Asianet Suvarna News Asianet Suvarna News

15 ಗಂಟೆಗಳಿಂದ ಮಾಜಿ ಸಚಿವ ನಾಗೇಂದ್ರ ನಿವಾಸದಲ್ಲಿ ಇಡಿ ತಂಡ, ಶುರುವಾಯ್ತು ಬಂಧನ ಭೀತಿ!

ವಾಲ್ಮೀಕಿ ನಿಗಮದ ಅಕ್ರಮ, ಸಿದ್ದರಾಮಯ್ಯ ಸರ್ಕಾರದ ಮಾಜಿ ಸಚಿವರಿಗೆ ಅರೆಸ್ಟ್ ಟೆನ್ಶನ್, ಇಡಿ ಅಧಿಕಾರಿಗಳಿಂದ ದಾಳಿ, ಸಿದ್ದರಾಮಯ್ಯ ಸರ್ಕಾರಕ್ಕೆ ಶುರುವಾಯ್ತು ಬಂಧನ ಭೀತಿ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

First Published Jul 10, 2024, 11:16 PM IST | Last Updated Jul 10, 2024, 11:16 PM IST

ಕರ್ನಾಟಕದಲ್ಲಿ ನಡೆದಿರುವ ವಾಲ್ಮೀಕಿ ನಿಗಮದ ಹಗರಣ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ತಲೆನೋವು ತಂದಿದೆ. ಇಂದು ಪ್ರಕರಣ ಸಂಬಂಧ ದಿಢೀರ್ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬರೋಬ್ಬರಿ 19 ಕಡೆ ದಾಳಿ ನಡೆದಿದೆ. ಈ ಪೈಕಿ ಮಾಜಿ ಸಚಿವ ನಾಗೇಂದ್ರ ಮನೆಯಲ್ಲಿ ಇಡಿ ಅಧಿಕಾರಿಗಳ ತಂಡ ಶೋಧ ಕಾರ್ಯ ನಡೆಸುತ್ತಿದೆ. 15 ಗಂಟೆಗಳಿಂದ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಮಾಜಿ ಸಚಿವ ನಾಗೇಂದ್ರಗೆ ಬಂಧನ ಭೀತಿ ಶುರುವಾಗಿದೆ. ಆದರೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಹಗರಣದಲ್ಲಿ ಮಾಜಿ ಸಚಿವರ ಪಾತ್ರವಿಲ್ಲ, ಅಧಿಕಾರಿಗಳು ದುಡ್ಡು ತಿಂದಿದ್ದಾರೆ ಎಂದಿದ್ದಾರೆ. 
 

Video Top Stories