Published : Apr 15, 2026, 06:56 AM ISTUpdated : Apr 15, 2026, 10:35 PM IST

India Latest New Live: 10 ಸಾವಿರಕ್ಕಿಂತ ಹೆಚ್ಚು UPIನಲ್ಲಿ ಹಣ ಹಾಕ್ತೀರಾ? ಇನ್ಮುಂದೆ ಹೊಸ ರೂಲ್ಸ್​- ಏನಿದು ನಿಯಮ, ಯಾರಿಗೆಲ್ಲಾ ಅನ್ವಯ

ಸಾರಾಂಶ

ಪಾಟ್ನಾ: ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಮಿತ್ರರಲ್ಲ ಎನ್ನುವುದಕ್ಕೆ ಸದ್ಯ ಬಿಹಾರ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳೇ ಸಾಕ್ಷಿ. 2023ರಲ್ಲಿ ಎನ್‌ಡಿಎ ಕೂಟ ತೊರೆದು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಕಾಂಗ್ರೆಸ್‌ ಸಾರಥ್ಯದ ಇಂಡಿಯಾ ಮೈತ್ರಿಕೂಟಕ್ಕೆ ಸೇರಿದ್ದರು. ಇದು ಬಿಜೆಪಿಯಲ್ಲಿದ್ದ ಸಾಮ್ರಾಟ್‌ ಚೌಧರಿಗೆ ಹಿಡಿಸಿರಲಿಲ್ಲ. ಆಗ ಅವರು ''ನಿತೀಶ್ ಕುಮಾರ್‌ ಅವರನ್ನು ಅಧಿಕಾರದಿಂದ ಕೆಳಗಿಳಿಸುತ್ತೇನೆ. ಅಲ್ಲಿಯ ತನಕ ಪೇಟ ಧರಿಸಿಯೇ ಇರುತ್ತೇನೆ'' ಎಂದು ಪ್ರತಿಜ್ಞೆ ಮಾಡಿದರು. ಅದರಂತೆ ಸದಾ ಪೇಟ ಧರಿಸಿಯೇ ಇರುತ್ತಿದ್ದರು.

ಇಂಡಿ ಕೂಟಕ್ಕೆ ಹಾರಿದ ವರ್ಷಗಳ ಬಳಿಕ ನಿತೀಶ್‌ ಮತ್ತೆ ಎನ್‌ಡಿಎಗೆ ಸೇರಿದರು. ಆಗ ಸಾಮ್ರಾಟ್‌ ಅಯೋಧ್ಯೆಗೆ ತೆರಳಿ ರಾಮನ ಸಮ್ಮುಖದಲ್ಲಿ ತಮ್ಮ ಪೇಟ ಕಳಚಿದರು. '' ನಿತೀಶ್ ಕೂಟಕ್ಕೆ ಮರಳಿದ್ದಾರೆ. ಹೀಗಾಗಿ ಪೇಟ ಬಿಚ್ಚಿ ರಾಮನಿಗೆ ಸಮರ್ಪಿಸುತ್ತಿದ್ದೇನೆ '' ಎಂದಿದ್ದರು.

10:35 PM (IST) Apr 15

10 ಸಾವಿರಕ್ಕಿಂತ ಹೆಚ್ಚು UPIನಲ್ಲಿ ಹಣ ಹಾಕ್ತೀರಾ? ಇನ್ಮುಂದೆ ಹೊಸ ರೂಲ್ಸ್​- ಏನಿದು ನಿಯಮ, ಯಾರಿಗೆಲ್ಲಾ ಅನ್ವಯ

ಸೈಬರ್ ವಂಚನೆಗಳನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮವನ್ನು ಜಾರಿಗೆ ತರಲು ಚಿಂತಿಸುತ್ತಿದೆ. ಈ ನಿಯಮದ ಪ್ರಕಾರ, ಯುಪಿಐ ಮೂಲಕ ಹೊಸ ಬಳಕೆದಾರರಿಗೆ ಮೊದಲ ಬಾರಿಗೆ ₹10,000 ಕ್ಕಿಂತ ಹೆಚ್ಚು ಹಣ ವರ್ಗಾಯಿಸಿದರೆ, ಅದು ಕ್ರೆಡಿಟ್ ಆಗಲು ಒಂದು ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಈ ಅವಧಿಯಲ್ಲಿ ವಂಚನೆ ಎಂದು ತಿಳಿದರೆ ವಹಿವಾಟನ್ನು ರದ್ದುಗೊಳಿಸಲು ಅವಕಾಶವಿರುತ್ತದೆ.
Read Full Story

10:14 PM (IST) Apr 15

ಭಾರತದಲ್ಲಿ ಹೇಳದ Toxic ಚಿತ್ರದ ಬಹುದೊಡ್ಡ ಗುಟ್ಟು ಅಮೆರಿಕದಲ್ಲಿ ರಿವೀಲ್‌ ಮಾಡಿದ ಯಶ್​! ನಟ ಹೇಳಿದ್ದೇನು?

ಅಮೆರಿಕದಲ್ಲಿ ನಡೆದ ಸಂದರ್ಶನವೊಂದರಲ್ಲಿ ನಟ ಯಶ್ ತಮ್ಮ ಮಹತ್ವಾಕಾಂಕ್ಷೆಯ 'ಟಾಕ್ಸಿಕ್' ಚಿತ್ರದ ಕುರಿತು ಮಾತನಾಡಿದ್ದಾರೆ. ಈ ಚಿತ್ರವು ಮೇಲ್ನೋಟಕ್ಕೆ ಗ್ಯಾಂಗ್‌ಸ್ಟರ್ ಸಿನಿಮಾದಂತೆ ಕಂಡರೂ, ಇದು ವಾಸ್ತವದಲ್ಲಿ ಹಲವು ಪದರಗಳನ್ನು ಹೊಂದಿರುವ ಸೈಕಲಾಜಿಕಲ್ ಥ್ರಿಲ್ಲರ್ ಆಗಿದೆ ಎಂದು ಯಶ್ ಸ್ಪಷ್ಟಪಡಿಸಿದ್ದಾರೆ.
Read Full Story

09:56 PM (IST) Apr 15

RCB ಬೌಲರ್‌ಗಳ ಅಬ್ಬರಕ್ಕೆ ಎಲ್‌ಎಸ್‌ಜಿ ಉಡೀಸ್ - 150 ರನ್‌ಗಳ ಗಡಿ ದಾಟದ ಲಕ್ನೋ

ಈ ಬಾರಿಯ ಐಪಿಎಲ್‌ನಲ್ಲಿ ಬೌಲಿಂಗ್‌ನಲ್ಲಿ ನೀರಸ ನಿರ್ವಹಣೆ ತೋರುತ್ತಿದ್ದ ಆರ್‌ಸಿಬಿ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದೆ. ರಸಿಕ್‌ ದರ್‌ ಅವರ 4 ವಿಕೆಟ್‌ಗಳ ನೆರವಿನಿಂದ ಎಲ್‌ಎಸ್‌ಜಿಯನ್ನು ಕೇವಲ 146 ರನ್‌ಗಳಿಗೆ ಕಟ್ಟಿಹಾಕಿದ್ದು, ಸುಲಭ ಗುರಿ ಬೆನ್ನಟ್ಟಲಿದೆ.

Read Full Story

09:43 PM (IST) Apr 15

Rajinikanth - ರಜನಿ ತಲೈವರ್ 173 ಚಿತ್ರದಿಂದ ನಿರ್ದೇಶಕರು ಓಡಿ ಹೋಗ್ತಿರೋದ್ಯಾಕೆ? ಕಾರಣ ಇದೇನಾ?

ರಜನಿಕಾಂತ್ ನಟನೆಯ 'ತಲೈವರ್ 173' ಚಿತ್ರದ ಮೇಲೆ ಆರಂಭದಿಂದಲೂ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಸಿನಿಮಾ ಇನ್ನೂ ಆರಂಭಿಕ ಹಂತದಲ್ಲಿದ್ದರೂ, ಅದರ ಸುತ್ತ ನಡೆಯುತ್ತಿರುವ ಬದಲಾವಣೆಗಳು ಸದಾ ಚರ್ಚೆಯ ವಿಷಯವಾಗಿದೆ.

Read Full Story

08:47 PM (IST) Apr 15

Arya Stunt - ಹಾಲಿವುಡ್ ರೇಂಜ್ ಸಾಹಸ - ಹೆಪ್ಪುಗಟ್ಟುವ ಚಳಿಯಲ್ಲಿ 90 ನಿಮಿಷ ನೀರೊಳಗೆ ಫೈಟ್ ಮಾಡಿದ ನಟ ಆರ್ಯ!

ನಿರ್ದೇಶಕ ಮನು ಆನಂದ್ ಅವರ ಆಕ್ಷನ್ ಥ್ರಿಲ್ಲರ್ 'ಮಿಸ್ಟರ್ ಎಕ್ಸ್' ಚಿತ್ರಕ್ಕಾಗಿ ನಟ ಆರ್ಯ ತೋರಿರುವ ಬದ್ಧತೆ ಇಡೀ ಚಿತ್ರರಂಗವನ್ನೇ ನಿಬ್ಬೆರಗಾಗಿಸಿದೆ. ಒಂದೂವರೆ ಗಂಟೆಗಳ ಕಾಲ ಅವರು ನೀರೊಳಗೇ ಇದ್ದು ಚಿತ್ರೀಕರಣಕ್ಕೆ ಸಹಕರಿಸಿದ್ದಾರೆ.

Read Full Story

08:31 PM (IST) Apr 15

'ನಾರಿ ಶಕ್ತಿ' ಕಾರ್ಯಕ್ರಮದಲ್ಲೇ ವಿದ್ಯಾರ್ಥಿನಿಗೆ ಅವಮಾನ - ಸ್ಲೀವ್‌ಲೆಸ್ ಕುರ್ತಾ ಧರಿಸಿದ್ದಕ್ಕೆ ಕೇಂದ್ರ ಸಚಿವರ ಸ್ವಾಗತಕ್ಕೆ ತಡೆ!

ದೆಹಲಿ ವಿಶ್ವವಿದ್ಯಾನಿಲಯದಲ್ಲಿ ನಡೆದ 'ನಾರಿ ಶಕ್ತಿ' ಕಾರ್ಯಕ್ರಮದಲ್ಲಿ, ಸ್ಲೀವ್‌ಲೆಸ್ ಕುರ್ತಿ ಧರಿಸಿದ್ದ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬರನ್ನು ಕೇಂದ್ರ ಸಚಿವರಿಗೆ ಸ್ವಾಗತ ಕೋರದಂತೆ ತಡೆಯಲಾಗಿದೆ. ಮಹಿಳಾ ಸಬಲೀಕರಣದ ಕುರಿತಾದ ಕಾರ್ಯಕ್ರಮದಲ್ಲೇ ವಿದ್ಯಾರ್ಥಿನಿಯ ಉಡುಗೆಯ ಬಗ್ಗೆ ತಾರತಮ್ಯ ಎಸಗಲಾಗಿದೆ.

Read Full Story

08:19 PM (IST) Apr 15

ಬಟ್ಟೆ ಬಿಚ್ಚಿ ಕಿಚ್ಚು ಹಚ್ಚಿದ ನಟಿ ಅಕೌಂಟ್‌ಗೆ ಹರಿದು ಬಂತು ಲಕ್ಷ ಲಕ್ಷ ಹಣ; ಕೇಸ್ ದಾಖಲು, ಟ್ವಿಸ್ಟ್ ಮೇಲೆ ಟ್ವಿಸ್ಟ್!

ಗ್ಲಾಮರ್ ಲೋಕದ ಗಮ್ಮತ್ತೇ ಅಂತಹದ್ದು! ಇಲ್ಲಿ ವಿವಾದಗಳು ಸುಮ್ಮನೆ ಬರುವುದಿಲ್ಲ, ಬಂದರೂ ಬರಿಗೈನಲ್ಲಿ ವಾಪಸ್ ಹೋಗುವುದಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಕಣ್ಣು ಆಕೆಯ ಮೇಲೆ ನೆಟ್ಟಿದೆ. ಹಣಕ್ಕಾಗಿ ಹಪಾಹಪಿಯೇ ಅಥವಾ ಸ್ಮಾರ್ಟ್ ಬಿಸಿನೆಸ್ಸಾ? 

Read Full Story

08:18 PM (IST) Apr 15

'ಆಂಟಿ' ಎಂದು ಕರೆವ ಮುನ್ನ ಎಚ್ಚರ! 2 ಲಕ್ಷ ರೂ. ಪರಿಹಾರಕ್ಕೆ ಕೋರ್ಟ್​ ಆದೇಶ- ಏನಿದು ಕೇಸ್​?

 ಭಾರತೀಯ ಮೂಲದ ಮಹಿಳೆಯೊಬ್ಬರು, ಸಹೋದ್ಯೋಗಿ 'ಆಂಟಿ' ಎಂದು ಕರೆದಿದ್ದಕ್ಕೆ ಕಿರುಕುಳದ ಕೇಸ್ ದಾಖಲಿಸಿದ್ದರು. ನ್ಯಾಯಾಲಯವು ಇದನ್ನು ವಯಸ್ಸು ಮತ್ತು ಲಿಂಗದ ಆಧಾರದ ಕಿರುಕುಳವೆಂದು ಪರಿಗಣಿಸಿ, ಮಹಿಳೆಗೆ ಸುಮಾರು ಎರಡು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ತೀರ್ಪು ನೀಡಿದೆ.

Read Full Story

08:00 PM (IST) Apr 15

ಯಶ್ ಫ್ಯಾನ್ಸ್‌ಗೆ ಬ್ಯಾಡ್ ನ್ಯೂಸ್ - 'ಟಾಕ್ಸಿಕ್' ಬಿಡುಗಡೆ ಮತ್ತೆ ಮುಂದಕ್ಕೆ? ರಿಲೀಸ್ ಡೇಟ್ ಬಗ್ಗೆ ಇಲ್ಲಿದೆ ಸತ್ಯ!

'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಚಿತ್ರದ ಬಿಡುಗಡೆ ದಿನಾಂಕ ಮತ್ತೊಮ್ಮೆ ಮುಂದೂಡಿಕೆಯಾಗಿದೆ ಎಂದು ಹಲವು ವರದಿಗಳು ಹೇಳುತ್ತಿವೆ. ಈ ಸಿನಿಮಾ ಜೂನ್ 4, 2026 ರಂದು ತೆರೆಗೆ ಬರುವುದಿಲ್ಲ ಎಂದು ಸುದ್ದಿ ಹಬ್ಬಿದೆ.

Read Full Story

07:52 PM (IST) Apr 15

ಆಶಾ ಭೊಸ್ಲೆ 250 ಕೋಟಿ ಆಸ್ತಿಗೆ ವಾರಸುದಾರ ಯಾರು? ಯಾವ್ಯಾವ ದೇಶದಲ್ಲಿವೆ ಸಂಪತ್ತು? ಇಂಟರೆಸ್ಟಿಂಗ್​ ವಿಷ್ಯ ಇಲ್ಲಿದೆ

92ನೇ ವಯಸ್ಸಿನಲ್ಲಿ ನಿಧನರಾದ ಗಾಯಕಿ ಆಶಾ ಭೋಸ್ಲೆ ಅವರು 200 ರಿಂದ 250 ಕೋಟಿ ರೂಪಾಯಿ ಮೌಲ್ಯದ ಸಂಪತ್ತನ್ನು ಬಿಟ್ಟು ಹೋಗಿದ್ದಾರೆ. ಹಾಡುಗಾರಿಕೆ, ರೆಸ್ಟೋರೆಂಟ್ ಉದ್ಯಮ ಮತ್ತು ರಿಯಲ್ ಎಸ್ಟೇಟ್ ಮೂಲಕ ಗಳಿಸಿದ ಈ ಅಗಾಧ ಆಸ್ತಿಯನ್ನು  ಆನುವಂಶಿಕವಾಗಿ ಪಡೆಯುವ ನಿರೀಕ್ಷೆಯಿದೆ. ಅವರು ಯಾರು?

Read Full Story

06:10 PM (IST) Apr 15

CBSE Class 10 Results 2026 - ಶೇ. 93.70ರಷ್ಟು ಮಂದಿ ಪಾಸ್‌, ಬೆಂಗಳೂರಿಗೆ ಮೂರನೇ ಸ್ಥಾನ; ಅಂಕಪಟ್ಟಿ ಹೀಗೆ ಡೌನ್‌ಲೋಡ್‌ ಮಾಡಿ

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (CBSE) 10ನೇ ತರಗತಿಯ ಫಲಿತಾಂಶವನ್ನು ಪ್ರಕಟಿಸಿದ್ದು, ಒಟ್ಟಾರೆ ಉತ್ತೀರ್ಣ ಪ್ರಮಾಣ ಶೇ. 93.70 ರಷ್ಟಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ಗಳು, ಡಿಜಿಲಾಕರ್ ಮತ್ತು ಉಮಂಗ್ ಆ್ಯಪ್‌ಗಳ ಮೂಲಕ ಪರಿಶೀಲಿಸಬಹುದು.
Read Full Story

06:07 PM (IST) Apr 15

25 ಸಾವಿರ ಕೋಟಿ ಸಾಲದ ಭರವಸೆ ಬೆನ್ನಲ್ಲೇ ಮತ್ತೆ ಭಿಕ್ಷೆ ಪಾತ್ರೆ ಹಿಡಿದು ಸೌದಿ ಮುಂದೆ ನಿಂತ ಪಾಕಿಸ್ತಾನ

25 ಸಾವಿರ ಕೋಟಿ ಸಾಲದ ಭರವಸೆ ಬೆನ್ನಲ್ಲೇ ಮತ್ತೆ ಭಿಕ್ಷೆ ಪಾತ್ರೆ ಹಿಡಿದು ಸೌದಿ ಮುಂದೆ ನಿಂತ ಪಾಕಿಸ್ತಾನ, ಯಎಇಗೆ 3.5 ಬಿಲಿಯನ್ ಡಾಲರ್ ಸಾರ ಮರುಪಾವತಿ ಸಂಕಷ್ಟದಲ್ಲಿರುವ ಪಾಕಿಸ್ತಾನದ ಪರಿಸ್ಥಿತಿ ಶೋಚನೀಯವಾಗಿದೆ.

Read Full Story

05:59 PM (IST) Apr 15

ಅಮೆರಿಕಾದಲ್ಲಿ ಭಾರತದ 'ರಾಮಾಯಣ'ದ ಸೀಕ್ರೆಟ್ ಬಿಚ್ಚಿಟ್ಟ ನಿರ್ಮಾಪಕ; 'ರಾವಣ' ಯಶ್ ಬಗ್ಗೆ ಏನ್ ಹೇಳಿದ್ರು?

ನಾನು ಸಿನಿಮಾವನ್ನು ಹೆಚ್ಚಾಗಿ ಮಲ್ಟಿಪ್ಲೆಕ್ಸ್‌ನಲ್ಲಿ ನೋಡುತ್ತೇನೆ. ಅಲ್ಲಿ ನಮ್ಮ ಸಾಂಪ್ರದಾಯಿಕ ತಿಂಡಿ ವಡಾಪಾವ್ ಮೆಲ್ಲುತ್ತ ಸಿನಿಮಾಗಳನ್ನು ಎಂಜಾಯ್ ಮಾಡುತ್ತೇನೆ. ಅದರೆ, ಸಿನಿಮಾಗಳ ಜೊತೆಗೆ, ನಮ್ಮತನದ, ನಮ್ಮ ಸಾಂಸ್ಕೃತಿಕ ಪರಂಪರೆಯ ಜ್ಞಾನವನ್ನು ಕೂಡ ಪಡೆಯುತ್ತೇನೆ. ಮತ್ತೇನು ಹೇಳಿದ್ರು ನೋಡಿ…

Read Full Story

05:47 PM (IST) Apr 15

ಬಾಟಲಿಗೇ ಬಾಯಿ ಹಾಕಿ ನೀರು ಕುಡಿದ ಕಯಾದು ಲೋಹರ್ - ಲುಕ್ ಮಾತ್ರ ಇದೆ, ಕಾಮನ್ ಸೆನ್ಸ್ ಇಲ್ಲ ಅಂತ ಟ್ರೋಲ್!

ಮಲಯಾಳಂ ಪ್ರೇಕ್ಷಕರಿಗೆ ಚಿರಪರಿಚಿತ ಮುಖ ಮುಗಿಲ್‌ಪೇಟೆ ಖ್ಯಾತಿಯ ನಟಿ ಕಯಾದು ಲೋಹರ್. ಮೂಲತಃ ಕನ್ನಡದವರಾದ ಇವರು, ವಿನಯನ್ ನಿರ್ದೇಶನದ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟರು.

Read Full Story

05:20 PM (IST) Apr 15

Girl Dad - ಮಗಳ ಹೇರ್‌ಕ್ಲಿಪ್ ಹಾಕಿಕೊಂಡ ನಟ ಸಿದ್ಧಾರ್ಥ್ ಮಲ್ಹೋತ್ರಾ - ಫೋಟೋ ಸಖತ್ ವೈರಲ್!

ಸಿದ್ಧಾರ್ಥ್ ಮಲ್ಹೋತ್ರಾ ಅವರ ಇತ್ತೀಚಿನ ಸೋಷಿಯಲ್ ಮೀಡಿಯಾ ಪೋಸ್ಟ್ ಒಂದು ಅಭಿಮಾನಿಗಳನ್ನು ಫಿದಾ ಆಗುವಂತೆ ಮಾಡಿದ್ದು, ಅದರಲ್ಲಿ ಅವರು 'ಗರ್ಲ್ ಡ್ಯಾಡ್' ಎನರ್ಜಿಯನ್ನು ತೋರಿಸಿದ್ದಾರೆ.

Read Full Story

04:51 PM (IST) Apr 15

'ನಿಮ್ಮ ಹತ್ತಿರ ಇರೋದು ಐಪಿಎಲ್ ರಿಜೆಕ್ಟ್ ಮಾಡಿದ ಪ್ಲೇಯರ್ಸ್‌ ಮಾತ್ರ' - PSL ಮರ್ಯಾದೆ ಹರಾಜು ಮಾಡಿದ ಪಾಕ್ ಕ್ರಿಕೆಟಿಗ!

ಪಾಕಿಸ್ತಾನದ ಕ್ರಿಕೆಟಿಗ ಅಹ್ಮದ್ ಶೆಹಜಾದ್, ಐಪಿಎಲ್ ಮತ್ತು ಪಿಎಸ್‌ಎಲ್ ನಡುವಿನ ಹೋಲಿಕೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಪಿಎಸ್‌ಎಲ್‌ನಲ್ಲಿ ಆಡುವ ವಿದೇಶಿ ಆಟಗಾರರು ಐಪಿಎಲ್‌ನಿಂದ ನಿವೃತ್ತರಾದವರು ಅಥವಾ ತಿರಸ್ಕೃತರಾದವರು ಎಂದು ಅವರು ಹೇಳಿದ್ದಾರೆ. 

Read Full Story

04:37 PM (IST) Apr 15

ವಿರಾಟ್ ಕೊಹ್ಲಿಯಲ್ಲ, ಬೆಂಗಳೂರಿಗೆ ಬಂದ ಹೊಸ ಕಿಂಗ್! ಮ್ಯಾಚ್‌ಗೂ ಮೊದಲೇ ಲಖನೌಗೆ ಶುರುವಾಯ್ತು ನಡುಕ!

ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬೆಂಗಳೂರು ಮತ್ತು ಲಖನೌ ಸೂಪರ್ ಜೈಂಟ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಎಲ್ಲರ ಕಣ್ಣು ಕೊಹ್ಲಿ ಮೇಲೆ ಮಾತ್ರವಲ್ಲ, ಇನ್ನು ಕೆಲವೇ ರನ್ ಗಳಿಸಿದರೆ ನಂಬರ್ 1 ಪಟ್ಟಕ್ಕೇರುವ ಆಟಗಾರನ ಮೇಲೂ ಇದೆ. ಆ ಆಟಗಾರ ಯಾರು? ಯಾಕೆ ನಂಬರ್ 1 ಆಗ್ತಾರೆ? ಇಲ್ಲಿದೆ ವಿವರ.

Read Full Story

04:04 PM (IST) Apr 15

ಲೆನ್ಸ್‌ಕಾರ್ಟ್ ಪಾಲಿಸಿ ವಿರುದ್ಧ ಭುಗಿಲೆದ್ದ ಆಕ್ರೋಶ - ಬಿಂದಿ, ಸಿಂಧೂರಕ್ಕೆ ನಿರ್ಬಂಧ, ಹಿಜಾಬ್‌ಗೆ ಅನುಮತಿ

ಲೆನ್ಸ್‌ಕಾರ್ಟ್ ತನ್ನ ಉದ್ಯೋಗಿಗಳಿಗೆ ಜಾರಿಗೊಳಿಸಿರುವ ಹೊಸ ಡ್ರೆಸ್‌ ಕೋಡ್ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ನಿಯಮದ ಪ್ರಕಾರ, ಹಿಂದೂ ಧಾರ್ಮಿಕ ಸಂಕೇತಗಳಾದ ಬಿಂದಿ, ಸಿಂಧೂರ ಮತ್ತು ಕೈಗೆ ಕಟ್ಟುವ ದಾರವನ್ನು ನಿರ್ಬಂಧಿಸಿ, ಹಿಜಾಬ್ ಧರಿಸಲು ಅನುಮತಿ ನೀಡಿರುವುದು ತಾರತಮ್ಯದ ಆರೋಪಕ್ಕೆ ಗುರಿಯಾಗಿದೆ. 

Read Full Story

04:03 PM (IST) Apr 15

ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ ಯಾದವ್ ನಾಯಕತ್ವಕ್ಕೆ ಕುತ್ತು? ಹೊಸ ಕ್ಯಾಪ್ಟನ್‌ಗಾಗಿ ಬಿಸಿಸಿಐ ಹುಡುಕಾಟ!

ಟಿ20 ವಿಶ್ವಕಪ್ ಗೆದ್ದರೂ, ನಾಯಕ ಸೂರ್ಯಕುಮಾರ್ ಯಾದವ್ ಅವರ ಕಳಪೆ ಬ್ಯಾಟಿಂಗ್ ಫಾರ್ಮ್‌ನಿಂದಾಗಿ ಅವರ ನಾಯಕತ್ವದ ಸ್ಥಾನ ಅಲುಗಾಡುತ್ತಿದೆ. 2028ರ ಒಲಿಂಪಿಕ್ಸ್ ಮತ್ತು ವಿಶ್ವಕಪ್ ದೃಷ್ಟಿಯಿಂದ ಬಿಸಿಸಿಐ ಹೊಸ ನಾಯಕನ ಹುಡುಕಾಟದಲ್ಲಿದ್ದು, ಮುಂಬರುವ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸಗಳು ಸೂರ್ಯಕುಮಾರ್ ಅವರ ಭವಿಷ್ಯವನ್ನು ನಿರ್ಧರಿಸಲಿವೆ.
Read Full Story

03:40 PM (IST) Apr 15

ಕಾಂಗ್ರೆಸ್‌ಗೆ ಶಾಕ್ ಕೊಟ್ಟ ಸುಪ್ರೀಂ ಆದೇಶ, ನಾಯಕ ಪವನ್ ಖೆರಾ ಮಧ್ಯಂತರ ಜಾಮೀನಿಗೆ ತಡೆ

ಕಾಂಗ್ರೆಸ್‌ಗೆ ಶಾಕ್ ಕೊಟ್ಟ ಸುಪ್ರೀಂ ಆದೇಶ, ನಾಯಕ ಪವನ್ ಖೆರಾ ಮಧ್ಯಂತರ ಜಾಮೀನಿಗೆ ತಡೆ, ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದಿದ್ದ ಕಾಂಗ್ರೆಸ್ ನಾಯಕ ಪವನ್ ಖೆರಾ ಇದೀಗ ಕಂಗಾಲಾಗಿದ್ದಾರೆ.

 

Read Full Story

03:13 PM (IST) Apr 15

ಅಮೆರಿಕಾ ಸಂದರ್ಶನದಲ್ಲಿ ನಟ ಯಶ್ ಭಾಗಿ; 'ರಾಮಾಯಣ'ದ ಸಾಕಷ್ಟು ಸೀಕ್ರೆಟ್ ಬಿಚ್ಚಿಟ್ಟ ರಾಕಿಂಗ್ ಸ್ಟಾರ್!

‘ರಣವೀರ್ ಸಿಂಗ್ ಒಬ್ಬ ಅದ್ಭುತ ನಟ. ರಾಮನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಲು ಶಕ್ತರಾಗಿರುವ ಕಲಾವಿದ. ನಾವೆಲ್ಲರೂ ಒಂದು ಮಹಾನ್ ಕಾರ್ಯಕ್ಕಾಗಿ ಒಂದಾಗಿದ್ದೇವೆ. ಇಲ್ಲಿ ನಮ್ಮ ಕೆಮೆಸ್ಟ್ರಿಗಿಂತ ಹೆಚ್ಚಾಗಿ ನಾವೆಲ್ಲ ಒಂದು ಅತ್ಯಮೂಲ್ಯ ಕೊಡುಗೆಯನ್ನು ಜಗತ್ತಿಗೆ ನೀಡಲು ಸಜ್ಜಾಗುತ್ತಿದ್ದೇವೆ’. ಇನ್ನೂ ಏನಂದ್ರು ನೋಡಿ..

Read Full Story

02:59 PM (IST) Apr 15

25ರ ಹರೆಯದ ಹುಡುಗನ ಪದೇ ಪದೇ ಕರಿತಿದ್ದ ಆಂಟಿ - ಮರಕ್ಕೆ ಕಟ್ಟಿ ಹೊಡೆದು ಸಾಯಿಸಿದ ಆಂಟಿ ಕಡೆಯವರು

ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ 25 ವರ್ಷದ ಯುವಕನನ್ನು ಆಕೆಯ ಕುಟುಂಬಸ್ಥರು ಮರಕ್ಕೆ ಕಟ್ಟಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಯುವಕ ಮೃತಪಟ್ಟಿದ್ದಾನೆ. ಘಟನೆ ವೀಡಿಯೋ ವೈರಲ್ ಆಗಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

Read Full Story

02:52 PM (IST) Apr 15

ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಆಲೌಟ್ ಆದ ಟಾಪ್-6 ತಂಡಗಳಿವು! ಆರ್‌ಸಿಬಿಗೆ ಎಷ್ಟನೇ ಸ್ಥಾನ?

ಬೆಂಗಳೂರು: ಹೊಡಿಬಡಿಯಾಟಕ್ಕೆ ಹೆಸರುವಾಸಿಯಾಗಿರುವ IPL ಲೀಗ್ ಟೂರ್ನಿಯಲ್ಲಿ ಆಗಾಗ ಬೌಲರ್‌ಗಳು ಕೈಚಳಕ ತೋರಿಸುವ ಮೂಲಕ ಎದುರಾಳಿ ತಂಡದ ಎಲ್ಲಾ ಬ್ಯಾಟರ್‌ಗಳನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬನ್ನಿ ನಾವಿಂದು ಐಪಿಎಲ್‌ನಲ್ಲಿ ಅತಿಹೆಚ್ಚು ಬಾರಿ ಆಲೌಟ್ ಆದ ಟಾಪ್-6 ತಂಡಗಳು ಯಾವುವು ನೋಡೋಣ ಬನ್ನಿ.

 

Read Full Story

01:39 PM (IST) Apr 15

ಸೂರ್ಯಕುಮಾರ್ ಯಾದವ್ ಹೊರಬಿದ್ರೆ ಭಾರತದ ಮುಂದಿನ ಟಿ20 ನಾಯಕ ಯಾರು? ಇಲ್ಲಿವೆ 5 ಬೆಸ್ಟ್ ಆಯ್ಕೆಗಳು

ಬೆಂಗಳೂರು: ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ ಸದ್ಯ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ವಯಸ್ಸು ಹಾಗೂ ಫಾರ್ಮ್ ಗಮನದಲ್ಲಿಟ್ಟುಕೊಂಡು ಬಿಸಿಸಿಐ, ಟಿ20 ಕ್ರಿಕೆಟ್‌ಗೆ ಹೊಸ ನಾಯಕನ ಹುಡುಕಾಟದಲ್ಲಿದೆ. ಸೂರ್ಯ ಬದಲಿಗೆ ಯಾರಾಗಬಹುದು ಭಾರತದ ಟಿ20 ಕ್ಯಾಪ್ಟನ್?

 

Read Full Story

01:00 PM (IST) Apr 15

ಅಸ್ಸಾಂ ಸಿಎಂ ಪತ್ನಿ ಬಗ್ಗೆ ವಿವಾದಾತ್ಮ ಹೇಳಿಕೆ ಪ್ರಕರಣ - ಪವನ್ ಖೇರಾಗೆ ಭಾರಿ ಹಿನ್ನಡೆ; ಹೈಕೋರ್ಟ್ ಜಾಮೀನು ಆದೇಶಕ್ಕೆ ಸುಪ್ರೀಂ ತಡೆ!

Pawan Khera case: ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ತೆಲಂಗಾಣ ಹೈಕೋರ್ಟ್ ನೀಡಿದ್ದ ಮಧ್ಯಂತರ ಜಾಮೀನಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಅಸ್ಸಾಂನಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಖೇರಾ ಅವರು ಅಸ್ಸಾಂ ನ್ಯಾಯಾಲಯದಲ್ಲೇ ಜಾಮೀನು ಪಡೆಯಬೇಕು ಎಂದು ನ್ಯಾಯಾಲಯ ಸೂಚಿಸಿದೆ.

Read Full Story

12:57 PM (IST) Apr 15

ಅಯಾಜ್‌ನಿಂದ 180 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಕೇಸ್ - ಸಂತ್ರಸ್ತ ಮಕ್ಕಳಿಗೆ ಮೈಮೇಲೆ ಪ್ರಜ್ಞೆ ಇರಲಿಲ್ವಾ ಎಂದು ಕೇಳಿದ ಕಾಂಗ್ರೆಸ್ ನಾಯಕಿ

ಮಹಾರಾಷ್ಟ್ರದಲ್ಲಿ 180ಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಬ್ಲಾಕ್‌ಮೇಲ್ ಮಾಡುತ್ತಿದ್ದ ಆರೋಪಿ ಮೊಹಮ್ಮದ್ ಆಯಾಜ್‌ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಯಶೋಮತಿ ಠಾಕೂರ್ ಅವರು ಸಂತ್ರಸ್ತರನ್ನೇ ದೂಷಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Read Full Story

12:30 PM (IST) Apr 15

ಕೆಜಿಎಫ್, ಬಾಹುಬಲಿ ಚಿತ್ರಗಳನ್ನು ಮೂಲೆಗೆ ತಳ್ಳಿ ಭಾರತದ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಪಟ್ಟಿಗೆ ಸೇರಿದ ಧುರಂಧರ್!

ಮಾರ್ಚ್ 19 ರಂದು ಬಿಡುಗಡೆಯಾದ 'ಧುರಂಧರ್: ದಿ ರಿವೆಂಜ್' ಚಿತ್ರವು ಹೊಸ ದಾಖಲೆ ನಿರ್ಮಿಸಿದೆ. ಸೌತ್ ಇಂಡಿಯನ್ ಭಾಷೆಗಳಲ್ಲಿಯೂ ಅದ್ದೂರಿಯಾಗಿ ಬಿಡುಗಡೆಯಾದ ಈ ಚಿತ್ರ ಎರಡನೇ ಭಾಗದಲ್ಲೇ 1712 ಕೋಟಿ ಲೂಟಿ ಮಾಡಿದೆ. ವಿಶೇಷವೆಂದರೆ, ಭಾರತದ ನೆಲದಲ್ಲೇ 1000 ಕೋಟಿ ದಾಟಿದ ಮೊದಲ ಹಿಂದಿ ಚಿತ್ರ ಎಂಬ ಇತಿಹಾಸವನ್ನೂ ಇದು ನಿರ್ಮಿಸಿದೆ.

Read Full Story

12:13 PM (IST) Apr 15

ಸತತ ನಾಲ್ಕನೇ ಸೋಲು ಕಂಡ ಬೆನ್ನಲ್ಲೇ ಬಿಸಿಸಿಐನಿಂದ ಶಿಕ್ಷೆಗೆ ಗುರಿಯಾದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ!

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ನಡೆಸಿದ್ದಕ್ಕಾಗಿ ಕೆಕೆಆರ್ ನಾಯಕ ಅಜಿಂಕ್ಯ ರಹಾನೆಗೆ ಬಿಸಿಸಿಐ 12 ಲಕ್ಷ ರೂಪಾಯಿ ದಂಡ ವಿಧಿಸಿದೆ. ಈ ಆವೃತ್ತಿಯಲ್ಲಿ ಈ ರೀತಿ ದಂಡಕ್ಕೆ ಗುರಿಯಾದ ನಾಲ್ಕನೇ ತಂಡ ಕೆಕೆಆರ್ ಆಗಿದ್ದು, ಈ ಹಿಂದೆ ಶ್ರೇಯಸ್ ಅಯ್ಯರ್, ಶುಭ್‌ಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ ಕೂಡ ದಂಡ ತೆತ್ತಿದ್ದಾರೆ.
Read Full Story

11:55 AM (IST) Apr 15

ಬಿಹಾರ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಪ್ರಮಾಣ ವಚನ ಸ್ವೀಕಾರ

Bihars First BJP CM: ಬಿಹಾರದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ರಾಜ್ಯಪಾಲ ಸೈಯದ್ ಅತಾ ಹಸ್ನೈನ್ ಅವರು ನೂತನ ಸಿಎಂಗೆ ಪ್ರಮಾಣವಚನ ಬೋಧಿಸಿದರು.

Read Full Story

11:42 AM (IST) Apr 15

ಕಾಗ್ನಿಜೆಂಟ್‌ ಟೆಕ್ನೋವರ್ಸ್ - ಎಐ ಭವಿಷ್ಯ ರೂಪಿಸುವ ಸ್ಪರ್ಧೆ, 400ಕ್ಕೂ ಹೆಚ್ಚು ಕಾಲೇಜುಗಳ 20000 ವಿದ್ಯಾರ್ಥಿಗಳು ಭಾಗಿ

ಪ್ರಮುಖ ಐಟಿ ಸಂಸ್ಥೆ 'ಕಾಗ್ನಿಜೆಂಟ್‌' ತನ್ನ 'ಟೆಕ್ನೋವರ್ಸ್ ಹ್ಯಾಕಥಾನ್ 2026'ಕ್ಕೆ ಚಾಲನೆ ನೀಡಿದೆ. ನೈಜ ಜಗತ್ತಿನ ಸಮಸ್ಯೆಗಳಿಗೆ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳಲು ಭಾರತದಾದ್ಯಂತದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇದೊಂದು ರಾಷ್ಟ್ರೀಯ ವೇದಿಕೆಯಾಗಿದೆ. ಈ ಸ್ಪರ್ಧೆಯು ಶೇ. 50ರಷ್ಟು ಮಹಿಳಾ ಭಾಗವಹಿಸುವಿಕೆಯನ್ನು ಕಡ್ಡಾಯಗೊಳಿಸಿದೆ.
Read Full Story

10:22 AM (IST) Apr 15

ಮಹಾರಾಷ್ಟ್ರ ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಡ್ಡಾಯ; ಭಾಷೆ ಬರದಿದ್ರೆ ಪರವಾನಗಿ ರದ್ದು

ಮಹಾರಾಷ್ಟ್ರ ಸರ್ಕಾರವು ರಾಜ್ಯದ ಎಲ್ಲಾ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಮರಾಠಿ ಭಾಷೆ ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರುವುದನ್ನು ಕಡ್ಡಾಯಗೊಳಿಸಿದೆ. ಈ ನಿಯಮವನ್ನು ಪಾಲಿಸದ ಚಾಲಕರ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಸಾರಿಗೆ ಸಚಿವರು ಘೋಷಿಸಿದ್ದಾರೆ.

Read Full Story

10:12 AM (IST) Apr 15

ವಿರಾಟ್ ಕೊಹ್ಲಿ ಫ್ಯಾನ್ಸ್‌ಗೆ ದೊಡ್ಡ ಶಾಕ್; ಲಖನೌ ಎದುರಿನ ಇಂದಿನ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಶುರುವಾಯ್ತು ಹೊಸ ತಲೆನೋವು!

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ವಿರಾಟ್ ಕೊಹ್ಲಿ, ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಇಂದಿನ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ. ಅಭ್ಯಾಸದ ವೇಳೆ ಕಾಲಿಗೆ ಪಟ್ಟಿ ಕಟ್ಟಿಕೊಂಡು ಕಾಣಿಸಿಕೊಂಡಿದ್ದು, ಅವರು ಸಂಪೂರ್ಣ ಫಿಟ್ ಆಗದಿದ್ದರೆ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
Read Full Story

10:07 AM (IST) Apr 15

ಮಧ್ಯಪ್ರಾಚ್ಯ ಯುದ್ಧದಿಂದ 25 ಲಕ್ಷ ಭಾರತೀಯರಿಗೆ ಬಡತನ; ಆಹಾರ ಅಭದ್ರತೆ, ಮಾನವ ಅಭಿವೃದ್ಧಿ ಕುಂಠಿತ

ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ವಿಶ್ವಾದ್ಯಂತ 88 ಲಕ್ಷ ಹಾಗೂ ಭಾರತದಲ್ಲಿ 25 ಲಕ್ಷ ಜನರು ಬಡತನಕ್ಕೆ ತಳ್ಳಲ್ಪಡಲಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ. ತೈಲ ಬೆಲೆ ಏರಿಕೆ ಮತ್ತು ಹೆಚ್ಚಿದ ವೆಚ್ಚಗಳು ಇದಕ್ಕೆ ಕಾರಣವಾಗಿದೆ.

Read Full Story

09:42 AM (IST) Apr 15

ಕಾರ್ಪೊರೇಟ್ ಜಿಹಾದ್ ಗುಟ್ಟು ರಟ್ಟಾಗಿದ್ದೇಗೆ? ಪೊಲೀಸರ ಮಾರುವೇಷದ ಕಾರ್ಯಾಚರಣೆ ಹೇಗಿತ್ತು?

ನಾಸಿಕ್‌ನ ಟಿಸಿಎಸ್ ಬಿಪಿಒದಲ್ಲಿ ನಡೆದ 'ಕಾರ್ಪೊರೇಟ್ ಜಿಹಾದ್' ಪ್ರಕರಣವು, ಮಾರುವೇಷದ ಪೊಲೀಸ್ ಕಾರ್ಯಾಚರಣೆಯಿಂದ ಬಯಲಾಗಿದೆ. ಈ ತನಿಖೆಯಲ್ಲಿ ಲೈಂ*ಗಿಕ ಶೋಷಣೆ, ಮತಾಂತರ ಯತ್ನ, ಮತ್ತು ವಿದೇಶಿ ನಂಟಿನಂತಹ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿದ್ದು, ಹಲವರನ್ನು ಬಂಧಿಸಲಾಗಿದೆ.

Read Full Story

09:41 AM (IST) Apr 15

180ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ - 350 ಅಶ್ಲೀಲ ವೀಡಿಯೋ ಇಟ್ಕೊಂಡು ಬ್ಲಾಕ್‌ಮೇಲ್ ಮಾಡ್ತಿದ್ದ ಅಯಾಜ್ ಅರೆಸ್ಟ್

ಮಹಾರಾಷ್ಟ್ರದ ಅಮರಾವತಿಯಲ್ಲಿ, 180ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ 350ಕ್ಕೂ ಹೆಚ್ಚು ಅಶ್ಲೀಲ ವೀಡಿಯೋಗಳನ್ನು ಚಿತ್ರೀಕರಿಸಿ ಮಕ್ಕಳಿಗೆ ಬ್ಲಾಕ್‌ಮೇಲ್ ಮಾಡ್ತಿದ್ದ AIMIM ಸಂಘಟನೆಯ ಪದಾಧಿಕಾರಿಯಾಗಿದ್ದ ವ್ಯಕ್ತಿಯನ್ನು ಮಹಾ ಪೊಲೀಸರು ಬಂಧಿಸಿದ್ದಾರೆ.

Read Full Story

09:34 AM (IST) Apr 15

Women s Reservation Bill - ಮಹಿಳಾ ಮೀಸಲಾತಿ ಓಕೆ; ಚುನಾವಣಾ ಟೈಮಲ್ಲೇ ಏಕೆ - ಸೋನಿಯಾ ಗಾಂಧಿ

ಪ್ರಧಾನಿ ಮೋದಿ ಸರ್ಕಾರವು ರಾಜಕೀಯ ಲಾಭಕ್ಕಾಗಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ವಿಧೇಯಕಗಳನ್ನು ಆತುರವಾಗಿ ಜಾರಿಗೊಳಿಸಲು ಯತ್ನಿಸುತ್ತಿದೆ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ಪ್ರತಿ

Read Full Story

09:09 AM (IST) Apr 15

ಪವರ್ ಪಾಯಿಂಟ್ | ಮಹಿಳಾ ಮೀಸಲಾತಿ ಕಾಯ್ದೆ ಶತಮಾನದ ದಿಟ್ಟ ನಿರ್ಧಾನ - ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು, 'ನಾರಿ ಶಕ್ತಿ ವಂದನ ಅಧಿನಿಯಮ'ಕ್ಕೆ ತಿದ್ದುಪಡಿ ತರುವ ಐತಿಹಾಸಿಕ ನಿರ್ಧಾರ ವಿವರಿಸಿದ್ದಾರೆ. ಈ ಕಾಯ್ದೆಯು 2029ರಿಂದ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಗುರಿಯಿದೆ  ಮಹಿಳಾ ಸಬಲೀಕರಣ ರಾಷ್ಟ್ರದ ಪ್ರಗತಿಗೆ ನಿರ್ಣಾಯಕವಾಗಿದೆ.

Read Full Story

08:42 AM (IST) Apr 15

ಬೆಂಗಳೂರಿನಲ್ಲಿಂದು ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟ ಆರ್‌ಸಿಬಿ; ಲಖನೌ ಎದುರು ಕಣಕ್ಕಿಳೀತಾರಾ ವಿರಾಟ್ ಕೊಹ್ಲಿ?

ತನ್ನ ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿರುವ ಆರ್‌ಸಿಬಿ, ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಸೆಣಸಲಿದೆ. ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಹೊಂದಿರುವ ಆರ್‌ಸಿಬಿಗೆ, ಉತ್ತಮ ಫಾರ್ಮ್‌ನಲ್ಲಿರುವ ಲಖನೌ ವೇಗಿ ಮೊಹಮ್ಮದ್‌ ಶಮಿ ಪ್ರಮುಖ ಸವಾಲಾಗಲಿದ್ದಾರೆ.
Read Full Story

08:20 AM (IST) Apr 15

IPL 2026 - ನಿನ್ನೆ ನಡೆದ ಚೆನ್ನೈ ಸೂಪರ್ ಕಿಂಗ್ಸ್ - ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ 32 ರನ್‌ಗಳ ಜಯ ಸಾಧಿಸಿದೆ. ಆದರೆ, ನಾಯಕ ಋತುರಾಜ್ ಗಾಯಕ್ವಾಡ್ ಅವರ ಕಳಪೆ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಪ್ರದರ್ಶನ ಮುಂದುವರಿದಿದ್ದು, ಅಭಿಮಾನಿಗಳ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
Read Full Story

More Trending News