Published : Sep 29, 2020, 09:31 AM ISTUpdated : Sep 29, 2020, 12:33 PM IST
ಕೊರೋನಾ ಕಾಲದಲ್ಲಿ ಅತಿ ಹೆಚ್ಚು ಮಂದಿ ಮರಳಿ ಬಾರದ ಲೋಕಕ್ಕೆ ಹೋಗಿದ್ದಕ್ಕೆ ಕಾರಣ ಹೃದಯಾಘಾತ | ಹೃದಯದ ತೊಂದರೆಯನ್ನು ನಿವಾರಿಸಿಕೊಳ್ಳಲು ಈಗಿನಿಂದಲೇ ಕಾರ್ಯಪ್ರವೃತ್ತರಾಗಬಹುದು | ಅದಕ್ಕೆಂದೇ 7 ವಿಧಾನಗಳಿವೆ. ಇವೆಲ್ಲವನ್ನೂ ಪಾಲಿಸಿ, ಹೃದಯವನ್ನು ಲಾಲಿಸಿ.
30 ನಿಮಿಷದಿಂದ 60 ನಿಮಿಷ ಎಕ್ಸರ್ಸೈಸ್: ದಿನಕ್ಕೆ 30 ನಿಮಿಷದಿಂದ 60 ನಿಮಿಷದ ಎಕ್ಸರ್ಸೈಸ್ ಮಾಡಿದರೆ ಹೃದಯಕ್ಕೆ ಒಳ್ಳೆಯದು. ಎಕ್ಸರ್ಸೈಸ್ ಮಾಡುವುದರಿಂದ ಅತಿಯಾದ ರಕ್ತದೊತ್ತಡ, ಅತಿ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಅವೆರಡೂ ನಿಯಂತ್ರಣದಲ್ಲಿದ್ದರೆ ಹೃದಯ ಆರೋಗ್ಯವಾಗಿರುತ್ತದೆ.
30 ನಿಮಿಷದಿಂದ 60 ನಿಮಿಷ ಎಕ್ಸರ್ಸೈಸ್: ದಿನಕ್ಕೆ 30 ನಿಮಿಷದಿಂದ 60 ನಿಮಿಷದ ಎಕ್ಸರ್ಸೈಸ್ ಮಾಡಿದರೆ ಹೃದಯಕ್ಕೆ ಒಳ್ಳೆಯದು. ಎಕ್ಸರ್ಸೈಸ್ ಮಾಡುವುದರಿಂದ ಅತಿಯಾದ ರಕ್ತದೊತ್ತಡ, ಅತಿ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಅವೆರಡೂ ನಿಯಂತ್ರಣದಲ್ಲಿದ್ದರೆ ಹೃದಯ ಆರೋಗ್ಯವಾಗಿರುತ್ತದೆ.
212
ಭಾರಿ ಎಕ್ಸರ್ಸೈಸ್ ಮಾಡಬೇಕು ಅಂತೇನಿಲ್ಲ. ಸ್ವಲ್ಪ ಹೊತ್ತು ವಾಕಿಂಗ್, ಮತ್ತೊಂದಷ್ಟುಸಮಯ ಲಭು ವ್ಯಾಯಾಮಗಳನ್ನು ಮಾಡಬಹುದು. ಎಕ್ಸರ್ಸೈಸ್ ಮಾಡುತ್ತಾ ಮಾಡುತ್ತಾ ಉಲ್ಲಾಸ, ಉತ್ಸಾಹ ಎರಡೂ ನಿಮ್ಮದಾಗುತ್ತದೆ.
ಭಾರಿ ಎಕ್ಸರ್ಸೈಸ್ ಮಾಡಬೇಕು ಅಂತೇನಿಲ್ಲ. ಸ್ವಲ್ಪ ಹೊತ್ತು ವಾಕಿಂಗ್, ಮತ್ತೊಂದಷ್ಟುಸಮಯ ಲಭು ವ್ಯಾಯಾಮಗಳನ್ನು ಮಾಡಬಹುದು. ಎಕ್ಸರ್ಸೈಸ್ ಮಾಡುತ್ತಾ ಮಾಡುತ್ತಾ ಉಲ್ಲಾಸ, ಉತ್ಸಾಹ ಎರಡೂ ನಿಮ್ಮದಾಗುತ್ತದೆ.
312
ಧೂಮಪಾನ ಮಾಡದಿರಿ: ಟೊಬ್ಯಾಕೋದಲ್ಲಿರುವ ಕೆಮಿಕಲ್ಗಳನ್ನು ಹೃದಯ ಇಷ್ಟಪಡುವುದಿಲ್ಲ. ಹಾಗಾಗಿಯೇ ಸ್ಮೋಕಿಂಗ್ ಒಳ್ಳೆಯದಲ್ಲ. ಧೂಮಪಾನ ಮಾಡುವುದರಿಂದ ರಕ್ತದೊತ್ತಡ ಕೂಡ ಹೆಚ್ಚುತ್ತದೆ ಅಂತ ಡಾಕ್ಟ್ರು ಹೇಳುವುದು ಕೇಳಿರಬಹುದು.
ಧೂಮಪಾನ ಮಾಡದಿರಿ: ಟೊಬ್ಯಾಕೋದಲ್ಲಿರುವ ಕೆಮಿಕಲ್ಗಳನ್ನು ಹೃದಯ ಇಷ್ಟಪಡುವುದಿಲ್ಲ. ಹಾಗಾಗಿಯೇ ಸ್ಮೋಕಿಂಗ್ ಒಳ್ಳೆಯದಲ್ಲ. ಧೂಮಪಾನ ಮಾಡುವುದರಿಂದ ರಕ್ತದೊತ್ತಡ ಕೂಡ ಹೆಚ್ಚುತ್ತದೆ ಅಂತ ಡಾಕ್ಟ್ರು ಹೇಳುವುದು ಕೇಳಿರಬಹುದು.
412
ಅದರಿಂದಾಗಿ ಹೃದಯಕ್ಕೆ ಹೆಚ್ಚು ಒತ್ತಡ ಉಂಟಾಗುತ್ತದೆ. ಯಾವಾಗ ಧೂಮಪಾನ ನಿಲ್ಲಿಸುತ್ತೀರೋ ಆವಾಗ ಒತ್ತಡವೂ ನಿಲ್ಲುತ್ತದೆ.
ಅದರಿಂದಾಗಿ ಹೃದಯಕ್ಕೆ ಹೆಚ್ಚು ಒತ್ತಡ ಉಂಟಾಗುತ್ತದೆ. ಯಾವಾಗ ಧೂಮಪಾನ ನಿಲ್ಲಿಸುತ್ತೀರೋ ಆವಾಗ ಒತ್ತಡವೂ ನಿಲ್ಲುತ್ತದೆ.
512
ಹೆಲ್ದೀ ಡಯಟ್ ಮರೆಯದಿರಿ: ಉತ್ತಮವಾದ ಆಹಾರ ಸೇವಿಸುವುದು ಕೂಡ ಮುಖ್ಯ. ಊಟದಲ್ಲಿ ಹೇರಳವಾದ ಹಣ್ಣು, ತರಕಾರಿಗಳು ಸೇರಿರಬೇಕು. ಎಣ್ಣೆ ಪದಾರ್ಥಗಳನ್ನು ವರ್ಜಿಸಬೇಕು. ಆಲಿವ್ ಆಯಿಲ್ ಆಯಿಲ್ ಬಳಸಿದರೆ ಉತ್ತಮ.
ಹೆಲ್ದೀ ಡಯಟ್ ಮರೆಯದಿರಿ: ಉತ್ತಮವಾದ ಆಹಾರ ಸೇವಿಸುವುದು ಕೂಡ ಮುಖ್ಯ. ಊಟದಲ್ಲಿ ಹೇರಳವಾದ ಹಣ್ಣು, ತರಕಾರಿಗಳು ಸೇರಿರಬೇಕು. ಎಣ್ಣೆ ಪದಾರ್ಥಗಳನ್ನು ವರ್ಜಿಸಬೇಕು. ಆಲಿವ್ ಆಯಿಲ್ ಆಯಿಲ್ ಬಳಸಿದರೆ ಉತ್ತಮ.
612
ಸೊಪ್ಪು, ಧಾನ್ಯ ಜಾಸ್ತಿಯೇ ಸೇವಿಸಿ. ಉಪ್ಪು, ಸಕ್ಕರೆ ಪದಾರ್ಥಗಳನ್ನು ಕಡಿಮೆ ತೆಗೆದುಕೊಳ್ಳಿ. ಆಲ್ಕೋಹಾಲ್ನಿಂದ ಅಂತರ ಕಾಪಾಡಿಕೊಳ್ಳುವುದು ಉತ್ತಮ. ಅತಿಯಾದ ಫಾಸ್ಟ್ಫುಡ್ ಬಳಕೆ ಬೇಡ.
ಸೊಪ್ಪು, ಧಾನ್ಯ ಜಾಸ್ತಿಯೇ ಸೇವಿಸಿ. ಉಪ್ಪು, ಸಕ್ಕರೆ ಪದಾರ್ಥಗಳನ್ನು ಕಡಿಮೆ ತೆಗೆದುಕೊಳ್ಳಿ. ಆಲ್ಕೋಹಾಲ್ನಿಂದ ಅಂತರ ಕಾಪಾಡಿಕೊಳ್ಳುವುದು ಉತ್ತಮ. ಅತಿಯಾದ ಫಾಸ್ಟ್ಫುಡ್ ಬಳಕೆ ಬೇಡ.
712
ತೂಕ ಹೆಚ್ಚಾಗದಿರಲಿ : ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು ಕೂಡ ಮುಖ್ಯವಾದದ್ದು. ಎಷ್ಟುತೂಕ ಇದ್ದರೆ ಪರವಾಗಿಲ್ಲ ಎಂದು ತೂಕದ ಮಂದಿ ಕೇಳಬಹುದು. ಅದಕ್ಕೊಂದು ವಿಧಾನ ಇದೆ. ಪುರುಷರಾದರೆ ಸೊಂಟದ ಸುತ್ತಳತೆ 40 ಇಂಚಿಗಿಂತ ಜಾಸ್ತಿ ಹೋಗಬಾರದು. ಮಹಿಳೆಯರಿಗೆ 35 ಇಂಚಿಗಿಂತ ಜಾಸ್ತಿಯಾಗದಂತೆ ನೋಡಿಕೊಳ್ಳಬೇಕು.
ತೂಕ ಹೆಚ್ಚಾಗದಿರಲಿ : ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು ಕೂಡ ಮುಖ್ಯವಾದದ್ದು. ಎಷ್ಟುತೂಕ ಇದ್ದರೆ ಪರವಾಗಿಲ್ಲ ಎಂದು ತೂಕದ ಮಂದಿ ಕೇಳಬಹುದು. ಅದಕ್ಕೊಂದು ವಿಧಾನ ಇದೆ. ಪುರುಷರಾದರೆ ಸೊಂಟದ ಸುತ್ತಳತೆ 40 ಇಂಚಿಗಿಂತ ಜಾಸ್ತಿ ಹೋಗಬಾರದು. ಮಹಿಳೆಯರಿಗೆ 35 ಇಂಚಿಗಿಂತ ಜಾಸ್ತಿಯಾಗದಂತೆ ನೋಡಿಕೊಳ್ಳಬೇಕು.
812
ಸಣ್ಣಗಿದ್ದರೆ ಆರೋಗ್ಯ ಭಾಗ್ಯ ಸಿಗುವುದರಿಂದ ಅಗತ್ಯಕ್ಕಿಂತ ಹೆಚ್ಚು ತೂಕ ಹೊಂದದಿರುವುದೇ ಒಳ್ಳೆಯದು. ಹಾಗಾಗಿ ನಿಮ್ಮ ಗಮನ ನಿಮ್ಮ ತೂಕದ ಮೇಲೂ ಇರಲಿ.
ಸಣ್ಣಗಿದ್ದರೆ ಆರೋಗ್ಯ ಭಾಗ್ಯ ಸಿಗುವುದರಿಂದ ಅಗತ್ಯಕ್ಕಿಂತ ಹೆಚ್ಚು ತೂಕ ಹೊಂದದಿರುವುದೇ ಒಳ್ಳೆಯದು. ಹಾಗಾಗಿ ನಿಮ್ಮ ಗಮನ ನಿಮ್ಮ ತೂಕದ ಮೇಲೂ ಇರಲಿ.
912
ಒಳ್ಳೆಯ ನಿದ್ದೆ ಜೀವಕೆ ಸಂತೋಷ: ಒಳ್ಳೆಯ ನಿದ್ದೆ ಕೂಡ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಬಲ್ಲದು. ನಿದ್ದೆ ಕಡಿಮೆಯಾಗಿ ದಿನವಿಡೀ ಆಕಳಿಸುತ್ತಿದ್ದರೆ ಜೀವಕ್ಕೆ ನೆಮ್ಮದಿ ಇರುವುದಿಲ್ಲ. ನಿದ್ದೆ ಕಡಿಮೆಯಾದಷ್ಟುಆತಂಕಗಳು ಹೆಚ್ಚಾಗುತ್ತಾ ಹೋಗುತ್ತವೆ.
ಒಳ್ಳೆಯ ನಿದ್ದೆ ಜೀವಕೆ ಸಂತೋಷ: ಒಳ್ಳೆಯ ನಿದ್ದೆ ಕೂಡ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಬಲ್ಲದು. ನಿದ್ದೆ ಕಡಿಮೆಯಾಗಿ ದಿನವಿಡೀ ಆಕಳಿಸುತ್ತಿದ್ದರೆ ಜೀವಕ್ಕೆ ನೆಮ್ಮದಿ ಇರುವುದಿಲ್ಲ. ನಿದ್ದೆ ಕಡಿಮೆಯಾದಷ್ಟುಆತಂಕಗಳು ಹೆಚ್ಚಾಗುತ್ತಾ ಹೋಗುತ್ತವೆ.
1012
ಒಂದೇ ಸಮಯಕ್ಕೆ ನಿದ್ದೆಗೆ ಜಾರಿ, ಒಂದೇ ಟೈಮಲ್ಲಿ ನಿದ್ದೆಯಿಂದ ಏಳುವುದು ಕೂಡ ಮುಖ್ಯವಾದದ್ದು. ನಿದ್ದೆ ಮಾಡುವ ಜಾಗವನ್ನು ಕತ್ತಲಾಗಿರುವಂತೆ ನೋಡಿಕೊಳ್ಳು. ನಿಮ್ಮ ಕಣ್ಣು ಮತ್ತು ಜೀವ ತಂಪಾಗಲಿ.
ಒಂದೇ ಸಮಯಕ್ಕೆ ನಿದ್ದೆಗೆ ಜಾರಿ, ಒಂದೇ ಟೈಮಲ್ಲಿ ನಿದ್ದೆಯಿಂದ ಏಳುವುದು ಕೂಡ ಮುಖ್ಯವಾದದ್ದು. ನಿದ್ದೆ ಮಾಡುವ ಜಾಗವನ್ನು ಕತ್ತಲಾಗಿರುವಂತೆ ನೋಡಿಕೊಳ್ಳು. ನಿಮ್ಮ ಕಣ್ಣು ಮತ್ತು ಜೀವ ತಂಪಾಗಲಿ.
1112
ಸ್ಟ್ರೆಸ್ ಇರದಿರಲಿ ಈ ಬಾಳಲಿ: ಸ್ಟ್ರೆಸ್ಗೆ ನಾನಾ ಕಾರಣಗಳು. ಕೆಲಸದಿಂದ ಹಿಡಿದು ಅವರವರ ಹವ್ಯಾಸಗಳವರೆಗೆ. ಆದರೆ ಲೈಫು ತುಂಬಾ ಶಾರ್ಟು. ಇರುವಷ್ಟುದಿನ ಏನೇ ಇದ್ದರೂ ಆರಾಮಾಗಿ ಎದುರಿಸುವ ಧೈರ್ಯ, ಛಲ ಇರಬೇಕು.
ಸ್ಟ್ರೆಸ್ ಇರದಿರಲಿ ಈ ಬಾಳಲಿ: ಸ್ಟ್ರೆಸ್ಗೆ ನಾನಾ ಕಾರಣಗಳು. ಕೆಲಸದಿಂದ ಹಿಡಿದು ಅವರವರ ಹವ್ಯಾಸಗಳವರೆಗೆ. ಆದರೆ ಲೈಫು ತುಂಬಾ ಶಾರ್ಟು. ಇರುವಷ್ಟುದಿನ ಏನೇ ಇದ್ದರೂ ಆರಾಮಾಗಿ ಎದುರಿಸುವ ಧೈರ್ಯ, ಛಲ ಇರಬೇಕು.
1212
ಹಾಗಿದ್ದಾಗ ಸ್ಟ್ರೆಸ್ ಇರುವುದಿಲ್ಲ. ಕೂಲಾಗಿ ಎಲ್ಲವನ್ನು ನಿಭಾಯಿಸುವ ಕಲೆ ಕಲಿತವರಿಗೆ ಒತ್ತಡ ಇರುವುದಿಲ್ಲ. ಆ ಕಲೆ ಕಲಿಯುವುದೇ ಸವಾಲು. ಆ ಸವಾಲು ಗೆದ್ದವರು ಸುಖವಾಗಿ ನೂರ್ಕಾಲ ಬಾಳುತ್ತಾರೆ.
ಹಾಗಿದ್ದಾಗ ಸ್ಟ್ರೆಸ್ ಇರುವುದಿಲ್ಲ. ಕೂಲಾಗಿ ಎಲ್ಲವನ್ನು ನಿಭಾಯಿಸುವ ಕಲೆ ಕಲಿತವರಿಗೆ ಒತ್ತಡ ಇರುವುದಿಲ್ಲ. ಆ ಕಲೆ ಕಲಿಯುವುದೇ ಸವಾಲು. ಆ ಸವಾಲು ಗೆದ್ದವರು ಸುಖವಾಗಿ ನೂರ್ಕಾಲ ಬಾಳುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.