತ್ತಾಯಿಸಿದ್ದಾರೆ.
09:49 PM (IST) Mar 13
09:17 PM (IST) Mar 13
ಏ.1, 2025 ರಿಂದ ಜಾರಿಗೆ ಬರಲಿರುವ ಹೊಸ ಆದಾಯ ತೆರಿಗೆ ಕಾಯ್ದೆಯು, 1961ರ ಹಳೆಯ ಕಾಯ್ದೆಯನ್ನು ಬದಲಿಸಿ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ಗುರಿ ಹೊಂದಿದೆ. ತೆರಿಗೆ ದರಗಳಲ್ಲಿ ಯಾವುದೇ ತಕ್ಷಣದ ಬದಲಾವಣೆ ತರುವುದಿಲ್ಲ, ಬದಲಾಗಿ ಕಾನೂನನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಮಾಡುತ್ತದೆ.
08:59 PM (IST) Mar 13
ಅಮೆರಿಕ ಮೂಲದ ಹ್ಯೂಮನ್ ಮೈಕ್ರೋಬ್ಸ್ ಸಂಸ್ಥೆಯು ಆರೋಗ್ಯವಂತರಿಂದ ಮಲವನ್ನು ದಾನವಾಗಿ ಪಡೆದು ವಾರ್ಷಿಕ 1.5 ಕೋಟಿ ರೂ. ನೀಡುತ್ತಿದೆ. ಈ ಮಲವನ್ನು ಗಂಭೀರ ಕರುಳಿನ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಮಲ ಮೈಕ್ರೋಬಯೋಟಾ ಕಸಿ (FMT) ಗಾಗಿ ಬಳಸಲಾಗುತ್ತದೆ.
08:58 PM (IST) Mar 13
ಮಧ್ಯಪ್ರಾಚ್ಯದ ಯುದ್ಧದಿಂದ ನೈಸರ್ಗಿಕ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿ, ಭಾರತದ ರಸಗೊಬ್ಬರ ಉತ್ಪಾದನೆಗೆ ಹೊಡೆತ ಬಿದ್ದಿದೆ. ಈ ತುರ್ತು ಪರಿಸ್ಥಿತಿ ನಿಭಾಯಿಸಲು, ಕೆಲವು ಯೂರಿಯಾ ಸರಕುಗಳ ಮಾರಾಟಕ್ಕೆ ಅನುವು ಮಾಡಿಕೊಡುವಂತೆ ಭಾರತವು ಚೀನಾಕ್ಕೆ ಮನವಿ ಮಾಡಿದೆ.
08:35 PM (IST) Mar 13
ಹಾಸ್ಯ ನಟ ವಡಿವೇಲು ಅವರು ಡಿಎಂಕೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ, ನಟ ವಿಜಯ್ ಅವರನ್ನು ಗುರಿಯಾಗಿಸಿ ಮಾತನಾಡಿದ್ದಾರೆ. ಇದರ ಸಂಪೂರ್ಣ ವಿವರ ಇಲ್ಲಿದೆ.
08:23 PM (IST) Mar 13
ಭಾರತದಲ್ಲಿ ತೈಲ ಮತ್ತು ಎಲ್ಪಿಜಿ ಬಿಕ್ಕಟ್ಟಿನ ಆತಂಕದ ನಡುವೆ, ಇರಾನ್ ತನ್ನ ಮಿತ್ರ ರಾಷ್ಟ್ರವಾದ ಭಾರತಕ್ಕೆ ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಟ್ಯಾಂಕರ್ಗಳಿಗೆ ಸುರಕ್ಷಿತ ಮಾರ್ಗವನ್ನು ಒದಗಿಸಲು ಸಿದ್ಧವಿದೆ ಎಂದು ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ ಭರವಸೆ ನೀಡಿದ್ದಾರೆ.
08:21 PM (IST) Mar 13
ಕಿರಣ್ ಕುಮಾರ್ ಗುರೂಜಿ ಅವರ ಪ್ರಕಾರ, ಇರಾನ್-ಇಸ್ರೇಲ್ ಯುದ್ಧವು 40-55 ದಿನಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ಈ ಯುದ್ಧವು ರಷ್ಯಾದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಜಾಗತಿಕ ಮಟ್ಟದಲ್ಲಿ ಒಬ್ಬ ಪ್ರಮುಖ ನಾಯಕನ ಅಂತ್ಯವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
08:08 PM (IST) Mar 13
07:43 PM (IST) Mar 13
ನಟ ಅಜಿತ್ ಕುಮಾರ್ ಕಾರ್ ರೇಸ್ನಲ್ಲಿ ಭಾಗವಹಿಸಲು ದುಬೈಗೆ ಹೋಗಿದ್ದರು. ದುಬೈನಿಂದ ವಾಪಸಾದ ಅಜಿತ್ ಕುಮಾರ್ಗೆ ಮಹೀಂದ್ರಾ ಕಂಪನಿಯು ತನ್ನ ಹೊಚ್ಚ ಹೊಸ ಫಾರ್ಮುಲಾ E ಥೀಮ್ನ ಎಸ್ಯುವಿ ಕಾರನ್ನು ಉಡುಗೊರೆಯಾಗಿ ನೀಡಿದೆ.
07:10 PM (IST) Mar 13
LPG ಗ್ಯಾಸ್ ಸಮಸ್ಯೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್ ವೈರಲ್, ಸಂಕಷ್ಟದ ನಡುವೆ ನಕ್ಕು ಸುಸ್ತಾದ ಜನ, ದೇಶದಲ್ಲಿ ಎದುರಾಗರುವ ಗ್ಯಾಸ್ ಕೊರತೆ ಸಮಸ್ಯೆಯನ್ನು ಹಲವರು ತಮಾಷೆ ಮಾಡಿದ್ದಾರೆ. ಈ ಕುರಿತ ಮೀಮ್ಸ್ ಇಲ್ಲಿದೆ.
06:50 PM (IST) Mar 13
ರಣವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ ಮತ್ತೆ ಥಿಯೇಟರ್ಗೆ ಎಂಟ್ರಿ ಕೊಡುತ್ತಿದೆ. ಇದರ ಸೀಕ್ವೆಲ್ ಬರುವ ಮುನ್ನ, ಚಿತ್ರದ ಮೊದಲ ಭಾಗವನ್ನು ವಿಶ್ವಾದ್ಯಂತ ಮರು-ಬಿಡುಗಡೆ ಮಾಡಲಾಗುತ್ತಿದೆ.
06:37 PM (IST) Mar 13
06:34 PM (IST) Mar 13
ಇರಾನ್-ಇಸ್ರೇಲ್ ಯುದ್ಧದಿಂದಾಗಿ, ನೇರ ಸಂಬಂಧವಿಲ್ಲದಿದ್ದರೂ ಗಲ್ಫ್ ದೇಶಗಳು ಭಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಸೌದಿ ಅರೇಬಿಯಾ ಮತ್ತು ಯುಎಇ ತಲಾ ₹42,000 ಕೋಟಿಗೂ ಅಧಿಕ ನಷ್ಟ ಅನುಭವಿಸಿದ್ದು, ಇಂಧನ ಆದಾಯ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳು ತೀವ್ರವಾಗಿ ಹಾನಿಗೊಳಗಾಗಿವೆ.
06:07 PM (IST) Mar 13
ಹೈದರಾಬಾದ್ನಲ್ಲಿ ನಟ ಅಲ್ಲು ಅರ್ಜುನ್ ಹೊಸ ಮಲ್ಟಿಪ್ಲೆಕ್ಸ್ 'ಅಲ್ಲು ಸಿನಿಮಾಸ್' ಶುರು ಮಾಡಿದ್ದಾರೆ. ಇಲ್ಲಿನ 'ವಾಲ್ ಆಫ್ ಫೇಮ್'ನಲ್ಲಿರೋ ನಿರ್ದೇಶಕರ ಲಿಸ್ಟ್ ಈಗ ಸಖತ್ ಚರ್ಚೆಯಲ್ಲಿದೆ.
06:06 PM (IST) Mar 13
ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಮತ್ತು ಹಾರ್ಮುಜ್ ಜಲಸಂಧಿ ಮುಚ್ಚಿರುವ ಕಾರಣ, ಭಾರತದಲ್ಲಿ ಎಲ್ಪಿಜಿ ಪೂರೈಕೆಯ ಬಗ್ಗೆ ಕಳವಳ ಹೆಚ್ಚಾಗಿದೆ, ಇದು ಗ್ಯಾಸ್ ಬುಕಿಂಗ್ಗಳಲ್ಲಿ ಹಠಾತ್ ಏರಿಕೆಗೆ ಕಾರಣವಾಗಿದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಿಲ್ಲ ಎಂದು ಕೇಂದ್ರ ಹೇಳಿದೆ.
05:46 PM (IST) Mar 13
ಊಟ ಮಾಡಿ ಆಟ ಆಡಿ ಬೇರೆ ಮದುವೆಯಾದ ಪೊಲೀಸಪ್ಪ, ದುರಂತ ಅಂತ್ಯಕಂಡ ಮಹಿಳೆ ಕೊನೆ ವಿಡಿಯೋ, ಕಳೆದ ನಾಲ್ಕು ವರ್ಷದಿಂದ ಪತ್ನಿ ರೀತಿ ನನ್ನ ಇಟ್ಟುಕೊಂಡಿದ್ದ. ಆತ ಪೊಲೀಸ್ ಆಗಿದ್ದ ಕಾರಣ ನನಗೆ ಯಾರಿಂದಲೂ ನೆರವು ಸಿಗಲಿಲ್ಲ ಎಂದು ದುರಂತ ಅಂತ್ಯಕಂಡಿದ್ದಾಳೆ.
05:21 PM (IST) Mar 13
ಪತಿ ಸೊಹೇಲ್ ಖತೂರಿಯಾ ಜೊತೆಗಿನ ನಾಲ್ಕು ವರ್ಷಗಳ ದಾಂಪತ್ಯಕ್ಕೆ ನಟಿ ಹನ್ಸಿಕಾ ಮೋಟ್ವಾನಿ ಅಂತ್ಯ ಹಾಡಿದ್ದಾರೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳೇ ವಿಚ್ಛೇದನಕ್ಕೆ ಕಾರಣವಾಗಿದ್ದು, ಹನ್ಸಿಕಾ ಯಾವುದೇ ಜೀವನಾಂಶ ಪಡೆದಿಲ್ಲ ಎಂದು ವರದಿಯಾಗಿದೆ.
04:46 PM (IST) Mar 13
ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು (ISS) ಭಾರತದ ಅದ್ಭುತ ರಾತ್ರಿ ಸಮಯದ ಚಿತ್ರವನ್ನು ಹಂಚಿಕೊಂಡಿದೆ. ಅರಬ್ಬೀ ಸಮುದ್ರ ಮತ್ತು ಹಿಮಾಲಯದ ಮೇಲೆ ಹಾದುಹೋಗುವಾಗ ಸೆರೆಹಿಡಿದ ಈ ಚಿತ್ರದಲ್ಲಿ, ನಗರಗಳ ದೀಪಗಳು ಬಲೆಯಂತಹ ವಿನ್ಯಾಸವನ್ನು ರೂಪಿಸಿವೆ.
04:39 PM (IST) Mar 13
ಟೀಂ ಇಂಡಿಯಾದಿಂದ ತನ್ನನ್ನು ಕೈಬಿಟ್ಟಿದ್ದಕ್ಕೆ ಗೌತಮ್ ಗಂಭೀರ್ಗೆ ಈಗಲೂ ತನ್ನ ಮೇಲೆ ಸಿಟ್ಟಿದೆ ಎಂದು ಮಾಜಿ ಚೀಫ್ ಸೆಲೆಕ್ಟರ್ ಸಂದೀಪ್ ಪಾಟೀಲ್ ಹೇಳಿದ್ದಾರೆ. ಆತ್ಮೀಯ ಸ್ನೇಹಿತರಾಗಿದ್ದ ಗಂಭೀರ್, ಆಯ್ಕೆ ಸಮಿತಿಯ ನಿರ್ಧಾರದ ನಂತರ ತನ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಾರೆ ಎಂದಿದ್ದಾರೆ.
04:21 PM (IST) Mar 13
ಇಂಗ್ಲೆಂಡ್ನ 'ದಿ ಹಂಡ್ರೆಡ್' ಟೂರ್ನಿಗೆ ಸನ್ರೈಸರ್ಸ್ ಲೀಡ್ಸ್ ತಂಡ ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ನನ್ನು ಖರೀದಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ, ಇದು ವಿದೇಶಿ ಲೀಗ್ ಆಗಿರುವುದರಿಂದ ತಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದಿದೆ.
04:15 PM (IST) Mar 13
ಪಂಜಾಬ್ನ ಬರ್ನಾಲಾದಲ್ಲಿ ಎಲ್ಪಿಜಿ ಸಿಲಿಂಡರ್ಗಾಗಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ದೇಶಾದ್ಯಂತ ಇಂಧನ ಕೊರತೆಯ ವದಂತಿಯಿಂದ ಉಂಟಾದ 'ಪ್ಯಾನಿಕ್ ಬೈಯಿಂಗ್' ಈ ದುರಂತಕ್ಕೆ ಕಾರಣವಾಗಿದೆ.
04:15 PM (IST) Mar 13
ಮತ್ತೊಂದು ಸ್ಲೀಪರ್ ಬಸ್ ದುರಂತ, ಚಲಿಸುತ್ತಿದ್ದ ಬಸ್ ಹೊತ್ತಿ ಉರಿದು ಪ್ರಯಾಣಿಕ ಸಾವು, 6 ಮಂದಿ ಗಂಭೀರ, ಐಷಾರಾಮಿ ಸ್ಲೀಪರ್ ಬಸ್ ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಹಲವರು ಬಸ್ಸಿನ ಗಾಜು ಒಡೆದು ಹೊರಕ್ಕೆ ಹಾರಿ ಜೀವ ಉಳಿಸಿಕೊಂಡಿದ್ದಾರೆ.
03:57 PM (IST) Mar 13
EPFO Interest Rate: ಪಿಎಫ್ ಖಾತೆಗೆ ಶೇ. 8.25 ರಷ್ಟು ಬಡ್ಡಿ ಪಾವತಿಸುವುದಾಗಿ ಘೋಷಿಸಲಾಗಿದೆ. ಆದರೆ ಈ ಬಡ್ಡಿಯನ್ನು ಯಾವಾಗ ಜಮಾ ಮಾಡಲಾಗುತ್ತದೆ ಮತ್ತು ಠೇವಣಿ ಮಾಡಿದ ಮೊತ್ತಕ್ಕೆ ಎಷ್ಟು ಬಡ್ಡಿ ಜಮಾ ಮಾಡಲಾಗುತ್ತದೆ ಎಂಬ ಕುತೂಹಲ ನೌಕರರಲ್ಲಿ ಹೆಚ್ಚಾಗಿದೆ.
03:52 PM (IST) Mar 13
ಯುಗಾದಿ ಹಬ್ಬದಂದು ಬಿಡುಗಡೆಯಾಗುತ್ತಿರುವ ಹಿಂದಿಯ 'ದುರಂಧರ್-2' ಚಿತ್ರದ ಟಿಕೆಟ್ ದರ ಕರ್ನಾಟಕದಲ್ಲಿ ಗಗನಕ್ಕೇರಿದೆ. ಯಶ್ ಅವರ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಮುಂದೂಡಿದ್ದರಿಂದ, ದುರಂಧರ್-2 ಚಿತ್ರತಂಡವು ಪ್ರೀಮಿಯರ್ ಶೋಗಳಿಗೆ ಸಾವಿರಾರು ರೂಪಾಯಿ ನಿಗದಿಪಡಿಸಲಾಗಿದೆ.
03:36 PM (IST) Mar 13
ಕೋಮಾಗೆ ಜಾರಿದ ಮಜ್ತೊಬಾ ಖಮೇನಿ, ಶರಣಾಗತಿಯತ್ತ ಇರಾನ್; G7 ನಾಯಕರ ಸಭೆ ಬಳಿ ಟ್ರಂಪ್ ಘೋಷಣೆ, ಮಾತುಕತೆ ನಡೆಸಲು ಇರಾನ್ನಲ್ಲಿ ನಾಯಕರಿಲ್ಲ ಎಂದಿರುವ ಟ್ರಂಪ್, ಜಿ7 ವರ್ಚುವಲ್ ಮೀಟಿಂಗ್ ಭಾರಿ ಮಹತ್ವ ಪಡೆದಿದೆ.
03:17 PM (IST) Mar 13
Moradabad newlywed elopes: ಉತ್ತರ ಪ್ರದೇಶದ ಮೊರದಾಬಾದ್ ಬಸ್ ನಿಲ್ದಾಣದಲ್ಲಿ, ಪಕೋಡಾ ತರಲು ಗಂಡನನ್ನು ಕಳುಹಿಸಿದ ನವ ವಿವಾಹಿತೆಯೊಬ್ಬಳು ಆತ ಹಿಂತಿರುಗುವಷ್ಟರಲ್ಲಿ ನಾಪತ್ತೆಯಾಗಿದ್ದಾಳೆ. ಮೂರು ತಿಂಗಳ ಹಿಂದಷ್ಟೇ ಇವರ ಮದುವೆಯಾಗಿತ್ತು.
01:40 PM (IST) Mar 13
ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಫೋಟೋವೊಂದನ್ನು ಶುಭಮನ್ ಗಿಲ್ ಹಂಚಿಕೊಂಡಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ಈ ಫೋಟೋದಲ್ಲಿ 'ಸರಣಿ ಶ್ರೇಷ್ಠ' ಪ್ರಶಸ್ತಿ ವಿಜೇತ ಸಂಜು ಸ್ಯಾಮ್ಸನ್ ಸ್ಪಷ್ಟವಾಗಿ ಕಾಣಿಸದ ಕಾರಣ ಅಭಿಮಾನಿಗಳು ಗಿಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
01:29 PM (IST) Mar 13
ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗುವುದಕ್ಕಾಗಿ 35 ವರ್ಷದ ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಗೂಗಲ್ ಕಂಪನಿಯಲ್ಲಿದ್ದ 2 ಕೋಟಿ ವೇತನದ ಕೆಲಸವನ್ನೇ ತೊರೆದಿದ್ದಾಗಿ ಹೇಳಿಕೊಂಡಿದ್ದು, ಇದು ಅನೇಕರನ್ನು ಅಚ್ಚರಿಗೀಡು ಮಾಡಿದೆ.
01:03 PM (IST) Mar 13
ಟಿ20 ವಿಶ್ವಕಪ್ನಲ್ಲಿ ಭಾರತದ ಗೆಲುವಿಗೆ ದಕ್ಷಿಣ ಆಫ್ರಿಕಾದ ತಂತ್ರಗಾರಿಕೆಯ ವೈಫಲ್ಯವೇ ಕಾರಣ ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಹೇಳಿದ್ದಾರೆ. ಸೂಪರ್ 8 ಹಂತದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ಸೋತಿದ್ದರೆ, ಭಾರತ ತಂಡ ಟೂರ್ನಿಯಿಂದ ಹೊರಬೀಳುತ್ತಿತ್ತು ಎಂದು ವಾನ್ ಹೇಳಿದ್ದಾರೆ
12:59 PM (IST) Mar 13
ದಾಳಿಯಲ್ಲಿ ನೂತನ ನಾಯಕ ಮೊಜ್ತಬಾ ಖಮೇನಿ ಎರಡೂ ಕಾಲು ಕಟ್, ಜೀವ ಮಾತ್ರ ಇದೆ ಎಂದ ಅಮೆರಿಕ, ಹೊಟ್ಟೆ ಹಾಗೂ ಲಿವರ್ ಡ್ಯಾಮೇಜ್ ಆಗಿದೆ. ರಹಸ್ಯ ಸ್ಥಳದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
12:56 PM (IST) Mar 13
ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾವು ಹೆಚ್ಚುತ್ತಿರುವಾಗಲೇ, ಹಾರ್ಮುಜ್ ಜಲಸಂಧಿ ಮೂಲಕ ಸಾಗಲು ತೈಲ ಟ್ಯಾಂಕರ್ ಸಿಬ್ಬಂದಿಗೆ 'ಸ್ವಲ್ಪ ಧೈರ್ಯ ತೋರಿಸಿ' ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಾನ್ ದಾಳಿ ಹೆಚ್ಚಾದ ಕಾರಣ ಟ್ಯಾಂಕರ್ಗಳಿಗೆ ಭದ್ರತೆ ನೀಡಲು ಪೆಂಟಗನ್ ನಿರಾಕರಿಸಿದೆ.
12:42 PM (IST) Mar 13
ದೇಶದಲ್ಲಿ ಮಹಿಳೆಯರಿಗೆ ಮುಟ್ಟಿನ ರಜೆ ಕಡ್ಡಾಯ ಮಾಡಿದರೆ, ಅದು ಉದ್ಯೋಗ ಮಾರುಕಟ್ಟೆಯಲ್ಲಿ ಅವರಿಗೇ ದೊಡ್ಡ ಹೊಡೆತ ಕೊಡಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಕಾನೂನು ಬಂದರೆ, ಕಂಪನಿಗಳು ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತವೆ ಎಂದು ಕೋರ್ಟ್ ಎಚ್ಚರಿಸಿದೆ.
12:28 PM (IST) Mar 13
ಮೊಹಮ್ಮದ್ ಪ್ರೀತಿಯಲ್ಲಿ ನರಕ ನೋಡಿದ ಹಿಂದೂ ಯುವತಿ, ಫ್ರಿಡ್ಜ್ ಕೇಸ್ ಆಗಬಾರದೆಂದು ದುರಂತ ಅಂತ್ಯ, 24 ವರ್ಷದ ದಂತ ಸರ್ಜರಿ ವಿದ್ಯಾರ್ಥಿನಿಗೆ ಡೇಟಿಂಗ್ ಆ್ಯಪ್ ಮೂಲಕ ಈ ಮೊಹಮ್ಮದ್ ಖಾನ್ ಪರಿಚಯವಾಗಿದ್ದ.
11:50 AM (IST) Mar 13
11:41 AM (IST) Mar 13
ಸೌರ ಮಂಡಲದ ಮಹತ್ವದ ಘಟನೆ, ಸೂರ್ಯ, ನಕ್ಷತ್ರ ಸಮೂಹ ವಲಸೆ, ಇದೆಯಾ ಆಪತ್ತು?, ಗೈಯಾ ಸಂಶೋಧನೆ ಕೇಂದ್ರ ನಡೆಸಿದ ಅಧ್ಯಯನ ವರದಿ ಕೆಲ ಸ್ಫೋಟಕ ಮಾಹಿತಿ ನೀಡಿದೆ. ಕ್ಷೀರಪಥದಿಂದ ಸೂರ್ಯ ಹಾಗೂ ನಕ್ಷತ್ರ ಸಮೂಹಗಳು ವಲಸೆ, ಏನಿದು?
11:30 AM (IST) Mar 13
10:51 AM (IST) Mar 13
ಬೆಂಗಳೂರು: 19ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಲಿದೆಯೇ ಎನ್ನುವ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಈ ಕುರಿತಾದ ಅಪ್ಡೇಟ್ಸ್ ಇಲ್ಲಿದೆ ನೋಡಿ