ಈಶ್ವರಪ್ಪ ಬಂಧನ ಆಗುವವರೆಗೂ ಮೃತದೇಹ ತೆಗೆಯಲ್ಲ: ಸಂತೋಷ್ ಪಾಟೀಲ್ ಸಹೋದರರು
ಈಶ್ವರಪ್ಪ (Eshwrappa) ಬಂಧನ ಆಗುವವರೆಗೂ ಮೃತದೇಹ ತೆಗೆಯುವುದಿಲ್ಲ ಎಂದು ಉಡುಪಿಯಲ್ಲಿ (Udupi)ಸಂತೋಷ್ ಸಹೋದರ, ಪ್ರಶಾಂತ್ ಹೇಳಿದ್ದಾರೆ. ನನ್ನ ತಮ್ಮ ಹೇಳಿರುವುದೆಲ್ಲಾ ಸತ್ಯ. ಆರೋಪಗಳ ಬಂಧನ ಆಗಬೇಕು. ಅಲ್ಲಿಯವರೆಗೆ ನಾವು ದೇಹ ತೆಗೆಯುವುದಿಲ್ಲ ಎಂದಿದ್ದಾರೆ.
ಬೆಂಗಳೂರು (ಏ. 13): ಈಶ್ವರಪ್ಪ (Eshwrappa) ಬಂಧನ ಆಗುವವರೆಗೂ ಮೃತದೇಹ ತೆಗೆಯುವುದಿಲ್ಲ ಎಂದು ಉಡುಪಿಯಲ್ಲಿ (Udupi)ಸಂತೋಷ್ ಸಹೋದರ, ಪ್ರಶಾಂತ್ ಹೇಳಿದ್ದಾರೆ. ನನ್ನ ತಮ್ಮ ಹೇಳಿರುವುದೆಲ್ಲಾ ಸತ್ಯ. ಆರೋಪಗಳ ಬಂಧನ ಆಗಬೇಕು. ಅಲ್ಲಿಯವರೆಗೆ ನಾವು ದೇಹ ತೆಗೆಯುವುದಿಲ್ಲ ಎಂದಿದ್ದಾರೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ (Santosh Suicide Case) ಈಶ್ವರಪ್ಪ (KS Eshwarappa)ರಾಜೀನಾಮೆ (Resignation) ನೀಡಬೇಕೆಂಬ ಒತ್ತಡ ಹೆಚ್ಚಾಗಿದೆ. ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿವೆ. ರಾಜ್ಯಪಾಲರನ್ನು ಭೇಟಿ ಮಾಡಿ ಮನವಿಯನ್ನೂ ಸಲ್ಲಿಸಿವೆ. ಉಡುಪಿ (Udupi) ನಗರ ಪೊಲೀಸ್ ಠಾಣೆಯಲ್ಲಿ (Police Station) ಈಶ್ವರಪ್ಪ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದೀಗ ಪತ್ರಿಕಾಗೋಷ್ಠ ನಡೆಸಿರುವ ಈಶ್ವರಪ್ಪ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಯೂ ಟರ್ನ್ ಹೊಡೆದಿದ್ದಾರೆ.