Asianet Suvarna News Asianet Suvarna News

ಶಿವಮೊಗ್ಗಕ್ಕೆ ಕೋಮುವಾದದ ಬೆಂಕಿ ಹಚ್ಚಿದ್ದು ಈಶ್ವರಪ್ಪ: ಡಿ ಕೆ ಶಿವಕುಮಾರ್‌

ಸಚಿವ ಈಶ್ವರಪ್ಪ (KS Eshwarappa) ರಾಜೀನಾಮೆಗೆ ಆಗ್ರಹಿಸಿ, ಸಿಎಂ ನಿವಾಸಕ್ಕೆ ಕಾಂಗ್ರೆಸ್ (Congress) ಘೇರಾವ್ ಹಾಕಿದೆ.

First Published Apr 14, 2022, 4:05 PM IST | Last Updated Apr 14, 2022, 4:05 PM IST

ಬೆಂಗಳೂರು (ಏ. 14): ಸಚಿವ ಈಶ್ವರಪ್ಪ (KS Eshwarappa) ರಾಜೀನಾಮೆಗೆ ಆಗ್ರಹಿಸಿ, ಸಿಎಂ ನಿವಾಸಕ್ಕೆ ಕಾಂಗ್ರೆಸ್ (Congress) ಘೇರಾವ್ ಹಾಕಿದೆ. ಇಷ್ಟೊತ್ತಿಗೆ ಮುಖ್ಯಮಂತ್ರಿಯವರು, ಬಂಧಿಸುವಂತೆ ಹೇಳಬೇಕಿತ್ತು ಆದರೆ ಅವರು ಮೌನ ವಹಿಸಿರುವುದು ನೋಡಿದರೆ ಅವರು ಭಾಗಿಯಾದಂತೆ ಕಾಣಿಸುತ್ತದೆ. ಈಶ್ವರಪ್ಪ ವಿರುದ್ದ ಭ್ರಷ್ಟಾಚಾರದಡಿ ಕೇಸ್ ದಾಖಲಿಸಿ. ಸರ್ಕಾರ ಈಶ್ವರಪ್ಪರನ್ನು ರಕ್ಷಿಸುತ್ತಿದ್ರೆ, ಅಕ್ರಮದಲ್ಲಿ ಅವರಿಗೂ ಪಾಲಿದೆ. ಈಶ್ವರಪ್ಪ ಬಿಜೆಪಿಯ ಮುತ್ತು ರತ್ನ ಆಗಿದ್ದರೆ ಈ ರತ್ನ ನಿಮ್ಮಲ್ಲಿಯೇ ಇರಲಿ. ಶಿವಮೊಗ್ಗದಲ್ಲಿ ಕೋಮುವಾದದ ಕಿಚ್ಚು ಹಚ್ಚಿದವರು ಅವರು' ಎಂದು ಡಿಕೆ ಶಿವಕುಮಮಾರ್ (DK Shivakumar) ವಾಗ್ದಾಳಿ ನಡೆಸಿದರು.