ಬೆಂಗಳೂರಿನಲ್ಲಿ ಶ್ರದ್ಧಾ ವಾಕರ್‌ ಹಂತಕನಂತೆ ಮತ್ತೊಬ್ಬ ಕ್ರೂರಿ: ಫ್ರಿಡ್ಜ್‌ನಲ್ಲಿ 50 ಪೀಸ್ ಮಹಿಳೆಯ ಮಾಂಸ!

ಬೆಂಗಳೂರಿನಲ್ಲಿ ಶ್ರದ್ಧಾ ವಾಕರ್‌ ಹಂತಕನಂತೆ ಮತ್ತೊಬ್ಬ ಕ್ರೂರಿ: ಫ್ರಿಡ್ಜ್‌ನಲ್ಲಿ 50 ಪೀಸ್ ಮಹಿಳೆಯ ಮಾಂಸ!

Published : Sep 23, 2024, 06:56 PM IST

ಬೆಂಗಳೂರಿನಲ್ಲಿ ಮಹಿಳೆಯೊಬ್ಬಳನ್ನು ಕೊಲೆ ಮಾಡಿ ಫ್ರಿಡ್ಜ್‌ನಲ್ಲಿಟ್ಟು ಪರಾರಿಯಾಗಿರುವ ಘಟನೆ ನಡೆದಿದೆ. ಕೊಲೆಯಾದ ಮಹಿಳೆ ಯಾರು, ಆಕೆಯನ್ನು ಕೊಲೆ ಮಾಡಿದವರು ಯಾರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

ದೆಹಲಿಯ ಶ್ರದ್ಧಾ ವಾಕರ್​​ ಕೇಸ್​​ ನಿಮಗೆ ನೆನಪಿರಬಹುದು. ಪ್ರೀತಿಸಿದ ಹುಡುಗನೇ ಯುವತಿಯನ್ನ ಪೀಸ್​​ ಪೀಸ್​​ ಮಾಡಿ ಫ್ರಿಡ್ಜ್‌​ನಲ್ಲಿಟ್ಟು ನಂತರ ಒಂದೊಂದು ಭಾಗವನ್ನ ಒಂದೊಂದು ದಿಕ್ಕಿಗೆ ಎಸೆದಿದ್ದನು. ಆವತ್ತು ಆ ಕೇಸ್​ ಇಡೀ ದೇಶವನ್ನೇ ಶೇಕ್​ ಮಾಡಿತ್ತು. ಆದರೆ, ಇವತ್ತು ಇಂಥದ್ದೇ ಒಂದು ಪ್ರಕರಣ ನಮ್ಮದೇ ಬೆಂಗಳೂರಿನಲ್ಲಿ ನಡೆದು ಹೋಗಿದೆ. ಮಹಿಳೆಯೊಬ್ಬಳನ್ನ ತುಂಡು ತುಂಡಾಗಿ ಕತ್ತರಿಸಿ ಚೀಲದಲ್ಲಿ ತುಂಬಿ ಫ್ರಿಡ್ಜ್‌​​​ನಲ್ಲಿಟ್ಟಿದ್ದಾನೆ. ನಂತರ ಹಂತಕ ಯಾರಿಗೂ ಗೊತ್ತಾಗದ ಹಾಗೆ ಜಾಗ ಖಾಲಿ ಮಾಡಿದ್ದಾನೆ. ಅಷ್ಟಕ್ಕೂ ಅಲ್ಲಿ ಬರ್ಬರವಾಗಿ ಕೊಲೆಯಾದ ಆ ಮಹಿಳೆ ಯಾರು? ಹಂತಕ ಅಷ್ಟೊಂದು ಕ್ರೂರವಾಗಿ ಯಾಕಾಗಿ ಕೊಂದಿದ್ದಾನೆ... ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಮಹಿಳೆಯ ಬರ್ಬರ ಕೊಲೆಯ ಕಂಪ್ಲೀಟ್​​ ಡಿಟೇಲ್ಸ್​​​ ಇವತ್ತಿನ ಎಫ್​.ಐ.ಆರ್​​​.

ಫ್ರಿಡ್ಜ್‌ನಲ್ಲಿ ಸಿಕ್ಕ ಪೀಸ್​​ ಪೀಸ್​​ ಬಾಡಿಯನ್ನ ಕಂಡು ಪೊಲೀಸರೇ ದಂಗಾಗಿ ಹೋಗಿದ್ದಾರೆ. ಇನ್ನೂ ಆ ಕೂಡಲೇ ತನಿಖೆ ಆರಂಭಿಸಿದ ಪೊಲೀಸರು ಅಲ್ಲಿ ಸತ್ತವಳು ಮಹಾಲಕ್ಷ್ಮಿ ಅನ್ನೋದನ್ನ ತಿಳಿದುಕೊಂಡಿದ್ದಾರೆ. ಆಕೆಗೆ ಮದುವೆಯಾಗಿ ನಾಲಕ್ಕು ವರ್ಷದ ಮಗು ಕೂಡ ಇದೆ. ಆದ್ರೆ ವರ್ಷದಿಂದ ಗಂಡನಿಂದ ದೂರವಾಗಿ ಒಂಟಿ ಜೀವನ ನಡೆಸುತ್ತಿದ್ದಳು. ಬೆಂಗಳೂರಿನ ಪ್ರತಿಷ್ಠಿತ ಶಾಪಿಂಗ್ ಮಾಲ್‌ ಒಂದರಲ್ಲಿ ಕೆಲಸ ಮಾಡಿಕೊಂಡು ತನ್ನಪಾಡಿಗೆ ಜೀವನ ಮಾಡುತ್ತಿದ್ದಳು. ಆದರೆ, 20 ದಿನಗಳಿಂದ ಆಕೆ ಎಲ್ಲೂ ಕಾಣಿಸುತ್ತಿರಲಿಲ್ಲ. ಅವಳಿಗೆ ಕಾಲ್​ ಮಾಡಿದ್ರೆ ಫೋನ್​ ಸ್ವಿಚ್​​ ಆಫ್ ಆಗಿತ್ತು​. ಅನುಮಾನ ಬಂದು ಆಕೆಯ ಕುಟುಂಬದವರು ಒಂದೆರಡು ಬಾರಿ ಮನೆಯ ಬಳಿ ಬಂದು ಹೋಗಿದ್ದಾರೆ. ಆದರೆ, ಯಾವುದೇ ಪ್ರಯೋಜನ ಆಗಿರಲಿಲ್ಲ. ಆದರೆ, ಇವತ್ತು ಆಕೆ ಹೆಣವಾಗಿದ್ದಾಳೆ. ಆಕೆಯನ್ನ ಕೊಂದು ತುಂಡು ತುಂಡಾಗಿ ಕತ್ತರಿಸಿದ್ದಾರೆ. ಇನ್ನೂ ಆಕೆಯನ್ನ ಕೊಂದಿದ್ದು ಯಾರು ಅನ್ನೋದು ಮಾತ್ರ ಈ ಕ್ಷಣಕ್ಕೂ ನಿಗೂಢ.

22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ