ಬೆಂಗಳೂರಿನಲ್ಲಿ ಶ್ರದ್ಧಾ ವಾಕರ್‌ ಹಂತಕನಂತೆ ಮತ್ತೊಬ್ಬ ಕ್ರೂರಿ: ಫ್ರಿಡ್ಜ್‌ನಲ್ಲಿ 50 ಪೀಸ್ ಮಹಿಳೆಯ ಮಾಂಸ!

Sep 23, 2024, 6:56 PM IST

ದೆಹಲಿಯ ಶ್ರದ್ಧಾ ವಾಕರ್​​ ಕೇಸ್​​ ನಿಮಗೆ ನೆನಪಿರಬಹುದು. ಪ್ರೀತಿಸಿದ ಹುಡುಗನೇ ಯುವತಿಯನ್ನ ಪೀಸ್​​ ಪೀಸ್​​ ಮಾಡಿ ಫ್ರಿಡ್ಜ್‌​ನಲ್ಲಿಟ್ಟು ನಂತರ ಒಂದೊಂದು ಭಾಗವನ್ನ ಒಂದೊಂದು ದಿಕ್ಕಿಗೆ ಎಸೆದಿದ್ದನು. ಆವತ್ತು ಆ ಕೇಸ್​ ಇಡೀ ದೇಶವನ್ನೇ ಶೇಕ್​ ಮಾಡಿತ್ತು. ಆದರೆ, ಇವತ್ತು ಇಂಥದ್ದೇ ಒಂದು ಪ್ರಕರಣ ನಮ್ಮದೇ ಬೆಂಗಳೂರಿನಲ್ಲಿ ನಡೆದು ಹೋಗಿದೆ. ಮಹಿಳೆಯೊಬ್ಬಳನ್ನ ತುಂಡು ತುಂಡಾಗಿ ಕತ್ತರಿಸಿ ಚೀಲದಲ್ಲಿ ತುಂಬಿ ಫ್ರಿಡ್ಜ್‌​​​ನಲ್ಲಿಟ್ಟಿದ್ದಾನೆ. ನಂತರ ಹಂತಕ ಯಾರಿಗೂ ಗೊತ್ತಾಗದ ಹಾಗೆ ಜಾಗ ಖಾಲಿ ಮಾಡಿದ್ದಾನೆ. ಅಷ್ಟಕ್ಕೂ ಅಲ್ಲಿ ಬರ್ಬರವಾಗಿ ಕೊಲೆಯಾದ ಆ ಮಹಿಳೆ ಯಾರು? ಹಂತಕ ಅಷ್ಟೊಂದು ಕ್ರೂರವಾಗಿ ಯಾಕಾಗಿ ಕೊಂದಿದ್ದಾನೆ... ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಮಹಿಳೆಯ ಬರ್ಬರ ಕೊಲೆಯ ಕಂಪ್ಲೀಟ್​​ ಡಿಟೇಲ್ಸ್​​​ ಇವತ್ತಿನ ಎಫ್​.ಐ.ಆರ್​​​.

ಫ್ರಿಡ್ಜ್‌ನಲ್ಲಿ ಸಿಕ್ಕ ಪೀಸ್​​ ಪೀಸ್​​ ಬಾಡಿಯನ್ನ ಕಂಡು ಪೊಲೀಸರೇ ದಂಗಾಗಿ ಹೋಗಿದ್ದಾರೆ. ಇನ್ನೂ ಆ ಕೂಡಲೇ ತನಿಖೆ ಆರಂಭಿಸಿದ ಪೊಲೀಸರು ಅಲ್ಲಿ ಸತ್ತವಳು ಮಹಾಲಕ್ಷ್ಮಿ ಅನ್ನೋದನ್ನ ತಿಳಿದುಕೊಂಡಿದ್ದಾರೆ. ಆಕೆಗೆ ಮದುವೆಯಾಗಿ ನಾಲಕ್ಕು ವರ್ಷದ ಮಗು ಕೂಡ ಇದೆ. ಆದ್ರೆ ವರ್ಷದಿಂದ ಗಂಡನಿಂದ ದೂರವಾಗಿ ಒಂಟಿ ಜೀವನ ನಡೆಸುತ್ತಿದ್ದಳು. ಬೆಂಗಳೂರಿನ ಪ್ರತಿಷ್ಠಿತ ಶಾಪಿಂಗ್ ಮಾಲ್‌ ಒಂದರಲ್ಲಿ ಕೆಲಸ ಮಾಡಿಕೊಂಡು ತನ್ನಪಾಡಿಗೆ ಜೀವನ ಮಾಡುತ್ತಿದ್ದಳು. ಆದರೆ, 20 ದಿನಗಳಿಂದ ಆಕೆ ಎಲ್ಲೂ ಕಾಣಿಸುತ್ತಿರಲಿಲ್ಲ. ಅವಳಿಗೆ ಕಾಲ್​ ಮಾಡಿದ್ರೆ ಫೋನ್​ ಸ್ವಿಚ್​​ ಆಫ್ ಆಗಿತ್ತು​. ಅನುಮಾನ ಬಂದು ಆಕೆಯ ಕುಟುಂಬದವರು ಒಂದೆರಡು ಬಾರಿ ಮನೆಯ ಬಳಿ ಬಂದು ಹೋಗಿದ್ದಾರೆ. ಆದರೆ, ಯಾವುದೇ ಪ್ರಯೋಜನ ಆಗಿರಲಿಲ್ಲ. ಆದರೆ, ಇವತ್ತು ಆಕೆ ಹೆಣವಾಗಿದ್ದಾಳೆ. ಆಕೆಯನ್ನ ಕೊಂದು ತುಂಡು ತುಂಡಾಗಿ ಕತ್ತರಿಸಿದ್ದಾರೆ. ಇನ್ನೂ ಆಕೆಯನ್ನ ಕೊಂದಿದ್ದು ಯಾರು ಅನ್ನೋದು ಮಾತ್ರ ಈ ಕ್ಷಣಕ್ಕೂ ನಿಗೂಢ.