ನವದೆಹಲಿ: ಶೃಂಗೇರಿ ಶಾರದಾ ಪೀಠ ನಡೆಸುವ ಶಿಕ್ಷಣ ಸಂಸ್ಥೆಯ ಸಂಚಾಲಕನಾಗಿದ್ದುಕೊಂಡು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ದೆಹಲಿಯ ಚೈತನ್ಯಾನಂದ ಸರಸ್ವತಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೆಷನ್ಸ್ ಕೋರ್ಟ್ ವಜಾ ಮಾಡಿದೆ. ವಂಚನೆ, ಫೋರ್ಜರಿ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆತ ದೆಹಲಿ ಕೋರ್ಟ್ನ ಮರೆಹೋಗಿದ್ದ. ಅರ್ಜಿ ವಜಾದೊಂದಿಗೆ ಆತನಿಗೆ ಬಂಧನ ಭೀತಿ ಆರಂಭವಾಗಿದೆ. ದಾಖಲೆ ನಕಲಿಸುವುದು, ಮೋಸ ಮಾಡುವುದು, ನಕಲಿ ದಾಖಲೆ ಸೃಷ್ಟಿಸುವುದು, ಆಸ್ತಿಯನ್ನು ಹಸ್ತಾಂತರಿಸಲು ಅಥವಾ ಅದನ್ನು ಉಳಿಸಿಕೊಳ್ಳಲು ಒಪ್ಪಿಗೆ ನೀಡುವಂತೆ ವ್ಯಕ್ತಿಯನ್ನು ಪ್ರೇರೇಪಿಸುವುದು, ಕ್ರಿಮಿನಲ್ ಪಿತೂರಿ ಮತ್ತು ನಂಬಿಕೆ ಉಲ್ಲಂಘನೆ ಮಾಡಿರುವುದಾಗಿ ಆರೋಪಿಸಿ ಸ್ವಾಮಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

10:36 PM (IST) Sep 27
ಟಿವಿಕೆ ರ್ಯಾಲಿ ಭೀಕರ ಚಿತ್ರಣ, 6 ಗಂಟೆ ಕಾಯಿಸಿ 29 ಮುಗ್ದರ ಬಲಿಪಡೆದರಾ ನಟ ವಿಜಯ್? ಪಕ್ಷದ ರ್ಯಾಲಿಯಲ್ಲಿ ಸಾಲು ಸಾಲು ನಿಯಮ ಉಲ್ಲಂಘನೆ ಮಾಡಲಾಗಿದೆ. 10 ಸಾವಿರ ಎಂದು 50 ಸಾವಿರ ಜನ ಸೇರಿಸಿ ಬರೋಬ್ಬರಿ 6 ಗಂಟೆ ಕಾಯಿಸಲಾಗಿದೆ. ಕಾಲ್ತುಳಿತದ ಭೀಕರ ಚಿತ್ರಣ ಇಲ್ಲಿದೆ.
09:38 PM (IST) Sep 27
ನಟ ವಿಜಯ್ ಜೊಸೆಫ್ ಟಿವಿಕೆ ರ್ಯಾಲಿಯಲ್ಲಿ ಕಾಲ್ತುಳಿತ, ಮಕ್ಕಳು ಸೇರಿ 20ಕ್ಕೂ ಅಧಿಕ ಸಾವಿನ ಶಂಕೆ ವ್ಯಕ್ತವಾಗಿದೆ. ಮೂಲಗಳ ಪ್ರಕಾರ 20ಕ್ಕೂ ಅಧಿಕ ಮಂದಿ ಮೃತಪಟ್ಟಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
09:01 PM (IST) Sep 27
ತಮಿಳು ನಟ ವಿಜಯ್ ರ್ಯಾಲಿಯಲ್ಲಿ ಕಾಲ್ತುಳಿತ ಪರಿಸ್ಥಿತಿ, ಹಲವರು ಆಸ್ಪತ್ರೆ ದಾಖಲು, ಓರ್ವ ಬಾಲಕಿ ಕಾಣೆಯಾಗಿದ್ದು, ಪರಿಸ್ಥಿತಿ ಕೈಮೀರಿದ ಹಂತಕ್ಕೆ ಹೋಗಿದೆ. ಹಲವರು ಮೂರ್ಛೆ ಹೋಗಿದ್ದಾರೆ.
08:09 PM (IST) Sep 27
Mumbai Landlord Shows Explicit Videos to Tenant ಮುಂಬೈನಲ್ಲಿ 27 ವರ್ಷದ ಯುವತಿಯೊಬ್ಬರು ತನ್ನ ಮನೆ ಮಾಲೀಕನಿಂದ ದೌರ್ಜನ್ಯಕ್ಕೊಳಗಾಗಿದ್ದಾರೆ. ರಿಪೇರಿ ನೆಪದಲ್ಲಿ ಮನೆಗೆ ಬಂದ ಮಾಲೀಕ, ತನ್ನ ಅಶ್ಲೀಲ ಡಿವಿಡಿಗಳ ಸಂಗ್ರಹವನ್ನು ತೋರಿಸಿ ಕಿರುಕುಳ ನೀಡಿದ್ದಾನೆ ಎಂದಿದ್ದಾರೆ.
07:57 PM (IST) Sep 27
ಭಾರತ ಪಾಕಿಸ್ತಾನ ಏಷ್ಯಾಕಪ್ ಫೈನಲ್ ಪಂದ್ಯ ಯಾವಾಗ? ಆ್ಯಪ್ನಲ್ಲಿದೆಯಾ ಲೈವ್ ಟೆಲಿಕಾಸ್ಟ್? ಪಂದ್ಯದ ದಿನಾಂಕ, ಸ್ಥಳ, ಕ್ರೀಡಾಂಗಣ ಸೇರಿದಂತೆ ಪ್ರಶಸ್ತಿ ಸುತ್ತಿನ ಹೋರಾಟದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
06:36 PM (IST) Sep 27
Bahubali Baby Shocking Truth: ಬಾಹುಬಲಿ ಚಿತ್ರದಲ್ಲಿ ಶಿವಗಾಮಿಯು ನೀರಿನ ಮೇಲೆ ಎತ್ತಿ ಹಿಡಿದಿದ್ದ ಪುಟ್ಟ ಮಹೇಂದ್ರ ಬಾಹುಬಲಿಯ ದೃಶ್ಯ ಎಲ್ಲರಿಗೂ ನೆನಪಿದೆ. ಹಲವರು ಇದನ್ನು ಗ್ರಾಫಿಕ್ಸ್ ಎಂದು ಭಾವಿಸಿದ್ದರು, ಆದರೆ ಆ ಪಾತ್ರವನ್ನು ನಿರ್ವಹಿಸಿದ್ದು ಕೇವಲ 18 ದಿನದ ಅಕ್ಷಿತಾ ವಲ್ಸನ್ ಎಂಬ ಹೆಣ್ಣು ಮಗು.
05:48 PM (IST) Sep 27
Air India Express PayDay Sale Flights from ₹1200 ಏರ್ ಇಂಡಿಯಾ ಎಕ್ಸ್ಪ್ರೆಸ್ ತನ್ನ 'ಪೇಡೇ ಸೇಲ್' ಘೋಷಿಸಿದ್ದು, ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಟಿಕೆಟ್ಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ.
05:45 PM (IST) Sep 27
ದುಬೈ: 2025ರ ಏಷ್ಯಾಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಹಾಲಿ ಚಾಂಪಿಯನ್ ಭಾರತ ತಂಡವು ಏಷ್ಯಾಕಪ್ ಫೈನಲ್ನಲ್ಲಿ ಯಾವ ಕಾಂಬಿನೇಷನ್ನೊಂದಿಗೆ ಕಣಕ್ಕಿಳಿಯಲಿದೆ ಎನ್ನುವ ಕುತೂಹಲ ಜೋರಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
04:56 PM (IST) Sep 27
obra Found Inside Safe Filled with Gold and Cash ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ, ಹಣ ಮತ್ತು ಚಿನ್ನಾಭರಣಗಳಿದ್ದ ತಿಜೋರಿಯೊಳಗೆ ನಾಗರಹಾವೊಂದು ಹೆಡೆಯೆತ್ತಿ ಕುಳಿತಿರುವುದು ಕಂಡುಬಂದಿದೆ.
04:11 PM (IST) Sep 27
ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ, ಸ್ವದೇಶಿ 4ಜಿ ನೆಟ್ವರ್ಕ್ ಲಾಂಚ್ ಮಾಡಿದ ಪ್ರಧಾನಿ ಮೋದಿ, ಬರೋಬ್ಬರಿ 97 ಸಾವಿರ ಟವರ್ ಮೂಲಕ ಜನರಿಗೆ ಮೂಲೆ ಮೂಲೆಗೆ 4ಜಿ ನೆಟ್ವರ್ಕ್ ಸರ್ವೀಸ್ ನೀಡಲಿದೆ.
03:55 PM (IST) Sep 27
ದುಬೈ: 2025ರ ಏಷ್ಯಾಕಪ್ ಟೂರ್ನಿಯು ನಿರ್ಣಾಯಕ ಘಟ್ಟ ತಲುಪಿದ್ದು, ಪ್ರಶಸ್ತಿಗಾಗಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಡಲಿವೆ. ಫೈನಲ್ನಲ್ಲಿ ಭಾರತ ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ.ಇದರ ಜತೆಗೆ ಗಾಯದ ಸಮಸ್ಯೆ ಭಾರತದ ಆತಂಕವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.
03:51 PM (IST) Sep 27
ನಿಮ್ಮ ಅರಿವಿಲ್ಲದೆ ನಿಮ್ಮ ಪ್ಯಾನ್ ಕಾರ್ಡ್ ಬಳಸಿ ವಂಚಕರು ಸಾಲ ಪಡೆಯುವ ಜಾಲದ ಬಗ್ಗೆ ಈ ಲೇಖನವು ಎಚ್ಚರಿಸುತ್ತದೆ. ಇಂತಹ ವಂಚನೆಗಳನ್ನು ಪತ್ತೆಹಚ್ಚಲು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನಿಯಮಿತವಾಗಿ ಪರಿಶೀಲಿಸುವುದು ಹೇಗೆ?
03:22 PM (IST) Sep 27
ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಲೋಕ್ ಪೋಲ್ ಮತ್ತು ಯೆಸ್ ಇಂಡಿಯಾ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಗಳು ಹೊರಬಿದ್ದಿವೆ. ಪ್ರಶಾಂತ್ ಕಿಶೋರ್ ಅವರ ಜನ್ ಸೂರಜ್ ಪಕ್ಷವು ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.
03:06 PM (IST) Sep 27
ಹಿಂಸಾಚಾರಕ್ಕೆ ತಿರುಗಿದ ಐ ಲವ್ ಮೊಹಮ್ಮದ್, ಮುಸ್ಲಿಂ ಗುರು ತೌಕೀರ್ ರಾಜಾ ಖಾನ್ ಅರೆಸ್ಟ್ ಮಾಡಲಾಗಿದೆ. ಹಿಂಸಾಚಾರದಲ್ಲಿ ಗುಂಡಿನ ದಾಳಿಯಾಗಿದ್ದು, 10 ಪೊಲೀಸರು ಗಾಯಗೊಂಡಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಮುಸ್ಲಿಂ ಗುರು ಕೌಕೀರ್ ರಜಾ ಖಾನ್ ಅರೆಸ್ಟ್ ಮಾಡಲಾಗಿದೆ.
02:05 PM (IST) Sep 27
Rahul Gandhi South America visi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬ್ರೆಜಿಲ್, ಕೊಲಂಬಿಯಾ ಸೇರಿದಂತೆ ದಕ್ಷಿಣ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಈ ಭೇಟಿ ಭಾರತದ ಜಾಗತಿಕ ಸಂಬಂಧಗಳನ್ನು ಬಲಪಡಿಸುವ ಗುರಿ ಹೊಂದಿದೆ ಎಂದು ಕಾಂಗ್ರೆಸ್ ಹೇಳಿದರೆ, ಬಿಜೆಪಿ ಇದನ್ನು 'ಭಾರತ ವಿರೋಧಿ' ಎಂದು ಟೀಕಿಸಿದೆ.
01:33 PM (IST) Sep 27
Bengaluru Cricket Coach Matthew ತನ್ನ ಮೊಬೈಲ್ನಲ್ಲಿ 2500ಕ್ಕೂ ಅಧಿಕ ಮಹಿಳೆಯರ ಅಶ್ಲೀಲ ವಿಡಿಯೋಗಳಿವೆ ಎಂಬ ಆರೋಪದ ಬಗ್ಗೆ ಬೆಂಗಳೂರಿನ ಕ್ರಿಕೆಟ್ ಕೋಚ್ ಮ್ಯಾಥ್ಯೂ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
01:26 PM (IST) Sep 27
ಏಷ್ಯಾಕಪ್ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಪಂದ್ಯದಲ್ಲಿ 3 ಸಿಕ್ಸರ್ಗಳನ್ನು ಬಾರಿಸುವ ಮೂಲಕ, ಅವರು ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಭಾರತೀಯ ವಿಕೆಟ್ ಕೀಪರ್ ಎಂಬ ಎಂಎಸ್ ಧೋನಿಯ ದಾಖಲೆಯನ್ನು ಮುರಿದರು.
12:52 PM (IST) Sep 27
man hits friends pyre in Uttar Pradesh ಬಾಲ್ಯದ ಸ್ನೇಹಿತನಿಂದ 50 ಸಾವಿರ ರೂಪಾಯಿ ಸಾಲ ಪಡೆದ ವ್ಯಕ್ತಿಯೊಬ್ಬ, ಅದನ್ನು ಹಿಂತಿರುಗಿಸದೆ ಸಾವನ್ನಪ್ಪಿದ್ದಾನೆ. ಇದರಿಂದ ಕೋಪಗೊಂಡ ಸಾಲ ನೀಡಿದ ಸ್ನೇಹಿತ, ಮೃತನ ಅಂತ್ಯಕ್ರಿಯೆ ವೇಳೆ ಆತನ ಚಿತೆಗೆ ಬಡಿಗೆಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾನೆ.
12:06 PM (IST) Sep 27
Temples in Dalit colonies Andhra Pradesh: ಆಂಧ್ರಪ್ರದೇಶದಲ್ಲಿ ಮತಾಂತರವನ್ನು ನಿಯಂತ್ರಿಸುವ ಉದ್ದೇಶದಿಂದ, ಟಿಟಿಡಿಯು ದಲಿತರ ಕಾಲೋನಿಗಳಲ್ಲಿ 5,000 ಶ್ರೀನಿವಾಸ ಸ್ವಾಮಿ ದೇವಸ್ಥಾನಗಳನ್ನು ನಿರ್ಮಿಸಲು ಮುಂದಾಗಿದೆ.
11:59 AM (IST) Sep 27
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ವಿರುದ್ಧ 6,600 ಕೋಟಿ ರೂ. ಮೌಲ್ಯದ ಬಿಟ್ಕಾಯಿನ್ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ED) ಎಫ್ಐಆರ್ ದಾಖಲಿಸಿದೆ. ಹಗರಣದ ರೂವಾರಿ ಅಮಿತ್ ಭಾರದ್ವಾಜ್ನಿಂದ ಬಿಟ್ಕಾಯಿನ್ಗಳನ್ನು ಪಡೆದು ಆದಾಯವನ್ನು ಮರೆಮಾಚಿದ ಗಂಭೀರ ಆರೋಪವಿದೆ.
11:27 AM (IST) Sep 27
ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 309 ರನ್ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಪಥುಂ ನಿಸ್ಸಾಂಕ ಎರಡನೇ ಸ್ಥಾನದಲ್ಲಿದ್ದಾರೆ.
11:01 AM (IST) Sep 27
ಏಷ್ಯಾಕಪ್ ಸೂಪರ್ 4 ಪಂದ್ಯದಲ್ಲಿ ಭಾರತ, ಶ್ರೀಲಂಕಾವನ್ನು ರೋಚಕ ಸೂಪರ್ ಓವರ್ನಲ್ಲಿ ಮಣಿಸಿ ಫೈನಲ್ಗೆ ಲಗ್ಗೆ ಇಟ್ಟಿದೆ. ಅರ್ಶದೀಪ್ ಅವರ ಅದ್ಭುತ ಬೌಲಿಂಗ್ನಿಂದ ಭಾರತ ಗೆದ್ದರೂ, ಸೂಪರ್ ಓವರ್ನಲ್ಲಿ ದಸುನ್ ಶನಕ ಅವರ ರನೌಟ್ಗೆ ಸಂಬಂಧಿಸಿದ ಅಂಪೈರ್ ತೀರ್ಪಿನ ಗೊಂದಲವು ಪಂದ್ಯದ ಪ್ರಮುಖ ಹೈಲೈಟ್ ಆಗಿತ್ತು.
10:23 AM (IST) Sep 27
ಬಿಹಾರ ಚುನಾವಣೆಯಲ್ಲಿ AIMIM ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಸೀಮಾಂಚಲದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಮುಸ್ಲಿಂ ಹಕ್ಕುಗಳ ಬಗ್ಗೆ ಭಾವನಾತ್ಮಕ ಭಾಷಣ ಮಾಡುತ್ತಿದ್ದಾರೆ.
09:03 AM (IST) Sep 27
ದುಬೈ: ಪೆಹಲ್ಗಾಂ ದಾಳಿ ಉಲ್ಲೇಖಿಸಿದ್ದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ಗೆ ಹಾಗೂ ಯುದ್ದ ವಿಮಾನ ಪತನ ರೀತಿ ಸನ್ನೆ ಮಾಡಿದ್ದ ಪಾಕಿಸ್ತಾನ ವೇಗಿ ಹ್ಯಾರಿಸ್ ರೌಫ್ಗೆ ಬಿಸಿಸಿಐ ಬಿಗ್ ಶಾಕ್ ನೀಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
07:53 AM (IST) Sep 27
Lord Balaji unsolved mysteries: 1979ರ ನವೆಂಬರ್ 1 ರಂದು, ತಿರುಪತಿ ದೇವಸ್ಥಾನದ ಬಾಗಿಲು ಮುಚ್ಚಿದ್ದಾಗ ಅಚ್ಚರಿಯ ಘಟನೆಯೊಂದು ನಡೆದಿತ್ತು. ಆದರೆ ಬೆಳಗ್ಗೆ ಬಾಗಿಲು ತೆರೆದಾಗ ಅರ್ಚಕರು ಮತ್ತು ದೇಗುಲದ ಆಡಳಿತ ಸಿಬ್ಬಂದಿ ಆಶ್ಚರ್ಯಚಕಿತರಾಗಿದ್ದರು.