Asianet Suvarna News Asianet Suvarna News

ಸಚಿವ ಈಶ್ವರಪ್ಪ ಅವರಿಂದ ನಾವು ಅನಾಥರಾಗಿ ಬಿಟ್ವಿ, ಅವರ ಬಂಧನ ಆಗ್ಲೇಬೇಕು: ಸಂತೋಷ್ ಪತ್ನಿ

ಸಚಿವ ಈಶ್ವರಪ್ಪ (Eshwarappa) ಅವರಿಂದ ಅನಾಥರಾದೆವು. ಅಪ್ಪಾ ಎಲ್ಲಿ ಎಂದು ಮಕ್ಕಳು ಕೇಳಿದರೆ ಏನೆಂದು ಉತ್ತರಿಸಲಿ..? ಎಂದು ಸಂತೋಷ್ ಪತ್ನಿ ಜಯಶ್ರೀ ಕಣ್ಣೀರು ಹಾಕಿದ್ದಾರೆ. 

First Published Apr 13, 2022, 4:13 PM IST | Last Updated Apr 13, 2022, 4:13 PM IST

 ಬೆಳಗಾವಿ (ಏ. 13): ಸಚಿವ ಈಶ್ವರಪ್ಪ ಅವರಿಂದ ಅನಾಥರಾದೆವು. ಅಪ್ಪಾ ಎಲ್ಲಿ ಎಂದು ಮಕ್ಕಳು ಕೇಳಿದರೆ ಏನೆಂದು ಉತ್ತರಿಸಲಿ..? 4 ಕೋಟಿ ಕೆಲಸ ಮಾಡಿದೀನಿ, 40 % ಕಮಿಷನ್ ಕೇಳ್ತಿದ್ದಾರೆ. ಅದನ್ನ ಕೊಟ್ರೆ ನಾನೆಲ್ಲಿಗೆ ಹೋಗಲಿ..? ಮನೆ ಮಾರಿದರೂ ನನ್ನ ಸಾಲ ತೀರಲ್ಲ ಅಂತಾ ಇದ್ರು. ಈಶ್ವರಪ್ಪ ಅವರನ್ನು ಬಂಧಿಸಲೇಬೇಕು ಎಂದು ಸಂತೋಷ್ ಪತ್ನಿ ಜಯಶ್ರೀ ಕಣ್ಣೀರು ಹಾಕಿದ್ದಾರೆ. 

ಈಶ್ವರಪ್ಪ ರಾಜೀನಾಮೆಯಷ್ಟೆನಾ? ಅರೆಸ್ಟ್ ಆಗ್ತಾರಾ.? ಸಾಧ್ಯತೆಗಳ ಬಗ್ಗೆ ವಕೀಲರ ಮಾತು

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ (Santosh Suicide Case) ಈಶ್ವರಪ್ಪ (KS Eshwarappa)ರಾಜೀನಾಮೆ (Resignation) ನೀಡಬೇಕೆಂಬ ಒತ್ತಡ ಹೆಚ್ಚಾಗಿದೆ. ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿವೆ. ರಾಜ್ಯಪಾಲರನ್ನು ಭೇಟಿ ಮಾಡಿ ಮನವಿಯನ್ನೂ ಸಲ್ಲಿಸಿವೆ. ಉಡುಪಿ (Udupi) ನಗರ ಪೊಲೀಸ್‌ ಠಾಣೆಯಲ್ಲಿ (Police Station) ಈಶ್ವರಪ್ಪ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ಕೊಠಡಿಯಲ್ಲಿ ಪಂಚನಾಮೆ ನಡೆಸಿ, ಮಹತ್ವದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.