Asianet Suvarna News Asianet Suvarna News

ಲಾಕ್‌ಡೌನ್: ಸೀಜ್ ಆಗಿದ್ದ ವಾಹನಗಳನ್ನು ವಾಪಾಸ್ ನೀಡಲು ಮುಂದಾದ ಪೊಲೀಸರು

ಮೊದಲ ಹಂತದ ಲಾಕ್‌ಡೌನ್ ವೇಳೆ ವಶಪಡಿಸಿಕೊಳ್ಳಲಾಗಿದ್ದ ವಾಹನಗಳ ಪೈಕಿ ಆರ್‌ಸಿ, ಡಿಎಲ್ ಹಾಗೂ ವಾಹನವಿಮೆ ಇದ್ದರೆ ಮಾತ್ರ ಮಾಲೀಕರಿಗೆ ವಾಹನ ನೀಡಲಾಗುವುದು ಎಂದು ಬೆಂಗಳೂರು ಕಮಿಷನರ್ ಬಾಸ್ಕರ್ ರಾವ್ ಹೇಳಿಕೆಯನ್ನು ನೀಡಿದ್ದಾರೆ.

ಬೆಂಗಳೂರು(ಏ.30): ಲಾಕ್‌ಡೌನ್ ವೇಳೆ ಸೀಜ್ ಮಾಡಲಾಗಿದ್ದ ವಾಹನಗಳನ್ನು ಮೇ.01ರಂದು ಹಸ್ತಾಂತರಿಸಲು ಪೊಲೀಸರು ತೀರ್ಮಾನಿಸಿದ್ದಾರೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಸೂಚನೆಯ ಮೇರೆಗೆ ಈ ಕ್ರಮ ಕೊಂಡಿದ್ದಾರೆ ಪೊಲೀಸರು.

ಮೊದಲ ಹಂತದ ಲಾಕ್‌ಡೌನ್ ವೇಳೆ ವಶಪಡಿಸಿಕೊಳ್ಳಲಾಗಿದ್ದ ವಾಹನಗಳ ಪೈಕಿ ಆರ್‌ಸಿ, ಡಿಎಲ್ ಹಾಗೂ ವಾಹನವಿಮೆ ಇದ್ದರೆ ಮಾತ್ರ ಮಾಲೀಕರಿಗೆ ವಾಹನ ನೀಡಲಾಗುವುದು ಎಂದು ಬೆಂಗಳೂರು ಕಮಿಷನರ್ ಬಾಸ್ಕರ್ ರಾವ್ ಹೇಳಿಕೆಯನ್ನು ನೀಡಿದ್ದಾರೆ.

ಚರಂಡಿಯಲ್ಲಿ ಸಿಕ್ಕಿದ್ವು ರಾಶಿ-ರಾಶಿ ಎಣ್ಣೆ ಬಾಟಲಿಗಳು..!

ಹಂತಹಂತವಾಗಿ ವಾಹನ ಹಸ್ತಾಂತರ ಮಾಡಲಾಗುತ್ತದೆ. ಮೊದಲು ಸೀಜ್ ಆದ ವಾಹನಗಳನ್ನು ಆದ್ಯತೆಯ ಮೇರೆಗೆ ಕ್ರಮವಾಗಿ ಹಸ್ತಾಂತರಿಸಲಾಗುವುದು ಎಂದು ಬಾಸ್ಕರ್ ರಾವ್ ತಿಳಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.