Mekedatu Padayatre : ಕಾಂಗ್ರೆಸ್ ವಿರುದ್ಧ ಅಸ್ತ್ರ ಪ್ರಯೋಗಕ್ಕೆ ಮುಂದಾದ ಬಿಜೆಪಿ
ಕೋವಿಡ್ ನಿರ್ಬಂಧದ ನಡುವೆಯೂ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ನಡೆಸುತ್ತಿದೆ. ಈ ಪಾದಯಾತ್ರೆ ವಿರುದ್ಧ ಇದೀಗ ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದ್ದು ಕಾಂಗ್ರೆಸ್ ವಿರುದ್ಧ ಗಟ್ಟಿ ರಣತಂತ್ರ ರೂಪಿಸುವುದಕ್ಕೆ ಗಂಭೀರ ಚರ್ಚೆ ನಡೆಸಲಾಗುತ್ತಿದೆ.
ಬೆಂಗಳೂರು (ಜ.06): ಕೋವಿಡ್ (Covid 19) ನಿರ್ಬಂಧದ ನಡುವೆಯೂ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ನಡೆಸುತ್ತಿದೆ. ಈ ಪಾದಯಾತ್ರೆ ವಿರುದ್ಧ ಇದೀಗ ಬಿಜೆಪಿ (BJP) ಮಾಸ್ಟರ್ ಪ್ಲಾನ್ ಮಾಡಿದ್ದು ಕಾಂಗ್ರೆಸ್ (Congress) ವಿರುದ್ಧ ಗಟ್ಟಿ ರಣತಂತ್ರ ರೂಪಿಸುವುದಕ್ಕೆ ಗಂಭೀರ ಚರ್ಚೆ ನಡೆಸಲಾಗುತ್ತಿದೆ. ಕೈ ವಿರುದ್ಧ ಒಂದೊಂದೇ ಪ್ರತ್ಯಾಸ್ತ್ರ ರೂಪಿಸುವುದಕ್ಕೆ ಸಿದ್ಧತೆ ನಡೆಸಿದ್ದು, ಮೇಕೆದಾಟು (Mekedatu) ಯೋಜನೆಯ ಆಡಳಿತಾತ್ಮಕ ಕ್ರಮಗಳ ಬಗ್ಗೆ ಬಿಜೆಪಿ ಪ್ರಚಾರ ಮಾಡಲಿದೆ.
Mekedatu Yojana : ಕಾಂಗ್ರೆಸ್ ಪಾದಯಾತ್ರೆಗೆ ಪೂರ್ವಭಾವಿ ಸಭೆ
ಬೊಮ್ಮಾಯಿ (BasavarajBommai) ನೀರಾವರಿ ಸಚಿವರಾಗಿದ್ದಾಗ ಮಾಡಿದ್ದ ಕಾರ್ಯಕ್ರಮ ಬಿಜೆಪಿ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ಹಂಚಲಾಗುತ್ತದೆ. ಅಣೆಕಟ್ಟು ಕಟ್ಟಲು ಮಾಡಿದ್ದ ಪ್ಲಾನ್ ಬಗ್ಗೆಯೂ ತಿಳಿಸಲಾಗುತ್ತದೆ. ಕಪಾಲಿ ಬೆಟ್ಟದ ಅಸ್ತ್ರವನ್ನು ಕಾಂಗ್ರೆಸ್ ವಿರುದ್ಧ ಪ್ರಯೋಹಿಸಲು ಮುಂದಾಗಿದೆ.