ಅಮರನಾಥ ಯಾತ್ರೆ, ಹಲವರ ಪ್ರಾಣ ಬಲಿ ಪಡೆದ ದಿಢೀರ್ ಪ್ರವಾಹದ ಹಿಂದೆ ಚೀನಾ ಸಂಚು? ಸೌಂಡ್ ವೆಬ್ ಅಂದ್ರೇನು?
First Published Jul 19, 2022, 11:08 AM ISTಇತ್ತೀಚೆಗಷ್ಟೇ ಅಮರನಾಥ ಯಾತ್ರೆಯ ವೇಳೆ ಸಂಭವಿಸಿದ ಮೇಘಸ್ಫೋಟ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಹಿಮಾಲಯದಲ್ಲಿ ಇಂತಹ ಪ್ರಾಕೃತಿಕ ವಿಕೋಪಗಳು ಬರುತ್ತವೆ ಎಂದು ಹೇಳಲು ಏನೂ ಇಲ್ಲ, ಆದರೆ ಕೃತಕ ಮಳೆಯ ಪರಿಕಲ್ಪನೆಯು ಚರ್ಚೆಯಲ್ಲಿ ಬಂದಾಗಿನಿಂದ ಶತ್ರು ದೇಶಗಳ ಕೈವಾಡದ ಆತಂಕ ಹೆಚ್ಚಾಗತೊಡಗಿದವು. ಈ ಕುರಿತು ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ನೀಡಿರುವ ಆಘಾತಕಾರಿ ಹೇಳಿಕೆಯೊಂದು ಇತ್ತೀಚಿನ ದಿನಗಳಲ್ಲಿ ಚರ್ಚೆಯಲ್ಲಿದೆ. ಭಾರತದಲ್ಲಿ ಮೇಘಸ್ಫೋಟದ ಘಟನೆಗಳ ಹಿಂದೆ ವಿದೇಶಿ ಶಕ್ತಿಗಳ ಅಂದರೆ ಚೀನಾದ ಕೆಲವು ಪಿತೂರಿ ಇದೆ ಎಂದು ಅವರು ಹೇಳಿದ್ದಾರೆ. ಜುಲೈ 17 ರಂದು ಕೆಸಿಆರ್ ಪ್ರವಾಹ ಪೀಡಿತ ಭದ್ರಾಚಲಂಗೆ ಭೇಟಿ ನೀಡಿದ್ದರು. ಅಲ್ಲಿ, ಗೋದಾವರಿ ಪ್ರದೇಶದಲ್ಲಿ ಸಂಭವಿಸಿದ ಮೇಘಸ್ಫೋಟದ ಘಟನೆಗಳ ಹಿಂದೆ ವಿದೇಶಿ ಪಿತೂರಿ ಇರುವ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಲೇಹ್-ಲಡಾಖ್ ಮತ್ತು ಉತ್ತರಾಖಂಡದಲ್ಲಿ ಚೀನಾ ಇದೇ ಕೆಲಸವನ್ನು ಮಾಡಿತ್ತು ಎಂದು ಅವರು ವಾದಿಸಿದ್ದಾರೆ. ರಾವ್ ಅವರು ಜುಲೈ 17ರಂದು ಈ ಹೇಳಿಕೆ ನೀಡುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ. ಸಹಜವಾಗಿಯೇ ಕೆಲವರು ಗೇಲಿ ಮಾಡುತ್ತಿದ್ದರೂ ಕೃತಕ ಮಳೆಯ ಬಗ್ಗೆ ತಿಳಿದವರು ಆತಂಕಗೊಂಡಿದ್ದಾರೆ. ಜುಲೈ 8, 2022 ರಂದು ಜಮ್ಮು ಮತ್ತು ಕಾಶ್ಮೀರದ ಪವಿತ್ರ ಗುಹೆಯ ಬಾಸ್ ಮೋಡದ ಸ್ಫೋಟದಿಂದ ಉಂಟಾದ ಪ್ರವಾಹದಲ್ಲಿ 16 ಜನರು ಸಾವನ್ನಪ್ಪಿದ್ದರೆ, 40 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂಬುವುದು ಉಲ್ಲೇಖನೀಯ. ವಾಸ್ತವವಾಗಿ, ಇದರ ಹಿಂದೆ ಚೀನಾದ ತರಂಗ ಧ್ವನಿಯ ಬಳಕೆ ಇದೆ. ಈ ಮೂಲಕ ಮಳೆಯನ್ನು ಎಲ್ಲಿ ಬೇಕಾದರೂ ತರಬಹುದು ಎನ್ನಲಾಗಿದೆ. ಕಳೆದ ವರ್ಷ ಉತ್ತರಾಖಂಡದ ಚಮೋಲಿಯಲ್ಲಿ ಸಂಭವಿಸಿದ ಪ್ರವಾಹದ ಸಂದರ್ಭದಲ್ಲೂ ಚೀನಾ ಮೇಲೆ ಶಂಕೆ ವ್ಯಕ್ತವಾಗಿತ್ತು.