ಬಿಜೆಪಿ ಮುಖಂಡರ ಒತ್ತಡ, ಬಾರ್ ತೆರೆಯಲು ಮುಂದಾದ ಅಧಿಕಾರಿಗಳು, ಸಾರ್ವಜನಿಕರಿಂದ ಭಾರೀ ವಿರೋಧ
ಟಿ ದಾಸರಹಳ್ಳಿ ಸಮೀಪದ ಗಜಾನನ ನಗರದಲ್ಲಿ ಬಾರ್ ತೆರೆಯಲು ಸಾರ್ವಜನಿಕರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮುಖಂಡರೊಬ್ಬರ ಒತ್ತಾಯಕ್ಕೆ ಮಣಿದು, ಅಬಕಾರಿ ಅಧಿಕಾರಿಗಳು ಬಾರ್ ತೆರೆಯಲು ಅನುಮತಿ ನೀಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು (ಅ. 15): ಟಿ ದಾಸರಹಳ್ಳಿ ಸಮೀಪದ ಗಜಾನನ ನಗರದಲ್ಲಿ ಬಾರ್ ತೆರೆಯಲು ಸಾರ್ವಜನಿಕರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮುಖಂಡರೊಬ್ಬರ ಒತ್ತಾಯಕ್ಕೆ ಮಣಿದು, ಅಬಕಾರಿ ಅಧಿಕಾರಿಗಳು ಬಾರ್ ತೆರೆಯಲು ಅನುಮತಿ ನೀಡಿದ್ದಾರೆ ಎನ್ನಲಾಗಿದೆ. ಬಾರ್ ತೆರೆಯುವ ಸುತ್ತಮುತ್ತ ಜನ ವಸತಿ ಪ್ರದೇಶಗಳಿವೆ. ಶಾಲೆ, ದೇವಾಲಯಗಳಿವೆ. ಹೀಗಾಗಿ ನಾವು ಅವಕಾಶ ಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.