LIVE NOW
Published : Jul 11, 2026, 06:31 AM ISTUpdated : Jul 11, 2026, 09:31 AM IST

India Latest News Live: ಮತ್ತೆ ಸಿನ್ನರ್‌ಗೆ ಶರಣಾದ ನೋವಾಕ್ ಜೋಕೋವಿಚ್! 8ನೇ ವಿಂಬಲ್ಡನ್ ಕನಸು ನುಚ್ಚುನೂರು

ಸಾರಾಂಶ

ಚೆನ್ನೈ: ತಮಿಳುನಾಡಿನಲ್ಲಿ ವಿಜಯ್‌ ನೇತೃತ್ವದ ಟಿವಿಕೆ ಮತ್ತೊಂದು ಮಹತ್ವದ ಆದೇಶ ಹೊರಡಿಸಿದ್ದು, ತಮಿಳುನಾಡಿನ ಶಾಲೆಗಳಲ್ಲಿ ರಾಜಕೀಯ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಿದೆ. ಅಲ್ಲದೇ ಶಾಲೆಗಳಲ್ಲಿ ರಾಜಕಾರಣಿಗಳ ಜನ್ಮದಿನಾಚರಣೆಗೂ ಬ್ರೇಕ್‌ ಹಾಕಿದೆ.

ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಬೇರೆ ಕಾರ್ಯಗಳನ್ನು ನಡೆಯಬಾರದು ಎಂಬ ಸಿಎಂ ವಿಜಯ್ ಸೂಚನೆ ಆಧರಿಸಿ ಶಿಕ್ಷಣ ಸಚಿವ ರಾಜ್‌ ಮೋಹನ್ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.

‘ಚುನಾಯಿತ ಪ್ರತಿನಿಧಿಗಳಿಗೆ ಮಾತ್ರ ಶಾಲೆಗಳು ಮತ್ತು ತರಗತಿ ಕೊಠಡಿಗಳನ್ನು ಪ್ರವೇಶಿಸಲು ಅವಕಾಶವಿದೆ. ತರಗತಿ ಕೋಣೆಗಳು ಶಿಕ್ಷಣಕ್ಕಾಗಿ ಇರಬೇಕು ಹೊರತು ರಾಜಕೀಯ ಚಟುವಟಿಕೆಗಳಿಗೆ, ಇನ್ಯಾರನ್ನೋ ಹೊಗಳುವುದಕ್ಕೆ ಅಲ್ಲ. ತರಗತಿ ಕೋಣೆ, ಶಾಲಾ ಆವರಣಗಳಲ್ಲಿ ರಾಜಕೀಯ ನಾಯಕರ ಜನ್ಮದಿನಚಾರಣೆ ಮಾಡುವಂತಿಲ್ಲ’ ಎಂದಿದ್ದಾರೆ.

09:31 AM (IST) Jul 11

ಮತ್ತೆ ಸಿನ್ನರ್‌ಗೆ ಶರಣಾದ ನೋವಾಕ್ ಜೋಕೋವಿಚ್! 8ನೇ ವಿಂಬಲ್ಡನ್ ಕನಸು ನುಚ್ಚುನೂರು

ವಿಂಬಲ್ಡನ್ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಜೋಕೋವಿಚ್ ಅವರು ಯಾನ್ನಿಕ್ ಸಿನ್ನರ್ ವಿರುದ್ಧ ಸೋತು 25ನೇ ಗ್ರ್ಯಾನ್‌ಸ್ಲಾಂ ಕನಸಿನಿಂದ ಹೊರಬಿದ್ದಿದ್ದಾರೆ. ಮತ್ತೊಂದೆಡೆ, ಅಲೆಕ್ಸಾಂಡರ್‌ ಜ್ವೆರೆವ್‌ ಫೈನಲ್‌ ಪ್ರವೇಶಿಸಿದ್ದು, ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಮುಕೋವಾ ಮತ್ತು ನೊಸ್ಕೊವಾ ಚೊಚ್ಚಲ ಟ್ರೋಫಿಗಾಗಿ ಸೆಣಸಲಿದ್ದಾರೆ.
Read Full Story

09:15 AM (IST) Jul 11

ಟೀಂ ಇಂಡಿಯಾದಿಂದ ಆ ಮೂವರು ಆಟಗಾರರಿಗೆ ಗೇಟ್‌ಪಾಸ್? ಇಂದಿನ ಸಮಯದಲ್ಲೂ ಮಹತ್ವದ ಬದಲಾವಣೆ

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ಸೋತಿರುವ ಟೀಂ ಇಂಡಿಯಾ, ಅಂತಿಮ ಪಂದ್ಯಕ್ಕೆ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ. ಕಳಪೆ ಪ್ರದರ್ಶನ ನೀಡಿದ ಮೂವರು ಆಟಗಾರರನ್ನು ಅವರನ್ನು ತಂಡದಿಂದ ಕೈಬಿಡಬಹುದು ಎಂದು ವರದಿಯಾಗಿದೆ.

Read Full Story

07:45 AM (IST) Jul 11

ತೀವ್ರ ಬಿಸಿಲ ಅಪಾಯದಲ್ಲಿರೋ ವಿಶ್ವದ ಟಾಪ್ 50 ನಗರಗಳಲ್ಲಿ ಬೆಂಗಳೂರು; ಭಾರತದ 14 ನಗರಗಳು

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ತೀವ್ರ ಬಿಸಿಲಿನ ಅಪಾಯದಲ್ಲಿರುವ ವಿಶ್ವದ ಅಗ್ರ 50 ನಗರಗಳ ಪಟ್ಟಿಯಲ್ಲಿ ಭಾರತದ 14 ನಗರಗಳಿವೆ. ಈ ಅಪಾಯಕಾರಿ ಪಟ್ಟಿಯಲ್ಲಿ ಕರ್ನಾಟಕದ ಬೆಂಗಳೂರು ಕೂಡಾ ಸ್ಥಾನ ಪಡೆದಿದ್ದು, ಇದು ಹವಾಮಾನ ಬದಲಾವಣೆಯ ಗಂಭೀರ ಪರಿಣಾಮಗಳನ್ನು ಎತ್ತಿ ತೋರಿಸುತ್ತದೆ.
Read Full Story

07:35 AM (IST) Jul 11

ಇ20 ಪೆಟ್ರೋಲಿಂದ ಮೈಲೇಜ್‌ ಕುಸಿತ ನಿಜ, ಆದ್ರೆ ಎಥನಾಲ್‌ ರಹಿತ ಪೆಟ್ರೋಲ್‌ ಕೊಡಲ್ಲ - ಕೇಂದ್ರ

ಶೇ.20 ಎಥನಾಲ್ ಮಿಶ್ರಿತ ಇ20 ಪೆಟ್ರೋಲ್ ಬಳಕೆಯಿಂದ ಮೈಲೇಜ್ ಕುಸಿಯುತ್ತಿದೆ ಎಂಬ ದೂರಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಮೈಲೇಜ್ ಶೇ.5ರಷ್ಟು ಕಡಿಮೆಯಾಗುವುದನ್ನು ಒಪ್ಪಿಕೊಂಡಿರುವ ಸಚಿವಾಲಯ, ಎಂಜಿನ್‌ಗೆ ಯಾವುದೇ ಹಾನಿಯಾಗುವುದಿಲ್ಲ, ಎಥನಾಲ್ ರಹಿತ ಪೆಟ್ರೋಲ್ ಪೂರೈಕೆ ಸಾಧ್ಯವಿಲ್ಲ ಎಂದು ತಿಳಿಸಿದೆ.

Read Full Story

More Trending News