LIVE NOW
Published : Apr 15, 2026, 06:56 AM ISTUpdated : Apr 15, 2026, 10:22 AM IST

India Latest New Live: ಮಹಾರಾಷ್ಟ್ರ ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಡ್ಡಾಯ; ಭಾಷೆ ಬರದಿದ್ರೆ ಪರವಾನಗಿ ರದ್ದು

ಸಾರಾಂಶ

ಪಾಟ್ನಾ: ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಮಿತ್ರರಲ್ಲ ಎನ್ನುವುದಕ್ಕೆ ಸದ್ಯ ಬಿಹಾರ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳೇ ಸಾಕ್ಷಿ. 2023ರಲ್ಲಿ ಎನ್‌ಡಿಎ ಕೂಟ ತೊರೆದು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಕಾಂಗ್ರೆಸ್‌ ಸಾರಥ್ಯದ ಇಂಡಿಯಾ ಮೈತ್ರಿಕೂಟಕ್ಕೆ ಸೇರಿದ್ದರು. ಇದು ಬಿಜೆಪಿಯಲ್ಲಿದ್ದ ಸಾಮ್ರಾಟ್‌ ಚೌಧರಿಗೆ ಹಿಡಿಸಿರಲಿಲ್ಲ. ಆಗ ಅವರು ''ನಿತೀಶ್ ಕುಮಾರ್‌ ಅವರನ್ನು ಅಧಿಕಾರದಿಂದ ಕೆಳಗಿಳಿಸುತ್ತೇನೆ. ಅಲ್ಲಿಯ ತನಕ ಪೇಟ ಧರಿಸಿಯೇ ಇರುತ್ತೇನೆ'' ಎಂದು ಪ್ರತಿಜ್ಞೆ ಮಾಡಿದರು. ಅದರಂತೆ ಸದಾ ಪೇಟ ಧರಿಸಿಯೇ ಇರುತ್ತಿದ್ದರು.

ಇಂಡಿ ಕೂಟಕ್ಕೆ ಹಾರಿದ ವರ್ಷಗಳ ಬಳಿಕ ನಿತೀಶ್‌ ಮತ್ತೆ ಎನ್‌ಡಿಎಗೆ ಸೇರಿದರು. ಆಗ ಸಾಮ್ರಾಟ್‌ ಅಯೋಧ್ಯೆಗೆ ತೆರಳಿ ರಾಮನ ಸಮ್ಮುಖದಲ್ಲಿ ತಮ್ಮ ಪೇಟ ಕಳಚಿದರು. '' ನಿತೀಶ್ ಕೂಟಕ್ಕೆ ಮರಳಿದ್ದಾರೆ. ಹೀಗಾಗಿ ಪೇಟ ಬಿಚ್ಚಿ ರಾಮನಿಗೆ ಸಮರ್ಪಿಸುತ್ತಿದ್ದೇನೆ '' ಎಂದಿದ್ದರು.

10:22 AM (IST) Apr 15

ಮಹಾರಾಷ್ಟ್ರ ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಡ್ಡಾಯ; ಭಾಷೆ ಬರದಿದ್ರೆ ಪರವಾನಗಿ ರದ್ದು

ಮಹಾರಾಷ್ಟ್ರ ಸರ್ಕಾರವು ರಾಜ್ಯದ ಎಲ್ಲಾ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಮರಾಠಿ ಭಾಷೆ ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರುವುದನ್ನು ಕಡ್ಡಾಯಗೊಳಿಸಿದೆ. ಈ ನಿಯಮವನ್ನು ಪಾಲಿಸದ ಚಾಲಕರ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಸಾರಿಗೆ ಸಚಿವರು ಘೋಷಿಸಿದ್ದಾರೆ.

Read Full Story

10:12 AM (IST) Apr 15

ವಿರಾಟ್ ಕೊಹ್ಲಿ ಫ್ಯಾನ್ಸ್‌ಗೆ ದೊಡ್ಡ ಶಾಕ್; ಲಖನೌ ಎದುರಿನ ಇಂದಿನ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಶುರುವಾಯ್ತು ಹೊಸ ತಲೆನೋವು!

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ವಿರಾಟ್ ಕೊಹ್ಲಿ, ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಇಂದಿನ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ. ಅಭ್ಯಾಸದ ವೇಳೆ ಕಾಲಿಗೆ ಪಟ್ಟಿ ಕಟ್ಟಿಕೊಂಡು ಕಾಣಿಸಿಕೊಂಡಿದ್ದು, ಅವರು ಸಂಪೂರ್ಣ ಫಿಟ್ ಆಗದಿದ್ದರೆ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
Read Full Story

10:07 AM (IST) Apr 15

ಮಧ್ಯಪ್ರಾಚ್ಯ ಯುದ್ಧದಿಂದ 25 ಲಕ್ಷ ಭಾರತೀಯರಿಗೆ ಬಡತನ; ಆಹಾರ ಅಭದ್ರತೆ, ಮಾನವ ಅಭಿವೃದ್ಧಿ ಕುಂಠಿತ

ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ವಿಶ್ವಾದ್ಯಂತ 88 ಲಕ್ಷ ಹಾಗೂ ಭಾರತದಲ್ಲಿ 25 ಲಕ್ಷ ಜನರು ಬಡತನಕ್ಕೆ ತಳ್ಳಲ್ಪಡಲಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ. ತೈಲ ಬೆಲೆ ಏರಿಕೆ ಮತ್ತು ಹೆಚ್ಚಿದ ವೆಚ್ಚಗಳು ಇದಕ್ಕೆ ಕಾರಣವಾಗಿದೆ.

Read Full Story

09:42 AM (IST) Apr 15

ಕಾರ್ಪೊರೇಟ್ ಜಿಹಾದ್ ಗುಟ್ಟು ರಟ್ಟಾಗಿದ್ದೇಗೆ? ಪೊಲೀಸರ ಮಾರುವೇಷದ ಕಾರ್ಯಾಚರಣೆ ಹೇಗಿತ್ತು?

ನಾಸಿಕ್‌ನ ಟಿಸಿಎಸ್ ಬಿಪಿಒದಲ್ಲಿ ನಡೆದ 'ಕಾರ್ಪೊರೇಟ್ ಜಿಹಾದ್' ಪ್ರಕರಣವು, ಮಾರುವೇಷದ ಪೊಲೀಸ್ ಕಾರ್ಯಾಚರಣೆಯಿಂದ ಬಯಲಾಗಿದೆ. ಈ ತನಿಖೆಯಲ್ಲಿ ಲೈಂ*ಗಿಕ ಶೋಷಣೆ, ಮತಾಂತರ ಯತ್ನ, ಮತ್ತು ವಿದೇಶಿ ನಂಟಿನಂತಹ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿದ್ದು, ಹಲವರನ್ನು ಬಂಧಿಸಲಾಗಿದೆ.

Read Full Story

09:41 AM (IST) Apr 15

180ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ - 350 ಅಶ್ಲೀಲ ವೀಡಿಯೋ ಇಟ್ಕೊಂಡು ಬ್ಲಾಕ್‌ಮೇಲ್ ಮಾಡ್ತಿದ್ದ ಅಯಾಜ್ ಅರೆಸ್ಟ್

ಮಹಾರಾಷ್ಟ್ರದ ಅಮರಾವತಿಯಲ್ಲಿ, 180ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ 350ಕ್ಕೂ ಹೆಚ್ಚು ಅಶ್ಲೀಲ ವೀಡಿಯೋಗಳನ್ನು ಚಿತ್ರೀಕರಿಸಿ ಮಕ್ಕಳಿಗೆ ಬ್ಲಾಕ್‌ಮೇಲ್ ಮಾಡ್ತಿದ್ದ AIMIM ಸಂಘಟನೆಯ ಪದಾಧಿಕಾರಿಯಾಗಿದ್ದ ವ್ಯಕ್ತಿಯನ್ನು ಮಹಾ ಪೊಲೀಸರು ಬಂಧಿಸಿದ್ದಾರೆ.

Read Full Story

09:34 AM (IST) Apr 15

Women s Reservation Bill - ಮಹಿಳಾ ಮೀಸಲಾತಿ ಓಕೆ; ಚುನಾವಣಾ ಟೈಮಲ್ಲೇ ಏಕೆ - ಸೋನಿಯಾ ಗಾಂಧಿ

ಪ್ರಧಾನಿ ಮೋದಿ ಸರ್ಕಾರವು ರಾಜಕೀಯ ಲಾಭಕ್ಕಾಗಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ವಿಧೇಯಕಗಳನ್ನು ಆತುರವಾಗಿ ಜಾರಿಗೊಳಿಸಲು ಯತ್ನಿಸುತ್ತಿದೆ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ಪ್ರತಿ

Read Full Story

09:09 AM (IST) Apr 15

ಪವರ್ ಪಾಯಿಂಟ್ | ಮಹಿಳಾ ಮೀಸಲಾತಿ ಕಾಯ್ದೆ ಶತಮಾನದ ದಿಟ್ಟ ನಿರ್ಧಾನ - ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು, 'ನಾರಿ ಶಕ್ತಿ ವಂದನ ಅಧಿನಿಯಮ'ಕ್ಕೆ ತಿದ್ದುಪಡಿ ತರುವ ಐತಿಹಾಸಿಕ ನಿರ್ಧಾರ ವಿವರಿಸಿದ್ದಾರೆ. ಈ ಕಾಯ್ದೆಯು 2029ರಿಂದ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಗುರಿಯಿದೆ  ಮಹಿಳಾ ಸಬಲೀಕರಣ ರಾಷ್ಟ್ರದ ಪ್ರಗತಿಗೆ ನಿರ್ಣಾಯಕವಾಗಿದೆ.

Read Full Story

08:42 AM (IST) Apr 15

ಬೆಂಗಳೂರಿನಲ್ಲಿಂದು ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟ ಆರ್‌ಸಿಬಿ; ಲಖನೌ ಎದುರು ಕಣಕ್ಕಿಳೀತಾರಾ ವಿರಾಟ್ ಕೊಹ್ಲಿ?

ತನ್ನ ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿರುವ ಆರ್‌ಸಿಬಿ, ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಸೆಣಸಲಿದೆ. ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಹೊಂದಿರುವ ಆರ್‌ಸಿಬಿಗೆ, ಉತ್ತಮ ಫಾರ್ಮ್‌ನಲ್ಲಿರುವ ಲಖನೌ ವೇಗಿ ಮೊಹಮ್ಮದ್‌ ಶಮಿ ಪ್ರಮುಖ ಸವಾಲಾಗಲಿದ್ದಾರೆ.
Read Full Story

08:20 AM (IST) Apr 15

IPL 2026 - ನಿನ್ನೆ ನಡೆದ ಚೆನ್ನೈ ಸೂಪರ್ ಕಿಂಗ್ಸ್ - ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ 32 ರನ್‌ಗಳ ಜಯ ಸಾಧಿಸಿದೆ. ಆದರೆ, ನಾಯಕ ಋತುರಾಜ್ ಗಾಯಕ್ವಾಡ್ ಅವರ ಕಳಪೆ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಪ್ರದರ್ಶನ ಮುಂದುವರಿದಿದ್ದು, ಅಭಿಮಾನಿಗಳ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
Read Full Story

More Trending News