Asianet Suvarna News Asianet Suvarna News

ಕೊರೊನಾ ಅಬ್ಬರದ ನಡುವೆ ಪಂಚಾಯತ್ ಚುನಾವಣೆ ಬೇಕಿತ್ತಾ.?

ಕೊರೊನಾ 2 ನೇ ಅಲೆ ಅಬ್ಬರಕ್ಕೆ ರಾಜ್ಯ ತತ್ತರಿಸುತ್ತಿದೆ, ಇನ್ನೊಂದು ಕಡೆ ಪಂಚಾಯತ್ ಚುನಾವಣೆ ಬಂದಿದೆ. ಚುನಾವಣೆ ಮುಂದೂಡಿ ಎಂದು ಪ್ರತಿಪಕ್ಷಗಳು ಮನವಿ ಮಾಡಿದರೂ, ಚುನಾವಣಾ ಆಯೋಗ  ಮುಂದೂಡಲು ಮೀನಾಮೇಷ ಎಣಿಸುತ್ತಿದೆ.

ಬೆಂಗಳೂರು (ಏ. 20): ಕೊರೊನಾ 2 ನೇ ಅಲೆ ಅಬ್ಬರಕ್ಕೆ ರಾಜ್ಯ ತತ್ತರಿಸುತ್ತಿದೆ, ಇನ್ನೊಂದು ಕಡೆ ಪಂಚಾಯತ್ ಚುನಾವಣೆ ಬಂದಿದೆ. ಚುನಾವಣೆ ಮುಂದೂಡಿ ಎಂದು ಪ್ರತಿಪಕ್ಷಗಳು ಮನವಿ ಮಾಡಿದರೂ, ಚುನಾವಣಾ ಆಯೋಗ ಮುಂದೂಡಲು ಮೀನಾಮೇಷ ಎಣಿಸುತ್ತಿದೆ. ವೇಳಾಪಟ್ಟಿಯಂತೆ ಚುನಾವಣೆ ನಡೆಸುತ್ತೇವೆ ಎಂದು ಹಠಕ್ಕೆ ಮುಂದಾಗಿದೆ. ಪಂಚಾಯತ್ ಚುನಾವಣೆಗಳನ್ನು ಮುಂದೂಡಿ, ಆಡಳಿತಾಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ತಿಳಿಸಿದ್ದಾರೆ.