MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ಬಿಹಾರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರೊ ಓವೈಸಿಗೆ ಶಾಕ್ ನೀಡಿದ ಮುಸ್ಲಿಂ ಬಾಹುಳ್ಳವುಳ್ಳ ಗ್ರಾಮ

ಬಿಹಾರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರೊ ಓವೈಸಿಗೆ ಶಾಕ್ ನೀಡಿದ ಮುಸ್ಲಿಂ ಬಾಹುಳ್ಳವುಳ್ಳ ಗ್ರಾಮ

ಬಿಹಾರ ಚುನಾವಣೆಯಲ್ಲಿ AIMIM ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಸೀಮಾಂಚಲದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಮುಸ್ಲಿಂ ಹಕ್ಕುಗಳ ಬಗ್ಗೆ ಭಾವನಾತ್ಮಕ ಭಾಷಣ ಮಾಡುತ್ತಿದ್ದಾರೆ.

2 Min read
Mahmad Rafik
Published : Sep 27 2025, 10:23 AM IST
Share this Photo Gallery
  • FB
  • TW
  • Linkdin
  • Whatsapp
15
ಬಿಹಾರ ಚುನಾವಣೆ
Image Credit : Asaduddin Owaisi X Account

ಬಿಹಾರ ಚುನಾವಣೆ

AIMIM ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಬಿಹಾರ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಾಗಿ ಘೋಷಿಸಿದ್ದಾರೆ. ಈಗಾಗಲೇ ಸೀಮಾಂಚಲ ನ್ಯಾಯ ಯಾತ್ರೆಯನ್ನು ಅಸಾದುದ್ದೀನ್ ಓವೈಸಿ ಮನ್ನಡೆಸುತ್ತಿದ್ದಾರೆ. ನಾಲ್ಕು ಜಿಲ್ಲೆಗಳ 24 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿರುವ ಓವೈಸಿ, ತಮ್ಮ ಪ್ರಖರ ಮಾತುಗಳಿಂದ ಮತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

25
AIMIM ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ
Image Credit : Asaduddin Owaisi X Account

AIMIM ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ

ಅಸಾದುದ್ದೀನ್ ಓವೈಸಿ ಪ್ರತಿದಿನ 12ಕ್ಕೂ ಅಧಿಕ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿಯ ಜನರೊಂದಿಗೆ ಬೆರೆತು ಸಾಲು ಸಾಲು ಸಭೆಗಳನ್ನು ಮಾಡುತ್ತಿದ್ದಾರೆ. ಮುಸ್ಲಿಮರ ಹಕ್ಕುಗಳ ಬಗ್ಗೆ ಮಾತನಾಡಿದರು ಮತ್ತು ವಕ್ಫ್ ತಿದ್ದುಪಡಿ ಕಾಯ್ದೆಯಂತಹ ಮುಸ್ಲಿಮರಿಗೆ ಸಂಬಂಧಿಸಿದ ಭಾವನಾತ್ಮಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ

Related Articles

Related image1
'ನೀನ್‌ ಯಾರಯ್ಯ..' ಆರೆಸ್ಸೆಸ್‌ ಚೀಫ್‌ ಮೋಹನ್‌ ಭಾಗವತ್‌ಗೆ ಕೇಳಿದ ಸಂಸದ ಅಸಾದುದ್ದೀನ್‌ ಓವೈಸಿ
Related image2
'ನೀರು-ರಕ್ತ ಒಟ್ಟಿಗೆ ಹರಿಯುವುದಿಲ್ಲ ಎಂದಿರಿ, ಪಾಕಿಸ್ತಾನ ಜೊತೆ ಕ್ರಿಕೆಟ್ ಹೇಗೆ ಆಡುತ್ತೀರಿ?' ಕೇಂದ್ರದ ವಿರುದ್ಧ ಓವೈಸಿ ವಾಗ್ದಾಳಿ
35
ಎಐಎಂಐಎಂ ಶಾಸಕ ಅಖ್ತರುಲ್ ಇಮಾನ್
Image Credit : Asaduddin Owaisi X Account

ಎಐಎಂಐಎಂ ಶಾಸಕ ಅಖ್ತರುಲ್ ಇಮಾನ್

ಎಐಎಂಐಎಂ ಶಾಸಕ ಅಖ್ತರುಲ್ ಇಮಾನ್ ಅವರ ಕ್ಷೇತ್ರವಾದ ಅಮೌರ್‌ಗೆ ಭೇಟಿ ನೀಡಿರುವ ಎಬಿಪಿ ನ್ಯೂಸ್ ಅಲ್ಲಿಯ ಜನರೊಂದಿಗೆ ಮಾತನಾಡಿದೆ. ಅಮೌರ್‌ ಕ್ಷೇತ್ರದ ರಾಮನಗರ ಹಳ್ಳಿಯಲ್ಲಿ ಸುಮಾರು 500ಕ್ಕೂ ಅಧಿಕ ಮುಸ್ಲಿಂ ಮತದಾರರಿರುವ ಗ್ರಾಮವಾಗಿದೆ. ಇಲ್ಲಿಯ ಜನರು ಎಬಿಪಿ ನ್ಯೂಸ್ ಜೊತೆ ಮಾತನಾಡಿದ್ದು, ಓವೈಸಿ ಚುನಾವಣೆ ಪ್ರಚಾರ ಸಂಬಂಧ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಲಡಾಖ್‌ ಹಿಂಸಾಚಾರಕ್ಕೆ ಕಾರಣರಾದ ಪರಿಸರ ಕಾರ್ಯಕರ್ತ ಸೋನಮ್‌ ವಾಂಗ್ಚುಕ್‌ ಬಂಧನ!

45
ಮುಸ್ಲಿಂ ಮತದಾರರು
Image Credit : Asaduddin Owaisi X Account

ಮುಸ್ಲಿಂ ಮತದಾರರು

ರಾಮನಗರ ಗ್ರಾಮದ ಬಹುತೇಕರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಸರ್ಕಾರದ ಯೋಜನೆಗಳಿಂದ ನೇರವಾಗಿ ಲಾಭ ಪಡೆದುಕೊಳ್ಳುತ್ತಿದ್ದಾರೆ. ಆಯುಷ್ಮಾನ್ ಕಾರ್ಡ್ ಮೂಲಕ ಆರೋಗ್ಯ ಸೌಲಭ್ಯ, ಡಿತರ ಚೀಟಿಗಳ ಮೂಲಕ ಉಚಿತ ಆಹಾರ ವಸ್ತುಗಳು ಸೇರಿದಂತೆ ಅನೇಕ ಯೋಜನೆಗಳನ್ನು ಪಡೆದುಕೊಂಡಿದ್ದಾರೆ. ಹಾಗಾಗಿ ಈ ಗ್ರಾಮದ ಮತಗಳು ಆಡಳಿತರೂಢ ನಿತೀಶ್ ಕುಮಾರ್ ಪಕ್ಷಕ್ಕೆ ಹೋಗುತ್ತವೆ ಎಂದು ಎಬಿಪಿ ವರದಿ ಮಾಡಿದೆ.

ಇದನ್ನೂ ಓದಿ: ಅಕ್ರಮ ವಲಸೆ ಅಪರಾಧವಲ್ಲ, ಭೂಮಿಯ ಮೇಲೆ ಮಾನವ ಎಲ್ಲಿ ಬೇಕಾದರೂ ಹೋಗಬಹುದು: ಪ್ರಕಾಶ್‌ ರಾಜ್‌

55
ಗ್ರಾಮಸ್ಥರ ಒಲವು
Image Credit : Asaduddin Owaisi X Account

ಗ್ರಾಮಸ್ಥರ ಒಲವು

ನಮ್ಮ ಪರವಾಗಿ ಯಾರು ಕೆಲಸ ಮಾಡುತ್ತಾರೋ, ನಾವು ಅವರನ್ನು ಬೆಂಬಲಿಸುತ್ತೇವೆ. ಅಸಾದುದ್ದೀನ್ ಓವೈಸಿ ಇಲ್ಲಿಗೆ ಬಂದು ಪ್ರಚೋದನಕಾರಿ ಭಾಷಣದ ಜೊತೆ ಜನರನ್ನು ಸೆಳೆಯುವಂತಹ ರೋಮಾಂಚಕಾರಿ ಮಾತುಗಳನ್ನು ಮಾತನಾಡುತ್ಥಾರೆ. ಆದ್ರೆ ನಾವು ನಿತೀಶ್ ಕುಮಾರ್ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಪಡೆದುಕೊಂಡಿದ್ದೇವೆ ಎಂದು ರಾಮನಗರದ ಮುಸ್ಲಿಂ ಸಮುದಾಯದವರು ಹೇಳುತ್ತಾರೆ.

ಇದನ್ನೂ ಓದಿ:  ಇಂದು ಮೋದಿ ಬಿಎಸ್‌ಎನ್‌ಎಲ್‌ ಸ್ವದೇಶಿ 4ಜಿ ಸೇವೆ ಉದ್ಘಾಟನೆ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬಿಹಾರ
ವಿಧಾನಸಭಾ ಚುನಾವಣೆ
ಎಐಎಂಐಎಂ
ಅಸಾದುದ್ದೀನ್ ಓವೈಸಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved