ಚೆನ್ನೈ: ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆ ಮತ್ತೊಂದು ಮಹತ್ವದ ಆದೇಶ ಹೊರಡಿಸಿದ್ದು, ತಮಿಳುನಾಡಿನ ಶಾಲೆಗಳಲ್ಲಿ ರಾಜಕೀಯ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಿದೆ. ಅಲ್ಲದೇ ಶಾಲೆಗಳಲ್ಲಿ ರಾಜಕಾರಣಿಗಳ ಜನ್ಮದಿನಾಚರಣೆಗೂ ಬ್ರೇಕ್ ಹಾಕಿದೆ.
ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಬೇರೆ ಕಾರ್ಯಗಳನ್ನು ನಡೆಯಬಾರದು ಎಂಬ ಸಿಎಂ ವಿಜಯ್ ಸೂಚನೆ ಆಧರಿಸಿ ಶಿಕ್ಷಣ ಸಚಿವ ರಾಜ್ ಮೋಹನ್ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.
‘ಚುನಾಯಿತ ಪ್ರತಿನಿಧಿಗಳಿಗೆ ಮಾತ್ರ ಶಾಲೆಗಳು ಮತ್ತು ತರಗತಿ ಕೊಠಡಿಗಳನ್ನು ಪ್ರವೇಶಿಸಲು ಅವಕಾಶವಿದೆ. ತರಗತಿ ಕೋಣೆಗಳು ಶಿಕ್ಷಣಕ್ಕಾಗಿ ಇರಬೇಕು ಹೊರತು ರಾಜಕೀಯ ಚಟುವಟಿಕೆಗಳಿಗೆ, ಇನ್ಯಾರನ್ನೋ ಹೊಗಳುವುದಕ್ಕೆ ಅಲ್ಲ. ತರಗತಿ ಕೋಣೆ, ಶಾಲಾ ಆವರಣಗಳಲ್ಲಿ ರಾಜಕೀಯ ನಾಯಕರ ಜನ್ಮದಿನಚಾರಣೆ ಮಾಡುವಂತಿಲ್ಲ’ ಎಂದಿದ್ದಾರೆ.
10:07 PM (IST) Jul 11
ಮಕ್ಕಳಿಂದ ಹಿಡಿದು ವೃದ್ಧರವರೆಗೆ, ಗಂಡಸರ ಧ್ವನಿಯನ್ನೂ ಅನುಕರಿಸಿ ಹಾಡಬಲ್ಲ ಅದ್ಭುತ ಪ್ರತಿಭೆ ಅವರದಾಗಿತ್ತು. ಎಸ್. ಜಾನಕಿಯಮ್ಮ ತಮ್ಮ ವೃತ್ತಿಜೀವನದಲ್ಲಿ ಮಾಡಿದ ವಿಶಿಷ್ಟ ಪ್ರಯೋಗವೆಂದರೆ 'ಗಂಡು ಧ್ವನಿ'ಯಲ್ಲಿ ಹಾಡಿದ್ದು.
09:21 PM (IST) Jul 11
ಹಾಲಿವುಡ್ ಸಿನಿಮಾಗಳೇ ಹೆಚ್ಚಾಗಿ ರಾರಾಜಿಸುವ ಕಾಮಿಕ್ ಕಾನ್ (Comic Con) ವೇದಿಕೆಗೆ ಈ ಹಿಂದೆ ಪ್ರಭಾಸ್ ನಟನೆಯ' ಕಲ್ಕಿ 2898 ಎಡಿ' ಸಿನಿಮಾ ಎಂಟ್ರಿ ಕೊಟ್ಟಿತ್ತು. ಈಗ ರಾಮಾಯಣ ಸಿನಿಮಾ ಪ್ರವೇಶಿಸಿದೆ. ಸುಮಾರು 4,800 ಜನರು ಕುಳಿತುಕೊಳ್ಳಬಹುದಾದ ಬೃಹತ್ ಸಭಾಂಗಣದಲ್ಲಿ ಈ ಚಿತ್ರದ ಝಲಕ್ ಅನಾವರಣಗೊಳ್ಳಲಿದೆ.
08:39 PM (IST) Jul 11
ಗಾನಕೋಗಿಲೆ ಎಸ್. ಜಾನಕಿ ಅವರು ತಮ್ಮ 88ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇದಕ್ಕೂ ಕೆಲವೇ ತಿಂಗಳುಗಳ ಹಿಂದೆ ತಮ್ಮ ಏಕೈಕ ಪುತ್ರ ಮುರಳಿ ಕೃಷ್ಣ ಅವರನ್ನು ಕಳೆದುಕೊಂಡಿದ್ದ ಅವರು, ಮಗನ ಸಾವಿನ ದುಃಖದಲ್ಲೇ ಕೊನೆಯುಸಿರೆಳೆದರು.
08:32 PM (IST) Jul 11
ದಿವಂಗತ ಮೇರುಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಸಂಯೋಜಕ ಇಳಯರಾಜ ಅವರೊಂದಿಗೆ ಎಸ್ ಜಾನಕಿ ಅವರಿಗೆ ಆತ್ಮೀಯ ಒಡನಾಟವತ್ತು. ಜೊತೆಗೆ ಉಳಿದ ಹಿರಿಯ ಹಾಗೂ ಕಿರಿಯ ಹಿನ್ನೆಲೆ ಗಾಯಕರು, ಸಂಗೀತ ನಿರ್ದೇಶಕರು, ನಟನಟಿಯರು ಕಲಾವಿದರು ಸೇರಿದಂತೆ ಚಿತ್ರರಂಗದ ಬಹಳಷ್ಟು ಜನರ ಜೊತೆ ಎಸ್ ಜಾನಕಿಯವರ ಸಂಬಂಧ ಆಪ್ತವಾಗಿತ್ತು.
07:19 PM (IST) Jul 11
07:06 PM (IST) Jul 11
ವಿರೋಧಿಗಳು ಯಾವ ಮಣ್ಣಿನಲ್ಲಿ ದಳಪತಿ ಕಥೆ ಮುಗಿಯಿತು ಅಂದುಕೊಂಡಿದ್ದರೋ, ಅದೇ ಮಣ್ಣಿನಿಂದ ವಿಜಯ್ ತಮ್ಮ ರಾಜಕೀಯ ಸಾಮ್ರಾಜ್ಯದ ನೈಜ ವಿಸ್ತರಣೆಯನ್ನು ಆರಂಭಿಸಿದ್ದಾರೆ. ಇದು ಕೇವಲ ನೌಕರಿ ಕೊಡುವ ಕಾರ್ಯಕ್ರಮವಲ್ಲ, ಮುಂಬರುವ ತಮಿಳುನಾಡು ರಾಜಕೀಯ ಸಮರಕ್ಕೆ ದಳಪತಿ ವಿಜಯ್ ಇಟ್ಟಿರುವ ಅತ್ಯಂತ ಚಾಣಾಕ್ಷ ನಡೆ ಅಂತಿದ್ದಾರೆ ರಾಜಕೀಯ ಪಂಡಿತರು..!
06:48 PM (IST) Jul 11
ಸೌತ್ ಆಫ್ರಿಕಾದ ಸೌಥಾಂಪ್ಟನ್ ಬೆಂಗಳೂರಾಗಿದೆ. ವೈಟ್ ವಾಶ್ ಭೀತಿಯಲ್ಲಿರುವ ಟೀಂ ಇಂಡಿಯಾ ಟಾಸ್ ಸಮಯವಾದರೂ ಮೈದಾನಕ್ಕೆ ಬಂದಿಲ್ಲ. ಪರಿಣಾಮ ಟಾಸ್ ವಿಳಂಬವಾಗಿದೆ. ಅಷ್ಟಕ್ಕೂ ಇತಿಹಾಸದಲ್ಲೇ ಮೊದಲ ಬಾರಿಗೆ ನಾಯಕ ಬರದೆ ಟಾಸ್ ವಿಳಂಬವಾಗಿದ್ದು ಯಾಕೆ?
06:42 PM (IST) Jul 11
ಈ ವರ್ಷ ಅಧಿಕ ಮಾಸದ ಕಾರಣ ತಿರುಮಲದಲ್ಲಿ 2 ಬ್ರಹ್ಮೋತ್ಸವ ನಡೆಯಲಿವೆ. ಈ ಹಿನ್ನೆಲೆಯಲ್ಲಿ, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಲಕ್ಷಾಂತರ ಭಕ್ತರ ದಟ್ಟಣೆ ನಿರ್ವಹಿಸಲು ಬೃಹತ್ ಯೋಜನೆಯನ್ನು ರೂಪಿಸಿದ್ದು, ಸಾಮಾನ್ಯ ಭಕ್ತರಿಗೆ ಅನುಕೂಲವಾಗುವಂತೆ ಬಹುತೇಕ ಎಲ್ಲಾ ವಿಶೇಷ ದರ್ಶನಗಳನ್ನು ರದ್ದುಗೊಳಿಸಿದೆ.
06:34 PM (IST) Jul 11
ಸತತ ಸರಣಿ ಸೋಲಿನಿಂದ ಟೀಂ ಇಂಡಿಯಾದಲ್ಲಿ ಸಮಸ್ಯೆ ತೀವ್ರಗೊಂಡಿದೆ. ಗೌತಮ್ ಗಂಭೀರ್ ಪಾಳಯದ ಕೆಲ ಸಹಾಯಕ ಕೋಚ್ಗಳು ರಾಜೀನಾಮೆಗೆ ಸಜ್ಜಾಗಿದ್ದಾರೆ. ಇತ್ತ ಐಪಿಎಲ್ ತಂಡದ ಜೊತೆಗೆ ಮಾತುಕತೆಯೂ ನಡೆಸಿದ್ದಾರೆ.
06:21 PM (IST) Jul 11
05:28 PM (IST) Jul 11
05:13 PM (IST) Jul 11
ಬೆಂಗಳೂರು: 15 ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿ ಹೊಸ ಇತಿಹಾಸವನ್ನೇ ಸೃಷ್ಟಿಸಿರುವ ಬಿಹಾರ ಮೂಲದ ವೈಭವ್ ಸೂರ್ಯವಂಶಿ, ಮೊದಲ ಮೂರು ಟಿ20 ಪಂದ್ಯಗಳಲ್ಲಿ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ.
05:07 PM (IST) Jul 11
ನಟ ಆಮೀರ್ ಖಾನ್ ಬೆಂಗಳೂರಿನ ಗೌರಿ ಸ್ಪ್ರಾಟ್ ಅವರನ್ನು ಮೂರನೇ ಮದುವೆಯಾಗುವ ಮೂಲಕ ಬೆಂಗಳೂರು ಅಳಿಯಾಗಿದ್ದಾರೆ. ಈ ದಂಪತಿ ಮುಂಬೈನಲ್ಲಿ 100 ಕೋಟಿ ಮೌಲ್ಯದ ಹೊಸ ಅಪಾರ್ಟ್ಮೆಂಟ್ಗೆ ಸ್ಥಳಾಂತರಗೊಳ್ಳಲು ಸಿದ್ಧರಾಗಿದ್ದು, ಕುತೂಹಲ ಎಂದರೆ ಮಾಜಿ ಪತ್ನಿ ಕಿರಣ್ ರಾವ್ ಕೂಡ ಅದೇ ಕಟ್ಟಡದಲ್ಲಿ ವಾಸಿಸಲಿದ್ದಾರೆ.
04:35 PM (IST) Jul 11
ವಿಯೆಟ್ನಾಂನಲ್ಲಿ ಬೋಟ್ ದುರಂತ ಸಂಭವಿಸಿದೆ. ಐಸ್ಲ್ಯಾಂಡ್ನಲ್ಲಿ ಸಂಭವಿಸಿದ ಬೋಟ್ ದುರಂತದಲ್ಲಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ. ವಿಯೆಟ್ನಾಂ ಭಾರತೀಯ ರಾಯಭಾರ ಕಚೇರಿ ಕಂಟ್ರೋಲ್ ರೂಂ ತೆರೆದಿದೆ.
04:25 PM (IST) Jul 11
03:53 PM (IST) Jul 11
ಅನ್ಯಗ್ರಹ ಜೀವಿಗಳ ಕುರಿತು ಕುತೂಹಲಕ್ಕೆ ಇದೀಗ ಡಬಲ್ ಆಗಿದೆ. ಅಮೆರಿಕ ರಕ್ಷಣಾ ಇಲಾಖೆ ಪೆಂಟಗನ್ ಕಚೇರಿ ಮಹತ್ವದ ರಹಸ್ಯ ಫೈಲ್ಸ್ ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಯುಎಫ್ಒ ವೇಗವಾಗಿ ಚಲಿಸುತ್ತಿರುವ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ.
03:50 PM (IST) Jul 11
ಈಗಿನ ಕಾಲದಲ್ಲಿ ಮೊಬೈಲ್ ಫೋನ್ ನಮ್ಮ ದೇಹದ ಒಂದು ಭಾಗವೇ ಆಗಿಬಿಟ್ಟಿದೆ. ಅಂತಹ ಫೋನ್ ಕಳೆದುಹೋದರೆ ಸಿಕ್ಕಾಪಟ್ಟೆ ತೊಂದರೆಯಾಗುತ್ತದೆ, ಕೆಲವರಿಗಂತೂ ವಿಪರೀತ ಆತಂಕ ಶುರುವಾಗುತ್ತೆ. ಹಾಗಾದ್ರೆ, ಕಳೆದುಹೋದ ಫೋನನ್ನು ಗೂಗಲ್ ಮ್ಯಾಪ್ ಬಳಸಿ ಹೇಗೆ ಪತ್ತೆ ಮಾಡೋದು ಅಂತಾ ಇಲ್ಲಿ ನೋಡೋಣ.
03:25 PM (IST) Jul 11
03:07 PM (IST) Jul 11
ಧನುಷ್ ಅವರು ಕಟ್ಟಿರುವ ಈ ಬೃಹತ್ ಸಾಮ್ರಾಜ್ಯದ ಹಿಂದೆ ಅವರ ಕಠಿಣ ಪರಿಶ್ರಮವಿದೆ. ಪ್ರತಿ ಸಿನಿಮಾಗೆ ಅವರು 20 ರಿಂದ 35 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅಷ್ಟೇ ಅಲ್ಲದೆ, ತಿಂಗಳಿಗೆ ಸುಮಾರು 3 ಕೋಟಿ ರೂಪಾಯಿಗಳಿಗೂ ಅಧಿಕವಾದ ಇತರ ಮೂಲಗಳ ಆದಾಯ ಇವರಿಗಿದೆ.
02:08 PM (IST) Jul 11
ವೈದ್ಯರ ಯಡವಟ್ಟಿಗೆ ಮುದ್ದಾದ ಕಂದಮ್ಮನ ಬಲಿಯಾಗಿದೆ. ಆಸ್ಪತ್ರೆ ವಿರುದ್ಧ ಆಕ್ರೋಶದ ಕಟ್ಟೆ ಒಡೆದಿದ್ದು, ಭಾರೀ ಸಂಚಲನ ಮೂಡಿಸಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
01:50 PM (IST) Jul 11
ಭಾರತದಲ್ಲಿ ನಾವು ಟಾಯ್ಲೆಟ್ನಲ್ಲಿ ನೀರು ಬಳಸುತ್ತೇವೆ. ಆದರೆ ಅಮೆರಿಕ, ಯುರೋಪ್ನಂತಹ ದೇಶಗಳಲ್ಲಿ ಟಿಶ್ಯೂ ಪೇಪರ್ ಬಳಸುತ್ತಾರೆ. ನೀರಿನ ಕೊರತೆ ಇಲ್ಲದಿದ್ದರೂ ಅವರು ಯಾಕೆ ಹೀಗೆ ಮಾಡುತ್ತಾರೆ? ಇದರ ಹಿಂದಿನ ಕಾರಣಗಳೇನು ಎಂದು ತಿಳಿಯೋಣ ಬನ್ನಿ.
01:11 PM (IST) Jul 11
ಸೌಥಾಂಪ್ಟನ್: ಭಾರತ ತಂಡವು ಕಳೆದ ಆರು ಪಂದ್ಯಗಳಿಂದ ಮೊದಲ ಗೆಲುವಿಗಾಗಿ ಹಪಹಪಿಸುತ್ತಿದೆ. ಇದೀಗ ಇಂಗ್ಲೆಂಡ್ ಎದುರು ಐದನೇ ಹಾಗೂ ಕೊನೆಯ ಟಿ20 ಪಂದ್ಯಕ್ಕೆ ಇಂದು ಸಜ್ಜಾಗಿದ್ದು, ಭಾರತ ಕೆಲವ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
12:54 PM (IST) Jul 11
Actor Suriya son name: ತಮಿಳು ನಟ ಸೂರ್ಯ, ಜ್ಯೋತಿಕಾ ಅವರ ಪುತ್ರ ದೇವ್ ಸೂರ್ಯ, ಇದೀಗ ವಿಜ್ಞಾನ ಮತ್ತು ಸಂಶೋಧನಾ ವೇದಿಕೆಯೊಂದರಲ್ಲಿ Young Innovator ಆಗಿದ್ದಾರೆ. ದೇವ್ ಮಾತನಾಡಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
12:44 PM (IST) Jul 11
ಸಲ್ಫರ್ ಹಬೆಯಲ್ಲಿ ಬೇಯಿಸಿದ ಕಪ್ಪು ಮೊಟ್ಟೆಗಳು ಪ್ರಸಿದ್ಧವಾಗಿವೆ. ಈ ಮೊಟ್ಟೆಗಳನ್ನು ತಿಂದರೆ ಏಳು ವರ್ಷ ಆಯುಷ್ಯ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದ್ದು, ಈ ಹೇಳಿಕೆಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ.
12:42 PM (IST) Jul 11
12:35 PM (IST) Jul 11
ಇಲ್ಲೊಂದು ವಿಶೇಷ ತರಕಾರಿ ಇದೆ. ಅದಕ್ಕೆ ಚಿನ್ನದಂಥ ರೇಟು. ಕೆಜಿಗೆ 1200 ರೂಪಾಯಿ ಇದ್ದರೂ, ಜನ ಖರೀದಿಸಲು ಮುಗಿಬಿದ್ದಿದ್ದಾರೆ. ಅಷ್ಟಕ್ಕೂ ಅದ್ರಲ್ಲಿ ಅಂಥದ್ದೇನಿದೆ? ಯಾಕೆ ಅಷ್ಟೊಂದು ರೇಟ್ ಅನ್ನೋ ವಿವರ ಈ ಸ್ಟೋರಿಯಲ್ಲಿದೆ..
12:02 PM (IST) Jul 11
11:46 AM (IST) Jul 11
ಸಿನಿಮೀಯ ಮೆರುಗು ಮತ್ತು ಸಾಂಸ್ಕೃತಿಕ ಮೌಲ್ಯಗಳ ಸಂಗಮವಾಗಿರುವ ಈ 'ರಾಮಾಯಣ' ಚಿತ್ರವು, ಪ್ರಚಾರದ ವಿಷಯದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುತ್ತಿದೆ. ಸ್ಕೂಲ್ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಎದುರು ನೋಡುತ್ತಿರುವ ಈ ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸವನ್ನು ಬದಲಿಸುವುದರಲ್ಲಿ ಸಂಶಯವಿಲ್ಲ!
11:41 AM (IST) Jul 11
ಸೌಥಾಂಪ್ಟನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದನೇ ಹಾಗೂ ಕೊನೆಯ ಟಿ20 ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಕಳೆದ ಪಂದ್ಯದಂತೆ ಈ ಪಂದ್ಯವು ರಾತ್ರಿ 10 ಗಂಟೆಗೆ ಆರಂಭವಾಗುವುದಿಲ್ಲ. ಅಷ್ಟಕ್ಕೂ ಈ ಮ್ಯಾಚ್ ಎಷ್ಟು ಗಂಟೆಗೆ ಆರಂಭವಾಗುತ್ತೆ? ವೈಭವ್ ಸೂರ್ಯವಂಶಿ ಆಡ್ತಾರಾ ನೋಡೋಣ ಬನ್ನಿ.
09:54 AM (IST) Jul 11
09:31 AM (IST) Jul 11
09:15 AM (IST) Jul 11
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ಸೋತಿರುವ ಟೀಂ ಇಂಡಿಯಾ, ಅಂತಿಮ ಪಂದ್ಯಕ್ಕೆ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ. ಕಳಪೆ ಪ್ರದರ್ಶನ ನೀಡಿದ ಮೂವರು ಆಟಗಾರರನ್ನು ಅವರನ್ನು ತಂಡದಿಂದ ಕೈಬಿಡಬಹುದು ಎಂದು ವರದಿಯಾಗಿದೆ.
07:45 AM (IST) Jul 11
07:35 AM (IST) Jul 11
ಶೇ.20 ಎಥನಾಲ್ ಮಿಶ್ರಿತ ಇ20 ಪೆಟ್ರೋಲ್ ಬಳಕೆಯಿಂದ ಮೈಲೇಜ್ ಕುಸಿಯುತ್ತಿದೆ ಎಂಬ ದೂರಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಮೈಲೇಜ್ ಶೇ.5ರಷ್ಟು ಕಡಿಮೆಯಾಗುವುದನ್ನು ಒಪ್ಪಿಕೊಂಡಿರುವ ಸಚಿವಾಲಯ, ಎಂಜಿನ್ಗೆ ಯಾವುದೇ ಹಾನಿಯಾಗುವುದಿಲ್ಲ, ಎಥನಾಲ್ ರಹಿತ ಪೆಟ್ರೋಲ್ ಪೂರೈಕೆ ಸಾಧ್ಯವಿಲ್ಲ ಎಂದು ತಿಳಿಸಿದೆ.