ಮೂರ್ನಾಲ್ಕು ಆಸ್ಪತ್ರೆ ಸುತ್ತಿದರೂ ವೃದ್ಧೆಗೆ ಸಿಗಲಿಲ್ಲ ಚಿಕಿತ್ಸೆ; ಆಸ್ಪತ್ರೆಗಳ ವಿರುದ್ಧ ಆಕ್ರೋಶ
ನಗರದಲ್ಲಿ ಆಸ್ಪತ್ರೆಗಳ ದಿವ್ಯ ನಿರ್ಲಕ್ಷ್ಯ ಮಿತಿ ಮೀರುತ್ತಿದೆ. ಮೂರ್ನಾಲ್ಕು ಆಸ್ಪತ್ರೆ ಸುತ್ತಿದರೂ ವೃದ್ಧೆಗೆ ಚಿಕಿತ್ಸೆ ಸಿಗದೇ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ.
ಬೆಂಗಳೂರು (ಜು. 21): ನಗರದಲ್ಲಿ ಆಸ್ಪತ್ರೆಗಳ ದಿವ್ಯ ನಿರ್ಲಕ್ಷ್ಯ ಮಿತಿ ಮೀರುತ್ತಿದೆ. ಮೂರ್ನಾಲ್ಕು ಆಸ್ಪತ್ರೆ ಸುತ್ತಿದರೂ ವೃದ್ಧೆಗೆ ಚಿಕಿತ್ಸೆ ಸಿಗದೇ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ.
ನಮ್ಮಮ್ಮನಿಗೆ ಕೊರೊನಾ ಇಲ್ಲ, ದಯವಿಟ್ಟು ಚಿಕಿತ್ಸೆ ಕೊಡಿ ಎಂದು ಮಗ ಗೋಗರೆದರೂ ಬೆಡ್ ಇಲ್ಲ ಎಂಬ ನೆಪವೊಡ್ಡಿ ಚಿಕಿತ್ಸೆ ನೀಡಲು ನಿರಾಕರಿಸಿವೆ. ಇದರಿಂದ ಮನನೊಂದ ಪುತ್ರ, ಆಸ್ಪತ್ರೆಗಳ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ. ನನ್ನ ಅಮ್ಮನಿಗೆ ಬಂದಿರುವ ಸ್ಥಿತಿ ಯಾರಿಗೂ ಬರಬಾರದು ಎಂದು ಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ.
ಅಂದುಕೊಂಡಿದ್ದೇ ಒಂದು, ಆದದ್ದೇ ಇನ್ನೊಂದು; ಇದು ಕೋವಿಡ್ ಸೋಂಕಿತರ ಲೆಕ್ಕಾಚಾರ